Homeಮುಖಪುಟಸ್ವತಃ ‘ಲಾಕಪ್’ ಅನುಭವದಿಂದ ಹೋರಾಟದವರೆಗೂ: ವಿಸಾರಣೈ ಕಥೆಗಾರ ಚಂದ್ರಕುಮಾರ್ ಸಂದರ್ಶನ

ಸ್ವತಃ ‘ಲಾಕಪ್’ ಅನುಭವದಿಂದ ಹೋರಾಟದವರೆಗೂ: ವಿಸಾರಣೈ ಕಥೆಗಾರ ಚಂದ್ರಕುಮಾರ್ ಸಂದರ್ಶನ

ಭಾರತದ ಮಟ್ಟಿಗೆ ಪೊಲೀಸರು ತಾವು ಪ್ರಶ್ನಾತೀತ ಸಂಘಟನೆ ಎಂದೇ ತಿಳಿದಿದ್ದಾರೆ. ಪೊಲೀಸರಿಗೆ ಪ್ರಶ್ನೆ ಮಾಡುವುದೇ ಒಂದು ಅಪರಾಧ ಎಂಬ ಮನೋಭಾವ ಅವರ ಆಳವಾದ ಮನಸ್ಸಿನಲ್ಲಿ ಅಚ್ಚೊತ್ತಿದೆ.

- Advertisement -
- Advertisement -

ತಮಿಳಿನ ಪ್ರಮುಖ ಬರಹಗಾರರಲ್ಲಿ ಒಬ್ಬರಾದ ’ಚಂದ್ರಕುಮಾರ್’ ಅವರ ಕಾದಂಬರಿಯಾದ ’ಲಾಕಪ್’ ಮತ್ತು ಇದೇ ಕಾದಂಬರಿಯನ್ನು ಆಧರಿಸಿ 2015ರಲ್ಲಿ ಬಿಡುಗಡೆಯಾದ ’ವಿಸಾರಣೈ’ ಎಂಬ ಚಿತ್ರ ಕಳೆದ ಕೆಲವು ದಿನಗಳಲ್ಲಿ ಮತ್ತೆ ಮುನ್ನಲೆಗೆ ಬಂದು ಚರ್ಚೆಯಾಗುತ್ತಿದೆ. ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತಾನ್ಕುಳಂನಲ್ಲಿ ನಡೆದಿರುವ ಜೋಡಿ ಲಾಕಪ್ ಡೆತ್ ಪ್ರಕರಣ ಇದಕ್ಕೆ ಕಾರಣ ಎಂದು ಊಹಿಸಲು ಕಷ್ಟವೇನಲ್ಲ.

ಅಸಲಿಗೆ “ಲಾಕಪ್” ಎಂಬ ಕಾದಂಬರಿ ನೈಜ ಘಟನೆಯ ಎಳೆಯನ್ನು ಆಧರಿಸಿದ್ದ ಕಾದಂಬರಿ. 30 ವರ್ಷಗಳ ಹಿಂದೆ ತಾನು ಸ್ವತಃ ಜೈಲಿನಲ್ಲಿ ಅನುಭವಿಸಿದ್ದ ಘೋರ ದೈಹಿಕ ದೌರ್ಜನ್ಯದ ಕುರಿತು ಬರಹಗಾರ ಚಂದ್ರಕುಮಾರ್ ಈ ಪುಸ್ತಕದಲ್ಲಿ ಓದುಗರಿಗೆ ಅಘಾತವಾಗುವಂತೆ ಬರೆದಿದ್ದರು. ಈ ಪುಸ್ತಕವನ್ನು ಅಷ್ಟೇ ಶ್ರದ್ಧೆಯಿಂದ ಪರಿಣಾಮಕಾರಿಯಾಗಿ ಅಡವಳಿಸಿಕೊಂಡು ಸಿನಿಮಾ ಮಾಡುವಲ್ಲಿ ನಿರ್ದೇಶಕ ವೆಟ್ರಿಮಾರನ್ ಯಶಸ್ವಿಯಾಗಿದ್ದರು.

