Homeರಾಜಕೀಯ“ನೀವು ಜೈಲಲ್ಲಿರೋದು, ನಾನು ಪಾರಿಜಾತದಲ್ಲಿರೋದು ಸರೀನಾ”

“ನೀವು ಜೈಲಲ್ಲಿರೋದು, ನಾನು ಪಾರಿಜಾತದಲ್ಲಿರೋದು ಸರೀನಾ”

- Advertisement -
- Advertisement -

ಕೊಡುಗೈ ದಾನಿಯಾದ ಆದುನಿಕ ಕರ್ಣ ನಮ್ಮ ಬಳ್ಳಾರಿ ಗಾಲಿಯನ್ನು ಹಿಡಿದು ಜೈಲಿಗೆ ಹಾಕಿದ ಕ್ಷಣ ನೆನಸಿಕೊಂಡರೆ ಮನಸ್ಸಿಗೆ ವೈರಾಗ್ಯ ಆವರಿಸಿಕೊಂಡು ಮನಸ್ಸು ಆರ್ದ್ರಗೊಳುತ್ತದಲ್ಲಾ. ಇದಕ್ಕೆ ಕಾರಣವನ್ನು ರೆಡ್ಡಿಯನ್ನೆÃ ಕೇಳಿ ತಿಳಿದುಕೊಂಡರೆ ಹೇಗೆ ಅನ್ನಿಸಿ ಫೋನ್ ಮಾಡಲಾಗಿ ರಿಂಗಾಯ್ತು.
ರಿಂಗ್‌ಟೋನ್: ‘ಏನಿದೀ ಗ್ರಹಚಾರವೋ ಏನಿದೀ ವನವಾಸವೊ ಏನ ಮಾಡಿದನೆಂದು ಈ ಪರಿ ಎನಗೆ ತಂದೆಯೋ ಪಶುಪತೀ…. ಏನಿದೀ…..’ “ಹಲೋ ಯಾರು”
“ಸಾರ್ ನಾನು ಪತ್ರಕರ್ತ ಯಾಹು ಅಂತ”
“ಯಾಹು ಅಂತ್ಲ ಏನ್ಹೆÃಳಿ”
“ತಾವ್ಯಾರು ಸಾರ್”
“ನಾನು ಜೈಲ್ ಸೂಪರ್‌ಡೆಂಟ್ ಏನಾಗಬೇಕು ಕೇಳಿ”
“ಜನಾರ್ದನ ರೆಡ್ಡಿಯವರು ಪತ್ರಕರ್ತರಿಗೆ ಪರಮ ಮಿತ್ರರು ಸಾರ್. ನಮಗೆಲ್ಲ ತುಂಬ ಸಹಾಯ ಮಾಡಿದಾರೆ. ಅವುರ ಜೊತೆ ಒಂದೆರಡು ಮಾತಾಡಬೇಕು. ಅವುಕಾಶ ಮಾಡಿಕೊಡಿ ಸಾರ್”
“ಆಯ್ತು ಮಾತಾಡಿ”
“ಹಲೋ”
“ನಾನು ಸಾರ್ ಯಾಹು”
“ಯಾಹು ಅವರೆ ನೀವು ಫೋನ್ ಮಾಡಿದ್ದಕ್ಕೆ ತುಂಬ ಸಂತೋಷ ಆಯ್ತು. ನನ್ನ ಕೈಯಿಂದ ಲಕ್ಷಲಕ್ಷ ಹಣ ಪಡುಕೊಂಡ ಯಾವ ಪತ್ರಕರ್ತರು ಇದುವರೆಗೂ ನನಗೆ ಫೋನ್ ಮಾಡಿಲ್ಲ. ನೀವು ಮಾಡಿದ್ದಕ್ಕೆ ನನಗೆ ಸಂತೋಷ ಆಗಿದೆ, ನಮ್ಮ ಪಾರಿಜಾತದಲ್ಲಿ ಕುಳಿತಿರಿ ಬಂದುಬಿಡ್ತಿÃನಿ”
