Homeರಾಜಕೀಯ“ನೀವು ಜೈಲಲ್ಲಿರೋದು, ನಾನು ಪಾರಿಜಾತದಲ್ಲಿರೋದು ಸರೀನಾ”

“ನೀವು ಜೈಲಲ್ಲಿರೋದು, ನಾನು ಪಾರಿಜಾತದಲ್ಲಿರೋದು ಸರೀನಾ”

- Advertisement -
- Advertisement -

ಕೊಡುಗೈ ದಾನಿಯಾದ ಆದುನಿಕ ಕರ್ಣ ನಮ್ಮ ಬಳ್ಳಾರಿ ಗಾಲಿಯನ್ನು ಹಿಡಿದು ಜೈಲಿಗೆ ಹಾಕಿದ ಕ್ಷಣ ನೆನಸಿಕೊಂಡರೆ ಮನಸ್ಸಿಗೆ ವೈರಾಗ್ಯ ಆವರಿಸಿಕೊಂಡು ಮನಸ್ಸು ಆರ್ದ್ರಗೊಳುತ್ತದಲ್ಲಾ. ಇದಕ್ಕೆ ಕಾರಣವನ್ನು ರೆಡ್ಡಿಯನ್ನೆÃ ಕೇಳಿ ತಿಳಿದುಕೊಂಡರೆ ಹೇಗೆ ಅನ್ನಿಸಿ ಫೋನ್ ಮಾಡಲಾಗಿ ರಿಂಗಾಯ್ತು.
ರಿಂಗ್‌ಟೋನ್: ‘ಏನಿದೀ ಗ್ರಹಚಾರವೋ ಏನಿದೀ ವನವಾಸವೊ ಏನ ಮಾಡಿದನೆಂದು ಈ ಪರಿ ಎನಗೆ ತಂದೆಯೋ ಪಶುಪತೀ…. ಏನಿದೀ…..’ “ಹಲೋ ಯಾರು”
“ಸಾರ್ ನಾನು ಪತ್ರಕರ್ತ ಯಾಹು ಅಂತ”
“ಯಾಹು ಅಂತ್ಲ ಏನ್ಹೆÃಳಿ”
“ತಾವ್ಯಾರು ಸಾರ್”
“ನಾನು ಜೈಲ್ ಸೂಪರ್‌ಡೆಂಟ್ ಏನಾಗಬೇಕು ಕೇಳಿ”
“ಜನಾರ್ದನ ರೆಡ್ಡಿಯವರು ಪತ್ರಕರ್ತರಿಗೆ ಪರಮ ಮಿತ್ರರು ಸಾರ್. ನಮಗೆಲ್ಲ ತುಂಬ ಸಹಾಯ ಮಾಡಿದಾರೆ. ಅವುರ ಜೊತೆ ಒಂದೆರಡು ಮಾತಾಡಬೇಕು. ಅವುಕಾಶ ಮಾಡಿಕೊಡಿ ಸಾರ್”
“ಆಯ್ತು ಮಾತಾಡಿ”
“ಹಲೋ”
“ನಾನು ಸಾರ್ ಯಾಹು”
“ಯಾಹು ಅವರೆ ನೀವು ಫೋನ್ ಮಾಡಿದ್ದಕ್ಕೆ ತುಂಬ ಸಂತೋಷ ಆಯ್ತು. ನನ್ನ ಕೈಯಿಂದ ಲಕ್ಷಲಕ್ಷ ಹಣ ಪಡುಕೊಂಡ ಯಾವ ಪತ್ರಕರ್ತರು ಇದುವರೆಗೂ ನನಗೆ ಫೋನ್ ಮಾಡಿಲ್ಲ. ನೀವು ಮಾಡಿದ್ದಕ್ಕೆ ನನಗೆ ಸಂತೋಷ ಆಗಿದೆ, ನಮ್ಮ ಪಾರಿಜಾತದಲ್ಲಿ ಕುಳಿತಿರಿ ಬಂದುಬಿಡ್ತಿÃನಿ”
