Homeಸಿನಿಮಾಕ್ರೀಡೆವಿಶ್ವಕಪ್ ಬೇಡ, ಐಪಿಎಲ್ ಬೇಕು.. ಬದಲಾಗ್ತಿದೆ ಕ್ರಿಕೆಟಿಗರ ಮೈಂಡ್‍ಸೆಟ್!

ವಿಶ್ವಕಪ್ ಬೇಡ, ಐಪಿಎಲ್ ಬೇಕು.. ಬದಲಾಗ್ತಿದೆ ಕ್ರಿಕೆಟಿಗರ ಮೈಂಡ್‍ಸೆಟ್!

ಬಿಸಿಸಿಐ ಅನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಹಣಬಲದ ಜೊತೆಗೆ ತೋಳ್ಬಲ ಬೇಕು ಅಂತಾರಲ್ಲ, ಹಾಗೆಯೇ ಬಿಸಿಸಿಐ ಬೆಳೆದುಬಿಟ್ಟಿದೆ.

- Advertisement -
- Advertisement -

ಐಪಿಎಲ್ ಬೇಕಾ? ವರ್ಲ್ಡ್‌ಕಪ್ ಬೇಕಾ? ಆರೋಗ್ಯ ಮುಖ್ಯನಾ? ಆಟ ಮುಖ್ಯನಾ? ಇಂತಹದ್ದೊಂದು ಚರ್ಚೆ ಜೋರಾಗಿ ನಡೆಯುತ್ತಿದೆ. ಇತ್ತ ಬಿಸಿಸಿಐ ಐಪಿಎಲ್‍ ಅನ್ನು ಶತಾಯಗತಾಯವಾಗಿ ನಡೆಸಲೇಬೇಕೆಂದು ಪಣತೊಟ್ಟಿದೆ. ಅಂತಾರಾಷ್ಟ್ರೀಯ ಕ್ರಿಕೆಟಿಗರು ಕೂಡ ಐಪಿಎಲ್ ಬೆನ್ನಿಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‍ ಅನ್ನು ಕಂಟ್ರೋಲ್ ಮಾಡುತ್ತಿರುವ ಐಸಿಸಿ, ಬಿಸಿಸಿಐ ಅನ್ನೇ ಏನೂ ಮಾಡಲು ಆಗದ ಸ್ಥಿತಿ ತಲುಪಿದೆ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ತನ್ನ ಮಾತ ಮೇಲೆ ತಾನು ನಿಲ್ಲುತ್ತಿಲ್ಲ. ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಕ್ರಿಕೆಟ್ ಸೌತ್ ಆಫ್ರಿಕಾಕ್ಕೆ ಬಿಸಿಸಿಐ ಹೇಳಿದ್ದೇ ವೇದವಾಕ್ಯ. ಹೀಗಾಗಿ ಬಿಸಿಸಿಐ ಕೊರೊನಾ ಮಧ್ಯದಲ್ಲೂ ಐಪಿಎಲ್‍ ನಡೆಸೇ ನಡೆಸ್ತೀವಿ ಅಂತ ಜಂಭದಿಂದ ಹೇಳುತ್ತಿದೆ. ಆಟಗಾರರು ಕೂಡ ಅಷ್ಟೇ, ಐಪಿಎಲ್ ಇದ್ರೆ ಸಾಕಪ್ಪ ಅನ್ನುವ ಮನಸ್ಥಿತಿಗೆ ಬಂದುಬಿಟ್ಟಿದ್ದಾರೆ.

ಟಿ20 ವಿಶ್ವಕಪ್ ಕ್ಯಾನ್ಸಲ್, ಐಪಿಎಲ್ ಆನ್!