“ಏನು ಸಾರ್ ಪಾರಿಜಾತ ಅನ್ನೊÃ ಬಂಗ್ಲೆÃಲಿ ಬಡವನಾದ ನನ್ನಂಥ ಪತ್ರಕರ್ತ ಇರೋದು. ನೀವು ಪರಪ್ಪನ ಅಗ್ರಹಾರದ ಜೈಲಿನ ಕೋಣೆಲಿರೋದು ನನಿಗ್ಯಾಕೊ ದುಖಃ ಆಗ್ತಾಯಿದೆ ಸಾರ್”
“ನೋಡಿ ಕಷ್ಟಗಳು ಮನುಷ್ಯನಿಗಷ್ಟೆÃ ಬರೋದು ಗುಡ್ಡಗಳಿಗಲ್ಲ ಸಹಿಸಿಕೊಳ್ಳಬೇಕು”
“ಗುಡ್ಡಗಳಿಗೂ ಕಷ್ಟ ಬರುತ್ತೆ ಸಾರ್. ಭೂದೇವಿಯ ಸ್ತನಗಳಂಗೆ ಕಾಣುತಿದ್ದ ಸುಂದರವಾದ ಬಳ್ಳಾರಿ ಜೋಡಿ ಗುಡ್ಡಗಳು ನಿರ್ನಾಮ ಆಗಿ ನಮ್ಮ ವೈರಿ ರಾಷ್ಟç ಚೀಣಾದಲ್ಲಿವೆಯಂತೆ. ಆದ್ದರಿಂದ ಕಷ್ಟ ಮನುಷ್ಯರಿಗಷ್ಟೆÃ ಅಲ್ಲ ನಿಸರ್ಗಕ್ಕೂ ಬಂದಿದೆ ಸಾರ್. ನಿಸರ್ಗಪ್ರಿಯನಾದ ತಮಗೆ ಕಷ್ಟ ಬಂದಿದ್ದನ್ನು ನಾನು ಸಹಿಸಿಗಳಕ್ಕಾಗ್ತಯಿಲ್ಲ”
“ನೋಡಿ, ನಾಲ್ಕು ವರ್ಷ ಜೈಲಲ್ಲಿ ಇದ್ದ ನನಗೆ ನಾಲ್ಕು ದಿನ ಇರೋದು ಕಷ್ಟ ಅಲ್ಲ. ನನ್ನ ಹಳೆ ಕೊಠಡಿಯನ್ನ ನಮ್ಮ ಜೈಲರ್ ಮಿತ್ರರು ನನ್ನ ಸ್ವಂತ ಕೊಠಡಿ ತರ ಮಾಡಿದಾರೆ ಗೊತ್ತ”
“ಅದನ್ನ ಪರ್‌ಚೇಸ್ ಮಾಡಿದ್ರೆ ಹೇಗೆ ಸಾರ್”
“ಯಾಕೆ ಹಾಗೇಳ್ತಿರಿ”
“ವಿನಾಕಾರಣ ಒಬ್ಬ ಅಮಾಯಕನ್ನ ಇ.ಡಿ ಡೀಲ್‌ನಲ್ಲಿ ಸಿಕ್ಕಿಸಿ ಜೈಲಿಗಾಕಿದ ನೆನಪಿಗೆ ಮತ್ತು ಸರಕಾರ ಅದೇಳಿದಂಗೆ ಕೇಳೊ ಈ ಪೊಲೀಸರಿಗೆ ಧಿಕ್ಕಾರದ ರೂಪವಾಗಿ ಅದೊಂದು ಸ್ಮಾರಕವಾಗಲಿ, ಅಂತ ಹೇಳಿದೆ ಸಾರ್”
“ನಿಮ್ಮ ಅಲೋಚನೆ ಸರಿ, ಅದ್ರೆ ಜೈಲಿರೋವರಿಗೆ ಅದನ್ನ ಗಾಲಿ ಜನಾರ್ದನ ರೆಡ್ಡಿ ಕೊಠಡಿ ಅಂತ ನಾಮಕರಣ ಮಾಡಿಬಿಡ್ತಾರೆ. ಆದ್ದರಿಂದ ಅದನ್ನ ಕೊಳ್ಳೊÃದು ಬೇಕಾ? ನಾನು ಬೇಗ ಬರ್ತೀನಿ. ನಮ್ಮ ಮನೇಲಿ ಕುಳಿತಿರಿ”
