Homeಪ್ರಪಂಚಮತ್ತಷ್ಟು ಜೈವಿಕ ಸಂಗತಿಗಳು

ಮತ್ತಷ್ಟು ಜೈವಿಕ ಸಂಗತಿಗಳು

- Advertisement -
- Advertisement -

ಎಕ್ಸ್-ವಾಯ್ ಮಕ್ಕಳು ಟೆಸ್ಟೊಸ್ಟೆರಾನ್ ಉತ್ಪತ್ತಿ ಮಾಡಿದರೂ ಟೆಸ್ಟೊಸ್ಟೆರಾನ್‌ಗೆ ಸ್ಪಂದಿಸುವ ಅಣುಗಳನ್ನು ಸಂಪೂರ್ಣವಾಗಿ  ಅಥವಾ ಭಾಗಶಃವಾಗಿ  ಹೊಂದದೇ ಇರಬಹುದು. ಇದರಿಂದ ಗಂಡಿನ ಲಕ್ಷಣಗಳ ಬೆಳವಣಿಗೆಯಲ್ಲಿ ಅನೇಕ ವಿಧದ ಬದಲಾವಣೆಗಳಾಗಬಹುದು. ಕೆಲವರು ಗರ್ಭಾಶಯದಲ್ಲಿದ್ದಾಗ ಟೆಸ್ಟೊಸ್ಟೆರಾನ್ ಹಾರ್ಮೋನಿಗೆ ಒಂದು ತರಹ ಪ್ರತಿಕ್ರಿಯಿಸಿ, ಹದಿವಯಸ್ಸಿನಲ್ಲಿ ಇನ್ನೊಂದು ತರಹ ಪ್ರತಿಕ್ರಿಯಿಸಬಹುದು. ಜನ್ಮದ ಸಮಯದಲ್ಲಿ ಅವರ ದೇಹ ವೈದ್ಯರಿಗೆ ಹೆಣ್ಣಾಗಿ ಕಂಡರೂ ಪ್ರೌಢಾವಸ್ಥೆಯ ನಂತರ ‘ಗಂಡಿನಂತೆ’ ಬದಲಾವಣೆಯಾಗಬಹುದು. ಅದರಂತೆಯೇ ಎಕ್ಸ್ಎಕ್ಸ್ ಮಕ್ಕಳು ಹಲವಾರು ಕಾರಣಗಳಿಂದಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟೊÃಸ್ಟೆರಾನ್ (ಪ್ರೊಜೆಸ್ಟೆರಾನ್ ಎನ್ನುವ ಸ್ತಿçà ಹಾರ್ಮೋನಿಂದ ಉತ್ಪತ್ತಿಯಾದ) ಉತ್ಪತ್ತಿ ಮಾಡಿದಲ್ಲಿ ಜನನಾಂಗಗಳು ವಿವಿಧ ಸ್ತರಗಳಲ್ಲಿ ಗಂಡಿನಂತೆ ಅಭಿವೃದ್ಧಿ ಹೊಂದಬಹುದು ಹಾಗೂ ಶಿಶ್ನದಂತೆ ಕಾಣುವ ಅಂಗದೊಂದಿಗೆ ಹುಟ್ಟಬಹುದು. ಹಾಗಾಗಿ, ಗಂಡು ಮತ್ತು ಹೆಣ್ಣು ಎನ್ನುವ ಸರಳ ವರ್ಗೀಕರಣದಿಂದ ಅನೇಕ ವಿಧಗಳಲ್ಲಿ ಇಂಟರ್‌ಸೆಕ್ಸ್ ಮಕ್ಕಳು ಬೇರೆಯಾಗಿರಬಹುದಾಗಿದೆ. ಜನಿಸಿದ 2000 ಮಕ್ಕಳಲ್ಲಿ 1 ಮಗುವಿನ ದೇಹದಲ್ಲಿ ಅಸ್ಪಷ್ಟವಾದ ಜನನಾಂಗಗಳು ಇರಬಹುದೆಂದು ಅಂದಾಜಿಸಲಾಗಿದೆ ಹಾಗೂ ಅವರನ್ನು ಇಂಟರ್‌ಸೆಕ್ಸ್ ಎಂದು ವರ್ಗೀಕರಿಸಲಾಗುತ್ತದೆ. ಆದರೆ ನಾವು