Homeಅಂಕಣಗಳುಎಲೆಮರೆಯಿಂದಅಮಲ್ ದೆಪ್ಪಡೇ, ಓ ಅಕಲ್ ತಪ್ಪಡೇ..: ಅಮಲು ಸೇವಿಸದಿರಿ... ಓ ಮತಿ ತಪ್ಪದಿರಿ

ಅಮಲ್ ದೆಪ್ಪಡೇ, ಓ ಅಕಲ್ ತಪ್ಪಡೇ..: ಅಮಲು ಸೇವಿಸದಿರಿ… ಓ ಮತಿ ತಪ್ಪದಿರಿ

- Advertisement -
- Advertisement -

ತುಳು ಭಾಷೆ ಅರಿಯದವರು ಈ ಶೀರ್ಷಿಕೆ ನೋಡಿ ಗಲಿಬಿಲಿಗೊಳ್ಳಬಹುದು.. ಇದು ತುಳು, ಕನ್ನಡ ಮತ್ತು ಹವ್ಯಕ ಭಾಷೆಯ ಕವಿ ನನ್ನೂರಿನ ನರ್ಕಳ ಮಾರಪ್ಪ ಶೆಟ್ಟರ ಪ್ರಸಿದ್ಧ ಕವನವೊಂದರ ಸಾಲು. ಇದು ತುಳುನಾಡಿನಲ್ಲಿ ಮದ್ಯಪಾನ ವಿರೋಧೀ ಜನಜಾಗೃತಿ ಸಭೆಗಳಲ್ಲಿ ಲಾವಣಿಯಂತೆ ಹಾಡಲ್ಪಡುತ್ತಿದ್ದ ಸಾಲುಗಳು..
ಇದರರ್ಥ “ಅಮಲು ಸೇವಿಸದಿರಿ… ಓ ಮತಿ ತಪ್ಪದಿರಿ..”

ಕರ್ನಾಟಕ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಹೊರತಂದ `ಶತಮಾನದ ಬೆಳಕು’ ಎಂಬ ಗ್ರಂಥದಲ್ಲಿ ಇಸ್ಮತ್ ಪಜೀರ್ ಬರೆದ `ಕನ್ನಡದ ಸಹೋದರ ಭಾಷೆಗಳಲ್ಲಿ ಸಾಹಿತ್ಯದ ಬೆಳವಣಿಗೆ’ ಎಂಬ ದೀರ್ಘ ಪ್ರಬಂಧವೊಂದನ್ನು ಓದುತ್ತಿದ್ದಂತೆ ನರ್ಕಳ ಮಾರಪ್ಪ ಶೆಟ್ಟರ ಹೆಸರು ಕಣ್ಣಿಗೆ ಬಿತ್ತು. ಅಲ್ಲಿಂದ ಈ ಶೆಟ್ಟರ ಜಾಡು ಹಿಡಿದು ಹೊರಟೆ. ಕಾರಣ ನರ್ಕಳವೆಂಬುವುದು ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ನನ್ನೂರು ಕುಳಾಲು ಎಂಬಲ್ಲಿರುವ ಒಂದು ಪುಟ್ಟ ಹಳ್ಳಿ. ಶೆಟ್ಟರ ಬಗ್ಗೆ ನನ್ನೂರಿನಲ್ಲಿ ವಿಚಾರಿಸಿದಾಗ ಗೊತ್ತಿಲ್ಲ ಎಂದವರೇ ಎಲ್ಲಾ. ಸೋಜಿಗವೇನೆಂದರೆ, ಇಸ್ಮತ್ ನರ್ಕಳ ಮಾರಪ್ಪ ಶೆಟ್ಟರ ಸಾಹಿತ್ಯದ ಕುರಿತಂತೆ “ಶತಮಾನದ ಬೆಳಕು” ಎಂಬ ಗ್ರಂಥದಲ್ಲಿ ಚರ್ಚೆ ನಡೆಸಿದ್ದಾರಾದರೂ ಅವರಿಗೂ ಈ ನರ್ಕಳ ನನ್ನೂರಿನ ಪಕ್ಕದ ಹಳ್ಳಿ ಎಂದು ಗೊತ್ತೇ ಇರಲಿಲ್ಲ.

