Homeಮುಖಪುಟಕಂಗಾಲು ಮೋದಿಯ ಕಳಾ ವೃದ್ಧಿಗೆ ನಮೋ ಯಜ್ಞ

ಕಂಗಾಲು ಮೋದಿಯ ಕಳಾ ವೃದ್ಧಿಗೆ ನಮೋ ಯಜ್ಞ

- Advertisement -
- Advertisement -

ಶುದ್ಧೋದನ |

ಸಂಘಪರಿವಾರದಲ್ಲಿ ಶುರುವಿಟ್ಟುಕೊಂಡಿರುವ ನಡುಕ ದಿನಗಳೆದಂತೆ ಜೋರಾಗುತ್ತದೆ. ಹಿಂದಿ ಹೃದಯ ಭೂಮಿಯ ಅಸೆಂಬ್ಲಿ ಚುನಾವಣೆಗಳಲ್ಲಿ ಬಿಜೆಪಿ ಮಕಾಡೆ ಮಲಗುತ್ತಿದ್ದಂತೆಯೇ ಮೋದಿ ಮಹಾತ್ಮನ ಮಂಕುಬೂದಿ ಕಳೆ ಕಳೆದುಕೊಂಡಿರುವ ಭೀತಿ ಸಂಘ ಪರಿವಾರವನ್ನು ಆವರಿಸಿಬಿಟ್ಟಿದೆ. ಹಿಂದುತ್ವದ ಹಿಡನ್ ಅಜೆಂಡಾಗಳನ್ನೆಲ್ಲ ಜಾರಿಗೊಳಿಸಲು ಮೋದಿಯಂಥ “ಬದಲಿ ಶೂದ್ರ” ಸದ್ಯಕ್ಕಂತೂ ಆರೆಸೆಸ್-ವಿಎಚ್‍ಪಿ ಬಳಗಕ್ಕೆ ಸಿಗುವಹಾಗಿಲ್ಲ. ಹಾಗಾಗಿ ಹೇಗಾದರೂ ಮಾಡಿ ಸುಳ್ಳುಗಳಿಗೆ ಕಲಾತ್ಮಕವಾಗಿ ಹೂಳಪು ಕೊಡಲು ಚೆಡ್ಡಿ-ಕಾವಿ ತಂಡ ತರಹೇವಾರಿ ಮಸಲತ್ತು ಮಾಡಲಾರಂಭಿಸಿದೆ.
ರೈತರು, ಕಾರ್ಮಿಕರು, ನಿರುದ್ಯೋಗಿ ಯುವಕರು, ಅಮಾಯಕ ಮಹಿಳೆಯರಿಗೆಲ್ಲ ನಿರಂತರ ಮೋಸ, ವಂಚನೆ ಮಾಡುತ್ತ ದೇಶದ ನೆಮ್ಮದಿ ಕೆಡಿಸಿದ ಪಾಪಕ್ಕೆ ಫಲವಾಗಿ ಅಧಃಪತನದ ಅಂಚಿಗೆ ಬಂದು ನಿಂತಿರುವ ಬಿಜೆಪಿ ಮನುವಾದಿಗಳೀಗ ಮೋದಿ ಕಳಾ ವೃದ್ಧಿಗೆ ಯಜ್ಞದ ಮೊರೆ ಹೋಗಿದ್ದಾರೆ. ಮೌಢ್ಯ ತುಂಬುವ ಹೋಮ-ಹವನ, ಯಜ್ಞ-ಯಾಗ, ಮಡಿ-ಮೈಲಿಗೆ, ಮೋಸ-ಸುಳ್ಳುಗಳ ಪೇಟೆಂಟ್ ಸಂಘಪರಿವಾರ ಪಡೆದುಕೊಂಡು ಅದ್ಯಾವುದೋ ಕಾಲವಾಗಿಹೋಗಿದೆ! ಆದರೆ ಈ ಆನಾಹುತಕಾರಿ ತಂತ್ರಗಳೇ ಸಂಘ ಪರಿವಾರದ ಕೈಗೊಂಬೆ ಮೋದಿಗೆ ತಿರುಗುಬಾಣ ಆಗುತ್ತಿವೆ. ಧನಾತ್ಮಕವಾಗಿ ಜನರ ಮನಸ್ಸು ಗೆಲ್ಲಲಾಗದ ಮೋದಿ ಶಿಷ್ಯಸಂಕುಲ, ಮತ್ತದೇ ವಾಮಮಾರ್ಗಕ್ಕೆ ಬಿದ್ದಿದೆ. ಯಜ್ಞ-ತಂತ್ರದಿಂದ ಜನರ ಮರುಳುಗೊಳಿಸಿ ಆಸ್ತಿತ್ವ ಉಳಿಸಿಕೊಳ್ಳಲು ತಿಣುಕಾಡುತ್ತಿದೆ.
