Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಸಾವರ್ಕರ್‌ರನ್ನು ’ಮಾಜಿ ವೀರ ಸಾವರ್ಕರ್’ ಎಂದು ಕರೆಯಬಹುದು ಅಷ್ಟೇ: ದೊರೆಸ್ವಾಮಿ

ಸಾವರ್ಕರ್‌ರನ್ನು ’ಮಾಜಿ ವೀರ ಸಾವರ್ಕರ್’ ಎಂದು ಕರೆಯಬಹುದು ಅಷ್ಟೇ: ದೊರೆಸ್ವಾಮಿ

ಬ್ರಿಟಿಷರ ವಿರುದ್ಧ ಹೋರಾಡಿದ್ದಕ್ಕಾಗಿ ಧೈರ್ಯವಾಗಿ ನೇಣುಗಂಬಕ್ಕೇರಿ ಸಾವಿರಾರು ಯುವಕರಿಗೆ ಸ್ಫೂರ್ತಿಯ ಚಿಲುಮೆಯಾಗುತ್ತಾರೆ ಭಗತ್‌ ಸಿಂಗ್‌ ಮತ್ತು ಆತನ ಸಂಗಾತಿಗಳು.. ಆದರೆ ಸಾವರ್ಕರ್‌ ಮಾಡಿದ್ದೇನು?

- Advertisement -
- Advertisement -
  • ಎಚ್.ಎಸ್ ದೊರೆಸ್ವಾಮಿಯವರ ಹಳೆಯ ಲೇಖನ

ಸಾವಿರಾರು ಜನ ವೀರ ಸಾವರ್ಕರ್ ಅವರನ್ನು ಟೀಕಿಸಿದ್ದಾರೆ. ಸಾವಿರದ ಏಳನೆಯವನು ನಾನು. ಆದರೆ ಬಿಜೆಪಿ, ಆರೆಸ್ಸೆಸ್‍ನವರು ನನ್ನನ್ನೇ ಏಕೆ ಟಾರ್ಗೆಟ್ ಮಾಡುತ್ತಿದ್ದಾರೆ? ನಾನು ಸಾರ್ವಜನಿಕ ಕಾರ್ಯದಲ್ಲಿ ಸಕ್ರಿಯನಾಗಿರುವುದೇ ತಪ್ಪೇ? ಯಾರದೇ ಅನುಮತಿ ಪಡೆದು ಸಾರ್ವಜನಿಕ ಜೀವನಕ್ಕೆ ಬಂದವನು ನಾನಲ್ಲ. ನನ್ನ ಕೊನೆಯುಸಿರುವವರೆಗೂ ನಾನು ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ನನ್ನ ಅಳಿಲುಸೇವೆ ಸಲ್ಲಿಸುತ್ತಾ ಹೋಗುತ್ತೇನೆ.

ವೀರ ಸಾವರ್ಕರ್ ಆರಂಭದ ದಿನಗಳಲ್ಲಿ ವೀರರಂತೆಯೇ ವರ್ತಿಸಿದವರು. ಇಂಗ್ಲೆಂಡಿಗೆ ಹೋಗಿ ಅಲ್ಲಿಂದಲೂ ಭಾರತದ ಬಿಡುಗಡೆಗೆ ಅಪಾರ ಸೇವೆ ಸಲ್ಲಿಸಿದರು. 20 ಬಂದೂಕುಗಳನ್ನು ಭಾರತದಲ್ಲಿದ್ದ ತಮ್ಮನಿಗೆ ಕಳಿಸಿದರು. ಅದನ್ನು ಅವರು ಜಾಗರೂಕತೆಯಿಂದ ಹಂಚುತ್ತಿದ್ದರು. ಈ ಕಾರ್ಯದಲ್ಲಿ ತೊಡಗಿದ್ದಾಗ ಅವರು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡರು. ಅವರ ವಿರುದ್ಧ ಕೇಸಾಯಿತು. ಸಾವರ್ಕರ್‌ರನ್ನು ಬ್ರಿಟನ್‍ನಲ್ಲೇ ಬಂಧಿಸಲಾಯಿತು. ಫ್ರಾನ್ಸಿನ ಸರಹದ್ದಿನ ಊರಿನ ಹತ್ತಿರ ಹಡಗು ಸಂಚರಿಸುತ್ತಿದ್ದಾಗ, ಸಾವರ್ಕರ್ ಸಮುದ್ರಕ್ಕೆ ಹಾರಿ ಈಜುತ್ತಾ ಫ್ರೆಂಚ್ ದಡದತ್ತ ಧಾವಿಸಲಾರಂಭಿಸಿದರು. ಆದರೆ ಈಜುಬಲ್ಲ ಬ್ರಿಟಿಷ್ ಪೊಲೀಸರು ಅವರನ್ನು ಅಡ್ಡಗಟ್ಟಿ ಬಂಧಿಸಿ ಭಾರತಕ್ಕೆ ತಂದರು. ಅವರ ಮೇಲೆ ಮೊಕದ್ದಮೆ ಆಗಿ 1915ರಲ್ಲಿ ಆರು ವರ್ಷಗಳ ಕರಿನೀರು ಶಿಕ್ಷೆ ವಿಧಿಸಲಾಯಿತು.

