Homeರಾಜಕೀಯ“ನೀವು ಜೈಲಲ್ಲಿರೋದು, ನಾನು ಪಾರಿಜಾತದಲ್ಲಿರೋದು ಸರೀನಾ”

“ನೀವು ಜೈಲಲ್ಲಿರೋದು, ನಾನು ಪಾರಿಜಾತದಲ್ಲಿರೋದು ಸರೀನಾ”

- Advertisement -
- Advertisement -

ಕೊಡುಗೈ ದಾನಿಯಾದ ಆದುನಿಕ ಕರ್ಣ ನಮ್ಮ ಬಳ್ಳಾರಿ ಗಾಲಿಯನ್ನು ಹಿಡಿದು ಜೈಲಿಗೆ ಹಾಕಿದ ಕ್ಷಣ ನೆನಸಿಕೊಂಡರೆ ಮನಸ್ಸಿಗೆ ವೈರಾಗ್ಯ ಆವರಿಸಿಕೊಂಡು ಮನಸ್ಸು ಆರ್ದ್ರಗೊಳುತ್ತದಲ್ಲಾ. ಇದಕ್ಕೆ ಕಾರಣವನ್ನು ರೆಡ್ಡಿಯನ್ನೆÃ ಕೇಳಿ ತಿಳಿದುಕೊಂಡರೆ ಹೇಗೆ ಅನ್ನಿಸಿ ಫೋನ್ ಮಾಡಲಾಗಿ ರಿಂಗಾಯ್ತು.
ರಿಂಗ್‌ಟೋನ್: ‘ಏನಿದೀ ಗ್ರಹಚಾರವೋ ಏನಿದೀ ವನವಾಸವೊ ಏನ ಮಾಡಿದನೆಂದು ಈ ಪರಿ ಎನಗೆ ತಂದೆಯೋ ಪಶುಪತೀ…. ಏನಿದೀ…..’ “ಹಲೋ ಯಾರು”
“ಸಾರ್ ನಾನು ಪತ್ರಕರ್ತ ಯಾಹು ಅಂತ”
“ಯಾಹು ಅಂತ್ಲ ಏನ್ಹೆÃಳಿ”
“ತಾವ್ಯಾರು ಸಾರ್”
“ನಾನು ಜೈಲ್ ಸೂಪರ್‌ಡೆಂಟ್ ಏನಾಗಬೇಕು ಕೇಳಿ”
“ಜನಾರ್ದನ ರೆಡ್ಡಿಯವರು ಪತ್ರಕರ್ತರಿಗೆ ಪರಮ ಮಿತ್ರರು ಸಾರ್. ನಮಗೆಲ್ಲ ತುಂಬ ಸಹಾಯ ಮಾಡಿದಾರೆ. ಅವುರ ಜೊತೆ ಒಂದೆರಡು ಮಾತಾಡಬೇಕು. ಅವುಕಾಶ ಮಾಡಿಕೊಡಿ ಸಾರ್”
“ಆಯ್ತು ಮಾತಾಡಿ”
“ಹಲೋ”
“ನಾನು ಸಾರ್ ಯಾಹು”
“ಯಾಹು ಅವರೆ ನೀವು ಫೋನ್ ಮಾಡಿದ್ದಕ್ಕೆ ತುಂಬ ಸಂತೋಷ ಆಯ್ತು. ನನ್ನ ಕೈಯಿಂದ ಲಕ್ಷಲಕ್ಷ ಹಣ ಪಡುಕೊಂಡ ಯಾವ ಪತ್ರಕರ್ತರು ಇದುವರೆಗೂ ನನಗೆ ಫೋನ್ ಮಾಡಿಲ್ಲ. ನೀವು ಮಾಡಿದ್ದಕ್ಕೆ ನನಗೆ ಸಂತೋಷ ಆಗಿದೆ, ನಮ್ಮ ಪಾರಿಜಾತದಲ್ಲಿ ಕುಳಿತಿರಿ ಬಂದುಬಿಡ್ತಿÃನಿ”
