Homeರಾಜಕೀಯಅನಂತಕುಮಾರ್ ಏಕೆ ಎಲ್ಲರ ಶ್ರದ್ಧಾಂಜಲಿ ಪಡೆದರು?

ಅನಂತಕುಮಾರ್ ಏಕೆ ಎಲ್ಲರ ಶ್ರದ್ಧಾಂಜಲಿ ಪಡೆದರು?

- Advertisement -
- Advertisement -

ಕೇಂದ್ರ ಸಚಿವ, ಕರ್ನಾಟಕದ ಭಾಜಪ ನಾಯಕ ಅನಂತಕುಮಾರ್ ಅವರು ಅಕಾಲಿಕ ನಿಧನ ಹೊಂದಿದ್ದಾರೆ. ಅವರ ಸಾವಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ, ಶ್ರದ್ಧಾಂಜಲಿಗಳ ಮಹಾಪೂರವೇ ಹರಿದು ಬರುತ್ತಿದೆ. ಅಚ್ಚರಿ ಎಂದರೆ ಅವರ ಭಾಜಪ ಅಭಿಮಾನಿಗಳಷ್ಟೆÃ ಅವರ ತಾತ್ವಿಕ ವಿರೋಧಿಗಳೂ ನಮನ ಸಲ್ಲಿಸುತ್ತಿದ್ದಾರೆ. ಸಾವಿನ ಸಂದರ್ಭದಲ್ಲಿ ಕುಹಕದ ವಿಕೃತಿಗಳು ಇರಕೂಡದು ಎಂಬ ನಡವಳಿಕೆ ಎಲ್ಲಾ ನಾಗರಿಕತೆಗಳಲ್ಲೂ ಇದೆ. ನಮ್ಮಲ್ಲೂ ಅಳಿದಿಲ್ಲ ಎಂಬುದು ಗಮನಾರ್ಹ.
ಈ ಗೌರವ ಸಲ್ಲಿಕೆ ಅನಂತಕುಮಾರ್ ಅವರ ರಾಜಕೀಯ, ತಾತ್ವಿಕ ವಿರೋಧಿಗಳಿಂದ ಬಂದಿದೆ ಎಂಬುದು ಈ ಮಂದಿಯ ಸಾಂಸದಿಕ ನಡವಳಿಕೆಯನ್ನು ತೋರಿಸುತ್ತದೆ. ಹಲವರು ಗಮನಿಸಿದಂತೆ, ಇದೇ ಕಾಂಗ್ರೆಸ್‌ನ ಯಾರಾದರೂ ಸತ್ತಿದ್ದರೆ, ಭಾಜಪ/ ಹಿಂದುತ್ವ ಬಳಗದ ವಿಕೃತರ ಪೈಶಾಚಿಕ ಪೋಸ್ಟ್ಗಳು ಹೇಗಿರುತ್ತಿದ್ದವು ಎಂದು ಊಹಿಸಲೂ ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಈ ಸಂತಾಪ ತೋರಿದ ಭಾಜಪ ವಿರೋಧಿಗಳೇ ಈ ದೇಶದ ಪ್ರಜಾಸತ್ತೆಯನ್ನು ಉಳಿಸುವ ಶಕ್ತಿ.
ಅನಂತಕುಮಾರ್ ಅವರಿಗೆ ಈ ಶ್ರದ್ಧಾಂಜಲಿ ಹೇಗೆ ಹರಿದುಬಂತು? ಕಾಟಾಚಾರಕ್ಕೊÃ, ಹಿಂದುತ್ವದ ವಿಕೃತರ ಎದುರು, ‘ನಾವು ನೋಡಿ ಎಷ್ಟು ಶಿಷ್ಟವಾಗಿ ಪ್ರತಿಕ್ರಿಯಿಸುತ್ತಿದ್ದೆÃವೆ’ ಎಂಬ ತೋರುಗಾಣಿಕೆ ಈ ಪೋಸ್ಟುಗಳಲ್ಲಿ ಕಾಣಿಸಲಿಲ್ಲ. ಇದರರ್ಥ ಅನಂತಕುಮಾರ್ ವ್ಯಕ್ತಿತ್ವ ಯಾವುದೋ ಬಗೆಯಲ್ಲಿ ನಮ್ಮನ್ನು ತಟ್ಟಿದೆ.
