Homeಮುಖಪುಟಪಿ.ಲಂಕೇಶ್‌ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಸಂಭವಿಸಿದ ಎರಡು ಘಟನೆಗಳು!

ಪಿ.ಲಂಕೇಶ್‌ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಸಂಭವಿಸಿದ ಎರಡು ಘಟನೆಗಳು!

ಶಂಕರಪ್ಪ ನಡೆಸುವ ಸಮ್ಮೇಳನ ಹಾಸ್ಯಾಸ್ಪದ ಚಟುವಟಿಕೆಗಳಿಂದ ಮುಕ್ತವಾಗಲು ಸಾಧ್ಯವಿಲ್ಲ. ಆದ್ದರಿಂದ ಮೊದಲನೆಯದಾಗಿ ಕುವೆಂಪು ರಂಗಮಂದಿರದ ಆವರಣ ಬುಕ್‌ಸ್ಟಾಲ್‌ಗಳಿಲ್ಲದೆ ಬಿಕೋ ಎನ್ನುತ್ತಿದ್ದವು.

- Advertisement -
- Advertisement -

ಕಳೆದವಾರ ಶಿವಮೊಗ್ಗದಲ್ಲಿ ಎರಡು ಘಟನೆ ಸಂಭವಿಸಿವೆ. ಒಂದು ಲಂಕೇಶರ ದೂರದ ಸಂಬಂಧಿಯಾದ ಡಿ.ಬಿ.ಶಂಕರಪ್ಪ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವುದರಿಂದ, ನಡೆಸಿದ ಸಾಹಿತ್ಯ ಸಮ್ಮೇಳನ! ಇನ್ನೊಂದು ಡಿವಿಎಸ್ ಕಾಲೇಜಿನ ರೀಡರ್‍ಸ್ ಕ್ಲಬ್ ಏರ್ಪಡಿಸಿದ್ದ “ಲಂಕೇಶ್ ಹೊಸ ತಲೆಮಾರಿಗೆ’ ಎಂಬ ಕಾರ್ಯಕ್ರಮ.

ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಖ್ಯಾತ ಮನೋವೈದ್ಯ ಶ್ರೀಧರ್‌ವರ ಪತ್ನಿ ವಿಜಯಾ ಆಯ್ಕೆಯಾಗಿದ್ದರು. ಇವರ ಮೇಲಿರುವ ಆಪಾದನೆ, ಅದೂ ಗುರುತರ ಆಪಾದನೆಗಳೆಂದರೆ ವಿಜಯಾ ಅವರು ರಾಘವೇಶ್ವರ ಸ್ವಾಮಿಯ ರಾಸಲೀಲೆ ಪರವಾಗಿದ್ದಾರೆ ಎಂಬುದು. ಇನ್ನೊಂದು, ಇವರ ಸಾಹಿತ್ಯದಲ್ಲಿ ಹೆಣ್ಣಿನ ಶೋಷಣೆಯ ಯಾವ ವಿವರವೂ ಇಲ್ಲ ಎಂಬುದು ಸಹ್ಯಾದ್ರಿ ಕಾಲೇಜಿನ ಡಾ. ಹಾಲಮ್ಮ ಅವರ ಅಭಿಮತ.

ಡಿ.ಬಿ.ಶಂಕರಪ್ಪ

ಈ ಆಪಾದನೆಗಳನ್ನ ಬಿಟ್ಟರೆ ವಿಜಯಾ ದೇವರಂತಹ ಮಹಿಳೆ. ಅದಕ್ಕೇ ಏನೋ, ಏನಿದೆ ಅದನ್ನು ವಿಮರ್ಶೆ ಮಾಡಿ ಹೇಳಬೇಕಾದ ವಿದ್ವಾಂಸರನೇಕರು, ವಿಜಯಕ್ಕ, ವಿಜಯಕ್ಕ ಎನ್ನುತ್ತಿದ್ದರು. ವಿಜಯಕ್ಕ ಎಂದಕೂಡಲೇ ಅದರ ಸಾಹಿತ್ಯದಲ್ಲಿ ಕಂಡದ್ದನ್ನು ಹೇಳದೆ ಮರೆಮಾಚಬೇಕಾಗುತ್ತದೆ ಎಂಬ ಸರಳ ಸಿದ್ಧಾಂತ ಈ ಮೂರ್ಖ ವಿದ್ವಾಂಸರಿಗೆ ಹೊಳೆಯದಿದ್ದುದು ಸಹಜವೇ ಸರಿ.

