Homeಅಂಕಣಗಳುಎಲೆಮರೆಯಿಂದಅಮಲ್ ದೆಪ್ಪಡೇ, ಓ ಅಕಲ್ ತಪ್ಪಡೇ..: ಅಮಲು ಸೇವಿಸದಿರಿ... ಓ ಮತಿ ತಪ್ಪದಿರಿ

ಅಮಲ್ ದೆಪ್ಪಡೇ, ಓ ಅಕಲ್ ತಪ್ಪಡೇ..: ಅಮಲು ಸೇವಿಸದಿರಿ… ಓ ಮತಿ ತಪ್ಪದಿರಿ

- Advertisement -
- Advertisement -

ತುಳು ಭಾಷೆ ಅರಿಯದವರು ಈ ಶೀರ್ಷಿಕೆ ನೋಡಿ ಗಲಿಬಿಲಿಗೊಳ್ಳಬಹುದು.. ಇದು ತುಳು, ಕನ್ನಡ ಮತ್ತು ಹವ್ಯಕ ಭಾಷೆಯ ಕವಿ ನನ್ನೂರಿನ ನರ್ಕಳ ಮಾರಪ್ಪ ಶೆಟ್ಟರ ಪ್ರಸಿದ್ಧ ಕವನವೊಂದರ ಸಾಲು. ಇದು ತುಳುನಾಡಿನಲ್ಲಿ ಮದ್ಯಪಾನ ವಿರೋಧೀ ಜನಜಾಗೃತಿ ಸಭೆಗಳಲ್ಲಿ ಲಾವಣಿಯಂತೆ ಹಾಡಲ್ಪಡುತ್ತಿದ್ದ ಸಾಲುಗಳು..
ಇದರರ್ಥ “ಅಮಲು ಸೇವಿಸದಿರಿ… ಓ ಮತಿ ತಪ್ಪದಿರಿ..”

ಕರ್ನಾಟಕ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಹೊರತಂದ `ಶತಮಾನದ ಬೆಳಕು’ ಎಂಬ ಗ್ರಂಥದಲ್ಲಿ ಇಸ್ಮತ್ ಪಜೀರ್ ಬರೆದ `ಕನ್ನಡದ ಸಹೋದರ ಭಾಷೆಗಳಲ್ಲಿ ಸಾಹಿತ್ಯದ ಬೆಳವಣಿಗೆ’ ಎಂಬ ದೀರ್ಘ ಪ್ರಬಂಧವೊಂದನ್ನು ಓದುತ್ತಿದ್ದಂತೆ ನರ್ಕಳ ಮಾರಪ್ಪ ಶೆಟ್ಟರ ಹೆಸರು ಕಣ್ಣಿಗೆ ಬಿತ್ತು. ಅಲ್ಲಿಂದ ಈ ಶೆಟ್ಟರ ಜಾಡು ಹಿಡಿದು ಹೊರಟೆ. ಕಾರಣ ನರ್ಕಳವೆಂಬುವುದು ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ನನ್ನೂರು ಕುಳಾಲು ಎಂಬಲ್ಲಿರುವ ಒಂದು ಪುಟ್ಟ ಹಳ್ಳಿ. ಶೆಟ್ಟರ ಬಗ್ಗೆ ನನ್ನೂರಿನಲ್ಲಿ ವಿಚಾರಿಸಿದಾಗ ಗೊತ್ತಿಲ್ಲ ಎಂದವರೇ ಎಲ್ಲಾ. ಸೋಜಿಗವೇನೆಂದರೆ, ಇಸ್ಮತ್ ನರ್ಕಳ ಮಾರಪ್ಪ ಶೆಟ್ಟರ ಸಾಹಿತ್ಯದ ಕುರಿತಂತೆ “ಶತಮಾನದ ಬೆಳಕು” ಎಂಬ ಗ್ರಂಥದಲ್ಲಿ ಚರ್ಚೆ ನಡೆಸಿದ್ದಾರಾದರೂ ಅವರಿಗೂ ಈ ನರ್ಕಳ ನನ್ನೂರಿನ ಪಕ್ಕದ ಹಳ್ಳಿ ಎಂದು ಗೊತ್ತೇ ಇರಲಿಲ್ಲ.

