Homeಮುಖಪುಟವಿರೋಧ ಅಂದರೇನು, ವಿರೋಧ ಪಕ್ಷ ಅಂದರ ಏನು? ನಿಮಗೇನಾರ ಗೊತ್ತಾ?

ವಿರೋಧ ಅಂದರೇನು, ವಿರೋಧ ಪಕ್ಷ ಅಂದರ ಏನು? ನಿಮಗೇನಾರ ಗೊತ್ತಾ?

- Advertisement -
- Advertisement -

ನಿಮ್ಮಲ್ಲಿ ವಿರೋಧ ಪಕ್ಷದ ಪರವಾಗಿ ಇರುವವರು ಯಾರು? ಹೋಗಲಿ ವಿರೋಧ ಪಕ್ಷ ಅಂದರ ಏನು? ಹೋಗಲಿ ಆತಲಾಗ ವಿರೋಧ ಅಂದ್ರ ಏನು ?

ಈ ಗಹನವಾದ ವಿಷಯ ಇಂದಿನ ಖೋಲಿಯ ವಸ್ತು.

ರಾಜಕೀಯ ಶಾಸ್ತ್ರ ಓದೋ ಹುಡುಗರ ನಡುವ ಒಂದು ಬಹುಚರ್ಚಿತ ಮಾತು ಐತಿ : “ನಮ್ಮ ಸಂವಿಧಾನದಾಗ ಆಡಳಿತ ಪಕ್ಷ ಅನ್ನೋ ಪದ ಇಲ್ಲಾ. ಆದರ ವಿರೋಧ ಪಕ್ಷ ಅನ್ನೋ ಪದ ಐತಿ’. ಈ ಮಾತು ಯಾಕ ಹೇಳತಾರ ಅಂದ್ರ, “ಭಾರತ ಅನ್ನೋದು ಆಡಳಿತ ಪಕ್ಷ ಕೇಂದ್ರಿತ ಪ್ರಜಾಪ್ರಭುತ್ವ ಅಲ್ಲ, ಅದು ಸಮ್ಮಿಳಿತ ಪ್ರಜಾಪ್ರಭುತ್ವ, ಇದರಲ್ಲಿ ವಿರೋಧ ಪಕ್ಷಕ್ಕೆ ಭಾಳ ಪ್ರಾಮುಖ್ಯತೆ ಇದೆ’ ಅಂತ ತಿಳಿಸಲಿಕ್ಕೆ.

ಬ್ರಿಟಿಷ್ ಸರ್ಕಾರದಾಗ ವಿರೋಧ ಪಕ್ಷ ಅಂದ್ರ ಬಹಳ ಗೌರವ. ವಿರೋಧ ಪಕ್ಷದ ನಾಯಕನಿಗೆ ಛಾಯಾ ಪ್ರಧಾನಿ ಅಂತ, ಇತರ ನಾಯಕರಿಗೆ ಛಾಯಾ ಕೃಷಿ ಸಚಿವ, ಛಾಯಾ ಹಣಕಾಸು ಸಚಿವ, ಛಾಯಾ ರಕ್ಷಣಾ ಸಚಿವ, ಇತ್ಯಾದಿ ಹೆಸರುಗಳಿಂದ ಕರೀತಾರ.

ಅವರು ತಮಗೆ ವಹಿಸಿಕೊಟ್ಟ ವಿಷಯಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಸಂಸತ್ತಿನಲ್ಲಿ ಮಾತಾಡತಾರ. ಅಲ್ಲದೇ ಪ್ರತಿ ಬಾರಿ ಆ ಕ್ಷೇತ್ರದ ಬಗ್ಗೆ ಸರಕಾರ ಏನಾದರೂ ಹೊಸಾ ನೀತಿ ಮಾಡಿದರ, ಅಥವಾ ಬದಲಾವಣೆ ಮಾಡಿದರ, ಅದಕ್ಕ ಸಂಬಂಧ ಪಟ್ಟ ಛಾಯಾ ಸಚಿವರು ಮಾತಾಡತಾರ. ನಮ್ಮಲ್ಲಿ ಹಂಗ ಯಾರಾರರ, ಏನೇನರ ತಲಿಯೊಳಗ ಒಂದು- ಒಂದು ಮಾತಾಡೋದಿಲ್ಲ.