ನಾನು ಶೆಟ್ಟರ ಕುರಿತ ಹುಡುಕಾಟ ಬಿಡಲಿಲ್ಲ. ವರ್ಷಗಳ ನಂತರ ಹೊಸಕಟ್ಟಡಕ್ಕೆ ಸ್ಥಳಾಂತರಗೊಂಡ ಸಾಲೆತ್ತೂರಿನ ಸಾರ್ವಜನಿಕ ಗ್ರಂಥಾಲಯಕ್ಕೆ ನರ್ಕಳ ಮಾರಪ್ಪ ಶೆಟ್ಟರ ಹೆಸರಿಟ್ಟಿರುವುದನ್ನು ನೋಡಿದ್ದೇ ತಡ ಲೈಬ್ರರಿಯ ಮೆಟ್ಟಿಲು ಹತ್ತಿದೆ. ಗ್ರಂಥಪಾಲಕಿಯ ಬಳಿ ಶೆಟ್ಟರ ಬಗ್ಗೆ ವಿಚಾರಿಸಿದಾಗ ಆಕೆ “ನರ್ಕಳ ಮಾರಪ್ಪ ಶೆಟ್ಟರ ಬದುಕು ಮತ್ತು ಬರಹ” ಎಂಬ ಗ್ರಂಥವೊಂದನ್ನು ಉಡುಗೊರೆಯಾಗಿ ನೀಡಿದರು. ಅಲ್ಲಲ್ಲಿ ಚದುರಿಹೋಗಿದ್ದ ಅವರ ಬದುಕು ಮತ್ತು ಬರಹವನ್ನು ಸಾದ್ಯಂತ ಸಂಗ್ರಹಿಸಿ ಗ್ರಂಥ ರೂಪಕ್ಕಿಳಿಸಿದ್ದು 1989ರ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ, ಮಾರಪ್ಪ ಶೆಟ್ಟರ ಮಗನಾದ ನರ್ಕಳ ರಘುನಾಥ ಶೆಟ್ಟರು… ಅದೂ ಬಹಳ ತಡವಾಗಿ.

ಇಂತಹ ಘನ ವ್ಯಕ್ತಿತ್ವವನ್ನು ಹೊಸ ಪೀಳಿಗೆಗೆ ಪರಿಚಯಿಸದ ನಮ್ಮೂರಿನ ಜನರ ಬಗ್ಗೆ, ನಾ ಕಲಿತ ಕುಳಾಲು ಶಾಲೆಯಲ್ಲಿ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದರೂ ಅವರ ಬಗ್ಗೆ ಪರಿಚಯಿಸಿ ಕೊಡದ ನನ್ನ ಶಿಕ್ಷಕರ ಬಗ್ಗೆ, ಸ್ವಾತಂತ್ರ‍್ಯ ಹೋರಾಟಗಾರನಾಗಿದ್ದರೂ ಕನಿಷ್ಟ ಸ್ವಾತಂತ್ರ‍್ಯ ದಿನದಂದಾದರೂ ಸ್ಮರಿಸದಿರುವುದರ ಬಗ್ಗೆ ಖೇದವಿದೆ.

1894ರಲ್ಲಿ ನರ್ಕಳದಲ್ಲಿ ಜನಿಸಿದ ಮಾರಪ್ಪ ಶೆಟ್ರು ನರ್ಕಳ ಮನೆತನದ ಅವಿಭಕ್ತ ಕುಟುಂಬದ ಮೊದಲ ವಿದ್ಯಾವಂತ. ನಮ್ಮೂರಿಗೂ ಅವರೇ ಮೊದಲಿಗರಿರಬೇಕು. ಎಳವೆಯಲ್ಲೇ ಅಧ್ಯಾಪಕನಾಗಬೇಕೆಂಬ ಕನಸ ಹೊತ್ತಿದ್ದ ಶೆಟ್ಟರು ತನ್ನ ಹದಿನಾಲ್ಕನೇ ವಯಸ್ಸಿಗೇ ತಾನು ಕಲಿತ ಸಾಲೆತ್ತೂರು ಶಾಲೆಯಲ್ಲೇ ಅಧ್ಯಾಪಕರಾದರು..!! ಅವರ ಅಧ್ಯಾಪನದ ಕನಸನ್ನು ನನಸಾಗಿಸಿದವರು ತುಳುನಾಡಿನ ಮಹಾಕವಿ ಪಂಜೆ ಮಂಗೇಶರಾಯರು. ಆಗಿನ ಬ್ರಿಟಿಷ್ ಸರಕಾರದ ನಿಯಮದಂತೆ ಶಾಲಾ ಇನ್ಸ್ಪೆಕ್ಟರ್‌ಗಳೇ ಜಾಣ ವಿದ್ಯಾರ್ಥಿಗಳನ್ನು ಗುರುತಿಸಿ ಶಿಕ್ಷಕರಾಗಿ ನೇಮಿಸಬೇಕಿತ್ತು. ಜೊತೆಗೆ ಶಿಕ್ಷಕ ತರಬೇತಿಗೆ ಶಿಫಾರಸು ಮಾಡಬೇಕಿತ್ತು.

