Homeಮುಖಪುಟಸುಪ್ರೀಮ್ ಕೋರ್ಟಿನ ನೇರ ಆದೇಶವನ್ನು ಜಾರಿಗೊಳಿಸುವಲ್ಲಿ ಭಾರತ ಸೋತಿದೆ.

ಸುಪ್ರೀಮ್ ಕೋರ್ಟಿನ ನೇರ ಆದೇಶವನ್ನು ಜಾರಿಗೊಳಿಸುವಲ್ಲಿ ಭಾರತ ಸೋತಿದೆ.

- Advertisement -
- Advertisement -

ಬನ್ನಿ ನಮ್ಮೆದುರಿಗಿರುವ ವಾಸ್ತವವನ್ನು ಎದುರಿಸುವ. ಶಬರಿಮಲದಲ್ಲಿ ನಮ್ಮ ಸಂವಿಧಾನಾತ್ಮಕ ಆದೇಶ ಸೋತಿದೆ. ಸುಪ್ರೀಮ್ ಕೋರ್ಟಿನ ನೇರ ಆದೇಶವನ್ನು ಜಾರಿಗೊಳಿಸುವಲ್ಲಿ ಭಾರತ ಸೋತಿದೆ.
ಸುಲಭವಾದ, ನಮಗೆ ಅನುಕೂಲಕರವಾದ ಉತ್ತರಗಳನ್ನು ಹುಡುಕುವುದನ್ನು ಬಿಟ್ಟುಬಿಡುವ. ಹೌದು, ಬಿಜೆಪಿಯ ಬೆಂಬಲದೊಂದಿಗೆ, ಈ ಜನಪ್ರಿಯ ಪ್ರತಿಭಟನೆಯನ್ನು ಹಿಂದುತ್ವದ ಕಟ್ಟಾ ಬೆಂಬಲಿಗರಿಂದ ಆಯೋಜಿಸಲಾಗಿತ್ತು. ಹೌದು, ಕಾಂಗ್ರೆಸ್ ಮೃದು ಹಿಂದುತ್ವದ ನೀತಿಯನ್ನನುಸರಿಸಿತು, ಮೊದಲ ಬಾರಿಗೇನೂ ಅಲ್ಲ. ಹೌದು, ಆಡಳಿತ ಪಕ್ಷ ಸಿಪಿಐ(ಎಮ್) ಜನಪ್ರಿಯ ಭಾವನೆಗಳ ಎದುರಿಗೆ ಓಲಾಡುವಂತಾಯಿತು. ಆದರೆ, ಇವರ ಬಾಗಿಲಿಗೇ ಎಲ್ಲಾ ಅಸಮಾಧಾನವನ್ನು ತೂರುವುದು ನಿರರ್ಥಕ. ದಯವಿಟ್ಟು ಜನರ ಮನಃಸ್ಥಿತಿ ಮತ್ತು ಅವರ ವೋಟುಗಳನ್ನು ಹಿಂಬಾಲಿಸಿ. ನಿಜವಾದ ಪ್ರಶ್ನೆಯೇನೆಂದರೆ: ಜನರ ಮನಃಸ್ಥಿತಿ ಸಂವಿಧಾನಾತ್ಮಕ ಆದೇಶಕ್ಕೆ ತದ್ವಿರುದ್ಧವೇಕಿತ್ತು?
ತಮಾಷೆ ಮಾಡೋದನ್ನು ಬಿಟ್ಟುಬಿಡುವ: ನ್ಯಾಯಾಲಯದ ಒಂದು ‘ಶ್ರದ್ಧೆ ವಿರೋಧಿ’ ಆದೇಶವನ್ನು ಕೇರಳದಲ್ಲಿ, ಅದೂ ಜಗತ್ತಿನಲ್ಲಿ ಉಳಿದುಕೊಂಡಿರುವ ಕೆಲವೇ ಕಲವು ಸ್ಟಾö್ಯಲಿನಿಸ್ಟ್ ಪಕ್ಷದ ಆಡಳಿತದಲ್ಲಿಯೇ ಇಂತಹ ಆದೇಶವನ್ನು ಜಾರಿಗೊಳಿಸಲು ಆಗಲಿಲ್ಲ ಎಂದಲ್ಲಿ ಬೇರೆಡೆಯಂತೂ ಸಾಧ್ಯವೇ ಇಲ್ಲ. ನಿಜ, ಇಂಥದ್ದೆÃ ಆದೇಶವನ್ನು ಹಾಜಿ ಅಲಿ ದರ್ಗಾ ಪ್ರಕರಣದಲ್ಲಿ ಸಮುದಾಯದ ಭಾವನೆಗಳ ವಿರುದ್ಧವಾಗಿದ್ದರೂ ಜಾರಿಗೊಳಿಸಲಾಗಿತ್ತು. ಆದರೆ ಒಂದು ‘ಜಾತ್ಯತೀತ’ ಆಡಳಿತವಿದ್ದಾಗ ಹಾಗೆ ಆಗಲು ಸಾಧ್ಯವಿತ್ತೆ? ಶಾ ಬಾನೊ ಪ್ರಕರಣವನ್ನು ನಾವು ಮರತಿದ್ದೆÃವೆಯೇ? ಸಿಖ್ ಮತಶ್ರದ್ಧೆಯ ಹೆಸರಿನಲ್ಲಿ ಎಸ್‌ಜಿಪಿಸಿ ತನ್ನ ನ್ಯಾಯಬಾಹಿರ ಕ್ರಮಗಳನ್ನು ಮುಂದುವರೆಸಿರಲಿಲ್ಲವೇ?
ಇದನ್ನು ನೈತಿಕತೆಯ ಪ್ರಶ್ನೆಯಾಗಿಸಿ ನಮ್ಮ ಶಕ್ತಿಗಳನ್ನು ವ್ಯಯಿಸುವುದು ಬೇಡ. ಹೌದು ಈ ವೈಫಲ್ಯಗಳನ್ನು ಖಂಡಿತವಾಗಿಯೂ ಖಂಡಿಸುವ. ಸರ್ವೋಚ್ಛ ನ್ಯಾಯಾಲಯದ ಆದೇಶಗಳನ್ನೆÃ ಉಲ್ಲಂಘಿಸುವಂತಾದರೆ ಒಂದು ಸಂವಿಧಾನಾತ್ಮಕ ಪ್ರಜಾಪ್ರಭುತ್ವವನ್ನು ನಡೆಸುವ ಹಕ್ಕನ್ನೆÃ ಕಳೆದುಕೊಂಡಂತೆ. ಆದರೆ, ಗೋಳಾಟ, ಅಸಮಾಧಾನ ಮತ್ತು ಕಟು ವಿರೋಧ ಇವ್ಯಾವುಗಳೂ ಆತ್ಮಾವಲೋಕನ ಮತ್ತು ಚಿಂತನೆಗೆ ಪರ್ಯಾಯಗಳಲ್ಲ. ಖಂಡನೆಗಿಂತ ಈ ಸನ್ನಿವೇಶ ಆಳವಾದ ಚಿಂತನೆಗೆ ಕರೆನೀಡುತ್ತದೆ. ಸಂವಿಧಾನಾತ್ಮಕ ನೈತಿಕತೆ ಮತ್ತು ಜನಾಭಿಪ್ರಾಯದ ನಡುವಿನ ಒಂದು ಸಂಘರ್ಷವನ್ನು ನಾವು ಹೇಗೆ ಸಮಾಲೋಚಿಸುತ್ತೆÃವೆ?
ಶೇಖರ್ ಗುಪ್ತ ಮಾಡಿದಂತೆ, ನ್ಯಾಯಾಲಯಕ್ಕೆ ಹೊಣೆ ಹೊರೆಸಿ ಈ ಕಠಿಣ ಪ್ರಶ್ನೆಯನ್ನು ಪಕ್ಕಕ್ಕೆ ಸರಿಸುವುದು ಬೇಡ. ಹೌದು ನ್ಯಾಯಾಂಗದ ಓವರ್‌ರೀಚ್ ನಮ್ಮ ವ್ಯವಸ್ಥೆಯ ಒಂದು ಸಮಸ್ಯೆ, ಆದರೆ ಈ ಪ್ರಕರಣದಲ್ಲಿ ಹಾಗನ್ನಲು ಆಗುವುದಿಲ್ಲ. ಪೂಜೆ ಆಗುವ ಒಂದು ಸಾರ್ವಜನಿಕ ಸ್ಥಳದಲ್ಲಿ ಸಮಾನವಾದ ಅವಕಾಶವನ್ನು ಕೋರಿ ಒಬ್ಬ ವ್ಯಕ್ತಿ ನ್ಯಾಯಾಲಯಕ್ಕೆ ತಲುಪಿದರೆ, ನ್ಯಾಯಾಧೀಶರು ಅಸಹಾಯಕತೆಯನ್ನು ತೋಡಿಕೊಳ್ಳಲಾಗುವುದಿಲ್ಲ, ಅದೂ ನಮ್ಮ ಸಂವಿಧಾನದಲ್ಲಿ ದೇವಸ್ಥಾನದ ಪ್ರವೇಶದ ಬಗ್ಗೆ ಸ್ಪಷ್ಟವಾಗಿ ನಮೂದಿಸಿರುವಾಗ. ಭಾರತೀಯ ಜಾತ್ಯತೀತತೆ ಫ್ರಾನ್ಸಿನ ಕಟ್ಟುನಿಟ್ಟಾದ ತಟಸ್ಥ ಧೋರಣೆಯನ್ನು ಅನುಸರಿಸುವುದಿಲ್ಲ. ಧಾರ್ಮಿಕ ವಿಷಯಗಳಲ್ಲಿ ತತ್ವಾಧಾರಿತ ಮಧ್ಯಪ್ರವೇಶಕ್ಕೆ ಅವಕಾಶ ಮಾಡಿಕೊಡುವ ಮತ್ತು ಅಪೇಕ್ಷಿಸುವ ‘ತತ್ವಾಧಾರಿತ ಅಂತರ’ಕ್ಕೆ ನಮ್ಮ ಸಂವಿಧಾನ ಅನುವು ಮಾಡಿಕೊಡುತ್ತದೆ ಎಂದು ರಾಜೀವ್ ಭಾರ್ಗವ್ ಹೇಳಿದ್ದು ಸರಿಯಾಗಿದೆ.
ಈಗ ನೇರವಾಗಿ ವಿಷಯಕ್ಕೆ ಬರುವ. ದುಃಖಕರ ಮತ್ತು ಅಪ್ರಿಯವಾದ ವಾಸ್ತವವೇನೆಂದರೆ, ಈ ಲಿಬರಲ್ ಆದ ಸಂವಿಧಾನಾತ್ಮಕ ಆದೇಶ ಜನಾಭಿಪ್ರಾಯದೊಂದಿಗೆ ಮೇಳೆ ಆಗಿರಲಿಲ್ಲ, ಆಗಿಲ್ಲ. ಸುಪ್ರಿÃಮ್ ಕೋರ್ಟಿನ ನ್ಯಾಯಾಧೀಶರ ಮತ್ತು ಭಾರತದ ಲಿಬರಲ್ ಚಿಂತಕರ ನೈತಿಕ ಸಂವೇದನಗಳಿಗೂ ಹಾಗೂ ಒಬ್ಬ ಅಂiÀÄ್ಯಪ್ಪ ಸ್ವಾಮಿಯ ಸಾಮಾನ್ಯ ಭಕ್ತನ ನೈತಿಕ ಸಂವೇದನೆಗಳೊಂದಿಗೆ ಸಂಬಂಧವಿಲ್ಲದಿರುವುದು ಸ್ಪಷ್ಟ. ಸಾಮಾನ್ಯ ಭಾರತೀಯರಿಗೆ ನಮ್ಮ ಸಂವಿಧಾನಕ್ಕೆ ಅತಿ ಹಚ್ಚಿನ ಆದರೆ ಅಮೂರ್ತವಾದ ಮನ್ನಣೆಯಿದೆ. ಆದರೆ ಸಂವಿಧಾನಾತ್ಮಕ ತತ್ವಗಳನ್ನು ನಿರ್ದಿಷ್ಟವಾಗಿ ಸ್ಪಷ್ಟಪಡಿಸಿದ ಸಂದರ್ಭಗಳಲ್ಲಿ ಅನೇಕ ಸಲ ಜನರು ಅದರ ವಿರುದ್ಧ ಹೋಗುವ ಸಾಧ್ಯತೆಗಳಿವೆ.
