Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಪಾರ್ಲಿಮೆಂಟ್ ಚುನಾವಣೆಯ ಅಸಲಿ ಸವಾಲುಗಳು

ಪಾರ್ಲಿಮೆಂಟ್ ಚುನಾವಣೆಯ ಅಸಲಿ ಸವಾಲುಗಳು

- Advertisement -
- Advertisement -

ಮುಬೈನಿಂದ ಪ್ರಕಟವಾಗುವ ‘ಫೈನಾನ್ಷಿಯಲ್ ಟೈಮ್ಸ್’ ಪತ್ರಿಕೆಯ ಮಾಜಿ ಮುಖ್ಯಸ್ಥರಾದ ಜೇಮ್ಸ್ ಕ್ರಾಬ್‍ಟ್ರೀ ಅವರು ‘ದಿ ಬಿಲಿಯನೇರ್ ರಾಜ್’ ಎಂಬ ಗ್ರಂಥವೊಂದನ್ನು ಪ್ರಕಟಿಸಿದ್ದಾರೆ. ಹಳೇ 1000, 500ರೂಗಳ ನೋಟನ್ನು ಅಪಮೌಲ್ಯ ಮಾಡಿದ್ದು ಒಂದು ತಪ್ಪು ಹೆಜ್ಜೆ ಎಂಬುದು ಈಗ ಸಾಬೀತಾಗಿದೆ. ನೋಟು ಅಪಮೌಲ್ಯದ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ ಎಂದು ಅಬ್ಬರದ ಪ್ರಚಾರ ಮಾಡಿದ್ದ ಪ್ರಧಾನಿ ಮೋದಿಗೆ ಭಾರಿ ಹಿನ್ನಡೆಯಾಗಿದೆ ಎಂದು ಪ್ರಸ್ತಾಪಿಸಿದ್ದಾರೆ. ನೋಟುಗಳ ಅಪಮೌಲ್ಯದಿಂದ ಜನ ಜೀವನ ಅಸ್ತವ್ಯಸ್ತವಾಯಿತು. ಅನುಕೂಲಕ್ಕಿಂತಲೂ ಅದರಿಂದ ಆದ ತೊಂದರೆಯೇ ಜಾಸ್ತಿ. ನೋಟುಗಳ ಅಪಮೌಲ್ಯ ತಪ್ಪು ಗ್ರಹಿಕೆಯಿಂದ ಆದ ಪ್ರಮಾದ, ಜನಪ್ರಿಯತೆ ಗಿಟ್ಟಿಸಲಿಕ್ಕಾಗಿ ಮೋದಿಯವರು ತೆಗೆದುಕೊಂಡ ಈ ಕ್ರಮದಿಂದ ಜನಸಾಮಾನ್ಯರ ಸಂಕಷ್ಟಗಳಿಗೆ ಈಡಾದರು. ಕರೆನ್ಸಿ ನೋಟುಗಳ ಅಭಾವದಿಂದ ಅನೇಕ ಸಣ್ಣ ವರ್ತಕರು ತಮ್ಮ ಅಂಗಡಿಗಳನ್ನು ಮುಚ್ಚಬೇಕಾಯಿತು. ಜನ ತಮ್ಮ ಹಣವನ್ನು ತಾವು ಪಡೆಯಲು ಬಿಸಿಲಿನಲ್ಲಿ ಬ್ಯಾಂಕುಗಳ ಮುಂದೆ ಗಂಟೆಗಟ್ಟಲೆ ಕ್ಯೂಗಳಲ್ಲಿ ನಿಲ್ಲಬೇಕಾಯಿತು. ಅದೆಷ್ಟೋ ರಸ್ತೆಬದಿ ವ್ಯಾಪಾರಿಗಳು ಚಿಲ್ಲರೆಗೆ ಪರದಾಡಿ ತಮ್ಮ ಕಸುಬನ್ನೇ ಬಿಡಬೇಕಾಯಿತು. ಕಾಳಧನ ಹೊಂದಿದ್ದವರು ಹಳೇ ನೋಟುಗಳನ್ನು ಕೊಟ್ಟು ಹೊಸ ನೋಟನ್ನು ಪಡೆದುಕೊಳ್ಳಲು ಕೋ-ಆಪರೇಟಿವ್ ಬ್ಯಾಂಕುಗಳ ಮೂಲಕ ರಾಷ್ಟ್ರೀಯ ಅಂತಾರಾಷ್ಟ್ರೀಯ ಬ್ಯಾಂಕುಗಳನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಕಪ್ಪುಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸಿಕೊಂಡರು. ಹೀಗೆ ನೋಟು ಬ್ಯಾನ್ ಎಂಬುದು ಶ್ರೀಮಂತರಿಗೆ, ಪಟ್ಟಭದ್ರರಿಗೆ ಶಾಪವಾಗುವ ಬದಲು ವರವಾಗಿ ಪರಿಣಮಿಸಿದ್ದು ಈಗ ಇತಿಹಾಸ.
