Homeಮುಖಪುಟಭೂಮಿ ಸ್ವಾಭಿಮಾನದ ಸಂಕೇತ, ಅದು ಆರ್ಥಿಕ ಭದ್ರತೆ ನೀಡಲಿದೆ - ಕುಮಾರ್ ಸಮತಳ ಸಂದರ್ಶನ

ಭೂಮಿ ಸ್ವಾಭಿಮಾನದ ಸಂಕೇತ, ಅದು ಆರ್ಥಿಕ ಭದ್ರತೆ ನೀಡಲಿದೆ – ಕುಮಾರ್ ಸಮತಳ ಸಂದರ್ಶನ

ಉಳುವವನೇ ಭೂಮಿಯ ಒಡೆಯ ಎನ್ನುವ ಕಾನೂನನ್ನು ಪರಿಣಾಮಕಾರಿಯಗಿ ಜಾರಿಗೊಳಿಸಬೇಕು. ಕೃಷಿಗೆ ಸಮಬಂಧಿಸಿದಂತೆ ಈಗ ಮಾಡಿರುವ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎನ್ನುವುದು ನಮ್ಮ ಮುಖ್ಯ ಹಕ್ಕೊತ್ತಾಯಗಳು.

- Advertisement -
- Advertisement -

ರಾಜ್ಯದ ಭೂಮಿ, ವಸತಿ ರಹಿತ ಬಡಜನರ ಪರವಾಗಿ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈ ವಿಧಾನಸಭಾ ಅಧಿವೇಶನದ ಹಿನ್ನೆಲೆಯಲ್ಲಿಯೂ ಸಹ ರಾಜ್ಯಾದ್ಯಂತ ಜಾಥ ನಡೆಸಲಾಗುತ್ತಿದೆ. ಈ ಹೋರಾಟದ ಆಶಯಗಳು ಮತ್ತು ಮುಂದಿನ ನಡೆ ಕುರಿತು ಚರ್ಚಿಸಲು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡರಲ್ಲೊಬ್ಬರಾದ ಕುಮಾರ್ ಸಮತಳರವರನ್ನು ನಾನುಗೌರಿ ವತಿಯಿಂದ ಸಂದರ್ಶಿಸಲಾಯಿತು. ಅದರ ಪೂರ್ಣಪಾಠ ಇಲ್ಲಿದೆ.

ನಾನು ಗೌರಿ: ಕಳೆದ ಕೆಲವು ವರ್ಷಗಳಿಂದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೀರಿ. ಸರ್ಕಾರಗಳು ಹೇಗೆ ಸ್ಪಂದಿಸಿವೆ?

ಕುಮಾರ್ ಸಮತಳ: ಸರ್ಕಾರಗಳು ಹೋರಾಟಗಳಿಗೆ ಸ್ಪಂದಿಸಿದ್ದಿದ್ದರೆ, ಇಂದು ನಾವು ಹೋರಾಟಗಳನ್ನು ಮಾಡಬೇಕಾದ ಅಗತ್ಯವೇ ಇರಲಿಲ್ಲ. ಇಷ್ಟರಲ್ಲಾಗಲೇ ಬಡವರಿಗೆ ವಸತಿ ಮತ್ತು ಭೂಮಿ ಸಿಗಬೇಕಿತ್ತು. ಯಾವುದೇ ಸರ್ಕಾರಗಳಾದರೂ ಅಧಿಕಾರಕ್ಕೆ ಬರುವ ಮೊದಲು ನೂರಾರು ಆಶ್ವಾಸನೆಗಳನ್ನು ಕೊಡುತ್ತವೆ. ಅಧಿಕಾರಕ್ಕೆ ಬಂದ ನಂತರ ಆಶ್ವಾಸನೆಗಳನ್ನು ಮರೆಯುತ್ತವೆ. ಇದರ ಕುರಿತು ನಡೆಯುವ ಹೋರಾಟಗಳನ್ನು ನಿರ್ಲಕ್ಷಿಸುತ್ತಿವೆ.

