Homeಮುಖಪುಟತುರ್ತುಪರಿಸ್ಥಿತಿಯ ವಿರುದ್ಧ ವಾಷಿಂಗ್ಟನ್‍ನಲ್ಲಿ ಪ್ರತಿಭಟಿಸಿದ್ದೆ: ಎಸ್.ಆರ್ ಹಿರೇಮಠ ಸಂದರ್ಶನ

ತುರ್ತುಪರಿಸ್ಥಿತಿಯ ವಿರುದ್ಧ ವಾಷಿಂಗ್ಟನ್‍ನಲ್ಲಿ ಪ್ರತಿಭಟಿಸಿದ್ದೆ: ಎಸ್.ಆರ್ ಹಿರೇಮಠ ಸಂದರ್ಶನ

1975ರಲ್ಲಿ ದೇಶದಲ್ಲಿ ಇಂದಿರಾ ಗಾಂಧಿಯವರು ಹೇರಿದ್ದ ಕರಾಳ ತುರ್ತುಪರಿಸ್ಥಿತಿಗೆ ಇಂದಿಗೆ 45 ವರ್ಷ ತುಂಬಿದೆ. ತುರ್ತು ಪರಿಸ್ಥಿತಿಯ ದಿನಗಳನ್ನು, ಅಂದಿಗೂ ಇಂದಿಗೂ ಆದ ಬದಲಾವಣೆಗಳನ್ನು ಮೆಲುಕು ಹಾಕಿದ್ದಾರೆ ಹಿರಿಯ ಹೋರಾಟಗಾರ ಹಿರೇಮಠ್‌ರವರು.

- Advertisement -
- Advertisement -

ನಾನು 11 ವರ್ಷ ಅಮೇರಿಕಾದಲ್ಲಿ ಇದ್ದೆ. ಬಡಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆತ್ತುವ ಇರಾದೆಯಿಂದ ಕೆಲಸ ಬಿಟ್ಟೆ. ನಮ್ಮ ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ 1974 ಜನವರಿ 1 ರಂದು ಇಂಡಿಯಾ ಡೆವಲಪ್‍ಮೆಂಟ್ ಎಂಬ ಸಂಸ್ಥೆಯೊಂದನ್ನು ಮಾಡಿದೆವು. ಯಾವುದೇ ಒಂದು ಮಾನವೀಯ ಅಭಿವೃದ್ಧಿಯನ್ನು ಮಾಡಬೇಕಾದಾರೆ ಒಂದು ಲಾರ್ಜರ್ ಡೆಮಾಕ್ರಿಟಿಕ್ ಫ್ರೇಮ್‍ವರ್ಕ್ ಇರುವ ಪ್ರಜಾಪ್ರಭುತ್ವ ಆಶಯಗಳು ಮತ್ತು ಮೌಲ್ಯಗಳಿಗೆ ಗೌರವ ಇರುವಂತಹ ವಾತಾವರಣ ಇರುವುದು ಬಹಳ ಮುಖ್ಯವಾಗಿದೆ.

1971ರ ಬಾಂಗ್ಲಾದೇಶ ಲಿಬರೇಶನ್‍ನಲ್ಲಿ ಭಾರತ ಮಹತ್ವದ ಪಾತ್ರ ನಿರ್ವಹಿಸಿತು. ಅದರ ನಂತರ ಬರಬರುತ್ತಾ ಇಂದಿರಾ ಗಾಂಧಿಯವರು ಟೊಟಾಲಿಟೇರಿಯನಿಸಂ ಅಂತ ನಾವು ಏನು ಕರಿತೀವಿ, ಹಾಗೆ ಡಿಕ್ಟೇಟರ್‍ಶಿಪ್ ಕಡೆಗೆ ಹೋಗುವುದನ್ನ ನಾವು ನೋಡಿದೆವು. ಯಾಕೆಂದರೆ ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸಬೇಕಾದರೆ ಪ್ರಜಾಪ್ರಭುತ್ವವನ್ನ ಎತ್ತಿಹಿಡಿಯುವಂತಹ ಸಂಸ್ಥೆಗಳ ಸಶಕ್ತೀಕರಣ ಆಗಬೇಕಾಗುತ್ತದೆ.

