Homeಸಿನಿಮಾಕ್ರೀಡೆವಿಶ್ವಕಪ್ ಬೇಡ, ಐಪಿಎಲ್ ಬೇಕು.. ಬದಲಾಗ್ತಿದೆ ಕ್ರಿಕೆಟಿಗರ ಮೈಂಡ್‍ಸೆಟ್!

ವಿಶ್ವಕಪ್ ಬೇಡ, ಐಪಿಎಲ್ ಬೇಕು.. ಬದಲಾಗ್ತಿದೆ ಕ್ರಿಕೆಟಿಗರ ಮೈಂಡ್‍ಸೆಟ್!

ಬಿಸಿಸಿಐ ಅನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಹಣಬಲದ ಜೊತೆಗೆ ತೋಳ್ಬಲ ಬೇಕು ಅಂತಾರಲ್ಲ, ಹಾಗೆಯೇ ಬಿಸಿಸಿಐ ಬೆಳೆದುಬಿಟ್ಟಿದೆ.

- Advertisement -
- Advertisement -

ಐಪಿಎಲ್ ಬೇಕಾ? ವರ್ಲ್ಡ್‌ಕಪ್ ಬೇಕಾ? ಆರೋಗ್ಯ ಮುಖ್ಯನಾ? ಆಟ ಮುಖ್ಯನಾ? ಇಂತಹದ್ದೊಂದು ಚರ್ಚೆ ಜೋರಾಗಿ ನಡೆಯುತ್ತಿದೆ. ಇತ್ತ ಬಿಸಿಸಿಐ ಐಪಿಎಲ್‍ ಅನ್ನು ಶತಾಯಗತಾಯವಾಗಿ ನಡೆಸಲೇಬೇಕೆಂದು ಪಣತೊಟ್ಟಿದೆ. ಅಂತಾರಾಷ್ಟ್ರೀಯ ಕ್ರಿಕೆಟಿಗರು ಕೂಡ ಐಪಿಎಲ್ ಬೆನ್ನಿಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‍ ಅನ್ನು ಕಂಟ್ರೋಲ್ ಮಾಡುತ್ತಿರುವ ಐಸಿಸಿ, ಬಿಸಿಸಿಐ ಅನ್ನೇ ಏನೂ ಮಾಡಲು ಆಗದ ಸ್ಥಿತಿ ತಲುಪಿದೆ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ತನ್ನ ಮಾತ ಮೇಲೆ ತಾನು ನಿಲ್ಲುತ್ತಿಲ್ಲ. ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಕ್ರಿಕೆಟ್ ಸೌತ್ ಆಫ್ರಿಕಾಕ್ಕೆ ಬಿಸಿಸಿಐ ಹೇಳಿದ್ದೇ ವೇದವಾಕ್ಯ. ಹೀಗಾಗಿ ಬಿಸಿಸಿಐ ಕೊರೊನಾ ಮಧ್ಯದಲ್ಲೂ ಐಪಿಎಲ್‍ ನಡೆಸೇ ನಡೆಸ್ತೀವಿ ಅಂತ ಜಂಭದಿಂದ ಹೇಳುತ್ತಿದೆ. ಆಟಗಾರರು ಕೂಡ ಅಷ್ಟೇ, ಐಪಿಎಲ್ ಇದ್ರೆ ಸಾಕಪ್ಪ ಅನ್ನುವ ಮನಸ್ಥಿತಿಗೆ ಬಂದುಬಿಟ್ಟಿದ್ದಾರೆ.

ಟಿ20 ವಿಶ್ವಕಪ್ ಕ್ಯಾನ್ಸಲ್, ಐಪಿಎಲ್ ಆನ್!

