Homeಮುಖಪುಟಬಹುಜನ ಭಾರತ : ಹಸಿವಿನ ಸಾವುಗಳು ಮತ್ತು ತುಂಬಿ ತುಳುಕಿರುವ ಗೋದಾಮುಗಳು

ಬಹುಜನ ಭಾರತ : ಹಸಿವಿನ ಸಾವುಗಳು ಮತ್ತು ತುಂಬಿ ತುಳುಕಿರುವ ಗೋದಾಮುಗಳು

ಕಂಗೆಟ್ಟ ಬಡಭಾರತದತ್ತ ಕಣ್ಣು ಮುಚ್ಚಿದ್ದಾರೆ ಮೋದಿ. ಹೆಚ್ಚುವರಿ ದಾಸ್ತಾನಿನ ಉಚಿತ ಹಂಚಿಕೆ ಮಾಡುತ್ತಿಲ್ಲ ಯಾಕೆ?

- Advertisement -
- Advertisement -

ಕೊರೊನಾ ಲಾಕ್ ಡೌನ್ 200ಕ್ಕೂ ಹೆಚ್ಚು ಬಡಜೀವಗಳನ್ನು ಬಲಿ ತೆಗೆದುಕೊಂಡಿದೆ. ಇವು ವರದಿಯಾಗಿರುವ ಪ್ರಕರಣಗಳು. ಮನೆಯ ಕದಗಳಷ್ಟೇ ಅಲ್ಲದೆ ಮನದ ಕದಗಳನ್ನೂ ಮುಚ್ಚಿಕೊಂಡಿರುವ ಭಾರತ ದೇಶದಲ್ಲಿ ಕಂಗೆಟ್ಟವರೆಡೆಗೆ ಕಣ್ಣುಮುಚ್ಚಿರುವವರೇ ಹೆಚ್ಚು. ಹೀಗಾಗಿ ಒಳನಾಡುಗಳಲ್ಲಿ, ದೂರದ ಸೀಮೆಗಳಲ್ಲಿ ವರದಿಯಾಗದಿರುವ ಪ್ರಕರಣಗಳ ಸಂಖ್ಯೆ ಕಡಿಮೆಯೇನೂ ಇರಲಿಕ್ಕಿಲ್ಲ. ದನಿ ಕಳೆದುಕೊಂಡ ಭಾರತವೊಂದಿದೆ. ಅದರ ಆಕ್ರಂದನ ಕೇಳುವವರಿಲ್ಲ. ಅಲ್ಲಿ ಹಿಂದು- ಮುಸ್ಲಿಂ ಕೋಮುವಾದಿ ಕೋನವಿದ್ದರೆ ಮಾತ್ರ ಮೀಡಿಯಾದ ಕಣ್ಣು ಕಿವಿಗಳು ಅರಳುತ್ತವೆ. ಯಾರೂ ಕೇಳದವರನ್ನು ಸರ್ಕಾರ ಯಾಕೆ ಕೇಳೀತು?

ಏಪ್ರಿಲ್ 11ರಂದು ಲಭ್ಯವಿದ್ದ ಅಂಕಿ ಅಂಶಗಳ ಪ್ರಕಾರ ಹಸಿವು, ದಣಿವು, ಪೊಲೀಸ್ ದೌರ್ಜನ್ಯ, ಹೆದ್ದಾರಿಗಳಲ್ಲಿ ಕಾಲುನಡಿಗೆಯಲ್ಲಿ ಊರು ಸೇರುವ ತವಕದಲ್ಲಿ ವೇಗದ ವಾಹನಗಳ ಚಕ್ರಗಳಿಗೆ ಸಿಕ್ಕವರು, ಮದ್ಯ ಸಿಗದೆ ಒದ್ದಾಡಿದವರು, ಸೋಂಕಿತರೆಂಬ ಸಂಶಯಕ್ಕೆ ಗುರಿಯಾಗಿ ಗುಂಪುಗಳಿಂದ ಜಜ್ಜಿಸಿಕೊಂಡವರು, ವರಮಾನವಿಲ್ಲದೆ ಆತ್ಮಹತ್ಯೆಯಂತಹ ಕಾರಣಗಳಿಂದಾಗಿ ಲಾಕ್ ಡೌನ್ ಅವಧಿಯಲ್ಲಿ ಸತ್ತವರ ಸಂಖ್ಯೆ 185. ತಮ್ಮದಲ್ಲದ ತಪ್ಪಿಗೆ ಬದುಕನ್ನು ಮುಗಿಸಿದ ಈ ಬಡಪಾಯಿಗಳಿಗಾಗಿ ದೀಪ ಮುಡಿಸಿದವರು, ಜಾಗಟೆ ಹೊಡೆದವರು ಯಾರೂ ಇಲ್ಲ. ಜನರನ್ನು ಉಳಿಸಲೆಂದು ಕೈಗೊಂಡ ಕ್ರಮಗಳೇ ಅವರಿಗೆ ಉರುಳಾಗಿವೆ. ಇದಕ್ಕಿಂತ ವ್ಯಂಗ್ಯ ಮತ್ತೊಂದು ಇದ್ದೀತೇ?