ಈ ಕಟುಸತ್ಯದಿಂದ ಪಲಾಯನ ಮಾಡುವುದು ಬೇಡ. ಇದನ್ನು ನಾನು 1992ರಲ್ಲಿ ಬಾಬರಿ ಮಸೀದಿಯ ಧ್ವಂಸವಾದ ಸಮಯದಲ್ಲಿ ಅರಿತೆ. ಆಗ ನಾನು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುತ್ತಿದ್ದೆ, ಚಂಡೀಗಡದ ಒಂದು ದುಡಿಯುವ ಜನರ ವಸತಿಪ್ರದೇಶದಲ್ಲಿ ನಾನು ವಾಸಿಸುತ್ತಿದ್ದೆ. ಅಂiÉÆÃಧ್ಯೆಯ ಪ್ರಕರಣದಲ್ಲಿ ಸುಪ್ರಿÃಮ್ ಕೋರ್ಟಿನ ಆದೇಶವನ್ನು ಉಲ್ಲಂಘಿಸಿದರ ಬಗ್ಗೆ ನಾನು ನನ್ನ ನೈತಿಕ ಅಸಮಾಧಾನವನ್ನು ವ್ಯಕ್ತಪಡಿಸಿದಾಗ, ನನ್ನ ನೆರೆಯವರೊಬ್ಬರು ಕೇಳಿದ್ದು ‘ಪ್ರೊಫೆಸರ್ ಸಾಬ್, ರಾಮನ ಮಂದಿರ ಅಂiÉÆÃಧ್ಯೆಯಲ್ಲೆÃ ಕಟ್ಟಬೇಕಲ್ವಾ, ಮತ್ತೆÃನು ಇಂಗ್ಲೆಂಡಿನಲ್ಲಿ ಕಟ್ಟಬೇಕೇ?” ಆಗ ನಾನು ನನ್ನ ಪಾಠ ಕಲಿತೆ. ಆದರೆ ಭಾರತದ ಲಿಬರಲ್, ಪ್ರಗತಿಪರರು ಇನ್ನೂ ಆ ಪಾಠ ಕಲಿತಂತಿಲ್ಲ.
ಕನ್ನಡಿಯಲ್ಲಿ ನಮ್ಮನ್ನು ನಾವು ನೋಡಿಕೊಳ್ಳುವ ಧೈರ್ಯವನ್ನು ಬೆಳೆಸಿಕೊಳ್ಳುವ: ಇಂಗ್ಲಿÃಷ್ ಮಾತನಾಡುವ ನೆಲದೊಂದಿಗಿನ ಬೇರನ್ನು ಕಳಚಿಕೊಂಡಿರುವ ಭಾರತದ ಎಲೀಟ್ ಜನರ ಬಗ್ಗೆ ಇರುವ ಸ್ಟಿರಿಯೋಟೈಪ್‌ನಲ್ಲಿ ಸತ್ಯಾಂಶವಿದೆ. ಭಾರತದ ಲಿಬರಲ್ ಜನಗಳು ಒಂದು ಪರಕೀಯ ಭಾಷೆಯಲ್ಲಿ ಮಾತನಾಡುತ್ತಾರೆ. ಮುಂಚೂಣಿಯಲ್ಲಿರುವ ಯಾವುದೇ ಭಾರತೀಯ ಚಿಂತಕನಿಗೆ ಕೇಳಿ : ಇಂಗ್ಲಿÃಷಿನಲ್ಲಿರಿದ, ಯಾವುದೇ ಒಂದು ಭಾರತೀಯ ಭಾಷೆಯಲ್ಲಿಯ ಪುಸ್ತಕವನ್ನು ಕೊನೆಯ ಸಲ ಓದಿದ್ದು ಯಾವಾಗ ಅಥವಾ ಇಂಗ್ಲಿÃಷ್ ಬಿಟ್ಟು ಯಾವುದೇ ಒಂದು ಭಾರತೀಯ ಭಾಷೆಯಲ್ಲಿ ಏ4 ಸೈಜಿನ ಒಂದು ಪುಟದ ಎರಡೂ ಬದಿಗಳಲ್ಲಿ ಕೊನೆಯ ಸಲ ಬರೆದಿದ್ದು ಯಾವಾಗ? ಭಾರತದ ಧಾರ್ಮಿಕ ಪರಂಪರೆಗಳ ವಿಷಯ ಬಂದಾಗ ಇವರುಗಳು ಕೆಲವು ಸಲ ತಾತ್ಸಾರ ಹೊಂದಿದವರಾಗಿದ್ದರೆ ಅನೇಕ ಸಲ ಅನಕ್ಷರಸ್ಥರಾಗಿರುತ್ತಾರೆ. ಉಪನಿಷತ್ತುಗಳು ಮತ್ತು ಪುರಾಣಗಳ ನಡುವೆ ಇರುವ ವ್ಯತ್ಯಾಸಗಳ ಬಗ್ಗೆ ಎಷ್ಟು ಜನ ವಿದ್ಯಾವಂತ ಭಾರತೀಯರು ಹೇಳಬಲ್ಲರು? ಅಥವಾ ಶರಿಯತ್ ಮತ್ತು ಹದೀಸ ನಡುವೆ ಇರುವ ವ್ಯತ್ಯಾಸಗಳ ಬಗ್ಗೆ. ಹಾಗಾಗಿ ಇವರಿಂದ ಭಾರತೀಯರು ನೈತಿಕ ಪಾಠಗಳನ್ನು ತೆಗೆದುಕೊಳ್ಳಲು ನಿರಾಕರಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಇವರುಗಳು ವಿಮರ್ಶೆ ಮತ್ತು ಸುಧಾರಣೆಯನ್ನು ಸಂಪೂರ್ಣವಾಗಿ ನಿರಾಕರಿಸದಿದ್ದರೂ ಅದು ಒಂದು ತೀರ ಭಿನ್ನವಾದ ಮತ್ತು ಪ್ರತಿಕೂಲವಾದ ನುಡಿಗಟ್ಟಿನಲ್ಲಿ ಬಂದಾಗ ಅದನ್ನು ಒಪ್ಪಿಕೊಳ್ಳುವುದಿಲ್ಲ. ಲ್ಯಾಟಿನ್ ಅಮೇರಿಕದಲ್ಲಿ ಕ್ರಾಂತಿಯನ್ನು ಪ್ರತಿಪಾದಿಸಲು ಬೈಬಲ್ ಉದಾಹರಿಸಿ ಅಲ್ಲಿನ ವಿಮೋಚನೆಯ ಧರ್ಮಶಾಸ್ತçವನ್ನು ಬಳಸಲಾಗುತ್ತದೆ. ಆದರೆ, ಹೊಸ ನೈತಿಕ (ಎಥಿಕಲ್) ಚೌಕಟ್ಟುಗಳನ್ನು ಎಳೆಯಲು ಮರ್ಯಾದಾ ಪುರುಷೋತ್ತಮನನ್ನು ಅರ್ಥೈಸಿಕೊಳ್ಳುವ ಹಾಗೂ ಉದಾಹರಿಸುವ ಲಿಬರಲ್ ಚಿಂತಕರು ನಮ್ಮಲ್ಲೆÃಕಿಲ್ಲ?
ಹೆಚ್ಚಿನ ಸೂಕ್ಷö್ಮತೆಗೆ ಹೋಗುವ ಅಗತ್ಯವಿಲ್ಲ. ಭಾರತದಲ್ಲಿ ಲಿಬರಲಿಸಂಗಾಗಿ ಯಾವುದೇ ರಾಜಕೀಯ ಕ್ಷೆÃತ್ರವಿಲ್ಲ; ಮೆಟ್ರೊÃಪಾಲಿಟನ್ ಎಂದು ಕರೆದುಕೊಳ್ಳುವ ಭಾರತದ ದ್ವಿÃಪದ ಹೃದಯದಲ್ಲೂ ಇಲ್ಲ. ಲಿಬರಲ್ ಮತ್ತು ಸಂವಿಧಾನಾತ್ಮಕ ಆದೇಶವನ್ನು ಉಳಿಸಿಕೊಳ್ಳಲು ನ್ಯಾಯಾಲಯದ ಮೇಲೆಯೇ ಅವಲಂಬಿಸುವುದು ಸರಿಯಲ್ಲ. ಕಟು ವಾಸ್ತವವೇನೆಂದರೆ, ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯಗಳು ಜನಾಭಿಪ್ರಾಯವನ್ನು ಲೆಕ್ಕಿಸದೇ ತಮ್ಮ ತೀರ್ಪನ್ನು ಕೆಲವು ಸಲ ನೀಡಬಹುದು. ಆದರೆ ತುಲನಾತ್ಮಕವಾಗಿ ನೋಡಿದಾಗ, ಜನಪ್ರಿಯ ಭಾವನೆಗಳ ಹರವಿನೊಂದಿಗೇ ನ್ಯಾಯಾಲಯಗಳು ಹೋಗುವ ಸಾಧ್ಯತೆಗಳೇ ಹೆಚ್ಚು. ಸದ್ಯದ ಇದೇ ಪ್ರವೃತ್ತಿ ಮುಂದುವರೆದಲ್ಲಿ, ನಮ್ಮ ಗಣರಾಜ್ಯವನ್ನು ಇದೇ ಗಣರಾಜ್ಯದಿಂದಲೇ ವಿಫಲವಾಗಿಸಬಹುದಾದ ನಿಜವಾದ ಆತಂಕ ನಮ್ಮೆದುರಿಗಿದೆ.
ನಮ್ಮೆದುರಿಗಿರುವ ಆಯ್ಕೆಗಳನ್ನು ಅರ್ಥ ಮಾಡಿಕೊಳ್ಳುವ. ಒಂದು, ಜನಾಭಿಪ್ರಾಯದ ಹರವಿನೊಂದಿಗೆ ಹೋಗುವುದು, ಅದು ನಮ್ಮನ್ನೆಲ್ಲಿಗೆ ಕೊಂಡೊಯ್ಯುತ್ತದೋ ಅಲ್ಲಿಗೆ ಹೋಗುವುದು ಒಂದು ಆಯ್ಕೆ. ಅದು ಒಂದು ಅಪಾಯಕಾರಿ ಜಾರುಬಂಡೆ. ಇನ್ನೊಂದು ಆಯ್ಕೆ; ಜನಾಭಿಪ್ರಾಯವನ್ನು ಬದಲಿಸುವಂತೆ ಜನರೊಂದಿಗೆ ಮಾತುಕತೆಗೆ ಇಳಿಯುವುದು. ಈ ಮಾತುಕತೆ ಮೋನೋಲಾಗ್ ಅಥವಾ ಸ್ವಗತವಾಗಿರಬಾರದು. ನಾವುಗಳು ಹೊಸದೊಂದು ಭಾಷೆಯನ್ನು ಕಲಿಯಲು ಮುಕ್ತರಾಗಿರಬೇಕು, ಹೊಸದೊಂದು ಸಂವೇದನೆಯನ್ನು ಅನುಭವಿಸಲು ಇಚ್ಛುಕರಾಗಿರಬೇಕು ಹಾಗೂ ಜ್ಞಾನದ ಇತರೆ ಸ್ವರೂಪಗಳ ಬಗ್ಗೆ ಗೌರವ ಹೊಂದಿರಬೇಕು. ಇದುವೇ ಗಾಂಧಿಯ ಮಾರ್ಗ, ಒಬ್ಬ ವಿಮರ್ಶಾತ್ಮಕ ಆಂತರ್ಯದವಳ/ನ ಮಾರ್ಗ. ಮೂರನೇಯ ಆಯ್ಕೆಯೂ ಒಂದಿದೆ: ಹೊಸ ಜನರನ್ನು ಆಯ್ಕೆ ಮಾಡುವುದು.
ಬನ್ನಿ, ಆಯ್ಕೆ ಮಾಡುವ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಖರ್ಗೆ ಭಾಷಣ ಸ್ಥಳದ ‘ಶುದ್ಧೀಕರಣ’: ಬಿಜೆಪಿ-RSS, ಸಂಘ ಪರಿವಾರದ ವಿಷಪೂರಿತ ಮನಸ್ಥಿತಿ ಮಾಜಿ ಸಿಎಂ ಸಿದ್ದರಾಮಯ್ಯ

