Homeಅಂಕಣಗಳುಎಲೆಮರೆಎಲೆಮರೆ 45: ಫೇಸ್‌ಬುಕ್‌ನಲ್ಲಿ ಆಕರ್ಷಕವಾಗಿ ನಮ್ಮೂರಿನ ಇತಿಹಾಸ ಹೇಳುವ ಧರ್ಮೇಂದ್ರಕುಮಾರ್!

ಎಲೆಮರೆ 45: ಫೇಸ್‌ಬುಕ್‌ನಲ್ಲಿ ಆಕರ್ಷಕವಾಗಿ ನಮ್ಮೂರಿನ ಇತಿಹಾಸ ಹೇಳುವ ಧರ್ಮೇಂದ್ರಕುಮಾರ್!

ಇವರ ಇತಿಹಾಸದ ತಿಳಿವು ಆರೋಗ್ಯಕರವಾಗಿದೆ. ಮತೀಯ ಚರಿತ್ರೆ ಕಟ್ಟುವಿಕೆ ಬಗ್ಗೆ ಎಚ್ಚರವಿದೆ. ಇವರು ಮೈಸೂರನ್ನು ಆಳಿದ ಹೈದರಾಲಿ, ಟಿಪ್ಪು ಕುರಿತಂತೆ ಅತ್ಯಂತ ಅಭಿಮಾನವನ್ನು ಹೊಂದಿದ್ದಾರೆ. ಈ ಅಭಿಮಾನ ಕುರುಡಲ್ಲ ಅವರ ಗಂಭೀರ ಅಧ್ಯಯನದಿಂದ ಬಂದುದು.

- Advertisement -
- Advertisement -

ಎಲೆಮರೆ 45: 

  • ಅರುಣ್ ಜೋಳದ ಕೂಡ್ಲಿಗಿ

ನಮಸ್ಕಾರ ಸ್ನೇಹಿತರೆ, ಸುಂದರ ಸೋಮವಾರದ ಶುಭೋದಯ, ಎಲ್ಲರೂ ಲೈಫ್‌ನ ಎಂಜಾಯ್ ಮಾಡ್ತಿದಿರಿ ಅಂತ ಅನ್ಕೊಂಡಿದಿನಿ, ಇವತ್ತು ಮತ್ತೊಂದು ಐತಿಹಾಸಿಕವಾದ, ರೋಚಕವಾದ ಜಾಗಕ್ಕೆ ಕರಕೊಂಡ್ ಬಂದಿದಿನಿ, ಬನ್ನಿ ಇದರ ವಿಶೇಷ ಏನು ಅಂತ ಹೇಳತೀನಿ, ಎಂದು ಹೇಳುತ್ತಲೇ, ಮೊಬೈಲ್ ಕ್ಯಾಮರಾ ಜೂಮ್ ಮಾಡ್ತಾ ಕ್ಲೋಸ್‌ಅಪ್‌ಲ್ಲಿ ಐತಿಹಾಸಿಕ ಕುರುಹೊಂದನ್ನ ತೋರಿಸ್ತಾ ಚರಿತ್ರೆ ಹೇಳೋಕೆ ಶುರು ಮಾಡ್ತಾರೆ. ಐದರಿಂದ ಹತ್ತು ನಿಮಿಷದ ವಿಡಿಯೋವನ್ನು ಒಂದೆರಡು ಗಂಟೆಯೊಳಗೆ ಐದಾರು ನೂರು ಜನ ನೋಡಿ, ಲೈಕು, ಕಮೆಂಟು, ಶೇರ್ ಮಾಡುತ್ತಾರೆ. ಹೀಗೆ ಕ್ಲಾಸ್ ರೂಮಲ್ಲಿ ಉಸಿರುಕಟ್ಟಿದ ‘ಇತಿಹಾಸ’ದ ಪಾಠಗಳನ್ನು ಬಯಲಿನಲ್ಲಿ ಜನಪ್ರಿಯಗೊಳಿಸಿದವರು ಧರ್ಮೇಂದ್ರಕುಮಾರ್ ಅರೇನಹಳ್ಳಿ. ನೀವು ಫೇಸ್‌ಬುಕ್ ಬಳಕೆದಾರರಾಗಿದ್ದರೆ, ಸಾಮಾನ್ಯವಾಗಿ ಮೈಸೂರಿನ ಕಥೆಗಳು ಪೇಜಲ್ಲಿ ಇವರ ಇತಿಹಾಸದ ಪಾಠಗಳನ್ನು ಕೇಳಿರುತ್ತೀರಿ. ಕೆ.ಆರ್.ಮಾರ್ಕೆಟ್ ಬಗೆಗೆ ಆರಂಭವಾದ ಇವರ ಪಯಣ ಈಚಿನ ಬೆಂಗಳೂರು ಸಮೀಪದ ಐತಿಹಾಸಿಕ ಬಿಸಗೂರನ್ನು ಪರಿಚಯಿಸುವ ತನಕ ಅವರ ಫೇಸ್‌ಬುಕ್ ಪೇಜಲ್ಲಿ ಎಂಬತ್ತು ವೀಡಿಯೋಗಳಿವೆ.

ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಧರ್ಮೇಂದ್ರ ಅವರು ಹಲವು ವರ್ಷಗಳ ಕಾಲ ಸೌದಿ, ದುಬೈ ಒಳಗೊಂಡಂತೆ ಗಲ್ಫ್ ಕಂಟ್ರಿಯಲ್ಲಿ ದುಡಿದು, 2013 ರಲ್ಲಿ ಬೆಂಗಳೂರಿಗೆ ಬಂದು ಕೆಲಸ ಶುರುಮಾಡಿದರು. ಇದೀಗ ಸ್ವಂತ ಕಾಂಟ್ರಾಕ್ಟರ್. ಧರ್ಮೇಂದ್ರ ಅವರ ತಂದೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಅರೇನಹಳ್ಳಿಯವರಾದರೂ, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ ಹತ್ತಿರ ಧರ್ಮೇಂದ್ರ ಅವರ ತಾತ ಡಾಕ್ಟರ್ ಆಗಿದ್ದ ಕಾರಣ ಮಹಾರಾಜರು ವೈದ್ಯರಿಗಾಗಿ ಕೊಟ್ಟ ಮನೆ ಈಗಲೂ ಮೈಸೂರಲ್ಲಿದೆ. ಈ ಮನೆಯಲ್ಲಿ ಧರ್ಮೇಂದ್ರ ಆಡಿ ಬೆಳೆಯುತ್ತಾರೆ. ಇವರು ಇತಿಹಾಸದ ಕುರಿತಂತೆ ಅಕಾಡೆಮಿಕ್ ಅಧ್ಯಯನ ಮಾಡಿದವರಲ್ಲ, ತಮ್ಮ ಹವ್ಯಾಸಕ್ಕಾಗಿ ಇತಿಹಾಸ ಓದಿದವರು. ಇದೀಗ ವಿಶ್ವವಿದ್ಯಾಲಯಗಳ ಯಾವ ಅಕಾಡೆಮಿಕ್ ಇತಿಹಾಸ ತಜ್ಞರಿಗೆ ಕಡಿಮೆ ಇಲ್ಲದಂತೆ ನೆನಪಿನಿಂದಲೆ ಕರ್ನಾಟಕ ಇತಿಹಾಸದ ಹಲವು ಸಂಗತಿಗಳ ಬಗ್ಗೆ ನಿರರ್ಗಳವಾಗಿ ಚರ್ಚಿಸುತ್ತಾರೆ.

ನಾಡ ಪ್ರಭು… ಆಧುನಿಕ ಬೆಂಗಳೂರಿನ ಜನಕ… ಧರ್ಮಭೀರು ಹಿರಿಯ ಕೆಂಪೇಗೌಡರನ್ನು ಅತ್ಯಂತ ಪ್ರೀತಿ ಗೌರವಾದರಗಳಿಂದ ನೆನೆಯುತ್ತಾ…

Posted by ಮೈಸೂರಿನ ಕಥೆಗಳು – Mysoorina Kathe galu on Saturday, June 27, 2020

ಧರ್ಮೇಂದ್ರ ಅವರು ಸೋಷಿಯಲ್ ಮೀಡಿಯಾದ ಪ್ರವೃತ್ತಿಯನ್ನು ಚೆನ್ನಾಗಿ ಗ್ರಹಿಸಿದ್ದಾರೆ. ಆದರೆ ಆ ಐದಾರು ನಿಮಿಷದ ವೀಡಿಯೋ ಮಾಡಲು ಅವರು ಪಡುವ ಶ್ರಮ ಹಲವಾರು ಗಂಟೆಗಳದ್ದು, ಕೆಲವೊಮ್ಮೆ ಹಲವಾರು ದಿನಗಳದ್ದೂ ಕೂಡ. ಆರಂಭಕ್ಕೆ ರೋಚಕವಾಗಿ ಕುತೂಹಲ ಕೆರಳಿಸಿ, ಅತೀವ ಆಸಕ್ತಿ ಮೂಡಿಸಿ, ನಿಧಾನಕ್ಕೆ ಚರಿತ್ರೆಯ ಒಂದೊಂದೆ ಪೊರೆಬಿಚ್ಚುತ್ತಾರೆ. ವಿಡೀಯೋದ ಆರಂಭದ ರೋಚಕತೆ ನೋಡುಗರು
ಸ್ಕ್ರಾಲ್ ಮಾಡದಂತೆ ತಡೆಯುತ್ತದೆ. ಈ ಅರ್ಥದಲ್ಲಿ ಇತಿಹಾಸವನ್ನು ಡಿಟೆಕ್ಟಿವ್ ಮಾದರಿಯಲ್ಲಿ ನಿರೂಪಿಸುತ್ತಾರೆ. ಶಾಸನದ ಪಠ್ಯಗಳನ್ನು ಹೊರತುಪಡಿಸಿ ಯಾವುದೇ ಟಿಪ್ಪಣಿಗಳನ್ನು ಹಿಡಿಯದೆ, ನೆನಪಿನಿಂದಲೇ ವಿವರಿಸುತ್ತಾರೆ. ಇದು ಧರ್ಮೇಂದ್ರ ಅವರ ಪೂರ್ವಸಿದ್ಧತೆ ಮತ್ತು ಪರಿಶ್ರಮವನ್ನು ತೋರಿಸುತ್ತೆ. ನಿರೂಪಣೆಯ ಬಾಡಿಲಾಂಗ್ವೇಜ್ ಕೂಡ ವಿಶಿಷ್ಟವಾಗಿದೆ. ಇತಿಹಾಸದ ದಾಖಲೆಗಳನ್ನು ಕೇಳುಗರಿಗೆ ಲೋಡ್ ಮಾಡಬಾರದು ಎನ್ನುತ್ತಾರೆ. ಈ ಇತಿಹಾಸದ ವೀಡಿಯೋ ನೋಡಿದ ಜನರು ಕುತೂಹಲದಿಂದ ಹೆಚ್ಚು ತಿಳಿಯಲು ಧರ್ಮೇಂದ್ರ ಅವರಿಗೆ ಮೆಸೇಜ್ ಮಾಡಿದರೆ, ಮೂಲ ಆಕರಗಳ ಬಗ್ಗೆ ತಿಳಿಸಿ, ಇತಿಹಾಸದ ಓದಿಗೆ ಪ್ರೇರೇಪಿಸುತ್ತಾರೆ. ಹೀಗಾಗಿ ಈ ಪುಟ್ಟಪುಟ್ಟ ವೀಡಿಯೋಗಳು ಜನಸಾಮಾನ್ಯರಲ್ಲಿ ತಮ್ಮ ಸುತ್ತಮುತ್ತಣ ಚರಿತ್ರೆಯ ಬಗ್ಗೆ ಕುತೂಹಲವನ್ನು ಮೂಡಿಸುತ್ತವೆ. ಈ ಅರ್ಥದಲ್ಲಿ ಧರ್ಮೇಂದ್ರ ಅವರು ಬಯಲು ಆಲಯದ ಇತಿಹಾಸದ ಮೇಷ್ಟ್ರು.

