HomeUncategorizedಥೂತ್ತೇರಿ : ಅಂಬರೀಶ್ ಮೃತ್ಯುಂಜಯ ಹೋಮ ಮಾಡಿಸಬೇಕಿತ್ತು

ಥೂತ್ತೇರಿ : ಅಂಬರೀಶ್ ಮೃತ್ಯುಂಜಯ ಹೋಮ ಮಾಡಿಸಬೇಕಿತ್ತು

- Advertisement -
- Advertisement -

ಯಾಹೂ |

ಸಿನಿಮಾ ರಂಗದಲ್ಲಿ ಮತ್ತು ರಾಜಕಾರಣದಲ್ಲಿ ಹಾಗೂ ಖಾಸಗೀ ಬದುಕಿನಲ್ಲಿ ವೈರಿಗಳೇ ಇಲ್ಲದಂತೆ ಬದುಕಿದ ಅಂಬರೀಶ್‍ಗೆ ಗ್ರಹಗತಿಗಳು ಮುನಿಸಿಕೊಂಡಿದ್ದವು ಎಂದು ಟಿ.ವಿ.ಯೊಳಗೆ ಸೇರಿಕೊಂಡಿರುವ ಪುರೋಹಿತ ಪಿಂಡಗಳು ವಾದಿಸತೊಡಗಿವೆಯಂತಲ್ಲಾ. ಈ ಪಿಂಡಗಳ ವಿಶೇಷವೆಂದರೆ, ತ್ರಿಕಾಲಜ್ಞಾನಿಗಳಂತಾಡುವ ಇವು ಯಾವುದೇ ಘಟನೆ ನಡೆಯುವ ಮುನ್ನ ಬಾಯಿ ಬಿಡುವುದಿಲ್ಲ. ವಿಷ್ಣು ತೀರಿಕೊಂಡ ನಂತರವೇ ಅವರಿಗೆ ನಾಗವಲ್ಲಿ ಕಾಟ ಅಮರಿಕೊಂಡಿತ್ತು ಎಂದು ವದರಿದವು. ಸಕ್ಕರೆ ಕಾಯಿಲೆ ದೆಸೆಯಿಂದ ಹೃದಯಾಘಾತಕ್ಕೆ ತುತ್ತಾದ ವಿಷ್ಣುಗೆ ನಾಗವಲ್ಲಿ ಕಾಟವಿತ್ತು, ಯಾಗ ಮಾಡಿಸಿದ್ದರೆ ಸರಿಹೋಗುತ್ತಿತ್ತು ಎನ್ನುವ ಈ ಪಿಂಡಗಳು ಈಗ ಅಂಬರೀಶ್ ಸಾವಿಗೂ ಪುರೋಹಿತಶಾಹಿ ತಂತ್ರವನ್ನೇ ಬಳಸತೊಡಗಿರುವುದು ಕಂಡು ದಿಗಿಲಾಗಿ ಜ್ಯೋತಿಷ್ಯ ಬ್ರಹ್ಮ ಪ್ರಕಾಶ ಮಣ್ಣುರಾಯರಿಗೆ ಫೋನ್ ಮಾಡಲಾಗಿ ರಿಂಗಾಯ್ತು,
ರಿಂಗ್‍ಟೋನ್: “ಹೋನ್ಹೀ ತೋ ಹೋನ್ಹೀ ಹೀ ಹೈ, ಅನ್ಹೋಹ್ಹೀ ನಹೀಂ ಭವತ್ಯೇವ ಭವತವ್ಯಂ….. ಹಲೋ ಯಾರು.”
“ಗುರುಗಳೇ ನಾನು ಪತ್ರಕರ್ತ”
“ಯಾವ ಪತ್ರಿಕೆ.”
“ನ್ಯಾಯಪಥ.”
“ನ್ಯಾಯಪಥ ಅಂದರೆ ಸತ್ಯದ ದಾರಿ.”
“ಹೌದು ಸ್ವಾಮಿ, ನಿಮ್ಮ ಫೋನಿನ ರಿಂಗ್‍ಟೋನ್ ಅರ್ಥ ಆಗಲಿಲ್ಲ.”
“ನಡೆಯಬೇಕಾದದ್ದು ನಡೆದೇ ನಡೆಯುತ್ತದೆ, ನಡೆಯಬೇಕಾದ ರೀತಿಯಲ್ಲೇ ನಡೆಯುತ್ತದೆ ಅಂತ ಅರ್ಥ.”
