Homeಸುಳ್ಳಪ್ಪೋ ಸುಳ್ಳುಚಲಾನಾ... ಜಲಾನಾ... ನೋಡಿದಿರಾ ‘ಬೆಂಕಿ ಹಚ್ಚುವ’ ಚಾನೆಲ್‌ನಾ?

ಚಲಾನಾ… ಜಲಾನಾ… ನೋಡಿದಿರಾ ‘ಬೆಂಕಿ ಹಚ್ಚುವ’ ಚಾನೆಲ್‌ನಾ?

- Advertisement -
- Advertisement -

ಮಿಥ್ಯ: ‘ಹಮ್ ಭಾರತ್ ಬಂದ್ ಕರನಾ ಜಾನತೆ ಹೈ, ತೊ ಹಮ್ ಭಾರತ್ ಜಲಾನಾ ಭೀ ಜಾನತೆ ಹೈ’
(ಭಾರತ್ ಬಂದ್ ಮಾಡುವುದು ಗೊತ್ತಿರುವ ನಮಗೆ ಭಾರತವನ್ನು ಸುಡುವುದೂ ಗೊತ್ತು)

ಭಾರತ ಸುಡುವ ಇಂತಹ ಪ್ರಚೋದನಾತ್ಮಕ ಹೇಳಿಕೆಯನ್ನು ಭೀಮ್ ಆರ್ಮಿ ಸಂಸ್ಥಾಪಕ, ದಲಿತ ನಾಯಕ ಚಂದ್ರಶೇಖರ್ ಅಜಾದ್ ರಾವಣ್ ಬಹಿರಂಗ ಸಭೆಯಲ್ಲಿ ಆಡಿರುವರೆಂದು ಮೂರು ದಿನಗಳ ಹಿಂದೆ ಝೀ ನ್ಯೂಸ್ (ಹಿಂದಿ) ಮತ್ತು ನ್ಯೂಸ್ 18 ಚಾನೆಲ್‌ಗಳು ಅಪಾದಿಸಿವೆ. ತಮ್ಮ ವೆಬ್‌ಸೈಟಿನಲ್ಲಿನ ಲೇಖನ ಮತ್ತು ಟ್ವಿಟರ್‌ನಲ್ಲಿ ಅವು, ‘ಮುಝಾಫರ್ ನಗರದಲ್ಲಿ ದಲಿತ ಸಭೆಯೊಂದರಲ್ಲಿ ಮಾತನಾಡುವಾಗ ಚಂದ್ರಶೇಖರ್ ಅವರು, ಜನರು ನನ್ನ ಸಿಗ್ನಲ್‌ಗೆ ಕಾಯುತ್ತಿದ್ದಾರೆ, ನಾವು ಭಾರತ್ ಬಂದ್ ಮಾಡಬಲ್ಲೆವಾದರೆ, ಭಾರತವನ್ನು ಸುಡಲೂಬಲ್ಲೆವು…,ನಮ್ಮ ಸಹನೆಗೂ ಒಂದು ಮಿತಿಯಿದೆ, ದೌರ್ಜನ್ಯಗಳಿಗೂ ಒಂದು ಮಿತಿ ಇದೆ ಎಂದು ಹೇಳಿಕೆ ನೀಡಿದರು’ ಎಂದಿವೆ.

ಸತ್ಯ: ಸತ್ಯ ಬೇರೇನೇ ಇದೆ. ಅದಕ್ಕೂ ಮೊದಲು ಝೀ ನ್ಯೂಸ್, ನ್ಯೂಸ್ 18ಗಳ ಈ ಸುದ್ದಿಗೆ ‘ಹಿಂದುತ್ವವಾದಿಗಳು’ ಸ್ಪಂದಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಚಂದ್ರಶೇಖರ್ ವಿರುದ್ಧ ವಿಪರೀತ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಅತ್ಯಂತ ಪ್ರಚೋದನಾಕಾರಿ ಸಂದೇಶಗಳನ್ನು ಹಾಕಿದ್ದನ್ನು ನೋಡೋಣ.

ತನ್ನನ್ನು ರಾಷ್ಟ್ರೀಯವಾದಿ ಎಂದುಕೊಳ್ಳುವ ‘ಭಯ್ಯಾಜಿ’ (ಟ್ವಿಟರ್ ಹ್ಯಾಂಡಲ್ @shiraloksharma) ಎಂಬ ವ್ಯಕ್ತಿ ಟ್ವೀಟ್ ಮಾಡಿ, ‘ಹಾಗೆ ಭಾರತ ಸುಡುತ್ತೇನೆ ಎಂದು ಬೆದರಿಸುವವರನ್ನು ಅದೇ ಬೆಂಕಿಯಲ್ಲಿ ಹಾಕಿ ಬರ‍್ಯಾನಿ ಮಾಡಿ, ಬೀದಿನಾಯಿಗಳಿಗೆ ಹಾಕುತ್ತೇವೆ. ಪ್ರಯತ್ನ ಮಾಡಿ ನೋಡಿ, ಪರಿಣಾಮ ಏನಾಗುತ್ತೆ ನೋಡಿ’ ಎಂದು ಬೆದರಿಸುತ್ತಾನೆ. ಇದೇ ಬಗೆಯಲ್ಲಿ ಹಲವಾರು ‘ದೇಶಭಕ್ತರು’ ಚಂದ್ರಶೇಖರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಿದ್ದಾರೆ.

