Homeಮುಖಪುಟವಿರೋಧ ಅಂದರೇನು, ವಿರೋಧ ಪಕ್ಷ ಅಂದರ ಏನು? ನಿಮಗೇನಾರ ಗೊತ್ತಾ?

ವಿರೋಧ ಅಂದರೇನು, ವಿರೋಧ ಪಕ್ಷ ಅಂದರ ಏನು? ನಿಮಗೇನಾರ ಗೊತ್ತಾ?

- Advertisement -
- Advertisement -

ನಿಮ್ಮಲ್ಲಿ ವಿರೋಧ ಪಕ್ಷದ ಪರವಾಗಿ ಇರುವವರು ಯಾರು? ಹೋಗಲಿ ವಿರೋಧ ಪಕ್ಷ ಅಂದರ ಏನು? ಹೋಗಲಿ ಆತಲಾಗ ವಿರೋಧ ಅಂದ್ರ ಏನು ?

ಈ ಗಹನವಾದ ವಿಷಯ ಇಂದಿನ ಖೋಲಿಯ ವಸ್ತು.

ರಾಜಕೀಯ ಶಾಸ್ತ್ರ ಓದೋ ಹುಡುಗರ ನಡುವ ಒಂದು ಬಹುಚರ್ಚಿತ ಮಾತು ಐತಿ : “ನಮ್ಮ ಸಂವಿಧಾನದಾಗ ಆಡಳಿತ ಪಕ್ಷ ಅನ್ನೋ ಪದ ಇಲ್ಲಾ. ಆದರ ವಿರೋಧ ಪಕ್ಷ ಅನ್ನೋ ಪದ ಐತಿ’. ಈ ಮಾತು ಯಾಕ ಹೇಳತಾರ ಅಂದ್ರ, “ಭಾರತ ಅನ್ನೋದು ಆಡಳಿತ ಪಕ್ಷ ಕೇಂದ್ರಿತ ಪ್ರಜಾಪ್ರಭುತ್ವ ಅಲ್ಲ, ಅದು ಸಮ್ಮಿಳಿತ ಪ್ರಜಾಪ್ರಭುತ್ವ, ಇದರಲ್ಲಿ ವಿರೋಧ ಪಕ್ಷಕ್ಕೆ ಭಾಳ ಪ್ರಾಮುಖ್ಯತೆ ಇದೆ’ ಅಂತ ತಿಳಿಸಲಿಕ್ಕೆ.

ಬ್ರಿಟಿಷ್ ಸರ್ಕಾರದಾಗ ವಿರೋಧ ಪಕ್ಷ ಅಂದ್ರ ಬಹಳ ಗೌರವ. ವಿರೋಧ ಪಕ್ಷದ ನಾಯಕನಿಗೆ ಛಾಯಾ ಪ್ರಧಾನಿ ಅಂತ, ಇತರ ನಾಯಕರಿಗೆ ಛಾಯಾ ಕೃಷಿ ಸಚಿವ, ಛಾಯಾ ಹಣಕಾಸು ಸಚಿವ, ಛಾಯಾ ರಕ್ಷಣಾ ಸಚಿವ, ಇತ್ಯಾದಿ ಹೆಸರುಗಳಿಂದ ಕರೀತಾರ.

ಅವರು ತಮಗೆ ವಹಿಸಿಕೊಟ್ಟ ವಿಷಯಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಸಂಸತ್ತಿನಲ್ಲಿ ಮಾತಾಡತಾರ. ಅಲ್ಲದೇ ಪ್ರತಿ ಬಾರಿ ಆ ಕ್ಷೇತ್ರದ ಬಗ್ಗೆ ಸರಕಾರ ಏನಾದರೂ ಹೊಸಾ ನೀತಿ ಮಾಡಿದರ, ಅಥವಾ ಬದಲಾವಣೆ ಮಾಡಿದರ, ಅದಕ್ಕ ಸಂಬಂಧ ಪಟ್ಟ ಛಾಯಾ ಸಚಿವರು ಮಾತಾಡತಾರ. ನಮ್ಮಲ್ಲಿ ಹಂಗ ಯಾರಾರರ, ಏನೇನರ ತಲಿಯೊಳಗ ಒಂದು- ಒಂದು ಮಾತಾಡೋದಿಲ್ಲ.