ಶಂಕರಪ್ಪ ನಡೆಸುವ ಸಮ್ಮೇಳನ ಹಾಸ್ಯಾಸ್ಪದ ಚಟುವಟಿಕೆಗಳಿಂದ ಮುಕ್ತವಾಗಲು ಸಾಧ್ಯವಿಲ್ಲ. ಆದ್ದರಿಂದ ಮೊದಲನೆಯದಾಗಿ ಕುವೆಂಪು ರಂಗಮಂದಿರದ ಆವರಣ ಬುಕ್‌ಸ್ಟಾಲ್‌ಗಳಿಲ್ಲದೆ ಬಿಕೋ ಎನ್ನುತ್ತಿದ್ದವು. ವಿಚಾರಿಸಲಾಗಿ, ಶಂಕರಪ್ಪನ ಟೀಮು ಒಂದು ಸ್ಟಾಲಿಗೆ ಆರು ಸಾವಿರ ರೂ. ಕೇಳಿತಂತೆ. ಪುಸ್ತಕ ವಿರೋಧಿಗಳು ಮಾತ್ರ ಇಂತಹ ಶರತ್ತು ಹಾಕಬಲ್ಲರು. ಶಿವಮೊಗ್ಗದಲ್ಲಿ ಅಕ್ಷತಾ ನಡೆಸುವ ಅಹರ್ನಿಶಿ ಪ್ರಕಾಶನ, ಗೀತಾಂಜಲಿ ಪ್ರಕಾಶನ, ಪುಸ್ತಕಮನೆ ಇತ್ಯಾದಿ ನಾಡಿನಲ್ಲೇ ಹೆಸರಾದ ಪ್ರಕಾಶನಗಳಾಗಿವೆ. ಇವು ಕುವೆಂಪು ರಂಗಮಂದಿರದ ಆವರಣಕ್ಕೆ ಸಂಭ್ರಮವುಂಟುಮಾಡುತ್ತವೆ. ನಿರರ್ಥಕ ಗೋಷ್ಠಿಯಲ್ಲಿ ಕೂರಲಾಗದವರು ಈ ಪುಸ್ತಕ ಮಳಿಗೆಯಲ್ಲಿ ಸುತ್ತುತ್ತಾರೆ. ಇಂತಹ ವಾತಾವರಣವೇ ಇಲ್ಲದಂತೆ ಮಾಡಿದ್ದ ಶಂಕರಪ್ಪನ ಟೀಮು ಮೂರು ದಿನ ಜನಗಳೇ ಇಲ್ಲದ ನೀರಸ ಸಮ್ಮೇಳನ ನಡೆಸಿ ನಿರ್ಗಮಿಸಿತು.

