Homeರಾಜಕೀಯಪ್ರಿಯಾಂಕಾ ಕುಡಿದು ಅರಚಿದರಂತೆ: ಅಮಲೇರಿದ ‘ಭಕ್ತರ’ ಫೇಕ್ ಸ್ಟೋರಿ

ಪ್ರಿಯಾಂಕಾ ಕುಡಿದು ಅರಚಿದರಂತೆ: ಅಮಲೇರಿದ ‘ಭಕ್ತರ’ ಫೇಕ್ ಸ್ಟೋರಿ

- Advertisement -
- Advertisement -

ಪ್ರಿಯಾಂಕ ಗಾಂಧಿಯವರ ಅದಿಕೃತ ರಾಜಕೀಯ ಪ್ರವೇಶದ ಘೋಷಣೆಯ ನಂತರ, ವಿಕೃತ ಬುದ್ಧಿಯ ‘ಭಕ್ತರು’ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ಅವಹೇಳನ ಮಾಡಲು ಯತ್ನಿಸುತ್ತಿದ್ದಾರೆ. ಅದ್ಯ ಸಾಮಾಜಿಕ ಜಾಲತಾಣಗಳಲ್ಲಿ ಅಂತಹ ಒಂದು ವಿಡಿಯೋ ಹರಿದಾಡುತ್ತಿದ್ದು ಸುಳ್ಳನ್ನು ಕಕ್ಕುತ್ತ ಸಾಗಿದೆ.
ಮಿಥ್ಯ: ‘ಪಾನಮತ್ತ ನಾಯಕಿ ಕಾಂಗ್ರೆಸ್‍ಗೆ ಹೊಸ ಭರವಸೆ ಇರಬಹುದು, ಆದರೆ ಈ ದೇಶದ ಜನರಿಗಲ್ಲ’ ಎಂಬ ಕ್ಯಾಪ್ಸನ್‍ನೊಂದಿಗೆ ಪ್ರಿಯಾಂಕಾ ಗಾಂಧಿಯ ಒಂದು ವಿಡಿಯೋವನ್ನು ಫೇಸ್‍ಬುಕ್, ವ್ಯಾಟ್ಸಾಪ್, ಟ್ವಿಟರ್‍ಗಳಲ್ಲಿ ಅಮಲೇರಿದ ‘ಭಕ್ತರು’ ತೇಲಿಬಿಟ್ಟಿದ್ದಾರೆ. ‘humlog’ ಎನ್ನುವ ಫೇಸ್‍ಬುಕ್ ಈ ಸುದ್ದಿ ಮೂಲವಾಗಿದ್ದು, ಇದಕ್ಕೆ ಈಗ 98 ಸಾವಿರಕ್ಕೂ ಹೆಚ್ಚು ವ್ಯೂವ್‍ಗಳಿದ್ದು, 3,800ಕ್ಕೂ ಹೆಚ್ಚು ಸಲ ಶೇರ್ ಆಗಿದೆ.

ಹಮಲೋಗ್ ಫೇಸಬುಕ್ ಪೇಜ್‍ನ ವಿಕೃತ ಬುದ್ಧಿ

ವಿಮಲ್ ಶರ್ಮಾ ಎಂಬ ವ್ಯಕ್ತಿಯ ಫೇಸ್‍ಬುಕ್ ಪೇಜ್ ಕೂಡ ಇದನ್ನೇ ಹರಡುತ್ತ, ‘ಪ್ರತಿದಿನ ಸಂಜೆ ಕುಡಿಯುವವರ ಮೇಲೆ ಕಾಂಗ್ರೆಸ್‍ಗೆ ಭರವಸೆ ಇರಬಹುದು, ದೇಶದ ಜನರಿಗಲ್ಲ. ಒಬ್ಬ ಮದ್ಯವ್ಯಸನಿ ನಾಯಕಿಯಾಗಲು ಸಾಧ್ಯವಿಲ್ಲ….’ ಎಂದೆಲ್ಲ ಬರೆಯಲಾಗಿದೆ.
ಸತ್ಯ: ಇದು ವಿಕೃತ ಮನಸ್ಸಿನ ಬಲಪಂಥಿಯರ ಕೆಲಸವೇ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಪ್ರಚಲಿತದಲ್ಲಿರುವ ವಿಡಿಯೋದಲ್ಲಿ ಪ್ರಿಯಾಂಕಾ ಗಾಂಧಿ ಸಿಟ್ಟಿನಿಂದ ಗದರಿದ್ದು ನಿಜ. ಆದರೆ, ಈ ವಿಡಿಯೋ 9 ತಿಂಗಳ ಹಳೆಯದಾಗಿದ್ದು, ಇದನ್ನು ಏಪ್ರಿಲ್ 18, 2018ರಂದು ಎಎನ್‍ಐ ಕೂಡ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ‘ಕ್ಯಾಂಡಲ್ ಲೈಟ್ ಪ್ರತಿಭಟನೆಯಲ್ಲಿ ಕೋಪಿತರಾದ ಪ್ರಿಯಾಂಕಾ ಗಾಂಧಿ’ ಎಂಬ ಕ್ಯಾಪ್ಸನ್ ನೀಡಲಾಗಿದ್ದು, ‘ಪರೆಸ್ಪರ ತಳ್ಳಾಡಬೇಡಿ. ನೀವು ಯಾವ ಕಾರಣಕ್ಕೆ ಇಲ್ಲಿ ಸೇರಿದ್ದಿರಿ ಎಂಬುದು ನಿಮಗೆ ಅರಿವಿರಲಿ. ನಿಮಗೆ ಸರಿಯಾಗಿ ವರ್ತಸಲಾಗದಿದ್ದರೆ ಮನೆಗೆ ಹೋಗಿ. ಈಗ ಎಲ್ಲರೂ ಅಲ್ಲಿವರೆಗೆ ಸಾಲಾಗಿ ಸಂಯಮದಿಂದ ನಡೆಯಿರಿ’ ಎಂದು ಗದರಿದರು ಎಂದು ವಿವರಿಸಲಾಗಿದೆ.
ಕಥುವಾ ಮತ್ತು ಉನ್ನಾವೊ ರೇಪ್ ಪ್ರಕರಣಗಳನ್ನು ಖಂಡಿಸಿ, ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದಲ್ಲಿ ಆಯೋಜಿಸಿದ್ದ ಮಧ್ಯರಾತ್ರಿಯ