ವಿಶ್ವಕಪ್ ಆಡುವುದು ಪ್ರತಿಯೊಬ್ಬ ಆಟಗಾರನ ಕನಸು. ಆದರೆ ಈಗ ಕ್ರಿಕೆಟ್ ಲೋಕದಲ್ಲಿ ಈ ಪ್ರತೀತಿ ಬದಲಾಗಿದೆ. ಪ್ರತಿಯೊಬ್ಬನೂ ಕೂಡ ಐಪಿಎಲ್ ಆಡಿದ್ರೆ ಸಾಕಪ್ಪ ಅನ್ನುವ ಕನಸು ಕಾಣಲು ಶುರು ಮಾಡಿದ್ದಾನೆ. ಹೀಗಾಗಿ ಕೊರೊನಾ ಕಾರಣ ಮುಂದಿಟ್ಟುಕೊಂಡು ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಕ್ಯಾನ್ಸಲ್ ಆಗಿದೆ. ಆದರೆ ಕೊರೊನಾ ಮಧ್ಯೆಯೇ ಐಪಿಎಲ್ ಆಯೋಜನೆಗೆ ಸಿದ್ಧತೆ ನಡೆಯುತ್ತಿದೆ.

ಟಿ20 ವಿಶ್ವಕಪ್ ನಡೆಯಬೇಕಿದ್ದ ಆಸ್ಟ್ರೇಲಿಯಾದ ವಿವಿಧೆಡೆ ತಂಡಗಳು ಪ್ರಯಾಣ ನಡೆಸಬೇಕಿತ್ತು. ಖರ್ಚು ಕೂಡ ಹೆಚ್ಚಾಗುತ್ತಿತ್ತು. ಪ್ರತಿ ತಂಡದ ಆಟಗಾರರು ಕೊರೊನಾ ಸಂಬಂಧಿ ಜೈವಿಕ ಐಸೋಲೇಷನ್ ನಿಯಮಗಳನ್ನು ಪಾಲಿಸಬೇಕಿತ್ತು. ಇದೆಲ್ಲವೂ ಐಸಿಸಿಗೆ ತಲೆನೋವು ತಂದಿತ್ತು. ಖರ್ಚು ಹೆಚ್ಚಾಗುತ್ತಿತ್ತು. ಆಟಗಾರರ ಜೇಬು ಕೂಡ ತುಂಬುತ್ತಿರಲಿಲ್ಲ. ಮೀಟಿಂಗ್ ಮೇಲೆ ಮೀಟಿಂಗ್ ನಡೆಸಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಸದ್ಯಕ್ಕೆ ಕ್ಯಾನ್ಸಲ್ ಮಾಡಿದೆ. ಕೊರೊನಾ ಮುಗಿದ ಮೇಲೆ ಆಟ ಆಡಿಸೋಣ ಅನ್ನುವ ನಿರ್ಧಾರಕ್ಕೆ ಬಂದಿದೆ.

ಇತ್ತ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಕೊರೊನಾದಿಂದಾಗಿ ರದ್ದಾಗಿತ್ತು. ಬಿಸಿಸಿಐ ಸಣ್ಣ ಅವಧಿಯ ಸಮಯ ಸಿಕ್ಕರೆ ಸಾಕು ಆಟ ಆಡಿಸೋದೆ ಅನ್ನುವ ತೀರ್ಮಾನಕ್ಕೆ ಬಂದಿತ್ತು. ಐಸಿಸಿ ಟಿ20 ಶೆಡ್ಯೂಲ್ ಕ್ಯಾನ್ಸಲ್ ಆಗಿದ್ದೇ ಆಗಿದ್ದು, ಬಿಸಿಸಿಐ ಉಸಿರು ಜೋರಾಯಿತು. ಭಾರತದಲ್ಲಿ ಐಪಿಎಲ್ ಆಟ ಆಗದೇ ಇದ್ರೆ ಏನಂತೆ..? ಬೇರೆ ದೇಶ ಇದೆಯಲ್ಲಾ ಅನ್ನೋ ವಿಶ್ವಾಸವಿತ್ತು. ಕೊನೆಗೆ ಯುಎಇನಲ್ಲಿ ಐಪಿಎಲ್ ಆಟ ಆಡಿಸಲು ನಿರ್ಧಾರ ಮಾಡಿದೆ. ಆಟಗಾರರಿಗೂ ಇದೇ ಬೇಕಿತ್ತು. ಜೇಬು ತುಂಬಿಸಿಕೊಂಡ್ರೆ ಸಾಕು ಅನ್ನುವವರಿಗೆ ಟಿ20 ವಿಶ್ವಕಪ್‍ಗಿಂತ ಐಪಿಎಲ್ ಮುಖ್ಯವಾಗಿ ಕಂಡಿತ್ತು..!