ನೋಡಿದಂತೆ, ಹಲವಾರು ಇಂಟರ್‌ಸೆಕ್ಸ್ ವಿಧಗಳಲ್ಲಿ ಜನನಾಂಗಗಳು ಸ್ಪಷ್ಟವಾಗಿ ಗಂಡು ಅಥವಾ ಹೆಣ್ಣಿನಂತೆ ತೋರಬಹುದು, ಆದರೆ ಇದು ಅವರ ಅನುವಂಶಿಕ ರಚನೆಯಿಂದ ಬೇರೆಯಾಗಿರಬಹದು. ಆನ್ ಫಾಸ್ಟೊà ಸ್ಟರ್ಲಿಂಗ್‌ನಂತಹ ವಿಜ್ಞಾನಿಗಳು ಸೂಚಿಸುವುದೇನೆಂದರೆ, ಒಟ್ಟಾರೆ ಜನಸಂಖ್ಯೆಯ ಶೇಕಡಾ ಎರಡರಷ್ಟು ಜನರು ಎದ್ದುಕಾಣದ, ಗೌಣವಾಗಿರುವ ಇಂಟರ್‌ಸೆಕ್ಸ್ ವಿಧಗಳನ್ನು ಹೊಂದಿರಬಹುದು.
ಇವೆಲ್ಲದಕ್ಕೂ ಮತ್ತು ಟ್ರಾನ್ಸ್ಜೆಂಡರ್ (ಅಂತರಲಿಂಗಿ) ಆಗಿರುವುದಕ್ಕೂ ಸಂಬಂಧವೇನು? ಮೆದುಳು. ಗಂಡು ಹಾರ್ಮೋನ್ ಆದ ಟೆಸ್ಟೊÃಸ್ಟೆರಾನ್ ಮತ್ತು ಹೆಣ್ಣು ಹಾರ್ಮೋನ್ ಈಸ್ಟೊçÃಜೆನ್‌ಗಳಿಗೆ ಸ್ಪಂದಿಸುವುದಕ್ಕಾಗಿ ಮೆದುಳಿನಲ್ಲಿ ಕೆಲವು ಕ್ಷೆÃತ್ರಗಳಿವೆ ಹಾಗೂ ಈ ಹಾರ್ಮೋನುಗಳು ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತೆ ಎನ್ನುವುದು ಕೆಲವು ವಂಶವಾಹಿ (ಜೀನ್)ಗಳ ಮೇಲೆ ಅವಲಂಬಿಸಿರುತ್ತೆ. ಆದುದರಿಂದ ಟ್ರಾನ್ಸ್ಜೆಂಡರ್ ಗುರುತು ಇದಕ್ಕೆ ಸಂಬಂಧಿಸಿರುತ್ತೆ. ಹಾಗಾಗಿ, ಹುಟ್ಟಿನ ಸಮಯದಲ್ಲಿ ವೈದ್ಯರು ಗಂಡು ಅಥವಾ ಹೆಣ್ಣು ಎಂದು ವರ್ಗೀಕರಿಸಿದರೂ, ಅವರು ಬೆಳೆಯುತ್ತ ಹೋದಂತೆ ಅವರ ಮಿದುಳಿನ ಮೇಲೆ ಅವರ ಜೈವಿಕ ಲಿಂಗಕ್ಕೆ ವಿರುದ್ಧವಾದ ಹಾರ್ಮೋನ್ ಪ್ರಭಾವ ಬೀರಬಹದು. ಎಕ್ಸ್ ಎಕ್ಸ್ ಮಕ್ಕಳಲ್ಲಿ ಅವರ ಬೆಳವಣಿಗೆಯ ನಿರ್ಣಾಯಕ ಹಂತಗಳಲ್ಲಿ ಗಂಡಿನ ಹಾರ್ಮೋನುಗಳು ಪ್ರಭಾವ ಬೀರಿದಾಗ (ತಾಯಿಯ ಗರ್ಭದಿಂದ ಅಥವಾ ಮಗುವಿನ ತನ್ನದೇ ಕೋಶಗಳಿಂದ) ಎಕ್ಸ್ವೈ ಮಕ್ಕಳಿಗೆ ಹೋಲುವ ಬೆಳವಣಿಗೆಗಳು ಕಾಣಿಸಿಕೊಳ್ಳಬಹುದು. ಅದರಂತೆ, ಎಕ್ಸ್ವೈ ಮಕ್ಕಳಲ್ಲಿ ಹೆಣ್ಣಿನ ಹಾರ್ಮೋನುಗಳು ಇದ್ದರೆ ಅಥವಾ ಗಂಡಿನ ಹಾರ್ಮೋನುಗಳಿಗೆ ಮೆದುಳು ಸ್ಪಂದಿಸದೇ ಇದ್ದರೆ ಆ ಎಕ್ಸ್ವೈ ಮಕ್ಕಳು ಹೆಣ್ಣಿನ ಸ್ವರೂಪವನ್ನು ಬೆಳೆಸಿಕೊಳ್ಳಬಹುದು. ಇವರುಗಳ ಮೆದುಳು ಎಕ್ಸ್ಎಕ್ಸ್ ಹೆಣ್ಣುಗಳ ಮೆದುಳಿನÀ ಹಾಗೆಯೇ ಬದಲಾವಣೆ ಹೊಂದಬಹುದು. ಮೆದುಳಿನ ಈ ಕ್ಷೆÃತ್ರಗಳ ಬಗ್ಗೆ ಹಾಗು ಟ್ರಾನ್ಸ್ಜೆಂಡರ್ ಮಕ್ಕಳು ಮತ್ತು ವಯಸ್ಕರು ತಮ್ಮ ದೇಹದ ಬಗ್ಗೆ ಪ್ರಬಲವಾದ ಭಾವನೆಗಳನ್ನು ಹೇಗೆ ಹೊಂದಿರುತ್ತಾರೆ ಎನ್ನುವುದರ ಬಗ್ಗೆ ನಂತರ ವಿವರಿಸುವೆ. ಆದರೆ, ಸದ್ಯಕ್ಕೆ ಒಂದೇ ಒಂದು ಜೈವಿಕ ಲಿಂಗವನ್ನು ಹೊಂದದೇ ಇರುವುದಕ್ಕೆ ಅನೇಕ ಕಾರಣಗಳು ಮತ್ತು ಸಾಧ್ಯತೆಗಳಿವೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳೊÃಣ.
ನಮ್ಮ ಕ್ರೊÃಮೊಸೋಮ್‌ಗಳು, ವೃಷಣ/ಅಂಡಾಶಯಗಳ ರಚನೆ, ಜನ್ಮದ ಸಮಯದಲ್ಲಿ ಹಾರ್ಮೋನುಗಳು, ಜನನಾಂಗಗಳು ಮತ್ತು ಪ್ರೌಢಾವಸ್ಥೆಯಲ್ಲಿ ಹಾರ್ಮೋನುಗಳು, ಇವೆಲ್ಲವುಗಳೂ ನಮ್ಮ ದೇಹ ಮತ್ತು ಮಿದುಳಿನ ಬೆಳವಣಿಗೆಯಲ್ಲಿ ಪರಿಣಾಮ ಬೀರುತ್ತವೆ. ಒಂದು ವೇಳೆ ಇವುಗಳು ಅಸ್ಪಷ್ಟ ಜನನಾಂಗಗಳನ್ನು ಅಥವಾ ಅಸ್ಪಷ್ಟ ಲೈಂಗಿಕ ಲಕ್ಷಣಗಳನ್ನು ಸೃಷ್ಟಿಸಲು ಕಾರಣವಾದರೆ ಹಾಗೂ ಇವಗಳನ್ನು ವೈದ್ಯರು ಗುರುತಿಸಿದರೆ ಆ ಮಕ್ಕಳನ್ನು ಇಂಟರ್‌ಸೆಕ್ಸ್ ಎಂದು ಕರೆಯಲಾಗುತ್ತದೆ; ಆದರೆ, ನಮ್ಮಲ್ಲಿ ಅನೇಕರು ವೈದ್ಯಕೀಯವಾಗಿ ಇಂಟರ್‌ಸೆಕ್ಸ್ ಆಗಿದ್ದರೂ ಆ ವಾಸ್ತವದ ಅರಿವು ಇಲ್ಲದೇ ಇರಬಹುದು.

– ಕಾರ್ತಿಕ್ ಬಿಟ್ಟು
ಅನುವಾದ: ರಾಜಶೇಖರ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...