“ಏನು ಸಾರ್ ಪಾರಿಜಾತ ಅನ್ನೊÃ ಬಂಗ್ಲೆÃಲಿ ಬಡವನಾದ ನನ್ನಂಥ ಪತ್ರಕರ್ತ ಇರೋದು. ನೀವು ಪರಪ್ಪನ ಅಗ್ರಹಾರದ ಜೈಲಿನ ಕೋಣೆಲಿರೋದು ನನಿಗ್ಯಾಕೊ ದುಖಃ ಆಗ್ತಾಯಿದೆ ಸಾರ್”
“ನೋಡಿ ಕಷ್ಟಗಳು ಮನುಷ್ಯನಿಗಷ್ಟೆÃ ಬರೋದು ಗುಡ್ಡಗಳಿಗಲ್ಲ ಸಹಿಸಿಕೊಳ್ಳಬೇಕು”
“ಗುಡ್ಡಗಳಿಗೂ ಕಷ್ಟ ಬರುತ್ತೆ ಸಾರ್. ಭೂದೇವಿಯ ಸ್ತನಗಳಂಗೆ ಕಾಣುತಿದ್ದ ಸುಂದರವಾದ ಬಳ್ಳಾರಿ ಜೋಡಿ ಗುಡ್ಡಗಳು ನಿರ್ನಾಮ ಆಗಿ ನಮ್ಮ ವೈರಿ ರಾಷ್ಟç ಚೀಣಾದಲ್ಲಿವೆಯಂತೆ. ಆದ್ದರಿಂದ ಕಷ್ಟ ಮನುಷ್ಯರಿಗಷ್ಟೆÃ ಅಲ್ಲ ನಿಸರ್ಗಕ್ಕೂ ಬಂದಿದೆ ಸಾರ್. ನಿಸರ್ಗಪ್ರಿಯನಾದ ತಮಗೆ ಕಷ್ಟ ಬಂದಿದ್ದನ್ನು ನಾನು ಸಹಿಸಿಗಳಕ್ಕಾಗ್ತಯಿಲ್ಲ”
“ನೋಡಿ, ನಾಲ್ಕು ವರ್ಷ ಜೈಲಲ್ಲಿ ಇದ್ದ ನನಗೆ ನಾಲ್ಕು ದಿನ ಇರೋದು ಕಷ್ಟ ಅಲ್ಲ. ನನ್ನ ಹಳೆ ಕೊಠಡಿಯನ್ನ ನಮ್ಮ ಜೈಲರ್ ಮಿತ್ರರು ನನ್ನ ಸ್ವಂತ ಕೊಠಡಿ ತರ ಮಾಡಿದಾರೆ ಗೊತ್ತ”
“ಅದನ್ನ ಪರ್‌ಚೇಸ್ ಮಾಡಿದ್ರೆ ಹೇಗೆ ಸಾರ್”
“ಯಾಕೆ ಹಾಗೇಳ್ತಿರಿ”
“ವಿನಾಕಾರಣ ಒಬ್ಬ ಅಮಾಯಕನ್ನ ಇ.ಡಿ ಡೀಲ್‌ನಲ್ಲಿ ಸಿಕ್ಕಿಸಿ ಜೈಲಿಗಾಕಿದ ನೆನಪಿಗೆ ಮತ್ತು ಸರಕಾರ ಅದೇಳಿದಂಗೆ ಕೇಳೊ ಈ ಪೊಲೀಸರಿಗೆ ಧಿಕ್ಕಾರದ ರೂಪವಾಗಿ ಅದೊಂದು ಸ್ಮಾರಕವಾಗಲಿ, ಅಂತ ಹೇಳಿದೆ ಸಾರ್”
“ನಿಮ್ಮ ಅಲೋಚನೆ ಸರಿ, ಅದ್ರೆ ಜೈಲಿರೋವರಿಗೆ ಅದನ್ನ ಗಾಲಿ ಜನಾರ್ದನ ರೆಡ್ಡಿ ಕೊಠಡಿ ಅಂತ ನಾಮಕರಣ ಮಾಡಿಬಿಡ್ತಾರೆ. ಆದ್ದರಿಂದ ಅದನ್ನ ಕೊಳ್ಳೊÃದು ಬೇಕಾ? ನಾನು ಬೇಗ ಬರ್ತೀನಿ. ನಮ್ಮ ಮನೇಲಿ ಕುಳಿತಿರಿ”
