ಕೈಲಾಸ ಎಂಬ ಹಿಂದೂ ರಾಷ್ಟ್ರವನ್ನು ಕಟ್ಟಿಕೊಂಡಿದ್ದಾಗಿ ಹೇಳಿಕೊಂಡಿದ್ದ ವಿವಾದಾತ್ಮಕ ವ್ಯಕ್ತಿ ನಿತ್ಯಾನಂದ, ಇದೀಗ ತನ್ನ ದೇಶದ ರಿಸರ್ವ್ ಬ್ಯಾಂಕಿನ ಕರೆನ್ಸಿಯನ್ನು ಬಿಡುಗಡೆ ಮಾಡಿದ್ದಾರೆ.
ಗಣೇಶ ಚತುರ್ಥಿಯಂದು ರಿಸರ್ವ್ ಬ್ಯಾಂಕ್ ಆಫ್ ಕೈಲಾಸದ ಕರೆನ್ಸಿಯನ್ನು ಬಿಡುಗಡೆಗೊಳಿಸುವುದಾಗಿ ನಿತ್ಯಾನಂದ ವಾರಗಳ ಹಿಂದೆ ಹೇಳಿಕೊಂಡಿದ್ದರು. ಇದೀಗ ಇಂದು ನೋಟನ್ನು ಬಿಡುಗಡೆ ಮಾಡಲಾಗಿದೆ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಮಹಿಳೆಯರ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಹುಡುಕಾಟ ನಡೆಸುತ್ತಿದೆ. ಇವರ ವಿರುದ್ಧ ಭಾರತದಲ್ಲಿ ಹತ್ತಾರು ಪ್ರಕರಣಗಳ ವಿಚಾರಣೆ ಬಾಕಿ ಇವೆ. ನಿತ್ಯಾನಂದ ನೇಪಾಳದ ಮೂಲಕ ಭಾರತದಿಂದ ಪಲಾಯನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕೈಲಾಸ ಎಂಬುದು ಸ್ವತಂತ್ಯ್ರ ದೇಶವಾಗಿದ್ದು, ಇಲ್ಲಿಗೆ ನಾನೇ ಪ್ರಧಾನಿ. ಇಲ್ಲಿ ಪೊಲೀಸ್ ಕೋರ್ಟ್ ವ್ಯವಸ್ಥೆ ಇರಲಿದೆ. ಇಲ್ಲಿಗೆ ಆಗಮಿಸುವ ಭಕ್ತರಿಗೆ ಶಿಕ್ಷಣ ಮತ್ತು ವೈದ್ಯಕೀಯ ಉಚಿತವಾಗಿ ನೀಡಲಾಗುವುದು ಎಂದು ಅವರು ಹೇಳಿಕೊಂಡಿದ್ದರು.
ಇಂದು ಕರೆನ್ಸಿ ಬಿಡುಗಡೆ ಮಾಡಿ ಫೇಸ್ಬುಕ್ನಲ್ಲಿ ಬರಹವೊಂದನ್ನು ಪ್ರಕಟಿಸಿರುವ ನಿತ್ಯಾನಂದ, “ಕೈಲಾಸದ ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ, ಕೈಲಾಸದ ರಿಸರ್ವ್ ಬ್ಯಾಂಕ್ಅನ್ನು ಗಣಪತಿ, ಪರಮಾಶಿವ ಮತ್ತು ಗುರುಗಳ ಪಾದಕ್ಕೆ ಸಮರ್ಪಿಸುತ್ತಿದ್ದೇವೆ. ಹಿಂದೂ ಧರ್ಮದ ಸರ್ವೋಚ್ಚ ಮಠಾಧೀಶ, ಜಗತ್ಗುರು ಮಹಾಸನ್ನೀಧನಂ ಅವರ ದೈವಿಕ ಪವಿತ್ರ ಭಗವಾನ್ ನಿತ್ಯಾನಂದ ಪರಮಾಶಿವಂ!
On the auspicious occasion of Ganesha Chaturti in KAILASA, the Reserve Bank of KAILASA offers at the feet of Ganapati,…
Posted by KAILASA's HDH Nithyananda Paramashivam on Friday, August 21, 2020
ಕೈಲಾಸಾ ಮತ್ತು ಅದರ ಸನ್ಯಾಸಿಗಳ ತಂಡವು 100 ಕ್ಕೂ ಹೆಚ್ಚು ಪುಸ್ತಕ, 360 ಲೇಖನಗಳು ಮತ್ತು ಸಂಶೋಧನಾ ಪ್ರಬಂಧಗಳನ್ನು ಒಳಗೊಂಡ ಹಿಂದೂ ಆರ್ಥಿಕ ನೀತಿಗಳ ಬಗ್ಗೆ ವ್ಯಾಪಕ ಸಂಶೋಧನೆ ಮತ್ತು ಅಧ್ಯಯನವನ್ನು ಮಾಡಿದೆ. ಅಲ್ಲದೆ, ಕೈಲಾಸಾದ ಕರೆನ್ಸಿಗಳನ್ನು ಆಚರಣಾತ್ಮಕವಾಗಿ ಇಂದು ಬಿಡುಗಡೆ ಮಾಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಓದಿ: ಅಮಿತ್ ಶಾ ಹೇಳಿದ್ದು ಒಂದು ಸುಳ್ಳು, ಅಮಿತ್ ಶಾ ಬಗ್ಗೆನೇ ಬಂತು ಮತ್ತೊಂದು ಸುಳ್ಳು!