“ಹಾಗಿದ್ದರೆ ಜ್ಯೋತಿಷ್ಯದ ಅಗತ್ಯವೇನು.”
“ನೀವು ಆಸ್ತಿಕರೋ ನಾಸ್ತಿಕರೋ.”
“ಸದ್ಯಕ್ಕೆ ನಾಸ್ತಿಕ.”
“ಹಾಗಾದರೆ ನಿಮ್ಮೊಟ್ಟಿಗೆ ಮಾತನಾಡಿ ಪ್ರಯೋಜನ ಇಲ್ಲ.”
“ಹಾಗನ್ನಬೇಡಿ ಗುರುವೆ, ನಮ್ಮ ಅಂಬರೀಶಣ್ಣನ ಸಾವಿನ ಬಗ್ಗೆ ತಿಳಕೊಬೇಕು.”
“ನೋಡಿ, ಅಂಬರೀಶ್ ನಮ್ಮನ್ನು ಭೇಟಿಮಾಡಿ ನಾವು ಹೇಳಿದಂತೆ ಕೇಳಿದ್ದರೆ ಬದುಕುತ್ತಿದ್ದರು.”
“ಅದು ಹ್ಯೆಂಗೆ ಗುರುಗಳೇ.”
“ಒಂದು ಮೃತ್ಯುಂಜಯ ಹೋಮ ಮಾಡಿಸಿದ್ದರೆ ಬದುಕುತ್ತಿದ್ದರು.”
“ಮೃತ್ಯುಂಜಯ ಹೋಮ ಅಂದರೆ ಸಾವನ್ನ ಜಯಿಸುವ ಹೋಮ ಅಲ್ಲವೆ ಗುರು.”
“ಹೌದು.”
“ಈ ಮೃತ್ಯುಂಜಯ ಹೋಮ ಮಾಡಿಸಿದ್ರೆ ಎಷ್ಟು ದಿನ ಬದುಕಬಹುದು.”
“ನೋಡಿ, ನಮಗಿರುವ ಆಯಸ್ಸು ಬ್ರಹ್ಮನದಲ್ಲ ನಾವು ನಮ್ಮ ಆಯಸ್ಸನ್ನ ವೃದ್ಧಿಸಿಕೊಳ್ಳಬೇಕು. ಮರಣದಲ್ಲಿ ನೂರ ಒಂದು ಪ್ರಕಾರಗಳುಂಟು. ನೂರನ್ನ ಜಯಿಸಬಹುದು. ಒಂದನ್ನ ಮಾತ್ರ ಜಯಿಸಲಾಗುವುದಿಲ್ಲ.”
“ಅದ್ಯಾವುದು ಗುರುಗಳೇ.”
“ನಿಜವಾದ ಮರಣ!”
“ಈಗ ಅಂಬರೀಶ್‍ಗೆ ಸಂಭವಿಸಿದ್ದು ನಿಜವಾದ ಮರಣ ಅಲ್ಲವ.”
“ಇಲ್ಲ ಅವರದ್ದು ಭಾವೋದ್ವೇಗದ ಮರಣ. ಅದಕ್ಕಾಗಿ ನಾಗಾರಾಧನೆಯ ಮೃತ್ಯುಂಜಯ ಹೋಮ ಮಾಡಿಸಿದ್ದರೆ ಬದುಕುತ್ತಿದ್ದರು.”
“ಅದನ್ನ ಅವರಿಗೆ ಹೇಳಬೇಕಾಗಿತ್ತು.”
“ಅವರು ಬಂದು ಕೇಳಬಹುದಿತ್ತು, ನಾವು ಅವರ ಬಳಿಗೆ ಹೋಗುವುದಿಲ್ಲ.”
“ಅವರ ಜೀವ ಮುಖ್ಯ ಅಲ್ಲವೆ?”
“ಅದೌದು. ನಾವು ಸಂಸ್ಕಾರವಂತ ಜ್ಯೋತಿಷಿಗಳು. ಅವರಾಗಿ ಬಂದರೆ ಹೇಳ್ತೇವೆ.”
“ಅವುರಾಗಿ ಬಂದ್ರೆ ಹೇಳೋ ಅಂತವರು, ಈಗ ಟಿವಿಯೊಳಗಡೆ ಬಂದು ಯಾಕೇಳ್ತಿದೀರಿ”
“ನಾವು ಬಂದದ್ದಲ್ಲ ಟಿವಿಯವರು ಕರೆದದ್ದು.”