ದೇಶ ಅಳುವವರು ಹೆಚ್ಚು ವಿವೇಕಿಗಳೂ, ಬಡವರ ಬವಣೆಗಳ ಕುರಿತು ಹೆಚ್ಚು ಸಂವೇದನಾಶೀಲರೂ ಆಗಿದ್ದಲ್ಲಿ ಮಾನವೀಯವಾದ ಯೋಜಿತ ಮತ್ತು ಸುಸಜ್ಜಿತ ಲಾಕ್ ಡೌನ್ ಮಾಡುತ್ತಿದ್ದರು. ಆಗ ಸಾವುಗಳ ಸಂಖ್ಯೆಯೂ ತಗ್ಗುತ್ತಿತ್ತು.

ಅಂತಹ ಅಮೆರಿಕೆಯಲ್ಲೇ ಒಂದೂವರೆ ಕೋಟಿ ಮಂದಿ ಸರ್ಕಾರದ ಮುಂದೆ ನಿರುದ್ಯೋಗ ಪರಿಹಾರಗಳಿಗೆಂದು ಕೈ ಚಾಚಿ ನಿಂತಿದ್ದಾರೆ. ಇನ್ನು ಸಾಮಾಜಿಕ-ಆರ್ಥಿಕ ರಕ್ಷಣೆ ಇಲ್ಲದ ಜನಸಮುದಾಯಗಳ ಪಾಲಿಗೆ ಲಾಕ್ ಡೌನ್ ಎಂಬುದು ಹಸಿವು ಮತ್ತು ಮರಣದ ನಿಶ್ಚಿತ ದಾರಿ. ಬಡದೇಶಗಳ ಸುಮಾರು 200 ಕೋಟಿ ಮಂದಿಯ ಮುಂದೆ ನಿರುದ್ಯೋಗದ ಕತ್ತಲು ಕವಿದಿದೆ. ಸರ್ಕಾರಗಳು ಅವರ ನೆರವಿಗೆ ಧಾವಿಸುವ ಅವಕಾಶಗಳು ಕ್ಷೀಣ.

ದೇಶದಲ್ಲಿ ಅಸಂಘಟಿತ ಕಾರ್ಮಿಕ ವಲಯ ಮತ್ತು ವಲಸೆ ಕಾರ್ಮಿಕರ ಸಂಖ್ಯೆಯನ್ನು 39 ಕೋಟಿ ಎಂದು ಅಂದಾಜು ಮಾಡಲಾಗಿದೆ. ಸಾಮಾಜಿಕ-ಆರ್ಥಿಕ ಭದ್ರತೆಯ ನೆರಳಿನಿಂದ ವಂಚಿತರು ಇವರು. ತಮ್ಮ ಹಳ್ಳಿಗಳು ಊರುಗಳನ್ನು ಸೇರಿಕೊಂಡ ನಂತರವೂ ಹಸಿವು ಇವರನ್ನು ಕಾಡುವುದಿಲ್ಲ ಎಂಬ ಖಾತರಿ ಇಲ್ಲ. ಶ್ರಮದ ಮಾರುಕಟ್ಟೆಯಲ್ಲಿ ಇವರ ಬೆವರು ಈಗಾಗಲೆ ಬೆಲೆ ಕಳೆದುಕೊಳ್ಳತೊಡಗಿದೆ. ರೆಟ್ಟೆ ಮುರಿದರೂ ಹೊಟ್ಟೆ ತುಂಬುವ ಸೂಚನೆಗಳು ಕಾಣುತ್ತಿಲ್ಲ. ಬದುಕುಗಳು ಬಲು ದುರ್ಭರವಾಗಲಿವೆ. ಶಾಲೆಗೆ ಹೋಗುತ್ತಿರುವ ಇವರ ಮಕ್ಕಳು ಸಂಸಾರದ ನೊಗಕ್ಕೆ ಹೂಡುವ ಕರುಗಳಾಗಲಿದ್ದಾರೆ. ಈ ಜನವರ್ಗಗಳ ದೈಹಿಕ, ಮಾನಸಿಕ ಹಾಗೂ ಲೈಂಗಿಕ ಹಿಂಸೆ ಮೇರೆ ಮೀರಲಿದೆ.