“ಏನು ಸಾರ್ ಪಾರಿಜಾತ ಅನ್ನೊÃ ಬಂಗ್ಲೆÃಲಿ ಬಡವನಾದ ನನ್ನಂಥ ಪತ್ರಕರ್ತ ಇರೋದು. ನೀವು ಪರಪ್ಪನ ಅಗ್ರಹಾರದ ಜೈಲಿನ ಕೋಣೆಲಿರೋದು ನನಿಗ್ಯಾಕೊ ದುಖಃ ಆಗ್ತಾಯಿದೆ ಸಾರ್”
“ನೋಡಿ ಕಷ್ಟಗಳು ಮನುಷ್ಯನಿಗಷ್ಟೆÃ ಬರೋದು ಗುಡ್ಡಗಳಿಗಲ್ಲ ಸಹಿಸಿಕೊಳ್ಳಬೇಕು”
“ಗುಡ್ಡಗಳಿಗೂ ಕಷ್ಟ ಬರುತ್ತೆ ಸಾರ್. ಭೂದೇವಿಯ ಸ್ತನಗಳಂಗೆ ಕಾಣುತಿದ್ದ ಸುಂದರವಾದ ಬಳ್ಳಾರಿ ಜೋಡಿ ಗುಡ್ಡಗಳು ನಿರ್ನಾಮ ಆಗಿ ನಮ್ಮ ವೈರಿ ರಾಷ್ಟç ಚೀಣಾದಲ್ಲಿವೆಯಂತೆ. ಆದ್ದರಿಂದ ಕಷ್ಟ ಮನುಷ್ಯರಿಗಷ್ಟೆÃ ಅಲ್ಲ ನಿಸರ್ಗಕ್ಕೂ ಬಂದಿದೆ ಸಾರ್. ನಿಸರ್ಗಪ್ರಿಯನಾದ ತಮಗೆ ಕಷ್ಟ ಬಂದಿದ್ದನ್ನು ನಾನು ಸಹಿಸಿಗಳಕ್ಕಾಗ್ತಯಿಲ್ಲ”
“ನೋಡಿ, ನಾಲ್ಕು ವರ್ಷ ಜೈಲಲ್ಲಿ ಇದ್ದ ನನಗೆ ನಾಲ್ಕು ದಿನ ಇರೋದು ಕಷ್ಟ ಅಲ್ಲ. ನನ್ನ ಹಳೆ ಕೊಠಡಿಯನ್ನ ನಮ್ಮ ಜೈಲರ್ ಮಿತ್ರರು ನನ್ನ ಸ್ವಂತ ಕೊಠಡಿ ತರ ಮಾಡಿದಾರೆ ಗೊತ್ತ”
“ಅದನ್ನ ಪರ್‌ಚೇಸ್ ಮಾಡಿದ್ರೆ ಹೇಗೆ ಸಾರ್”
“ಯಾಕೆ ಹಾಗೇಳ್ತಿರಿ”
“ವಿನಾಕಾರಣ ಒಬ್ಬ ಅಮಾಯಕನ್ನ ಇ.ಡಿ ಡೀಲ್‌ನಲ್ಲಿ ಸಿಕ್ಕಿಸಿ ಜೈಲಿಗಾಕಿದ ನೆನಪಿಗೆ ಮತ್ತು ಸರಕಾರ ಅದೇಳಿದಂಗೆ ಕೇಳೊ ಈ ಪೊಲೀಸರಿಗೆ ಧಿಕ್ಕಾರದ ರೂಪವಾಗಿ ಅದೊಂದು ಸ್ಮಾರಕವಾಗಲಿ, ಅಂತ ಹೇಳಿದೆ ಸಾರ್”
“ನಿಮ್ಮ ಅಲೋಚನೆ ಸರಿ, ಅದ್ರೆ ಜೈಲಿರೋವರಿಗೆ ಅದನ್ನ ಗಾಲಿ ಜನಾರ್ದನ ರೆಡ್ಡಿ ಕೊಠಡಿ ಅಂತ ನಾಮಕರಣ ಮಾಡಿಬಿಡ್ತಾರೆ. ಆದ್ದರಿಂದ ಅದನ್ನ ಕೊಳ್ಳೊÃದು ಬೇಕಾ? ನಾನು ಬೇಗ ಬರ್ತೀನಿ. ನಮ್ಮ ಮನೇಲಿ ಕುಳಿತಿರಿ”