“ಕಷ್ಟ ಆಗುತ್ತೆ ಸಾರ್. ಸಾವಿರಾರು ಕೋಟಿ ಒಡೆಯ ಕೊಡುಗೈ ದಾನಿ ವಿನಾಕಾರಣ ಜೈಲಿನಲ್ಲಿರುವಾಗ ಅಂತವನ ಮನೇಲಿದ್ರೆ ದುಃಖ ತಡಿಯಕ್ಕಾಗಲ್ಲ. ಯಾಕಂದ್ರೆ ಸಾವಿರಾರು ಕೋಟಿಯನ್ನ ಕೈಯಲ್ಲೂ ಮುಟ್ಟದೆ ವ್ಯವಹಾರ ಮಾಡಿದಂತಹ ನೀವು ಇಪ್ಪತ್ತು ಕೋಟಿಗೆ ಕೈಚಾಚಿದ್ರಿ ಅನ್ನದನ್ನ ಇಡೀ ಕರ್ನಾಟಕ ನಂಬುತಾಯಿಲ್ಲ ಸಾರ್. ಅದೊಂದೇ ಸಮಾಧಾನದ ವಿಷಯ ಸಾರ್”
“ದೇವರೂ ಕೂಡ ನಂಬುತಾಯಿಲ್ಲ. ಯಾಕೆ ಅಂದ್ರೆ ಭಗವಂತನೇ ನನಗೆ ಅಷ್ಟೊಂದು ಐಶ್ವರ್ಯ ಕೊಟ್ಟಿದ್ದಾನೆ. ನಾನು ಆತನಿಗೇ ಒಂದು ಕಿರೀಟವನ್ನ ಕೊಟ್ಟೆ ಗೊತ್ತ”
“ಕಿರೀಟ ಈಸಗೊಂಡ ತಿಮ್ಮಪ್ಪ ನಿಮ್ಮನ್ನ ಕಾಪಾಡಬೇಕಿತ್ತು ಸಾರ್”
“ಕಾಪಾಡ್ತನೆ ಸ್ವಲ್ಪ ತಡ ಆಗಬಹುದು. ಒಬ್ಬ ಪೋಲಿಸ್ ಮಗನನ್ನ ಕುಬೇರನನ್ನಾಗಿ ಮಾಡಿದ ಭಗವಂತ ನನ್ನನ್ನ ಯಾವತ್ತೂ ಕೈ ಬಿಟ್ಟಿಲ್ಲ. ನನ್ನನ್ನ ಅಪರಾಧಿ ಅಂತ ಪರಿಗಣಿಸೋದಕ್ಕೆ ಹೋರಾಡ್ತಯಿರೊ ನನ್ನ ವೈರಿಗಳಿಗೆ ಸರಿಯಾದ ಉತ್ತರ ಕೊಡೋದಕ್ಕೆ ನನ್ನ ಮಗಳ ಮದುವೆಯನ್ನು ಸಾವಿರಾರು ಕೋಟಿ ಖರ್ಚು ಮಾಡಿ ಮಾಡಿದೆ. ಅದೂ ನೋಟು ಬ್ಯಾನಾಗಿದ್ದ ಸಂದರ್ಭ. ಆಗೆಲ್ಲ ಭಗವಂತ ನಮಗೆ ಸಹಾಯ ಮಾಡಿದಾನೆ”
“ನೀವು ಬಿ.ಜೆ.ಪಿ.ಗೂ ಭಾರಿ ಸಹಾಯ ಮಾಡಿದ್ರಲ್ಲ ಸಾರ್”
“ಮೊದಲ ಸಮ್ಮಿಶ್ರ ಸರಕಾರ ರಚನೆಯಾದದ್ದೆÃ ನನ್ನಿಂದ. ನಾನು ಕುಮಾರಸ್ವಾಮಿಗೆ ನೂರೈವತ್ತು ಕೋಟಿ ರೂಪಾಯಿ ಕೊಟ್ಟಾಗ ಆತ ಎಲ್ಲ ಶಾಸಕರನ್ನು ರೆಸಾರ್ಟಿಗೆ ತಕ್ಕೊಂಡು ಹೋಗಿ ನೇರ ವಿಧಾನಸೌಧದ ಮುಂದಕ್ಕೆ ತಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ತಗೊಂಡ್ರು”