ವರ್ಷಾಂತ್ಯದ ಹೊತ್ತಿಗೆ ಕರೋನಾ ವೈರಸ್ ಮಹಾಮಾರಿಯು ಮಹಾಕ್ಷಾಮವೊಂದಕ್ಕೆ ದಾರಿ ಮಾಡಲಿದೆ ಎಂದು ವಿಶ್ವ ಆಹಾರ ತಜ್ಞರು ಭವಿಷ್ಯ ನುಡಿದಿದ್ದಾರೆ. 2020ರ ಅಂತ್ಯದ ವೇಳೆಗೆ ಹಸಿವಿನ ಅಂಚಿಗೆ ತಲುಪಲಿರುವ ವಿಶ್ವದ ಜನಸಂಖ್ಯೆ ಮೂವತ್ತು ಕೋಟಿಯನ್ನು ಸಮೀಪಿಸಲಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೇಳಿದೆ.

ತಿಂಗಳ ಹಿಂದೆ ಮಾರ್ಚ್ ಒಂದರ ಅಂಕಿ ಅಂಶದ ಪ್ರಕಾರ ದೇಶದ ಸರ್ಕಾರೀ ಗೋದಾಮುಗಳು 77 ದಶಲಕ್ಷ ಮೆಟ್ರಿಕ್ ಟನ್ ಗಳಷ್ಟು ಅಕ್ಕಿ ಮತ್ತು ಗೋಧಿಯ ಧಾರಾಳ ದಾಸ್ತಾನು ಹೊಂದಿದ್ದವು. ನಮಗೆ ಅಗತ್ಯವಿರುವ ಕಾಪು ದಾಸ್ತಾನಿನ ಪ್ರಮಾಣ 21.4 ದಶಲಕ್ಷ ಮೆಟ್ರಿಕ್ ಟನ್ನುಗಳು ಮಾತ್ರ. ಉಳಿದದ್ದೆಲ್ಲ ಹೆಚ್ಚುವರಿ. ಹಿಂಗಾರು ಇಳುವರಿಯ ಖರೀದಿ ಕಾರ್ಯಾಚರಣೆಗಳು ಹತ್ತಿರದಲ್ಲಿವೆ.

ಮನೆಯಲ್ಲಿನ ಆಹಾರ ಕಣಜ ಕಂಠಮಟ್ಟ ಭರ್ತಿ, ಕುಟುಂಬದ ದುರ್ಬಲರು ಹಸಿವಿನಿಂದ ಸತ್ತರೂ ಕಣಜದಿಂದ ಆಹಾರ ಧಾನ್ಯ ಹೊರತೆಗೆಯುವುದಿಲ್ಲ ಎಂಬ ಧೋರಣೆ ಭಾರತ ಸರ್ಕಾರದ್ದು. ಕರೋನಾ ಮಹಾಮಾರಿಯ ತಾಂಡವದಲ್ಲಿ ಕಾಡತೊಡಗಿರುವ ಹಸಿವನ್ನು ಸರ್ಕಾರದ ಗೋದಾಮುಗಳಲ್ಲಿನ ಆಹಾರಧಾನ್ಯ ಹೊರತೆಗೆದರೆ ಅಡಗಿಸಬಹುದು. ಎಲ್ಲರೂ ಬಲ್ಲ ಸತ್ಯವಿದು. ಆದರೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಪರಿಸ್ಥಿತಿಯ ಘೋರ ಭೀಕರ ಸ್ವರೂಪ ಆಳುವವರಿಗೆ ಅರ್ಥವಾಗುತ್ತಿಲ್ಲ ಎನ್ನುತ್ತಾರೆ ಆರ್ಥಿಕ ತಜ್ಞ ಮತ್ತು ಸಮಾಜವಿಜ್ಞಾನಿ ಜೀನ್ ಡ್ರೆಜ್.

