Homeಮುಖಪುಟಬಹುಜನ ಭಾರತ : ಹಸಿವಿನ ಸಾವುಗಳು ಮತ್ತು ತುಂಬಿ ತುಳುಕಿರುವ ಗೋದಾಮುಗಳು

ಬಹುಜನ ಭಾರತ : ಹಸಿವಿನ ಸಾವುಗಳು ಮತ್ತು ತುಂಬಿ ತುಳುಕಿರುವ ಗೋದಾಮುಗಳು

ಕಂಗೆಟ್ಟ ಬಡಭಾರತದತ್ತ ಕಣ್ಣು ಮುಚ್ಚಿದ್ದಾರೆ ಮೋದಿ. ಹೆಚ್ಚುವರಿ ದಾಸ್ತಾನಿನ ಉಚಿತ ಹಂಚಿಕೆ ಮಾಡುತ್ತಿಲ್ಲ ಯಾಕೆ?

- Advertisement -
- Advertisement -

ಕೊರೊನಾ ಲಾಕ್ ಡೌನ್ 200ಕ್ಕೂ ಹೆಚ್ಚು ಬಡಜೀವಗಳನ್ನು ಬಲಿ ತೆಗೆದುಕೊಂಡಿದೆ. ಇವು ವರದಿಯಾಗಿರುವ ಪ್ರಕರಣಗಳು. ಮನೆಯ ಕದಗಳಷ್ಟೇ ಅಲ್ಲದೆ ಮನದ ಕದಗಳನ್ನೂ ಮುಚ್ಚಿಕೊಂಡಿರುವ ಭಾರತ ದೇಶದಲ್ಲಿ ಕಂಗೆಟ್ಟವರೆಡೆಗೆ ಕಣ್ಣುಮುಚ್ಚಿರುವವರೇ ಹೆಚ್ಚು. ಹೀಗಾಗಿ ಒಳನಾಡುಗಳಲ್ಲಿ, ದೂರದ ಸೀಮೆಗಳಲ್ಲಿ ವರದಿಯಾಗದಿರುವ ಪ್ರಕರಣಗಳ ಸಂಖ್ಯೆ ಕಡಿಮೆಯೇನೂ ಇರಲಿಕ್ಕಿಲ್ಲ. ದನಿ ಕಳೆದುಕೊಂಡ ಭಾರತವೊಂದಿದೆ. ಅದರ ಆಕ್ರಂದನ ಕೇಳುವವರಿಲ್ಲ. ಅಲ್ಲಿ ಹಿಂದು- ಮುಸ್ಲಿಂ ಕೋಮುವಾದಿ ಕೋನವಿದ್ದರೆ ಮಾತ್ರ ಮೀಡಿಯಾದ ಕಣ್ಣು ಕಿವಿಗಳು ಅರಳುತ್ತವೆ. ಯಾರೂ ಕೇಳದವರನ್ನು ಸರ್ಕಾರ ಯಾಕೆ ಕೇಳೀತು?

ಏಪ್ರಿಲ್ 11ರಂದು ಲಭ್ಯವಿದ್ದ ಅಂಕಿ ಅಂಶಗಳ ಪ್ರಕಾರ ಹಸಿವು, ದಣಿವು, ಪೊಲೀಸ್ ದೌರ್ಜನ್ಯ, ಹೆದ್ದಾರಿಗಳಲ್ಲಿ ಕಾಲುನಡಿಗೆಯಲ್ಲಿ ಊರು ಸೇರುವ ತವಕದಲ್ಲಿ ವೇಗದ ವಾಹನಗಳ ಚಕ್ರಗಳಿಗೆ ಸಿಕ್ಕವರು, ಮದ್ಯ ಸಿಗದೆ ಒದ್ದಾಡಿದವರು, ಸೋಂಕಿತರೆಂಬ ಸಂಶಯಕ್ಕೆ ಗುರಿಯಾಗಿ ಗುಂಪುಗಳಿಂದ ಜಜ್ಜಿಸಿಕೊಂಡವರು, ವರಮಾನವಿಲ್ಲದೆ ಆತ್ಮಹತ್ಯೆಯಂತಹ ಕಾರಣಗಳಿಂದಾಗಿ ಲಾಕ್ ಡೌನ್ ಅವಧಿಯಲ್ಲಿ ಸತ್ತವರ ಸಂಖ್ಯೆ 185. ತಮ್ಮದಲ್ಲದ ತಪ್ಪಿಗೆ ಬದುಕನ್ನು ಮುಗಿಸಿದ ಈ ಬಡಪಾಯಿಗಳಿಗಾಗಿ ದೀಪ ಮುಡಿಸಿದವರು, ಜಾಗಟೆ ಹೊಡೆದವರು ಯಾರೂ ಇಲ್ಲ. ಜನರನ್ನು ಉಳಿಸಲೆಂದು ಕೈಗೊಂಡ ಕ್ರಮಗಳೇ ಅವರಿಗೆ ಉರುಳಾಗಿವೆ. ಇದಕ್ಕಿಂತ ವ್ಯಂಗ್ಯ ಮತ್ತೊಂದು ಇದ್ದೀತೇ?