ನಮ್ಮ ಸಾಮಾಜಿಕ ,ರಾಜಕೀಯ ಬದುಕಿನಲ್ಲಿ ದಿನಗಳೆದಂತೆ ಕೆಡುತ್ತಿದೆ, ಮೌಲ್ಯಗಳು ಶಿಥಿಲವಾಗುತ್ತಿದೆ ಎಂಬ ನಂಬಿಕೆ ದೃಢವಾಗುವಂಥಾ ಪುರಾವೆಗಳು ಹಿಡಿಯುತ್ತಲೇ ಇವೆ. ಇದನ್ನು ಠಿಡಿogಡಿessive ಆegeಟಿeಡಿಚಿಣioಟಿ ಅಂತ ಕರೆಯುವುದಿದೆ. ಅಂದರೆ ಒಂದು ನಾಗರಿಕತೆ ವಿಕಾಸಗೊಂಡು ಉತ್ತಮವಾಗುವ ಬದಲು ದಿನೇ ದಿನೇ ಇನ್ನಷ್ಟು ಕೆಡುತ್ತಾ, ಕೊಳೆಯುತ್ತಾ ಹೋಗುತ್ತಿದೆ ಎಂಬ ಹತಾಶೆ ಇದು. ಹಿಂದಿನ ಕಾಲ ಎಷ್ಟು ಚೆನ್ನಾಗಿತ್ತು ಎಂಬ ಹಿನ್ನೊÃಟದ ಹಳಹಳಿಕೆ ಎಲ್ಲಾ ತಲೆಮಾರಿಗೂ ಇದೆ. ಆದರೆ ಈ ದುಗುಡ ಅದಕ್ಕಿಂತ ಗುಣಾತ್ಮಕವಾಗಿ ಭಿನ್ನ. ಅಂದರೆ ಹಿಂದಿನದ್ದಕ್ಕಿಂತ ಈಗಿರುವುದು ಇನ್ನಷ್ಟು ಕೆಡುಕಾಗಿ ತೋರುವ ಬಗೆ. ಗುಂಡೂರಾವ್ ಬಂದಾಗ ಅರಸು ಬೆಟರ್ ಅನ್ನಿಸುತ್ತೆ. ಮೋದಿ ಕಂಡಾಗ ಇಂದಿರಾ ಕೊಡುಗೆ ಕಾಡುತ್ತದೆ. ಹೀಗೆ.. (ಸ್ವತಃ ಮೋದಿಯಂಥವರಿಗೆ ಈ ಚಾರಿತ್ರಿಕ ಗ್ರಹಿಕೆ ಅರ್ಥವಾಗುವುದಿಲ್ಲ, ಅದು ಬೇರೆ ಮಾತು.)
ನಾಗರಿಕತೆಯ ಮಾನದಂಡದಲ್ಲಿ ಹಿಂದಿನದ್ದು ಉತ್ತಮ ಎಂಬ ಗ್ರಹಿಕೆಗೆ ಇಂಬು ನೀಡುವಂಥಾ ನಡಾವಳಿಗಳು ಜರುಗಿದಷ್ಟೂ ಸಾಮೂಹಿಕ ಸ್ಮೃತಿಯಲ್ಲಿ ಇದು ಗಟ್ಟಿಯಾಗುತ್ತಾ ಹೋಗುತ್ತದೆ. ಈ ಮಾನದಂಡವನ್ನು ಪ್ರಜೆಗಳು ನಿರ್ವಚಿಸುವ ರೀತಿ ಸುಲಭ ಅಕಡೆಮಿಕ್ ಗ್ರಹಿಕೆಗೆ ನಿಲುಕುವಂಥಾದ್ದಲ್ಲ.