ಹಂಗಾರ ನಮ್ಮ ಹಿರಿಯರೆಲ್ಲ – ಯಾರು ಯಾರು ಈ ದೇಶದ ಸ್ವಾತಂತ್ರ್ಯದ ಸಲುವಾಗಿ ಮನಿ ಬಿಟ್ಟು ಓಡಿಹೋಗಿ, ಸಾಲಿ, ನೌಕರಿ ಬಿಟ್ಟು ವರ್ಷಗಟ್ಟಲೆ ತಪ್ಪಿಸಿಕೊಂಡು ಅಡ್ಡಾಡಿದವರು- ಈ ದೇಶದ ಸರ್ಕಾರದ ಸ್ವರೂಪ ಹೆಂಗ ಇರಬೇಕು ಅಂತ ನಿರ್ಧಾರ ಮಾಡಿದಾಗ ಅವರ ತಲಿಯೊಳಗ ಏನು ಇತ್ತು?

ಅವರಿಗೆ ಈ ದೇಶ ಬಹಳ ದೊಡ್ಡದು, ಅದನ್ನ ಸರಿಯಾಗಿ ನಡಸಬೇಕು ಅಂದ್ರ ಇದು ಬಹುಜನರ ಸರಕಾರದಿಂದ ಮಾತ್ರ ಸಾಧ್ಯ ಅನ್ನೋದು ಗೊತ್ತಿತ್ತು. ಚುನಾವಣೆ ಅನ್ನೋದು ಲಕ್ ಬೈ ಛಾನ್ಸ್ ಅನ್ನೋದು ಗೊತ್ತಿತ್ತು. ಬರೇ ಒಂದು ವೋಟಿನಿಂದ ಗೆದ್ದ ಮನಿಶಾ ಜನರ ಪ್ರತಿನಿಧಿ ಆಗಿಬಿಡೋದು, ಸೋತವ ಮೂಲಿ ಒಳಗ ಕೂಡೋದು, ಅದು ತಪ್ಪು ಅಂತ ಅವರಿಗೆ ಗೊತ್ತಿತ್ತು.

ನಮ್ಮ ದೇಶದ ಮುಂದಿನ ದಾರಿ ನಿರ್ಧಾರ ಮಾಡೋವಾಗ ಎಲ್ಲಾ ಮತದಾರರ ಅಭಿಪ್ರಾಯವನ್ನೂ ಪರಿಗಣಿಸಬೇಕು, ವಿರೋಧ ಪಕ್ಷದವರೂ ಇಲ್ಲಿ ಅಮುಖ್ಯರಲ್ಲ ಅಂತ ಅವರು ಠರಾವಿಸಿದ್ದರು.

ಹೀಂಗೇ ಮುಂದುವರೆದು ಸರಕಾರ ಅಂದ್ರ ಬರೇ ಕಾಯಾಂಗ ಅಲ್ಲ. ಅದರಾಗ ಮೂರು ಅಂಗ ಆದವು. ಅವು ಎಲ್ಲವೂ ಮುಖ್ಯ ಅಂದ್ರು. ಒಂದು ಹೆಜ್ಜಿ ಮುಂದ ಹೋಗಿ ಶಾಸಕಾಂಗ ಅನ್ನೋದು ಕಾಯಾಂಗಕ್ಕಿಂತ ಮುಖ್ಯ ಅಂತ ತಿಳಿಸಿ ಹೇಳಿದರು. ಕಾಯಾಂಗ ಅನ್ನೋದು ಶಾಸಕಾಂಗದ ಕೈ ಗೊಂಬೆ, ಅದನ್ನು ಇದು ಯಾವಾಗ ಬೇಕಾದಾದರೂ ಬೀಳಿಸಬಹುದು ಅಂತ ಸಾರಿದರು.

ಸಂವಿಧಾನದ ಪ್ರಕಾರ ವಿರೋಧ ಪಕ್ಷದ ಕೆಲಸ ಏನು ಅಂದರೆ ೧. ಸರ್ಕಾರದ ನೀತಿ- ನಿಯಮಗಳ ಸರಿ- ತಪ್ಪುಗಳ ವಿಮರ್ಶೆ ಮಾಡೋದು, ೨. ಯೋಜನೆ ಜಾರಿ ಬಗ್ಗೆ ತಮ್ಮ ಅಭಿಪ್ರಾಯ ತಿಳಸೋದು, ೩. ಸದನದೊಳಗ ಜನರ ದನಿ ಆಗೋದು ೪. ತೆರಿಗೆ ಹಣದ ಸರಿಯಾದ ಬಳಕೆ ಅಗೇದೋ ಇಲ್ಲೋ ನೋಡೋದು, ಮತ್ತು ಆಳುವವರು ಶಾಸಕರ ವಿಶ್ವಾಸ ಕಳೆದುಕೊಂಡರ ಅವರನ್ನ ತಕ್ಷಣಕ್ಕೆ ಮನಿಗೆ ಕಳಸೋದು, ಹೊಸಾ ನಾಯಕನ್ನ ಆಯ್ಕೆ ಮಾಡೋದು.

ಸರಕಾರ ಅನ್ನುವುದು, ಅದು ಯಾರದೇ ಇರಲಿ, ಅದನ್ನ, ಅದರ ಸರಿ- ತಪ್ಪುಗಳನ್ನ, ಅದರ ಜನಪರ ಹಾಗೂ ಜನ ವಿರೋಧಿ ನೀತಿ, ಅಥವಾ ಕಾರ್ಯಕ್ರಮಗಳ ಜಾರಿಗಳ ಬಗ್ಗೆ ಮಾತಾಡುವುದು ವಿರೋಧ ಪಕ್ಷದ ಮೂಲಭೂತ ಹಕ್ಕು. ಬಾಹುಳ್ಯದ ಪ್ರಜಾಪ್ರಭುತ್ವದಲ್ಲಿ ಇದು ಅವರ ಪವಿತ್ರ ಹಕ್ಕು. ಅದನ್ನು ಮಾಡದಿದ್ದರೆ ಅವರು ತಪ್ಪು ಮಾಡಿದಂಗೆ. ಅವರು ಜನರಿಗೆ ನೀಡಿದ ಜವಾಬುದಾರಿಯನ್ನು ತಪ್ಪಿಸಿಕೊಂಡಂತೆ.

ಇದನ್ನೆಲ್ಲಾ ಯಾಕ ಹೇಳಬೇಕಾತು ಅಂದ್ರ ಮೊನ್ನೆ ನಮ್ಮ ಗೃಹ ಸಚಿವ ಅಮಿತ್ ಷಾ ಅವರು ಆಡಳಿತ ಪಕ್ಷದ ಬಗ್ಗೆ ಮಾತಾಡೋ ವಿರೋಧ ಪಕ್ಷದವರು ಮೊದಲು ತಾವು ಏನು ಮಾಡಿದಾರ ಅನ್ನೋದು ತೋರಿಸಕೊಡಬೇಕು ಅಂತ ಫರಮಾನು ಕೊಟ್ಟಾರ.

ಅಂತವರಿಗೆ ಒಂಚೂರು ಬ್ರಿಟನ್‌ನ ಗಾರ್ಡಿಯನ ಪತ್ರಿಕೆಯ ಬಗ್ಗೆ ಹೇಳಬೇಕು. ಅವರು ಪ್ರತಿ ಚುನಾವಣೆಯ ನಂತರ ಈ ಪಕ್ಷ ಬಹುಮತ ಪಡೆದು ಆಳುವ ಪಕ್ಷವಾಗಿದೆ. ಆ ಪಕ್ಷ ವಿರೋಧ ಪಕ್ಷವಾಗಿ ಜನರ ಪಕ್ಷವಾಗಿದೆ ಅಂತ ಘೋಷಿಸುವ ಪರಂಪರೆ ಹೊಂದಿದೆ. ತನ್ನನ್ನು ತಾನು ಸರ್ವಕಾಲಿಕ ವಿರೋಧ ಪಕ್ಷ ಅಂತ ಹೇಳಿಕೊಂಡಿದೆ.

ಇದು ಸದನದ ಎಡಗಡೆ, ಬಲಗಡೆ ಕೂಡುವ ಎಲ್ಲರಿಗೂ ತಿಳಿಯಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...