ಮೋದಿ ಅನುಸರಿಸುತ್ತಿರುವ ನೀತಿಯಿಂದಾಗಿ ದೇಶದ ಆರ್ಥಿಕತೆಯ ಉನ್ನತ ಸ್ತರದಲ್ಲಿರುವ ಆಯ್ದ ಕೆಲವೇ ಶ್ರೀಮಂತರ ಅಭಿವೃದ್ಧಿ ಮಾತ್ರ ಆಗುತ್ತಿದೆ. ವಸ್ತುಸ್ಥಿತಿ ಹೀಗಿದ್ದರೂ ಬುದ್ಧಿಜೀವಿಗಳ ಒಂದು ಬಣ ಮೋದಿಯವರ ಘಾತುಕ ಆರ್ಥಿಕ ನೀತಿಗಳನ್ನು, ಮುಖ್ಯವಾಗಿ ನೋಟ್ ಬ್ಯಾನ್‍ನಿಂದ ಉಂಟಾದ ದುಷ್ಪರಿಣಾಮಗಳನ್ನು ಹಗುರವಾಗಿ ಪರಿಗಣಿಸಿ ವ್ಯಾಖ್ಯಾನ ಮಾಡುತ್ತಿದ್ದಾರೆ. ಉದಾರೀಕರಣವನ್ನು ಸರ್ಕಾರ ಜಾರಿಗೆ ತಂದ ನಂತರದ ದಿನಗಳಲ್ಲಿ, ಅಭಿವೃದ್ಧಿಯ ಫಲ ಎಲ್ಲರಿಗೂ ಹಂಚಿಕೆಯಾಗಬೇಕು ಎನ್ನುವುದಕ್ಕಿಂತಲೂ ‘ಕ್ಷಿಪ್ರಗತಿಯ ಅಭಿವೃದ್ಧಿ’ ಮುಖ್ಯ ಎಂಬುದು ಇಂತಹ ಬುದ್ಧಿಜೀವಿಗಳ ನಿಲುವು. ದೇಶದ ಸಂಪತ್ತು ಕೆಲವೇ ಬಂಡವಾಳಿಗರಲ್ಲಿ ಹೆಚ್ಚೆಚ್ಚು ಕ್ರೋಢೀಕರಣವಾಗುತ್ತಿದ್ದು, ಬಡವ ಬಲ್ಲಿದರ ಕಂದರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆಯಾದರೂ ಸರ್ಕಾರದ ಬಳಿ ಈ ಕಂದರ ಮುಚ್ಚುವ ಯಾವ ಯೋಜನೆಯೂ ಇಲ್ಲ. ರಾಷ್ಟ್ರವನ್ನು ಕಾಡುತ್ತಿರುವ ಈ ಜ್ವಲಂತ ಸಮಸ್ಯೆಯನ್ನು ಬಗೆಹರಿಸಬೇಕೆಂಬ ಅಭಿಲಾಷೆ ಯಾವೊಂದು ರಾಜಕೀಯ ಪಕ್ಷಕ್ಕೂ ಇಲ್ಲ. ರಾಜಕೀಯ ಪಕ್ಷಗಳ ಒಳಗೇ ಪ್ರಭಾವಶಾಲಿಗಳಾದ ಧನಾಡ್ಯರು ಇರುವುದರಿಂದ ಅವರು ಆರ್ಥಿಕ ಅಸಮಾನತೆಯ ವಿಚಾರವನ್ನು ಬಗೆಹರಿಸಲು ಅಡಚಣೆಗಳನ್ನು ತಂದೊಡ್ಡುತ್ತಾರೆ.