ಇದನ್ನೂ ಓದಿ: ಐದು ವರ್ಷದಲ್ಲಿ ಎಲ್ಲಾ ಬಡವರ ಭೂಮಿ ಕಿತ್ತುಕೊಳ್ಳುತ್ತಾರೆ: ಸಸಿಕಾಂತ್ ಸೆಂಥಿಲ್ ಆತಂಕ

ನಾನು ಗೌರಿ: ಉಳುವವನೇ ಭೂಮಿಯ ಒಡೆಯ ಕಾನೂನು ಬಂದರೂ ಕೂಡ ಬಡಜನರಿಗೆ ಭೂಮಿ ಸಿಗಲಿಲ್ಲವೇಕೆ?

ಕುಮಾರ್ ಸಮತಳ: ಇಲ್ಲ. ಒಂದು ಮಟ್ಟಕ್ಕೆ ಕೆಲವರಿಗೆ ಭೂಮಿ ಸಿಕ್ಕಿದೆ. ಅದು ಪರಿಣಾಮಕಾರಿಯಾಗಿ ಎಲ್ಲರಿಗೂ ಸಿಗಲಿಲ್ಲ ಅಷ್ಟೆ. ಆದರೆ ಇಂತಹ ಕಾನೂನುಗಳಿರುವುದರಿಂದಲೇ ಜನರು ಆಶಾಭಾವದಿಂದ ತಮಗೂ ಒಂದು ಅವಕಾಶವಿದೆ ಎಂದುಕೊಳ್ಳುತ್ತಿದ್ದರು. ಈ ಕಾನೂನು ಜನರಿಗೆ ಧ್ವನಿಯಾಗಿತ್ತು. ಏನೂ ಇಲ್ಲದವರೂ ಕೂಡ ಭೂಮಿ ಹೊಂದಬಹುದು ಎಂಬ ನಂಬಿಕೆಯನ್ನು ಹುಟ್ಟುಹಾಕಿತು. ಆದರೆ ಈ ಕಾನೂನನ್ನು ಇಂದಿನ ಸರ್ಕಾರಗಳು ತಿದ್ದುಪಡಿ ಮಾಡುವ ಮೂಲಕ ದುರ್ಬಲಗೊಳಿಸುತ್ತಿವೆ. ಅದಕ್ಕೆ ನಮ್ಮ ವಿರೋಧವಿದೆ.

ನಾನು ಗೌರಿ: ಅಲ್ಪಸ್ವಲ್ಪ ಭೂಮಿ ಇರುವವರೂ ಸಹ ಬೆಲೆ ಸಿಗದೇ, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ, ತುಂಡು ಭೂಮಿ ಕೊಡಿಸುವುದರಿಂದ ಏನು ಲಾಭ?

ಕುಮಾರ್ ಸಮತಳ: ಭೂಮಿ ಎನ್ನುವುದು ಸ್ವಾಭಿಮಾನದ ಸಂಕೇತ. ಇದು ಬಡವರಿಗೆ ಆರ್ಥಿಕ ಭದ್ರತೆಯನ್ನು ಕೊಡುತ್ತದೆ. ಆದರೂ ನೀವು ಹೇಳುತ್ತಿರುವುದು ನಿಜ. ಆದರೆ ವಾಸ್ತವದಲ್ಲಿ ತುಂಡು ಭೂಮಿ ಇರುವವರು ಇಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ದೊಡ್ಡ ಸಾಲದ ಸುಳಿಗೆ ಸಿಲುಕುತ್ತಿಲ್ಲ. ಬದಲಾಗಿ ಕನಿಷ್ಟ 5 ಎಕೆರೆಗಿಂತ ಹೆಚ್ಚು ಭೂಮಿಯನ್ನು ಹೊಂದಿರುವವರು, ಮಧ್ಯಮ ರೈತರು ಈ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದಾಗ್ಯೂ ಅವರಿಗೆ ನ್ಯಾಯಯುತ ಬೆಲೆ ಮತ್ತು ಪರಿಹಾರಗಳನ್ನು ಕೊಡಬೇಕಾಗಿರುವುದೂ ಕೂಡ ಸರ್ಕಾರದ ಕರ್ತವ್ಯವಾಗಿದೆ.

ನಾನು ಗೌರಿ: ನಿಮ್ಮ ಹೋರಾಟದ ಪ್ರಮುಖ ಹಕ್ಕೊತ್ತಾಯಗಳೇನು?