ಇದು 30 ವರ್ಷದ ಹಿಂದಿನ ಕಥೆ. ಆದರೆ, ಪಸ್ತುತ ದಿನಗಳಲ್ಲಿ ಮಾನವ ಹಕ್ಕುಗಳು ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕಾದಂಬರಿಯಲ್ಲಿ ಉಲ್ಲೇಖಿಸಿರುವಂತೆಯೇ ಪೊಲೀಸರ ದೌರ್ಜನ್ಯಕ್ಕೆ ಈಗಲೂ ಜನ ಬಲಿಯಾಗುತ್ತಿದ್ದಾರೆ ಎಂಬುದು ಇಂತಹ ಸಂದರ್ಭದಲ್ಲೂ ಹೋಲಿಕೆಯಾಗುತ್ತಿರುವ ಮಾತ್ರ ದುರಂತ. ಪೊಲೀಸರ ಪೈಶಾಚಿಕ ಕೃತ್ಯಕ್ಕೆ ಎರಡೆರಡು ಲಾಕಪ್ ಡೆತ್ ಆಗುತ್ತದೆ ಎಂದರೆ ಇಡೀ ವ್ಯವಸ್ಥೆ ತಲೆತಗ್ಗಿಸಬೇಕಿದೆ.

ಕಳೆದ ಜೂನ್ 19 ರಂದು ತಮಿಳುನಾಡಿನ ಪೊಲೀಸ್ ದೌರ್ಜನ್ಯಕ್ಕೆ ಬಲಿಯಾದ ಜಯರಾಜ್ ಮತ್ತು ಬೆನಿಕ್ಸ್ ಸಾವಿನ ವಿರುದ್ಧ ಇಂದು ಇಡೀ ತಮಿಳುನಾಡಿನ ಜನ ಒಟ್ಟಾಗಿ ಹೋರಾಟ ನಡೆಸುತ್ತಿದ್ದಾರೆ. ಭಾರತದ ವಿವಿಧ ಮೂಲೆಗಳಿಗೂ ಈ ಹೋರಾಟ ಹಬ್ಬಿದೆ.

ಪರಿಣಾಮ ಸ್ವಯಂಪ್ರೇರಿತವಾಗಿ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ತಮಿಳುನಾಡಿನ ಮಧುರೈ ಹೈಕೋರ್ಟ್ ಪೀಠ ತಪ್ಪಿತಸ್ಥ ನಾಲ್ಕೂ ಪೊಲೀಸ್ ಅಧಿಕಾರಿಗಳ ವಿರುದ್ಧ ಕೊಲೆ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಅಲ್ಲದೆ, ಈ ಪ್ರಕರಣವನ್ನು ಈಗಾಗಲೇ ಸಿಬಿಐ ವಿಚಾರಣೆಗೆ ವರ್ಗಾಯಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸಾತಾನ್ಕುಳಂ ಘಟನೆಯ ಬಗ್ಗೆ ’ಲಾಕಪ್’ ಕಾದಂಬರಿ ಬರಹಗಾರ ಚಂದ್ರಕುಮಾರ್ ’ನ್ಯಾಯಪಥ’ದ ಜೊತೆಗೆ ಮಾತನಾಡಿದ್ದಾರೆ. ಈ ಘಟನೆ ಮತ್ತು ಭಾರತದಲ್ಲಿ ನಡೆಯುತ್ತಿರುವ ಪೊಲೀಸ್ ಅರಾಜಕತೆಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

“ಲಾಕಪ್ ಇದು ನೈಜ ಘಟನೆಯನ್ನು ಆಧರಿಸಿ ಬರೆದ ಕಾದಂಬರಿ. ಆದರೆ, ವರ್ಷಗಳೇ ಉರುಳಿದರೂ ಪೊಲೀಸರ ದೌರ್ಜನ್ಯ ಮಾತ್ರ ಈವರೆಗೆ ಬದಲಾಗಿಲ್ಲ. 1983ರಲ್ಲಿ ನಾನು ಮಾಡದ ತಪ್ಪಿಗೆ ಎರಡು ವಾರಗಳ ಕಾಲ ನನ್ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಅಂದು ಸತತ ಎರಡು ವಾರಗಳ ಕಾಲ ಪೊಲೀಸರು ನಡೆಸಿದ ದೌರ್ಜನ್ಯದಿಂದ ನಾನು ಬದುಕಿ ಬಂದದ್ದೇ ದೊಡ್ಡ ಪವಾಡ.