1991ರ ನಂತರ ಭಾರತದ ಅಭಿವೃದ್ಧಿಯ ದರ ಹೆಚ್ಚಾದುದರ ಫಲವಾಗಿ ಬಡವರ ಸಂಖ್ಯೆ ಇಳಿಮುಖವಾಗಿದೆ ಎಂದೂ, ಬಡವರ ಕೊಳ್ಳುವ ಶಕ್ತಿ ಹೆಚ್ಚಾಗಿದೆಯೆಂದೂ ಹೇಳಲಾಗುತ್ತಿದೆ. ಬಡವರು ಮೊದಲಿಗಿಂತ ಹೆಚ್ಚಿನ ಆಹಾರ ಸೇವಿಸುತ್ತಿದ್ದು, ಹಸಿವು ಇಂಗಿದೆಯೆಂದು ಹೇಳಲಾಗುತ್ತಿದೆ. ಆದರೆ ದೇಶದಲ್ಲಿ ಒಂದೆಡೆ ಶತಕೋಟ್ಯಾಧಿಪತಿಗಳ ಸಂಖ್ಯೆ ಏರುತ್ತಿದೆ. ಮತ್ತೊಂದೆಡೆ ದಿನಕ್ಕೆ ಎರಡು ಹೊತ್ತಿನ ಊಟವೂ ಇಲ್ಲದ ಬಡವರ ಸಂಖ್ಯೆ 7 ಕೋಟಿಗಿಂತಲೂ ಹೆಚ್ಚಿದೆ ಎಂಬುದನ್ನು ನಾವು ಮರೆಮಾಚಕೂಡದು. ನಮ್ಮ ಕಣ್ಣೆದುರಿನಲ್ಲೇ ಕೋಟ್ಯಾಂತರ ಜನರು ತಲೆಮೇಲೆ ಕನಿಷ್ಟ ಸೂರೂ ಇಲ್ಲದೆ ಬೀದಿಗಳಲ್ಲಿರುವುದನ್ನು ಮರೆಯುವಂತಿಲ್ಲ. ಆರ್ಥಿಕವಾಗಿ ದೇಶ ಬೆಳೆಯಬೇಕಾದರೆ, ಇಡೀ ರಾಷ್ಟ್ರಕ್ಕೆ ಅಭಿವೃದ್ಧಿಯ ಫಲ ಸಿಗುವಂತಹ ಆರ್ಥಿಕ ಸುಧಾರಣೆಗಳನ್ನು ನಾವು ಮೊದಲು ತಂದುಕೊಳ್ಳಬೇಕು. ಇಂತಹ ಸಮಾಜಮುಖಿ ಸುಧಾರಣೆಗಳಿಗೆ ಪಟ್ಟ ಭದ್ರರಿಂದ ಅಡ್ಡಿ ಅಡಚಣೆಗಳಾಗದಂತೆ ನೋಡಿಕೊಂಡಾಗ ಮಾತ್ರ ಬಡವ ಬಲ್ಲಿದರ ನಡುವಿನ ಕಂದರವನ್ನು ನಾವು ಮುಚ್ಚಬಹುದು. ಆದರೆ ಆಸ್ಥಾನದ ಆರ್ಥಿಕ ಪಂಡಿತರು ಜಿಡಿಪಿ ವೃದ್ಧಿಯನ್ನೇ ದೇಶದ ಅಭಿವೃದ್ಧಿಯೆಂಬ ಭ್ರಮೆ ಬಿತ್ತುತ್ತಿದ್ದಾರೆ.
ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಈ ಜ್ವಲಂತ ಸಮಸ್ಯೆಯನ್ನು ಮುನ್ನೆಲೆಗೆ ತರಬೇಕಾದ ಅಗತ್ಯವಿದೆ. ಈ ಚುನಾವಣೆಯಲ್ಲಿ ಸರ್ಕಾರದ ಭ್ರಷ್ಟಾಚಾರ ಪ್ರಮುಖವಾದ ವಿಷಯವಾಗುವ ಲಕ್ಷಣ ಕಾಣುತ್ತಿದೆ. ಮೋದಿಯವರು ತಾವು ಭ್ರಷ್ಟಾಚಾರವನ್ನು ಮಟ್ಟ ಹಾಕಿರುವುದಾಗಿ ಪ್ರಚಾರ ಭಾಷಣ ಮಾಡಬಹುದು. ಹಿಂದೆ ಆಡಳಿತ ನಡೆಸಿದವರ ಕಾಲದಲ್ಲಿ ನಡೆದಿರುವ ಹಗರಣಗಳ ಬಗೆಗೆ ಪುಂಖಾನುಪುಂಖವಾಗಿ ಬೊಬ್ಬೆ ಹೊಡೆಯಬಹುದು. ಅದರಂತೆಯೇ ವಿರೋಧ ಪಕ್ಷಗಳೂ ಕೂಡ ಮೋದಿ ಅವರ ಕಾಲದಲ್ಲಾದ ಡಸ್ಸಾಲ್ಟ್ ರಫೈಲ್ ಫೈಟರ್ ಜೆಟ್ಸ್ ಖರೀದಿಯಲ್ಲಿ ಆಗಿರುವ ಭ್ರಷ್ಟಾಚಾರ ಮತ್ತು ವಜ್ರದ ವ್ಯಾಪಾರಿ ನೀರವ್ ಮೋದಿ ನಮ್ಮ ಬ್ಯಾಂಕುಗಳಿಂದ ಸಾವಿರಾರು ಕೋಟಿಗಳ ಸಾಲ ಗುಳುಂ ಮಾಡಿ, ಕದ್ದು ಪರದೇಶಕ್ಕೆ ಹೋಗಲು ಅವಕಾಶ ಕಲ್ಪಿಸಿದ ಮೋದಿ ಸರ್ಕಾರದ ವಿರುದ್ಧ ದನಿಯೆತ್ತಬಹುದು. ಕ್ರೋನೀ ಕ್ಯಾಪಿಟಲಿಸಂ ಬಗೆಗೆ ಈಗಾಗಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಒಂದು ಪರಿಣಾಮಕಾರಿ ಭಾಷಣ ಮಾಡಿ ಮೋದಿಯವರನ್ನು ಜರ್ಝರಿತಗೊಳಿಸಿದ್ದಾರೆ. ಹೀಗೆ ಈ ಸಾರಿಯ ಚುನಾವಣೆಯಲ್ಲಿ ಸರ್ಕಾರದ ಭ್ರಷ್ಟಾಚಾರ ಪ್ರಮುಖ ವಿಷಯವಾಗುತ್ತದೆ ಎನಿಸುತ್ತದೆ. ಬ್ಯಾಂಕಿನ ಹಣ ನುಂಗಿ ಪಲಾಯನ ಗೈದವರು ನಮ್ಮ ಬ್ಯಾಂಕುಗಳನ್ನು ಬರಿದು ಮಾಡಿ ಓಡಿ ಹೋಗಿದ್ದಾರೆ. ಬ್ಯಾಂಕುಗಳ ಸಮಸ್ಯೆ ಕಗ್ಗಂಟಾಗಿದೆ. ಭ್ರಷ್ಟಾಚಾರದಲ್ಲಿ ಭಾರತ ಇಂದಿಗೂ ಎತ್ತಿದ ಕೈ ಎಂಬುದು ಜಗಜ್ಜಾಹೀರಾಗಿದೆ.
ದೇಶ ಇಂತಹ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿದೆ. ಇದೇ ಸಂದರ್ಭದಲ್ಲಿ ಹಿಂದುತ್ವದ ಮುಸುಕಿನಲ್ಲಿ ಮತಾಂಧ ಸಂಚಿನ ಸಂಘಟನೆಗಳ ಹಾವಳಿಯೂ ಹೆಚ್ಚುತ್ತಿದೆ. ಜಾತಿ ಕಲಹಗಳೂ, ಕೋಮು ಘರ್ಷಣೆಗಳೂ ದಿನಬೆಳಗಾದರೆ ಉಲ್ಬಣವಾಗುತ್ತಿರುವುದರಿಂದ ಅಶಾಂತಿ, ಅಸ್ಥಿರತೆ ವ್ಯಾಪಕವಾಗಿ ಬೆಳೆಯುತ್ತಿದೆ. ಸಂಪದ್ಭರಿತವೂ, ಉದ್ಯಮಗಳ ಕೇಂದ್ರವೂ ಆಗಿದ್ದ ಗುಜರಾತ್ ರಾಜ್ಯದಲ್ಲಿ ಇಂತಹ ವಿದ್ಯಮಾನ ಹೆಚ್ಚಾಗಿ ಕಂಡುಬಂದಿತ್ತು. ಈ ಗುಜರಾತ್ ಮಾದರಿ ಈಗ ಇಡೀ ದೇಶಾದ್ಯಂತ ಹರಡಿಕೊಂಡಿದೆ. ಈ ಕಠಿಣ ಸಂದರ್ಭದಲ್ಲಿ ದೇಶದ ನಿಜವಾದ ಅಭಿವೃದ್ಧಿಯ ಪ್ರಶ್ನೆಗಳನ್ನು ನಾವು ಮುನ್ನೆಲೆಗೆ ತರುವಂತಾಗಬೇಕು. ಆಶಾದಾಯಕ ಸಂಗತಿಯೆಂದರೆ, ಕ್ರಮೇಣ ಗುಜರಾತ್‍ನ ಜನತೆ ಎಚ್ಚೆತ್ತುಕೊಳ್ಳುತ್ತಿದ್ದಾರೆ; ಈ ಸಮಾಜಘಾತುಕ ಅಭಿವೃದ್ಧಿ ಮಾದರಿಯ ವಿರುದ್ಧ ದನಿಯೆತ್ತುತ್ತಿದ್ದಾರೆ. ಮೋದಿಯವರ ಹಿನ್ನಡೆ ಗುಜರಾತಿನಿಂದಲೇ ಅರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...