“ಹೌದ ಸಾರ್”
“ಇದು ನೂರಕ್ಕೆ ಇನ್ನೂರು ಪರಸೆಂಟು ನಿಜ. ಆದ್ರೆ ಅದನ್ನ ಅಲ್ಲಗಳದ್ರು. ಅದಕ್ಕೆ ಅವರಿಗೆ ಬೈಪಾಸ್ ಸರ್ಜರಿ ಆಯ್ತು”
“ಇಸಗೊಂಡ ದುಡ್ಡನ್ನ ಇಲ್ಲ ಅಂದ್ರೆ ಬೈಪಾಸಾಗುತ್ತ ಸಾರ್”
“ಅದು ಭಗವಂತನಿಗೆ ಬಿಟ್ಟ ವಿಚಾರ. ಬೈಪಾಸಾಗಬಹುದು ಅಥವಾ ಮಕ್ಕಳೆ ತೀರೋಗಬಹುದು. ಏನಾದ್ರು ಆಗಬಹುದು”
“ನಿಮ್ಮ ತರ್ಕ ನಿಜ ಸಾರ್ ನೀವೀಗಾಗ್ಲೆ ಹೇಳಿರೊ ತರ ವಿನಾಕಾರಣ ನಿಮ್ಮನ್ನ ಜೈಲಿಗಾಕಿದ ಸಿದ್ದರಾಮಯ್ಯನವರ ಮಗ ತೀರೋದ. ನಿಮ್ಮತ್ರ ಹಣ ತಗೊಂಡು ಇಲ್ಲವೇ ಇಲ್ಲ ಅಂದ ಕುಮಾರಣ್ಣನವರಿಗೆ ಬೈಪಾಸಾಯ್ತು. ಇದೇ ಈಗ ಅ್ಯಂಬಿಡೆಂಟ್ ಕಂಪನಿ ಮಾಲಿಕ ಸಯ್ಯದ್ ಅಹಮದ್ ಹತ್ರ ಇಪ್ಪತ್ತು ಕೋಟಿ ತಗೊಂಡು ಆತನಿಗೂ ನನಗೂ ಯಾವ ವ್ಯವಹಾರವೂ ನಡೆದಿಲ್ಲ, ನನ್ನ ಜೊತೆ ಇರೋ ಆತನ ಫೋಟೊ ಯಾವಾಗಲೊ ಆತನೇ ಬಂದು ನನಗೆ ಗೊತ್ತಿಲ್ಲದಂಗೆ ತಗಿಸಿಕೊಂಡಿದ್ದು ಅಂತ ನೀವು ಏನೇ ಸಬೂಬು ಹೇಳಿದ್ರೂ ಕೂಡ ಜೈಲುಪಾಲಾದ್ರಿ. ಇದನ್ನೆಲ್ಲಾ ನೋಡಿದ್ರೆ ನಿಮ್ಮ ಭಗವಂತನ ಕ್ರಮಗಳು ಒಂಥರಾ ಸರಿಯಾಗಿವೆ ಸಾರ್”
“ನೀವು ಹೇಳಿದ ಮಾತುಗಳು ಅರ್ಥ ಆಗ್ತಾಯಿಲ್ಲ”
“ಹೊರಗಡೆ ಬಂದ್ ಮೇಲೆ ನಿಮ್ಮ ವಕೀಲರ ಪೀಜು ಕೊಡಿ ಸಾರ್”
“ನಮ್ಮದು ಕೊಡುಗೈ ಕುಟುಂಬ”
“ಥೂ..ಥೂ…ಥೂತ್ತೆÃರಿ!!”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ಟೌನ್‌ಶಿಪ್ ಸರ್ವೆಗೆ ರೈತರ ತೀವ್ರ ವಿರೋಧ: ಅಧಿಕಾರಿಗಳಿಗೆ ಪೊರಕೆ ಏಟು, ಕಾರುಗಳು ಜಖಂ