“ಆನಂತರವೂ ಕಳೆದ 37 ವರ್ಷಗಳಿಂದ ದೇಶದ ನಾನಾ ಮೂಲೆಗಳಲ್ಲಿ ಪೊಲೀಸರು ನಡೆಸುತ್ತಿರುವ ದೌರ್ಜನ್ಯದ, ಲಾಕಪ್ ಡೆತ್ ಕುರಿತ ಸುದ್ದಿಗಳನ್ನು ನಾನು ಕೇಳುತ್ತಲೇ ಇದ್ದೇನೆ. ಆದರೆ, ಜಯರಾಜ್ ಮತ್ತು ಬೆನಿಕ್ಸ್ ಸಾವು ಮಾತ್ರ ಮಾನವ ಸಮಾಜ ಅರಗಿಸಿಕೊಳ್ಳಲು ಸಾಧ್ಯವಾಗದ ಕ್ರೌರ್ಯದ ಪರಮಾವಧಿ ಎಂದರೆ ತಪ್ಪಾಗಲಾರದು.

“ಪೊಲೀಸರ ಕೈಗೆ ಶಸ್ತ್ರವನ್ನು ಕೊಡಲಾಗಿದೆ. ಎಲ್ಲೇ ತಪ್ಪು ನಡೆದರೂ ಸಹ ಅದನ್ನು ಪ್ರಶ್ನೆ ಮಾಡುವ ಹಕ್ಕು ನೀಡಲಾಗಿದೆ. ಈ ಅಧಿಕಾರವನ್ನು ಪೊಲೀಸರು ಸಮಾಜಘಾತುಕ ಶಕ್ತಿಯ ವಿರುದ್ಧ ಬಳಸಬೇಕು. ಆದರೆ, ದುರಾದೃಷ್ಟವಶಾತ್ ಅವರ ಈ ಶಕ್ತಿ ಸಾಮಾಜಿಕ ಧಮನಕ್ಕೆ ಮತ್ತು ಜನರನ್ನು ಕೊಲ್ಲುವ ಮೂಲಭೂತ ಅರ್ಹತೆಯಾಗಿ ಬದಲಾಗಿದೆ.

“ಕ್ರೌರ್ಯ ಮತ್ತು ನಿರ್ದಯಿಗಳಿಗೆ ಮಾತ್ರ ಪೊಲೀಸ್ ಕೆಲಸ ಎಂಬಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಜಯರಾಜ್ ಮತ್ತು ಬೆನಿಕ್ಸ್ ಸಾವಿಗಾಗಿ ಈ ಪೊಲೀಸರಿಗೆ ಏನೇ ಶಿಕ್ಷೆ ನೀಡಿದರೂ ಸಹ, ಖಂಡಿತ ಅದರಿಂದ ಸತ್ತವರಿಗೆ ನ್ಯಾಯ ದೊರಕಲಾಗದು.

“ತಕ್ಕ ಮಟ್ಟಿಗೆ ಪೊಲೀಸರು 24 ಗಂಟೆ ಕೆಲಸ ನಿರ್ವಹಿಸಲು ಮಾನಸಿಕವಾಗಿ ಸಿದ್ದವಾದ ನಂತರವೇ ಪೊಲೀಸ್ ಇಲಾಖೆಯು ಅವರನ್ನು ಕೆಲಸಕ್ಕೆ ನಿಯೋಜಿಸುತ್ತದೆ. ಸಮಾಜದಲ್ಲಿನ ಆಂತರಿಕ ಹಿಂಸಾಚಾರವನ್ನು ನಿಗ್ರಹಿಸುವ ಮೂಲಕ ಜನರಲ್ಲಿ ಶಾಂತಿ ಮತ್ತು ನೆಮ್ಮದಿ ತರುವುದು ಅವರ ಕೆಲಸ. ಆದರೆ, ಹೊರಗಿನ ಜನರಿಗೆ ತಿಳಿದಿರುವ ಪೊಲೀಸರ ಚಿತ್ರಕ್ಕಿಂತ ಅವರ ಕೆಲಸ ಮತ್ತು ಮಾನಸಿಕ ಸ್ಥಿತಿ ಭಿನ್ನ ಎಂಬುದೇ ಸತ್ಯ.