ಲೋಕಸಭಾ ಚುನಾವಣೆ ಎದುರಾಗಿರುವ ಈ ಯುದ್ಧಕಾಲದಲ್ಲಿ ಸೇನಾಧಿಪತಿಯೇ ಕಾಲು ಮುರಿದುಕೊಂಡು ಕೂತಂತಾಗಿದೆ ಬಿಜೆಪಿ ಪರಿಸ್ಥಿತಿ. ಹುಸಿ ವೀರಾವೇಷದ ಭಾಷಣ ಎರಚುವ ಮೋದಿಯ ಮನಮುರಕು ಮಾತುಗಳನ್ನು ಕೇಳುವ ಸ್ಥಿತಿಯಲ್ಲೀಗ ಜನರಿಲ್ಲ ಎಂಬುವುದು ಪರಿವಾರ ಪುರೋಹಿತರಿಗೆ ಪಕ್ಕಾ ಆಗಿದೆ. ರಾಮಮಂದಿರ-ಹಿಂದೂತ್ವದ ಶಾರ್ಟ್‍ಕಟ್ ದಾರಿಯಲ್ಲಿ ದಿಲ್ಲಿ ಸಿಂಹಾಸನ ತಲುಪಿದ್ದ ಮೋದಿಗೆ ಪ್ರಧಾನಿಯಾಗಿ ನಾಲ್ಕುವರೆ ವರ್ಷ ಕಳೆದರೂ ಅಯೋಧ್ಯೆ, ರಾಮಮಂದಿರ ನೆನಪಾಗಲೇ ಇಲ್ಲ. ಕಟ್ಟರ್ ಹಿಂದೂತ್ವದ ಹುಡುಗರಿಗೂ ಅಯೋಧ್ಯೆಯ ರಾಮಮಂದಿರ ಅನ್ನೋದು, ಬಿಜೆಪಿಯು ಎಲೆಕ್ಷನ್ ಗೆಲುವಿನ ಸಲುವಾಗಿ ಹುಟ್ಟುಹಾಕುವ ಅತಿದೊಡ್ಡ ವಂಚನೆ ಅನ್ನೋದು ನಿಸ್ಸಂಶಯವಾಗಿ ಅರ್ಥವಾಗಿಬಿಟ್ಟಿದೆ! ಆ ಕಾರಣಕ್ಕೇ 1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದಾಗ ಹೊತ್ತಿ ಉರಿದಿದ್ದ ಮಧ್ಯಪ್ರದೇಶ, ರಾಜಸ್ಥಾನದಂತಹ ಉತ್ತರ ಭಾರತದ ಹಿಂದಿ ಹಾರ್ಟ್‍ಲ್ಯಾಂಡ್‍ಗಳಲ್ಲೇ ಕೇಸರಿ ಸಾಧುಗಳ ರಾಮಮಂದಿರ ಜನಾಗ್ರಹ ಸಮಾವೇಶಗಳು ಬಿಜೆಪಿಗೆ ಮತ ತಂದುಕೊಡುವಲ್ಲಿ ಸಂಪೂರ್ಣವಾಗಿ ಸೋತುಹೋಗಿವೆ.