ರಾಮನಗರ: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯನ್ನು ವಿರೋಧಿಸಿ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸೋಮವಾರ (ಜುಲೈ 13) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ...

ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ : ಜೆಡಿಎಸ್ ಶಾಸಕ ಹೆಚ್​​​.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್​ ನೋಟಿಸ್​

ಮಹಿಳೆಯ ಘನತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಸೋಮವಾರ (ಜು.13) ಜೆಡಿಎಸ್‌...

ದಲಿತ ಯುವಕರಿಗೆ ವಿದ್ಯುತ್ ಶಾಕ್‌ ಶಿಕ್ಷೆ: ಕಳ್ಳತನ ಆರೋಪದ ಮೇಲೆ ಇಬ್ಬರಿಗೆ ಚಿತ್ರಹಿಂಸೆ

ದಲಿತ ಯುವಕರ ಮೇಲೆ ಮಧ್ಯಪ್ರದೇಶದಲ್ಲಿ ನಡೆದಿರುವ ಅಮಾನವೀಯ ಕೃತ್ಯವೊಂದರ ವಿಡಿಯೋ ಇದೀಗ ನಾಗರಿಕ ಸಮಾಜವನ್ನೇ ಆಘಾತಕ್ಕೀಡು ಮಾಡಿದೆ. ನೀರಿನ ಪಂಪ್ ಮೋಟಾರ್ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಯುವಕರನ್ನು ಕಂಬಕ್ಕೆ...

ರಾಮಮಂದಿರ ಹಗರಣ: ಕೇಂದ್ರ ಸರ್ಕಾರ, ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ 

ನವದೆಹಲಿ: ವಿಶ್ವಪ್ರಸಿದ್ಧ ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಸಾರ್ವಜನಿಕ ಭಕ್ತಾದಿಗಳಿಂದ ಹರಿದುಬಂದಿರುವ ಕೋಟ್ಯಂತರ ರೂಪಾಯಿ ದೇಣಿಗೆ ನಿಧಿಯ ಕಳ್ಳತನ, ದುರುಪಯೋಗ ಮತ್ತು ಆಡಳಿತಾತ್ಮಕ ಅಕ್ರಮಗಳ ಆರೋಪ ಇದೀಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ...

ಜಮ್ಮು-ಕಾಶ್ಮೀರ: ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳನ್ನು ವೈಭವೀಕರಿಸಿದ ಆರೋಪ: ಮೂವರು ಪ್ರಕಾಶಕರ ಬಂಧನ

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ನಾಯಕರನ್ನು ವೈಭವೀಕರಿಸುವ ಪುಸ್ತಕಗಳನ್ನು ಪ್ರಕಟಿಸಿ, ವಿತರಿಸಿದ ಗಂಭೀರ ಆರೋಪದ ಮೇಲೆ ಪ್ರತಿ-ಗುಪ್ತಚರ ವಿಭಾಗದ (ಸಿಐಜೆಕೆ) ಪೊಲೀಸರು ಭಾನುವಾರ ಇಬ್ಬರು ಪ್ರಮುಖ ಪ್ರಕಾಶನ ಸಂಸ್ಥೆಗಳಿಗೆ...

