Homeರಾಜಕೀಯಬೆಳಗಾವಿಯಲ್ಲೂ ಸೃಷ್ಟಿಯಾಯಿತಾ ಒಂದು ಮಿನಿ ರಿಪಬ್ಲಿಕ್?

ಬೆಳಗಾವಿಯಲ್ಲೂ ಸೃಷ್ಟಿಯಾಯಿತಾ ಒಂದು ಮಿನಿ ರಿಪಬ್ಲಿಕ್?

- Advertisement -
- Advertisement -

ಬಿಜೆಪಿಯ ಅಧಿಕಾರದಾಹ ಮತ್ತು ಬಿಜೆಪಿಯ ಪತ್ರಿಕೆಗಳು ಹಾಗೂ ಚಾನೆಲ್‍ಗಳ ನೀಚತನವನ್ನು ಎಷ್ಟು ಬೇಕಾದರೂ ಬಯ್ದುಕೊಳ್ಳಬಹುದು. ಆದರೆ, ಸಮ್ಮಿಶ್ರ ಸರ್ಕಾರದ ನೇತಾರರು, ಅದರಲ್ಲೂ ಕಾಂಗ್ರೆಸ್ ಪಕ್ಷದ ನೇತಾರರು ತಮ್ಮನ್ನೇ ಕೇಳಿಕೊಳ್ಳಬೇಕಾದ ಪ್ರಶ್ನೆ ಒಂದಿದೆ. ಅವರು ಅಧಿಕಾರಕ್ಕೆ ಬಂದಿದ್ದು ಯಾತಕ್ಕೆ? ತಮ್ಮಿಬ್ಬರ ಸಮ್ಮಿಶ್ರಕ್ಕೆ ಬಹುಮತವಿದೆ; ಜಾತ್ಯತೀತ ಸರ್ಕಾರ ರಚಿಸುತ್ತೇವೆ; ಜನಪರವಾದ ಆಡಳಿತ ನೀಡುತ್ತೇವೆ ಇತ್ಯಾದಿ ಹೇಳಿಕೊಂಡು ಬಂದವರು ಜನರ ಆಶೋತ್ತರಗಳಿಗೆ ಎಷ್ಟರಮಟ್ಟಿಗೆ ಗಮನ ಕೊಡುತ್ತಿದ್ದಾರೆ?
ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ ಬಳ್ಳಾರಿಯ ರೆಡ್ಡಿಗಳು ಮತ್ತು ರಾಮುಲು ನಡೆಸಿದಂತಹದ್ದೇ ಪಾಲಿಟಿಕ್ಸ್‍ಅನ್ನು ಚಿಕ್ಕ ಪ್ರಮಾಣದಲ್ಲಿ ಜಾರಕಿಹೊಳಿ ಸಹೋದರರು ನಡೆಸಿದಂತೆ ಕಾಣುತ್ತಿದೆ. ‘ನಮ್ಮ ಜಿಲ್ಲೆಗೆ ಬೇರೆಯವರು ತಲೆ ಹಾಕಬಾರದು; ನಾವು ಹೇಳಿದ ಅಧಿಕಾರಿಗಳನ್ನು ಇಲ್ಲಿಗೆ ಹಾಕಬೇಕು; ನಾವು ಹೇಳಿದವರಿಗೆ ಅಧಿಕಾರಸ್ಥಾನ ಕೊಡಬೇಕು, ಇಲ್ಲದಿದ್ದರೆ ಸರ್ಕಾರ ಉರುಳಿಸುವ ಶಕ್ತಿ ನಮಗೆ ಇದೆ’ ಎಂಬುದನ್ನೇ ರೆಡ್ಡಿ-ರಾಮುಲು ಹೇಳಿ ಸರ್ಕಾರವನ್ನು ಬ್ಲ್ಯಾಕ್‍ಮೇಲ್ ಮಾಡಿದ್ದರು.
ಇಂದು ಸಂದರ್ಭ ಬೇರೆ ಇದೆ. ವ್ಯಕ್ತಿಗಳೂ ಬೇರೆ. ಅದರಲ್ಲೂ ಸತೀಶ್ ಜಾರಕಿಹೊಳಿ ಉಳಿದವರಿಗಿಂತ ಭಿನ್ನವಾದ ರಾಜಕಾರಣಿ ಎಂದು ಹೆಸರು ಪಡೆದುಕೊಂಡಿದ್ದಾರೆ. ಆದರೂ ‘ಬೆಳಗಾವಿ ಮತ್ತು ಬಳ್ಳಾರಿಗಳಿಗೆ ಉಳಿದವರು ತಲೆ ಹಾಕುವಂತಿಲ್ಲ. ನಾವು ಹೇಳಿದ ಅಧಿಕಾರಿಗಳನ್ನು ಇಲ್ಲಿಗೆ ಹಾಕಬೇಕು. ನಾವು ಹೇಳಿದವರಿಗೆ ಅಧಿಕಾರ ಕೊಡಬೇಕು. ಸರ್ಕಾರ ಉರುಳಿಸುವ ಶಕ್ತಿ ನಮಗೂ ಇದೆ’ ಎಂಬ ಮಾತುಗಳು ಬಳ್ಳಾರಿ ಮಾತುಗಳಂತೆಯೇ ಕೇಳುತ್ತಿವೆ. ರಿಪಬ್ಲಿಕ್ ಮಾತುಗಳಂತೆ.
ಏಕೆಂದರೆ ಜನರಿಗೆ ಸಂಬಂಧಿಸಿದ ಯಾವ ಇಶ್ಯೂಗಳೂ ಇಲ್ಲಿ ಮುಂದೆ ಬಂದಿಲ್ಲ. ಈ ಸರ್ಕಾರವು ಟೇಕಾಫ್ ಆಯಿತಾ? ಸಾಮಾನ್ಯ ಜನರಿಗೆ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳಲ್ಲಿ – ರೈತರ ಸಾಲಮನ್ನಾ ಒಂದನ್ನು ಬಿಟ್ಟು ಉಳಿದಂತೆ – ಯಾವ್ಯಾವುದನ್ನು ಈಡೇರಿಸುವ ನಿಟ್ಟಿನಲ್ಲಿ ಮುಂದೆ ಸಾಗಿದ್ದೇವೆ? ಎರಡೂ ಪಕ್ಷಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಇನ್ನೂ ಯಾಕೆ ತಯಾರಾಗಿಲ್ಲ? ಜಾತ್ಯತೀತತೆಯನ್ನು ನೆಲೆಗೊಳಿಸುವ ನಿಟ್ಟಿನಲ್ಲಿ ಮತ್ತು ಜನಪರವಾದ ನೀತಿಗಳನ್ನು ಅನುಷ್ಠಾನ ಮಾಡಲು ಅಧಿಕಾರ ಬಳಸಿಕೊಂಡು ಏನು ಮಾಡಬಹುದು? ಇವ್ಯಾವುವೂ ಎರಡೂ ಪಕ್ಷಗಳ ವರ್ತುಲಗಳಲ್ಲಿ ಚರ್ಚೆಯಾಗುತ್ತಿಲ್ಲ.
ಸರ್ಕಾರದ ಸ್ಥಿರತೆ, ತಮ್ಮ ಆದ್ಯತೆಗಳು, ಬಿಜೆಪಿಗಿಂತ ತಾವು ಹೇಗೆ ಭಿನ್ನ ಎಂಬುದನ್ನು ಸ್ಪಷ್ಟವಾಗಿ ಮಾತುಗಳಲ್ಲಿ ಹಾಗೂ ಸರ್ಕಾರದ ಕಾರ್ಯಕ್ರಮಗಳ ಮೂಲಕ ಮುಂದಿಡಬೇಕು ಎಂಬುದು ಎರಡೂ ಪಕ್ಷಗಳ ಮುಖಂಡರಿಗೆ ಆದ್ಯತೆಯಾಗಿದ್ದಂತೆ ತೋರುತ್ತಿಲ್ಲ. ಸಿದ್ದರಾಮಯ್ಯನವರು ಪ್ರಕೃತಿ ಚಿಕಿತ್ಸೆಗಾಗಿ ಧರ್ಮಸ್ಥಳದ ಶಾಂತಿವನದಲ್ಲಿದ್ದಾಗ ಮತ್ತು ಇದೀಗ ವಿದೇಶ ಪ್ರವಾಸಕ್ಕೆ ಹೋದಾಗ ಉಂಟಾದ ಭಿನ್ನಮತವು ಕಾಕತಾಳೀಯವೆಂಬಂತೆ ಕಾಣುತ್ತಿಲ್ಲ. ಶಾಂತಿವನದಿಂದ ಬೆಂಗಳೂರಿಗೆ ಮರಳಲು ಒಂದೇ ದಿನವಿದ್ದಾಗ ಇದೇ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಶಾಸಕರ ದಂಡು ಅಲ್ಲಿಗೆ ಹೋಗಿತ್ತು. ಅದೂ ಸಿದ್ದರಾಮಯ್ಯನವರು ಸಮ್ಮಿಶ್ರ ಸರ್ಕಾರದ ಸ್ಥಿರತೆಯ ಕುರಿತು ಅನುಮಾನ ವ್ಯಕ್ತಪಡಿಸಿದ ಮಾತುಗಳು ವಿಡಿಯೋ ರೆಕಾರ್ಡ್ ಆಗಿ ಲೀಕ್ ಆದ ನಂತರದಲ್ಲಿ. ಅದರ ಮೂಲಕ ತಾನೂ ಗುಂಪು ರಾಜಕೀಯ ಮಾಡಬಲ್ಲೆ ಎಂದು ತೋರಿಸಬೇಕೆಂದು ಸಿದ್ದರಾಮಯ್ಯನವರು ನಿಶ್ಚಯಿಸಿದರೆ ಎಂಬ ಪ್ರಶ್ನೆ ಉದ್ಭವವಾಗಿತ್ತು.
ಹಾಗಾಗಿಯೇ ಈ ಸಾರಿ ಸಿದ್ದರಾಮಯ್ಯನವರ ವಿದೇಶ ಪ್ರವಾಸದ ಸಂದರ್ಭದಲ್ಲಿ ಉದ್ಭವವಾದ ‘ಭಿನ್ನಮತದ’ ಚಟುವಟಿಕೆಗಳು ಅವರು ಬಂದ ತಕ್ಷಣ ನಿಲ್ಲುತ್ತವೆ ಮತ್ತು ಆ ಮೂಲಕ ತಾನು ಮಾತ್ರ ಈ ಭಿನ್ನಮತವನ್ನು ಶಮನ ಮಾಡಬಲ್ಲೆ ಎಂದು ತೋರಿಸುವ ಉದ್ದೇಶ ಅವರಿಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬಂದವು. ‘ಜಾತ್ಯತೀತ ಆಶಯಗಳಿಗೆ ಬದ್ಧವಾಗಿರುವ’ ಸಿದ್ದರಾಮಯ್ಯನವರು ಈ ಸಾರ್ವಜನಿಕ ಸಂದೇಶಗಳ ಕುರಿತು ಇನ್ನೂ ಹೆಚ್ಚಿನ ಎಚ್ಚರ ವಹಿಸದೇ ಇರುವುದು, ಮುಖ್ಯಮಂತ್ರಿಯೋತ್ತರ ಕಾಲದಲ್ಲಿ ಇರಬೇಕಾದ ಮುತ್ಸದ್ದಿತನದ ಕೊರತೆಯಲ್ಲದೇ ಬೇರೇನೂ ಅಲ್ಲ.
ಸಾಲಮನ್ನಾದ ಕುರಿತು ಇದುವರೆಗೂ ಗೊಂದಲವನ್ನು ಬಗೆಹರಿಸಿಲ್ಲ. ನಿಜಕ್ಕೂ ಎಷ್ಟು ಸಾವಿರ ಕೋಟಿಗಳ ಸಾಲ ಮನ್ನಾ ಆಗಿದೆ; ಎಷ್ಟು ಲಕ್ಷ ರೈತರು ಇದರಿಂದ ಅನುಕೂಲ ಪಡೆದುಕೊಳ್ಳುತ್ತಾರೆ ಎಂಬುದನ್ನು ಸರ್ಕಾರ ಅರ್ಧಂಬರ್ಧ ಹೇಳುವ ಪ್ರಯತ್ನ ಮಾಡಿದೆಯಾದರೂ ಯಾರೂ ಅದರಿಂದ ಕನ್‍ವಿನ್ಸ್ ಆದಂತೆ ಕಾಣುತ್ತಿಲ್ಲ. ಇನ್ನು ಖಾಸಗಿ ಸಾಲವನ್ನೂ ಮನ್ನಾ ಮಾಡುವುದು ಒಂದು ಕ್ರಾಂತಿಕಾರಿ ಯೋಜನೆ. ಆದರೆ ಯಾರಿಗೂ ಅದರಿಂದ ರೋಮಾಂಚನ ಆಗುತ್ತಿಲ್ಲ. ತುಣುಕು ತುಣುಕಾಗಿ ಸಾಲಮನ್ನಾದ ಕ್ರಮಗಳನ್ನು ಪ್ರಕಟಿಸುತ್ತಿರುವುದು ಒಂದೆಡೆಯಾದರೆ, ಖಾಸಗಿ ಸಾಲಮನ್ನಾ ಘೋಷಿಸಿದರೆ ಅದನ್ನು ಜಾರಿಗೆ ತರುವುದು ಹೇಗೆ ಮತ್ತು ಆಗ ಉಂಟಾಗುವ ಸಾಲ ಮಾರುಕಟ್ಟೆಯ ನಿರ್ವಾತವನ್ನು ತುಂಬಲು ಯಾವ ಬಗೆಯ ಸಾಂಸ್ಥಿಕ ಪರ್ಯಾಯವನ್ನು ಮಾಡುತ್ತೇವೆಂದು ಸರ್ಕಾರ ಮುಂದಿಟ್ಟಿಲ್ಲ.
ಹೀಗಾಗಿ ಈ ಸರ್ಕಾರದ ಅತ್ಯಂತ ಮಹತ್ವದ ಸಾಂಸ್ಥಿಕ ಮತ್ತು ಖಾಸಗಿ ಸಾಲಮನ್ನಾವೂ ರೈತರಲ್ಲಿ ವಿಶ್ವಾಸ ತುಂಬಿಲ್ಲ. ಇಲ್ಲಿ ಸರ್ಕಾರಕ್ಕೆ ಬರಬೇಕಾದ ಕ್ರೆಡಿಟ್ಟಿನ ಅಂಶ ಅಷ್ಟು ಮುಖ್ಯವಲ್ಲ. ಕೃಷಿ ಬಿಕ್ಕಟ್ಟಿನ ಗೋಜಲಿನಿಂದ ಹೊರಬರಲು ಏನಾದರೂ ಆಸರೆ ಸಿಗಬಹುದೇ ಎಂದು ಆಸೆಗಣ್ಣಿನಿಂದ ನೋಡುವ ರೈತರಲ್ಲಿ ಭರವಸೆ ಮೂಡಬೇಕು. ನಾಳೆ ಆ ಕಾರಣಕ್ಕೆ ಸರ್ಕಾರ ನಡೆಸುವ ಪಕ್ಷಗಳಿಗೆ ಅನುಕೂಲವಾಗುವುದಾದರೆ ಆಗಲಿ. ಹತ್ತಾರು ಸಾವಿರ ಕೋಟಿ ರೂ.ಗಳು ಬೊಕ್ಕಸದಿಂದ ಖರ್ಚಾದ ನಂತರವೂ ಸರ್ಕಾರ ತಮ್ಮ ಪರವಾಗಿದೆ ಎಂದು ಜನರಿಗೆ ಅನ್ನಿಸದಿದ್ದರೆ ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ಖಚಿತವಾಗುತ್ತದೆ ಅಷ್ಟೇ.
ಬಿಜೆಪಿಯ ಕಾಲದಲ್ಲಿ ಭೂಗರ್ಭವನ್ನು ಬಗೆದು ಲೂಟಿ ಮಾಡಿ ಹಂಚಿಕೊಳ್ಳಲು ಇಂತಹ ಕದನಗಳು ನಡೆದಿತ್ತು; ನಮ್ಮಲ್ಲಿ ಹಾಗಲ್ಲ. ತಮ್ಮ ಪಾಳೆಯಪಟ್ಟಿನ ಮೇಲಿನ ಹಿಡಿತಕ್ಕೆ ಅಷ್ಟೇ ಅಲ್ಪಸ್ವಲ್ಪ ಗುದ್ದಾಟ. ಜಾರಕಿಹೊಳಿ ಸೋದರರೂ ಶ್ರೀಮಂತ ಉದ್ದಿಮೆದಾರರೇ ಇರಬಹುದಾದರೂ, ರೆಡ್ಡಿ ಸೋದರರ ಪರಮ ಅಕ್ರಮ ದಂಧೆಯೂ ಇವರದ್ದೂ ಒಂದೇ ಅಲ್ಲ. ಬಳ್ಳಾರಿ ರಿಪಬ್ಲಿಕ್ ಎಂದಾಗ ಅಲ್ಲಿ ಒಂದರ್ಥದಲ್ಲಿ ಪ್ರಜಾಪ್ರಭುತ್ವವೇ ಇರಲಿಲ್ಲ; ವಿಧಾನಸಭೆಯೊಳಗೇ ಬಳ್ಳಾರಿಗೆ ಬನ್ನಿ ಎಂದು ವಿರೋಧ ಪಕ್ಷದ ನಾಯಕರಿಗೇ ಆವಾಜ್ó ಹಾಕಿದ್ದರು. ಇದು ಆ ರೀತಿ ಅಲ್ಲ. ಜಾತಿಗಳ ಬಲ ಮತ್ತು ಸಾಮಾಜಿಕ ಸ್ಥಾನಮಾನವೂ ಬೇರೆ ಇತ್ಯಾದಿ ಇತ್ಯಾದಿಗಳನ್ನೆಲ್ಲಾ ಹೇಳಬಹುದು. ಜೊತೆಗೆ ಪರಮಘಾತುಕತನ ಹಾಗೂ ಟಿಆರ್‍ಪಿ ದಾಹದಿಂದ ವರ್ತಿಸುತ್ತಿರುವ ಮಾಧ್ಯಮಗಳು ಇಲ್ಲದ್ದನ್ನೂ ಸೃಷ್ಟಿಸುತ್ತಿವೆ ಎಂಬ ಕಾರಣವನ್ನೂ ಮುಂದಿಡಬಹುದು. ಇವೆಲ್ಲವೂ ನಿಜ.
ಆದರೆ, ಅಷ್ಟೇನಾ? ಪರಮ ಘಾತುಕರಿಗೂ, ಸಾಧಾರಣ ಘಾತುಕರಿಗೂ ನಡುವಿನ ವ್ಯತ್ಯಾಸವಷ್ಟೇ ನಿಮ್ಮಿಬ್ಬರ ನಡುವೆ ಇರುವುದಾದಲ್ಲಿ, ಇತರ ಕಾರಣಗಳಿಗಾಗಿ ಜನರು ಎ ಟೀಂಅನ್ನೇ ಆರಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಆಗ ಅಯ್ಯೋ ನಮ್ಮ ಜಾತ್ಯತೀತತೆಗೆ ಜನರು ಓಟು ಹಾಕಲಿಲ್ಲ ಎಂದು ಗೋಳುಗರೆಯುವುದು. ಇಂತಹ ಪಕ್ಷಗಳಿಗೆ ಜನರು ಬುದ್ಧಿ ಕಲಿಸದೇ ಬಿಡುವುದಿಲ್ಲ.
ಸರ್ಕಾರವನ್ನು ಪರಿಣಾಮಕಾರಿಯಾಗಿ ಮುನ್ನಡೆಸುವುದರಲ್ಲಿ ಕುಮಾರಸ್ವಾಮಿಯವರೂ ಇನ್ನೂ ಪಾಸ್ ಆಗಿಲ್ಲ. ಅವರೂ ಕಾರಣಗಳನ್ನು ಹೇಳಬಹುದು. ತಾನು ಸಾಂದರ್ಭಿಕ ಶಿಶು, ದೈವಕೃಪೆ, ಸಿದ್ದರಾಮಯ್ಯನವರ ಅವಕೃಪೆ, ರಾಹುಲ್‍ಗಾಂಧಿ ಆಶೀರ್ವಾದ ಇತ್ಯಾದಿ ಇತ್ಯಾದಿಗಳೆಲ್ಲಾ ಆಗಾಗ್ಗೆ ಉದುರಿಸಬಹುದು. ಸಾಲಮನ್ನಾದ ಕಾರಣದಿಂದ ಉಳಿದಂತೆ ಹೆಚ್ಚಿನ ಆರ್ಥಿಕ ಅನುದಾನಗಳನ್ನು ನೀಡಲಾಗುತ್ತಿಲ್ಲ ಎಂದು ಕೆಲವೆಡೆ ಹೇಳುವುದು, ಸಾಲಮನ್ನಾದಿಂದ ಸರ್ಕಾರದ ಹಣಕಾಸಿನ ಸ್ಥಿತಿಯೇನೂ ತೊಂದರೆಗೀಡಾಗಿಲ್ಲ ಎಂದು ಇನ್ನೊಂದೆಡೆ ಹೇಳುವುದನ್ನು ಎಚ್‍ಡಿಕೆ ಮಾಡುತ್ತಿದ್ದಾರೆ. ತನ್ನ ಚುನಾವಣಾ ಪ್ರಣಾಳಿಕೆಯಲ್ಲಿದ್ದ ವಿವಿಧ ಸಮುದಾಯಗಳ ವ್ಯಕ್ತಿಗತ ಫಲಾನುಭವಿಗಳಿಗೆ ಹಣಕಾಸಿನ ನೆರವನ್ನು ನೀಡುವುದನ್ನು ಮಾಡುವುದು ಸಾಧ್ಯವಾಗದೇ ಹೋಗಬಹುದು. ಆದರೆ, ಇದುವರೆಗೂ ವರ್ಗಾವಣೆಯ ಪರ್ವವೇ ಮುಗಿದಂತಿಲ್ಲ; ಆರ್ಥಿಕೇತರವಾದ ಬಿಗಿ ಆಡಳಿತದ ಮೂಲಕ ಜಾರಿಗೆ ತರಬಹುದಾದ ಅದೆಷ್ಟೋ ಸಂಗತಿಗಳು ಎಲ್ಲಿವೆಯೋ ಅಲ್ಲೇ ಇವೆ.
ತನ್ನ ಕುಟುಂಬದೊಳಗೇ ಇರುವ ‘ನುರಿತ ಆಡಳಿತ ತಜ್ಞರು’, ಅಧಿಕಾರದಲ್ಲಿಲ್ಲದಾಗಲೂ ಅಲ್ಲಲ್ಲಿ ಪ್ರಭಾವ ಉಳಿಸಿಕೊಳ್ಳುವ ಮಟ್ಟಿಗಿನ ನೆಟ್‍ವರ್ಕ್ ಗೌಡರ ಕುಟುಂಬಕ್ಕಿದೆ. ಲೋಕಸೇವಾ ಆಯೋಗದ ಪ್ರಾಮುಖ್ಯತೆಯನ್ನು ಅವರಷ್ಟು ಚೆನ್ನಾಗಿ ಅರಿತವರು ಬೇರಿಲ್ಲ. ಅವರ ಕಾಲದಲ್ಲಿ ಆಯ್ಕೆಯಾದ ಬಹುತೇಕ ಅಧಿಕಾರಿಗಳು ಈಗ ಹಿರಿಯ ಅಧಿಕಾರಿಗಳಾಗಿದ್ದಾರೆ. ಹೀಗಾಗಿ ಅಧಿಕಾರಶಾಹಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸಿದ್ದರಾಮಯ್ಯನವರಿಗೆ ಇದ್ದಷ್ಟು ಕಷ್ಟವಲ್ಲ. ಇಷ್ಟೆಲ್ಲಾ ಇದ್ದರೂ, ಇಂದಿಗೂ ಅಧಿಕಾರಿಗಳೇ ಬಹುತೇಕ ಇಲಾಖೆಗಳನ್ನು ನಡೆಸುತ್ತಿದ್ದಾರೆ. ದಕ್ಷತೆ, ಆರ್ಥಿಕ ಶಿಸ್ತು ಇತ್ಯಾದಿ ಹೆಸರುಗಳಲ್ಲಿ ಜನವಿರೋಧಿಯಾದ ಸರ್ಕಾರವನ್ನು ನಡೆಸುವುದು ಅವರಿಗೆ ಕರಗತವಾಗಿದೆ.
ಇಂತಹ ವಿಚಾರಗಳ ಮೇಲೆ ಕೇಂದ್ರೀಕರಿಸುವುದು ಮತ್ತು ಕೆಲವು ಜನಪ್ರಿಯ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಮೂಲಕ ವಿರೋಧಿಗಳ ಬಾಯಿ ಮುಚ್ಚಿಸುವುದು ಸಮ್ಮಿಶ್ರ ಸರ್ಕಾರದ ಆದ್ಯತೆಯಾಗಬೇಕಿದೆ. ಅದನ್ನು ಬಿಟ್ಟು ಭಿನ್ನಮತದ ಚೇಷ್ಟೆಗಳಲ್ಲೇ ಮುಳುಗಿ ಹೋಗುವಂತೆ ಒಳಗೊಳಗಿನ ವ್ಯವಹಾರಗಳಲ್ಲೇ ನಿರತರಾಗಿದ್ದರೆ ಈ ಪಕ್ಷಗಳಿಗೆ ಭವಿಷ್ಯವಿರುವುದಿಲ್ಲ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಬಿಜೆಪಿಯ ಬಿ ಟೀಂನಂತೆ ಅಧಿಕಾರವನ್ನು ನಡೆಸುತ್ತಾ ಹೋಗಬಹುದು ಅಷ್ಟೇ.
ಇನ್ನಾದರೂ ಸರ್ಕಾರದ ಹನಿಮೂನ್ ಅವಧಿ ಮುಗಿದುಹೋಗಿದೆ ಎಂಬುದನ್ನು ಅರಿತು ಒಗ್ಗಟ್ಟಿನಿಂದ ಕೆಲಸ ಮಾಡಲಿ, ಇಲ್ಲವಾದರೆ ಪರಿಣಾಮಗಳನ್ನು ಅನುಭವಿಸುತ್ತಾರೆ ಎಂದಷ್ಟೇ 100 ಚಿಲ್ಲರೆ ದಿನಗಳ ಸರ್ಕಾರದ ಭವಿಷ್ಯದ ಕುರಿತು ಹೇಳಬಹುದು.

– ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...