ದೇಶ ಅಳುವವರು ಹೆಚ್ಚು ವಿವೇಕಿಗಳೂ, ಬಡವರ ಬವಣೆಗಳ ಕುರಿತು ಹೆಚ್ಚು ಸಂವೇದನಾಶೀಲರೂ ಆಗಿದ್ದಲ್ಲಿ ಮಾನವೀಯವಾದ ಯೋಜಿತ ಮತ್ತು ಸುಸಜ್ಜಿತ ಲಾಕ್ ಡೌನ್ ಮಾಡುತ್ತಿದ್ದರು. ಆಗ ಸಾವುಗಳ ಸಂಖ್ಯೆಯೂ ತಗ್ಗುತ್ತಿತ್ತು.

ಅಂತಹ ಅಮೆರಿಕೆಯಲ್ಲೇ ಒಂದೂವರೆ ಕೋಟಿ ಮಂದಿ ಸರ್ಕಾರದ ಮುಂದೆ ನಿರುದ್ಯೋಗ ಪರಿಹಾರಗಳಿಗೆಂದು ಕೈ ಚಾಚಿ ನಿಂತಿದ್ದಾರೆ. ಇನ್ನು ಸಾಮಾಜಿಕ-ಆರ್ಥಿಕ ರಕ್ಷಣೆ ಇಲ್ಲದ ಜನಸಮುದಾಯಗಳ ಪಾಲಿಗೆ ಲಾಕ್ ಡೌನ್ ಎಂಬುದು ಹಸಿವು ಮತ್ತು ಮರಣದ ನಿಶ್ಚಿತ ದಾರಿ. ಬಡದೇಶಗಳ ಸುಮಾರು 200 ಕೋಟಿ ಮಂದಿಯ ಮುಂದೆ ನಿರುದ್ಯೋಗದ ಕತ್ತಲು ಕವಿದಿದೆ. ಸರ್ಕಾರಗಳು ಅವರ ನೆರವಿಗೆ ಧಾವಿಸುವ ಅವಕಾಶಗಳು ಕ್ಷೀಣ.

ದೇಶದಲ್ಲಿ ಅಸಂಘಟಿತ ಕಾರ್ಮಿಕ ವಲಯ ಮತ್ತು ವಲಸೆ ಕಾರ್ಮಿಕರ ಸಂಖ್ಯೆಯನ್ನು 39 ಕೋಟಿ ಎಂದು ಅಂದಾಜು ಮಾಡಲಾಗಿದೆ. ಸಾಮಾಜಿಕ-ಆರ್ಥಿಕ ಭದ್ರತೆಯ ನೆರಳಿನಿಂದ ವಂಚಿತರು ಇವರು. ತಮ್ಮ ಹಳ್ಳಿಗಳು ಊರುಗಳನ್ನು ಸೇರಿಕೊಂಡ ನಂತರವೂ ಹಸಿವು ಇವರನ್ನು ಕಾಡುವುದಿಲ್ಲ ಎಂಬ ಖಾತರಿ ಇಲ್ಲ. ಶ್ರಮದ ಮಾರುಕಟ್ಟೆಯಲ್ಲಿ ಇವರ ಬೆವರು ಈಗಾಗಲೆ ಬೆಲೆ ಕಳೆದುಕೊಳ್ಳತೊಡಗಿದೆ. ರೆಟ್ಟೆ ಮುರಿದರೂ ಹೊಟ್ಟೆ ತುಂಬುವ ಸೂಚನೆಗಳು ಕಾಣುತ್ತಿಲ್ಲ. ಬದುಕುಗಳು ಬಲು ದುರ್ಭರವಾಗಲಿವೆ. ಶಾಲೆಗೆ ಹೋಗುತ್ತಿರುವ ಇವರ ಮಕ್ಕಳು ಸಂಸಾರದ ನೊಗಕ್ಕೆ ಹೂಡುವ ಕರುಗಳಾಗಲಿದ್ದಾರೆ. ಈ ಜನವರ್ಗಗಳ ದೈಹಿಕ, ಮಾನಸಿಕ ಹಾಗೂ ಲೈಂಗಿಕ ಹಿಂಸೆ ಮೇರೆ ಮೀರಲಿದೆ.