ಕುಮಾರ್ ಸಮತಳ: ಪ್ರಮುಖವಾಗಿ, ಉಳುವವನೇ ಭೂಮಿಯ ಒಡೆಯ ಎನ್ನುವ ಕಾನೂನನ್ನು ಪರಿಣಾಮಕಾರಿಯಗಿ ಜಾರಿಗೊಳಿಸಬೇಕು. ಕೃಷಿಗೆ ಸಮಬಂಧಿಸಿದಂತೆ ಈಗ ಮಾಡಿರುವ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎನ್ನುವುದು ನಮ್ಮ ಮುಖ್ಯ ಹಕ್ಕೊತ್ತಾಯಗಳು.

ಭೂಮಿ ಮತ್ತು ವಸತಿ ಹಕ್ಕು ಹೋರಾಟ

ನಾನು ಗೌರಿ: ರಾಜ್ಯದಲ್ಲಿ ಭೂಮಿ/ಸ್ವಂತ ನಿವೇಶನ ಇಲ್ಲದವರ ಸಂಖ್ಯೆ ಎಷ್ಟಿದೆ. ಭೂಮಿ/ನಿವೇಶನ ಇಲ್ಲದಿರುವುದಕ್ಕೆ ಭೂಮಿಯ ಅಲಭ್ಯತೆ ಕಾರಣವೋ? ಅಥವಾ ಇದ್ದರೂ ಸರ್ಕಾರದ ಇಚ್ಚಾಶಕ್ತಿಯ ಕೊರತೆ ಕಾರಣವೋ?

ಕುಮಾರ್ ಸಮತಳ: ರಾಜ್ಯದಲ್ಲಿ ಭೂಮಿಗೆ ಕೊರತೆಯಿಲ್ಲ. ಈಗಗಲೇ ಭೂಮಿಗಾಗಿ ಅರ್ಜಿಹಾಕಿ ಕಾಯುತ್ತಿರುವವರ ಸಂಖ್ಯೆ ಮಾತ್ರ 50 ಲಕ್ಷದಷ್ಟಿದೆ. ಆದರೂ ಸರ್ಕಾರ ಅರ್ಜಿಗಳನ್ನು ಇತ್ಯರ್ಥಪಡಿಸುವ ಕ್ರಮಗಳನ್ನು ಕೈಗೊಂಡಿಲ್ಲ. ಖಂಡಿತವಾಗಿಯೂ ಸರ್ಕಾರ ಇಚ್ಚಾಶಕ್ತಿಯ ಕೊರತೆಯೇ ಬಡಜನರಿಗೆ ಇನ್ನೂ ಭೂಮಿ ಸಿಗದಿರುವುದಕ್ಕೆ ಕಾರಣ.

ಇದನ್ನೂ ಓದಿ: ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ಮಹಿಳಾ ರೈತರ ಹಕ್ಕುಗಳ ವೇದಿಕೆಯ ಖಂಡನೆ

ನಾನು ಗೌರಿ: ದೇಶದ/ರಾಜ್ಯದ ಪ್ರತಿ ಕುಟುಂಬಕ್ಕೂ ಭೂಮಿ, ವಸತಿ ನೀಡಲು ಸಾಧ್ಯವೇ?

ಕುಮಾರ್ ಸಮತಳ: ಖಂಡಿತ ಸಾಧ್ಯ. ಈಗ ಇರುವ ಭೂಮಿಯನ್ನು ಎಲ್ಲರಿಗೂ ಹಂಚಲು ಸಾಧ್ಯವಿದೆ. ಒಂದು ಕುಟುಂಬ ಬದುಕಲು ಬೇಕಾದಷ್ಟು ಭೂಮಿ ಕೊಡಲು ಸಾಧ್ಯತೆಯಿದೆ. ಆದರೆ ಸರ್ಕಾರ ಮನಸ್ಸು ಮಾಡಿದರೆ ಮಾತ್ರ ಇದು ಸಾಧ್ಯ. 5 ಎಕರೆ ಭೂಮಿಯಿರುವವರೂ ಬದುಕಿದ್ದಾರೆ, 5 ಕುಂಟೆ ಭೂಮಿಯಿರುವವರೂ ಬದುಕಿದ್ದಾರೆ. ಅದೇ 5 ಎಕರೆ ಜಾಗಕ್ಕೂ ಮನೆ ಮಾತ್ರ ಕಟ್ಟಿಕೊಂಡು ಬದುಕುತ್ತಿರುವವರೂ ನಮ್ಮ ನಡುವೆ ಇದ್ದಾರಲ್ಲವೇ?