ಇಂದಿರಾಗಾಂಧಿ ಮೊದಲನೆಯದಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ತಮ್ಮ ಮಾತುಗಳಿಗೆ ಒಪ್ಪುವಂತಹವರು, ಆ ತರದ ನಿರ್ಣಯಗಳನ್ನ ಕೊಡುವಂತಹವರಾದ ಎ.ಕೆ ರೇ. ಅನ್ನುವವರನ್ನು 1973ರಲ್ಲಿ ಮೂರು ಜನ ಜಡ್ಜಸ್- ಹಿಂದಿನ ಲೋಕಯುಕ್ತ ಸಂತೋಷ್ ಹೆಗೆಡೆ ಅವರ ತಂದೆಯನ್ನು ಒಳಗೊಂಡಂತೆ- ಆಯ್ಕೆ ಮಾಡಿದಾಗ ಈ ಸರ್ವಾಧಿಕಾರದ ಟ್ರೆಂಡ್ ಬರುತ್ತಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸಿದೆವು.

ನಾನು ಅಮೆರಿಕಾದಲ್ಲಿ ಇದ್ದಾಗ ನ್ಯೂರ್ಯಾಕ್ ಟೈಮ್ಸ್ ಗಮನಿಸುತ್ತಿದ್ದೆ. ಅದರಲ್ಲಿ ಜಯಪ್ರಕಾಶ್ ನಾರಾಯಣ ಅವರ ಬಗ್ಗೆ 6 ಪುಟಗಳ ವರದಿ ನೋಡಿದೆ. ಅದೇ ಸಮಯದಲ್ಲಿ ಚಿಕಾಗೊಗೆ ಅನಿರಿಕ್ಷಿತವಾಗಿ ಯು.ಆರ್ ಅನಂತಮೂರ್ತಿಯವರು ಬಂದಿದ್ದರು. ಅಲ್ಲಿ ಎಲ್ಲರೂ ಸೇರಿ ಅವರೊಂದಿಗೆ ಸಭೆ ಸೇರಿ ಭಾರತದಲ್ಲಿ ಏನು ನಡಿಯುತ್ತಿದೆ ಎಂದು ತಿಳಿದೆವು. ಅಲಹಾಬಾದ್ ಕೋರ್ಟ್ ಜೂನ್ ತಿಂಗಳಲ್ಲಿ ಇಂದಿರಾಗಾಂದಿಯವರ ಲೋಕಸಭಾ ಸದಸ್ಯತ್ವವನ್ನ ರದ್ದುಗೊಳಿಸಿತು. ಇದು ಸರ್ಕಾರನ್ನು ಅಲುಗಾಡಿಸಿತು. ಇನ್ನು ಕೆಲವು ಘಟನೆಗಳು ಕೂಡ ಇಂದಿರಾಗಾಂಧಿ ತುರ್ತು ಪರಿಸ್ಥಿತಿಯ ಕಡೆ ತೆಗೆದುಕೊಂಡು ಹೋಗಲು ಕಾರಣವಾಯಿತು. ಆಗ ತುರ್ತು ಪರಿಸ್ಥಿತಿಯ ಮೂಲಕ ನಮ್ಮ ಸಂವಿಧಾನವನ್ನೆ ಅಪ್ರಸ್ತುತಗೊಳಿಸಲು ಹೊರಟಿದ್ದರು. ಆಗ ನಾವು ವಾಷಿಂಗ್ಟನ್‍ನ ನಮ್ಮ ರಾಯಭಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದೆವು. ನಾವು ಆಗ ಸತ್ಯಗಳನ್ನು ಮಾತಾಡಿದ್ದಕ್ಕಾಗಿ ನಮ್ಮ ಪಾಸ್‍ಪೋರ್ಟ್‍ಗಳನ್ನು ರದ್ದುಮಾಡಿದ್ದರು.

