Homeಮುಖಪುಟಮಗಳಿಗೆ ತಂದೆಯ ಓಲೆಗಳು : ಇಂದಿರಾಗೆ ಜವಹರಲಾಲ್ ನೆಹರು ಪತ್ರಗಳು

ಮಗಳಿಗೆ ತಂದೆಯ ಓಲೆಗಳು : ಇಂದಿರಾಗೆ ಜವಹರಲಾಲ್ ನೆಹರು ಪತ್ರಗಳು

- Advertisement -
- Advertisement -

ನೆಹರು ಮತ್ತು ಕಮಲಾರವರ ಮಗಳಾದ ಇಂದಿರಾ ಬಾಲ್ಯದಲ್ಲಿ ಏಕಾಂಗಿಯಾಗಿ ದಿನಗಳನ್ನು ಕಳೆದವರು. ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ತಾಯಿಯ ಜೊತೆ ಅಲಹಾಬಾದಿನ ಆನಂದಭವನದಲ್ಲಿ ವಾಸ. ತಂದೆಯೋ ಸ್ವಾತಂತ್ರ್ಯ ಚಳವಳಿಯ ಮುಖ್ಯ ಭಾಗ. ರಾಜಕೀಯ, ಬಂಧನ ಮತ್ತು ಹೋರಾಟಗಳ ಕಾರಣಗಳಿಂದಾಗಿ ಮಗಳ ಜೊತೆಗೆ “ಕ್ವಾಲಿಟಿ ಟೈಂ” ಎಂದಿಗೂ ಕೊಡಲಾಗುತ್ತಿರಲಿಲ್ಲ. ಇಂದಿರಾಗೆ ಹುಟ್ಟಿದ ಒಬ್ಬ ತಮ್ಮನೋ ಬಲು ಬೇಗ ಕಣ್ಮುಚ್ಚಿದ. ರವೀಂದ್ರನಾಥ್ ಠಾಗೋರರ ಶಾಂತಿನಿಕೇತನವೂ ಸೇರಿದಂತೆ ಶಾಲೆಗೆಂದು ಹೋದರೂ ನಾನಾ ಕಾರಣಗಳಿಂದ ಶಾಲೆಗಳನ್ನು ಪದೇ ಪದೇ ಬದಲಾಯಿಸಬೇಕಾಗುತ್ತಿತ್ತು. ಕೊನೆಗೆ ಠಾಗೋರರ ಶಾಂತಿನಿಕೇತನ, ವಿಶ್ವಭಾರತಿ ವಿಶ್ವವಿದ್ಯಾಲಯವಾಗಿ ಯೂನಿವರ್ಸಿಟಿ ಆಫ್ ಆಕ್ಸ್‍ಫರ್ಡ್‍ಗೆ ಶೈಕ್ಷಣಿಕವಾಗಿ ಸೇರ್ಪಡೆಯಾದ್ದರಿಂದ ಇಂದಿರಾ ಪದವಿಯನ್ನು ಪಡೆದಿದ್ದು ಅಲ್ಲಿಂದಲೇ. ಇಷ್ಟೆಲ್ಲದರ ಜೊತೆಗೆ ಅವರ ಆರೋಗ್ಯವೂ ಕೆಡುತ್ತಿದ್ದರಿಂದ ಪದೇಪದೇ ಚಿಕಿತ್ಸೆಗಾಗಿ ಸ್ವಿಜರ್‍ಲೆಂಡ್‍ಗೆ ಹೋಗುತ್ತಿದ್ದರು.

