Homeಸುಳ್ಳಪ್ಪೋ ಸುಳ್ಳುಫೇಕ್ ನ್ಯೂಸ್ ಫ್ಯಾಕ್ಟರಿಗೆ ನಮೋ ಆ್ಯಪ್ ಶ್ರೀರಕ್ಷೆ!

ಫೇಕ್ ನ್ಯೂಸ್ ಫ್ಯಾಕ್ಟರಿಗೆ ನಮೋ ಆ್ಯಪ್ ಶ್ರೀರಕ್ಷೆ!

- Advertisement -
- Advertisement -

ಚುನಾವಣೆ ಸಮರದಲ್ಲಿ ಸುಳ್ಳು ಸಹಜ. ಆದರೆ ಸಾಮಾಜಿಕ ಜಾಲತಾಣಗಳ ಬಳಕೆ ಪ್ರಮಾಣ ಹೆಚ್ಚಾದಂತೆಲ್ಲ ಸುಳ್ಳುಗಳ ಮಹಾಪೂರವೇ ಹರಿದು ಬರುತ್ತಿದ್ದು ರಾಜಕೀಯ, ಏಧರ್ಮಕ್ಕೆ ಸಂಬಂಧಿಸಿದ ಯಾವ ಸುದ್ದಿಯನ್ನೂ ಪರೀಕ್ಷಿಸದೇ ನಂಬುವಂತೆಯೇ ಇಲ್ಲ.
ಅದಿರಲಿ, ಸರ್ಕಾರವೇ ಇಂತಹ ಫೇಕ್ ಫ್ಯಾಕ್ಟರಿಗಳನ್ನು ಪೋಷಿಸತೊಡಗಿದರೆ, ದೇಶದ ಪ್ರಧಾನಿಯೇ ಇಂತಹ ಸುಳ್ ಕಾರ್ಖಾನೆಗಳನ್ನು ಪ್ರಮೋಟ್ ಮಾಡತೊಡಗಿದರೆ ಅದಕ್ಕಿಂತ ನಾಚಿಕೆಗೇಡು ಬೇರೆನಿದೆ?
ಕಳೆದ ತಿಂಗಳು ಸಮರ್ಥ ಬನ್ಸಾಲ್ ಎಂಬ ಪರ್ತಕರ್ತರು ಈ ಫೇಕ್ ಫ್ಯಾಕ್ಟರಿಗಳ ಕುರಿತು ಒಂದು ತನಿಖಾ ವರದಿ ಪ್ರಕಟಿಸಿದರು. ಹೆಚ್ಚುತ್ತಿರುವ ಫೇಕ್ ಸ್ಟೋರಿಗಳು ಮತ್ತು ಸರ್ಕಾರದ ನಡುವೆ ಲಿಂಕ್ ಇರುವುದನ್ನು ಅವರು ಎಳೆಎಳೆಯಾಗಿ ತೋರಿಸಿದ್ದರು. ಪ್ರಧಾನಿಯ ನಮೋ ಆ್ಯಪ್ ಮೂಲಕ ಸುಳ್ಳು ಸುದ್ದಿಗಳು, ಕುಚೋದ್ಯಗಳು ಹರಿದಾಡುವುದನ್ನು ಬನ್ಸಾಲ್ ತೋರಿಸಿದರು.
ನಮೋ ಆ್ಯಪ್‍ನ ‘ಮೈ ನೆಟ್‍ವರ್ಕ್’ ವಿಭಾಗದಲ್ಲಿ 15 ಪ್ರಮೋಟೆಡ್ ಅಕೌಂಟುಗಳಿವೆ, ಅದರಲ್ಲಿ ಫೇಕ್ ಫ್ಯಾಕಟ್ರಿ ಎಂದೇ ಕುಖ್ಯಾತಿ ಪಡೆದಿರುವ ‘ದಿ ಇಂಡಿಯನ್ ಐ’ ಕೂಡ ಇದೆ. ಬಳಕೆದಾರರು ಇದನ್ನು ಫಾಲೋ ಮಾಡದೇ ಇದ್ದಾಗಲೂ ಇದರ ಪೋಸ್ಟ್‍ಗಳು ಅವರ ‘ಮೈ ನೆಟ್‍ವರ್ಕ್’ ಫೀಡರ್‍ನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ.