ಅನಂತಕುಮಾರ್ ಅವರ ಸಾವಿನ ಹಿನ್ನೆಲೆಯಲ್ಲಿ ಇದು ಪ್ರಸ್ತುತ. ಸ್ವತಃ ಅನಂತಕುಮಾರ್, ಅಧ್ವಾನಿಯವರು ಕಟ್ಟೆಯೊಡೆದು ಬಿಟ್ಟ ರೂಕ್ಷ ಕೋಮು ಧ್ರುವೀಕರಣದ ಕೂಸು. ಆದರೆ ಅನಂತಕುಮಾರ್ ಈ ಕೋಮು ಕಿರುಚಾಟದ ಭಾಗವಾಗಿರಲಿಲ್ಲ. ಅದರ ಸೂತ್ರಧಾರರಾಗಿದ್ದರು. ಹಲವರು ಗುರುತಿಸಿದಂತೆ ಅವರು ತೆರೆಮರೆಯ ಕೆಲಸಗಾರ. ‘90ರ ದಶಕದಲ್ಲಿ ನಿಷ್ಕರುಣ ಲೆಕ್ಕಾಚಾರದ ರಾಜಕಾರಣದ ಪ್ರತೀಕವಾಗಿ ಕಂಡಿದ್ದ ಅದ್ವಾನಿ ಮೋದಿ ಆಗಮನದ ಬಳಿಕ ಬಸವಳಿದ ಪಾಳೇಗಾರನ ತರ ಕಾಣುತ್ತಿದ್ದಾರೆ. ಅದ್ವಾನಿಯ ಸಂಸದೀಯ ನಡವಳಿಕೆ ಆಪ್ಯಾಯಮಾನವಾಗಿ ಕಾಣುತ್ತಿದೆ. ಅನಂತಕುಮಾರ ಕೂಡಾ ಅಷ್ಟೆÃ. ಬಾಯಿಗೆ ಬಂದ ಹಾಗೆ ಮಾತಾಡುವ, ಬೆಂಕಿ ಇಡುವ ಅಸಭ್ಯ ಮಾತೇ ನಾಯಕತ್ವದ ಲಕ್ಷಣ ಎಂಬಂತೆ ವರ್ತಿಸುವ ಹಿಂದುತ್ವದ ಪಡ್ಡೆ ಸ್ವಭಾವದೆದುರು, ಅನಂತಕುಮಾರ್ ತಾವು ರೂಢಿಸಿಕೊಂಡು ಬಂದಿದ್ದ ತಾಳ್ಮೆ, ಭಾಷೆಯ ಸಂಯಮ, ಸಂವಾದದ ಜಾಣ್ಮೆಯ ಕಾರಣಕ್ಕೆ ಈಗ ಹಿತವಾಗಿ ಕಾಣಿಸುತ್ತಿದ್ದಾರೆ. ನಮ್ಮ ಕಾಲದ ಪ್ರಭಾವ ಇದು. ನಾಲಗೆ ಅಷ್ಟಾಗಿ ಸಡಿಲು ಬಿಡದ ಅನಂತಕುಮಾರ್ ವಿವಾದಾತ್ಮಕ ವಿಷಯಗಳು ಬಂದಾಗ ಮೆತ್ತಗೆ ದೂರ ಉಳಿವ ಜಾಣ್ಮೆ ಉಳ್ಳವರು. ಮೈಕ್ ಕಂಡ ತಕ್ಷಣ ಬೆದೆಗೆ ಬಂದ ಹೋರಿಗಳ ತರ ಆಡುವ ಇತರರ ಎದುರು ಅನಂತಕುಮಾರ್ ಪರವಾಗಿಲ್ಲ ಅನ್ನಿಸುತ್ತದೆ.
ಇನ್ನು ಆಡಳಿತಾತ್ಮಕ ದಕ್ಷತೆ ಇತ್ಯಾದಿಗಳು ಹೀಗೆ ನೀಗಿಕೊಂಡಾಗ ಮುನ್ನೆಲೆಗೆ ಬರುವ ಸಂಗತಿ. ಮೋದಿ ಸರ್ಕಾರದ ದುಸ್ಥಿತಿ ಹೇಗಿದೆಯೆಂದರೆ ಬೆರಳೆಣಿಕೆಯ ಸಚಿವರು ಬಿಟ್ಟರೆ ಉಳಿದವರ ಹೆಸರೂ ಜನರಿಗೆ ಗೊತ್ತಿಲ್ಲ. ಈ ದೃಷ್ಟಿಯಲ್ಲಿ ಅನಂತ್ ಕುಮಾರ್ ಸುಮಾರಾಗಿ ಕೆಲಸ ನಿರ್ವಹಿಸಿದ್ದಾರೆ. ಅದಕ್ಕಿಂತಲೂ ಈಗ ಅವರ ಬಗ್ಗೆ ಸದಭಿಪ್ರಾಯ ಮೂಡಿರುವುದು ದೆಹಲಿಯ ಚಕ್ರವ್ಯೂಹದಲ್ಲಿ ಕನ್ನಡ/ ಕರ್ನಾಟಕದ ಕೆಲಸಗಳ ಬಗ್ಗೆ ವೈಯಕ್ತಿಕ ನೆಲೆಯಲ್ಲಿ ಸ್ಪಂದಿಸಿದ ಬಗ್ಗೆ. ಹಲವಾರು ಹೆಸರಾಂತ ವ್ಯಕ್ತಿಗಳ ಜೊತೆ ಅನಾಮಿಕರೂ ತಮಗೆ ಅನಂತಕುಮಾರ್ ಸ್ಪಂದಿಸಿದ ಬಗ್ಗೆ ಬರೆದಿದ್ದಾರೆ. ಈ ಗುಡ್‌ವಿಲ್ ರಾಜಕಾರಣಿಗೆ ಆಪತ್ಕಾಲದ ಗಂಟು. ಮುಖ್ಯತಃ ಪಕ್ಷ/ ಸೈದ್ಧಾಂತಿಕ ವಿರೋಧಿಗಳ ಜೊತೆಯೂ ಒಂದು ಕಿಂಡಿ ಸದಾ ತೆರೆÀದಿಟ್ಟುಕೊಂಡ ವ್ಯಕ್ತಿ ಅನಂತಕುಮಾರ್.
