Homeಸಾಮಾಜಿಕಒಮ್ಮೆ ಕಣ್ಣು ಮುಚ್ಚಿ ಹೀಗೆ ಕಲ್ಪಿಸಿಕೊಳ್ಳಿ. ನಿಧಾನಕ್ಕೆ ಇದೇನೆಂದು ಅರ್ಥವಾಗಬಹುದು

ಒಮ್ಮೆ ಕಣ್ಣು ಮುಚ್ಚಿ ಹೀಗೆ ಕಲ್ಪಿಸಿಕೊಳ್ಳಿ. ನಿಧಾನಕ್ಕೆ ಇದೇನೆಂದು ಅರ್ಥವಾಗಬಹುದು

- Advertisement -
- Advertisement -

 ಡಾ. ಕಾರ್ತಿಕ್ ಬಿಟ್ಟು
ಕನ್ನಡಕ್ಕೆ: ರಾಜಶೇಖರ ಅಕ್ಕಿ |

ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ, ಅದರೊಂದಿಗೆ ನಿಮ್ಮ ಕೈಗಳನ್ನು ಮೇಲೆತ್ತಿ. ನೀವು ಏನು ಮಾಡುತ್ತಿದ್ದೀರಿ ಎಂದು ನಿಮಗೆ ಕಾಣಿಸದಿದ್ದರೂ ನೀವು ನಿಮ್ ಕೈಗಳನ್ನು ಮೇಲಕ್ಕೆತ್ತಿದ್ದು ನಿಮಗೆ ಖಂಡಿತವಾಗಿಯೂ ಅನುಭವವಾಗುತ್ತದೆ. ನಿಮ್ಮ ಕೈಗಳು ಎಲ್ಲಿವೆ ಎನ್ನುವುದು ನಿಮಗೆ ತಿಳಿಯುತ್ತದೆ. ಹೀಗೇಕೆ ಎಂದರೆ, ನಮ್ಮ ಮಿದುಳು ದೇಹದ ಅಂಗಗಳ ಆಂತರಿಕ ಸ್ಪರ್ಶವನ್ನು ಗ್ರಹಿಸಿ, ಯಾವ ಅಂಗ ಎಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳುವಲ್ಲಿ ಸಶಕ್ತವಾಗಿದೆ.
ಯಾವುದಾದರೊಂದು ಅಪಘಾತಕ್ಕೀಡಾಗಿ ತಮ್ಮ ಕೈಯನ್ನು ಕಳೆದುಕೊಂಡ ವ್ಯಕ್ತಿಗಳಿಗೆ ಈಗ ಇಲ್ಲದಿರುವ ಆ ಕೈ ಇನ್ನೂ ಅಲ್ಲಿಯೇ ಇದೆ ಎನ್ನುವ ಅನುಭವ ಆಗುತ್ತಿರುತ್ತದೆ. ಆ ಕೈ ಅಲ್ಲಿ ಇಲ್ಲದಿರುವುದನ್ನು ಅವರು ಕಾಣಬಹುದು; ಆದರೆ ದೇಹದ ನರಗಳಿಂದ ಬರುವ ಮಾಹಿತಿಯಿಂದ ಆ ಕೈ ಇನ್ನೂ ಅಲ್ಲೇ ಇದೆ ಎಂದು ಮಿದುಳಿನ ಭಾಗ ಅರ್ಥೈಸುತ್ತದೆ. ಇದು ಆ ಕೈ ಜೊತೆಗೆ ಅಲ್ಲಿಯ ನರಗಳನ್ನೂ ತೆಗೆದುಹಾಕಿದ್ದರೂ ಈ ಅನುಭವ ಆಗುತ್ತಲೇ ಇರುತ್ತದೆ. ದೇಹದಲ್ಲಿ ಒಂದು ಅಂಗ ಇರದೇ ಇದ್ದರೂ, ಒಬ್ಬ ವ್ಯಕ್ತಿಯ ದೇಹದಿಂದ ಇಲ್ಲದೇ ಇರುವ ಅಂಗವನ್ನು ಹೇಗೆ ಅನುಭವಿಸಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ.