“ಅಸಲಿಗೆ ಪೊಲೀಸ್ ಇಲಾಖೆಯಲ್ಲಿ ಪೊಲೀಸರು ಕಾನೂನು ಸುವ್ಯವಸ್ಥೆಯನ್ನು ಪರಿಪಾಲಿಸಬಾರದು ಎಂಬ ಕಾರಣಕ್ಕೆ ಲಂಚ ಎಂಬ ಅಸ್ತ್ರ ಅಧಿಕಾರ ವರ್ಗದಲ್ಲಿ ಕೆಳಗಿನಿಂದ ಮೇಲ್ಮುಖವಾಗಿ ಚಲಿಸುತ್ತದೆ. ಈ ಸಮಸ್ಯೆಯನ್ನು ಸಂಪೂರ್ಣವಾಗಿ ಬದಲಿಸದೆ ಸಮಸ್ಯೆಯನ್ನು ಪರಿಹರಿಸುವುದು ಸಾಧ್ಯವಿಲ್ಲ. ಪೊಲೀಸರಿಂದ ನೈತಿಕತೆಯನ್ನು – ಕರುಣೆಯನ್ನು ಎದುರುನೋಡುವುದಂತೂ ಅಸಾಧ್ಯವಾದ ಮಾತು.

“ಇನ್ನೂ ಕಳೆದ ಮೂರು ನಾಲ್ಕು ತಿಂಗಳಿನಿಂದ ದೇಶದಾದ್ಯಂತ ಲಾಕ್‍ಡೌನ್ ಜಾರಿ ಮಾಡಲಾಗಿದೆ. ಇದರಿಂದ ಯಾವುದೇ ವ್ಯಾಪಾರ ವಹಿವಾಟು ನಡೆದಿಲ್ಲ. ಜನ ಮನೆಯಿಂದ ಹೊರಗಡೆ ಹೋಗಿಲ್ಲ. ಹೀಗಾಗಿ ಪೊಲೀಸರಿಗೆ ಲಂಚದ ರೂಪದಲ್ಲಿ ಹರಿದು ಬರಬೇಕಾಗಿದ್ದ ಅಪಾರ ಪ್ರಮಾಣದ ಹಣ ಅವರ ಕೈಸೇರಿಲ್ಲ. ಇದು ಸಾಮಾನ್ಯವಾಗಿ ಅವರ ಮಾನಸಿಕ ಸ್ಥಿಮಿತವನ್ನು ಹದಗೆಡಿಸಿದೆ. ಸ್ವಯಂ-ಅಸಮ್ಮತಿ, ಒತ್ತಡ ಮತ್ತು ಅತಿರೇಕದ ಚಟುವಟಿಕೆ ಕಾರಣವಾಗಿದೆ.

“ಈ ನಡುವೆ ಕಳೆದ ತಿಂಗಳು ಪೊಲೀಸ್ ಅಧಿಕಾರಿ ರಘು, ಬೆನಿಕ್ಸ್ ಮೊಬೈಲ್ ಅಂಗಡಿಯಲ್ಲಿ ಉಚಿತವಾಗಿ ಮೊಬೈಲ್ ಕೇಳಿದ್ದಾರೆ. ಮೊದಲೇ ವ್ಯಾಪಾರ ಇಲ್ಲದ ಕಾರಣ ಬೆನಿಕ್ಸ್ ಉಚಿತವಾಗಿ ಮೊಬೈಲ್ ನೀಡಲು ನಿರಾಕರಿಸಿದ್ದಾರೆ. ಇದೇ ಕೋಪದಲ್ಲಿ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಇನ್ನು ಅವರನ್ನು ಕೊಲ್ಲಬೇಕು ಎಂದೇ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ ಎಂಬುದು ಘಟನೆಗಳನ್ನು ಪರಾಮರ್ಶಿಸಿದರೆ ತಿಳಿಯುತ್ತದೆ.