ಶೆಟ್ಟರು ಸಾಲೆತ್ತೂರು ಶಾಲೆಯಲ್ಲಿ ೪ನೇ ತರಗತಿಯಲ್ಲಿ (ಫಾರಂ) ವ್ಯಾಸಂಗ ಮಾಡುತ್ತಿದ್ದಾಗ ಶಾಲಾ ಪರೀಕ್ಷಾಧಿಕಾರಿಯಾಗಿ ಬಂದ ಪಂಜೆಯವರು ಶೆಟ್ಟರನ್ನು ಮೂರು ರೂಪಾಯಿ ಮಾಸಿಕ ವೇತನದೊಂದಿಗೆ ಅದೇ ಶಾಲೆಗೆ ಅಧ್ಯಾಪಕರನ್ನಾಗಿ ನೇಮಿಸಿದರು. ಆರು ವರ್ಷಗಳ ನಂತರ ತರಬೇತಿ ಪಡೆದು ಅಧಿಕೃತ ಶಿಕ್ಷಕರಾದರು. ಕೊಡ್ಲಮೊಗರು, ಮೂಡಂಬೈಲು, ಅಡ್ಯನಡ್ಕ ಅಷ್ಟೇ ಅಲ್ಲದೇ ನಾ ಕಲಿತ ಕುಳಾಲು ಶಾಲೆಯಲ್ಲೂ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಇನ್ನೂ ಕೆಲವೆಡೆ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದರೂ ಅದರ ದಾಖಲೆಗಳು ಲಭ್ಯವಾಗಿಲ್ಲ. ಅಧ್ಯಾಪನದ ಜೊತೆಜೊತೆಗೆ ಅಕ್ಷರ ಬಿತ್ತುವ ಕಾಯಕದಲ್ಲೂ ತೊಡಗಿಸಿಕೊಂಡರು. ಶಾಲೆಯೇ ಇಲ್ಲದ ಮೂಡಂಬೈಲಿನಲ್ಲಿ ಮಕ್ಕಳನ್ನೆಲ್ಲಾ ಕೂಡಿಸಿ ಸಣ್ಣ ಗುಡಿಸಲೊಂದರಲ್ಲಿ ಶಾಲೆಯನ್ನು ಪ್ರಾರಂಭಿಸಿದರು. ಮಂಗಳೂರಿನ ಬಿಜೈಯಲ್ಲಿ ಲೂರ್ಡ್ಸ್ ಪ್ರೌಢಶಾಲೆ ಸ್ಥಾಪನೆಗೆ ತನು, ಮನ, ಧನದೊಂದಿಗೆ ಶ್ರಮಿಸಿದರು. ವಯಸ್ಕರಿಗಾಗಿ ಅಡ್ಯನಡ್ಕದಲ್ಲಿ ರಾತ್ರಿ ಶಾಲೆ ಪ್ರಾರಂಭಿಸಿದರು. ಶೆಟ್ಟರ ಪಾಠ ಮಾಡುವ ಪ್ರಾಯೋಗಿಕ ಶೈಲಿ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಮೂಡಿಸುತ್ತಿತ್ತು.ನಾನೀಗ ನನ್ನ ಮಗಳಿಗೆ ಅಕ್ಷರ ಬರೆಯಲು ಸುಲಭವಾಗುವಂತೆ  slanting line, standing line, curves  ಹೀಗೆ ಏನೆಲ್ಲಾ ಕಲಿಸುತ್ತೇನೋ ಇದನ್ನೆಲ್ಲಾ ಶೆಟ್ಟರು ಸ್ವಾತಂತ್ರ‍್ಯ ಪೂರ್ವದಲ್ಲೇ ಕನ್ನಡ ಅಕ್ಷರ ಕಲಿಸಲು ಬಳಸುತ್ತಿದ್ದರು. ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಕೆಲವು ಕೈ ಕಸುಬು, ಗುಡಿ ಕೈಗಾರಿಕೆಗಳನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸುತ್ತಿದ್ದರು.