‘ಭಯ್ಯಾಜಿ’ ಎನ್ನುವಾತನ ಆಕ್ರೋಶಭರಿತ, ದಲಿತವಿರೋಧಿ ಟ್ವೀಟ್

ಆದರೆ, ಆ ಸಭೆಯ ವಿಡಿಯೋವನ್ನು ಪಡೆದು ಪರೀಕ್ಷಿಸಿದಾಗ, ಚಂದ್ರಶೇಖರ್ ಹೇಳಿದ್ದು: ‘ಭಾರತ್ ಚಲಾನಾ’ (ಭಾರತ ನಡೆಸುವುದು, ಭಾರತ ಆಳುವುದು, ರನ್ನಿಂಗ್ ಇಂಡಿಯಾ) ಎಂದೇ ಹೊರತು, ‘ಭಾರತ್ ಜಲಾನಾ’ (ಭಾರತ ಸುಡುವುದು, ಬರ್ನಿಂಗ್ ಇಂಡಿಯಾ) ಎಂದು ಅಲ್ಲವೇ ಅಲ್ಲ.

ಝೀ ನ್ಯೂಸ್, ನ್ಯೂಸ್18 ಮಾಧ್ಯಮಗಳು ಬೇಕೆಂತಲೇ ‘ಚಲಾನಾ’ ಎಂಬುದನ್ನು ‘ಜಲಾನಾ’ ಎಂದು ತಿರುಚಿ ಜನರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿವೆ. ಇಂತಹ ಬಹುತೇಕ ಮಾಧ್ಯಮಗಳ ಮಾಲಿಕರು ಮತ್ತು ಮ್ಯಾನೇಜ್‌ಮೆಂಟ್ ದಲಿತ ವಿರೋಧಿ ಆಗಿರುವುದೇ ಇದಕ್ಕೆಲ್ಲ ಕಾರಣ….

ವಿಡಿಯೊ ಲಿಂಕ್ ವಿಳಾಸ:  https://vimeo.com/315073201 (ವಿಡಿಯೊವನ್ನು ಸ್ಲೋ ಮಾಡಿ ಪರೀಕ್ಷಿಸಿದ್ದು)
ಇದಕ್ಕೆ ಪ್ರತಿಕ್ರಿಯಿಸಿರುವ ಚಂದ್ರಶೇಖರ್, ‘ಬೇಕೆಂತಲೇ ವಿಷಯ ತಿರುಚಿ ಗದ್ದಲ ಎಬ್ಬಿಸಲು ನೋಡಿದ ಈ ದಲಿತ ವಿರೋಧಿ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವೆ’ ಎಂದಿದ್ದಾರೆ.

ಮಾನಗೇಡಿ ಚಾನೆಲ್‌ಗಳ ವಿರುದ್ಧ ಚಂದ್ರಶೇಖರ್ ಟ್ವೀಟ್

ಚಲಾನಾ ಎಂಬುದನ್ನು ಜಲಾನಾ ಮಾಡಿ ‘ಬೆಂಕಿ ಹಚ್ಚುವ’ ಇಂತಹ ಮಾಧ್ಯಮಗಳಿಗೆ ನಮ್ಮ ಧಿಕ್ಕಾರವಿರಲಿ. ಅಂದಂತೆ, ಜೆಎನ್‌ಯುನಲ್ಲಿ ಕನ್ಹಯ್ಯಕುಮಾರ್ ಮಾಡಿದ ಭಾಷಣದ ತಿರುಚಿದ ವಿಡಿಯೋವನ್ನು ಮೊದಲು ಪ್ರಸಾರ ಮಾಡಿದ್ದೇ ಇದೇ ಝೀ ನ್ಯೂಸ್ (ಹಿಂದಿ) ಚಾನೆಲ್. ಇದು ಮೋದಿ ಮತ್ತು ಬಿಜೆಪಿಯ ಕಾಲು ನೆಕ್ಕುವ ಚಾನೆಲ್ ಎಂದು ಪದೇ ಪದೇ ಸಾಬೀತಾಗಿದೆ.

(ಕೃಪೆ: ಅಲ್ಟ್ನ್ಯೂಸ್.ಕಾಮ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...