Homeಮುಖಪುಟಮಗಳಿಗೆ ತಂದೆಯ ಓಲೆಗಳು : ಇಂದಿರಾಗೆ ಜವಹರಲಾಲ್ ನೆಹರು ಪತ್ರಗಳು

ಮಗಳಿಗೆ ತಂದೆಯ ಓಲೆಗಳು : ಇಂದಿರಾಗೆ ಜವಹರಲಾಲ್ ನೆಹರು ಪತ್ರಗಳು

- Advertisement -
- Advertisement -

ನೆಹರು ಮತ್ತು ಕಮಲಾರವರ ಮಗಳಾದ ಇಂದಿರಾ ಬಾಲ್ಯದಲ್ಲಿ ಏಕಾಂಗಿಯಾಗಿ ದಿನಗಳನ್ನು ಕಳೆದವರು. ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ತಾಯಿಯ ಜೊತೆ ಅಲಹಾಬಾದಿನ ಆನಂದಭವನದಲ್ಲಿ ವಾಸ. ತಂದೆಯೋ ಸ್ವಾತಂತ್ರ್ಯ ಚಳವಳಿಯ ಮುಖ್ಯ ಭಾಗ. ರಾಜಕೀಯ, ಬಂಧನ ಮತ್ತು ಹೋರಾಟಗಳ ಕಾರಣಗಳಿಂದಾಗಿ ಮಗಳ ಜೊತೆಗೆ “ಕ್ವಾಲಿಟಿ ಟೈಂ” ಎಂದಿಗೂ ಕೊಡಲಾಗುತ್ತಿರಲಿಲ್ಲ. ಇಂದಿರಾಗೆ ಹುಟ್ಟಿದ ಒಬ್ಬ ತಮ್ಮನೋ ಬಲು ಬೇಗ ಕಣ್ಮುಚ್ಚಿದ. ರವೀಂದ್ರನಾಥ್ ಠಾಗೋರರ ಶಾಂತಿನಿಕೇತನವೂ ಸೇರಿದಂತೆ ಶಾಲೆಗೆಂದು ಹೋದರೂ ನಾನಾ ಕಾರಣಗಳಿಂದ ಶಾಲೆಗಳನ್ನು ಪದೇ ಪದೇ ಬದಲಾಯಿಸಬೇಕಾಗುತ್ತಿತ್ತು. ಕೊನೆಗೆ ಠಾಗೋರರ ಶಾಂತಿನಿಕೇತನ, ವಿಶ್ವಭಾರತಿ ವಿಶ್ವವಿದ್ಯಾಲಯವಾಗಿ ಯೂನಿವರ್ಸಿಟಿ ಆಫ್ ಆಕ್ಸ್‍ಫರ್ಡ್‍ಗೆ ಶೈಕ್ಷಣಿಕವಾಗಿ ಸೇರ್ಪಡೆಯಾದ್ದರಿಂದ ಇಂದಿರಾ ಪದವಿಯನ್ನು ಪಡೆದಿದ್ದು ಅಲ್ಲಿಂದಲೇ. ಇಷ್ಟೆಲ್ಲದರ ಜೊತೆಗೆ ಅವರ ಆರೋಗ್ಯವೂ ಕೆಡುತ್ತಿದ್ದರಿಂದ ಪದೇಪದೇ ಚಿಕಿತ್ಸೆಗಾಗಿ ಸ್ವಿಜರ್‍ಲೆಂಡ್‍ಗೆ ಹೋಗುತ್ತಿದ್ದರು.