ನಾನು ಶೆಟ್ಟರ ಕುರಿತ ಹುಡುಕಾಟ ಬಿಡಲಿಲ್ಲ. ವರ್ಷಗಳ ನಂತರ ಹೊಸಕಟ್ಟಡಕ್ಕೆ ಸ್ಥಳಾಂತರಗೊಂಡ ಸಾಲೆತ್ತೂರಿನ ಸಾರ್ವಜನಿಕ ಗ್ರಂಥಾಲಯಕ್ಕೆ ನರ್ಕಳ ಮಾರಪ್ಪ ಶೆಟ್ಟರ ಹೆಸರಿಟ್ಟಿರುವುದನ್ನು ನೋಡಿದ್ದೇ ತಡ ಲೈಬ್ರರಿಯ ಮೆಟ್ಟಿಲು ಹತ್ತಿದೆ. ಗ್ರಂಥಪಾಲಕಿಯ ಬಳಿ ಶೆಟ್ಟರ ಬಗ್ಗೆ ವಿಚಾರಿಸಿದಾಗ ಆಕೆ “ನರ್ಕಳ ಮಾರಪ್ಪ ಶೆಟ್ಟರ ಬದುಕು ಮತ್ತು ಬರಹ” ಎಂಬ ಗ್ರಂಥವೊಂದನ್ನು ಉಡುಗೊರೆಯಾಗಿ ನೀಡಿದರು. ಅಲ್ಲಲ್ಲಿ ಚದುರಿಹೋಗಿದ್ದ ಅವರ ಬದುಕು ಮತ್ತು ಬರಹವನ್ನು ಸಾದ್ಯಂತ ಸಂಗ್ರಹಿಸಿ ಗ್ರಂಥ ರೂಪಕ್ಕಿಳಿಸಿದ್ದು 1989ರ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ, ಮಾರಪ್ಪ ಶೆಟ್ಟರ ಮಗನಾದ ನರ್ಕಳ ರಘುನಾಥ ಶೆಟ್ಟರು… ಅದೂ ಬಹಳ ತಡವಾಗಿ.

ಇಂತಹ ಘನ ವ್ಯಕ್ತಿತ್ವವನ್ನು ಹೊಸ ಪೀಳಿಗೆಗೆ ಪರಿಚಯಿಸದ ನಮ್ಮೂರಿನ ಜನರ ಬಗ್ಗೆ, ನಾ ಕಲಿತ ಕುಳಾಲು ಶಾಲೆಯಲ್ಲಿ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದರೂ ಅವರ ಬಗ್ಗೆ ಪರಿಚಯಿಸಿ ಕೊಡದ ನನ್ನ ಶಿಕ್ಷಕರ ಬಗ್ಗೆ, ಸ್ವಾತಂತ್ರ‍್ಯ ಹೋರಾಟಗಾರನಾಗಿದ್ದರೂ ಕನಿಷ್ಟ ಸ್ವಾತಂತ್ರ‍್ಯ ದಿನದಂದಾದರೂ ಸ್ಮರಿಸದಿರುವುದರ ಬಗ್ಗೆ ಖೇದವಿದೆ.

1894ರಲ್ಲಿ ನರ್ಕಳದಲ್ಲಿ ಜನಿಸಿದ ಮಾರಪ್ಪ ಶೆಟ್ರು ನರ್ಕಳ ಮನೆತನದ ಅವಿಭಕ್ತ ಕುಟುಂಬದ ಮೊದಲ ವಿದ್ಯಾವಂತ. ನಮ್ಮೂರಿಗೂ ಅವರೇ ಮೊದಲಿಗರಿರಬೇಕು. ಎಳವೆಯಲ್ಲೇ ಅಧ್ಯಾಪಕನಾಗಬೇಕೆಂಬ ಕನಸ ಹೊತ್ತಿದ್ದ ಶೆಟ್ಟರು ತನ್ನ ಹದಿನಾಲ್ಕನೇ ವಯಸ್ಸಿಗೇ ತಾನು ಕಲಿತ ಸಾಲೆತ್ತೂರು ಶಾಲೆಯಲ್ಲೇ ಅಧ್ಯಾಪಕರಾದರು..!! ಅವರ ಅಧ್ಯಾಪನದ ಕನಸನ್ನು ನನಸಾಗಿಸಿದವರು ತುಳುನಾಡಿನ ಮಹಾಕವಿ ಪಂಜೆ ಮಂಗೇಶರಾಯರು. ಆಗಿನ ಬ್ರಿಟಿಷ್ ಸರಕಾರದ ನಿಯಮದಂತೆ ಶಾಲಾ ಇನ್ಸ್ಪೆಕ್ಟರ್‌ಗಳೇ ಜಾಣ ವಿದ್ಯಾರ್ಥಿಗಳನ್ನು ಗುರುತಿಸಿ ಶಿಕ್ಷಕರಾಗಿ ನೇಮಿಸಬೇಕಿತ್ತು. ಜೊತೆಗೆ ಶಿಕ್ಷಕ ತರಬೇತಿಗೆ ಶಿಫಾರಸು ಮಾಡಬೇಕಿತ್ತು.