ಹಂಗಾರ ನಮ್ಮ ಹಿರಿಯರೆಲ್ಲ – ಯಾರು ಯಾರು ಈ ದೇಶದ ಸ್ವಾತಂತ್ರ್ಯದ ಸಲುವಾಗಿ ಮನಿ ಬಿಟ್ಟು ಓಡಿಹೋಗಿ, ಸಾಲಿ, ನೌಕರಿ ಬಿಟ್ಟು ವರ್ಷಗಟ್ಟಲೆ ತಪ್ಪಿಸಿಕೊಂಡು ಅಡ್ಡಾಡಿದವರು- ಈ ದೇಶದ ಸರ್ಕಾರದ ಸ್ವರೂಪ ಹೆಂಗ ಇರಬೇಕು ಅಂತ ನಿರ್ಧಾರ ಮಾಡಿದಾಗ ಅವರ ತಲಿಯೊಳಗ ಏನು ಇತ್ತು?

ಅವರಿಗೆ ಈ ದೇಶ ಬಹಳ ದೊಡ್ಡದು, ಅದನ್ನ ಸರಿಯಾಗಿ ನಡಸಬೇಕು ಅಂದ್ರ ಇದು ಬಹುಜನರ ಸರಕಾರದಿಂದ ಮಾತ್ರ ಸಾಧ್ಯ ಅನ್ನೋದು ಗೊತ್ತಿತ್ತು. ಚುನಾವಣೆ ಅನ್ನೋದು ಲಕ್ ಬೈ ಛಾನ್ಸ್ ಅನ್ನೋದು ಗೊತ್ತಿತ್ತು. ಬರೇ ಒಂದು ವೋಟಿನಿಂದ ಗೆದ್ದ ಮನಿಶಾ ಜನರ ಪ್ರತಿನಿಧಿ ಆಗಿಬಿಡೋದು, ಸೋತವ ಮೂಲಿ ಒಳಗ ಕೂಡೋದು, ಅದು ತಪ್ಪು ಅಂತ ಅವರಿಗೆ ಗೊತ್ತಿತ್ತು.

ನಮ್ಮ ದೇಶದ ಮುಂದಿನ ದಾರಿ ನಿರ್ಧಾರ ಮಾಡೋವಾಗ ಎಲ್ಲಾ ಮತದಾರರ ಅಭಿಪ್ರಾಯವನ್ನೂ ಪರಿಗಣಿಸಬೇಕು, ವಿರೋಧ ಪಕ್ಷದವರೂ ಇಲ್ಲಿ ಅಮುಖ್ಯರಲ್ಲ ಅಂತ ಅವರು ಠರಾವಿಸಿದ್ದರು.

ಹೀಂಗೇ ಮುಂದುವರೆದು ಸರಕಾರ ಅಂದ್ರ ಬರೇ ಕಾಯಾಂಗ ಅಲ್ಲ. ಅದರಾಗ ಮೂರು ಅಂಗ ಆದವು. ಅವು ಎಲ್ಲವೂ ಮುಖ್ಯ ಅಂದ್ರು. ಒಂದು ಹೆಜ್ಜಿ ಮುಂದ ಹೋಗಿ ಶಾಸಕಾಂಗ ಅನ್ನೋದು ಕಾಯಾಂಗಕ್ಕಿಂತ ಮುಖ್ಯ ಅಂತ ತಿಳಿಸಿ ಹೇಳಿದರು. ಕಾಯಾಂಗ ಅನ್ನೋದು ಶಾಸಕಾಂಗದ ಕೈ ಗೊಂಬೆ, ಅದನ್ನು ಇದು ಯಾವಾಗ ಬೇಕಾದಾದರೂ ಬೀಳಿಸಬಹುದು ಅಂತ ಸಾರಿದರು.