ಆದರೆ ಸಾವರ್ಕರ್‍ರಿಗೆ ಮೂರು ವರ್ಷಗಳ ಕರಿನೀರು ಶಿಕ್ಷೆ ಅನುಭವಿಸುವ ವೇಳೆಗಾಗಲೆ ಮನಸ್ಥಿತಿ ಬದಲಾಯಿತು. ಹೋರಾಟ, ಬಂಧನ, ಈ ಜೈಲುಶಿಕ್ಷೆ ಸಾಕು ಸಾಕೆನಿಸಿತು. ಬ್ರಿಟಿಷ್ ಸರ್ಕಾರಕ್ಕೆ ಕ್ಷಮಾಪಣೆ ಪತ್ರ ಬರೆದು ಬಿಡುಗಡೆ ಕೋರಿದರು.

‘ಸ್ವಾತಂತ್ರ್ಯ ಸಂಗ್ರಾಮಕ್ಕೆ ಇಳಿದಿದ್ದೇ ತಪ್ಪಾಯಿತು. ನನ್ನನ್ನು ಬಿಡುಗಡೆ ಮಾಡಿ’ ಎಂದು ಬ್ರಿಟಿಷ್ ಸರ್ಕಾರವನ್ನು ಪ್ರಾರ್ಥಿಸಿದರು. ಸಾವರ್ಕರ್ ತಮ್ಮ ಜಿಲ್ಲೆ ಬಿಟ್ಟು ಬೇರೆಲ್ಲೂ ಹೋಗಕೂಡದು, ಪತ್ರಿಕೆಗೆ ಲೇಖನ ಬರೆಯಬಾರದು ಮುಂತಾದ ಷರತ್ತುಗಳನ್ನು ಹಾಕಿ ಬ್ರಿಟಿಷರು ಬಿಡುಗಡೆ ಮಾಡಿದರು.

ಸಾವರ್ಕರರಿಗೆ ಈ ಬಗೆಯ ಭಯ ಹೇಗೆ, ಏಕೆ ಉಂಟಾಯಿತು? ಬ್ರಿಟಿಷರು ಹಾಕಿದ ಷರತ್ತುಗಳನ್ನೆಲ್ಲ ಹೇಗೆ ಒಪ್ಪಿಕೊಂಡರು? ಮತ್ತು ಪಾಲನೆ ಮಾಡಿದರು? ಅರ್ಜುನನಿಗೆ ಯುದ್ಧಕ್ಕೆ ಹೋದಾಗ ಹೇಗೆ ಬುದ್ಧಿ ಗ್ಲಾನಿಯಾಯಿತೊ ಹಾಗೆ ಸಾವರ್ಕರರಿಗೂ ಆಯಿತೇನೊ. ಅರ್ಜುನನಿಗೆ ಸ್ವಧರ್ಮ ಪಾಲನೆ ಮಾಡುವಂತೆ ಹೇಳಲು ಕೃಷ್ಣ ಇದ್ದ. ಸಾವರ್ಕರರಿಗೆ ಈ ನೆರವು ಸಿಗಲಿಲ್ಲ. ಸ್ವಧರ್ಮ ಅವರು ಪಾಲನೆ ಮಾಡಲಿಲ್ಲ. ಹೀಗಾಗಿ ವೀರ ಸಾವರ್ಕರರು ಹೇಡಿ ಸಾವರ್ಕರರಾದರು. ಇದ್ದ ವಿಚಾರವನ್ನು ಇದ್ದಹಾಗೆ ಹೇಳಿದರೆ, ಹಿಂದೂತ್ವದ ಭೂತ ಹಿಡಿದ ಈ ಬಿಜೆಪಿ ಜನ, ಹಾಗೆ ಹೇಳಿದವರ ಮೇಲೆ ಎಲ್ಲರೂ ತಿರುಗಿಬೀಳುತ್ತಾರೆ, ಸಾವರ್ಕರರಿಗೆ ಅವಹೇಳನ ಮಾಡುತ್ತೀರಿ ಎಂದು ಆಪಾದನೆ ಹೊರಿಸುತ್ತಾರೆ.