ಶೆಟ್ಟರು ಸಾಲೆತ್ತೂರು ಶಾಲೆಯಲ್ಲಿ ೪ನೇ ತರಗತಿಯಲ್ಲಿ (ಫಾರಂ) ವ್ಯಾಸಂಗ ಮಾಡುತ್ತಿದ್ದಾಗ ಶಾಲಾ ಪರೀಕ್ಷಾಧಿಕಾರಿಯಾಗಿ ಬಂದ ಪಂಜೆಯವರು ಶೆಟ್ಟರನ್ನು ಮೂರು ರೂಪಾಯಿ ಮಾಸಿಕ ವೇತನದೊಂದಿಗೆ ಅದೇ ಶಾಲೆಗೆ ಅಧ್ಯಾಪಕರನ್ನಾಗಿ ನೇಮಿಸಿದರು. ಆರು ವರ್ಷಗಳ ನಂತರ ತರಬೇತಿ ಪಡೆದು ಅಧಿಕೃತ ಶಿಕ್ಷಕರಾದರು. ಕೊಡ್ಲಮೊಗರು, ಮೂಡಂಬೈಲು, ಅಡ್ಯನಡ್ಕ ಅಷ್ಟೇ ಅಲ್ಲದೇ ನಾ ಕಲಿತ ಕುಳಾಲು ಶಾಲೆಯಲ್ಲೂ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಇನ್ನೂ ಕೆಲವೆಡೆ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದರೂ ಅದರ ದಾಖಲೆಗಳು ಲಭ್ಯವಾಗಿಲ್ಲ. ಅಧ್ಯಾಪನದ ಜೊತೆಜೊತೆಗೆ ಅಕ್ಷರ ಬಿತ್ತುವ ಕಾಯಕದಲ್ಲೂ ತೊಡಗಿಸಿಕೊಂಡರು. ಶಾಲೆಯೇ ಇಲ್ಲದ ಮೂಡಂಬೈಲಿನಲ್ಲಿ ಮಕ್ಕಳನ್ನೆಲ್ಲಾ ಕೂಡಿಸಿ ಸಣ್ಣ ಗುಡಿಸಲೊಂದರಲ್ಲಿ ಶಾಲೆಯನ್ನು ಪ್ರಾರಂಭಿಸಿದರು. ಮಂಗಳೂರಿನ ಬಿಜೈಯಲ್ಲಿ ಲೂರ್ಡ್ಸ್ ಪ್ರೌಢಶಾಲೆ ಸ್ಥಾಪನೆಗೆ ತನು, ಮನ, ಧನದೊಂದಿಗೆ ಶ್ರಮಿಸಿದರು. ವಯಸ್ಕರಿಗಾಗಿ ಅಡ್ಯನಡ್ಕದಲ್ಲಿ ರಾತ್ರಿ ಶಾಲೆ ಪ್ರಾರಂಭಿಸಿದರು. ಶೆಟ್ಟರ ಪಾಠ ಮಾಡುವ ಪ್ರಾಯೋಗಿಕ ಶೈಲಿ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಮೂಡಿಸುತ್ತಿತ್ತು.ನಾನೀಗ ನನ್ನ ಮಗಳಿಗೆ ಅಕ್ಷರ ಬರೆಯಲು ಸುಲಭವಾಗುವಂತೆ  slanting line, standing line, curves  ಹೀಗೆ ಏನೆಲ್ಲಾ ಕಲಿಸುತ್ತೇನೋ ಇದನ್ನೆಲ್ಲಾ ಶೆಟ್ಟರು ಸ್ವಾತಂತ್ರ‍್ಯ ಪೂರ್ವದಲ್ಲೇ ಕನ್ನಡ ಅಕ್ಷರ ಕಲಿಸಲು ಬಳಸುತ್ತಿದ್ದರು. ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಕೆಲವು ಕೈ ಕಸುಬು, ಗುಡಿ ಕೈಗಾರಿಕೆಗಳನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸುತ್ತಿದ್ದರು.