“ಕಷ್ಟ ಆಗುತ್ತೆ ಸಾರ್. ಸಾವಿರಾರು ಕೋಟಿ ಒಡೆಯ ಕೊಡುಗೈ ದಾನಿ ವಿನಾಕಾರಣ ಜೈಲಿನಲ್ಲಿರುವಾಗ ಅಂತವನ ಮನೇಲಿದ್ರೆ ದುಃಖ ತಡಿಯಕ್ಕಾಗಲ್ಲ. ಯಾಕಂದ್ರೆ ಸಾವಿರಾರು ಕೋಟಿಯನ್ನ ಕೈಯಲ್ಲೂ ಮುಟ್ಟದೆ ವ್ಯವಹಾರ ಮಾಡಿದಂತಹ ನೀವು ಇಪ್ಪತ್ತು ಕೋಟಿಗೆ ಕೈಚಾಚಿದ್ರಿ ಅನ್ನದನ್ನ ಇಡೀ ಕರ್ನಾಟಕ ನಂಬುತಾಯಿಲ್ಲ ಸಾರ್. ಅದೊಂದೇ ಸಮಾಧಾನದ ವಿಷಯ ಸಾರ್”
“ದೇವರೂ ಕೂಡ ನಂಬುತಾಯಿಲ್ಲ. ಯಾಕೆ ಅಂದ್ರೆ ಭಗವಂತನೇ ನನಗೆ ಅಷ್ಟೊಂದು ಐಶ್ವರ್ಯ ಕೊಟ್ಟಿದ್ದಾನೆ. ನಾನು ಆತನಿಗೇ ಒಂದು ಕಿರೀಟವನ್ನ ಕೊಟ್ಟೆ ಗೊತ್ತ”
“ಕಿರೀಟ ಈಸಗೊಂಡ ತಿಮ್ಮಪ್ಪ ನಿಮ್ಮನ್ನ ಕಾಪಾಡಬೇಕಿತ್ತು ಸಾರ್”
“ಕಾಪಾಡ್ತನೆ ಸ್ವಲ್ಪ ತಡ ಆಗಬಹುದು. ಒಬ್ಬ ಪೋಲಿಸ್ ಮಗನನ್ನ ಕುಬೇರನನ್ನಾಗಿ ಮಾಡಿದ ಭಗವಂತ ನನ್ನನ್ನ ಯಾವತ್ತೂ ಕೈ ಬಿಟ್ಟಿಲ್ಲ. ನನ್ನನ್ನ ಅಪರಾಧಿ ಅಂತ ಪರಿಗಣಿಸೋದಕ್ಕೆ ಹೋರಾಡ್ತಯಿರೊ ನನ್ನ ವೈರಿಗಳಿಗೆ ಸರಿಯಾದ ಉತ್ತರ ಕೊಡೋದಕ್ಕೆ ನನ್ನ ಮಗಳ ಮದುವೆಯನ್ನು ಸಾವಿರಾರು ಕೋಟಿ ಖರ್ಚು ಮಾಡಿ ಮಾಡಿದೆ. ಅದೂ ನೋಟು ಬ್ಯಾನಾಗಿದ್ದ ಸಂದರ್ಭ. ಆಗೆಲ್ಲ ಭಗವಂತ ನಮಗೆ ಸಹಾಯ ಮಾಡಿದಾನೆ”
“ನೀವು ಬಿ.ಜೆ.ಪಿ.ಗೂ ಭಾರಿ ಸಹಾಯ ಮಾಡಿದ್ರಲ್ಲ ಸಾರ್”
“ಮೊದಲ ಸಮ್ಮಿಶ್ರ ಸರಕಾರ ರಚನೆಯಾದದ್ದೆÃ ನನ್ನಿಂದ. ನಾನು ಕುಮಾರಸ್ವಾಮಿಗೆ ನೂರೈವತ್ತು ಕೋಟಿ ರೂಪಾಯಿ ಕೊಟ್ಟಾಗ ಆತ ಎಲ್ಲ ಶಾಸಕರನ್ನು ರೆಸಾರ್ಟಿಗೆ ತಕ್ಕೊಂಡು ಹೋಗಿ ನೇರ ವಿಧಾನಸೌಧದ ಮುಂದಕ್ಕೆ ತಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ತಗೊಂಡ್ರು”