ಕೇಜ್ರಿವಾಲಾ ದೇಶದ್ರೋಹಿಯಂತೆ!
ಫೇಸ್‍ಬುಕ್ ಪೇಜ್, ಟ್ವಿಟರ್, ವೆಬ್‍ಸೈಟ್- ಹೀಗೆ ಸಾಮಾಜಿಕ ಜಾಲತಾಣದ ಎಲ್ಲ ಸ್ತರಗಳಲ್ಲೂ ಇರುವ ‘ದಿ ಇಂಡಿಯನ್ ಐ’ ಎಂತಹ ಕುಚೋದ್ಯ ಮಾಡುತ್ತದೆ ಎಂಬುದಕ್ಕೆ ಈ ಉದಾಹರಣೆ ನೋಡಿ. ವಿರೋಧ ಪಕ್ಷಗಳ ಮಹಾಘಟಬಂಧನ್ ಸಮಾವೇಶದಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರು ಪಾಕಿಸ್ತಾನದ ಪರ ಮಾತಾಡಿದರು ಎಂದು ಈ ಇಂಡಿಯನ್ ಐ ಸುಳ್ ಸುದ್ದಿ ಹರಡಿತ್ತು. ‘ಮತ್ತೆ ಮೋದಿ ಅಧಿಕಾರಕ್ಕೆ ಬಂದರೆ ಪಾಕಿಸ್ತಾನಕ್ಕೆ ತೊಂದರೆ’ ಎಂಬರ್ಥದಲ್ಲಿ ಕೇಜ್ರಿವಾಲ ಮಾತಾಡಿದರು ಎಂದಿತ್ತು. ಅದಕ್ಕಾಗಿ ಅವರನ್ನು ದೇಶದ್ರೋಹಿ ಎಂದು ‘ಆರ್ಡರ್’ ಅನ್ನೂ ಪಾಸ್ ಮಾಡಿಬಿಟ್ಟಿತ್ತು.
ಆದರೆ ಆಗಲೇ ಅಲ್ಟ್‍ನ್ಯೂಸ್ ಇಂಡಿಯನ್ ಐ ಹಾಕಿರುವ ವಿಡಿಯೋ ತಿರುಚಿದ್ದು ಎಂದು ಸಾಬೀತು ಮಾಡಿತ್ತು. ‘ಮೋದಿ ಮತ್ತು ಶಾ ಮತ್ತೆ ಅಧಿಕಾರಕ್ಕೆ ಬಂದರೆ ದೇಶ ಉಳಿಯಲಾರದು’ ಎಂಬ ಕೇಜ್ರಿವಾಲರ ಮಾತನ್ನು ತಿರುಚಲಾಗಿತ್ತು. ‘ದೇಶ’ ಎಂದಿರುವಲ್ಲಿ ‘ಪಾಕಿಸ್ತಾನ’ ಎಂದು ಸೇರಿಸಲಾಗಿತ್ತು! ಇಂತಹ ಅನಾಹುತ ಮಾಡುವ ಗುಂಪಿಗೆ ನರೇಂದ್ರ ಮೋದಿಯವರ ಆ್ಯಪ್ ಸಪೋರ್ಟು ಮಾಡುತ್ತಿದೆ.
ಗುಜರಾತ್ ಲಿಂಕ್
ಅಲ್ಟ್‍ನ್ಯೂಸ್ ಕಳೆದ ಸೆಪ್ಟೆಂಬರ್‍ನಲ್ಲಿ ಈ ಇಂಡಿಯನ್ ಐಗಿರುವ ಗುಜರಾತ್ ಲಿಂಕನ್ನು ಬಯಲು ಮಾಡಿತ್ತು. ಗುಜರಾತ್ ಮೂಲದ ಸಿಲ್ವರ್ ಟಚ್ ಟೆಕ್ನಾಲಜೀಸ್ ಕಂಪನಿಗೂ ಇದಕ್ಕೂ ಸಂಬಂಧವಿದೆ. ಈ ಸಿಲ್ವರ್ ಟಚ್ ಟೆಕ್ನಾಲಜಿ ಸಂಸ್ಥೆಯೇ ನಮೋ ಆ್ಯಪ್ ರೂಪಿಸಿದೆ! ಈ ಕಂಪನಿಯ ಸರ್ವರ್‍ಗಳ ಮೂಲಕವೇ ಇಂಡಿಯನ್ ಐ ಹಾಸ್ಟ್ ಮಾಡಲಾಗುತ್ತಿತ್ತು. ಅಲ್ಟ್‍ನ್ಯೂಸ್ ತನಿಖೆಯ ನಂತರ ಇಂಡಿಯನ್ ಐ ಐಪಿ ಅಡ್ರೆಸ್ ಬದಲು ಮಾಡಲಾಗಿತು.
ಇದೇ ಇಂಡಿಯನ್ ಐ ಕೊಲ್ಕೊತ್ತಾದ ಮಹಾಘಟಬಂಧನ್ ರ್ಯಾಲಿಯಲ್ಲಿ ಯಾರೊಬ್ಬರೂ ‘ಭಾರತ್ ಮಾತಾ ಕಿ ಜೈ’ ಅನ್ನಲಿಲ್ಲ ಎಂದು ಸುಳ್ಳು ಹರಡಿತ್ತು. ಇದನ್ನೇ ಅಮಿತ್ ಶಾ ತಮ್ಮ ಭಾಷಣಗಳಲ್ಲಿ ಹೇಳಿದ್ದರು. ಆದರೆ ರ್ಯಾಲಿಯ ಕೊನೆಯಲ್ಲಿ ಭಾರತ್ ಮಾತಾ ಕಿ ಜೈ, ಜೈ ಹಿಂದ್, ವಂದೇ ಮಾತರಂ ಘೋಷಣೆಗಳನ್ನು ಹೇಳಿದ್ದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.
ಹೀಗೆ ಬರೀ ಸುಳ್ಳು, ಕುಚೋದ್ಯವನ್ನೇ ಮಾಡುವ ಇಂತಹ ನೂರಾರು ಗುಂಪುಗಳಿವೆ. ಆದರೆ, ಪ್ರಧಾನಿಯವರ ನಮೋ ಆ್ಯಪ್ ಇಂಥವನ್ನು ಬೆಂಬಲಿಸುತ್ತದೆ ಎನ್ನುವ ವಿಷಯ ಅಸಹ್ಯಕರವಾದುದು.
ಪ್ರಧಾನಿಯೇ ಒಬ್ಬ ಮಹಾ ಸುಳ್ಳುಗಾರನಾಗಿರುವಾಗ, ಸುಳ್ಳುಗಲೇ ಅವರ ಬಂಡವಾಳವಾಗಿರುವಾಗ ಇಂಥದ್ದೆಲ್ಲ ನಡೆಯದೇ ಇರುತ್ತಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...