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ, ಬಲಪಂಥೀಯ ಸಂಘಟನೆಯೊಂದು ಆ ಮೈದಾನದಲ್ಲಿ 'ಶುದ್ಧೀಕರಣ' ಕೈಗೊಂಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ...

ಸೋನಿಯಾ ಗಾಂಧಿ ಆತ್ಮಕಥೆ ವಿವಾದ | ಮೋದಿ, ಆರ್‌ಎಸ್‌ಎಸ್, ಚೀನಾ ನುಸುಳುವಿಕೆ ಕುರಿತ ಭಾಗಗಳನ್ನು ತೆಗೆದುಹಾಕಲು ಪೆಂಗ್ವಿನ್ ಇಂಡಿಯಾ ಕೋರಿತ್ತು : ಕಾಂಗ್ರೆಸ್ ಆರೋಪ

ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮತ್ತು ಅವರ ಅಧಿಕಾರಾವಧಿಯಲ್ಲಿ ನಡೆದ ಭಾರತೀಯ ಭೂಪ್ರದೇಶದ ಮೇಲಿನ ಚೀನಾದ ಆಕ್ರಮಣದ ನಿರ್ವಹಣೆಗೆ ಸಂಬಂಧಿಸಿದ ಭಾಗಗಳನ್ನು ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ "ಬೆಲಾಂಗಿಂಗ್: ಎ ಜರ್ನಿ...

ಪಶ್ಚಿಮ ಬಂಗಾಳ| ದುರ್ಗಾಪೂಜೆ ಸಂದರ್ಭದಲ್ಲಿ ಮಾಂಸ ಮಾರಾಟ ನಿಷೇಧ ಆದೇಶ ಹೊರಡಿಸಿದ ವಿಎಚ್‌ಪಿ; ಬಲಪಂಥೀಯ ಸಂಘನೆಯ ಅಧಿಕಾರ ಪ್ರಶ್ನಿಸಿದ ವಿಪಕ್ಷಗಳು

ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆ ಆಚರಣೆಗೆ ಸಂಬಂಧಿಸಿದಂತೆ ಬಲಪಂಥೀಯ ಸಂಘಟನೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹೊರಡಿಸಿರುವ ಮಾರ್ಗಸೂಚಿಯು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಪೂಜಾ ಮಂಟಪಗಳ ಸುತ್ತಮುತ್ತ ಸಸ್ಯಾಹಾರಿ ಅಲ್ಲದ ಮಾಂಸ ಮತ್ತು ಮೀನು...

ನ್ಯೂಯಾರ್ಕ್‌ನಲ್ಲಿ ಮೋಹನ್ ಭಾಗವತ್ ಕಾರ್ಯಕ್ರಮ: RSS ಮತ್ತು ಸಂಸ್ಥೆಯ ನಂಟಿನ ರಹಸ್ಯ ಬಯಲು

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಅವರು ಶನಿವಾರ ನ್ಯೂಯಾರ್ಕ್‌ನ ಪ್ರಸಿದ್ಧ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಆಯೋಜಿಸಲಾಗಿರುವ ‘ಯೂನಿವರ್ಸಲ್ ಒನ್‌ನೆಸ್ ಸೆಲೆಬ್ರೇಷನ್ಸ್’ ಎಂಬ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವರದಿಗಳ ಪ್ರಕಾರ,...

ಮೋಹನ್ ಭಾಗವತ್ ನ್ಯೂಯಾರ್ಕ್ ಕಾರ್ಯಕ್ರಮಕ್ಕೆ ವಿರೋಧ : ಅಮೆರಿಕದ 61 ಸಂಘಟನೆಗಳಿಂದ ಪ್ರತಿಭಟನೆ

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ ಮಾಡಲಿರುವ, ಶನಿವಾರ (ಆ.29) ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಆಯೋಜಿಸಲಾಗಿರುವ 'ಯೂನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್ಸ್' ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ಅವರು...