“ಏಕೆಂದರೆ ಸಾಮಾನ್ಯವಾಗಿ ಯಾರನ್ನಾದರೂ ಕೊಲ್ಲಬೇಕು ಎಂದರೆ ಮಾತ್ರ ಪೊಲೀಸರು ಅಪರಾಧಿಗಳ ಗುದದ್ವಾರದಲ್ಲಿ ಲಾಠಿ ಪ್ರಯೋಗಿಸುತ್ತಾರೆ. ಜಯರಾಜ್ ಮತ್ತು ಬೆನಿಕ್ಸ್ ಅವರನ್ನು ನಗ್ನಗೊಳಿಸಿ ಅವರಿಬ್ಬರ ಗುದದ್ವಾರದಲ್ಲಿ ಲಾಠಿ ಪ್ರಯೋಗಿಸಿರುವುದು ನಿಜ ಎಂಬುದಾದರೆ, ಆ ಇಬ್ಬರೂ ಅಮಾಯಕನ್ನು ಕೊಲೆ ಮಾಡುವುದೇ ಪೊಲೀಸರ ಉದ್ದೇಶವಾಗಿತ್ತು ಎಂಬುದು ವೇದ್ಯವಾಗುತ್ತದೆ.

ವಿಸಾರಣೈ ಸಿನಿಮಾದ ದೃಶ್ಯ

ಭಾರತದ ಮಟ್ಟಿಗೆ ಪೊಲೀಸರು ತಾವು ಪ್ರಶ್ನಾತೀತ ಸಂಘಟನೆ ಎಂದೇ ತಿಳಿದಿದ್ದಾರೆ. ಪೊಲೀಸರಿಗೆ ಪ್ರಶ್ನೆ ಮಾಡುವುದೇ ಒಂದು ಅಪರಾಧ ಎಂಬ ಮನೋಭಾವ ಅವರ ಆಳವಾದ ಮನಸ್ಸಿನಲ್ಲಿ ಅಚ್ಚೊತ್ತಿದೆ.

ಉದಾಹರಣೆಗೆ:- ಪೊಲೀಸರಿಗೆ ಹಣ ನೀಡಿದರೆ ನೀವು ರಾತ್ರಿ ಎಷ್ಟು ಹೊತ್ತು ಬೇಕಿದ್ದರೂ ಅಂಗಡಿ ಬಾಗಿಲು ತೆರೆಯಬಹುದು. ಇಲ್ಲದಿದ್ದರೆ ವ್ಯಾಪಾರಕ್ಕೆ ಅವಕಾಶ ಇಲ್ಲ. ಈ ಕುರಿತು ಪ್ರಶ್ನೆ ಮಾಡಿದ ಕಾರಣಕ್ಕಾಗಿಯೇ ಇಂದು ಜಯರಾಜ್ ಮತ್ತು ಬೆನಿಕ್ಸ್ ಅನ್ಯಾಯವಾಗಿ ಬಲಿಯಾಗಿದ್ದಾರೆ. ದೇಶದಲ್ಲಿ ಪೊಲೀಸರು ಉದ್ದೇಶಪೂರ್ವಕವಾಗಿ ಕಾನೂನನ್ನು ನಿಯಂತ್ರಿಸುತ್ತಿದ್ದಾರೆ. ಇದು ವ್ಯವಸ್ಥೆಯ ಭಾಗವಾಗಿರುವ ಎಲ್ಲರಿಗೂ ತಿಳಿಯದ ವಿಚಾರವೇನಲ್ಲ. ಹಲವೆಡೆ ಪೊಲೀಸರೇ ಹಣವನ್ನು ಬೆದರಿಸಿ ಸುಲಿಗೆ ಮಾಡಿರುವ ಉದಾಹರಣೆಗಳೂ ದೇಶದಲ್ಲಿ ಸಾಕಷ್ಟಿವೆ.

“ಇನ್ನೂ ಲಾಕಪ್‍ಡೆತ್ ಭಾರತದ ಮಟ್ಟಿಗೆ ಹೊಸದೇನಲ್ಲ. ಕೇಂದ್ರ ಅಪರಾಧ ವಿಭಾಗ ನೀಡುವ ಅಂಕಿಅಂಶದ ಪ್ರಕಾರ 2019ರಲ್ಲಿ ಭಾರತದಲ್ಲಿ 1,606 ಜನ ಪೊಲೀಸರ ಸುಪರ್ದಿಯಲ್ಲಿದ್ದಾಗ ಲಾಕಪ್‍ನಲ್ಲೇ ಸಾವಿಗೀಡಾಗಿದ್ದಾರೆ. ಈ ಪೈಕಿ ಉತ್ತರಪ್ರದೇಶದಲ್ಲಿ ಅಧಿಕ ಜನ ಸಾವನ್ನಪ್ಪಿದ್ದರೆ, ತಮಿಳುನಾಡು, ಪಂಜಾಬ್ ಮತ್ತು ಬಿಹಾರ ಎರಡನೇ ಸ್ಥಾನದಲ್ಲಿವೆ. ಹಾಗಾದರೆ ಈ ಲಾಕಪ್ ಡೆತ್‍ಗಳಗೆ ಪರಿಹಾರ ಏನು? ಎಂಬುದು ನಮ್ಮ ಮುಂದೆ ನಿಲ್ಲುವ ಬಹುದೊಡ್ಡ ಪ್ರಶ್ನೆ.

“ಅಸಲಿಗೆ ದೇಶದಲ್ಲಿ ಸಾಕಷ್ಟು ಲಾಕಪ್‍ಡೆತ್‍ಗಳು ಸಂಭವಿಸುತ್ತಲೇ ಇವೆ. ಆದರೂ, ಇವುಗಳಿಗೆ ಕೊನೆ ಇಲ್ಲ ಏಕೆ? ಎಂದರೇ, ಲಾಕಪ್‍ಡೆತ್ ಅಪರಾಧದಲ್ಲಿ ಪಾಲ್ಗೊಂಡ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ದೇಶದಲ್ಲಿ ಪ್ರಬಲವಾದ ಕಾನೂನು ಇಲ್ಲ. ಹೆಚ್ಚೆಂದರೆ ಆರೋಪಿ ಪೊಲೀಸ್ ಅಧಿಕಾರಿಯನ್ನು ಮೂರು ತಿಂಗಳ ಕಾಲ ಸಸ್ಪೆಂಡ್ ಮಾಡಿ ಬೇರೆಡೆ ವರ್ಗಾವಣೆ ಮಾಡಲಾಗುತ್ತದೆ. ಭವಿಷ್ಯದಲ್ಲಿ ಪ್ರಕರಣ ಖುಲಾಸೆಯಾಗುತ್ತದೆ. ಆತ ಮತ್ತೆ ಉನ್ನತ ಹುದ್ದೆಗೆ ಏರುತ್ತಾನೆ. ಆದರೆ, ಆತನಿಂದ ಸತ್ತ ವ್ಯಕ್ತಿಗೆ ಕೊನೆಯವರೆಗೂ ನ್ಯಾಯ ದೊರೆಯುವುದೇ ಇಲ್ಲ.

“ಹೀಗಾಗಿ ಇನ್ನಾದರೂ ಲಾಕಪ್‍ಡೆತ್ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು. ಸ್ಥಳಾಂತರಿಸುವುದು, ವಜಾಗೊಳಿಸುವುದು ಇದಕ್ಕೆ ಪರಿಹಾರವಲ್ಲ. ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿ ಗಾಯಗೊಂಡಿದ್ದರೂ ಸುಳ್ಳು ಪ್ರಮಾಣ ಪತ್ರ ನೀಡುವ ಸರ್ಕಾರಿ ವೈದ್ಯಾಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕು. ಇಂತಹ ಕ್ರಮಗಳಿಂದ ಮಾತ್ರ ಪ್ರಜಾಪ್ರಭುತ್ವವನ್ನು ಉಳಿಸುವುದು ಸಾಧ್ಯ. ಇಲ್ಲದಿದ್ದರೆ, ಫ್ಯಾಸಿಸಂ ಆಡಳಿತಕ್ಕೂ ಪ್ರಜಾಪ್ರಭುತ್ವಕ್ಕೂ ವ್ಯತ್ಯಾಸ ಇಲ್ಲದಂತಾಗುತ್ತದೆ.