ದೇಶದ ಬೆನ್ನೆಲುಬಾದ ರೈತರು ಬೆಳೆದ ಬೆಳೆಗೆ ಬೆಲೆ ಸಿಗದೆ ಆತ್ಮಹತ್ಯೆ ದಾರಿ ಹಿಡಿದಿದ್ದರೆ, ವರ್ಷಕ್ಕೆ 1 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದಿದ್ದ ಮೋದಿ ಇರೋ ಉದ್ಯೋಗಗಳನ್ನೇ ನಾಶ ಮಾಡುವ ಕೆಲಸಕ್ಕೆ ಹೈಹಾಕಿದ್ದಾರೆ. ಬ್ಯಾಂಕ್ ರಾಷ್ಟ್ರೀಕರಣದಿಂದ ಜನಮನ ಗೆದ್ದಿದ್ದ ಇಂದಿರಾ ಗಾಂಧಿಯಂತೆ ನೋಟ್ ಬ್ಯಾನ್ ಮಾಡಲು ಹೋಗಿ ಮೋದಿ ಇಡೀ ದೇಶದ ಆರ್ಥಿಕತೆಯೇ ಮುಗ್ಗರಿಸಿ ಬೀಳುವಂತೆ ಮಾಡಿದ್ದಾರೆ. ಕಪ್ಪುಹಣವನ್ನೂ ತರದೆ, ಪ್ರತಿ ಅಕೌಂಟಿಗೆ ಹದಿನೈದು ಲಕ್ಷವನ್ನೂ ಡೆಪಾಸಿಟ್ ಮಾಡದ ಮೋದಿಯ ವರ್ಚಸ್ಸೀಗ ಸಂಪೂರ್ಣ ಕುಸಿದುಬಿದ್ದಿದೆ. ಸಾಲದ್ದಕ್ಕೆ ಅಂಬಾನಿ-ಅದಾನಿಗಳ ಖಜಾನೆ ಹಿಗ್ಗಿಸಲು ಹೋಗಿ ರಫೇಲ್ ಭಾನ್ಗಡಿಯಲ್ಲಿ ಮೋದಿ ಮುಸುಡಿಯನ್ನೇ ಸಿಗಾಕಿಕೊಂಡು ಕೂತು ದೇಶದ ಮುಂದೆ ಬೆತ್ತಲಾಗಿದ್ದಾರೆ. ಮೊನ್ನೆ ನಡೆದ ಪಂಚರಾಜ್ಯ ಫಲಿತಾಂಶಗಳೇ ಇದಕ್ಕೆ ಸಾಕ್ಷಿ.
ಇಂಥಾ ಯಡವಟ್ಟುಗಳನ್ನು ಸರಿ ಮಾಡಿಕೊಂಡು ಜನರ ಮನಸ್ಸನ್ನು ಗೆಲ್ಲೋದು ಬಿಟ್ಟು, ಮೋದಿಯ ಪರಿವಾರದ ಪಟಾಲಮ್ಮು ಯಜ್ಞ, ಯಾಗ ಮಾಡಿ ವರ್ಚಸ್ಸು ವೃದ್ಧಿಗೆ ಕೈಹಾಕಿದೆ! ಆ ಮೂಲಕ ತಮ್ಮ ಹಾದಿಯೇನಿದ್ದರೂ ಪ್ರಗತಿಯತ್ತಲ್ಲ, ಹಳೇ ಶಿಲಾಯುಗದತ್ತ ಅನ್ನೋದನ್ನು ತಾನೇ ಸಾಬೀತು ಮಾಡಿಕೊಂಡಿದೆ. ಬಿಜೆಪಿಯ ಈ ಶಿಲಾಯುಗದ ನಿದರ್ಶನ ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಗೋವಾ ಬಿಜೆಪಿ ಸರ್ಕಾರದ ಕೃಷಿ ಇಲಾಖೆ ವೇದ-ಮಂತ್ರ ಪಠಣದಿಂದ ರೈತರು ಬಂಪರ್ ಬೆಳೆ ತೆಗೆದು ಸುಖವಾಗಿ ಇರಬಹುದೆಂದು ಅಧೀಕೃತವಾಗೇ ಘೋಷಿಸಿದ್ದು ಓದುಗರಿಗೆ ನೆನಪಿರಬಹುದು.