ಹೋಗಲಿ ಇನ್ನುಮುಂದೆ ವೀರ ಸಾವರ್ಕರರನ್ನು ಹೇಗೆ ಕರೆಯಬೇಕು, ಅದನ್ನಾದರೂ ಹೇಳಿಬಿಡಿ. ಸಾವರ್ಕರರು ತಾನಾಗಿಯೇ ಬ್ರಿಟಿಷರಿಗೆ ಶರಣುಹೋಗಿ ವೀರಚಕ್ರವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಅವರನ್ನು ‘ವೀರ’ ಎಂದು ಹೇಳುವುದು ಅವರನ್ನು ಅಪಹಾಸ್ಯ ಮಾಡಿದಂತೆ ಆಗುತ್ತೆ.

ಆದ್ದರಿಂದ ಸಾವರ್ಕರರನ್ನು ಯಾವ ಸಾವರ್ಕರ್ ಎಂದು ಕರೆಯಬೇಕೆಂಬುದನ್ನು ಆರ್‌ಎಸ್‍ಎಸ್ ಮತ್ತು ಬಿಜೆಪಿ ನಾಯಕರೇ ತೀರ್ಮಾನ ಮಾಡಿ ಜನತೆಗೆ ಹೇಳಲಿ. ಬೇಕಾದರೆ ಅವರನ್ನು ಮಾಜಿ ವೀರ ಸಾವರ್ಕರ್ ಎಂದು ಕರೆಯಬಹುದು.

ಸುಭಾಷ್‍ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ಬಗೆಗೆ ಏನು ಬಲ್ಲಿರಿ? ಎಂದು ನನ್ನನ್ನು ಕೇಳಿದ್ದಾರೆ. ಇನ್ನು ಕೆಲವರು `ಅವರ ಬಗೆಗೂ ನನ್ನಲ್ಲಿ ವೀರ ಸಾವರ್ಕರ್ ಬಗೆಗಿರುವ ಭಾವನೆಗಳೇ ಇವೆಯೇ?’ ಎಂದು ಕೇಳಿದ್ದಾರೆ. ನಾನು ಸುಭಾಷ್‍ಚಂದ್ರ ಬೋಸ್‍ರ ಬಗೆಗೆ 30 ಪುಟಗಳ ಜೀವನಚರಿತ್ರೆ ಬರೆದಿದ್ದೇನೆ. ಅದರಲ್ಲಿ ಅವರ ಗುಣಗಾನ ಮಾಡಿದ್ದೇನೆ. ಮೂದಲಿಕೆಯ ಒಂದೂ ಮಾತು ಬರೆದಿಲ್ಲ.

ಭಗತ್‍ಸಿಂಗ್ ಬಗೆಗೆ ಪುಸ್ತಕ ಬರೆದಿಲ್ಲ. ಲೇಖನ ಬರೆದಿದ್ದೇನೆ. ಇಂಗ್ಲಿಷ್ ಅಧಿಕಾರಿಗಳನ್ನು ಒಬ್ಬೊಬ್ಬರನ್ನಾಗಿ ಕೊಂದರೆ ಬ್ರಿಟಿಷರು ತಾವಾಗಿಯೇ ದೇಶ ಬಿಟ್ಟುಹೋಗುತ್ತಾರೆಂಬ ವಿಚಾರ ಭಗತ್‍ಸಿಂಗ್ ಮೊದಲಾದ ಕೆಲವರದಾಗಿತ್ತು. ಭಗತ್‍ಸಿಂಗ್ ಮತ್ತು ಇಬ್ಬರು ಸ್ನೇಹಿತರು ಬಾಂಬ್ ತೆಗೆದುಕೊಂಡು ಅಧಿವೇಶನ ನಡೆಯುತ್ತಿದ್ದ ಕಡೆಗೆ ಹೋಗಿ ಪಾಸ್ ಪಡೆದು ವಿಸಿಟರ್ಸ್ ಗ್ಯಾಲರಿಯಲ್ಲಿ ಕುಳಿತುಕೊಳ್ಳುತ್ತಾರೆ. ಸಮಯ ನೋಡಿ ಯಾರಿಗೂ ಅಪಾಯವಾಗದಂತೆ ಬಾಂಬ್ ಎಸೆದು ತಮ್ಮತ್ತ ಎಲ್ಲರ ಗಮನ ಸೆಳೆದು ಘೋಷಣೆ ಕೂಗುತ್ತಾರೆ. ತಾವೇ ಬಾಂಬ್ ಎಸೆದಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಳ್ಳುತ್ತಾರೆ. ಆ ಮೂವರಿಗೂ ಗಲ್ಲುಶಿಕ್ಷೆ ವಿಧಿಸಲಾಗುತ್ತದೆ.