ಈಗ ವಲಸೆ ಕಾರ್ಮಿಕರ ಘಟನೆ ಬಗ್ಗೆ ಕೋರ್ಟ್‍ಗಳೂ ಕೂಡ ಸರಿಯಾಗಿ ಸ್ಪಂದಿಸಿಲ್ಲ. ಆಗಲೂ ಸಹ ಇದೇ ರೀತಿ ಆಯಿತು. ಜನಪರವಾಗಿ ತೀರ್ಪುಕೊಟ್ಟ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿದರು. ಮೂಲಭೂತ ಹಕ್ಕುಗಳನ್ನು ತೆಗೆದು ಹಾಕುವಂತಹ ಪರಿಸ್ಥಿತಿ ಬಂತು. ಇವತ್ತಿನ ಮೋದಿಯ ಮೊದಲನೇ ಮತ್ತು ಎರಡನೇ ಅವಧಿಯ ಸರ್ಕಾರ ಬಹಳ ಕರಾಳವಾಗಿದೆ. ತುರ್ತುಪರಿಸ್ಥಿತಿಗಿಂತ ಇಪ್ಪತ್ತು ಪಟ್ಟು ಗಂಭೀರವಾಗಿದೆ. ನೋಡಿ ಸಂವಿಧಾನದ ಮೂಲತತ್ವಗಳಾದ ಸಮಾನತೆ, ಸಹೋದರತೆ, ಭ್ರಾತೃತ್ವಗಳನ್ನು ಎತ್ತಿಹಿಡಿಯುವ ಆನಂದ್ ತೇಲ್ತುಂಬ್ಡೆಯಂತಹ ಬುದ್ಧಿಜೀವಿಗಳನ್ನು ಬಂಧನದಲ್ಲಿ ಇಟ್ಟಿದ್ದಾರೆ ಎಂದರೆ ಇಂದಿರಾಗಾಂದಿಯವರಿಗಿಂತ ಹೆಚ್ಚಿನದಾದ ತುರ್ತುಪರಿಸ್ಥಿತಿ ಇದಾಗಿದೆ. ಇದನ್ನು ಖಂಡಿಸಿ ಆಳವಾದ ಅಧ್ಯಯನದಿಂದ ಆಂದೋಲನವನ್ನು ಕಟ್ಟಬೇಕು.

ಕಾರ್ಮಿಕರ ದುಡಿಮೆಯ ಅವಧಿಯನ್ನೇ ಕಡಿಮೆ ಮಾಡಿ ಮೂರು ವರ್ಷ ಕಾರ್ಮಿಕ ಕಾನೂನುಗಳಿಗೆ ತಿಲಾಂಜಲಿ ಇಡುವುದನ್ನು ಈ ಸರ್ಕಾರ ಮಾಡಿದೆ. ಇದನ್ನು ನಾವು ಬುದ್ದ, ಬಸವ, ಅಂಬೇಡ್ಕರ್‌ರ ಆಶಯದೊಂದಿಗೆ ಎದುರಿಸಲೇಬೇಕು. ಅಂದು ಜಯಪ್ರಕಾಶ್ ನಾರಾಯಣರವರು ಸಮಗ್ರ ಪರಿವರ್ತನೆ ಎನ್ನುವ ಪರಿಕಲ್ಪನೆಯಲ್ಲಿ ಯುವಕರಿಗೆ ಕರೆಕೊಟ್ಟಿದ್ದರು. ಈ ಸ್ವಾತಂತ್ರ್ಯ ಅರ್ಥಪೂರ್ಣವಾಗಬೇಕಾದರೆ ಸಂವಿಧಾನದ ಪೂರಕ ಅಂಶಗಳಿಂದ ಸ್ಫೂರ್ತಿಪಡೆದ ಯುವಜನರು ಈ ದೇಶಕ್ಕೆ ಅವಶ್ಯಕತೆ ಇದ್ದಾರೆ. ಜೆಪಿಯವರು ಎಲ್ಲಾಪಕ್ಷಗಳನ್ನು ಕೂಡಿಸಿ ಹೊಸತೊಂದನ್ನು ಮಾಡಲು ಹೊರಟರು ಆದರೆ ಅವರ ಕಣ್ಣ ಮುಂದೆಯೇ ಜನತಾ ಪಕ್ಷ ಒಡೆದುಹೋಯಿತು. ಇದು ಕೂಡ ಐತಿಹಾಸಿಕ ಪ್ರಮಾದ ಅನಿಸುತ್ತೆ.