“ಬಂದು-ಬಳಗದೋರು ಕರೆದ್ರೆ ಹೊಗಬೇಕಾಗತ್ತೆ ಬಿಡಿ. ತಮ್ಮ ಪ್ರಕಾರ ಅಂಬರೀಶ್ ಜಾತಕ ಹೇಗಿತ್ತು ಗುರುಗಳೇ.”
“ಅಂಬರೀಶ್ ಜಾತಕದಲ್ಲಿ ಗುರುವಿನ ಬಲವಿತ್ತು. ಶನಿ ದೂರವಿದ್ದ. ಈಗ ಅವರ ಬಳಿ ಶನಿ ಸಂಚಾರ ಆರಂಭವಾಗಿತ್ತು. ಮೃತ್ಯುಂಜಯ ಹೋಮದಿಂದ ಶನಿಯನ್ನ ದೂರ ಮಾಡಬಹುದಿತ್ತು.”
“ಬ್ರಹ್ಮರ್ಷಿಗಳೇ ನಾಗನ ಆರಾಧನೆ ಯಾಕೆ ಮಾಡ್ತರೆ ಗೊತ್ತೆ.”
“ನಾಗದೋಷ ಪರಿಹಾರಕ್ಕೆ.”
“ಅದಲ್ಲ, ಹಾವುಗಳ ಪೈಕಿ ನಾಗರಹಾವಿಗೆ ವಿಷ ಇದೆ. ಅದು ಕಡುದ್ರೆ ಮನುಷ್ಯ ಸತ್ತೋಗ್ತನೆ. ಪೂಜೆ ಮಾಡಿದ್ರೆ ಅದು ಕಡಿಯಲ್ಲ ಅನ್ನೋ ಕಾರಣಕ್ಕೆ. ಅಂದ್ರೆ ಭಯ ಭಕ್ತಿ ಮೂಡಿಸುತ್ತೆ ಅಲ್ಲವಾ.”
“ಅದೌದು. ಭಯ ನಿವಾರಣೆ ನಮ್ಮ ಕೆಲಸ.”
“ನಿಮ್ಮ ಮೃತ್ಯುಂಜಯ ಹೋಮದಿಂದ ಅರ್ಭುದ ರೋಗ ನಿವಾರಿಸಬಹುದಾ?”
“ಹೌದು.”
“ಹಾಗಾದ್ರೆ ಅನಂತಕುಮಾರ್ ಅದರಲ್ಲೇ ಹೋದರಲ್ಲ. ಅವರ ಸಂಬಂಧಿಯಾದ ನೀನು ಆಗ ಕತ್ತೆ ಕಾಯ್ತಾಯಿದ್ದ?”
“ಯಾಕೆ ಹಾಗೆ ಕೆಟ್ಟ ಮಾತನ್ನಾಡುವುದು ನೀವು.”
“ಸಾರಿ, ಗೋವು ಕಾಯ್ತಾಯಿದ್ರ.”
“ನೋಡಿ ಇವರೆ, ನಿಮ್ಮಂತ ಅಸಂಸ್ಕೃತ ಅಹಂಕಾರಿಗಳನ್ನ ನಾವು ಸಹಿಸಿಕೊಂಡು ಉತ್ತರ ಕೊಡಬೇಕಾಗ್ತದೆ, ಅಂಬರೀಶರು ಭಾವೋದ್ವೇಗದ ವ್ಯಕ್ತಿ. ಆನೆ ನಡೆದದ್ದೇ ದಾರಿ ಅಂತ ಹೇಳುವ ಹಾಗೆ ಅವರು ಯಾರ ಮಾತನ್ನ ಕೇಳಲಿಲ್ಲ. ಕೇಳಿದ್ದರೆ ನಮ್ಮಲ್ಲಿ ಪರಿಹಾರವಿತ್ತು.”
“ಏನು ಪರಿಹಾರ ಹೇಳಿ.”
“ನೋಡಿ ಮನುಷ್ಯನ ಬಾಹ್ಯ ವರ್ತನೆಗೆ ಆಂತರ್ಯದ ಸಮಸ್ಯೆಗಳು ಕಾರಣ. ನಮ್ಮ ದೇಹದಲ್ಲಿ 72 ಸಾವಿರ ನಾಡಿಗಳಿವೆ. ಅವುಗಳ ಸಮತೋಲನ ಮುಖ್ಯ. ಅವುಗಳ ಏರುಪೇರಿನಿಂದ ಮನುಷ್ಯ ಕೀಳರಿಮೆಗೆ ತುತ್ತಾಗುವುದುಂಟು. ಆಗ ನಾವು ಆತ್ಮವಿಶ್ವಾಸ ಮೂಡಿಸುತ್ತೇವೆ.”