“ಕಷ್ಟ ಆಗುತ್ತೆ ಸಾರ್. ಸಾವಿರಾರು ಕೋಟಿ ಒಡೆಯ ಕೊಡುಗೈ ದಾನಿ ವಿನಾಕಾರಣ ಜೈಲಿನಲ್ಲಿರುವಾಗ ಅಂತವನ ಮನೇಲಿದ್ರೆ ದುಃಖ ತಡಿಯಕ್ಕಾಗಲ್ಲ. ಯಾಕಂದ್ರೆ ಸಾವಿರಾರು ಕೋಟಿಯನ್ನ ಕೈಯಲ್ಲೂ ಮುಟ್ಟದೆ ವ್ಯವಹಾರ ಮಾಡಿದಂತಹ ನೀವು ಇಪ್ಪತ್ತು ಕೋಟಿಗೆ ಕೈಚಾಚಿದ್ರಿ ಅನ್ನದನ್ನ ಇಡೀ ಕರ್ನಾಟಕ ನಂಬುತಾಯಿಲ್ಲ ಸಾರ್. ಅದೊಂದೇ ಸಮಾಧಾನದ ವಿಷಯ ಸಾರ್”
“ದೇವರೂ ಕೂಡ ನಂಬುತಾಯಿಲ್ಲ. ಯಾಕೆ ಅಂದ್ರೆ ಭಗವಂತನೇ ನನಗೆ ಅಷ್ಟೊಂದು ಐಶ್ವರ್ಯ ಕೊಟ್ಟಿದ್ದಾನೆ. ನಾನು ಆತನಿಗೇ ಒಂದು ಕಿರೀಟವನ್ನ ಕೊಟ್ಟೆ ಗೊತ್ತ”
“ಕಿರೀಟ ಈಸಗೊಂಡ ತಿಮ್ಮಪ್ಪ ನಿಮ್ಮನ್ನ ಕಾಪಾಡಬೇಕಿತ್ತು ಸಾರ್”
“ಕಾಪಾಡ್ತನೆ ಸ್ವಲ್ಪ ತಡ ಆಗಬಹುದು. ಒಬ್ಬ ಪೋಲಿಸ್ ಮಗನನ್ನ ಕುಬೇರನನ್ನಾಗಿ ಮಾಡಿದ ಭಗವಂತ ನನ್ನನ್ನ ಯಾವತ್ತೂ ಕೈ ಬಿಟ್ಟಿಲ್ಲ. ನನ್ನನ್ನ ಅಪರಾಧಿ ಅಂತ ಪರಿಗಣಿಸೋದಕ್ಕೆ ಹೋರಾಡ್ತಯಿರೊ ನನ್ನ ವೈರಿಗಳಿಗೆ ಸರಿಯಾದ ಉತ್ತರ ಕೊಡೋದಕ್ಕೆ ನನ್ನ ಮಗಳ ಮದುವೆಯನ್ನು ಸಾವಿರಾರು ಕೋಟಿ ಖರ್ಚು ಮಾಡಿ ಮಾಡಿದೆ. ಅದೂ ನೋಟು ಬ್ಯಾನಾಗಿದ್ದ ಸಂದರ್ಭ. ಆಗೆಲ್ಲ ಭಗವಂತ ನಮಗೆ ಸಹಾಯ ಮಾಡಿದಾನೆ”
“ನೀವು ಬಿ.ಜೆ.ಪಿ.ಗೂ ಭಾರಿ ಸಹಾಯ ಮಾಡಿದ್ರಲ್ಲ ಸಾರ್”
“ಮೊದಲ ಸಮ್ಮಿಶ್ರ ಸರಕಾರ ರಚನೆಯಾದದ್ದೆÃ ನನ್ನಿಂದ. ನಾನು ಕುಮಾರಸ್ವಾಮಿಗೆ ನೂರೈವತ್ತು ಕೋಟಿ ರೂಪಾಯಿ ಕೊಟ್ಟಾಗ ಆತ ಎಲ್ಲ ಶಾಸಕರನ್ನು ರೆಸಾರ್ಟಿಗೆ ತಕ್ಕೊಂಡು ಹೋಗಿ ನೇರ ವಿಧಾನಸೌಧದ ಮುಂದಕ್ಕೆ ತಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ತಗೊಂಡ್ರು”