ಬೆಂಜಮಿನ್ ಲೂಯಿಸ್ ರೈಸ್ ಅವರನ್ನು ಧರ್ಮೇಂದ್ರ ಅವರು ಹೆಡ್ ಮಾಸ್ಟರ್ ಎಂದೇ
ಕರೆಯುತ್ತಾರೆ. ರೈಸ್ ಅವರ ಶಾಸನ ಅಧ್ಯಯನಗಳನ್ನು ಓದಿಕೊಂಡಿದ್ದಾರೆ. ಇತಿಹಾಸದ ಆಕರಗಳ ಬಗ್ಗೆ, ಶಾಸನಗಳ ಬಗ್ಗೆ, ವಾಸ್ತುಶೈಲಿಯ ಬಗ್ಗೆ ಸೂಕ್ಷ್ಮವಾದ ತಿಳಿವಳಿಕೆಯಿದೆ.
ಗೆಜೆಟಿಯರ್, ಶಾಸನ ಸಂಪುಟಗಳು, ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್, ಮಿಥಿಕ್ ಸೊಸೈಟಿ ಮುಂತಾದೆಡೆ ನಿರಂತರವಾಗಿ ಆಕರಗಳಿಗಾಗಿ ತಡಕಾಡುತ್ತಾರೆ. ಇವರು ಇತಿಹಾಸವನ್ನು ಇಂಟರ್‌ನೆಟ್ ಪೂರ್ವ ಮತ್ತು ನಂತರದ ಚರಿತ್ರೆ ಎಂದು ವಿಭಾಗಿಸುತ್ತಾರೆ. ಅಂತರ್ಜಾಲದ ನೆರವಿನಿಂದ ವಿಶೇಷವಾಗಿ ಬ್ರಿಟಿಷ್ ಆಡಳಿತದ ದಾಖಲೆಗಳನ್ನು ಬ್ರಿಟಿಷ್ ಲೈಬ್ರರಿ, ಮುಂತಾದ ವೆಬ್‌ಸೈಟುಗಳಿಂದ ಡೌನ್‌ಲೋಡ್ ಮಾಡಬಹುದು. ಹಿಂದೆ ಇಂಗ್ಲೆಂಡಿಗೆ ಹೋಗಿ ಬ್ರಿಟಿಷ್ ದಾಖಲೆಗಳನ್ನು ಸಾಮಾನ್ಯರು ಓದೋಕೆ,
ಪರಿಶೀಲಿಸೋಕೆ ಆಗುತ್ತಿರಲಿಲ್ಲ. ಆದರೆ ಇಂದು ಬ್ರಿಟಿಷರ ಎಲ್ಲಾ ದಾಖಲೆಗಳನ್ನು ಕೆಲವು ವೆಬ್‌ಸೈಟುಗಳಿಗೆ ಹಣ ಕಟ್ಟಿಯಾದರೂ ಪಡೆಯಬಹುದಾಗಿದೆ, ಹಾಗಾಗಿ ನನ್ನಂಥವರು ಇತಿಹಾಸದ ಬಗ್ಗೆ ತಿಳಿದುಕೊಂಡು ಮಾತನಾಡಲು ಸಾಧ್ಯವಾಗಿದೆ ಎನ್ನುತ್ತಾರೆ.

ನಾಗರಹಾವು ಸಿನೆಮಾದಲ್ಲಿ ಒನಕೆ ಓಬವ್ವ ಹೈದರನ ಸೈನಿಕರಿಂದ ವೀರಮರಣವನ್ನಪ್ಪುತ್ತಾಳೆ. ಆದರೆ ವಾಸ್ತವವಾಗಿ ಓಬವ್ವ ಈ ಯುದ್ಧದ ನಂತರವೂ ಹಲವು ಕಾಲ ಬದುಕಿ ಸಹಜವಾಗಿ ಸಾಯುತ್ತಾಳೆ. ಇದು ಬಹುತೇಕರಿಗೆ ಗೊತ್ತಿಲ್ಲ. ಹೀಗಾಗಿ ಜನರನ್ನು ಸಿನಿಮಾ ಇತಿಹಾಸಪ್ರಜ್ಞೆಯಿಂದ ಹೊರತರಬೇಕು ಎನ್ನುವುದು ಧರ್ಮೇಂದ್ರ ಅವರ ಕಾಳಜಿಯಾಗಿದೆ. ಇವರ ವಿವರಣೆಗಳಲ್ಲಿ ಕರ್ನಾಟಕದ ರಾಜಮಹಾರಾಜರುಗಳ ಚರಿತ್ರೆ ಇದ್ದರೂ, ಸ್ಥಳೀಯ ಚರಿತ್ರೆಯ ಬಗ್ಗೆ ಅರಿವು ಮೂಡಿಸುತ್ತಾರೆ. ಅಂತೆಯೇ ಹೆಚ್ಚು ಚರ್ಚೆಗೊಳಪಡದ ಸಂಗತಿಗಳನ್ನು ಹೆಕ್ಕಿ ತೆಗೆದು ಅಚ್ಚರಿ ಮೂಡಿಸುತ್ತಾರೆ. ಹಾಗಾಗಿ ಸ್ಥಳೀಯ ಪಾಳೆಯಗಾರ, ಮಹಾಸತಿ, ವೀರರ ಬಗ್ಗೆ, ಶಾಸನ ಕವಿಗಳ ಬಗ್ಗೆ, ರಾಜಪರಿವಾರದಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿದ್ದವರ ಬಗ್ಗೆ, ಈಗಾಗಲೆ ಜನಪ್ರಿಯಗೊಂಡ ಇತಿಹಾಸದ ಸುಳ್ಳುಗಳ ಬಗ್ಗೆ, ಸಾಮಾನ್ಯರ ಅಸಮಾನ್ಯ ಸಾಧನೆಗಳ ಬಗ್ಗೆ ಗಮನ ಸೆಳೆಯುತ್ತಾರೆ. ಪ್ರತಿ ಊರಿಗೊಂದು ಚರಿತ್ರೆಯಿದೆ. ಈ ಚರಿತ್ರೆಯನ್ನು ತಿಳಿದು, ಆ ಆಕರಗಳನ್ನು ಸಂರಕ್ಷಿಸಬೇಕು ಎನ್ನುವುದು ಇವರ ವೀಡಿಯೋಗಳ ಬಹುಮುಖ್ಯ ಕಾಳಜಿ.