ಕೈಗಳು, ಕಾಲುಗಳು ಹೀಗೆ ಗಂಡು ಮತ್ತು ಹೆಣ್ಣಿನ ದೇಹಗಳು ಬಹುತೇಕವಾಗಿ ಒಂದೇ ಬಗೆಯವಾಗಿರುತ್ತವೆ. ಜನನಾಂಗದ ಮತ್ತು ಎದೆಯ ಭಾಗಗಳು ಬೇರೆಯಾಗಿರುತ್ತವೆ. ಟ್ರಾನ್ಸ್‍ಜೆಂಡರ್ ವ್ಯಕ್ತಿಗಳ ಅನುಭವವನ್ನು ತಿಳಿಯುವ ಒಂದು ವಿಧಾನವೇನೆಂದರೆ, ನಮ್ಮ ದೇಹದಲ್ಲಿ ಇರದಿರುವ ಅಥವಾ ನಮ್ಮ ದೇಹದಲ್ಲಿದ್ದ ಅಂಗಕ್ಕಿಂತ ಬೇರೆಯದೇ ಆದ ಒಂದು ಅಂಗದ ಸಂವೇದನೆಯನ್ನು ನಮ್ಮ ಮಿದುಳು ಅಪೇಕ್ಷಿಸುವುದು. ಹಾಗಾಗಿ ಒಬ್ಬ ಟ್ರಾನ್ಸ್‍ಜೆಂಡರ್ ಮಹಿಳೆ ತನಗೆ ಇಲ್ಲದಿರುವ ಸ್ತನಗಳು ಇದ್ದಂತೆ ಭಾವಿಸಬಹುದು. ಹಾಗೂ ತಮ್ಮ ದೇಹದಲ್ಲಿರುವ ಒಂದು ಅಂಗದ ಗ್ರಹಿಕೆ ಮಿದುಳಿಗೆ ಇಲ್ಲದೇ ಇದ್ದಾಗ ತಮ್ಮ ಜನನಾಂಗವನ್ನು ನೋಡಿ ಆ ವ್ಯಕ್ತಿಗಳು ಗೊಂದಲಕ್ಕೊಳಗಾಗಬಹುದು. ಅದರಂತೆ ಟ್ರಾನ್ಸ್‍ಜೆಂಡರ್ ಪುರುಷರು ಎದೆಯ ಭಾಗದಲ್ಲಿ ಒಂದು ರೀತಿಯ ಭಾರವನ್ನು ಅನುಭವಿಸಿ ಗೊಂದಲಕ್ಕೊಳಗಾಗಬಹುದು, ಏಕೆಂದರೆ ಅವರ ಮಿದುಳು ಅದನ್ನು ಅಪೇಕ್ಷಿಸುವುದಿಲ್ಲ. ಅನೇಕ ಟ್ರಾನ್ಸ್‍ಜೆಂಡರ್ ಪುರುಷರು ಪುರುಷರಿಗಿರುವ ಜನನಾಂಗಗಳು ಇರುವಂತೇ ಅನುಭವವಕ್ಕೀಡಾಗಬಹುದು. ವ್ಯಕ್ತಿಗಳ ಅನುವಂಶಿಕ ವ್ಯತ್ಯಾಸದ (genetic variation) ಆಧಾರದ ಮೇಲೆ ದೇಹ ಮತ್ತು ಮಿದುಳುಗಳೆರಡೂ ಸ್ವಲ್ಪ ಮಟ್ಟಿಗೆ ವಿಭಿನ್ನವಾಗಿ ಬೆಳವಣಿಗೆಯಾಗಿ, ತಮ್ಮ ದೇಹದಿಂದ ಅವರ ಮಿದುಳು ಮತ್ತು ದೇಹದ ಅಪೇಕ್ಷೆಗಳು ಬೇರೆಬೇರೆಯಾಗುವುದನ್ನು ಡಿಸ್‍ಫೋರಿಯಾ ಎಂದು ಕರೆಯುತ್ತಾರೆ.