ಗೋಷ್ಠಿಯಲ್ಲಿ ಮಾತನಾಡುವವರು ಒಂಬತ್ತು ಜನರಿದ್ದರೆ, ಅದನ್ನು ನಿರ್ವಹಿಸಲು ನಾಲ್ಕು ಜನರಿದ್ದುದರಿಂದ ವೇದಿಕೆ ಮೇಲೆ ಕನಿಷ್ಠ ಹದಿನೈದು ಜನರಿರುತ್ತಿದ್ದರು. ವೇದಿಕೆ ಉದ್ದ ಸಾಕಾಗದೆ ಅಡ್ಡ ಕುರ್ಚಿಗಳನ್ನು ಹಾಕುತ್ತಿದ್ದರು. ಇನ್ನು ಎಂಟುನೂರು ಸೀಟಿನ ಕುವೆಂಪು ರಂಗಮಂದಿರದಲ್ಲಿ ಎಪ್ಪತ್ತೈದರಿಂದ ನೂರ ಇಪ್ಪತ್ತೈದು ಜನರವರೆಗೆ ರಂಗಮಂದಿರ ಕಿಕ್ಕಿರಿದಿತ್ತು! ಎರಡನೇ ದಿನ ಕವಿಗೋಷ್ಠಿಗೆ ಜಿಲ್ಲೆಯ ದಶದಿಕ್ಕಿನಿಂದ ಕೆಲ ಕವಿಗಳು ದಾಳಿಯಿಟ್ಟು ಹೊಸದಾಗಿ ಹೆಸರು ಸೇರಿಸಿದ್ದರಿಂದ, ಹೆದರಿಕೊಂಡ ಶಂಕರಪ್ಪ ಹೊಸದಾಗಿ ಸೇರ್ಪಡೆಯಾದ ಕವಿಗಳಿಗೆ, ಪುರಸ್ಕಾರದ ಹಾರ ಶಾಲು ಇಲ್ಲದೇ ಇರುವುದರಿಂದ, ಅನುಸರಿಸಿಕೊಂಡು ಮುಂದಿನ ಬಾರಿ ಪಡೆಯಬೇಕು ಎಂದರು. ಅದರಬದಲು ಆನಂತರ ಅಥವಾ ಮರುದಿನ ಎನ್ನಬಹುದಿತ್ತು.

ಇನ್ನು ಕವಿಗೋಷ್ಠಿ ಆರಂಭವಾಗುತ್ತಿದ್ದಂತೆ, ಊಟ ಬಂದಿದ್ದರಿಂದ ಸಭಾಂಗಣದ ಜನ ಆ ಕಡೆ ಓಡಿದರು. ಆದರೂ ಪ್ರಯೋಜನವಾಗಲಿಲ್ಲ. ಅದ್ಯಾರೊ ಏನೊ ಬಂದು ತಿಂದು ಮುಗಿಸಿದ್ದರಿಂದ, ಸಿಟ್ಟಾದ ಕೆಲವರು ಮನೆಯ ಕಡೆ ಹೋದರು. ಶಂಕರಪ್ಪ ಸಮಯಾಭಾವದಿಂದ ಊಟದ ಬಿಡುವಿಲ್ಲದಂತೆ ನಿರಂತರ ಗೋಷ್ಠಿಗಳನ್ನು ನಡೆಸಿದರು. ಈ ಮಧ್ಯೆ ಒಂದಷ್ಟು ದಲಿತರು ಪ್ರತಿಭಟಿಸಿ ನಮಗೇಕೆ ಅವಕಾಶ ಕೊಟ್ಟಿಲ್ಲ ಎಂದು ತಕರಾರು ತೆಗೆದರು. ಶಂಕರಪ್ಪ ಮುಂದೆ ಕೊಡಲಾಗುತ್ತೆ ಎಂದು ಆಶ್ವಾಸನೆ ಕೊಟ್ಟರು.

