Homeಅಂಕಣಗಳುಮೋದಿ ಆತ್ಮನಿರ್ಭರತೆ V/S ಸ್ವದೇಶಿ, ಸ್ವಾವಲಂಬನೆ, ಸ್ವಾಭಿಮಾನ

ಮೋದಿ ಆತ್ಮನಿರ್ಭರತೆ V/S ಸ್ವದೇಶಿ, ಸ್ವಾವಲಂಬನೆ, ಸ್ವಾಭಿಮಾನ

- Advertisement -
- Advertisement -

ಕೊರೋನ ಮಹಾಮಾರಿ ಹಿಡಿಯಾಗಿ ಪ್ರಪಂಚವನ್ನೇ ಕಾಡಲುಹತ್ತಿದ್ದರಿಂದ ಯಾವ ದೇಶದವರೂ ಭಾರತಕ್ಕೆ ಬಂಡವಾಳ ತೆಗೆದುಕೊಂಡು ಬಂದು ಉದ್ಯಮಗಳನ್ನು ಆರಂಭಿಸುವ ಸಾಧ್ಯತೆಗಳಿಲ್ಲ ಎಂಬುದನ್ನು ಮನಗಂಡು ಈಗ ಹೊಸ ರಾಗ ಹಾಡಲು ಮೋದಿಯವರು ತೊಡಗಿದ್ದಾರೆ. ಅವರ ಇಂದಿನ ಸ್ಲೋಗನ್‍ಗಳೆಂದರೆ ಆತ್ಮ ನಿರ್ಭರತೆ, ಸ್ವದೇಶಿ, ಸ್ವಾವಲಂಬನೆ, ಸ್ವಾಭಿಮಾನಗಳನ್ನು ಬೆಳಸಿಕೊಳ್ಳುವುದು. ಇದು ಸರಿಯಾದ ತೀರ್ಮಾನವೇ ಸರಿ. ಆದರೆ ಈ ತತ್ವಗಳಿಗೆ ಮೋದಿ ಸರ್ಕಾರ ಮುಂದೆ ಎಂದೆಂದೂ ಬದ್ಧವಾಗಿ ಇರುತ್ತದೆಯೇ ಎಂಬುದು ಮೂಲ ಭೂತ ಪ್ರಶ್ನೆ.

ಕೊರೋನ ವ್ಯಾದಿ ವಿಶ್ವದೆಲ್ಲಡೆ ಇಲ್ಲವಾಗಿ ಆರ್ಥಿಕ ಚೇತರಿಕೆಯೂ ಆದಮೇಲೂ ಆತ್ಮನಿರ್ಭರತೆ ಇವರ ಸ್ಲೋಗನ್ ಆಗಿರುತ್ತದೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಇದನ್ನು ಕಾಲವೇ ನಿರ್ಧರಿಸುತ್ತದೆ.

ಆತ್ಮನಿರ್ಭರತೆ ಇನ್ನು ಮುಂದೆ ಭಾರತ ಸರ್ಕಾರದ ನೀತಿ ಎಂದು ಮೋದಿಯವರು ಘೋಷಿಸಿದರೆ ಮಾತ್ರ ಇದು ಬರಿ ಸ್ಲೋಗನ್ ಅಲ್ಲ, ನಮ್ಮ ರಾಷ್ಟ್ರ ನೀತಿ ಎಂದು ನಾವು ನಂಬಬಹುದು. ಸ್ವದೇಶಿ, ಸ್ವಾವಲಂಬನೆ, ಸ್ವಾಭಿಮಾನ, ಇವು ಬರಿಯ ಸ್ಲೋಗನ್‍ಗಳಾಗಬಾರದು.