ಇವು ಔಪಚಾರಿಕ ಶಿಕ್ಷಣವನ್ನು ಪಡೆಯಲು ಇಂದಿರಾ ಎದುರಿಸುತ್ತಿದ್ದ ಅಡ್ಡಿ ಆತಂಕಗಳು. ಅಕಾಡೆಮಿಕ್ ಆಗಿ ಇಂದಿರಾ ಉತ್ತಮವಾದ ಮೇಲ್ಗೈಯನ್ನು ಸಾಧಿಸಿದ್ದು ಅಷ್ಟಕಷ್ಟೇ ಆಗಿದ್ದರೂ ಬಹು ಸುಶಿಕ್ಷಿತ ವ್ಯಕ್ತಿಯಾಗಿ ರೂಪುಗೊಂಡಿದ್ದು ತಂದೆ ನೀಡಿದ ಅನೌಪಚಾರಿಕ ಶಿಕ್ಷಣದಿಂದ.
ಸ್ವಾತಂತ್ರ್ಯ ಹೋರಾಟದಲ್ಲಿ, ರಾಜಕೀಯವಾಗಿ ಸಕ್ರಿಯವಾಗಿದ್ದ ನೆಹರು ನೇರವಾಗಿ ಮಗಳ ಜೊತೆಗೆ ಇರಲಾಗದಿದ್ದರೂ ಮಗಳನ್ನು ಸುಶಿಕ್ಷಿತೆಯನ್ನಾಗಿ ಮಾಡುವ ಜವಾಬ್ದಾರಿಯನ್ನು ಹೊಂದಿದ್ದರು. ಅದರ ಸಾಕ್ಷಿಯೇ “ಮಗಳಿಗೆ ತಂದೆಯ ಓಲೆಗಳು.”

10-11 ವರ್ಷದ ಹುಡುಗಿಗೆ ನೈನಿತಾಲ್ ಜೈಲಿನಿಂದ ಬರೆದಿರುವ ಈ ಪತ್ರಗಳು ಜಗತ್ತಿನ ಚರಿತ್ರೆಯನ್ನು, ಮಾನವನ ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದ ವಿಕಾಸವನ್ನು ತೆರೆದಿಡುತ್ತಾ ಹೋಗುತ್ತದೆ. ಇದು ಆ ಕಾಲಘಟ್ಟದ ಒಂದು ಸಂಕ್ಷಿಪ್ತ ವಿಶ್ವಕೋಶ. ಬರೆದಿರುವುದೋ ಮಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡಿರುವುದಾದರೂ ತಮ್ಮ ಈ ಪತ್ರಗಳು ಸಂಗ್ರಹ ಯೋಗ್ಯವಾಗಿ ಮುಂದೊಂದು ದಿನ ಅತ್ಯುತ್ತಮ ಪುಸ್ತಕಗಳ ಸಾಲಿಗೆ ಸೇರಲಿದೆ ಎಂಬ ದೂರದೃಷ್ಟಿಯೂ ಅವರಿಗಿತ್ತು. ಹಾಗಾಗಿ ಒಂದೇ ಪ್ರಯತ್ನದಲ್ಲಿ ಮಗಳನ್ನು ಸುಶಿಕ್ಷಿತಳನ್ನಾಗಿಸುವುದು ಮತ್ತು ಗ್ರಂಥರಚನೆ ಎರಡಕ್ಕೂ ಆಕರಗಳನ್ನು ಸೃಷ್ಟಿಸಿದರು.