ಇದನ್ನು ತಿಳಿದುಕೊಳ್ಳಲು ಇದನ್ನು ಊಹಿಸಿ; ನಾಳೆ ಬೆಳಗ್ಗೆ ನೀವು ನಿದ್ರೆಯಿಂದ ಎದ್ದಾಗ, ನಿಮ್ಮ ಮಿದುಳು ಮತ್ತು ಮನೋಭಾವಗಳಲ್ಲಿ ಯಾವುದೇ ಬದಲಾವಣೆ ಆಗದೆ, ನಿಮ್ಮ ಭುಜದಿಂದ ಒಂದು ಹೆಚ್ಚಿನ ಕೈ ಉದ್ಭವಿಸಿದೆ ಎಂದುಕೊಳ್ಳಿ. ಈ ಹೊಸ ಕೈ ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಅಡ್ಡಿ ಮಾಡುತ್ತಿಲ್ಲ ಎಂದು ಅಂದುಕೊಳ್ಳೊಣ. ಆದರೂ ಏನೋ ಕಿರಿಕಿರಿ ಅನುಭವಿಸುತ್ತೀರಿ, ಇರಬಾರದ್ದೇಕಿದೇ ಎನ್ನುವ ತೊಂದರೆ ಇರುತ್ತದೆ. ಈ ಅಂಗದಿಂದ ನಿಮಗೆ ಉಂಟಾಗುವ ಅಸೌಖ್ಯದ ಅನುಭವವು, ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಈ ಹೊಸ ಅಂಗ ಎಷ್ಟು ಅಡ್ಡಿಪಡಿಸುತ್ತೆ ಎನ್ನುವುದರ ಜೊತೆಗೆ ನೀವು ಮುಂಚೆ ಮಾಡುತ್ತಿದ್ದ ದೈನಂದಿನ ಚಟುವಟಿಕೆಗಳನ್ನು ಹಾಗೆಯೇ ಮುಂದುವರೆಸಲು ಈ ಅಂಗದಿಂದ ಎಷ್ಟು ಅಡೆತಡೆ ಎದುರಾಗುತ್ತದೆ ಎಂಬುದನ್ನೂ ಸೇರಿ ಅವಲಂಬಿಸಿದೆ.
ಅದರ ಮೇಲೆ, ನೀವು ಎದುರಿಸುವ ಎಲ್ಲಾ ಜನರೂ ಆಶ್ಚರ್ಯ ಹಾಗೂ ಕೌತುಕದಿಂದ ಪ್ರತಿಕ್ರಿಯಿಸಿದಾಗ, ನಿಮ್ಮನ್ನು ಭೇಟಿಯಾಗುವ ಎಲ್ಲರೂ ನಿಮ್ಮ ಭುಜದಿಂದ ಈ ಕೈ ಏಕೆ ಉದ್ಭವಿಸಿದೆ ಎಂದು ಕೇಳಿದಾಗ, ನೀವು ಸಾರ್ವಜನಿಕ ಸಾರಿಗೆಯನ್ನು ಬಳಸಿದಲ್ಲಿ ನೂರಾರು ಜನರು ನಿಮ್ಮನ್ನು ನೋಡಿ ಆಶ್ಚರ್ಯ ಮತ್ತು ಕೌತುಕ ವ್ಯಕ್ತಪಡಿಸಿ, ತಮ್ಮಲ್ಲೇ ಮಾತನಾಡಿಕೊಳ್ಳುತ್ತ ನಿಮ್ಮನ್ನು ಗೇಲಿ ಮಾಡಿದಾಗ, ಇದೇನು ಎಂದು ಕೇಳಿದಾಗ, ಒಬ್ಬ ಟ್ರಾನ್ಸ್‍ಜೆಂಡರ್ ವ್ಯಕ್ತಿ ಯಾವ ಅನುಭವಗಳಿಂದ ಹಾದು ಹೋಗಬೇಕಾಗುತ್ತದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ. ದೈಹಿಕ ಅಂಗವೈಕಲ್ಯತೆಯುಳ್ಳವರೂ ಇಂತಹ ಅನುಭವ ಹೊಂದಿರುತ್ತಾರೆ.