ಸ್ವದೇಶಿ ಒಂದು ವ್ರತವಾಗಬೇಕು. ಸರ್ಕಾರ ಈ ವ್ರತವನ್ನು ಕಾರ್ಯಗೊಳಿಸಬೇಕು. ಜಪಾನಿನಲ್ಲಿ ಬೃಹತ್ ಯಂತ್ರಗಳಿಂದ ವಿವಿಧ ವಸ್ತುಗಳನ್ನು ತಯಾರಿಸುತ್ತಾರೆ. ಆದರೆ ಅವೆಲ್ಲವೂ ರಫ್ತಿಗಾಗಿ. ಅವರ ನಿತ್ಯದ ಅಗತ್ಯತೆಯ ವಸ್ತುಗಳೆನ್ನೆಲ್ಲ ಅವರು ಗೃಹೋದ್ಯೋಗದ ಮೂಲಕ ಪಡೆಯುತ್ತಾರೆ. ಗೃಹೋದ್ಯೋಗದಿಂದ ತಯಾರಾದ ಪದಾರ್ಥಗಳನ್ನು ಇವು ನಮ್ಮ ಹೆಮ್ಮೆಯ ಪದಾರ್ಥಗಳೆಂದು ಭಾವಿಸಿ ಬಳಸುತ್ತಾರೆ. ಇದೇ ಆತ್ಮನಿರ್ಭರತೆ. ಇದಕ್ಕೆ ಮೋದಿಯವರ ಸಹಮತ ಇದೆಯೇ? ನಮ್ಮದು ಪ್ರಜಾ ಸಂಖ್ಯೆ ಅಧಿಕವಾಗಿರುವ ದೇಶ. ಇಲ್ಲಿ ಜನರ ಕೈಗೆ ಕೆಲಸ ಕೊಡಬೇಕು. ಅದಕ್ಕೆ ಅನುಗಣವಾದ ಅಪ್ರೋಪ್ರಿಯೇಟ್ ಟೆಕ್ನಾಲಾಜಿಯನ್ನೇ ನಾವು ಅಳವಡಿಸಿಕೊಳ್ಳಬೇಕು. ಬೃಹತ್ ಯಂತ್ರಗಳು, ದೈತ್ಯ ಯಂತ್ರಗಳು, ಸ್ವಯಂ ಚಾಲಿತ ಯಂತ್ರಗಳು ನಮ್ಮ ಜನರು ಉದ್ಯೋಗವನ್ನು ಕಸಿದುಕೊಳ್ಳುತ್ತವೆ. ಬಡಜನರ ಹೊಟ್ಟೆಯ ಮೇಲೆ ಹೊಡೆಯುತ್ತವೆ.

ಆದ್ದರಿಂದ ನಮ್ಮ ಜನರ ಉದ್ಯೋಗಗಳನ್ನು ಕಸಿಯದ ಯಂತ್ರೋದ್ಯಮಕ್ಕೆ ನಮ್ಮ ಆದ್ಯತೆ ಎಂದು ಸರ್ಕಾರ ಘೋಷಿಸುತ್ತದೆಯೆ?

ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಎಂಬ ಸ್ಲೋಗನ್‍ಗಳನ್ನು ಮೋದಿಯವರು ಉಚ್ಛರಿಸಿದರು. ಮೇಡ್ ಇನ್ ಇಂಡಿಯಾ ಸ್ಲೋಗನ್ ಅನ್ನು ಇಂದಿರಾ ಗಾಂಧಿ ಹಿಂದೆಯೆ ಘೋಷಣೆ ಮಾಡಿದ್ದರು. ಈ ಎರಡು ಘೋಷಣೆಗಳು ದೋಷಪೂರಿತವಾದದ್ದು. ಭಾರತದಲ್ಲಿ ತಯಾರಾದ ಮಾತ್ರಕ್ಕೆ ಆ ಪದಾರ್ಥಗಳು ಸ್ವದೇಶಿ ಅಲ್ಲ. ಬಂಡವಾಳಗಾರರು ಹೆಚ್ಚಿನ ಲಾಭಗಳಿಕೆಗಾಗಿಯೇ ಉದ್ಯಮ ನಡೆಸುವುದು. ಬಂಡವಾಳಶಾಹಿಗಳು ಭಾರತಿಯರಿರಬಹುದು, ಬಹುರಾಷ್ಟ್ರೀಯರಿರಬಹುದು. ಅವರಿಬ್ಬರಿದೂ ಉದ್ದೇಶ ಒಂದೆ. ಅದೆಂದರೆ ತಮ್ಮ ಶಕ್ತಿ ಮೀರಿ ಲಾಭ ಗಳಿಸುವುದು. ಇದರಲ್ಲಿ ಒಂದು ನಾಡ ಕತ್ತಿ, ಮತ್ತೊಂದು ಸೀಮೆಯ ಕತ್ತಿ. ಒಟ್ಟಿನಲ್ಲಿ ಅವರೆಡು ಕ್ಷೌರದ ಕತ್ತಿಗಳೆ. ಅವೆರಡು ಬಯಸುವುದು ಹೆಚ್ಚಿಗೆ ಲಾಭ, ಅಗ್ಗದ ಶ್ರಮಶಕ್ತಿ, ಸಂಪನ್ಮೂಲಗಳ ಲೂಟಿ.

ಆದ್ದರಿಂದ ಈ ಲೂಟಿಕೋರರು ಭಾರತದ ಉದ್ಯಮಪತಿಗಳೆ ಆಗಿದ್ದರೂ, ಬೇರೆ ರಾಷ್ಟ್ರಗಳ ಶ್ರೀಮಂತರೇ ಆಗಿದ್ದರೂ ಅವರನ್ನು ದೂರ ಇಡಬೇಕು. ಬದಲಿಗೆ ಸರ್ಕಾರ, ಸ್ಥಳೀಯ ಸಂಸ್ಥೆಗಳು ಮತ್ತು ಸಹಕಾರಿ ಸಂಸ್ಥೆಗಳ ಮೂಲಕ ಸಣ್ಣ ಕೈಗಾರಿಕೆಗಳಲ್ಲಿನ ಉತ್ಪಾದನೆ ಮಾತ್ರವೇ ಸ್ವದೇಶಿ ಅನಿಸಿಕೊಳ್ಳುತ್ತದೆ.

ನಮ್ಮಲ್ಲಿ ತಯಾರಾಗದ ಪದಾರ್ಥಗಳನ್ನು ತಯಾರು ಮಾಡಲು ಪರದೇಶದ ಕಂಪನಿಗಳನ್ನು ಭಾರತಕ್ಕೆ ಕರೆತರಬಹುದು. ಆದರೆ ಒಂದು ಕರಾರಿನ ಮೇಲೆ ಮಾತ್ರ. ಅದೆಂದರೆ ಹಾಗೇ ಬರುವವರು ಹತ್ತು ವರ್ಷಗಳ ಕಾಲ ಮಾತ್ರ ಭಾರತದಲ್ಲಿ ತಮ್ಮ ಉದ್ಯಮವನ್ನು ನಡೆಸಬಹುದು ಮತ್ತು ನಮ್ಮ ಜನರಿಗೆ ಆ ಪದಾರ್ಥಗಳ ತಯಾರಿಕೆಯ ತಂತ್ರಜ್ಞಾನವನ್ನು ಕಲಿಸಿಕೊಟ್ಟು ಹೋಗಬೇಕು.