ವರ್ಷಾಂತ್ಯದ ಹೊತ್ತಿಗೆ ಕರೋನಾ ವೈರಸ್ ಮಹಾಮಾರಿಯು ಮಹಾಕ್ಷಾಮವೊಂದಕ್ಕೆ ದಾರಿ ಮಾಡಲಿದೆ ಎಂದು ವಿಶ್ವ ಆಹಾರ ತಜ್ಞರು ಭವಿಷ್ಯ ನುಡಿದಿದ್ದಾರೆ. 2020ರ ಅಂತ್ಯದ ವೇಳೆಗೆ ಹಸಿವಿನ ಅಂಚಿಗೆ ತಲುಪಲಿರುವ ವಿಶ್ವದ ಜನಸಂಖ್ಯೆ ಮೂವತ್ತು ಕೋಟಿಯನ್ನು ಸಮೀಪಿಸಲಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೇಳಿದೆ.

ತಿಂಗಳ ಹಿಂದೆ ಮಾರ್ಚ್ ಒಂದರ ಅಂಕಿ ಅಂಶದ ಪ್ರಕಾರ ದೇಶದ ಸರ್ಕಾರೀ ಗೋದಾಮುಗಳು 77 ದಶಲಕ್ಷ ಮೆಟ್ರಿಕ್ ಟನ್ ಗಳಷ್ಟು ಅಕ್ಕಿ ಮತ್ತು ಗೋಧಿಯ ಧಾರಾಳ ದಾಸ್ತಾನು ಹೊಂದಿದ್ದವು. ನಮಗೆ ಅಗತ್ಯವಿರುವ ಕಾಪು ದಾಸ್ತಾನಿನ ಪ್ರಮಾಣ 21.4 ದಶಲಕ್ಷ ಮೆಟ್ರಿಕ್ ಟನ್ನುಗಳು ಮಾತ್ರ. ಉಳಿದದ್ದೆಲ್ಲ ಹೆಚ್ಚುವರಿ. ಹಿಂಗಾರು ಇಳುವರಿಯ ಖರೀದಿ ಕಾರ್ಯಾಚರಣೆಗಳು ಹತ್ತಿರದಲ್ಲಿವೆ.

ಮನೆಯಲ್ಲಿನ ಆಹಾರ ಕಣಜ ಕಂಠಮಟ್ಟ ಭರ್ತಿ, ಕುಟುಂಬದ ದುರ್ಬಲರು ಹಸಿವಿನಿಂದ ಸತ್ತರೂ ಕಣಜದಿಂದ ಆಹಾರ ಧಾನ್ಯ ಹೊರತೆಗೆಯುವುದಿಲ್ಲ ಎಂಬ ಧೋರಣೆ ಭಾರತ ಸರ್ಕಾರದ್ದು. ಕರೋನಾ ಮಹಾಮಾರಿಯ ತಾಂಡವದಲ್ಲಿ ಕಾಡತೊಡಗಿರುವ ಹಸಿವನ್ನು ಸರ್ಕಾರದ ಗೋದಾಮುಗಳಲ್ಲಿನ ಆಹಾರಧಾನ್ಯ ಹೊರತೆಗೆದರೆ ಅಡಗಿಸಬಹುದು. ಎಲ್ಲರೂ ಬಲ್ಲ ಸತ್ಯವಿದು. ಆದರೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಪರಿಸ್ಥಿತಿಯ ಘೋರ ಭೀಕರ ಸ್ವರೂಪ ಆಳುವವರಿಗೆ ಅರ್ಥವಾಗುತ್ತಿಲ್ಲ ಎನ್ನುತ್ತಾರೆ ಆರ್ಥಿಕ ತಜ್ಞ ಮತ್ತು ಸಮಾಜವಿಜ್ಞಾನಿ ಜೀನ್ ಡ್ರೆಜ್.