“ಯಾವ ತರ.”
“ನಮ್ಮ ಹೆಂಡತಿಗೆ ಒಂದಿಷ್ಟು ಉಬ್ಬು ಹಲ್ಲುಗಳಿದ್ದವು.”
“ಹಲ್ಲಿಗೇ ಮುತ್ತು ಕೊಡೋತರ.”
“ಹಾಗಂದುಕೊಳ್ಳಬಹುದು. ಆಗ ನಾನು ಆಕೆಗೆ ಆತ್ಮವಿಶ್ವಾಸ ತುಂಬಿದೆ. ನಿನ್ನ ಹಲ್ಲುಗಳ ಬಗ್ಗೆ ಕೀಳರಿಮೆ ಬೇಡ. ಮನೆಯ ಮೆಟ್ಟಿಲು ಕಲ್ಲುಗಳು, ಮನೆಯ ಹೊರಗಿರುತ್ತವೆ, ಒಳಗಲ್ಲ ಅಂತ ಹಾಸ್ಯ ಮಾಡಿ ಹೇಳಿದೆ. ಆಕೆಗೆ ಕೀಳರಿಮೆ ಹೋಯ್ತು. ನಮ್ಮ ಬದುಕು ಸರಾಗವಾಯ್ತು. ಹೀಗೆ ನಾವು ಮನುಷ್ಯನ ಆಂತರ್ಯದಲ್ಲಿನ ಕೀಳರಿಮೆ ಹೋಗಲಾಡಿಸಿಬಿಡ್ತೇವೆ.”
“ಇದಕ್ಕೂ ಅಂಬರೀಶ್ ವಿಷಯಕ್ಕೂ ಏನು ಸಂಬಂಧ.”
“ಸಂಬಂಧವುಂಟು, ಅಂಬರೀಶ್ರಲ್ಲಿದ್ದ ಭಾವೋದ್ವೇಗ ಕಡಿಮೆ ಮಾಡಿ, ಇನ್ನೂ ಬದುಕುವಂತೆ ಮಾಡ್ತಾಯಿದ್ದೆ.”
“ಮಿಸ್ಟರ್ ಬ್ರಹ್ಮ, ನಿಮ್ಮ ಜೋತಿಷ್ಯ ಪ್ರಧಾನವಾಗಿ ಹೊಟ್ಟೆ ಪಾಡಿಂದು, ಈ ದೇಶದ ಮುಗ್ಧ ಮನಸ್ಸುಗಳ ತಲೆಗೆ ಪುರಾಣ ತುಂಬಿ ದೇಶನೆ ಬಾಳೆಎಲೆ ಮಾಡಿಕೊಂಡು ಉಂಡ್ರಿ ಅಂತ ನಮ್ಮ ತೇಜಸ್ವಿ ಹೇಳತಿದ್ರು. ಏನಾದ್ರು ಮಾಡಿಕೊಂಡು ಹಾಳಾಗೋಗಿ. ಆದ್ರೆ ಅಂಬರೀಶ್ ವಿಷಯದಲ್ಲಿ ಪುರಾಣ ಶುರುಮಾಡಿದ್ರೆ ಸರಿಯಾಗಿ ಮಾಡಬೇಕಾಯ್ತದೆ.”
“ಯಂತ ಮಾಡ್ತಿರಿ.”
“ನಿನ್ನ ರಿಂಗ್‍ಟೋನಿದೆಯಲ್ಲ ಆ ತರ ನಡೆಯಬೇಕಾದ್ದು ನಡದೇ ನಡೆಯುತ್ತೆ. ನಡೆಯಬೇಕಾದ ರೀತಿಯಲ್ಲೇ ನಡೆಯುತ್ತೆ.”
“ನನ್ನನ್ನ ಬೆದರಿಸುತ್ತೀಯ, ಶಾಪ ಕೊಡ್ತೇನೆ.”
“ನಿನ್ನ ಶಾಪ ನನ್ನ ಕೂದಲಿಗೆ ಸಮ.”
“ಛೇ ಕೆಟ್ಟವನೆ.”
ಥೂತ್ತೇರಿ….!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...