ಸಂವಿಧಾನದ ಪ್ರಕಾರ ವಿರೋಧ ಪಕ್ಷದ ಕೆಲಸ ಏನು ಅಂದರೆ ೧. ಸರ್ಕಾರದ ನೀತಿ- ನಿಯಮಗಳ ಸರಿ- ತಪ್ಪುಗಳ ವಿಮರ್ಶೆ ಮಾಡೋದು, ೨. ಯೋಜನೆ ಜಾರಿ ಬಗ್ಗೆ ತಮ್ಮ ಅಭಿಪ್ರಾಯ ತಿಳಸೋದು, ೩. ಸದನದೊಳಗ ಜನರ ದನಿ ಆಗೋದು ೪. ತೆರಿಗೆ ಹಣದ ಸರಿಯಾದ ಬಳಕೆ ಅಗೇದೋ ಇಲ್ಲೋ ನೋಡೋದು, ಮತ್ತು ಆಳುವವರು ಶಾಸಕರ ವಿಶ್ವಾಸ ಕಳೆದುಕೊಂಡರ ಅವರನ್ನ ತಕ್ಷಣಕ್ಕೆ ಮನಿಗೆ ಕಳಸೋದು, ಹೊಸಾ ನಾಯಕನ್ನ ಆಯ್ಕೆ ಮಾಡೋದು.

ಸರಕಾರ ಅನ್ನುವುದು, ಅದು ಯಾರದೇ ಇರಲಿ, ಅದನ್ನ, ಅದರ ಸರಿ- ತಪ್ಪುಗಳನ್ನ, ಅದರ ಜನಪರ ಹಾಗೂ ಜನ ವಿರೋಧಿ ನೀತಿ, ಅಥವಾ ಕಾರ್ಯಕ್ರಮಗಳ ಜಾರಿಗಳ ಬಗ್ಗೆ ಮಾತಾಡುವುದು ವಿರೋಧ ಪಕ್ಷದ ಮೂಲಭೂತ ಹಕ್ಕು. ಬಾಹುಳ್ಯದ ಪ್ರಜಾಪ್ರಭುತ್ವದಲ್ಲಿ ಇದು ಅವರ ಪವಿತ್ರ ಹಕ್ಕು. ಅದನ್ನು ಮಾಡದಿದ್ದರೆ ಅವರು ತಪ್ಪು ಮಾಡಿದಂಗೆ. ಅವರು ಜನರಿಗೆ ನೀಡಿದ ಜವಾಬುದಾರಿಯನ್ನು ತಪ್ಪಿಸಿಕೊಂಡಂತೆ.

ಇದನ್ನೆಲ್ಲಾ ಯಾಕ ಹೇಳಬೇಕಾತು ಅಂದ್ರ ಮೊನ್ನೆ ನಮ್ಮ ಗೃಹ ಸಚಿವ ಅಮಿತ್ ಷಾ ಅವರು ಆಡಳಿತ ಪಕ್ಷದ ಬಗ್ಗೆ ಮಾತಾಡೋ ವಿರೋಧ ಪಕ್ಷದವರು ಮೊದಲು ತಾವು ಏನು ಮಾಡಿದಾರ ಅನ್ನೋದು ತೋರಿಸಕೊಡಬೇಕು ಅಂತ ಫರಮಾನು ಕೊಟ್ಟಾರ.

ಅಂತವರಿಗೆ ಒಂಚೂರು ಬ್ರಿಟನ್‌ನ ಗಾರ್ಡಿಯನ ಪತ್ರಿಕೆಯ ಬಗ್ಗೆ ಹೇಳಬೇಕು. ಅವರು ಪ್ರತಿ ಚುನಾವಣೆಯ ನಂತರ ಈ ಪಕ್ಷ ಬಹುಮತ ಪಡೆದು ಆಳುವ ಪಕ್ಷವಾಗಿದೆ. ಆ ಪಕ್ಷ ವಿರೋಧ ಪಕ್ಷವಾಗಿ ಜನರ ಪಕ್ಷವಾಗಿದೆ ಅಂತ ಘೋಷಿಸುವ ಪರಂಪರೆ ಹೊಂದಿದೆ. ತನ್ನನ್ನು ತಾನು ಸರ್ವಕಾಲಿಕ ವಿರೋಧ ಪಕ್ಷ ಅಂತ ಹೇಳಿಕೊಂಡಿದೆ.

ಇದು ಸದನದ ಎಡಗಡೆ, ಬಲಗಡೆ ಕೂಡುವ ಎಲ್ಲರಿಗೂ ತಿಳಿಯಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...