Homeರಾಜಕೀಯಪ್ರಿಯಾಂಕಾ ಕುಡಿದು ಅರಚಿದರಂತೆ: ಅಮಲೇರಿದ ‘ಭಕ್ತರ’ ಫೇಕ್ ಸ್ಟೋರಿ

ಪ್ರಿಯಾಂಕಾ ಕುಡಿದು ಅರಚಿದರಂತೆ: ಅಮಲೇರಿದ ‘ಭಕ್ತರ’ ಫೇಕ್ ಸ್ಟೋರಿ

- Advertisement -
- Advertisement -

ಪ್ರಿಯಾಂಕ ಗಾಂಧಿಯವರ ಅದಿಕೃತ ರಾಜಕೀಯ ಪ್ರವೇಶದ ಘೋಷಣೆಯ ನಂತರ, ವಿಕೃತ ಬುದ್ಧಿಯ ‘ಭಕ್ತರು’ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ಅವಹೇಳನ ಮಾಡಲು ಯತ್ನಿಸುತ್ತಿದ್ದಾರೆ. ಅದ್ಯ ಸಾಮಾಜಿಕ ಜಾಲತಾಣಗಳಲ್ಲಿ ಅಂತಹ ಒಂದು ವಿಡಿಯೋ ಹರಿದಾಡುತ್ತಿದ್ದು ಸುಳ್ಳನ್ನು ಕಕ್ಕುತ್ತ ಸಾಗಿದೆ.
ಮಿಥ್ಯ: ‘ಪಾನಮತ್ತ ನಾಯಕಿ ಕಾಂಗ್ರೆಸ್‍ಗೆ ಹೊಸ ಭರವಸೆ ಇರಬಹುದು, ಆದರೆ ಈ ದೇಶದ ಜನರಿಗಲ್ಲ’ ಎಂಬ ಕ್ಯಾಪ್ಸನ್‍ನೊಂದಿಗೆ ಪ್ರಿಯಾಂಕಾ ಗಾಂಧಿಯ ಒಂದು ವಿಡಿಯೋವನ್ನು ಫೇಸ್‍ಬುಕ್, ವ್ಯಾಟ್ಸಾಪ್, ಟ್ವಿಟರ್‍ಗಳಲ್ಲಿ ಅಮಲೇರಿದ ‘ಭಕ್ತರು’ ತೇಲಿಬಿಟ್ಟಿದ್ದಾರೆ. ‘humlog’ ಎನ್ನುವ ಫೇಸ್‍ಬುಕ್ ಈ ಸುದ್ದಿ ಮೂಲವಾಗಿದ್ದು, ಇದಕ್ಕೆ ಈಗ 98 ಸಾವಿರಕ್ಕೂ ಹೆಚ್ಚು ವ್ಯೂವ್‍ಗಳಿದ್ದು, 3,800ಕ್ಕೂ ಹೆಚ್ಚು ಸಲ ಶೇರ್ ಆಗಿದೆ.

ಹಮಲೋಗ್ ಫೇಸಬುಕ್ ಪೇಜ್‍ನ ವಿಕೃತ ಬುದ್ಧಿ

ವಿಮಲ್ ಶರ್ಮಾ ಎಂಬ ವ್ಯಕ್ತಿಯ ಫೇಸ್‍ಬುಕ್ ಪೇಜ್ ಕೂಡ ಇದನ್ನೇ ಹರಡುತ್ತ, ‘ಪ್ರತಿದಿನ ಸಂಜೆ ಕುಡಿಯುವವರ ಮೇಲೆ ಕಾಂಗ್ರೆಸ್‍ಗೆ ಭರವಸೆ ಇರಬಹುದು, ದೇಶದ ಜನರಿಗಲ್ಲ. ಒಬ್ಬ ಮದ್ಯವ್ಯಸನಿ ನಾಯಕಿಯಾಗಲು ಸಾಧ್ಯವಿಲ್ಲ….’ ಎಂದೆಲ್ಲ ಬರೆಯಲಾಗಿದೆ.
ಸತ್ಯ: ಇದು ವಿಕೃತ ಮನಸ್ಸಿನ ಬಲಪಂಥಿಯರ ಕೆಲಸವೇ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಪ್ರಚಲಿತದಲ್ಲಿರುವ ವಿಡಿಯೋದಲ್ಲಿ ಪ್ರಿಯಾಂಕಾ ಗಾಂಧಿ ಸಿಟ್ಟಿನಿಂದ ಗದರಿದ್ದು ನಿಜ. ಆದರೆ, ಈ ವಿಡಿಯೋ 9 ತಿಂಗಳ ಹಳೆಯದಾಗಿದ್ದು, ಇದನ್ನು ಏಪ್ರಿಲ್ 18, 2018ರಂದು ಎಎನ್‍ಐ ಕೂಡ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ‘ಕ್ಯಾಂಡಲ್ ಲೈಟ್ ಪ್ರತಿಭಟನೆಯಲ್ಲಿ ಕೋಪಿತರಾದ ಪ್ರಿಯಾಂಕಾ ಗಾಂಧಿ’ ಎಂಬ ಕ್ಯಾಪ್ಸನ್ ನೀಡಲಾಗಿದ್ದು, ‘ಪರೆಸ್ಪರ ತಳ್ಳಾಡಬೇಡಿ. ನೀವು ಯಾವ ಕಾರಣಕ್ಕೆ ಇಲ್ಲಿ ಸೇರಿದ್ದಿರಿ ಎಂಬುದು ನಿಮಗೆ ಅರಿವಿರಲಿ. ನಿಮಗೆ ಸರಿಯಾಗಿ ವರ್ತಸಲಾಗದಿದ್ದರೆ ಮನೆಗೆ ಹೋಗಿ. ಈಗ ಎಲ್ಲರೂ ಅಲ್ಲಿವರೆಗೆ ಸಾಲಾಗಿ ಸಂಯಮದಿಂದ ನಡೆಯಿರಿ’ ಎಂದು ಗದರಿದರು ಎಂದು ವಿವರಿಸಲಾಗಿದೆ.
ಕಥುವಾ ಮತ್ತು ಉನ್ನಾವೊ ರೇಪ್ ಪ್ರಕರಣಗಳನ್ನು ಖಂಡಿಸಿ, ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದಲ್ಲಿ ಆಯೋಜಿಸಿದ್ದ ಮಧ್ಯರಾತ್ರಿಯ