ನಾನು ಗೌರಿ: ಎಲ್ಲಾ ಸರ್ಕಾರಗಳು ಹಲವು ಯೋಜನೆಗಳ ಅಡಿಯಲ್ಲಿ ಕೋಟ್ಯಂತರ ಕುಟುಂಬಗಳಿಗೆ ವಸತಿ ನೀಡಿದ್ದೇವೆ ಎಂದು ಜಾಹಿರಾತು ಹಾಕಿಕೊಂಡಿದ್ದಾರಲ್ಲ?

ಕುಮಾರ್ ಸಮತಳ: ಅವುಗಳೆಲ್ಲಾ ಗಿಮಿಕ್. ಈಗ ವಸತಿ ಸಚಿವ ವಿ.ಸೋಮಣ್ಣ ಪ್ರತಿ ಪಂಚಾಯಿತಿಗೂ 20 ಮನೆಗಳನ್ನು ನೀಡಿದ್ದೇವೆ ಎಂದು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಕೇವಲ ಇಪ್ಪತ್ತು ಮನೆಗಳು ಸಾಕಾಗುತ್ತವೆಯೇ? ಈಗ ಲಕ್ಷ ಮನೆಗಳನ್ನು ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ಒಂದರ ಮೇಲೊಂದರಂತೆ ಬೆಂಕಿಪಟ್ಟಣಗಳಂತೆ ಮನೆ ಕಟ್ಟಿಕೊಟ್ಟಿರುತ್ತಾರೆ. ಇಲ್ಲಿ ನಿವೇಶನ ಕೊಟ್ಟಂತಾಯಿತೇ? ನಿವೇಶನ ಕೊಡುವುದಕ್ಕೆ ಸಾಧ್ಯತೆಯಿದೆ. ಆದರೂ ಕೊಡುವುದಿಲ್ಲ ಅಷ್ಟೆ.

ನಾನು ಗೌರಿ: ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಭೂಸುಧಾರಣೆಗಳ ಕಾಯ್ದೆಯಲ್ಲಿ ತಂದಿರುವ ಬದಲಾವಣೆಗಳು ಭೂಮಿ ಮತ್ತು ವಸತಿರಹಿತರನ್ನು ಹೇಗೆ ಬಾದಿಸುತ್ತದೆ?

ಕುಮಾರ್ ಸಮತಳ: ಈಗ ನೋಡಿ, ನಾವು ಕಾನೂನು ಪ್ರಕಾರ ಬಡವರಿಗೆ ಭೂಮಿ ಕೊಡಿ ಎಂದು ಹೋರಾಟ ಮಾಡುತ್ತೇವೆ. ಆದರೆ ಈ ಕಾಯ್ದೆ ಅಥವಾ ಕಾನೂನು ಇದ್ದರೆ ತಾನೆ ಭೂಮಿ ಕೊಡುವ ಪ್ರಮೇಯ ಬರುತ್ತದೆ. ಹಾಗಾಗಿ ಆ ಕಾಯ್ದೆಗಳನ್ನೇ ರದ್ದುಪಡಿಸಿದರೆ? ಈಗ ಸರ್ಕಾರ ಮಾಡುತ್ತಿರುವುದು ಇಂತಹ ಕೆಲಸಗಳನ್ನೇ. ಜೊತೆಗೆ ಈಗ ತಿದ್ದುಪಡಿ ಮಾಡಿರುವ ವಿಷಯ, ಕೃಷಿಯೇತರರು ಭೂಮಿ ಕೊಳ್ಳಬಹುದು ಎಂದು ಹೇಳುತ್ತಾರೆ. ಅಂದರೆ ನೇರವಾಗಿ ಬಂಡವಾಳಶಾಹಿಗಳಿಗೆ ಭೂಮಿ ಕೊಳ್ಳಲು ಅವಕಾಶ ಮಾಡಿಕೊಡುತ್ತಿದೆ. ಇನ್ನೊಂದು ವಿಷಯ, ಭೂಮಿ ಹೊಂದುವ ಮಿತಿಯನ್ನು ಹೆಚ್ಚಿಸಿರುವುದು. ಅಂದರೆ ಒಂದು ಕುಟುಂಬ ಮೊದಲು 54 ಎಕರೆಗಳವರೆಗೆ ಭೂಮಿ ಹೊಂದಬಹುದಿತ್ತು. ಆದರೆ ಈ ತಿದ್ದುಪಡಿಯ ಮೂಲಕ ಸುಮಾರು 200 ಎಕರೆಗಳವರೆಗೆ ಭೂಮಿ ಹೊಂದಬಹುದು ಎಂದು ಹೇಳುತ್ತದೆ. ಇದರ ಮೂಲಕ ಜಮೀನ್ದಾರಿ ಪದ್ದತಿಯನ್ನು ಮತ್ತೊಮ್ಮೆ ಜಾರಿಗೆ ತರಲು ಹೊರಟಿದೆ.