ಇನ್ನ ನಮ್ಮ ಜಿಲ್ಲೆ ನಮ್ಮ ನೆಲೆ ಎಂಬ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಇಬ್ಬರು ಬೃಹಸ್ಪತಿಗಳ ಪೈಕಿ ಒಬ್ಬ ತರ್ಕಗಳು, ಪ್ರಶ್ನೆಗಳು ಇಲ್ಲದಿದ್ದರೆ ಈ ನಾಡು ಶಾಂತವಾಗಿರುತ್ತದೆ ಎಂದ. ಮತ್ತೊಬ್ಬ ದೇವಸ್ಥಾನಗಳು ನಮ್ಮ ಸಂಸ್ಕೃತಿ ಕೇಂದ್ರಗಳು. ಅವು ಚೆನ್ನಾಗಿರಬೇಕು ಎಂದ. ಸೂಕ್ಷ್ಮವಾಗಿ ನೋಡಿದರೆ ಅವು ಪುರೋಹಿತ ಪಿಂಡಗಳಾಗಿದ್ದುದ್ದು ಆಶ್ಚರ್ಯವಾಗಲಿಲ್ಲ. ಇಂಥವು ಶಂಕರಪ್ಪನ ತಲೆಗೆ ಹೋಗುವುದಿಲ್ಲ. ಮಗಳ ಮದುವೆಗೆ ಇಡೀ ನಾಡೇ ಬಂದಿತ್ತು, ಕರೆದವರೆಲ್ಲ ಬಂದು ಉಂಡರೆಂಬ ತೃಪ್ತಿಭಾವದ ಶಂಕರಪ್ಪನಿಗೆ ಸಾಹಿತ್ಯದ ಸೂಕ್ಷ್ಮಗಳು, ಜಾತ್ಯತೀತ ಮನಸ್ಸುಗಳು, ಸಾಹಿತ್ಯ ಸಮ್ಮೇಳನ ಹೇಗಿರಬೇಕೆಂಬ ಕಲ್ಪನೆಯೇ ಇಲ್ಲ. ಅದಕ್ಕಾಗಿಯೇ ಸಾಹಿತ್ಯ ಸಮ್ಮೇಳನವೂ ಸಾಮಾಜಿಕ ನ್ಯಾಯದ ಸಮಸ್ಯೆಗೆ ತುತ್ತಾಗಿ, ವೇದಿಕೆ ಮೇಲೆ ಒಂದು ಡಜನ್ ವಿದ್ವಾಂಸರು ಕೂರುವುದು. ಇನ್ನು ಅವರ ಆಹ್ವಾನ ಪತ್ರಿಕೆ ನೋಡಿದರೆ ಭಯವಾಗುತ್ತದೆ. ಅದರಲ್ಲಿರುವ ಹೆಸರುಗಳನ್ನು ನೋಡಿದರೆ, ಓಟರ್ ಲಿಸ್ಟು ನೋಡಿದಂತಾಗುತ್ತದೆ. ಇದು ಶಂಕರಪ್ಪನ ಕತೆಯಾದರೆ, ಕೇಂದ್ರ ಸ್ಥಾನದ ಅಧ್ಯಕ್ಷ ಮನು ಬಳಿಗಾರ್ ಎಂಬ ಸರಕಾರಿ ಆಸಾಮಿಗೆ ಕನ್ನಡ ಸಾಹಿತ್ಯದ ಆಳ ಅಗಲ ಗೊತ್ತಿದ್ದಿದ್ದರೆ, ಈ ದೇಶ ಕಂಡ ಅಪರೂಪದ ಸಂಶೋಧಕ ಶ.ಷಟ್ಟರ್ ಸಮ್ಮೇಳನದ ಅಧ್ಯಕ್ಷರಾಗುತ್ತಿದ್ದರು.