“ಅಮೇರಿಕದ ಜಾರ್ಜ್ ಫ್ಲಾಯ್ಡ್ ಸಾವಿಗೆ ಒಟ್ಟುಗೂಡುತ್ತಿರುವ ಜನಸಮೂಹವು ಜಯರಾಜ್ ಬೆನಿಕ್ಸ್ ಸಾವಿಗೂ ಒಂದಾಗಬೇಕು. ಜಾರ್ಜ್ ಫ್ಲಾಯ್ಡ್ ಅವರಿಗಾದ ಅನ್ಯಾಯದ ವಿರುದ್ಧದ ಹೋರಾಟಗಳು ಸ್ವಾಗತಾರ್ಹ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನರು ಬೀದಿಗಳಲ್ಲಿ, ಮಾಧ್ಯಮಗಳ ಮೂಲಕ ಜಾರ್ಜ್ ಪರವಾಗಿ ಹೋರಾಡಿದರು. ಜಾರ್ಜ್ ಫ್ಲಾಯ್ಡ್ ಪರ ಹೋರಾಟಗಳು ಭಾರತದಲ್ಲಿ ರಾಜಕೀಯ ಬದಲಾವಣೆಯನ್ನು ತರುವುದಿಲ್ಲ. ಆದರೆ, ಜಯರಾಜ್ ಮತ್ತು ಬೆನಿಕ್ಸ್ ಪರವಾದ ಹೋರಾಟ ಇಲ್ಲಿ ರಾಜಕೀಯ ಬದಲಾವಣೆಯನ್ನು ತರಬಲ್ಲದು.

“ತಮಿಳುನಾಡಿನ ಡೈರಿ ಅಸೋಸಿಯೇಷನ್ ಮತ್ತು ವ್ಯಾಪಾರ ಸಂಘಟನೆಗಳು ತಪ್ಪಿತಸ್ಥ ಪೊಲೀಸರ ಕುಟುಂಬಗಳಿಗೆ ನಾವು ಯಾವುದೇ ಆಹಾರ ಸಾಮಗ್ರಿಗಳನ್ನು ನೀಡುವುದಿಲ್ಲ ಎಂದು ಒಮ್ಮತದ ನಿರ್ಣಯ ತೆಗೆದುಕೊಂಡಿದೆ. ಇದು ಸ್ವಾಗತಾರ್ಹ. ಆದರೆ, ನಾಡಿನ ಎಲ್ಲಾ ಜನರ ಇಂತಹ ಮಾನವೀಯ ಹೋರಾಟದ ಭಾಗವಾದರೆ ಮಾತ್ರ ವ್ಯವಸ್ಥೆಯನ್ನು ಬದಲಿಸುವುದು ಸಾಧ್ಯ. ಜನರ ಇಂತಹ ಸಾತ್ವಿಕ ಸಿಟ್ಟಿನ ಫಲಿತಾಂಶ ಮುಂದಿನ ಚುನಾವಣೆಯಲ್ಲಿ ಹೊರಹೊಮ್ಮಲಿದೆ.

“ಇನ್ನೂ ಜನರ ಮೇಲಿನ ಪೊಲೀಸರ ದೌರ್ಜನ್ಯವನ್ನು ಕಡಿಮೆ ಮಾಡಲು ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ನಾವು ಕಳೆದ 10 ವರ್ಷಗಳಿಂದ ಹೋರಾಡುತ್ತಿದ್ದೇವೆ. ಆದರೆ, ಆ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸ್ ಠಾಣೆಯ ಸುರಕ್ಷತೆಗಾಗಿ ಹೊರಗೆ ಅಳವಡಿಸಲಾಗಿದೆಯೇ ಹೊರತು, ಪೊಲೀಸ್ ಠಾಣೆಯ ಒಳಗೆ ಅಳವಡಿಸಲಾಗಿಲ್ಲ. ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸ್ ಠಾಣೆಯ ಒಳಗೂ ಅಳವಡಿಸುವವರೆಗೆ ಪಾರದರ್ಶಕತೆ ಅಸಾಧ್ಯ.”


ಇದನ್ನು ಓದಿ: 8 ಪೊಲೀಸರ ಹತ್ಯೆಗೆ ಕಾರಣವಾಗಿದ್ದ ಕ್ರಿಮಿನಲ್ ವಿಕಾಸ್ ದುಬೆ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...