ಇವು ಔಪಚಾರಿಕ ಶಿಕ್ಷಣವನ್ನು ಪಡೆಯಲು ಇಂದಿರಾ ಎದುರಿಸುತ್ತಿದ್ದ ಅಡ್ಡಿ ಆತಂಕಗಳು. ಅಕಾಡೆಮಿಕ್ ಆಗಿ ಇಂದಿರಾ ಉತ್ತಮವಾದ ಮೇಲ್ಗೈಯನ್ನು ಸಾಧಿಸಿದ್ದು ಅಷ್ಟಕಷ್ಟೇ ಆಗಿದ್ದರೂ ಬಹು ಸುಶಿಕ್ಷಿತ ವ್ಯಕ್ತಿಯಾಗಿ ರೂಪುಗೊಂಡಿದ್ದು ತಂದೆ ನೀಡಿದ ಅನೌಪಚಾರಿಕ ಶಿಕ್ಷಣದಿಂದ.
ಸ್ವಾತಂತ್ರ್ಯ ಹೋರಾಟದಲ್ಲಿ, ರಾಜಕೀಯವಾಗಿ ಸಕ್ರಿಯವಾಗಿದ್ದ ನೆಹರು ನೇರವಾಗಿ ಮಗಳ ಜೊತೆಗೆ ಇರಲಾಗದಿದ್ದರೂ ಮಗಳನ್ನು ಸುಶಿಕ್ಷಿತೆಯನ್ನಾಗಿ ಮಾಡುವ ಜವಾಬ್ದಾರಿಯನ್ನು ಹೊಂದಿದ್ದರು. ಅದರ ಸಾಕ್ಷಿಯೇ “ಮಗಳಿಗೆ ತಂದೆಯ ಓಲೆಗಳು.”

10-11 ವರ್ಷದ ಹುಡುಗಿಗೆ ನೈನಿತಾಲ್ ಜೈಲಿನಿಂದ ಬರೆದಿರುವ ಈ ಪತ್ರಗಳು ಜಗತ್ತಿನ ಚರಿತ್ರೆಯನ್ನು, ಮಾನವನ ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದ ವಿಕಾಸವನ್ನು ತೆರೆದಿಡುತ್ತಾ ಹೋಗುತ್ತದೆ. ಇದು ಆ ಕಾಲಘಟ್ಟದ ಒಂದು ಸಂಕ್ಷಿಪ್ತ ವಿಶ್ವಕೋಶ. ಬರೆದಿರುವುದೋ ಮಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡಿರುವುದಾದರೂ ತಮ್ಮ ಈ ಪತ್ರಗಳು ಸಂಗ್ರಹ ಯೋಗ್ಯವಾಗಿ ಮುಂದೊಂದು ದಿನ ಅತ್ಯುತ್ತಮ ಪುಸ್ತಕಗಳ ಸಾಲಿಗೆ ಸೇರಲಿದೆ ಎಂಬ ದೂರದೃಷ್ಟಿಯೂ ಅವರಿಗಿತ್ತು. ಹಾಗಾಗಿ ಒಂದೇ ಪ್ರಯತ್ನದಲ್ಲಿ ಮಗಳನ್ನು ಸುಶಿಕ್ಷಿತಳನ್ನಾಗಿಸುವುದು ಮತ್ತು ಗ್ರಂಥರಚನೆ ಎರಡಕ್ಕೂ ಆಕರಗಳನ್ನು ಸೃಷ್ಟಿಸಿದರು.