ಭಗತ್‍ಸಿಂಗ್ ತಂದೆ ವೈಸ್‍ರಾಯ್‍ರಿಗೆ ಪತ್ರ ಬರೆದು ತಮ್ಮ ಮಗನ ಜೀವದಾನ ಕೇಳುತ್ತಾರೆ. ಆ ವಿಷಯ ತಿಳಿಯುತ್ತಲೂ ಭಗತ್‍ಸಿಂಗ್ ತನ್ನ ತಂದೆಯ ಬಗ್ಗೆ ಹೌಹಾರಿ ಬೀಳುತ್ತಾರೆ. ‘ಮಗನ ಮೇಲಿನ ಮೋಹದಿಂದ ಶತ್ರುವಿನಲ್ಲಿ ನನ್ನ ಪ್ರಾಣಭಿಕ್ಷೆ ಕೇಳಿದ ನಿಮಗೆ ನಾಚಿಕೆಯಾಗುವುದಿಲ್ಲವೇ’ ಎಂದು ತಂದೆಗೆ ತರಾಟೆಗೆ ತೆಗೆದುಕೊಳ್ಳುತ್ತಾರೆ. ಧೈರ್ಯವಾಗಿ ನೇಣುಗಂಬಕ್ಕೇರಿ ಸಾವಿರಾರು ಯುವಕರಿಗೆ ಸ್ಫೂರ್ತಿಯ ಚಿಲುಮೆಯಾಗುತ್ತಾರೆ ಆ ಮೂವರು.

ಇನ್ನೊಂದು ವಿಷಯ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ಸಿನವರ ಪ್ರಭಾವ ಹೆಚ್ಚಿನದಾಗಿತ್ತಾದರೂ ಝಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರುರಾಣಿ ಚೆನ್ನಮ್ಮ, ಟಿಪ್ಪೂಸುಲ್ತಾನ್ ಮೊದಲಾದವರ ಪಾತ್ರವೂ ಪ್ರಶಂಸನೀಯವೇ. ಅಂತೆಯೇ ಉಗ್ರಗಾಮಿಗಳ ಪಾತ್ರವೂ ಅಷ್ಟೇ ಪ್ರಶಂಸನೀಯ. ಇವರ ಹೋರಾಟದ ಸ್ವರೂಪ ಬೇರೆಯದಾಗಿದ್ದರೂ ಈ ಬಣದವರ ದೇಶಾಭಿಮಾನ ಎಳ್ಳಷ್ಟೂ ಕಡಿಮೆಯಾದುದಲ್ಲ. ಅವರ್ಯಾರು ತಮ್ಮ ದೇಶಪ್ರೇಮದ ಬದ್ಧತೆಯಿಂದ ಯಾವತ್ತೂ ಹಿಂದೆ ಸರಿದವರಲ್ಲ.


ಇದನ್ನೂ ಓದಿ: ಸಾವರ್ಕರ್‌ & ದಲಿತರು ಕುರಿತಂತೆ ಪೋಸ್ಟ್‌ ಕಾರ್ಡ್ ಹರಡಿದ ಮೂರು ಸುಳ್ಳುಗಳು & ವಾಸ್ತವಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸೋಲರಿಯದ ದಣಿವರಿಯದ ನಿರ್ಭಿಡೆಯ ಸ್ವಾತಂತ್ರ್ಯ ಯೋಧರಾದ ದೊರೆಸ್ವಾಮಿಯವರು ಸೂಚಿಸಿರುವಂತೆ, ಬಿಜೆಪಿ-ಸಂಘ ಪರಿವಾರದವರು ಸಾವರ್ಕರರನ್ನು ‘ಮಾಜಿ ವೀರ ಸಾವರ್ಕರ್’ ಎಂದು ಕರೆಯಲು ಬಯಸುವುದಾದರೆ ನಮ್ಮ ಅಭ್ಯಂತರವಿಲ್ಲ. ಮುಂದೆ ಬೇಕಾದರೆ ನಾವೂ ಹಾಗೆ ಕರೆಯುವ ಬಗ್ಗೆ ಯೋಚಿಸಬಹುದು.

    ಅಂಗೈ ಮೇಲಿನ ಸತ್ಯವನ್ನು ಒಪ್ಪದೆ, ಸತ್ಯ ಹೇಳುವವರನ್ನು ನಿಂದಿಸಿ ಮೂದಲಿಸುವುದರಿಂದ ಸುಳ್ಳು ಸತ್ಯವಾಗುವುದಿಲ್ಲ, ಮಾಜಿ ವೀರ ಸಾವರ್ಕರ್ ‘ವೀರಚಕ್ರ’ಕ್ಕೆ ಅರ್ಹರಾಗುವುದಿಲ್ಲ.

    – ಸಿರಿಮನೆ ನಾಗರಾಜ್.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...