ಸದ್ಯಕ್ಕೆ ನಮ್ಮ ಸಮಾಜ ಕ್ಷೋಭೆಯಿಂದ ಕುದಿಯುತ್ತಿದೆ. ಎಲ್ಲಿ ನೋಡಿದರೂ ಗಲಾಟೆಯ ಶಬ್ದವೇ ತುಂಬಿದೆ. ಸಂಗೀತವೂ ಗಲಭೆಯಂತೆ ಕೇಳುತ್ತಿದೆ. ಆಶ್ಚರ್ಯವೆಂದರೆ, ಇದರೊಳಕ್ಕೆ ಸಾಹಿತ್ಯ ಸಮ್ಮೇಳನವೂ ಸೇರಿಕೊಂಡಿವೆ. ಸಭೆಯಲ್ಲಿ ಪ್ರಾರ್ಥನೆ ಮಾಡುವ, ಸ್ವಾಗತ ಮಾಡುವ, ನಿರೂಪಣೆ ಮಾಡುವ, ವಂದನಾರ್ಪಣೆ ಮಾಡುವಾಗ ಹಾರತುರಾಯಿ ಶಾಲು ತಂದು ಎಸೆಯುವ ಎಲ್ಲರೂ ಗಲಭೆಗೆ ತುತ್ತಾದವರಂತೆ ಕಾಣುತ್ತಿದ್ದಾರೆ. ನಿಜಕ್ಕೂ ಸಾಹಿತ್ಯ ಸಮ್ಮೇಳನ ಇಂತಹ ಗಲಭೆ ಸೃಷ್ಟಿಸಬಾರದು. ಭೀಕರವಾದ ಸೌಂಡ್ ಬಾಕ್ಸು, ಮೈಕುಗಳಿಂದ ಉಂಟಾಗುವ ಶಬ್ದಗಳಿಂದ ಮುಕ್ತವಾಗಿ ಸಾಂತ್ವನದಂತಿರುವಂತೆ ನೋಡಿಕೊಳ್ಳಬೇಕು.

ಇಂತಹ ಹೊತ್ತಿನಲ್ಲಿ ಡಿವಿಎಸ್‌ನಲ್ಲಿ ನಡೆದ ಲಂಕೇಶರ ಹುಟ್ಟುಹಬ್ಬರ ಸೆಮಿನಾರನ್ನು ಶಂಕರಪ್ಪ ಬಂದು ನೋಡಬೇಕಿತ್ತು. ಅಲ್ಲಿಗೆ ಲಂಕೇಶರ ನೀಲು ಕಾವ್ಯಕ್ಕೆ ಚಿತ್ರ ಬರೆದಿದ್ದ, ಮತ್ತವರಿಗೆ ಕುತೂಹಲ ಕೆರಳಿಸಿದ್ದ ಎಂ.ಎಸ್.ಮೂರ್ತಿ ಬಂದಿದ್ದರು. ಲಂಕೇಶರ ನಾಟಕಗಳನ್ನು ಪರಿಣಾಮಕಾರಿಯಾಗಿ ನಿರ್ದೇಶಿಸಿದ್ದ ನಟರಾಜ್ ಹೊನ್ನವಳ್ಳಿ ಆಗಮಿಸಿದ್ದರು. ಜೊತೆಗೆ ಲಂಕೇಶರ ಒಡನಾಡಿಯಾಗಿದ್ದ ಬಿ.ಚಂದ್ರೇಗೌಡರು ಆಶಯ ಭಾಷಣ ಮಾಡಿದರು. ವೇದಿಕೆಯ ಮೇಲೆ ಮೂವರು ಮಾತನಾಡುವವರಿದ್ದರೆ, ಸಭಾಂಗಣದಲ್ಲಿ ನೂರಿಪ್ಪತ್ತೈದು ವಿದ್ಯಾರ್ಥಿಗಳಿದ್ದರು.

ಈ ಹೊಸ ತಲೆಮಾರಿಗೆ ಮಾತನಾಡಿದವರೆಲ್ಲ ಸಾಧ್ಯವಾದಷ್ಟು ಲಂಕೇಶರನ್ನು ತಲುಪಿಸಿದರು. ಕಡೆಯಲ್ಲಿ ಕವಿಯತ್ರಿ ಅಕ್ಷತಾ ಹುಂಚದಕಟ್ಟೆ ಲಂಕೇಶರನ್ನು ತುಂಬಾ ಪರಿಣಾಮಕಾರಿಯಾಗಿ ನಿರೂಪಿಸಿ ವಿದ್ಯಾರ್ಥಿಗಳಿಂದ ಚಪ್ಪಾಳೆ ಗಿಟ್ಟಿಸಿದರು. ಅವರು ಓದಿದ ನೀಲು ಕವನ ವಿದ್ಯಾರ್ಥಿಗಳಿಗೆ ತುಂಬಾ ಪ್ರೇರಣೆ ನೀಡಿತು.