ಶೆಟ್ಟರ ಕಲಿಕೆಯ ತುಡಿತ ಅದೆಷ್ಟು ಅದಮ್ಯವಾಗಿತ್ತೆಂದರೆ ಮಧ್ಯವಯಸ್ಸಿನಲ್ಲಿ ಮಗಳೊಂದಿಗೆ SSಐಅ ಪರೀಕ್ಷೆ ಬರೆದು ಅನುತ್ತೀರ್ಣರಾದರು. ಆ ಕಾಲದಲ್ಲೇ ತನ್ನ ಹತ್ತು ಮಂದಿ ಮಕ್ಕಳಲ್ಲಿ ಏಳು ಮಂದಿಯನ್ನು ಪದವೀಧರರನ್ನಾಗಿಸಿದರು. ತನ್ನ 14ರ ಹರೆಯದಿಂದ ೫೮ರ ವರೆಗೆ (1908-1952) ಮಾದರಿ ಶಿಕ್ಷಕರಾಗಿ ಕಾರ್ಯನಿರ್ವಹಿಸುವುದರ ಜೊತೆಜೊತೆಗೆ ಸ್ವಾತಂತ್ರ‍್ಯ ಆಂದೋಲನದಲ್ಲೂ ಭಾಗಿಯಾಗಿದ್ದರು.
ಗಾಂಧೀ ತತ್ವ ಪ್ರಣಾಳಿಕೆಯ ಪ್ರತಿಪಾದಕರಾಗಿ ದ.ಕ ಜಿಲ್ಲೆಯಾದ್ಯಂತ ಸಂಚರಿಸಿ ಹರಿಜನೋದ್ಧಾರ, ಖಾದಿಯ ಮಹತ್ವ, ಮದ್ಯಪಾನ ನಿಷೇಧದ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಿದರು.

“ಅಮಲ್ ದೆಪ್ಪಡೇ…!ಓ..!
ಅಕಲ್ ತಪ್ಪಡೇ…!!”
ಪರಡೆ ಕಲಿ ಗಂಗಸರೊ.. (ಕುಡಿಯಬೇಡಿರೋ…ಶೇಂದಿ…ಶರಾಬು) ಇತ್ಯಾದಿ ಸ್ವರಚಿತ ಕವನಗಳ ಮೂಲಕ ದ.ಕ.ಜಿಲ್ಲೆಯ ಜನರನ್ನು ತಲುಪಿದರು. ತನ್ನ ಕೊನೆಯುಸಿರಿರುವವರೆಗೂ ಗಾಂಧಿವಾದಿಯಾಗಿಯೇ ಬದುಕಿದರು. ಅವರು ಕನ್ನಡವಲ್ಲದೇ ತುಳು, ಹವ್ಯಕ ಭಾಷೆಗಳಲ್ಲೂ ಸಾಹಿತ್ಯ ಕೃಷಿ ಮಾಡಿದ್ದರು. ತುಳುನಾಡು, ನುಡಿ, ಸಂಸ್ಕೃತಿ, ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ಬಾಲಸಾಹಿತ್ಯದಲ್ಲೂ ಪಳಗಿದ ಶೆಟ್ಟರ “ಸುಂದರಿಯ ಚಂದ” ಎಂಬ ಮಕ್ಕಳ ಕತೆಯು ಬಡಗಿಯೊಬ್ಬನು ಕೆತ್ತಿದ ಸುಂದರಿ ಎಂಬ ಬೊಂಬೆಯ ಚಿತ್ರಣವಾಗಿದೆ. ಅಡ್ಯನಡ್ಕ ಶಾಲೆಯ ಅಧ್ಯಾಪಕರಾಗಿದ್ದಾಗ “ಶಿಶು ಜೀವಾಳ” ಎಂಬ ವಿದ್ಯಾರ್ಥಿ ಹಸ್ತಪತ್ರಿಕೆಯನ್ನು ಪ್ರಾರಂಭಿಸಿದರು. ೧೯೨೯ರಲ್ಲಿ ತುಳುವಿನಲ್ಲಿ ರಚಿಸಿದ ‘ಪೊರ್ಲಕಂಟ್’ ಮತ್ತು ‘ಅಮಲ್ ದೆಪ್ಪಡೆ’ ಎಂಬ ಕವನ ಸಂಕಲನಗಳಲ್ಲಿನ ತುಳು ಪದಗಳ ವೈಶಿಷ್ಟ್ಯ ಮತ್ತು ಭಾರ ನೋಡಿದರೆ ಈ ಕಾಲದ ಸಾಹಿತಿಗಳಿಗೆ ಅಚ್ಚರಿಯಾಗಬಹುದು. ತುಳು ಶಬ್ದಗಳ ಹುಟ್ಟು ಮತ್ತು ವಿಕಾಸದ ಬಗ್ಗೆಯೂ ಸಾಕಷ್ಟು ಬರೆದಿರುವ ಇವರು ತುಳು ಭಾಷಾತಜ್ಞನೂ ಹೌದು. ತುಳು ಸ್ಥಳನಾಮಗಳ ಬಗ್ಗೆಯೂ ಸಂಶೋಧನೆಗೈದಿದ್ದಾರೆ.