“ಹೌದ ಸಾರ್”
“ಇದು ನೂರಕ್ಕೆ ಇನ್ನೂರು ಪರಸೆಂಟು ನಿಜ. ಆದ್ರೆ ಅದನ್ನ ಅಲ್ಲಗಳದ್ರು. ಅದಕ್ಕೆ ಅವರಿಗೆ ಬೈಪಾಸ್ ಸರ್ಜರಿ ಆಯ್ತು”
“ಇಸಗೊಂಡ ದುಡ್ಡನ್ನ ಇಲ್ಲ ಅಂದ್ರೆ ಬೈಪಾಸಾಗುತ್ತ ಸಾರ್”
“ಅದು ಭಗವಂತನಿಗೆ ಬಿಟ್ಟ ವಿಚಾರ. ಬೈಪಾಸಾಗಬಹುದು ಅಥವಾ ಮಕ್ಕಳೆ ತೀರೋಗಬಹುದು. ಏನಾದ್ರು ಆಗಬಹುದು”
“ನಿಮ್ಮ ತರ್ಕ ನಿಜ ಸಾರ್ ನೀವೀಗಾಗ್ಲೆ ಹೇಳಿರೊ ತರ ವಿನಾಕಾರಣ ನಿಮ್ಮನ್ನ ಜೈಲಿಗಾಕಿದ ಸಿದ್ದರಾಮಯ್ಯನವರ ಮಗ ತೀರೋದ. ನಿಮ್ಮತ್ರ ಹಣ ತಗೊಂಡು ಇಲ್ಲವೇ ಇಲ್ಲ ಅಂದ ಕುಮಾರಣ್ಣನವರಿಗೆ ಬೈಪಾಸಾಯ್ತು. ಇದೇ ಈಗ ಅ್ಯಂಬಿಡೆಂಟ್ ಕಂಪನಿ ಮಾಲಿಕ ಸಯ್ಯದ್ ಅಹಮದ್ ಹತ್ರ ಇಪ್ಪತ್ತು ಕೋಟಿ ತಗೊಂಡು ಆತನಿಗೂ ನನಗೂ ಯಾವ ವ್ಯವಹಾರವೂ ನಡೆದಿಲ್ಲ, ನನ್ನ ಜೊತೆ ಇರೋ ಆತನ ಫೋಟೊ ಯಾವಾಗಲೊ ಆತನೇ ಬಂದು ನನಗೆ ಗೊತ್ತಿಲ್ಲದಂಗೆ ತಗಿಸಿಕೊಂಡಿದ್ದು ಅಂತ ನೀವು ಏನೇ ಸಬೂಬು ಹೇಳಿದ್ರೂ ಕೂಡ ಜೈಲುಪಾಲಾದ್ರಿ. ಇದನ್ನೆಲ್ಲಾ ನೋಡಿದ್ರೆ ನಿಮ್ಮ ಭಗವಂತನ ಕ್ರಮಗಳು ಒಂಥರಾ ಸರಿಯಾಗಿವೆ ಸಾರ್”
“ನೀವು ಹೇಳಿದ ಮಾತುಗಳು ಅರ್ಥ ಆಗ್ತಾಯಿಲ್ಲ”
“ಹೊರಗಡೆ ಬಂದ್ ಮೇಲೆ ನಿಮ್ಮ ವಕೀಲರ ಪೀಜು ಕೊಡಿ ಸಾರ್”
“ನಮ್ಮದು ಕೊಡುಗೈ ಕುಟುಂಬ”
“ಥೂ..ಥೂ…ಥೂತ್ತೆÃರಿ!!”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...