ಅಕ್ಷತಾ ಹುಂಚದಕಟ್ಟೆ

 

ನಟರಾಜ ಹೊನ್ನವಳ್ಳಿ ನಿರ್ದೇಶಿಸಿದ್ದ ಗುಣಮುಖ ನಾಟಕದ ಕಡೆ ದೃಶ್ಯಗಳನ್ನು ಹೊಂಗಿರಣದ ಮತ್ತು ನಾದಿರ್ ಶಾ ಪಾತ್ರವನ್ನು ಅದ್ಭುತವಾಗಿ ಅಭಿನಯಿಸುವ ಸಾಸ್ವೆಹಳ್ಳಿ ಸತೀಶ್ ಮತ್ತು ಕೊಟ್ರಪ್ಪ ವಾಚಿಸಿದರು. ಸಭೆಯಲ್ಲಿ ಪ್ರಸ್ತಾಪವಾದ ಸಾರಾ ಅಬೂಬಕರ್ ವಿಷಯ ಕೇಳಿ ಪ್ರೇರಣೆಗೊಂಡ ಮುಸ್ಲಿಂ ಹೆಣ್ಣುಮಗಳೊಬ್ಬಳು, “ನಾನು ಬರೀತಾಯಿದ್ದೀನಿ. ಆದ್ರೆ ಉರ್ದುವಿನಲ್ಲಿ ಬರೀತಿನಿ. ಇನ್ನುಮುಂದೆ ಕನ್ನಡದಲ್ಲಿ ಬರೀಬೇಕು” ಎಂದಳು. ಖಂಡಿತ ನೀನು ಬರೀಲೇಬೇಕು, ಸಾರಾ, ಬಾನು ಬರವಣಿಗೆ ನಿಲ್ಲುಸ್ತಾಯಿದಾರೆ. ಮುಸ್ಲಿಂ ಹೆಣ್ಣುಮಕ್ಕಳಲ್ಲಿ ಬರಹಗಾರ್ತಿಯರೇ ಇಲ್ಲ, ನೀನು ಬರಿಬೇಕು ಎಂದಾಗ ಚಿಟ್ಟೆಯಾಕಾರದ ಚೂಡಿದಾರ್ ಹಾಕಿದ್ದ ಆಕೆ ಅದೆಲ್ಲೊ ಮಡಗಿದ್ದ ಬುರ್ಖಾ ಧರಿಸಿಕೊಂಡು ಹೊರಟಳು! ಆಕೆ ಏನಾದರೂ ಬರೆಯಬಹುದು. ಲಂಕೇಶ್ ಅಂತಹವರ ಪ್ರೇರಣೆಯಾಗಿದ್ದರು. ಮುಂದೂ ಕೂಡಾ ಆಗಿರುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಚಾಲಕ, ಕಂಡಕ್ಟರ್ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ...

ಜಗತ್ತಿನ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಕೊಳ್ಳುವಷ್ಟು ಕಪ್ಪು ಹಣ ಪ್ರಪಂಚದಲ್ಲಿದೆ: ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್

ಅಕ್ರಮ ಹಣ ವರ್ಗಾವಣೆ (Money Laundering) ಮತ್ತು 'ಡಿಜಿಟಲ್ ಅರೆಸ್ಟ್' ನಂತಹ ಆನ್‌ಲೈನ್ ವಂಚನೆಗಳ ಪ್ರಮಾಣದ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ...

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಬಹಿರಂಗಪಡಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪೆಟ್ರೋಲ್‌ನಲ್ಲಿ ಬೆರೆಸಲಾಗುವ ಎಥನಾಲ್ ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸಬೇಕು ಮತ್ತು ವಾಹನಗಳಿಗೆ ಎಥನಾಲ್ ಮಿಶ್ರಿತ ಇಂಧನದ ಹೊಂದಾಣಿಕೆಯ ಬಗ್ಗೆ ಹೆಚ್ಚಿನ ಪಾರದರ್ಶಕತೆ ತರಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆ...