Homeನಿಜವೋ ಸುಳ್ಳೋFact check: ಅರ್ನಬ್ ಗೋಸ್ವಾಮಿ ವಿಡಿಯೋ ದಾಳಿಗೂ ಮುನ್ನವೇ ಮಾಡಲಾಗಿತ್ತೇ?

Fact check: ಅರ್ನಬ್ ಗೋಸ್ವಾಮಿ ವಿಡಿಯೋ ದಾಳಿಗೂ ಮುನ್ನವೇ ಮಾಡಲಾಗಿತ್ತೇ?

- Advertisement -
- Advertisement -

ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ಏಪ್ರಿಲ್ 23 ರಂದು ತನ್ನ ಕೆಲಸ ಮುಗಿಸಿ ಹೆಂಡತಿಯೊಂದಿಗೆ ಕಾರಿನಲ್ಲಿ ಮನೆಗೆ ಹೋಗುತ್ತಿರುವಾಗ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ವಿಡಿಯೋ ಹೇಳಿಕೆಯೊಂದರಲ್ಲಿ ಆರೋಪಿಸಿದ್ದರು.

ಕಾಂಗ್ರೆಸ್ ಐಟಿ ಸೆಲ್‌ನ ರಾಷ್ಟ್ರೀಯ ಸಂಯೋಜಕ ಗೌರವ್ ಪಾಂಡಿ ಅರ್ನಬ್ ಗೋಸ್ವಾಮಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ವೀಡಿಯೊವೂ ದಾಳಿಗಿಂತ ಮುಂಚೆಯೇ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಿದ್ದರು. ಕಾಂಗ್ರೆಸ್ ಸದಸ್ಯ ಸೂರಜ್ ಹೆಗ್ಡೆ ಮತ್ತು ರೋಫ್ಲ್ ರಿಪಬ್ಲಿಕ್ ಟ್ವಿಟರ್ ಹ್ಯಾಂಡಲ್ ಸಹ  ಇದೇ ವಿಷಯವನ್ನು ಟ್ವೀಟ್ ಮಾಡಿದ್ದರು. ಅಲ್ಲದೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಅರ್ನಬ್ ಮೇಲೆ ದಾಳಿಯೇ ನಡೆದಿಲ್ಲ, ಆದರೂ ವಿಡಿಯೋ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

 

ರಿಪಬ್ಲಿಕ್ ಟಿವಿಯಿಂದ ದಾಳಿ ಸುದ್ದಿಯನ್ನು ಪ್ರಸಾರ ಮಾಡುವ ಮೊದಲೇ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಮತ್ತು ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಅವರು ಈ ದಾಳಿಯ ಬಗ್ಗೆ ತಿಳಿದಿದ್ದರು ಎಂದು ಯೂತ್ ಕಾಂಗ್ರೆಸ್ ರಾಷ್ಟ್ರೀಯ ಪ್ರಚಾರ ಉಸ್ತುವಾರಿ ಶ್ರೀವತ್ಸ ಹೇಳಿದ್ದಾರೆ. ಚಾನೆಲ್‌ಗಳು ಮತ್ತು ಇಬ್ಬರು ವ್ಯಕ್ತಿಗಳು ಹಾಕಿದ ಟ್ವೀಟ್‌ಗಳ ಸಮಯವನ್ನು ಆಧರಿಸಿ ಅವರು ಈ ಆರೋಪ ಮಾಡಿದ್ದಾರೆ.

ಫ್ಯಾಕ್ಟ್-ಚೆಕ್

ಈ ಫ್ಯಾಕ್ಟ್ ಚೆಕ್ಕನ್ನು ಆಲ್ಟ್ ನ್ಯೂಸ್ ಎರಡು ರೀತಿಯಲ್ಲಿ ಪ್ರತ್ಯೇಕವಾಗಿ ವಿಶ್ಲೇಷಿಸಿದೆ.

1. ರಿಪಬ್ಲಿಕ್ ಟಿವಿ ಆಪಾದಿತ ದಾಳಿಯ ಬಗ್ಗೆ ವೀಕ್ಷಕರಿಗೆ ತಿಳಿಸುವ ಮೊದಲೆ ಅದನ್ನು ಚಿತ್ರೀಕರಿಸಲಾಗಿದೆ ಎಂದು ವೀಡಿಯೊದ ಮೆಟಾಡೇಟಾ ತೋರಿಸುತ್ತದೆಯೇ?

2. ಸಾಂಬಿತ್ ಪಾತ್ರ ಮತ್ತು ಅಶೋಕ್ ಪಂಡಿತ್ ಅವರು ಈ ದಾಳಿ ನಡೆಯುವ ಮೊದಲೇ ಟ್ವೀಟ್ ಮಾಡಿದ್ದಾರೆಯೇ?

ಮೆಟಾಡೇಟಾ

ಮೆಟಾಡೇಟಾ ಎಂದರೆ ಡೇಟಾದ ಬಗ್ಗೆ ಇರುವ ಮಾಹಿತಿ ಆಗಿದೆ. ಕೆಲವು ಪರಿಕರಗಳು ವೀಡಿಯೊಗಳಿಗೆ ಸಂಬಂಧಿಸಿದ ಮೆಟಾಡೇಟಾವನ್ನು ಬಹಿರಂಗಪಡಿಸುತ್ತವೆ. ಆದರೆ ಮೂಲ ಫೈಲ್‌ನಿಂದ ಕಂಡುಹಿಡಿದಾಗ ಮಾತ್ರ ಅಂತಹ ಡೇಟಾ ನಿಖರವಾಗಿರುತ್ತದೆ. ವೀಡಿಯೊ ಕಳುಹಿಸಿದ ಪ್ಲಾಟ್‌ಫಾರ್ಮ್ ಆಧರಿಸಿ ಮೆಟಾಡೇಟಾವನ್ನು ಮಾರ್ಪಡಿಸಲಾಗುತ್ತದೆ. ಟ್ವಿಟರ್ ಫೈಲ್‌ಗಳ ಮೆಟಾಡೇಟಾವು ಟ್ವಿಟ್ಟರಿನಲ್ಲಿ ಅಪ್‌ಲೋಡ್ ಮಾಡಿದಾಗ ಅವುಗಳ ಆಧಾರದ ಮೇಲೆ ದಿನಾಂಕ ಮತ್ತು ಸಮಯವನ್ನು ತೋರಿಸುತ್ತದೆ, ಆದರೆ ಅವುಗಳನ್ನು ಚಿತ್ರೀಕರಿಸಿದಾಗ ಅಲ್ಲ.

ವೀಡಿಯೊದ ಮೆಟಾಡೇಟಾವನ್ನು ಕಂಡು ಹಿಡಿಯಲು ಕಾಂಗ್ರೆಸ್ ಸದಸ್ಯರು metadata2go.com ವೆಬ್‌ಸೈಟ್ ಅನ್ನು ಬಳಸಿದ್ದಾರೆ. ಅವರು ವೀಡಿಯೊವನ್ನು ಡೌನ್‌ಲೋಡ್ ಮಾಡಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಸತ್ಯವನ್ನು ಕಂಡುಕೊಳ್ಳಲು ಯಾರು ಬೇಕಾದರೂ ರೀತಿ ಪ್ರಯತ್ನಿಸಬಹುದು. ವೆಬ್‌ಸೈಟ್ ವಿಡಿಯೋ ತಯಾರಾದ ಸಮಯವನ್ನು ಏಪ್ರಿಲ್ 22 ರಂದು 8:17 PM ಎಂದು ತೋರಿಸುತ್ತದೆ. ಆದರೆ, ‘ಟ್ಯಾಗ್‌ಗಳು’  ವೆಬ್‌ಸೈಟ್ ಸಮಯವನ್ನು‘2020-04-22T20:17:11.000000Z’ ಎಂದು ತೋರಿಸುತ್ತದೆ. ಇದರ ‘Z’ ಅಕ್ಷರವು ಜುಲು ಸಮಯವನ್ನು ಗ್ರೀನ್ವಿಚ್ ಮೀನ್ ಟೈಮ್ (ಜಿಎಂಟಿ) ಎಂದು ಸೂಚಿಸುತ್ತದೆ, ಇದನ್ನು ಈಗ ಯೂನಿವರ್ಸಲ್ ಟೈಮ್ ಕೋಆರ್ಡಿನೇಟೆಡ್ (ಯುಟಿಸಿ) ಎಂದು ಕರೆಯಲಾಗುತ್ತದೆ.

ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್ (ಐಎಸ್ಟಿ) ನೊಂದಿಗೆ ಇದನ್ನು ಹೊಂದಿಸಿದಾಗ 5:30 ಗಂಟೆಗಳನ್ನು ಸೇರಿಸುವ ಅಗತ್ಯವಿದೆ, ಅಂದರೆ ಸರಿಯಾದ ಸಮಯ ರಾತ್ರಿ 1:47 ಏಪ್ರಿಲ್ 23. ಅಂದರೆ ರಿಪಬ್ಲಿಕ್ ಟಿವಿ ಟ್ವಿಟ್ಟರ್ನಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡಿದ ನಿಖರವಾದ ಸಮಯ ಇದು.

ಟ್ವಿಟರ್ ಬಳಕೆದಾರರಾದ ರವಿ ನಾಯರ್ ಬೇರೆಯೊಂದು ಪ್ರತಿಪಾದನೆಯನ್ನು ಮಾಡಿದ್ದರು. ಅವರು ಯೂಟ್ಯೂಬ್‌ನಲ್ಲಿ ವೀಡಿಯೊವನ್ನು ಪರಿಶೀಲಿಸಿ ಮತ್ತು ಅರ್ನಬ್ ಹೇಳಿಕೆಯನ್ನು ಏಪ್ರಿಲ್ 23 ರಂದು  21:04 UTC ಅಥವಾ ರಾತ್ರಿ 2:34 IST ನಲ್ಲಿ ಉದ್ದೇಶಿತ ದಾಳಿ ರಾತ್ರಿ 12:15 ಕ್ಕೆ ನಡೆಯುವ ಮೊದಲು ರಚಿಸಲಾಗಿದೆ ಎಂದು ಸೂಚಿಸಿದ್ದರು. ಅವರ ವಿಶ್ಲೇಷಣೆ ಅವರು metadata2go.com ನಿಂದ ಪಡೆದ ಫಲಿತಾಂಶಗಳನ್ನು ಆಧರಿಸಿದೆ.

ಆದರೆ “ಆಲ್ಟ್ ನ್ಯೂಸ್” metadata2go.com ನಲ್ಲಿ ಇದನ್ನು ಪರಿಶೀಲಿಸಿದಾಗ ಅವರಿಗೆ ವಿಭಿನ್ನ ಫಲಿತಾಂಶ ಸಿಕ್ಕಿದೆ ಎಂದು ವರದಿ ಮಾಡಿದೆ. ಅಂದರೆ ಯೂ ಟ್ಯೂಬ್ ವೀಡಿಯೊದ ಮೆಟಾಡೇಟಾವನ್ನು ಡೌನ್‌ಲೋಡ್ ಮಾಡಿ metadata2go.com ಗೆ ಅಪ್‌ಲೋಡ್ ಮಾಡುವ ಮೂಲಕ ಪರಿಶೀಲಿಸುವುದು ವಿಶ್ವಾಸಾರ್ಹ ಪ್ರಕ್ರಿಯೆಯಲ್ಲ. ಯೂಟ್ಯೂಬ್ ಮೆಟಾಡೇಟಾವನ್ನು ಪರಿಶೀಲಿಸುವ ಉತ್ತಮ ಸಾಧನವೆಂದರೆ Amnesty International’s YouTube DataViewer. ಅಮ್ನೆಸ್ಟಿ ಪ್ರಕಾರ, ವೀಡಿಯೊವನ್ನು ಏಪ್ರಿಲ್ 23 ರಂದು 21:13 ಅಥವಾ ರಾತ್ರಿ 2:43 IST ನಲ್ಲಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಟ್ವಿಟರ್‌ನಂತೆಯೇ, ಯೂಟ್ಯೂಬ್ ಕೂಡಾ ವೀಡಿಯೊದಿಂದ ಎಲ್ಲಾ ಮೆಟಾಡೇಟಾವನ್ನು ತೆಗೆದುಹಾಕುತ್ತದೆ. ಅಮ್ನೆಸ್ಟಿ ತೋರಿಸಿದ ಸಮಯ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ಸಮಯ, ಆದರೆ ವೀಡಿಯೊ ಮಾಡಿದ ನಿಜವಾದ ದಿನಾಂಕವಲ್ಲ.

ಆದ್ದರಿಂದ, ಹಲವಾರು ಕಾಂಗ್ರೆಸ್ ಸದಸ್ಯರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ವಿಟರ್ ಮತ್ತು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಸಮಯವನ್ನು ವೀಡಿಯೊದ ನಿಜವಾದ ಮೆಟಾಡೇಟಾ (ರಚನೆಯ ದಿನಾಂಕ) ಎಂದು ತಪ್ಪಾಗಿ ಅರ್ಥೈಸಿದ್ದಾರೆ. ಇದಲ್ಲದೆ, ಮೆಟಾಡೇಟಾ ಯುಟಿಸಿಯಲ್ಲಿನ ಸಮಯವನ್ನು ಪ್ರತಿಬಿಂಬಿಸುತ್ತದೆ, ಇದು ಭಾರತೀಯ ಸಮಯವನ್ನು ಪ್ರತಿಬಿಂಬಿಸಲು ಸರಿಹೊಂದಿಸಬೇಕಾಗಿದೆ.

ಟ್ವೀಟ್‌ಗಳು

ವೀಡಿಯೊದಲ್ಲಿ ಏಪ್ರಿಲ್ 23 ರಂದು ಬೆಳಿಗ್ಗೆ 12:15 ಕ್ಕೆ ಅರ್ನಬ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ರಿಪಬ್ಲಿಕ್ ಟಿವಿಯು ದಾಳಿಯ ಬಗ್ಗೆ ಮೊದಲ ಟ್ವೀಟ್ ಅನ್ನು ರಾತ್ರಿ 1:06 ಕ್ಕೆ ಮಾಡಿದೆ. ಸಂಬಿತ್ ಪಾತ್ರ ಮತ್ತು ಅಶೋಕ್ ಪಂಡಿತ್ ಕೆಲವು ನಿಮಿಷಗಳ ಮೊದಲು ಕ್ರಮವಾಗಿ ರಾತ್ರಿ 1:05 ಮತ್ತು 12:55 ಕ್ಕೆ ಟ್ವೀಟ್ ಮಾಡಿದ್ದಾರೆ. ಇದು ರಿಪಬ್ಲಿಕ್ ಟಿವಿ ಸುದ್ದಿ ಮಾಡುವ ಮೊದಲೇ ಇವರಿಬ್ಬರಿಗೆ ದಾಳಿಯ ಬಗ್ಗೆ ತಿಳಿದಿತ್ತು ಎಂದು ಹಲವರು ನಂಬಲು ಕಾರಣವಾಯಿತು.

ಆದರೆ, ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಾಕುವುದಕ್ಕಿಂತ ಮೊದಲೇ ಅಂದರೆ ರಾತ್ರಿ 12:45 ಕ್ಕೆ ರಿಪಬ್ಲಿಕ್ ಟಿವಿ ದಾಳಿಯ ಸುದ್ದಿಯನ್ನು ಬಹಿರಂಗಪಡಿಸಿದೆ. ನಂತರ ಘಟನೆಯ ಬಗ್ಗೆ ಟ್ವೀಟ್ ಹಾಗೂ ಯೂಟ್ಯೂಬಿನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.

ರಿಪಬ್ಲಿಕ್ ಟಿವಿಯ ಟ್ವೀಟ್ ಸಮಯವನ್ನು ಆಧರಿಸಿ ದಾಳಿ ನಡೆಯುವ ಮೊದಲೇ ಸಂಬಿತ್ ಪಾತ್ರ ಮತ್ತು ಪಂಡಿತ್ ಅವರಿಗೆ ತಿಳಿದಿದೆ ಎಂಬ ಹೇಳಿಕೆ ಸುಳ್ಳಾಗಿದೆ. ಆಪಾದಿತ ಘಟನೆಯ ಬಗ್ಗೆ ಚಾನೆಲ್ ಮೊದಲು ಟಿವಿಯಲ್ಲಿ, ನಂತರ ಸಾಮಾಜಿಕ ಮಾಧ್ಯಮದಲ್ಲಿ ವರದಿ ಮಾಡಿತ್ತು. ಆದ್ದರಿಂದ ಕಾಂಗ್ರೆಸ್ ಸದಸ್ಯರು ಹಾಗೂ ಇತರ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರ ಮಾಡುವ ಎರಡೂ ಆರೋಪಗಳು ಸುಳ್ಳು ಎಂದು ಸಾಬೀತಾಗುತ್ತದೆ.


ಇದನ್ನೂ ಓದಿ: Fact check: ಪಾಲ್ಘರ್ ಗುಂಪು ಹತ್ಯೆಯ ಬಗ್ಗೆ ಸುಳ್ಳು ವರದಿ ಮಾಡಿದ ಪಿಟಿಐ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...