Homeಎಕಾನಮಿಅಸಮಾನತೆ ನಿವಾರಣೆಗಾಗಿ ಪಿಕೆಟಿ ಪಿಸುಮಾತಿಗೆ ಕಿವಿಗೊಡುವುದೇ ಲೇಸು.

ಅಸಮಾನತೆ ನಿವಾರಣೆಗಾಗಿ ಪಿಕೆಟಿ ಪಿಸುಮಾತಿಗೆ ಕಿವಿಗೊಡುವುದೇ ಲೇಸು.

ಆಫ್ರಿಕಾ ಖಂಡದ ಅಮೇರಿಕದವನೊಬ್ಬ ಹೀಗೆ ಬರೆದುಕೊಂಡಿದ್ದಾನೆ, ನನಗೆ ಅವಮಾನ ಮತ್ತು ದ್ವೇಷ ತಿಳಿದಿರಲಿಲ್ಲ. ಅದನ್ನು ತಿಳಿಯಲು ಶಾಲೆಗೆ ಹೋಗಬೇಕಾಯಿತು.

- Advertisement -
- Advertisement -

ಆಫ್ರಿಕಾ ಖಂಡದ ಅಮೇರಿಕದವನೊಬ್ಬ ಹೀಗೆ ಬರೆದುಕೊಂಡಿದ್ದಾನೆ, ನನಗೆ ಅವಮಾನ ಮತ್ತು ದ್ವೇಷ ತಿಳಿದಿರಲಿಲ್ಲ. ಅದನ್ನು ತಿಳಿಯಲು ಶಾಲೆಗೆ ಹೋಗಬೇಕಾಯಿತು. ಸಿಮೋನ್ ಡಿ ಬೋವಾ ನಾನು ಮಹಿಳೆಯಾಗಿ ಹುಟ್ಟಲಿಲ್ಲ, ಆದರೆ ಆಗಲ್ಪಟ್ಟೆ ಎಂದಿದ್ದರು. ಸಮಾಜ ವ್ಯಕ್ತಿ ಮತ್ತು ವ್ಯಕ್ತಿತ್ವದ ಸೃಷ್ಟಿಗೆ ನೀಡುವ ಅಪಾರವಾದ ಸಕಾರಾತ್ಮಕ ಅಥವ ನಕಾರಾತ್ಮಕ ಕೊಡುಗೆಯನ್ನು ಈ ಹೇಳಿಕೆಗಳಲ್ಲಿ ಕಾಣಬಹುದು.

ಥಾಮಸ್ ಪಿಕೆಟಿ

ಈ ಶತಮಾನದ ಅತಿ ಹೆಚ್ಚು ಪ್ರಭಾವಿಸಿದ ಅರ್ಥಶಾಸ್ರಜ್ಞರನ್ನಾಗಿ ಥಾಮಸ್ ಪಿಕೆಟಿಯವರನ್ನು ಗುರುತಿಸುತ್ತಾರೆ. ಅವರ ಕ್ಯಾಪಿಟಲ್ ಇನ್ ದಿ 21ನೇ ಶತಮಾನದ ಒಂದು ಮೈಲುಗಲ್ಲು ಎಂದೇ ಪರಿಗಣಿಸಲಾಗಿದೆ. ಅವರ ಇತ್ತೀಚಿನ ಪುಸ್ತಕ ಕ್ಯಾಪಿಟಲ್ ಅಂಡ್ ಐಡಿಯಾಲಜಿ ಕೂಡಾ ಅದೇ ಮಟ್ಟದಲ್ಲಿ ಜಗತ್ತಿನಾದ್ಯಂತ ಚರ್ಚೆ ಆಗುತ್ತಿರುವ ಪುಸ್ತಕ. 1039 ಪುಟದ ಈ ಪುಸ್ತಕ ಒತ್ತಿ ಹೇಳುವುದು ಆರ್ಥಿಕ ಅಸಮಾನತೆಗೆ ಸಾಮಾಜಿಕ, ಸಾಂಸ್ಥಿಕ, ಸೈದ್ಧಾಂತಿಕ ಮತ್ತು ರಾಜಕೀಯ ಆಯಾಮಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು.