ವಿಶ್ವಕಪ್ ಆಡುವುದು ಪ್ರತಿಯೊಬ್ಬ ಆಟಗಾರನ ಕನಸು. ಆದರೆ ಈಗ ಕ್ರಿಕೆಟ್ ಲೋಕದಲ್ಲಿ ಈ ಪ್ರತೀತಿ ಬದಲಾಗಿದೆ. ಪ್ರತಿಯೊಬ್ಬನೂ ಕೂಡ ಐಪಿಎಲ್ ಆಡಿದ್ರೆ ಸಾಕಪ್ಪ ಅನ್ನುವ ಕನಸು ಕಾಣಲು ಶುರು ಮಾಡಿದ್ದಾನೆ. ಹೀಗಾಗಿ ಕೊರೊನಾ ಕಾರಣ ಮುಂದಿಟ್ಟುಕೊಂಡು ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಕ್ಯಾನ್ಸಲ್ ಆಗಿದೆ. ಆದರೆ ಕೊರೊನಾ ಮಧ್ಯೆಯೇ ಐಪಿಎಲ್ ಆಯೋಜನೆಗೆ ಸಿದ್ಧತೆ ನಡೆಯುತ್ತಿದೆ.

ಟಿ20 ವಿಶ್ವಕಪ್ ನಡೆಯಬೇಕಿದ್ದ ಆಸ್ಟ್ರೇಲಿಯಾದ ವಿವಿಧೆಡೆ ತಂಡಗಳು ಪ್ರಯಾಣ ನಡೆಸಬೇಕಿತ್ತು. ಖರ್ಚು ಕೂಡ ಹೆಚ್ಚಾಗುತ್ತಿತ್ತು. ಪ್ರತಿ ತಂಡದ ಆಟಗಾರರು ಕೊರೊನಾ ಸಂಬಂಧಿ ಜೈವಿಕ ಐಸೋಲೇಷನ್ ನಿಯಮಗಳನ್ನು ಪಾಲಿಸಬೇಕಿತ್ತು. ಇದೆಲ್ಲವೂ ಐಸಿಸಿಗೆ ತಲೆನೋವು ತಂದಿತ್ತು. ಖರ್ಚು ಹೆಚ್ಚಾಗುತ್ತಿತ್ತು. ಆಟಗಾರರ ಜೇಬು ಕೂಡ ತುಂಬುತ್ತಿರಲಿಲ್ಲ. ಮೀಟಿಂಗ್ ಮೇಲೆ ಮೀಟಿಂಗ್ ನಡೆಸಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಸದ್ಯಕ್ಕೆ ಕ್ಯಾನ್ಸಲ್ ಮಾಡಿದೆ. ಕೊರೊನಾ ಮುಗಿದ ಮೇಲೆ ಆಟ ಆಡಿಸೋಣ ಅನ್ನುವ ನಿರ್ಧಾರಕ್ಕೆ ಬಂದಿದೆ.

ಇತ್ತ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಕೊರೊನಾದಿಂದಾಗಿ ರದ್ದಾಗಿತ್ತು. ಬಿಸಿಸಿಐ ಸಣ್ಣ ಅವಧಿಯ ಸಮಯ ಸಿಕ್ಕರೆ ಸಾಕು ಆಟ ಆಡಿಸೋದೆ ಅನ್ನುವ ತೀರ್ಮಾನಕ್ಕೆ ಬಂದಿತ್ತು. ಐಸಿಸಿ ಟಿ20 ಶೆಡ್ಯೂಲ್ ಕ್ಯಾನ್ಸಲ್ ಆಗಿದ್ದೇ ಆಗಿದ್ದು, ಬಿಸಿಸಿಐ ಉಸಿರು ಜೋರಾಯಿತು. ಭಾರತದಲ್ಲಿ ಐಪಿಎಲ್ ಆಟ ಆಗದೇ ಇದ್ರೆ ಏನಂತೆ..? ಬೇರೆ ದೇಶ ಇದೆಯಲ್ಲಾ ಅನ್ನೋ ವಿಶ್ವಾಸವಿತ್ತು. ಕೊನೆಗೆ ಯುಎಇನಲ್ಲಿ ಐಪಿಎಲ್ ಆಟ ಆಡಿಸಲು ನಿರ್ಧಾರ ಮಾಡಿದೆ. ಆಟಗಾರರಿಗೂ ಇದೇ ಬೇಕಿತ್ತು. ಜೇಬು ತುಂಬಿಸಿಕೊಂಡ್ರೆ ಸಾಕು ಅನ್ನುವವರಿಗೆ ಟಿ20 ವಿಶ್ವಕಪ್‍ಗಿಂತ ಐಪಿಎಲ್ ಮುಖ್ಯವಾಗಿ ಕಂಡಿತ್ತು..!

ತಂಡ ಮುಖ್ಯವಲ್ಲ, ಅಕೌಂಟ್ ಬ್ಯಾಲೆನ್ಸ್ ಮುಖ್ಯ!

ಐಸಿಸಿ ಟೂರ್ನಿಗಳನ್ನು ಆಡಿದ್ರೆ ಎಲ್ಲಾ ಆಟಗಾರರಿಗೂ ಸಂಭಾವನೆ ಸಿಕ್ಕೇ ಸಿಗುತ್ತದೆ. ಆದರೆ ತಂಡಕ್ಕೆ ಬರುವ ಮೊತ್ತದಲ್ಲಿ ಎಲ್ಲವೂ ವಿಂಗಡನೆ ಆಗುತ್ತದೆ. ಆಯಾ ಬೋರ್ಡ್ ತಮ್ಮ ತಮ್ಮ ಲೆಕ್ಕಾಚಾರಕ್ಕೆ ಅನುಗುಣವಾಗಿ ಆಟಗಾರರ ಜೇಬು ತುಂಬಿಸುತ್ತವೆ. ಆದರೆ ಐಪಿಎಲ್‍ನಲ್ಲಿ ಹಾಗಲ್ಲ. ಹರಾಜಿನಲ್ಲಿ ಸಿಕ್ಕ ದುಡ್ಡು ಆಟಗಾರರಿಗೆ ಮಾತ್ರ ಮೀಸಲು. ಅದರ ಜೊತೆಗೆ ಪ್ರತಿ ಆಟಗಾರನಿಗೂ ಪಂದ್ಯ ಸಂಭಾವನೆ ಜೊತೆಗೆ ಅದೂ ಇದು ಎಂಬ ಹಲವು ಭತ್ಯೆಗಳೆಲ್ಲವೂ ಸಿಗುತ್ತದೆ.

ಐಸಿಸಿ ದುಡ್ಡು ತಂಡದ ಜೊತೆಗೆ ಗುಂಪಿನಲ್ಲಿ ಗೋವಿಂದ ಆಗಿ ಬಿಡುತ್ತದೆ. ಆದ್ರೆ ಐಪಿಎಲ್ ದುಡ್ಡು ನೇರವಾಗಿ ಆಟಗಾರರ ಅಕೌಂಟ್ ಸೇರಿಬಿಡುತ್ತದೆ. ಹೀಗಾಗಿ ಪ್ರತಿಯೊಬ್ಬ ಆಟಗಾರ ಕೂಡ ಐಪಿಎಲ್ ನಡೆದ್ರೆ ಸಾಕಪ್ಪಾ ಅಂತ ಗಟ್ಟಿಯಾಗಿ ಹೇಳುತ್ತಿದ್ದಾರೆ. ಇನ್ನು ಕೆಲವರು ವರ್ಷವಿಡೀ ಕ್ರಿಕೆಟ್ ನಡೆಯದೇ ಇದ್ದರೂ ಪರವಾಗಿಲ್ಲ ಐಪಿಎಲ್‍ಗೆ ಮಾತ್ರ ಯಾವುದೇ ವಿಘ್ನ ಬರದಿರಲಪ್ಪ ಅಂತ ಬೇಡಿಕೊಳ್ತಿದ್ದಾರೆ.

ಟಿವಿ ರೈಟ್ಸ್, ಮಾರ್ಕೆಟಿಂಗ್ ಟ್ರಿಕ್ಸ್! ಬಿಸಿಸಿಐ ಖಜಾನೆಗೂ ನೋಟು ಫಿಕ್ಸ್!

ಬಿಸಿಸಿಐ ಕೂಡ ಒಂದು ಐಪಿಎಲ್ ನಡೆದ್ರೆ ಸಾಕು ಅನ್ನುವ ಲೆಕ್ಕಾಚಾರದಲ್ಲಿದೆ. ವರ್ಷವಿಡೀ ಟೀಮ್ ಇಂಡಿಯಾ ಕ್ರಿಕೆಟ್ ಆಡಿದರೂ ಐಪಿಎಲ್‍ನಲ್ಲಿ ಬರುವಷ್ಟು ಇನ್‍ಕಂ ಬರೋದಿಲ್ಲ. ಕೇವಲ 60 ದಿನದ ಆಟದಲ್ಲಿ ಬಿಸಿಸಿಐ ಖಜಾನೆಗೆ ನೋಟಿನ ಕಂತೆಗಳೇ ಬಂದುಬೀಳುತ್ತವೆ. ಟಿವಿ ರೈಟ್ಸ್ ಮತ್ತು ಮಾರ್ಕೆಟಿಂಗ್ ಟ್ರಿಕ್ಸ್ ಬಿಸಿಸಿಐ ಅಕೌಂಟ್‍ಅನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ. ಐಪಿಎಲ್ ಅನ್ನುವ ಒಂದೇ ಒಂದು ಬ್ರಾಂಡ್ ಐಸಿಸಿಯ ಲೆಕ್ಕಾಚಾರವನ್ನೂ ಬುಡಮೇಲು ಮಾಡುತ್ತದೆ.

ಐಪಿಎಲ್‍ಗಾಗಿ ಜನರ ಕಾತರ!

ಆರ್‌ಸಿಬಿ ವಿಶ್ವದಲ್ಲೇ ಅತೀಹೆಚ್ಚು ಫ್ಯಾನ್‍ಫಾಲೋವರ್ಸ್ ಹೊಂದಿರುವ ಕ್ರಿಕೆಟ್ ಟೀಮ್. ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಕ್ರಿಕೆಟ್‍ನ ಶ್ರೇಷ್ಠ ತಂಡ. ಕೆಕೆಆರ್, ಡೆಲ್ಲಿ ಕ್ಯಾಪಿಟಲ್ಸ್, ಹೈದರಾಬಾದ್ ಡೆಕ್ಕನ್ ಚಾರ್ಜರ್ಸ್ ಹೀಗೆ ಎಲ್ಲಿ ನೋಡಿದ್ರೂ ಫ್ರಾಂಚೈಸಿ ಆಧರಿತ ತಂಡಗಳಿಗೆ ಅಭಿಮಾನಿಗಳ ದಂಡೇ ಇದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಈಗ ಇಂಟನ್ರ್ಯಾಷನಲ್ ಪ್ರೀಮಿಯರ್ ಲೀಗ್ ಎಂದು ಹೇಳುವ ಮಟ್ಟಕ್ಕೆ ಬೆಳೆದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ದೂರವಾದ ಕ್ರಿಕೆಟಿಗರು ಕೂಡ ವರ್ಷಂಪ್ರತಿ ಐಪಿಎಲ್‍ನಲ್ಲಿ ಬಂದು ಆಡುತ್ತಾರೆ. ಆಡುವ ಸಾಮಥ್ರ್ಯ ಕಳೆದುಕೊಂಡಿದ್ದರೆ ಕೋಚ್ ಆಗಿಯೋ ಅಥವಾ ಮೆಂಟರ್ ಆಗಿಯೋ 60 ದಿನ ಕಾಲ ಕಳೆಯುತ್ತಾರೆ. ದುಡ್ಡಿನ ಮುಂದೆ ಸಾಂಪ್ರದಾಯಿಕ ಕ್ರಿಕೆಟ್ ಲೆಕ್ಕಕ್ಕೇ ಇಲ್ಲ. ಈ ಹೊಡಿಬಡಿ ಆಟ ಕೇವಲ ಬೌಲರ್‍ಗಳಿಗೆ ಮಾತ್ರ ಮಾರಕವಲ್ಲ, ಇಡೀ ಅಂತಾರಾಷ್ಟ್ರೀಯ ಕ್ರಿಕೆಟ್ ಸಮುದಾಯಕ್ಕೂ ಮಾರಕವೇ ಎಂದು ನಿಧಾನವಾಗಿ ಅರ್ಥವಾಗುತ್ತಿದೆ.

ತಲೆ ಮೇಲೆ ಕೈಯಿಟ್ಟುಕೊಂಡ ಐಸಿಸಿ, ಬಿಸಿಸಿ ಮುಂದೆ ಎಲ್ಲರೂ ಕೈಗೊಂಬೆ

ಬಿಸಿಸಿಐ ಆಟಕ್ಕೆ ಯಾರೂ ಏನೂ ಮಾಡಲು ಸಾಧ್ಯ ಇಲ್ಲವೇ? ಇಂತಹ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಸದ್ಯ ಮಟ್ಟಿಗೆ ಬಿಸಿಸಿಐ ಅನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಹಣಬಲದ ಜೊತೆಗೆ ತೋಳ್ಬಲ ಬೇಕು ಅಂತಾರಲ್ಲ, ಹಾಗೆಯೇ ಬಿಸಿಸಿಐ ಬೆಳೆದುಬಿಟ್ಟಿದೆ.

ಬಿಸಿಸಿಐ ಜೊತೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಕೈಜೋಡಿಸಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಕೂಡ ಬಿಸಿಸಿಐ ಮಾತಿಗೆ ತಲೆ ಅಲ್ಲಾಡಿಸುತ್ತಿದೆ. ಕ್ರಿಕೆಟ್ ಸೌತ್‍ಆಫ್ರಿಕಾದ ಪಾಲಿಗೆ ಬಿಸಿಸಿಐ ಮಾತೇ ವೇದವಾಕ್ಯ. ಈ ನಾಲ್ಕು ರಾಷ್ಟ್ರಗಳ ಕ್ರಿಕೆಟ್ ಬೋರ್ಡ್‍ಗಳು ನಕರ ಮಾಡಿದರೆ ಮಾತ್ರ ಬಿಸಿಸಿಐಗೆ ಹಿನ್ನಡೆ ಆಗುತ್ತದೆ. ಆದರೆ ಬಿಸಿಸಿಐ ಬಲಿಷ್ಠ ಬೋರ್ಡ್‍ಗಳನ್ನೇ ಆಪರೇಷನ್ ಮಾಡಿಬಿಟ್ಟಿದೆ. ಕಾಮೆಂಟೇಟರ್‍ಗಳಿಂದ ಹಿಡಿದು ಮಾಧ್ಯಮಗಳತನಕ ಯಾರೂ ಟಿ20 ವಿಶ್ವಕಪ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಆದರೆ ಐಪಿಎಲ್ ಹುಚ್ಚು ಹಿಡಿಸಿಕೊಂಡಿರುವುದು ವಿಪರ್ಯಾಸವಲ್ಲದೆ ಮತ್ತಿನ್ನೇನು?

  • ಸುನಿಲ್ ಮತ್ತು ಜೀವನ್ 

ಇದನ್ನು ಓದಿ: ಬಾಲಿವುಡ್ ಗ್ಯಾಂಗ್! ಸ್ವಜನಪಕ್ಷಪಾತದ ಸುಳಿಯಲ್ಲಿ ಹಿಂದಿ ಚಿತ್ರರಂಗ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...