ಭೂಮಿಯ ಉಗಮ, ಸಸ್ಯ, ಪ್ರಾಣಿಗಳ ಸೃಷ್ಟಿ, ಜನಾಂಗಗಳು ಹೇಗೆ ಹುಟ್ಟಿದವು, ನಾಗರಿಕತೆ, ಧರ್ಮಗಳ ಉದಯ ಹೇಗಾಯಿತು, ಪ್ರಾಚೀನಕಾಲದಲ್ಲಿ ಇತಿಹಾಸ ಹೇಗೆ ಬರೆಯಲ್ಪಟ್ಟಿತು, ಒಕ್ಕಲುತನ ಹೇಗೆ ಪ್ರಾರಂಭವಾಯಿತು ಹೀಗೆ ಸಂಕೀರ್ಣವಾದ ವಿಷಯಗಳನ್ನು ಸರಳಶೈಲಿಯ ಪತ್ರಗಳಲ್ಲಿ ಇತಿಹಾಸ, ಮಾನವಶಾಸ್ತ್ರೀಯ ಅಧ್ಯಯನ, ಸಂಸ್ಕೃತಿಗಳ ಪರಿಚಯ, ಭಾಷೆಗಳ ಬಗ್ಗೆ, ಜನಾಂಗಗಳ ಸಂಘರ್ಷ ಮತ್ತು ಬೆರಗುಗಳು ಎಲ್ಲವನ್ನೂ ಹೇಳಿಕೊಡುತ್ತಾರೆ. ಸ್ವಾರಸ್ಯವೆಂದರೆ ತೀರಾ ವಿವರಣೆಗಳಿಂದಲೂ ಕೂಡಿರದೆ, ಹಾಗೆಂದು ಪರಿವಿಡಿಯಂತೆ ಬರಿಯ ಪಟ್ಟಿಯಾಗಿರದೇ ತಿಳಿಯಲೇಬೇಕಾದ ವಿಷಯವನ್ನು ಸಂಕ್ಷಿಪ್ತಗೊಳಿಸಿ ಸಾಂದ್ರಗೊಳಿಸುವಂತಹ ಚಾತುರ್ಯ ಈ ಬರವಣಿಗೆಯಲ್ಲಿದೆ.

ಒಂದು ಹುಡುಗಿ ತನ್ನ ತಂದೆ ತೋರುತ್ತಿರುವ ತನ್ನೆಲ್ಲಾ ಪ್ರೀತಿಯ ಜೊತೆಗೆ ನೀಡುವ ಆದ್ಯತೆಯನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಜ್ಞಾನ ಮತ್ತು ಸಂವೇದನೆ ಎರಡಕ್ಕೂ ಒತ್ತು ನೀಡಿರುವ ನೆಹರು ಓದುಗನು ಯಾವುದನ್ನು ಸ್ವೀಕರಿಸಬೇಕು, ಹೇಗೆ ಗ್ರಹಿಸಬೇಕು, ಕೆಲವೊಂದರ ಬಗ್ಗೆ ತಿಳಿವಳಿಕೆ ಇದ್ದು ಅವನ್ನು ಹೇಗೆ ನಿರಾಕರಿಸಬೇಕು ಎಂದೂ ಸೂಕ್ಷ್ಮವಾಗಿ ನಿರ್ದೇಶನಗಳನ್ನು ನೀಡಿದ್ದಾರೆ. ತಮ್ಮ ಧೋರಣೆಯನ್ನು ಹೇರದೇ ಅರಿವಿನ ಗ್ರಹಿಕೆಗೆ ಬೇಕಾದ ಸೂಚನೆಗಳಿವು ಎಂಬ ಕಾಳಜಿ ಗುಪ್ತವಾಗಿ ಬರವಣಿಗೆಯ ತಂತ್ರದಲ್ಲಿದೆ ಮತ್ತು ಪದಗಳ ಬಳಕೆಯಲ್ಲಿದೆ. ವಾಕ್ಯಗಳ ರಚನೆಯಲ್ಲಿ ವಿಚಾರವನ್ನೂ, ಬೆರಗನ್ನೂ ಮತ್ತು ನವಿರಾಗಿ ಭಾವುಕತೆಯನ್ನೂ ಬೆಸೆಯುತ್ತಾ ಹೋಗುತ್ತಾರೆ.