ದೇಶದ ಆಹಾರ ದಾಸ್ತಾನನ್ನು ಸಾಮಾಜಿಕ ಭದ್ರತಾ ಯೋಜನೆಗಳು ಮತ್ತು ಸಾರ್ವಜನಿಕ ಕಾಮಗಾರಿಗಳಿಗೆ ಬಳಸಿಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಪೀಪಲ್ಸ್ ಯೂನಿಯನ್ ಅಫ್ ಸಿವಿಲ್ ಲಿಬರ್ಟೀಸ್ (ಪಿ.ಯು.ಸಿ.ಎಲ್) ಇಪ್ಪತ್ತು ವರ್ಷಗಳ ಹಿಂದೆ ಸುಪ್ರೀಮ್ ಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತು. ಪರಿಣಾಮವಾಗಿ ಮಧ್ಯಾಹ್ನದ ಬಿಸಿಯೂಟ, ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿನ ಸುಧಾರಣೆಗಳು, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಜಾರಿಗೆ ಬಂದವು. ಈ ಯೋಜನೆಗಳಿಗಾಗಿ ಪ್ರತಿ ವರ್ಷ 50-60 ದಶಲಕ್ಷ ಟನ್ನುಗಳಷ್ಟು ಅಕ್ಕಿ ಗೋಧಿ ಹಂಚಿಕೆಯಾಗುತ್ತಿದೆ. ಆಹಾರ ದಾಸ್ತಾನಿನ ಪ್ರಮಾಣ ಕೂಡ ವರ್ಷದಿಂದ ವರ್ಷಕ್ಕೆ ಜಿಗಿಯುತ್ತಲೇ ಬಂದಿದೆ. ಈ ವರ್ಷದ ದಾಸ್ತಾನು 77 ದಶಲಕ್ಷ ಟನ್ನುಗಳು. ಹಿಂಗಾರಿನ ಫಸಲು ಸದ್ಯದಲ್ಲೇ ಕೈ ಸೇರಿದರೆ ಈ ದಾಸ್ತಾನು 97 ದಶಲಕ್ಷ ಟನ್ನುಗಳಿಗೆ ಏರಲಿದೆ. ಮುಂದಿನ ಮೂರು ತಿಂಗಳ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪಡಿತರವನ್ನು ದುಪ್ಪಟ್ಟು ಮಾಡಿರುವುದಾಗಿ ಕೇಂದ್ರ ಹಣಕಾಸು ಮಂತ್ರಿ ಇತ್ತೀಚೆಗೆ ಘೋಷಿಸಿದರು. ಅದು ದೊಡ್ಡ ಉಪಕಾರವೇನೂ ಅಲ್ಲ. ಹಿಂಗಾರು ಹಂಗಾಮಿನ ಖರೀದಿ ಹೊಸ್ತಿಲಲ್ಲಿ ನಿಂತಿತ್ತು. ಗೋದಾಮುಗಳಲ್ಲಿ ಸ್ಥಳಾವಕಾಶ ಇರಲಿಲ್ಲ.

ಕರೋನಾ ಕಾಲದ ಹಸಿವು ಭಾರತ ದೇಶದ ದೀನರ ನಡುವೆ ಹೊಂಚು ಹಾಕಿದೆ. ಕೇಂದ್ರ ಸರ್ಕಾರ ತನ್ನ ಗೋದಾಮುಗಳನ್ನು ತನ್ನದೇ ಬಡಜನರಿಗಾಗಿ ತೆರೆಯಬೇಕಿದೆ. ಆಹಾರ ಧಾನ್ಯಗಳನ್ನು ಅರ್ಹರಿಗೆ ಉಚಿತವಾಗಿ ಹಂಚಬೇಕಿದೆ. ಜನಧನ ಯೋಜನೆಯಡಿ ಹೆಣ್ಣುಮಕ್ಕಳ ಖಾತೆಗಳಿಗೆ ತಿಂಗಳಿಗೆ 500 ರುಪಾಯಿ ಹಾಕುವ ಕ್ರಮ ಯಾತಕ್ಕೂ ಸಾಲದು. ಬಡವರ ಪಾಲಿನ ಬ್ಯಾಂಕಿಂಗ್ ವ್ಯವಸ್ಥೆ ಈಗಲೂ ಅಸಮರ್ಪಕ.

ತಮ್ಮನ್ನು ಬಡವರ ಬಂಧು ಎಂದೇ ಘೋಷಿಸಿಕೊಂಡು ಅವರ ಮತಗಳನ್ನು ಕೊಳ್ಳೆ ಹೊಡೆದಿರುವ ಪ್ರಧಾನಮಂತ್ರಿ ನರೇಂದ್ರ ದಾಮೋದರದಾಸ ಮೋದಿಯವರು ದೊಡ್ಡ ಮನಸ್ಸು ಮಾಡಬೇಕು.


ಇದನ್ನೂ ಓದಿ: ಲಾಕ್‍ಡೌನ್ – ಮನೆಯಿಂದಲೇ ಕೆಲಸ, ಮನೆಕೆಲಸ ಮತ್ತು ಮಹಿಳೆ! – ಮಲ್ಲಿಗೆ ಸಿರಿಮನೆ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...