ಭೂಮಿಯ ಉಗಮ, ಸಸ್ಯ, ಪ್ರಾಣಿಗಳ ಸೃಷ್ಟಿ, ಜನಾಂಗಗಳು ಹೇಗೆ ಹುಟ್ಟಿದವು, ನಾಗರಿಕತೆ, ಧರ್ಮಗಳ ಉದಯ ಹೇಗಾಯಿತು, ಪ್ರಾಚೀನಕಾಲದಲ್ಲಿ ಇತಿಹಾಸ ಹೇಗೆ ಬರೆಯಲ್ಪಟ್ಟಿತು, ಒಕ್ಕಲುತನ ಹೇಗೆ ಪ್ರಾರಂಭವಾಯಿತು ಹೀಗೆ ಸಂಕೀರ್ಣವಾದ ವಿಷಯಗಳನ್ನು ಸರಳಶೈಲಿಯ ಪತ್ರಗಳಲ್ಲಿ ಇತಿಹಾಸ, ಮಾನವಶಾಸ್ತ್ರೀಯ ಅಧ್ಯಯನ, ಸಂಸ್ಕೃತಿಗಳ ಪರಿಚಯ, ಭಾಷೆಗಳ ಬಗ್ಗೆ, ಜನಾಂಗಗಳ ಸಂಘರ್ಷ ಮತ್ತು ಬೆರಗುಗಳು ಎಲ್ಲವನ್ನೂ ಹೇಳಿಕೊಡುತ್ತಾರೆ. ಸ್ವಾರಸ್ಯವೆಂದರೆ ತೀರಾ ವಿವರಣೆಗಳಿಂದಲೂ ಕೂಡಿರದೆ, ಹಾಗೆಂದು ಪರಿವಿಡಿಯಂತೆ ಬರಿಯ ಪಟ್ಟಿಯಾಗಿರದೇ ತಿಳಿಯಲೇಬೇಕಾದ ವಿಷಯವನ್ನು ಸಂಕ್ಷಿಪ್ತಗೊಳಿಸಿ ಸಾಂದ್ರಗೊಳಿಸುವಂತಹ ಚಾತುರ್ಯ ಈ ಬರವಣಿಗೆಯಲ್ಲಿದೆ.

ಒಂದು ಹುಡುಗಿ ತನ್ನ ತಂದೆ ತೋರುತ್ತಿರುವ ತನ್ನೆಲ್ಲಾ ಪ್ರೀತಿಯ ಜೊತೆಗೆ ನೀಡುವ ಆದ್ಯತೆಯನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಜ್ಞಾನ ಮತ್ತು ಸಂವೇದನೆ ಎರಡಕ್ಕೂ ಒತ್ತು ನೀಡಿರುವ ನೆಹರು ಓದುಗನು ಯಾವುದನ್ನು ಸ್ವೀಕರಿಸಬೇಕು, ಹೇಗೆ ಗ್ರಹಿಸಬೇಕು, ಕೆಲವೊಂದರ ಬಗ್ಗೆ ತಿಳಿವಳಿಕೆ ಇದ್ದು ಅವನ್ನು ಹೇಗೆ ನಿರಾಕರಿಸಬೇಕು ಎಂದೂ ಸೂಕ್ಷ್ಮವಾಗಿ ನಿರ್ದೇಶನಗಳನ್ನು ನೀಡಿದ್ದಾರೆ. ತಮ್ಮ ಧೋರಣೆಯನ್ನು ಹೇರದೇ ಅರಿವಿನ ಗ್ರಹಿಕೆಗೆ ಬೇಕಾದ ಸೂಚನೆಗಳಿವು ಎಂಬ ಕಾಳಜಿ ಗುಪ್ತವಾಗಿ ಬರವಣಿಗೆಯ ತಂತ್ರದಲ್ಲಿದೆ ಮತ್ತು ಪದಗಳ ಬಳಕೆಯಲ್ಲಿದೆ. ವಾಕ್ಯಗಳ ರಚನೆಯಲ್ಲಿ ವಿಚಾರವನ್ನೂ, ಬೆರಗನ್ನೂ ಮತ್ತು ನವಿರಾಗಿ ಭಾವುಕತೆಯನ್ನೂ ಬೆಸೆಯುತ್ತಾ ಹೋಗುತ್ತಾರೆ.