ಮೈಸೂರು ಸಂಸ್ಥಾನದ ಇತಿಹಾಸ…ಮೊದಲನೇ ವಿಶ್ವ ಮಹಾ ಯುದ್ಧ… ರಾಜರ್ಷಿ ನಾಲ್ವಡಿಯವರ ಮೇಲಣ ಇಸ್ರೇಲಿಗಳ ಪ್ರೀತಿ ಗೌರವ… ಕರ್ನಲ್ ಲಿಂಗರಾಜ ಅರಸು… ಕರ್ನಲ್ ದೇಸಿರಾಜ ಅರಸು….

Posted by ಮೈಸೂರಿನ ಕಥೆಗಳು – Mysoorina Kathe galu on Sunday, August 4, 2019

ಇವರ ಇತಿಹಾಸದ ತಿಳಿವು ಆರೋಗ್ಯಕರವಾಗಿದೆ. ಮತೀಯ ಚರಿತ್ರೆ ಕಟ್ಟುವಿಕೆ ಬಗ್ಗೆ ಎಚ್ಚರವಿದೆ. ಇವರು ಮೈಸೂರನ್ನು ಆಳಿದ ಹೈದರಾಲಿ, ಟಿಪ್ಪು ಕುರಿತಂತೆ ಅತ್ಯಂತ ಅಭಿಮಾನವನ್ನು ಹೊಂದಿದ್ದಾರೆ. ಈ ಅಭಿಮಾನ ಕುರುಡಲ್ಲ ಅವರ ಗಂಭೀರ ಅಧ್ಯಯನದಿಂದ ಬಂದುದು. ನಮ್ಮ ಆಸ್ಥಾನದ ಚರಿತ್ರೆಕಾರರು ಬಹುಪಾಲು ರಾಜರನ್ನು ಮೆಚ್ಚಿಸುವ ಚರಿತ್ರೆ ಕಟ್ಟಿದ್ದಾರೆ, ಆದರೆ ಬ್ರಿಟಿಷ್ ಇತಿಹಾಸಕಾರರು ನೈಜವಾಗಿ ದಾಖಲಿಸಿದ್ದಾರೆ ಎನ್ನುತ್ತಾರೆ. ಬ್ರಿಟಿಷರು ದೋಚಿದ್ದು ಭಾರತದ ಜನಸಾಮಾನ್ಯರನ್ನು ಕೊಳ್ಳೆಹೊಡೆದು ಸಂಪತ್ತನ್ನು ಗುಡ್ಡೆಹಾಕಿಕೊಂಡಿದ್ದ ರಾಜರುಗಳನ್ನೇ ಹೊರತು, ನೇರವಾಗಿ ಜನಸಾಮಾನ್ಯರನ್ನಲ್ಲ ಎನ್ನುತ್ತಾರೆ. ಬ್ರಿಟಿಷರು ದೋಚಿದ್ದಷ್ಟೇ ಅಲ್ಲ. ಈ ದೇಶಕ್ಕೆ ಕೊಟ್ಟ ಕೊಡುಗೆಗಳೂ ಅಪಾರ. ನಾವು ನೋಡಿದ ಬ್ರಿಟಿಷರೆಂಬ ನಾಣ್ಯಕ್ಕೆ ಮತ್ತೊಂದು ಮುಖವೂ ಇದೆ ಎನ್ನುವುದು ಧರ್ಮೇಂದ್ರ ಅವರ ನಿಲುವು.