ಕಾರ್ಲ್ ಮಾರ್ಕ್ಸ್ ನ ವರ್ಗ ಸಂಘರ್ಷದ ಹೊರತಾಗಿ, ಸಾಮಾಜಿಕ ಆಯಾಮಗಳಾದ ಜಾತಿ, ಲಿಂಗ, ಬಣ್ಣ, ಧಾರ್ಮಿಕ ಸಂಘಟನೆಗಳು ವ್ಯಕ್ತಿಯನ್ನು ಕೃತಕವಾಗಿ ಮೇಲಿನ ಸ್ಥರದಲ್ಲಿಟ್ಟು ಬಹುಜನರನ್ನು ಹತ್ತಿಕ್ಕಿ ಹತೋಟಿಯಲ್ಲಿಡುವ ಕಾರ್ಯವನ್ನು ಪಿಕೆಟಿ ಐತಿಹಾಸಿಕವಾಗಿ ವಿಸ್ತರಿಸುತ್ತಾ ಹೋಗುತ್ತಾರೆ. ಅಂಕಿ ಅಂಶಗಳಿಲ್ಲದೆ ಪಿಕೆಟಿ ಏನನ್ನೂ ಹೇಳಹೋಗುವುದಿಲ್ಲ. ನಮ್ಮಲ್ಲಿ ಹೀಗೆ ಹೇಳುವುದುಂಟು, ದತ್ತಾಂಶಗಳನ್ನು ನೀಡಿದರೆ ನನ್ನ ದಿಕ್ಕು ಬದಲಿಸುತ್ತೇನೆ ಎಂದು. ಇದಕ್ಕೆ ತಕ್ಕಂತೆ ಪಿಕೆಟಿ ಅನೇಕ ದೇಶಗಳ ಮತ್ತು ಸಾಮ್ರಾಜ್ಯಗಳ ಆಡಳಿತ, ಶ್ರೇಣೀಕೃತ ವರ್ಗ, ಕಾನೂನು ಮತ್ತು ತೆರಿಗೆಗಳ ಮೂಲಕ ಹೇಗೆ ಆರ್ಥಿಕ ಅಸಮಾನತೆಯನ್ನು ಉಂಟುಮಾಡಿವೆ ಎನ್ನುವುದನ್ನು ವಿಸ್ತರಿಸುತ್ತಾರೆ.

ವಿಜಯನಗರ ಸಾಮ್ರಾಜ್ಯದಲ್ಲಿ ಬ್ರಾಹ್ಮಣ ಕ್ಷತ್ರಿಯ ವರ್ಣಗಳ ಒಡಂಬಡಿಕೆ, ಬ್ರಾಹ್ಮಣರಿಗೆ ಭೂದಾನಗಳನ್ನು ಮಾಡಿದ್ದು ಹಾಗೂ ಪುದುಕೊಟ್ಟೆಯಲ್ಲಿ ಕಲಾರ್ಸ್ ದಲಿತರು ಪಟ್ಟಕ್ಕೇರಿದ ಮೇಲೇ ಅವರನ್ನು ಕ್ಷತ್ರಿಯ ವರ್ಣಕ್ಕೆ ಸೇರಿಸಲು ಬ್ರಾಹ್ಮಣ ವರ್ಗದ ಮುದ್ರೆಯ ಅವಶ್ಯಕತೆ ಉಂಟುಮಾಡಿ, ಆ ಪಟ್ಟಕ್ಕಾಗಿ ಬ್ರಾಹ್ಮಣರು ಗಿಟ್ಟಿಸಿಕೊಂಡ ಭೂಮಿ ಮತ್ತು ಗಳಿಸಿದ ಸಂಪತ್ತನ್ನು ವಿವರಿಸುತ್ತಾನೆ. ಶಿವಾಜಿ ಮಹರಾಜ ಕೂಡಾ ಇದೇ ರೀತಿಯ ಒಡಂಬಡಿಕೆ ಮಾಡಿಕೊಳ್ಳಬೇಕಾದ ಪ್ರಸಂಗವು ಬರುತ್ತದೆ. ಈ ರೀತಿ ಆರ್ಥಿಕ ಮುಗ್ಗಟ್ಟಿಗೆ ಅಸಮಾನತೆಗೆ ಸಾಮಾಜಿಕ ಆಯಾಮ ಹೇಗೆ ಕಾರಣ ಎಂದು ಗಣನೀಯವಾಗಿ ಪರಿಗಣಿಸಿ ವಿವರಿಸುತ್ತಾರೆ ಪಿಕೆಟಿ.