ಓದಿನ ಬಗ್ಗೆ, ಜಗತ್ತಿನ ಬಗ್ಗೆ, ಜನರ ಬಗ್ಗೆ, ವಿಸ್ಮಯವನ್ನೂ ಮತ್ತು ಪ್ರೀತಿಯನ್ನೂ ಹುಟ್ಟಿಸುವಂತಹ ಕೃತಿಯಾಗಿ ಇದು ಕಾಣುತ್ತದೆ. ವಿಶೇಷವೆಂದರೆ, ಜಗತ್ತಿನ ಎಲ್ಲ ಜನರಿಗೂ ಮತ್ತು ಓದುತ್ತಿರುವ ನನಗೂ ಸಂಬಂಧವಿದೆ ಎಂಬಂತಹ ಭಾವವಿದೆ. ಈ ಅನೌಪಚಾರಿಕ ಶಿಕ್ಷಣ ಬರಿಯ ಇಂದಿರಾಗೆ ಮಾತ್ರವಲ್ಲ ಯಾವುದೇ ಓದುವ ಪ್ರೀತಿಯುಳ್ಳವನಿಗೆ ಸಂವೇದನೆಯನ್ನು ಉಂಟುಮಾಡಬಲ್ಲದು. ಓದುಗ ಮತ್ತು ಬರಹಗಾರನ ನಡುವೆ ಆತ್ಮೀಯತೆಯನ್ನು ಮೊಳೆಸಬಲ್ಲದು. ಆಪ್ತತೆಯನ್ನು ಬೆಸೆಯಬಲ್ಲದು. ಏನೇ ಆದರೂ ತಂದೆ ಮಗಳಿಗೆ ಬರೆದದ್ದು ಅಲ್ಲವೇ!

ಜಗತ್ತೆಂದರೆ ಹಲವು ರಾಷ್ಟ್ರಗಳ ಒಂದು ದೊಡ್ಡ ಕುಟುಂಬ ಎಂದು ಅರಿವಾಗಲೆಂಬ ನೆಹರೂರವರ ಆಶಯವನ್ನು ಈ ಪತ್ರಗಳ ಸಂಗ್ರಹ ಧ್ವನಿಸುವುದಂತೂ ಸತ್ಯ.

ಪ್ರೀತಿಯ ಇಂದಿರಾ ಎಂದು ಸಂಬೋಧಿಸುತ್ತಾ ಯಾವುದೇ ಕತೆ ಕಾದಂಬರಿಗಿಂತ ರೋಚಕವಾಗಿರುವ ಜಗತ್ತಿನ ಕತೆಯನ್ನು ತೆರೆದಿಡುವ ನೆಹರೂ ಓರ್ವ ತಂದೆಯಾಗಿ ಮಕ್ಕಳ ಶಿಕ್ಷಣದ ವಿಷಯದಲ್ಲಿ ಯಾವ ಪಾತ್ರ ವಹಿಸಬೇಕು ಎಂದು ಮಾದರಿಯಾಗಿ ನಿಲ್ಲುತ್ತಾರೆ.

ನೆಹರು ಮಗಳಿಗೆ ಇಂಗ್ಲಿಷಲ್ಲಿಯೇ ಪತ್ರಗಳನ್ನು ಬರೆದಿದ್ದು. ನಂತರ ಹಿಂದಿಯೇ ಮೊದಲಾದ ಭಾಷೆಗಳಿಗೆ ಅನುವಾದವಾಯ್ತು. ಶ್ರೀ ಕಪಟರಾಳ ಕೃಷ್ಣರಾಯರು ನೆಹರೂ ಜೊತೆಗೆ ಅನೇಕ ಪತ್ರ ವ್ಯವಹಾರಗಳನ್ನು ಮಾಡಿ, ತಪ್ಪುಒಪ್ಪುಗಳನ್ನೆಲ್ಲಾ ಗಮನಿಸಿಕೊಂಡು 1946ರಲ್ಲಿಯೇ ಕನ್ನಡಕ್ಕೆ ತಂದವರು. ಪ್ರಕಾಶಕರು ಹುಬ್ಬಳ್ಳಿಯ ಸಾಹಿತ್ಯ ಭಂಡಾರದ ಮಂಗಳೂರು ಗೋವಿಂದರಾಯರು.


ಇದನ್ನೂ ಓದಿ: ನೆಹರು ಒಬ್ಬ ನೈಜ ಭಾರತೀಯ ಜಾತ್ಯತೀತ ವ್ಯಕ್ತಿ: ಇಂದಿನ ಕೋಮುವಾದಕ್ಕೆ ಅವರನ್ನು ದೂರಬೇಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...