ಈಗ ಇನ್ನೊಂದು ಪ್ರಸಂಗವನ್ನು ಊಹಿಸಿ, ನೀವು ಬೆಳಗ್ಗೆ ಎದ್ದಾಗ, ನೀವು ಗಂಡಾಗಿದ್ದರೆ ನಿಮ್ಮ ದೇಹ ಹೆಣ್ಣಿನಂತೆ, ಹೆಣ್ಣಾಗಿದ್ದರೆ ಗಂಡಿನಂತೆ ಬದಲಾಗಿದೆ. ಜನರೊಂದಿಗೆ ವ್ಯವಹರಿಸುವಾಗ ಎಷ್ಟು ಬಾರಿ ಒಬ್ಬ ವ್ಯಕ್ತಿಯ ಜೆಂಡರ್ ಅನ್ನು ನೋಡಲಾಗುತ್ತದೆ ಹಾಗೂ ಎಷ್ಟು ಬಾರಿ ನಿಮ್ಮನ್ನು ನೋಡಿ ನಗಲಾಗುತ್ತದೆ, ಅಸಂಬದ್ಧ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎನ್ನುವುದನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಹಾಗೂ ನಿಮ್ಮ ಗುರುತು ಮುಂಚಿನಂತೆಯೇ ಇದ್ದು, ನಿಮ್ಮ ಉಡುಪೂ ಮುಂಚಿನಂತಿದ್ದು ಹಾಗೂ ನೀವು ಮುಂಚಿನಂತೇ ವರ್ತಿಸುತ್ತಿದ್ದೀರಿ, ಆದರೆ ನಿಮ್ಮ ದೇಹ ಬದಲಾಗಿದ್ದರೆ?
ಇನ್ನು ಕೊನೆಯ ಒಂದು ಪ್ರಯೋಗ: ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಒಬ್ಬ ವ್ಯಕ್ತಿಯನ್ನು ಊಹಿಸಿ, ಒಬ್ಬ ಡಾಕ್ಟರ್ ಅಂತಿಟ್ಟುಕೊಳ್ಳಿ, ಆ ವ್ಯಕ್ತಿಯ ಜೊತೆಗೆ ಮಾತನಾಡುತ್ತಿದ್ದೀರಿ ಎಂದು ಊಹಿಸಿ. ಈಗ ಕಣ್ಣು ಬಿಡಿ. ನಿಮಗೆ ಆ ಡಾಕ್ಟರ್‍ನ ಜೆಂಡರ್ ನೆನಪಿದೆಯೇ? ಗಂಡೋ, ಹೆಣ್ಣೋ, ಎರಡೂ ಅಲ್ಲವೋ? ನಾವು ಯಾವುದೇ ವ್ಯಕ್ತಿಯೊಂದಿಗೆ ವ್ಯವಹರಿಸುವುದನ್ನು ಊಹೆ ಮಾಡಿದಾಗ, ಮೊಟ್ಟಮೊದಲಿಗೆ ಆ ವ್ಯಕ್ತಿಯ ಜೆಂಡರ್ ಅನ್ನು ಊಹಿಸುತ್ತೇವೆ. ಇದಕ್ಕೆ ನಮ್ಮ ಭಾಷೆಗಳೂ ಸಹಕರಿಸುತ್ತವೆ. ಅಧಿಕಾಂಶ ಭಾಷೆಗಳ ಸರ್ವನಾಮಗಳು ಒಬ್ಬ ವ್ಯಕ್ತಿಯ ಜೆಂಡರ್ ಅನ್ನು ಸೂಚಿಸುತ್ತವೆ (ಬಂಗಾಳಿ ಭಾಷೆ ಹೊರತುಪಡಿಸಿ). ಹಾಗಾಗಿ ಒಬ್ಬ ವ್ಯಕ್ತಿಯೊಂದಿಗೆ ವ್ಯವಹರಿಸುವುದನ್ನು ನಾವು ಊಹೆ ಮಾಡಿದಾಗ, ಆ ವ್ಯಕ್ತಿಯ ವರ್ಗ, ಜಾತಿ, ಧರ್ಮ ಇತ್ಯಾದಿಗಳಿಗಿಂತ ಮುಂಚೆ ಮೂಲಭೂತವಾಗಿ ಆ ವ್ಯಕ್ತಿಯ ಜೆಂಡರ್ ಅನ್ನು ಊಹಿಸಿಕೊಂಡಿರುತ್ತೇವೆ. ನೀವು ಮೊದಲ ಬಾರಿಗೆ ಯಾರನ್ನಾದರೂ ಭೇಟಿಯಾದಾಗ ಮೊದಲು ಅವರ ಜೆಂಡರ್ ಅನ್ನು ಗುರುತಿಸಿ ಅವರನ್ನು ಸಂಬೋಧಿಸಲು ಯಾವ ಭಾಷೆಯನ್ನು ಬಳಸಬೇಕು ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತೀರಿ. ಒಬ್ಬ ವ್ಯಕ್ತಿಯ ದೇಹರಚನೆ ಸಾಮಾಜಿಕವಾಗಿ ಗುರುತಿಸಿಕೊಂಡ ಗಂಡು ಅಥವಾ ಹೆಣ್ಣಿನಂತೆ ಇಲ್ಲದಿದ್ದಾಗ ಗಂಭೀರ ಸಮಸ್ಯೆ ಎದುರಾಗುತ್ತದೆ. ಅನೇಕ ಸಲ ಆ ವ್ಯಕ್ತಿಯನ್ನು ಇನ್ನಷ್ಟು ಸೂಕ್ಷ್ಮವಾಗಿ, ಉಡುಪಿನ ಒಳಗೆ ಎಂತಹ ದೇಹ ಇರಬಹುದು ಎಂದು ನೋಡಲಾಗುತ್ತದೆ. ಆಗ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳಿಗೆ ತಮ್ಮ ದೇಹದ ಜೊತೆಗೆ ಇರುವ ಮುಜುಗರ ಇನ್ನಷ್ಟು ಉಲ್ಬಣಗೊಳ್ಳುತ್ತದೆ. ತಾನು ಯಾವ ಜೆಂಡರ್‍ನೊಂದಿಗೆ ಗುರುತಿಸಿಕೊಳ್ಳಲು ಇಚ್ಛಿಸುತ್ತಾರೋ ಆ ಜೆಂಡರ್ ಬದಲಾಗಿ ಬೇರೆ ಜೆಂಡರ್‍ನೊಂದಿಗೆ ಜನರು ಆ ವ್ಯಕ್ತಿಯನ್ನು ಗುರುತಿಸಿದಾಗ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳು ಖಿನ್ನತೆಗೆ ಒಳಗಾಗಬಹುದು. ಇದು ಡಿಸ್‍ಫೋರಿಯಾದ ಸಾಮಾಜಿಕ ಅಂಶ.
ಹಾಗಾಗಿ ಜೆಂಡರ್ ಅನ್ನು ನೋಡುವ ರೀತಿಯಲ್ಲಿ ಬದಲಾವಣೆ ಮಾಡುತ್ತ, ಸಾಮಾಜಿಕ ಡಿಸ್‍ಫೋರಿಯಾವನ್ನು ಕಡಿಮೆ ಮಾಡಲು ನಮ್ಮ ಸಮಾಜದಲ್ಲಿ ಅನೇಕ ಅವಕಾಶಗಳಿವೆ. ಸಮಾಜವು ಜೆಂಡರ್‍ಗಳ ಮೇಲೆ ಹೇರಿದ ನಿರೀಕ್ಷೆಗಳನ್ನು ಕೆಲವರು ಪೂರ್ಣಗೊಳಿಸುತ್ತಾರೋ ಇಲ್ಲವೋ ಎನ್ನುವುದರ ಆಧಾರದ ಮೇಲೆ ಗೇಲಿ ಮಾಡುವುದನ್ನು ಬಿಡಬೇಕಿದೆ. ಸಮಾಜವು ಇಂತಹ ಅಪಹಾಸ್ಯ ಮಾಡುವುದನ್ನು ಬಿಟ್ಟರೆ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳು ಹಾಗೂ ಸಿಸ್‍ಜೆಂಡರ್ ವ್ಯಕ್ತಿಗಳೂ ಕೂಡ ಮುಕ್ತವಾಗಿ ಸಂಚರಿಸಬಹುದು ಮತ್ತು ಜಗತ್ತನ್ನು ಸಾವಧಾನವಾಗಿ ಅನುಭವಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...