ತಂಡ ಮುಖ್ಯವಲ್ಲ, ಅಕೌಂಟ್ ಬ್ಯಾಲೆನ್ಸ್ ಮುಖ್ಯ!

ಐಸಿಸಿ ಟೂರ್ನಿಗಳನ್ನು ಆಡಿದ್ರೆ ಎಲ್ಲಾ ಆಟಗಾರರಿಗೂ ಸಂಭಾವನೆ ಸಿಕ್ಕೇ ಸಿಗುತ್ತದೆ. ಆದರೆ ತಂಡಕ್ಕೆ ಬರುವ ಮೊತ್ತದಲ್ಲಿ ಎಲ್ಲವೂ ವಿಂಗಡನೆ ಆಗುತ್ತದೆ. ಆಯಾ ಬೋರ್ಡ್ ತಮ್ಮ ತಮ್ಮ ಲೆಕ್ಕಾಚಾರಕ್ಕೆ ಅನುಗುಣವಾಗಿ ಆಟಗಾರರ ಜೇಬು ತುಂಬಿಸುತ್ತವೆ. ಆದರೆ ಐಪಿಎಲ್‍ನಲ್ಲಿ ಹಾಗಲ್ಲ. ಹರಾಜಿನಲ್ಲಿ ಸಿಕ್ಕ ದುಡ್ಡು ಆಟಗಾರರಿಗೆ ಮಾತ್ರ ಮೀಸಲು. ಅದರ ಜೊತೆಗೆ ಪ್ರತಿ ಆಟಗಾರನಿಗೂ ಪಂದ್ಯ ಸಂಭಾವನೆ ಜೊತೆಗೆ ಅದೂ ಇದು ಎಂಬ ಹಲವು ಭತ್ಯೆಗಳೆಲ್ಲವೂ ಸಿಗುತ್ತದೆ.

ಐಸಿಸಿ ದುಡ್ಡು ತಂಡದ ಜೊತೆಗೆ ಗುಂಪಿನಲ್ಲಿ ಗೋವಿಂದ ಆಗಿ ಬಿಡುತ್ತದೆ. ಆದ್ರೆ ಐಪಿಎಲ್ ದುಡ್ಡು ನೇರವಾಗಿ ಆಟಗಾರರ ಅಕೌಂಟ್ ಸೇರಿಬಿಡುತ್ತದೆ. ಹೀಗಾಗಿ ಪ್ರತಿಯೊಬ್ಬ ಆಟಗಾರ ಕೂಡ ಐಪಿಎಲ್ ನಡೆದ್ರೆ ಸಾಕಪ್ಪಾ ಅಂತ ಗಟ್ಟಿಯಾಗಿ ಹೇಳುತ್ತಿದ್ದಾರೆ. ಇನ್ನು ಕೆಲವರು ವರ್ಷವಿಡೀ ಕ್ರಿಕೆಟ್ ನಡೆಯದೇ ಇದ್ದರೂ ಪರವಾಗಿಲ್ಲ ಐಪಿಎಲ್‍ಗೆ ಮಾತ್ರ ಯಾವುದೇ ವಿಘ್ನ ಬರದಿರಲಪ್ಪ ಅಂತ ಬೇಡಿಕೊಳ್ತಿದ್ದಾರೆ.