“ಬರಡು ಬಯಲಲ್ಲಿ ತುಂಬೆ ಗಿಡವೂ ಮರವೇ..” ಎಂಬ ಮಾತಿದೆ. ಹಿಂದುತ್ವದ ಅಮಾನುಷ ವಿಕೃತಿಯ ಪ್ರೆÃತಕುಣಿತದ ನಡುವೆ ಸೌಜನ್ಯದ ಸಂವಾದದ ಕಲೆ ರೂಢಿಸಿಕೊಂಡಿದ್ದ ಅನಂತಕುಮಾರ್ ಹೊಂಗೆ ಮರದ ಹಾಗೆ ಕಂಡಿದ್ದು ಅಚ್ಚರಿ ಅಲ್ಲ. ದೊಡ್ಡ ನಾಯಕನ ವಿಶಿಷ್ಟ ಗುಣ ಅವರಲ್ಲಿ ಕಾಣಿಸಲಿಲ್ಲ. ದಿವಾನರ ಶೈಲಿಯ ಪ್ರಭಾವಿ ಗುಣವಷ್ಟೆÃ ಅವರಲ್ಲಿದ್ದದ್ದು. ಯುವಜನರಿಗೆ ಸ್ಪಂದಿಸುವ ಸುವರ್ಣಾವಕಾಶ ತಟ್ಟೆಯಲ್ಲಿಟ್ಟು ಕೊಟ್ಟಾಗಲೂ ಕೆಡವಿ ಕೂತ ಅನಂತಕುಮಾರ ಹೆಗ್ಡೆಯಂಥಾ ಅಪ್ರಬುದ್ಧರನ್ನು ಕಂಡಾಗ ಈ ಸೀನಿಯರ್ ಅನಂತಕುಮಾರ್ ಗಮನ ಸೆಳೆಯುತ್ತಾರೆ!!! ಪುಣ್ಯಕ್ಕೆ ಅವರು ಅಧ್ವಾನಿ, ಯೆಡಿಯೂರಪ್ಪನವರ ತರ ನಿಸ್ತೆÃಜಗೊಂಡು ನಿರ್ಗಮನದ ಸಿದ್ಧತೆಯಲ್ಲಿರುವ ನಾಯಕನ ತರ ಕಾಣಿಸಲಿಲ್ಲ. ಉತ್ತುಂಗದಲ್ಲಿ ನಿರ್ಗಮಿಸಬೇಕು ಎನ್ನುವ ಆಸೆ ಮನುಷ್ಯನಿಗಿರುತ್ತದೆ. ಆದರೆ ಅದು ಕೈಗೂಡುವುದು ಕಡಿಮೆ. ಈ ಕಾಲದಲ್ಲಿ ಹರಿ ಚಿತ್ತವೆಂಬುದು ಪ್ರಜಾ ಚಿತ್ತ. ಆದರೆ ಅನಂತಕುಮಾರ್ ವಿಷಯದಲ್ಲಿ ವಿಧಿ ಕೊಂಚ ಕ್ರೂರವಾಯಿತು.

  • ಕೆ.ಪಿ.ಸುರೇಶ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...