ಕನ್ನಡದಲ್ಲಿ ‘ಮಂಜಟ್ಟಿ ಕೋಣ’, ಜಾತಿ ಮತ್ತು ವರ್ಣ ಬೇಧ ನೀತಿಯನ್ನು ವಿರೋಧಿಸುವ
`ಕರಿ-ಬಿಳಿ ಕಾಳಗ’, ‘ಕಾಸರಗೋಡು ಕನ್ನಡಿಗರ ಗೋಳಿನ ಕತೆ’ ಇತ್ಯಾದಿ ಕವನಗಳ ಜೊತೆಗೆ ಭಾಮಿನಿ ಹಾಗೂ ವಾರ್ಧಕ ಷಟ್ಪದಿಯಲ್ಲೂ ಬರೆದಿದ್ದಾರೆ. ಚೀನಾ ಆಕ್ರಮಣದ ಸಂದರ್ಭದಲ್ಲಿ ವಾರ್ಧಕ ಷಟ್ಪದಿಯಲ್ಲಿ “ಭಾರತೀಯರೊಂದಾಗಿ” ಎಂಬ ದೇಶಪ್ರೇಮವನ್ನು ಸಾರುವ ಕವನವನ್ನು ಬರೆದು ಆ ಮೂಲಕ ಜಾಗೃತಿ ಮೂಡಿಸಿದ್ದರು. ಯಕ್ಷಗಾನ ಅರ್ಥದಾರಿಯಾಗಿದ್ದ ಶೆಟ್ಟರು “ದಂಡಯಾತ್ರೆ” ಎಂಬ ಯಕ್ಷಗಾನ ಪ್ರಸಂಗವೊಂದನ್ನು ರಚಿಸಿದ್ದರು. ‘ಕೂಸಕ್ಕನ ಮದುವೆ’ ಎಂಬ ನಾಟಕ ಹವ್ಯಕ ಭಾಷಾ ಸಾಹಿತ್ಯಕ್ಕೆ ಶೆಟ್ಟರ ವಿಶೇಷ ಕೊಡುಗೆ. ಸಂಧಿ, ಸಮಾಸ, ಷಟ್ಪದಿಗಳಲ್ಲಿ ಅಪಾರ ಪಾಂಡಿತ್ಯ ಗಳಿಸಿದ್ದ ಶೆಟ್ಟರು “ಗುರುಮಿತ್ರ” ಎಂಬ ಅಧ್ಯಾಪಕರ ಸಂಘದ ಹಸ್ತಪತ್ರಿಕೆಯ ಸಂಪಾದಕರಾಗಿದ್ದರು. ನಿನ್ನೆ ಮೊನ್ನೆಯಷ್ಟೇ ಮೂಲಸ್ವರೂಪವನ್ನು ಉಳಿಸುತ್ತಲೇ ಆಧುನಿಕತೆಯತ್ತ ಮುಖಮಾಡಿರುವ ನನ್ನೂರಿನಲ್ಲಿ ಆ ಕಾಲದಲ್ಲಿ ಓರ್ವ ಅಧ್ಯಾಪಕನಾಗಿ, ಸಾಹಿತಿಯಾಗಿ, ಸ್ವಾತಂತ್ರ‍್ಯ ಹೋರಾಟಗಾರನಾಗಿ ಒಂದು ಅರ್ಥಪೂರ್ಣ ಬದುಕು ಸವೆಸಿದ ನರ್ಕಳ ಮಾರಪ್ಪ ಶೆಟ್ಟರನ್ನು ನನ್ನೂರು ಮರೆತಿರುವುದು ವಿಷಾದನೀಯ…

  • ಮಿಸ್ರಿಯಾ ಐ ಪಜೀರ್, ಯುವ ಬರಹಗಾರ್ತಿ.

ನಾ ಹ್ಯಾಂಗ ಮರೆಯಲಿ ನಿನ್ನ ಗಾಂಧಿ ತಾತ… : ಮಿಸ್ರಿಯಾ ಐ. ಪಜೀರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...