ಟಿವಿ ರೈಟ್ಸ್, ಮಾರ್ಕೆಟಿಂಗ್ ಟ್ರಿಕ್ಸ್! ಬಿಸಿಸಿಐ ಖಜಾನೆಗೂ ನೋಟು ಫಿಕ್ಸ್!

ಬಿಸಿಸಿಐ ಕೂಡ ಒಂದು ಐಪಿಎಲ್ ನಡೆದ್ರೆ ಸಾಕು ಅನ್ನುವ ಲೆಕ್ಕಾಚಾರದಲ್ಲಿದೆ. ವರ್ಷವಿಡೀ ಟೀಮ್ ಇಂಡಿಯಾ ಕ್ರಿಕೆಟ್ ಆಡಿದರೂ ಐಪಿಎಲ್‍ನಲ್ಲಿ ಬರುವಷ್ಟು ಇನ್‍ಕಂ ಬರೋದಿಲ್ಲ. ಕೇವಲ 60 ದಿನದ ಆಟದಲ್ಲಿ ಬಿಸಿಸಿಐ ಖಜಾನೆಗೆ ನೋಟಿನ ಕಂತೆಗಳೇ ಬಂದುಬೀಳುತ್ತವೆ. ಟಿವಿ ರೈಟ್ಸ್ ಮತ್ತು ಮಾರ್ಕೆಟಿಂಗ್ ಟ್ರಿಕ್ಸ್ ಬಿಸಿಸಿಐ ಅಕೌಂಟ್‍ಅನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ. ಐಪಿಎಲ್ ಅನ್ನುವ ಒಂದೇ ಒಂದು ಬ್ರಾಂಡ್ ಐಸಿಸಿಯ ಲೆಕ್ಕಾಚಾರವನ್ನೂ ಬುಡಮೇಲು ಮಾಡುತ್ತದೆ.

ಐಪಿಎಲ್‍ಗಾಗಿ ಜನರ ಕಾತರ!

ಆರ್‌ಸಿಬಿ ವಿಶ್ವದಲ್ಲೇ ಅತೀಹೆಚ್ಚು ಫ್ಯಾನ್‍ಫಾಲೋವರ್ಸ್ ಹೊಂದಿರುವ ಕ್ರಿಕೆಟ್ ಟೀಮ್. ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಕ್ರಿಕೆಟ್‍ನ ಶ್ರೇಷ್ಠ ತಂಡ. ಕೆಕೆಆರ್, ಡೆಲ್ಲಿ ಕ್ಯಾಪಿಟಲ್ಸ್, ಹೈದರಾಬಾದ್ ಡೆಕ್ಕನ್ ಚಾರ್ಜರ್ಸ್ ಹೀಗೆ ಎಲ್ಲಿ ನೋಡಿದ್ರೂ ಫ್ರಾಂಚೈಸಿ ಆಧರಿತ ತಂಡಗಳಿಗೆ ಅಭಿಮಾನಿಗಳ ದಂಡೇ ಇದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಈಗ ಇಂಟನ್ರ್ಯಾಷನಲ್ ಪ್ರೀಮಿಯರ್ ಲೀಗ್ ಎಂದು ಹೇಳುವ ಮಟ್ಟಕ್ಕೆ ಬೆಳೆದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ದೂರವಾದ ಕ್ರಿಕೆಟಿಗರು ಕೂಡ ವರ್ಷಂಪ್ರತಿ ಐಪಿಎಲ್‍ನಲ್ಲಿ ಬಂದು ಆಡುತ್ತಾರೆ. ಆಡುವ ಸಾಮಥ್ರ್ಯ ಕಳೆದುಕೊಂಡಿದ್ದರೆ ಕೋಚ್ ಆಗಿಯೋ ಅಥವಾ ಮೆಂಟರ್ ಆಗಿಯೋ 60 ದಿನ ಕಾಲ ಕಳೆಯುತ್ತಾರೆ. ದುಡ್ಡಿನ ಮುಂದೆ ಸಾಂಪ್ರದಾಯಿಕ ಕ್ರಿಕೆಟ್ ಲೆಕ್ಕಕ್ಕೇ ಇಲ್ಲ. ಈ ಹೊಡಿಬಡಿ ಆಟ ಕೇವಲ ಬೌಲರ್‍ಗಳಿಗೆ ಮಾತ್ರ ಮಾರಕವಲ್ಲ, ಇಡೀ ಅಂತಾರಾಷ್ಟ್ರೀಯ ಕ್ರಿಕೆಟ್ ಸಮುದಾಯಕ್ಕೂ ಮಾರಕವೇ ಎಂದು ನಿಧಾನವಾಗಿ ಅರ್ಥವಾಗುತ್ತಿದೆ.