ಓದಿನ ಬಗ್ಗೆ, ಜಗತ್ತಿನ ಬಗ್ಗೆ, ಜನರ ಬಗ್ಗೆ, ವಿಸ್ಮಯವನ್ನೂ ಮತ್ತು ಪ್ರೀತಿಯನ್ನೂ ಹುಟ್ಟಿಸುವಂತಹ ಕೃತಿಯಾಗಿ ಇದು ಕಾಣುತ್ತದೆ. ವಿಶೇಷವೆಂದರೆ, ಜಗತ್ತಿನ ಎಲ್ಲ ಜನರಿಗೂ ಮತ್ತು ಓದುತ್ತಿರುವ ನನಗೂ ಸಂಬಂಧವಿದೆ ಎಂಬಂತಹ ಭಾವವಿದೆ. ಈ ಅನೌಪಚಾರಿಕ ಶಿಕ್ಷಣ ಬರಿಯ ಇಂದಿರಾಗೆ ಮಾತ್ರವಲ್ಲ ಯಾವುದೇ ಓದುವ ಪ್ರೀತಿಯುಳ್ಳವನಿಗೆ ಸಂವೇದನೆಯನ್ನು ಉಂಟುಮಾಡಬಲ್ಲದು. ಓದುಗ ಮತ್ತು ಬರಹಗಾರನ ನಡುವೆ ಆತ್ಮೀಯತೆಯನ್ನು ಮೊಳೆಸಬಲ್ಲದು. ಆಪ್ತತೆಯನ್ನು ಬೆಸೆಯಬಲ್ಲದು. ಏನೇ ಆದರೂ ತಂದೆ ಮಗಳಿಗೆ ಬರೆದದ್ದು ಅಲ್ಲವೇ!

ಜಗತ್ತೆಂದರೆ ಹಲವು ರಾಷ್ಟ್ರಗಳ ಒಂದು ದೊಡ್ಡ ಕುಟುಂಬ ಎಂದು ಅರಿವಾಗಲೆಂಬ ನೆಹರೂರವರ ಆಶಯವನ್ನು ಈ ಪತ್ರಗಳ ಸಂಗ್ರಹ ಧ್ವನಿಸುವುದಂತೂ ಸತ್ಯ.

ಪ್ರೀತಿಯ ಇಂದಿರಾ ಎಂದು ಸಂಬೋಧಿಸುತ್ತಾ ಯಾವುದೇ ಕತೆ ಕಾದಂಬರಿಗಿಂತ ರೋಚಕವಾಗಿರುವ ಜಗತ್ತಿನ ಕತೆಯನ್ನು ತೆರೆದಿಡುವ ನೆಹರೂ ಓರ್ವ ತಂದೆಯಾಗಿ ಮಕ್ಕಳ ಶಿಕ್ಷಣದ ವಿಷಯದಲ್ಲಿ ಯಾವ ಪಾತ್ರ ವಹಿಸಬೇಕು ಎಂದು ಮಾದರಿಯಾಗಿ ನಿಲ್ಲುತ್ತಾರೆ.

ನೆಹರು ಮಗಳಿಗೆ ಇಂಗ್ಲಿಷಲ್ಲಿಯೇ ಪತ್ರಗಳನ್ನು ಬರೆದಿದ್ದು. ನಂತರ ಹಿಂದಿಯೇ ಮೊದಲಾದ ಭಾಷೆಗಳಿಗೆ ಅನುವಾದವಾಯ್ತು. ಶ್ರೀ ಕಪಟರಾಳ ಕೃಷ್ಣರಾಯರು ನೆಹರೂ ಜೊತೆಗೆ ಅನೇಕ ಪತ್ರ ವ್ಯವಹಾರಗಳನ್ನು ಮಾಡಿ, ತಪ್ಪುಒಪ್ಪುಗಳನ್ನೆಲ್ಲಾ ಗಮನಿಸಿಕೊಂಡು 1946ರಲ್ಲಿಯೇ ಕನ್ನಡಕ್ಕೆ ತಂದವರು. ಪ್ರಕಾಶಕರು ಹುಬ್ಬಳ್ಳಿಯ ಸಾಹಿತ್ಯ ಭಂಡಾರದ ಮಂಗಳೂರು ಗೋವಿಂದರಾಯರು.


ಇದನ್ನೂ ಓದಿ: ನೆಹರು ಒಬ್ಬ ನೈಜ ಭಾರತೀಯ ಜಾತ್ಯತೀತ ವ್ಯಕ್ತಿ: ಇಂದಿನ ಕೋಮುವಾದಕ್ಕೆ ಅವರನ್ನು ದೂರಬೇಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...