ಟೀಮ್ ಮೋದಿ ತನ್ನ ಕಫ್ತಾನನ ವೈಫಲ್ಯಗಳನ್ನು ಮುಚ್ಚಿಹಾಕುವ ಸಲುವಾಗಿ ಮೌಢ್ಯದ ಯಜ್ಞ-ಮಂತ್ರ-ವೇದಗಳ ಮೊರೆಹೋಗಿರೋದನ್ನು ಕಂಡು ಜನ ನಗಾಡುತ್ತಿದ್ದಾರೆ. ದಕ್ಷಿಣ ಕನ್ನಡದ ಬದಿಯಡ್ಕ ಬಳಿಯ ಮಾನ್ಯ ಸಮೀಪದ ಮೇಗಿನಡ್ಕ ಎಂಬಲ್ಲಿ ಮೋದಿಯನ್ನು ಕಂಟಕದಿಂದ ಪಾರು ಮಾಡಲು ಯಜ್ಞ ಒಂದನ್ನು ಇದೇ ಡಿಸೆಂಬರ್ 28 ರಿಂದ 31ರವರೆಗೆ ನಡೆಸಲು ಚೆಡ್ಡಿಗಳು ನಿರ್ಧರಿಸಿದ್ದಾರೆ.
ಕರಾವಳಿಯ ದೇವಸ್ಥಾನಗಳ ಬ್ರಹ್ಮಕಲಶೋತ್ಸವ, ಕಳಾವೃದ್ಧಿ ಧಾರ್ಮಿಕ ದಗಲುಬಾಜಿತನದಿಂದಲೇ ಪ್ರವರ್ಧಮಾನಕ್ಕೆ ಬಂದ ಕಲ್ಲಡ್ಕ ಪ್ರಭಾಕರ ಭಟ್ಟ ಮತ್ತು ಬೆಂಕಿ ಬ್ರಾಂಡಿನ ಸಂಸದ ನಳಿನ್ ಕುಮಾರ್ ಕಟೀಲ್ ಗುರು-ಶಿಷ್ಯರ “ನಮೋ ಯಜ್ಞ” ಎಂಬ ಸರ್ಕಸ್ಸೇ ಈ ಲೇಟೆಸ್ಟ್ ಪ್ರಹಸನ. ನಾಲ್ಕು ದಿನ ನಮೋ, ಜ್ಞಾನ, ಭಕ್ತಿ ಮತ್ತು ಯಕ್ಷ ಯಜ್ಞಗಳೆಂಬ ಚತುರ್ವಿಧ ಹಿಕಮತ್ತಿನ ಮೂಲ ಉದ್ದೇಶ ಮೋದಿಗೆ ಅರ್ಥಾತ್ ಬಿಜೆಪಿಗೆ ಆಗುತ್ತಿರುವ ಡ್ಯಾಮೇಜ್ ಕಂಟ್ರೋಲ್ ಮಾಡೋದು!