ಇದನ್ನೂ ಓದಿ: ‘ಭೂಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಟೆಕ್ಕಿಗಳಿಗೆ ಲಾಭ: ಸಚಿವ ಮಾಧುಸ್ವಾಮಿ

ನಾನು ಗೌರಿ: ಮಹಿಳೆಯರಿಗೆ ಭೂ ಒಡೆತನದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಕುಮಾರ್ ಸಮತಳ: ಖಂಡಿತವಾಗಿಯೂ ಭೂಮಿಯ ಒಡೆತನ ಮಹಿಳೆಯರಿಗೂ ಕೊಡಬೇಕು. ಭೂಮಿಯ ಪಹಣಿಯನ್ನು ಜಂಟಿಯಾಗಿ ಮಾಡಿಸಿ, ಪ್ರತಿ ಮನೆಯಲ್ಲಿಯೂ ಮಹಿಳೆಯ ಹೆಸರಿನಲ್ಲಿಯೂ ಭೂಮಿ ಇರುವಂತೆ ನೊಡಿಕೊಂಡು ಅವರನ್ನೂ ಸಬಲರನ್ನಾಗಿ ಮಾಡಬೇಕು ಎನ್ನುವುದು ನಮ್ಮ ಆಶಯವೂ ಆಗಿದೆ. ಸರ್ಕಾರ ಭೂಮಿಯನ್ನು ಕೊಡುವಾಗ ಅದನ್ನು ಮಹಿಳೆಯರ ಹೆಸರಿನಲ್ಲಿಯೇ ಕೊಡಬೇಕು ಎಂಬುದೇ ನಮ್ಮ ಒತ್ತಾಯವಾಗಿದೆ.

ಭೂಮಿ ಮತ್ತು ವಸತಿ ಹಕ್ಕು ಹೋರಾಟ

ನಾನು ಗೌರಿ: ಕೊರೊನಾ ಸಾಂಕ್ರಾಮಿಕದಿಂದ ಭೂರಹಿತ ಮತ್ತು ವಸತಿರಹಿತ ಜನರ ಮೇಲೆ ಉಂಟಾದ ಪರಿಣಾಮಗಳೇನು?

ಕುಮಾರ್ ಸಮತಳ: ತಮ್ಮ ಹಳ್ಳಿಯಲ್ಲಿ ಯಾರಿಗೆ ಭೂಮಿ ಇರುವುದಿಲ್ಲವೋ ಅಂಥವರು ಕೆಲಸವನ್ನರಸಿ ಅಥವಾ ಬದುಕನ್ನರಸಿ ಪಟ್ಟಣಗಳಿಗೆ ವಲಸೆ ಬರುತ್ತಾರೆ. ಆದರೆ ಈ ಕೊರೊನಾದಂತಹ ರೋಗಗಳಿಂದ ಅವರು ಅಲ್ಲಿಯೂ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ದುಡಿದು ತಿನ್ನಬೇಕು ಎನ್ನುವವರಿಗೆ ನಿಜವಾಗಿಯೂ ಇದು ಸಂಕಷ್ಟದ ಪರಿಸ್ಥಿತಿ. ಈಗಾಗಲೆ ಸಾಲದಲ್ಲಿ ಬದುಕು ನಡೆಸುತ್ತಿರುವವರು, ಈ ಸಂದರ್ಭದಲ್ಲಿ ಬದುಕುವುದಕ್ಕಾಗಿಯೇ ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಿ ಅವರ ಋಣಭಾರವನ್ನು ಇನ್ನಷ್ಟು ಹೆಚ್ಚು ಮಾಡಿಕೊಂಡಿದ್ದಾರೆ. ಇದು ವಸತಿ ಮತ್ತು ಭೂರಹಿತರ ಸಮಸ್ಯೆಯಾಗಿದೆ. ಜೊತೆಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳೂ ಸಹ ಸಮರ್ಪಕವಾಗಿ ಸಿಗಲಿಲ್ಲವಾದ್ದರಿಂದ ಇವರ ಬದುಕು ಮೂರಾಬಟ್ಟೆಯಾಗಿದೆ.