“ಹೌದ ಸಾರ್”
“ಇದು ನೂರಕ್ಕೆ ಇನ್ನೂರು ಪರಸೆಂಟು ನಿಜ. ಆದ್ರೆ ಅದನ್ನ ಅಲ್ಲಗಳದ್ರು. ಅದಕ್ಕೆ ಅವರಿಗೆ ಬೈಪಾಸ್ ಸರ್ಜರಿ ಆಯ್ತು”
“ಇಸಗೊಂಡ ದುಡ್ಡನ್ನ ಇಲ್ಲ ಅಂದ್ರೆ ಬೈಪಾಸಾಗುತ್ತ ಸಾರ್”
“ಅದು ಭಗವಂತನಿಗೆ ಬಿಟ್ಟ ವಿಚಾರ. ಬೈಪಾಸಾಗಬಹುದು ಅಥವಾ ಮಕ್ಕಳೆ ತೀರೋಗಬಹುದು. ಏನಾದ್ರು ಆಗಬಹುದು”
“ನಿಮ್ಮ ತರ್ಕ ನಿಜ ಸಾರ್ ನೀವೀಗಾಗ್ಲೆ ಹೇಳಿರೊ ತರ ವಿನಾಕಾರಣ ನಿಮ್ಮನ್ನ ಜೈಲಿಗಾಕಿದ ಸಿದ್ದರಾಮಯ್ಯನವರ ಮಗ ತೀರೋದ. ನಿಮ್ಮತ್ರ ಹಣ ತಗೊಂಡು ಇಲ್ಲವೇ ಇಲ್ಲ ಅಂದ ಕುಮಾರಣ್ಣನವರಿಗೆ ಬೈಪಾಸಾಯ್ತು. ಇದೇ ಈಗ ಅ್ಯಂಬಿಡೆಂಟ್ ಕಂಪನಿ ಮಾಲಿಕ ಸಯ್ಯದ್ ಅಹಮದ್ ಹತ್ರ ಇಪ್ಪತ್ತು ಕೋಟಿ ತಗೊಂಡು ಆತನಿಗೂ ನನಗೂ ಯಾವ ವ್ಯವಹಾರವೂ ನಡೆದಿಲ್ಲ, ನನ್ನ ಜೊತೆ ಇರೋ ಆತನ ಫೋಟೊ ಯಾವಾಗಲೊ ಆತನೇ ಬಂದು ನನಗೆ ಗೊತ್ತಿಲ್ಲದಂಗೆ ತಗಿಸಿಕೊಂಡಿದ್ದು ಅಂತ ನೀವು ಏನೇ ಸಬೂಬು ಹೇಳಿದ್ರೂ ಕೂಡ ಜೈಲುಪಾಲಾದ್ರಿ. ಇದನ್ನೆಲ್ಲಾ ನೋಡಿದ್ರೆ ನಿಮ್ಮ ಭಗವಂತನ ಕ್ರಮಗಳು ಒಂಥರಾ ಸರಿಯಾಗಿವೆ ಸಾರ್”
“ನೀವು ಹೇಳಿದ ಮಾತುಗಳು ಅರ್ಥ ಆಗ್ತಾಯಿಲ್ಲ”
“ಹೊರಗಡೆ ಬಂದ್ ಮೇಲೆ ನಿಮ್ಮ ವಕೀಲರ ಪೀಜು ಕೊಡಿ ಸಾರ್”
“ನಮ್ಮದು ಕೊಡುಗೈ ಕುಟುಂಬ”
“ಥೂ..ಥೂ…ಥೂತ್ತೆÃರಿ!!”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...