ಮೈಸೂರಿನ ಅರಮನೆಯ ಆವರಣದಲ್ಲಿ ಆಡಿ ಬೆಳೆದ ಇವರಿಗೆ ಸಹಜವಾಗಿ ಮೈಸೂರಿನ ಚರಿತ್ರೆಯ ಜತೆ ಒಂದು ಆಸಕ್ತಿ ಬೆಳೆಯುತ್ತದೆ. ಈ ಹುಡುಕಾಟ ಕರ್ನಾಟಕ ಚರಿತ್ರೆಯ ಬೇರೆ ಬೇರೆ ಸಂಗತಿಗಳ ಜತೆ ತಳಕು ಹಾಕಿಕೊಳ್ಳುತ್ತದೆ. ಮೈಸೂರಿನ ಕುರಿತಂತೆ ‘ಮರೆತುಹೋದ ಮೈಸೂರಿನ ಪುಟಗಳು’ ಎನ್ನುವ ಪುಸ್ತಕವನ್ನೂ ಪ್ರಕಟಿಸಿದ್ದಾರೆ. ಇದಾದನಂತರ ಓದುಗರು ಕಡಿಮೆಯಾಗಿದ್ದಾರೆ, ಯಾಕೆ ಸೋಷಿಯಲ್ ಮೀಡಿಯಾದವನ್ನು ಬಳಸಬಾರದು ಎಂದು ಆರಂಭಿಸಿದ ಪ್ರಯೋಗ ಇದೀಗ ಜನಮೆಚ್ಚಿನ ಕಾರ್ಯಕ್ರಮವಾಗಿ ಬದಲಾಗಿದೆ. ಈ ಹವ್ಯಾಸಕ್ಕಾಗಿ ಖರ್ಚಾದ ಸ್ವಂತ ದುಡಿಮೆಯ ಹಣದ ಲೆಕ್ಕವಿಟ್ಟಿಲ್ಲ. ಮನೆಯವರು ಇದಕ್ಕೆ ತಕರಾರು ತೆಗೆಯದೆ ಪ್ರೋತ್ಸಾಹಿಸಿ ಹುರಿದುಂಬಿಸಿದ್ದಾರೆ. ಧರ್ಮೇಂದ್ರ ಅವರು ಇದೀಗ ಹೆಂಡತಿ ಸುನೀತ, ಸಾಫ್ಟ್‌ವೇರ್ ಎಂಜಿನಿಯರ್ ಆದ ಮಗಳು ಭುವನೇಶ್ವರಿ ಅವರೊಂದಿಗೆ ಬೆಂಗಳೂರಿನಲ್ಲಿ ಮಲ್ಲತಳ್ಳಿಯಲ್ಲಿ ನೆಲೆಸಿದ್ದಾರೆ. ಬಹುಪಾಲು ಜಡ್ಡುಗಟ್ಟಿದ ವಿಶ್ವವಿದ್ಯಾಲಯಗಳ ಇತಿಹಾಸ, ಶಾಸನ, ಪುರಾತತ್ವ ವಿಭಾಗಗಳ ಪ್ರಾಧ್ಯಾಪಕರುಗಳು, ಸಂಶೋಧನ ವಿದ್ಯಾರ್ಥಿಗಳು ಧರ್ಮೇಂದ್ರ ಅವರಿಂದ ಹೊಸ ಚೈತನ್ಯ ಪಡೆಯಬೇಕಾಗಿದೆ. ಇವರ ಪುಟಿಯುವ ಜೀವನೋತ್ಸಾಹ ಮತ್ತಷ್ಟು ಚೈತನ್ಯದಾಯಕವಾಗಿರಲಿ ಎಂದು ಪತ್ರಿಕೆ ಶುಭ ಹಾರೈಸುತ್ತದೆ.

ಅವರ ಯೂಟ್ಯೂಬ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

ಅವರ ಫೇಸ್ಬುಕ್ ಪೇಜ್‌ ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.


ಇದನ್ನೂ ಓದಿ: ಎಲೆಮರೆ -39: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...