ಕಾರ್ಯಕ್ರಮದ ಸಂಘಟಕರೇ ಹೇಳುವ ಹಾಗೆ ಇದೊಂದು ಮೋದಿಗೆ ಶಕ್ತಿ ತುಂಬುವ ಯಾಗ. ಅಲ್ಲಿಗೆ ಮೋದಿ ದುರ್ಬಲಗೊಂಡಿದ್ದಾರೆ ಅನ್ನೋದನ್ನು ಬಿಜೆಪಿಗರೇ ಒಪ್ಪಿಕೊಂಡಂತಾಯ್ತು! ಇಂಥದೊಂದು ಯಜ್ಞ ಮೋದಿಗಿಂತ ಹೆಚ್ಚಾಗಿ ಸೋಲಿನ ಭೀತಿಯಲ್ಲಿರುವ ಲೋಕಲ್ ಸಂಸದ ನಳಿನ್‍ಕುಮಾರ್ ಕಟೀಲ್‍ಗೆ ಬೇಕಾಗಿದೆ. ಪರಮ ಚೆಡ್ಡಿ ಸಾಹಿತಿಗಳಾದ ಎಸ್.ಎಲ್.ಭೈರಪ್ಪ, ಪ್ರಧಾನ್ ಗುರುದತ್ತ ಜತೆ ಸಂವಾದ ಕಾರ್ಯಕ್ರಮ ಹೆಣೆದಿರುವ ಕಲ್ಲಡ್ಕ, ನಳಿನ್‍ರ ಮುಖ್ಯಗುರಿ ಯುವಕರ ದಿಕ್ಕುತಪ್ಪಿಸಿ ಚುನಾವಣೆಗೆ ಅಣಿಯಾಗುವುದು. ಒಂದು ಕಾಲಕ್ಕೆ ಸುಶಿಕ್ಷಿತರ, ಪ್ರಜ್ಞಾವಂತರ ಜಿಲ್ಲೆಯೆಂದೇ ಹೆಸರಾಗಿದ್ದ ದಕ್ಷಿಣ ಕನ್ನಡದ ಮಂದಿ ಈಗ ಇಂಥಾ ಹುಚ್ಚಾಟಗಳಿಗೆ ಸಾಕ್ಷಿಯಾಗಬೇಕಾಗಿ ಬಂದಿರೋದು ದುರಂತ.
ತಮಾಷೆಯೆಂದರೆ, ತೆಲಂಗಾಣದ ಎಲೆಕ್ಷನ್ ಹೊತ್ತಲ್ಲಿ ಪ್ರಧಾನಿ ಮೋದಿಯು ಅಲ್ಲಿನ ಟಿಆರ್‍ಎಸ್ ಪಕ್ಷದ ಅಧಿನಾಯಕ ಕೆಸಿಆರ್‍ಗೆ ಸೋಲಿನ ಭೀತಿ ಆವರಿಸಿರೋದರಿಂದ ಜ್ಯೋತಿಷಿಗಳ ಮಾತುಕೇಳಿಕೊಂಡು ಹೋಮ-ಹವನ-ಪೂಜೆ ಮಾಡಿಸಿಕೊಂಡು ತಿರುಗಾಡುತ್ತಿದ್ದಾರೆಂದು ಗೇಲಿ ಮಾಡಿದ್ದುಂಟು!! ಈಗ ಮೋದಿ ಭಕ್ತರು ಅದೇ ಹಾದಿಯಲ್ಲಿದ್ದಾರೆ. ಅಂದಹಾಗೆ, ಎಲ್ಲರನ್ನೂ ಎಲ್ಲ ಕಾಲಕ್ಕೂ ಮೂರ್ಖರನ್ನಾಗಿ ಮಾಡಲು ಸಾಧ್ಯವಾ?
ಅಂತೂ ತಮ್ಮ ಪತನ ಪ್ರಾರಂಭವಾಗಿದೆ ಅನ್ನೋದನ್ನು ಮೋದಿ ಪರಿವಾರವೇ ಈ ಯಜ್ಞದ ಮೂಲಕ ಒಪ್ಪಿಕೊಂಡಂತಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...