ವಲಸಿಗ ಕಾರ್ಮಿಕರು ಈಗ ಬಹುಸಂಖ್ಯೆಯಲ್ಲಿ ನಗರಗಳನ್ನು, ಪಟ್ಟಣದಗಳನ್ನು ಬಿಟ್ಟು ಗ್ರಾಮಗಳಿಗೆ ಹೋಗಿದ್ದಾರೆ. ಅವರು ತಮ್ಮ ಗ್ರಾಮಗಳಲ್ಲಿ ಜೀವನ ನಡೆಸುವುದಾದರೂ ಹೇಗೆ? ಭೂಮಿತಿ ಶಾಸನವನ್ನು ಪುನಃ ಪರಿಶೀಲಿಸಿ ಸೀಲಿಂಗ್ ಲಿಮಿಟ್ ಅನ್ನು ಇಳಿಸಿ ಯಾರು ವ್ಯವಸಾಯದಲ್ಲಿ ತೊಡಗಿಕೊಳ್ಳಲು ಆಶಿಸುವರೋ ಅವರಿಗೆ ತಲಾ ನಾಲ್ಕುವರೆ ಎಕರೆ ಕುಷ್ಕಿ ಜಮೀನನ್ನು ಮಂಜೂರು ಮಾಡಬೇಕು. ಹೀಗೆ ಸರ್ಕಾರ ಕೊಟ್ಟ ಭೂಮಿಯನ್ನು ಮಾರಾಟ-ಭೋಗ್ಯ ಯಾವುದನ್ನು ಮಾಡುವ ಆಗಿಲ್ಲ ಎಂದು ಕಾನೂನು ಮಾಡಬೇಕು. ಉಳಿದ ವಲಸಿಗರಿಗೆ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿ ಕೆಲಸ ಕೊಡಬೇಕು. ನಾಲ್ಕು ಹಳ್ಳಿಗಳಿಗೆ ಸೇರಿದಂತೆ ಒಂದು ಸಣ್ಣ ಕೈಗಾರಿಕೆ ಸ್ಥಾಪಿತವಾಗುವದಾದರೆ ಅವರಿಗೆಲ್ಲ ಕೆಲಸ ಕೊಡಬಹುದು.

ಗ್ರಾಮಗಳಲ್ಲಿ ಇರುವ ಬಡಗಿ, ಕಮ್ಮಾರ, ನೇಕಾರ, ಚಮ್ಮಾರ, ಇವರಿಗೆಲ್ಲ ಶಿಕ್ಷಣ ಕೊಟ್ಟು ತಮ್ಮ ವೃತ್ತಿ ಕೌಶಲವನ್ನು ಬೆಳೆಸಿಕೊಳ್ಳಲು ಮಾರ್ಗದರ್ಶನ ಮಾಡಬೇಕು. ನಲ್ಲಿ, ಮೋಟಾರ್ ಸೈಕಲ್, ರೇಡಿಯೋ, ಟಿ.ವಿ. ಕೊಳವೇ ಬಾವಿ, ಗಡಿಯಾರ, ಮುಂತಾದವುಗಳ ರಿಪೇರಿ ಕೆಲಸ ಕಲಿಸಿ ಅವರಿಗೆ ಒಬ್ಬೊಬ್ಬರಿಗೂ ಒಂದು ಕಿಟ್ ಕೊಟ್ಟರೇ ಅವರು ಜೀವನ ನಿರ್ವಹಣೆಗೆ ಈ ಕಸುಬುಗಳನ್ನು ಅವಲಂಬಿಸಿಯಾರು. ತರಕಾರಿ, ಹಣ್ಣು ಇವುಗಳ ಸಂಸ್ಕರಣ ಘಟಕಗಳನ್ನು ಸ್ಥಾಪಿಸಿ ಜನರಿಗೆ ಕೆಲಸ ಕೊಡಬಹುದು. ಈ ಮೂಲಕ ಗ್ರಾಮೀಣ ಜನರ ಬಡತನವನ್ನು ದೂರಮಾಡಬಹುದು. ಇದನ್ನೆಲ್ಲ ಮೋದಿ ಸರ್ಕಾರ ಮಾಡೀತೇ ಎಂದು ಕುತೂಹಲದಿಂದ ಕಾದುಕೂತು ನೋಡಬಯಸುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...