ಇಂದಿಗೂ ಸಹ ರಾಜಕಾರಣ, ರಾಜ್ಯ ಮತ್ತು ಕೈಗಾರಿಕೋದ್ಯಮಿಗಳು ಹೇಗೆ ಪರಸ್ಪರ ತಮ್ಮ ತಮ್ಮನ್ನು ಭದ್ರಪಡಿಸಿಕೊಳ್ಳಲು ತಮಗೆ ಬೇಕಾದ ಕಾನೂನು ಮತ್ತು ನಿಯಮಾವಳಿಗಳನ್ನು ಆಗ್ಗಿಂದಾಗ್ಗೆ ರೂಪಿಸಿಕೊಳ್ಳುತ್ತಾರೆ (Regulated regulate regulators)ಎಂಬುದನ್ನು ವಿವರಿಸುತ್ತಾರೆ. ಇದೇ ಸಮಯದಲ್ಲಿ ಈ ಪ್ರಸಂಗ ನೆನಪಾಗುತ್ತದೆ: ಹಿಂದೊಮ್ಮೆ ಆಯವ್ಯಯದ ಮುಂಗಡ ಪತ್ರ ಲೋಕಸಭೆಯಲ್ಲಿ ಮಂಡನೆಯಾಗುವ ಮೊದಲೇ ಅಂಬಾನಿ ಮನೆಯಲ್ಲಿ ರೇಡ್ ಆದಾಗ ಸಿಕ್ಕಿಬಿತ್ತು. ಆಗ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಇದು ಹಣಕಾಸು ಸಚಿವಾಲಯ ಅಂಬಾನಿಗೆ ಮೊದಲೇ ಕೊಟ್ಟಿದ್ದೋ ಅಥವಾ ಅಂಬಾನಿಯೇ ಕೊಟ್ಟ ಪ್ರತಿಯೋ ಎಂದು ಬರೆದಿದ್ದರು. ನ್ಯೂಯಾರ್ಕರ್ ನಿಯತಕಾಲಿಕದ ಕಾರ್ಟೂನ್ ಒಂದು ಹೀಗೆ ಹೇಳುತ್ತದೆ., ಉದ್ಯೋಗಪತಿಗೆ ಒಬ್ಬ ಕೇಳುತ್ತಾನೆ, ನೀವು ಟೀಂ ಪ್ಲೇಯರ್ರೇ?ಎಂದು. ಆತ ಹೇಳುತ್ತಾನೆ, ಇಲ್ಲ, ನಾನು ಟೀಂ ಓನರೆಂದು. ನಮ್ಮ ಕ್ರಿಕೆಟ್ ಟೀಂಗೂ ಇದನ್ನು ಹೋಲಿಸಬಹುದು.