ವಿಮಲ್ ಶರ್ಮಾ ಎನ್ನುವ ಕೊಳಕನ ಫೇಕ್ ಪೋಸ್ಟ್

ಕ್ಯಾಂಡಲ್ ಲೈಟ್ ಪ್ರತಿಭಟನೆಯಲ್ಲಿನ ಘಟನೆಯಿದು. ಆನರು ಏಕಾಏಕಿ ತಳ್ಳಾಟ ಆರಂಭಿಸಿದಾಗ, ಪ್ರಿಯಾಂಕಾ ಗಾಂಧಿ ಮೇಲಿನಂತೆ ಗದರಿದ್ದಾರೆ. ಈ ಘಟನೆಯನ್ನು ಇಂಡಿಯಾ ಟುದೇ, ಹಿಂದೂಸ್ತಾನ್ ಟೈಮ್ಸ್‍ಗಳು ಕೂಡ ವರದಿ ಮಾಡಿದ್ದವಲ್ಲದೇ ಜನರ ನೂಕಾಟ, ಕಿಡಿಗೇಡಿತನ ತಡೆಯಲು ಪೊಲೀಸರೂ ಶ್ರಮ ಪಡಬೇಕಾಗಿತು. ತಳ್ಳಾಟದಲ್ಲಿ ಪ್ರಿಯಾಂಕಾರ ಮಕ್ಕಳನ್ನೂ ನೂಕಲಾಗಿತ್ತು. ಪಾನಮತ್ತರಾಗಿದ್ದ ಕೆಲವರು ಬ್ಯಾರಿಕೇಡ್‍ಗಳನ್ನು ಕೀಳಲೂ ಯತ್ನಿಸಿದರು ಎಂದು ವರದಿ ಮಾಡಲಾಗಿತ್ತು.
ವಿಡಿಯೋ ವಿಳಾಸ: https://twitter.com/i/status/984515031621668864

ಇದು ಅಸಲಿ ಸತ್ಯ. ಆದರೆ ಕೊಳಕು ಬುದ್ಧಿಯ ಭಕ್ತರು ಈ ವಿಡಿಯೋಕ್ಕೆ ಅವಹೇಳನದ ಕ್ಯಾಪ್ಸನ್ ಹಾಕಿ ಸುಳ್ಳು ಕತೆಯನ್ನು ಹರಡತೊಡಗಿದ್ದಾರೆ. ಕರ್ನಾಟಕದಲ್ಲಿ ವಿಕೃತ ವಿಷಭಟ್ಟನೂ ಕೂಡ ಗೌರಿ ಲಂಕೇಶರ ಕೊಲೆಯ ನಂತೆ ಇದೇ ಮಾದರಿಯಲ್ಲಿ ತನ್ನ ಹಲ್ಕಾ ಬುದ್ಧಿ ತೋರಿಸಿದ್ದ. ಈಗ ಈತನನ್ನು ಹಂಪಿ ಕನ್ನಡ ವಿವಿ ಕಾರ್ಯಕ್ರಮಕ್ಕೆ ಬರದಂತೆ ಓಡಿಸಲಾಗಿದೆ.
ಪ್ರಿಯಾಂಕಾ ಕುರಿತ ಮೇಲಿನ ಫೇಕ್‍ಸ್ಟೋರಿಯನ್ನು ಅಲ್ಟ್‍ನ್ಯೂಸ್, ಡೆಬ್‍ಕೂಪ್, ಬಿಬಿಸಿ (ಹಿಂದಿ)ಗಳು ಬಸ್ರ್ಟ್ ಮಾಡಿದ್ದು ‘ಭಕ್ತರ’ ವಿತಂಡ ಬುದ್ದಿಯನ್ನು ತೆರೆದು ಇಟ್ಟಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...