ತಲೆ ಮೇಲೆ ಕೈಯಿಟ್ಟುಕೊಂಡ ಐಸಿಸಿ, ಬಿಸಿಸಿ ಮುಂದೆ ಎಲ್ಲರೂ ಕೈಗೊಂಬೆ

ಬಿಸಿಸಿಐ ಆಟಕ್ಕೆ ಯಾರೂ ಏನೂ ಮಾಡಲು ಸಾಧ್ಯ ಇಲ್ಲವೇ? ಇಂತಹ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಸದ್ಯ ಮಟ್ಟಿಗೆ ಬಿಸಿಸಿಐ ಅನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಹಣಬಲದ ಜೊತೆಗೆ ತೋಳ್ಬಲ ಬೇಕು ಅಂತಾರಲ್ಲ, ಹಾಗೆಯೇ ಬಿಸಿಸಿಐ ಬೆಳೆದುಬಿಟ್ಟಿದೆ.

ಬಿಸಿಸಿಐ ಜೊತೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಕೈಜೋಡಿಸಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಕೂಡ ಬಿಸಿಸಿಐ ಮಾತಿಗೆ ತಲೆ ಅಲ್ಲಾಡಿಸುತ್ತಿದೆ. ಕ್ರಿಕೆಟ್ ಸೌತ್‍ಆಫ್ರಿಕಾದ ಪಾಲಿಗೆ ಬಿಸಿಸಿಐ ಮಾತೇ ವೇದವಾಕ್ಯ. ಈ ನಾಲ್ಕು ರಾಷ್ಟ್ರಗಳ ಕ್ರಿಕೆಟ್ ಬೋರ್ಡ್‍ಗಳು ನಕರ ಮಾಡಿದರೆ ಮಾತ್ರ ಬಿಸಿಸಿಐಗೆ ಹಿನ್ನಡೆ ಆಗುತ್ತದೆ. ಆದರೆ ಬಿಸಿಸಿಐ ಬಲಿಷ್ಠ ಬೋರ್ಡ್‍ಗಳನ್ನೇ ಆಪರೇಷನ್ ಮಾಡಿಬಿಟ್ಟಿದೆ. ಕಾಮೆಂಟೇಟರ್‍ಗಳಿಂದ ಹಿಡಿದು ಮಾಧ್ಯಮಗಳತನಕ ಯಾರೂ ಟಿ20 ವಿಶ್ವಕಪ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಆದರೆ ಐಪಿಎಲ್ ಹುಚ್ಚು ಹಿಡಿಸಿಕೊಂಡಿರುವುದು ವಿಪರ್ಯಾಸವಲ್ಲದೆ ಮತ್ತಿನ್ನೇನು?

  • ಸುನಿಲ್ ಮತ್ತು ಜೀವನ್ 

ಇದನ್ನು ಓದಿ: ಬಾಲಿವುಡ್ ಗ್ಯಾಂಗ್! ಸ್ವಜನಪಕ್ಷಪಾತದ ಸುಳಿಯಲ್ಲಿ ಹಿಂದಿ ಚಿತ್ರರಂಗ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...