ಭಾರತದೇಶ ಸಾಮಾಜಿಕ ಚಲನಶೀಲತೆಯಲ್ಲಿ ಅತ್ಯಂತ ಕಳಪೆ ಸ್ಥಾನವನ್ನು ಹೊಂದಿದೆ. ಕಳೆದ ವರ್ಷ 82 ದೇಶಗಳಲ್ಲಿ 76ನೇ ಸ್ಥಾನವನ್ನು ಪಡೆದಿತ್ತು. ಅತ್ಯಂತ ಕೆಳಮಟ್ಟದ ಈ ಸ್ಥಾನಕ್ಕೆ ನಮ್ಮಲ್ಲಿನ ಜಾತಿ, ವರ್ಣಬೇಧ ನೀತಿ, ಆರ್ಥಿಕ ಅಸಮಾನತೆ ಕಾರಣ. ಇವೆಲ್ಲವೂ ಸಾಮಾಜಿಕ ಮುಗ್ಗಟ್ಟಿನ ಚಕ್ರವ್ಯೂಹದಿಂದ ಹೊರಕ್ಕೆ ದಾಟಿ ಹೋಗದಂತೆ ತಡೆಗೋಡೆ ಹಾಕಿ ನೋಡಿಕೊಳ್ಳುತ್ತವೆ. ಸೋಶಿಯಲ್ ಮೊಬಿಲಿಟಿ ಇಂಡೆಕ್ಸ್ ಎಂದು ಹೇಳುವ ಈ ಸಾಮಾಜಿಕ ಚಲನಶೀಲತೆಗೆ ನಮ್ಮ ಸಾಂಸ್ಥಿಕ ಸಂಘಟನೆಗಳು, ಧರ್ಮ ಮತ್ತು ಜಾತಿ ವ್ಯವಸ್ಥೆ ಬಲಿಷ್ಟ ತಡೆಗೋಡೆಗಳಾಗಿ ನಿಂತಿವೆ. ಆರ್ಥಿಕ ಅಸಮಾನತೆ ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಂಗತಿ. ವಿಪರ್ಯಾಸವೆಂದರೆ ಕೊರೊನ ಮಹಾಮಾರಿಯ ಕಾಲದಲ್ಲೂ ಬಿಲಿಯನೇರ್‌ಗಳ ಆಸ್ತಿ ಕೊರೋನ ಸೋಂಕು ಮತ್ತು ಸಾವನ್ನು ಮೀರಿ ಬೆಳೆಯುತ್ತಿದೆ. ಅಮೇರಿಕಾದ ಪ್ರಜಾಪ್ರಭುತ್ವವನ್ನು,‘by the 1%, of the 1%, for the 1%’  ಎನ್ನುವುದುಂಟು. ಆಸ್ತಿ ತೆರಿಗೆಯನ್ನು ಸಮಗ್ರವಾಗಿ ಅನುಸ್ಠಾನಗೊಳಿಸಿದ್ದಲ್ಲಿ ಆರ್ಥಿಕ ಅಸಮಾನತೆಯನ್ನು ಹೇಗೆ ತಡೆಗಟ್ಟಬಹುದು ಎನ್ನುವುದನ್ನು ಪಿಕೆಟಿ ಅನೇಕ ಉದಾಹರಣೆಗೊಳೊಂದಿಗೆ ವಿವರಿಸುತ್ತಾನೆ. ಫ್ರಾನ್ಸ್ ದೇಶದಲ್ಲಿ 19ನೇ ಶತಮಾನದಲ್ಲಿ ಪೀಳಿಗೆಯಿಂದ ಪೀಳಿಗೆಗೆ ಬರುವ ಆಸ್ತಿಯ ಮೇಲೆ ಹಾಕಿದ ಕನಿಷ್ಟ ತೆರಿಗೆಯಿಂದ ಹೇಗೆ ಅಸಮಾನತೆಯನ್ನು ಹಿಂದಿಕ್ಕಲು ಸಾಧ್ಯವಾಯಿತೆಂದು ವಿವರಿಸುತ್ತಾನೆ. ಇಂದಿನ ಈ 1% ಪ್ರಜಾಪ್ರಭುತ್ವವನ್ನು ತಡೆಗಟ್ಟಲು ಪಿಕೆಟಿ ಪಿಸುಮಾತಿಗೆ ಕಿವಿಗೊಡುವುದೇ ಲೇಸು.


ಇದನ್ನೂ ಓದಿ: ಭಾರತದಲ್ಲಿ ಧರ್ಮಗಳು ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಅರಿತ್ತಿದ್ದೇವೆಯೇ? : ಬಿ. ಶ್ರೀಪಾದ ಭಟ್

460 ಕೋಟಿ ಜನರು ಹೊಂದಿರುವ ಒಟ್ಟು ಆಸ್ತಿ ಕೇವಲ 2000 ಜನರ ಕೈಯಲ್ಲಿದೆ! ದಾವೋಸ್‌ನಲ್ಲಿ ‘ಆಕ್ಸ್‌ಫಾಮ್’ ವರದಿ

ಕೊರೊನ ಸಮಯದ ಮತ್ತು ಕೊರೊನೋತ್ತರ ಆರ್ಥಿಕ ಪುನಶ್ಚೇತನಕ್ಕೆ ನಮ್ಮ ಸರ್ಕಾರ ಮಾಡುತ್ತಿರುವುದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...