ಕರ್ನಾಟಕ ಎಸ್‍ಐಆರ್: ಮತದಾರರ ಸೌಲಭ್ಯ ಕೇಂದ್ರಗಳ ಕೊರತೆ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅಡ್ಡಿ: ವರದಿ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿ ಸುಮಾರು ಎರಡು ವಾರಗಳು ಕಳೆಯುತ್ತಾ ಬಂದಿದ್ದರೂ, ಚುನಾವಣಾ ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಅಗತ್ಯವಿರುವಷ್ಟು ಮತದಾರರ ಸೌಲಭ್ಯ ಕೇಂದ್ರಗಳನ್ನು...

27 ಮಂದಿಯನ್ನು ‘ವಿದೇಶಿಯರು’ ಎಂದಿದ್ದ ಅಸ್ಸಾಂ ನ್ಯಾಯಮಂಡಳಿಗಳ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯ ಪೌರತ್ವ ಮತ್ತು ವಿದೇಶಿಯರ ಸ್ಥಾನಮಾನವನ್ನು ನಿರ್ಧರಿಸುವಾಗ ಕೇವಲ ಯಾಂತ್ರಿಕವಾಗಿ ತೀರ್ಪು ನೀಡಲಾಗದು, ಬದಲಿಗೆ ಅತ್ಯಂತ ನ್ಯಾಯಯುತ, ಕಾನೂನುಬದ್ಧ ಹಾಗೂ ಸಮಂಜಸವಾದ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ...

ಶಿಕ್ಷಕ ‘ಖಾನ್ ಸರ್‌’ಗೆ ಪಟ್ನಾ ಕೋರ್ಟ್‌ನಲ್ಲಿ ಜಯ: ಕೋಚಿಂಗ್ ಸೆಂಟರ್ ದಾಳಿ ಪ್ರಕರಣದಲ್ಲಿ ಮುಂಗಡ ಜಾಮೀನು ಮಂಜೂರು

ಬಿಹಾರದ ಖ್ಯಾತ ಶಿಕ್ಷಕ ಫೈಸಲ್ ಖಾನ್ (ಜನಪ್ರಿಯವಾಗಿ ಖಾನ್ ಸರ್ ಎಂದು ಕರೆಯಲ್ಪಡುವ) ಅವರಿಗೆ ಪಟ್ನಾ ನ್ಯಾಯಾಲಯವು ಸೋಮವಾರ ಮುಂಗಡ ಜಾಮೀನು ಮಂಜೂರು ಮಾಡಿದೆ. ಈ ತಿಂಗಳ ಆರಂಭದಲ್ಲಿ ಅವರ ಕೋಚಿಂಗ್ ಇನ್ಸ್ಟಿಟ್ಯೂಟ್...

ಗುಜರಾತ್‌| ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕನನ್ನು ಬೆದರಿಸಿದ ನಕಲಿ ಗೋರಕ್ಷಕರು

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಸ್ವಘೋಷಿತ ಗೋರಕ್ಷಕರ ಗುಂಪೊಂದು ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಸುಮಾರು 100 ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿ, ವಾಹನವನ್ನು ತಡೆದು ಗುಂಪು ಮುಸ್ಲಿಂ ಚಾಲಕನನ್ನು ನಿಂದಿಸಿ ಬೆದರಿಸಿದ್ದಾರೆ. 'ಕ್ಲಾರಿಯನ್ ಇಂಡಿಯಾ' ವರದಿ ಪ್ರಕಾರ,...

ವಿಜಯ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಜಯ: ತಮಿಳುನಾಡು ಗೋಹತ್ಯೆ ನಿಷೇಧದ ಹೈಕೋರ್ಟ್ ಆದೇಶಕ್ಕೆ ತಡೆ

ತಮಿಳುನಾಡಿನಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK)...