ಶಿವಮೊಗ್ಗ| ಈದ್-ಎ-ಮಿಲಾದ್ ರ್‍ಯಾಲಿಯಲ್ಲಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶನ: ಮೂವರ ವಿರುದ್ಧ ಪ್ರಕರಣ ದಾಖಲು

ಶಿವಮೊಗ್ಗದ ಆರ್‌ಎಂಎಲ್ ನಗರದಲ್ಲಿ ಈದ್-ಎ-ಮಿಲಾದ್ ಆಚರಣೆಗಾಗಿ ನಿರ್ಮಿಸಲಾಗಿದ್ದ ಕಟೌಟ್ ಒಂದರ ಮೇಲೆ ಫೆಲೆಸ್ತೀನ್ ಧ್ವಜವನ್ನು ಪ್ರದರ್ಶಿಸಿದ ಆರೋಪದ ಮೇಲೆ ಪೊಲೀಸರು ಮೂವರು ಮುಸ್ಲಿಂ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ನಿಹಾಲ್ ಉರುಫ್ ಬೆಕ್ಕು,...

ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ FIR: ಹೈಕೋರ್ಟ್ ಆದೇಶ ಉಲ್ಲಂಘನೆ ಆರೋಪ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಕೋಲ್ಕತ್ತಾ ಪೊಲೀಸರು ಸ್ವಯಂಪ್ರೇರಿತ (Suo Motu) ದೂರು ದಾಖಲಿಸಿಕೊಂಡಿದ್ದಾರೆ. ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಟಿಎಂಸಿ ವಿದ್ಯಾರ್ಥಿ...

ಈದ್ ಮಿಲಾದ್ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರಲು ಯತ್ನ; ಭಜರಂಗದಳ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲು

ಈದ್-ಎ-ಮಿಲಾದ್ ಪೋಸ್ಟರ್‌ಗಳ ವಿಚಾರವಾಗಿ ಗುಂಪುಗಳ ನಡುವೆ ಶತ್ರುತ್ವ ಸೃಷ್ಟಿಸಲು ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರಲು ಯತ್ನಿಸಿದ ಆರೋಪದ ಮೇಲೆ ಕಲಬುರಗಿಯಲ್ಲಿ ಭಜರಂಗದಳದ ಕಾರ್ಯಕರ್ತನೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಗರದಲ್ಲಿ ಈದ್-ಎ-ಮಿಲಾದ್ ಆಚರಣೆಯ ಭಾಗವಾಗಿ...

ವೆನೆಜುವೆಲಾ ತೈಲ ನಿಕ್ಷೇಪಗಳ ಮೇಲೆ ಅಮೆರಿಕ ನಿಯಂತ್ರಣ: ಜಾಗತಿಕ ರಾಜಕಾರಣದಲ್ಲಿ ತಲ್ಲಣ!

ವಾಷಿಂಗ್ಟನ್/ಕಾರಕಾಸ್: ವಿಶ್ವದಲ್ಲೇ ಅತಿ ಹೆಚ್ಚು ಕಚ್ಚಾ ತೈಲ ನಿಕ್ಷೇಪ ಹೊಂದಿರುವ ವೆನೆಜುವೆಲಾ ದೇಶದ 65 ಬಿಲಿಯನ್ ಬ್ಯಾರೆಲ್‌ಗಿಂತ ಹೆಚ್ಚು ಸಾಬೀತಾದ ತೈಲ ನಿಕ್ಷೇಪಗಳ ಮೇಲೆ ಬಹುಮತ ನಿಯಂತ್ರಣ ಸಾಧಿಸುವ ಒಪ್ಪಂದವನ್ನು ಅಮೆರಿಕ ಮಾಡಿಕೊಂಡಿದೆ....

ನೈತಿಕ ಹೊಣೆ ಹೊತ್ತು ನಾಗೇಂದ್ರ ರಾಜೀನಾಮೆ ನೀಡಿದ್ದಾರೆ; ಇದು ಬಿಜೆಪಿಯ ಗೆಲುವಲ್ಲ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

ಸಚಿವರಾಗಿದ್ದ ಬಿ. ನಾಗೇಂದ್ರ ಅವರು ಸಾರ್ವಜನಿಕ ಜೀವನದಲ್ಲಿ ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಇದು ಬಿಜೆಪಿಯ ಗೆಲುವೂ ಅಲ್ಲ, ವಿಪಕ್ಷ ನಾಯಕರ ಹೋರಾಟದ ಗೆಲುವೂ ಅಲ್ಲ. ಇದೊಂದು ದಲಿತ ಸಮುದಾಯ ನಾಯಕರ...