ಇಂದು ಯಾವುದೇ ಸ್ವಾತಂತ್ರ್ಯ ಹೋರಾಟ ಹಿನ್ನಲೆ ಇರದ ಆರ್.ಎಸ್.ಎಸ್ ದೇಶವನ್ನು ಹಿಂದಕ್ಕೆ ಒಯ್ಯುವ ಮತ್ತು ಭಯಾನಕ ಸಿದ್ಧಾಂತವನ್ನು ಹೊಂದಿರುವ ಸಂಘಟನೆ. ಸಂವಿಧಾನದ ಪ್ರಸ್ತಾವನೆ ಮತ್ತು ದೇಶದ ಬಾವುಟ ಹಿಡಿದು ಪ್ರತಿಭಟನೆ ಮಾಡಿದರೆ ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಇವತ್ತಿನ ಆರ್ಥಿಕ ಅಸಮಾನತೆಯ ಜನಕರು ಕಾಂಗ್ರೆಸ್. ಆದರೆ ಇದನ್ನ ಇನ್ನಷ್ಟು ನಾಗಲೋಟದಲ್ಲಿ ತೆಗೆದುಕೊಂಡು ಹೋಗುತ್ತಿರುವುದು ಬಿಜೆಪಿ. ಗಾಂಧಿ, ಶುಮಾಕರ್ ಅವರುಗಳು ಹೇಳಿದ ಆರ್ಥಿಕ ಸಮಾನತೆ, ಅಂಬೇಡ್ಕರ್ ಅವರು ಹೇಳಿದ ಜಾತಿವಿನಾಶ ಈ ವಿಚಾರಗಳ ಕಡೆಗೆ ನಾವು ಹೋಗಬೇಕು. ನನ್ನ ಪ್ರಕಾರ ಈ ದೇಶದ ಆತ್ಮ ಶರಣ ಸಂತರು. ಅವರು ಸಾವಿರಾರು ವರ್ಷಗಳ ಪರಂಪರೆ, ಜೀವನದ ಅರ್ಥವನ್ನು ಜನಸಾಮಾನ್ಯರಿಗೆ ತಿಳಿಸಿದ್ದಾರೆ. ರಾಜಕೀಯ ಪಕ್ಷಗಳು ಆ ಮಾರ್ಗದಲ್ಲಿ ಇರಬೇಕು. ಆದರೆ ಇವತ್ತಿನ ಯಾವ ರಾಜಕೀಯ ಪಕ್ಷಗಳು ಆ ನಿಟ್ಟಿನಲ್ಲಿ ಜನರ ವಿಶ್ವಾಸವನ್ನು ಉಳಿಸಿಕೊಂಡಿಲ್ಲ.

ಸಂದರ್ಶನ: ಬಸವರಾಜ ಸೂಳಿಬಾವಿ

( ಲೇಖಕ, ಪ್ರಕಾಶಕ ಬಸವರಾಜ ಸೂಳಿಬಾವಿ ಅವರು ನಡೆಸಿದ ಎಸ್ ಆರ್ ಹಿರೇಮಠರೊಂದಿಗಿನ ದೀರ್ಘ ಸಂದರ್ಶನದ ಸಂಗ್ರಹ ರೂಪ. ಪೂರ್ಣ ಸಂದರ್ಶನದ ವಿಡಿಯೋವನ್ನು ತಾಣದಲ್ಲಿ ನೋಡಬಹುದು)


ಇದನ್ನೂ ಓದಿ: 1% ಅತಿ ಶ್ರೀಮಂತರಿಗೆ 2% ಸಂಪತ್ತಿನ ತೆರಿಗೆ ವಿಧಿಸಿ: ದೇಶಾದ್ಯಂತ ಚಿಂತಕರ ಆಗ್ರಹ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...

‘ನನ್ನ ಮೌನವನ್ನು ಸೋಲು ಎಂದು ತಿಳಿಯಬೇಡಿ’’: ರಾಜ್ಯಸಭೆಯಲ್ಲಿ ಪದಚ್ಯುತಿಯ ನಂತರ ಎಎಪಿಗೆ ತಿರಗೇಟು ನೀಡಿದ ಸಂಸದ ರಾಘವ್ ಛಡ್ಡಾ

ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಸ್ಥಾನದಿಂದ ತೆಗೆದುಹಾಕಲ್ಪಟ್ಟ ಒಂದು ದಿನದ ನಂತರ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾ ಅವರು ಶುಕ್ರವಾರ "ನನ್ನ ಬಾಯಿ ಮುಚ್ಚಿಸಬಹುದು, ಸೋಲಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಪಕ್ಷದ...

ಮಾಲ್ಡಾ ನ್ಯಾಯಾಂಗ ಅಧಿಕಾರಿಗಳ ಘೇರಾವ್ ಪ್ರಕರಣದಲ್ಲಿ 17 ಜನರ ಬಂಧನ: ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿದ ಇಸಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಏಳು ನ್ಯಾಯಾಂಗ ಅಧಿಕಾರಿಗಳ ಘೇರಾವ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ ಚುನಾವಣಾ ಅಭ್ಯರ್ಥಿ ಸೇರಿದಂತೆ ಕನಿಷ್ಠ 17 ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು...

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...