ಶೆಟ್ಟರ ಕಲಿಕೆಯ ತುಡಿತ ಅದೆಷ್ಟು ಅದಮ್ಯವಾಗಿತ್ತೆಂದರೆ ಮಧ್ಯವಯಸ್ಸಿನಲ್ಲಿ ಮಗಳೊಂದಿಗೆ SSಐಅ ಪರೀಕ್ಷೆ ಬರೆದು ಅನುತ್ತೀರ್ಣರಾದರು. ಆ ಕಾಲದಲ್ಲೇ ತನ್ನ ಹತ್ತು ಮಂದಿ ಮಕ್ಕಳಲ್ಲಿ ಏಳು ಮಂದಿಯನ್ನು ಪದವೀಧರರನ್ನಾಗಿಸಿದರು. ತನ್ನ 14ರ ಹರೆಯದಿಂದ ೫೮ರ ವರೆಗೆ (1908-1952) ಮಾದರಿ ಶಿಕ್ಷಕರಾಗಿ ಕಾರ್ಯನಿರ್ವಹಿಸುವುದರ ಜೊತೆಜೊತೆಗೆ ಸ್ವಾತಂತ್ರ‍್ಯ ಆಂದೋಲನದಲ್ಲೂ ಭಾಗಿಯಾಗಿದ್ದರು.
ಗಾಂಧೀ ತತ್ವ ಪ್ರಣಾಳಿಕೆಯ ಪ್ರತಿಪಾದಕರಾಗಿ ದ.ಕ ಜಿಲ್ಲೆಯಾದ್ಯಂತ ಸಂಚರಿಸಿ ಹರಿಜನೋದ್ಧಾರ, ಖಾದಿಯ ಮಹತ್ವ, ಮದ್ಯಪಾನ ನಿಷೇಧದ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಿದರು.

“ಅಮಲ್ ದೆಪ್ಪಡೇ…!ಓ..!
ಅಕಲ್ ತಪ್ಪಡೇ…!!”
ಪರಡೆ ಕಲಿ ಗಂಗಸರೊ.. (ಕುಡಿಯಬೇಡಿರೋ…ಶೇಂದಿ…ಶರಾಬು) ಇತ್ಯಾದಿ ಸ್ವರಚಿತ ಕವನಗಳ ಮೂಲಕ ದ.ಕ.ಜಿಲ್ಲೆಯ ಜನರನ್ನು ತಲುಪಿದರು. ತನ್ನ ಕೊನೆಯುಸಿರಿರುವವರೆಗೂ ಗಾಂಧಿವಾದಿಯಾಗಿಯೇ ಬದುಕಿದರು. ಅವರು ಕನ್ನಡವಲ್ಲದೇ ತುಳು, ಹವ್ಯಕ ಭಾಷೆಗಳಲ್ಲೂ ಸಾಹಿತ್ಯ ಕೃಷಿ ಮಾಡಿದ್ದರು. ತುಳುನಾಡು, ನುಡಿ, ಸಂಸ್ಕೃತಿ, ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ಬಾಲಸಾಹಿತ್ಯದಲ್ಲೂ ಪಳಗಿದ ಶೆಟ್ಟರ “ಸುಂದರಿಯ ಚಂದ” ಎಂಬ ಮಕ್ಕಳ ಕತೆಯು ಬಡಗಿಯೊಬ್ಬನು ಕೆತ್ತಿದ ಸುಂದರಿ ಎಂಬ ಬೊಂಬೆಯ ಚಿತ್ರಣವಾಗಿದೆ. ಅಡ್ಯನಡ್ಕ ಶಾಲೆಯ ಅಧ್ಯಾಪಕರಾಗಿದ್ದಾಗ “ಶಿಶು ಜೀವಾಳ” ಎಂಬ ವಿದ್ಯಾರ್ಥಿ ಹಸ್ತಪತ್ರಿಕೆಯನ್ನು ಪ್ರಾರಂಭಿಸಿದರು. ೧೯೨೯ರಲ್ಲಿ ತುಳುವಿನಲ್ಲಿ ರಚಿಸಿದ ‘ಪೊರ್ಲಕಂಟ್’ ಮತ್ತು ‘ಅಮಲ್ ದೆಪ್ಪಡೆ’ ಎಂಬ ಕವನ ಸಂಕಲನಗಳಲ್ಲಿನ ತುಳು ಪದಗಳ ವೈಶಿಷ್ಟ್ಯ ಮತ್ತು ಭಾರ ನೋಡಿದರೆ ಈ ಕಾಲದ ಸಾಹಿತಿಗಳಿಗೆ ಅಚ್ಚರಿಯಾಗಬಹುದು. ತುಳು ಶಬ್ದಗಳ ಹುಟ್ಟು ಮತ್ತು ವಿಕಾಸದ ಬಗ್ಗೆಯೂ ಸಾಕಷ್ಟು ಬರೆದಿರುವ ಇವರು ತುಳು ಭಾಷಾತಜ್ಞನೂ ಹೌದು. ತುಳು ಸ್ಥಳನಾಮಗಳ ಬಗ್ಗೆಯೂ ಸಂಶೋಧನೆಗೈದಿದ್ದಾರೆ.

ಕನ್ನಡದಲ್ಲಿ ‘ಮಂಜಟ್ಟಿ ಕೋಣ’, ಜಾತಿ ಮತ್ತು ವರ್ಣ ಬೇಧ ನೀತಿಯನ್ನು ವಿರೋಧಿಸುವ
`ಕರಿ-ಬಿಳಿ ಕಾಳಗ’, ‘ಕಾಸರಗೋಡು ಕನ್ನಡಿಗರ ಗೋಳಿನ ಕತೆ’ ಇತ್ಯಾದಿ ಕವನಗಳ ಜೊತೆಗೆ ಭಾಮಿನಿ ಹಾಗೂ ವಾರ್ಧಕ ಷಟ್ಪದಿಯಲ್ಲೂ ಬರೆದಿದ್ದಾರೆ. ಚೀನಾ ಆಕ್ರಮಣದ ಸಂದರ್ಭದಲ್ಲಿ ವಾರ್ಧಕ ಷಟ್ಪದಿಯಲ್ಲಿ “ಭಾರತೀಯರೊಂದಾಗಿ” ಎಂಬ ದೇಶಪ್ರೇಮವನ್ನು ಸಾರುವ ಕವನವನ್ನು ಬರೆದು ಆ ಮೂಲಕ ಜಾಗೃತಿ ಮೂಡಿಸಿದ್ದರು. ಯಕ್ಷಗಾನ ಅರ್ಥದಾರಿಯಾಗಿದ್ದ ಶೆಟ್ಟರು “ದಂಡಯಾತ್ರೆ” ಎಂಬ ಯಕ್ಷಗಾನ ಪ್ರಸಂಗವೊಂದನ್ನು ರಚಿಸಿದ್ದರು. ‘ಕೂಸಕ್ಕನ ಮದುವೆ’ ಎಂಬ ನಾಟಕ ಹವ್ಯಕ ಭಾಷಾ ಸಾಹಿತ್ಯಕ್ಕೆ ಶೆಟ್ಟರ ವಿಶೇಷ ಕೊಡುಗೆ. ಸಂಧಿ, ಸಮಾಸ, ಷಟ್ಪದಿಗಳಲ್ಲಿ ಅಪಾರ ಪಾಂಡಿತ್ಯ ಗಳಿಸಿದ್ದ ಶೆಟ್ಟರು “ಗುರುಮಿತ್ರ” ಎಂಬ ಅಧ್ಯಾಪಕರ ಸಂಘದ ಹಸ್ತಪತ್ರಿಕೆಯ ಸಂಪಾದಕರಾಗಿದ್ದರು. ನಿನ್ನೆ ಮೊನ್ನೆಯಷ್ಟೇ ಮೂಲಸ್ವರೂಪವನ್ನು ಉಳಿಸುತ್ತಲೇ ಆಧುನಿಕತೆಯತ್ತ ಮುಖಮಾಡಿರುವ ನನ್ನೂರಿನಲ್ಲಿ ಆ ಕಾಲದಲ್ಲಿ ಓರ್ವ ಅಧ್ಯಾಪಕನಾಗಿ, ಸಾಹಿತಿಯಾಗಿ, ಸ್ವಾತಂತ್ರ‍್ಯ ಹೋರಾಟಗಾರನಾಗಿ ಒಂದು ಅರ್ಥಪೂರ್ಣ ಬದುಕು ಸವೆಸಿದ ನರ್ಕಳ ಮಾರಪ್ಪ ಶೆಟ್ಟರನ್ನು ನನ್ನೂರು ಮರೆತಿರುವುದು ವಿಷಾದನೀಯ…

  • ಮಿಸ್ರಿಯಾ ಐ ಪಜೀರ್, ಯುವ ಬರಹಗಾರ್ತಿ.

ನಾ ಹ್ಯಾಂಗ ಮರೆಯಲಿ ನಿನ್ನ ಗಾಂಧಿ ತಾತ… : ಮಿಸ್ರಿಯಾ ಐ. ಪಜೀರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...