ಇದನ್ನೂ ಓದಿ: ಭೂ ಸುಧಾರಣಾ ಕಾನೂನಿನ ತಿದ್ದುಪಡಿ ಮತ್ತು ಅದರ ಪರಿಣಾಮಗಳು – ಡಾ.ಎ.ಆರ್ ವಾಸವಿ

ನಾನು ಗೌರಿ: ಕೊರೊನಾ ಲಾಕ್‌ಡೌನ್ ನಂತರದ ಕಾಲದಲ್ಲಿ ಹೋರಾಟಗಳಿಗೆ ಜನರ ಪ್ರತಿಕ್ರಿಯೆ ಹೇಗಿದೆ. ನಿಮ್ಮ ಜಾಥದ ಅನುಭವಗಳೇನು?

ಕುಮಾರ್ ಸಮತಳ: ನೋಡಿ ಸರ್, ನಾವು ಬದುಕಬೇಕು ಎಂದರೆ ಹೊರಾಟ ಮಾಡಲೇಬೇಕು. ಕೊರೊನಾ ಇದ್ದರೂ ಸರಿ ಮತ್ತೊಂದೇ ಇದ್ದರೂ ಸರಿ. ನನಗೆ ಹೊಟ್ಟೆತುಂಬಬೇಕು ಎಂದರೆ ನಾನು ಹೊರಗೆ ಬರಲೇಬೆಕು. ಹಾಗಾಗಿಯೇ ನಮ್ಮ ಬದುಕಿಗೆ ಕುಂದುಂಟಾಗುವ ಈ ಸಮಯದಲ್ಲಿ ನಾವು ಎಚ್ಚೆತ್ತುಕೊಳ್ಳದಿದ್ದರೆ ಈಗಿರುವ ಸ್ಥಿತಿಗಿಂತಲೂ ಕೆಳಮಟ್ಟಕ್ಕೆ ತಲುಪುವುದು ಶತಸಿದ್ಧ. ನಾವು ನಮ್ಮ ಹೋರಾಟದ ಸಲುವಾಗಿ ಪ್ರತಿ ಹಳ್ಳಿಗೂ ಜಾಥಾ ಹೊರಟಾಗ ಅಲ್ಲೆಲ್ಲಾ ಜನರ ಸ್ಪಂದನೆ ಚೆನ್ನಾಗಿದೆ. ಅವರಿಗೆ ಜಾಗೃತಿ ಮೂಡಿಸುವ ನಮ್ಮ ಕೆಲಸವೂ ಚೆನ್ನಾಗಿ ಆಗುತ್ತಿದೆ. ಜನರಿಗೂ, ಇದು ನಿಜವಾಗಲೂ ನಮ್ಮ ಸಮಸ್ಯೆ ಎನಿಸತೊಡಗಿ, ನಾವೂ ಚಳವಳಿ ಮಾಡಬೇಕು ಎಂಬ ಭಾವನೆ ಬಂದಿದೆ. ಚಳವಳಿ ಮಾಡದಿದ್ದರೆ ನಮಗೆ ನಮ್ಮ ಹಕ್ಕು ಸಿಗಲಾರದು ಎಂದು ಹಲವರಿಗೆ ಮನವರಿಕೆಯಾಗಿದೆ. ನಮ್ಮ ಪರವಾಗಿಯೂ ದನಿಯೆತ್ತುವವರು ಇದ್ದಾರೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ.


ಇದನ್ನೂ ಓದಿ: ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ : ದೇಶವ್ಯಾಪಿ ಅಸಹಕಾರ ಚಳವಳಿಯ ಅಗತ್ಯವಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...