ದೇಶದ ಆಹಾರ ದಾಸ್ತಾನನ್ನು ಸಾಮಾಜಿಕ ಭದ್ರತಾ ಯೋಜನೆಗಳು ಮತ್ತು ಸಾರ್ವಜನಿಕ ಕಾಮಗಾರಿಗಳಿಗೆ ಬಳಸಿಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಪೀಪಲ್ಸ್ ಯೂನಿಯನ್ ಅಫ್ ಸಿವಿಲ್ ಲಿಬರ್ಟೀಸ್ (ಪಿ.ಯು.ಸಿ.ಎಲ್) ಇಪ್ಪತ್ತು ವರ್ಷಗಳ ಹಿಂದೆ ಸುಪ್ರೀಮ್ ಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತು. ಪರಿಣಾಮವಾಗಿ ಮಧ್ಯಾಹ್ನದ ಬಿಸಿಯೂಟ, ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿನ ಸುಧಾರಣೆಗಳು, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಜಾರಿಗೆ ಬಂದವು. ಈ ಯೋಜನೆಗಳಿಗಾಗಿ ಪ್ರತಿ ವರ್ಷ 50-60 ದಶಲಕ್ಷ ಟನ್ನುಗಳಷ್ಟು ಅಕ್ಕಿ ಗೋಧಿ ಹಂಚಿಕೆಯಾಗುತ್ತಿದೆ. ಆಹಾರ ದಾಸ್ತಾನಿನ ಪ್ರಮಾಣ ಕೂಡ ವರ್ಷದಿಂದ ವರ್ಷಕ್ಕೆ ಜಿಗಿಯುತ್ತಲೇ ಬಂದಿದೆ. ಈ ವರ್ಷದ ದಾಸ್ತಾನು 77 ದಶಲಕ್ಷ ಟನ್ನುಗಳು. ಹಿಂಗಾರಿನ ಫಸಲು ಸದ್ಯದಲ್ಲೇ ಕೈ ಸೇರಿದರೆ ಈ ದಾಸ್ತಾನು 97 ದಶಲಕ್ಷ ಟನ್ನುಗಳಿಗೆ ಏರಲಿದೆ. ಮುಂದಿನ ಮೂರು ತಿಂಗಳ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪಡಿತರವನ್ನು ದುಪ್ಪಟ್ಟು ಮಾಡಿರುವುದಾಗಿ ಕೇಂದ್ರ ಹಣಕಾಸು ಮಂತ್ರಿ ಇತ್ತೀಚೆಗೆ ಘೋಷಿಸಿದರು. ಅದು ದೊಡ್ಡ ಉಪಕಾರವೇನೂ ಅಲ್ಲ. ಹಿಂಗಾರು ಹಂಗಾಮಿನ ಖರೀದಿ ಹೊಸ್ತಿಲಲ್ಲಿ ನಿಂತಿತ್ತು. ಗೋದಾಮುಗಳಲ್ಲಿ ಸ್ಥಳಾವಕಾಶ ಇರಲಿಲ್ಲ.

ಕರೋನಾ ಕಾಲದ ಹಸಿವು ಭಾರತ ದೇಶದ ದೀನರ ನಡುವೆ ಹೊಂಚು ಹಾಕಿದೆ. ಕೇಂದ್ರ ಸರ್ಕಾರ ತನ್ನ ಗೋದಾಮುಗಳನ್ನು ತನ್ನದೇ ಬಡಜನರಿಗಾಗಿ ತೆರೆಯಬೇಕಿದೆ. ಆಹಾರ ಧಾನ್ಯಗಳನ್ನು ಅರ್ಹರಿಗೆ ಉಚಿತವಾಗಿ ಹಂಚಬೇಕಿದೆ. ಜನಧನ ಯೋಜನೆಯಡಿ ಹೆಣ್ಣುಮಕ್ಕಳ ಖಾತೆಗಳಿಗೆ ತಿಂಗಳಿಗೆ 500 ರುಪಾಯಿ ಹಾಕುವ ಕ್ರಮ ಯಾತಕ್ಕೂ ಸಾಲದು. ಬಡವರ ಪಾಲಿನ ಬ್ಯಾಂಕಿಂಗ್ ವ್ಯವಸ್ಥೆ ಈಗಲೂ ಅಸಮರ್ಪಕ.

ತಮ್ಮನ್ನು ಬಡವರ ಬಂಧು ಎಂದೇ ಘೋಷಿಸಿಕೊಂಡು ಅವರ ಮತಗಳನ್ನು ಕೊಳ್ಳೆ ಹೊಡೆದಿರುವ ಪ್ರಧಾನಮಂತ್ರಿ ನರೇಂದ್ರ ದಾಮೋದರದಾಸ ಮೋದಿಯವರು ದೊಡ್ಡ ಮನಸ್ಸು ಮಾಡಬೇಕು.


ಇದನ್ನೂ ಓದಿ: ಲಾಕ್‍ಡೌನ್ – ಮನೆಯಿಂದಲೇ ಕೆಲಸ, ಮನೆಕೆಲಸ ಮತ್ತು ಮಹಿಳೆ! – ಮಲ್ಲಿಗೆ ಸಿರಿಮನೆ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...