ವಿಮಲ್ ಶರ್ಮಾ ಎನ್ನುವ ಕೊಳಕನ ಫೇಕ್ ಪೋಸ್ಟ್

ಕ್ಯಾಂಡಲ್ ಲೈಟ್ ಪ್ರತಿಭಟನೆಯಲ್ಲಿನ ಘಟನೆಯಿದು. ಆನರು ಏಕಾಏಕಿ ತಳ್ಳಾಟ ಆರಂಭಿಸಿದಾಗ, ಪ್ರಿಯಾಂಕಾ ಗಾಂಧಿ ಮೇಲಿನಂತೆ ಗದರಿದ್ದಾರೆ. ಈ ಘಟನೆಯನ್ನು ಇಂಡಿಯಾ ಟುದೇ, ಹಿಂದೂಸ್ತಾನ್ ಟೈಮ್ಸ್‍ಗಳು ಕೂಡ ವರದಿ ಮಾಡಿದ್ದವಲ್ಲದೇ ಜನರ ನೂಕಾಟ, ಕಿಡಿಗೇಡಿತನ ತಡೆಯಲು ಪೊಲೀಸರೂ ಶ್ರಮ ಪಡಬೇಕಾಗಿತು. ತಳ್ಳಾಟದಲ್ಲಿ ಪ್ರಿಯಾಂಕಾರ ಮಕ್ಕಳನ್ನೂ ನೂಕಲಾಗಿತ್ತು. ಪಾನಮತ್ತರಾಗಿದ್ದ ಕೆಲವರು ಬ್ಯಾರಿಕೇಡ್‍ಗಳನ್ನು ಕೀಳಲೂ ಯತ್ನಿಸಿದರು ಎಂದು ವರದಿ ಮಾಡಲಾಗಿತ್ತು.
ವಿಡಿಯೋ ವಿಳಾಸ: https://twitter.com/i/status/984515031621668864

ಇದು ಅಸಲಿ ಸತ್ಯ. ಆದರೆ ಕೊಳಕು ಬುದ್ಧಿಯ ಭಕ್ತರು ಈ ವಿಡಿಯೋಕ್ಕೆ ಅವಹೇಳನದ ಕ್ಯಾಪ್ಸನ್ ಹಾಕಿ ಸುಳ್ಳು ಕತೆಯನ್ನು ಹರಡತೊಡಗಿದ್ದಾರೆ. ಕರ್ನಾಟಕದಲ್ಲಿ ವಿಕೃತ ವಿಷಭಟ್ಟನೂ ಕೂಡ ಗೌರಿ ಲಂಕೇಶರ ಕೊಲೆಯ ನಂತೆ ಇದೇ ಮಾದರಿಯಲ್ಲಿ ತನ್ನ ಹಲ್ಕಾ ಬುದ್ಧಿ ತೋರಿಸಿದ್ದ. ಈಗ ಈತನನ್ನು ಹಂಪಿ ಕನ್ನಡ ವಿವಿ ಕಾರ್ಯಕ್ರಮಕ್ಕೆ ಬರದಂತೆ ಓಡಿಸಲಾಗಿದೆ.
ಪ್ರಿಯಾಂಕಾ ಕುರಿತ ಮೇಲಿನ ಫೇಕ್‍ಸ್ಟೋರಿಯನ್ನು ಅಲ್ಟ್‍ನ್ಯೂಸ್, ಡೆಬ್‍ಕೂಪ್, ಬಿಬಿಸಿ (ಹಿಂದಿ)ಗಳು ಬಸ್ರ್ಟ್ ಮಾಡಿದ್ದು ‘ಭಕ್ತರ’ ವಿತಂಡ ಬುದ್ದಿಯನ್ನು ತೆರೆದು ಇಟ್ಟಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...