Homeಸಾಮಾಜಿಕಜೀ ಕನ್ನಡದ ಟಿಆರ್‌ಪಿ ಬಲೆಯಲ್ಲಿ ಸಿಕ್ಕಿಬಿತ್ತೇ ಹಳ್ಳಿ ಹಕ್ಕಿ?

ಜೀ ಕನ್ನಡದ ಟಿಆರ್‌ಪಿ ಬಲೆಯಲ್ಲಿ ಸಿಕ್ಕಿಬಿತ್ತೇ ಹಳ್ಳಿ ಹಕ್ಕಿ?

- Advertisement -
- Advertisement -

ಸರೋವರ್ ಬೆಂಕಿಕೆರೆ |

ಸೆಲೆಬ್ರಿಟಿಗಳಿಗೆ ಮೀಸಲಾದ ಬಿಗ್‌ಬಾಸ್ ಅನ್ನು ಹೊರತುಪಡಿಸಿದರೆ ಕನ್ನಡದ ಬಹುತೇಕ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಹಳ್ಳಿಗಾಡಿನ ಪ್ರತಿಭೆಗಳು ಜನಪ್ರಿಯರಾಗಿ ಕನ್ನಡಿಗರ ಮನೆಮಾತಾಗಿರುವುದು ನಿಜಕ್ಕೂ ವಿಶೇಷ ಮತ್ತು ಅಭಿನಂದನಾರ್ಹ. ಇದೀಗ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ 15ನೇ ಅವತರಣಿಕೆಯಲ್ಲಿ ಹಾವೇರಿ ಜಿಲ್ಲೆಯ ಕುರಿ ಕಾಯುವ ಯುವಕ ಹನುಮಂತು ಮನೆಮಾತಾಗಿದ್ದಾನೆ.

ಭಾರತದಂಥ ದೇಶದಲ್ಲಿ ಕೆಲವೇ ಕೆಲವು ಸಮುದಾಯಕ್ಕೆ ಸೀಮಿತವಾಗಿದ್ದ ಕಲೆಗಳನ್ನು ಶ್ರೇಷ್ಠವೆಂಬಂತೆ ಬಿಂಬಿಸಿದ್ದು ಅಲ್ಲದೆ ಅಂತಹ ಕಲೆಗಳಿಗೆ ವೇದಿಕೆಗಳ ಮೂಲಕ ಪ್ರಚಾರಗಳು ದೊರೆಯುತ್ತಾ ಬಂದಿದೆ. ಚಮ್ಮಾರಿಕೆ, ಕುಲುಮೆ, ಕುಂಬಾರಿಕೆ, ಬೇಟೆ ಇತ್ಯಾದಿ ತಳ ಸಮುದಾಯದ ಕಲೆಗಳ ಸ್ಪರ್ಧೆಯನ್ನು ಇವತ್ತಿನ ಟಿವಿ ಶೋಗಳಲ್ಲಿ ನಾವು ನೋಡಲು ಸಾಧ್ಯವಿಲ್ಲ. ಸಂಗೀತದ ವಿಚಾರಕ್ಕೆ ಬಂದರೆ ತಳಸಮುದಾಯದ ಕಲೆಗಳಾದ ಚರ್ಮದ ತಮಟೆ, ಉರ್ಮೆ, ಸೋಬಾನ, ಜೋಗತಿ ಜೋಗಪ್ಪರ ಹಾಡು, ಇದೇ ಹನುಮಂತನ ಲಂಬಾಣಿ ಸಮುದಾಯದ ಅತ್ತುಕೊಂಡು ಹಾಡುವ ಡಾವ್ಳೋ, ಮೇರಗಳು, ದೇವಸ್ಥಾನದ ಹೊರಗೇ ನಿಂತು ಒಂದಿಡೀ ದಿನ ಹಾಡುವ ಅಸಾದಿಗಳ ಹಾಡು…. ಇವೆಲ್ಲವಕ್ಕೆ ರಿಯಾಲಿಟಿ ಶೋಗಳಲ್ಲಿ ಸ್ಪರ್ಧೆ ನಡೆಸುವುದು ಹಾಗಿರಲಿ ಕಲ್ಪನೆ ಮಾಡಿಕೊಳ್ಳುವುದೂ ಅಸಾಧ್ಯವಾಗಿದೆ. ಇಂತಹ ಸಂದರ್ಭದಲ್ಲಿಯೂ ಯಾವುದೇ ಸಾಂಪ್ರದಾಯಿಕ ತರಬೇತಿ ಪಡೆಯದ, ಹಳ್ಳಿಗಾಡು ಬಡ ಕುರಿಗಾಯಿ ಕುಟುಂಬದ ಹನುಮಂತು ಇಂದು ಸರಿಗಮಪ-15 ರಲ್ಲಿ ಫೈನಲ್‌ಗೆ ಆಯ್ಕೆ ಆದದ್ದು ನಿಜಕ್ಕೂ ದೊಡ್ಡ ಸಾಧನೆಯೇ ಎನ್ನಬಹುದು.

ಆದರೆ ಟಿವಿ ನಿರೂಪಕರು-ಚಾನೆಲ್‌ಗಳ ಜನರ ಮುಗ್ಧತೆಗಳನ್ನು ಬಂಡವಾಳವಾಗಿಸಿಕೊಂಡು ತಮ್ಮ ಟಿಆರ್‌ಪಿ ದಾಹವನ್ನು ತೀರಿಸಿಕೊಳ್ಳುವುದರಲ್ಲಿ ವಿಕೃತವಾಗಿ ಪಳಗಿದ್ದಾರೆ. ಹಳ್ಳಿ ಹೈದಾ ಪ್ಯಾಟೇಗ್ ಬಂದ ಖ್ಯಾತಿಯ ರಾಜೇಶ್ ಅನ್ನುವ ಸಿದ್ಧಿ ಜನಾಂಗದ ಕಾಡು ಹುಡುಗನ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡ ಇದೇ ಟಿವಿ ಸಿನೆಮಾ ರಂಗದವರು ಅವನನ್ನು ಆತ್ಮಹತ್ಯೆ ಎಂಬ ಕೂಪಕ್ಕೆ ತಳ್ಳಿ ಕೊಲೆ ಮಾಡಿದ್ದನ್ನು ಈ ಸಂದರ್ಭದಲ್ಲಿ ನೆನೆಯಬಹುದು.

ಇತ್ತೀಚೆಗೆ ಪ್ರಸಾರವಾದ ಸರಿಗಮಪ ಸೆಮಿಫೈನಲ್‌ನ ಸಂಚಿಕೆಯಲ್ಲಿ ಹನುಮಂತು ಹಾಡಿದ ನಂತರ ನಿರೂಪಕಿ ಬಂದು ತುಂಬಾ ಚೆನ್ನಾಗಿ ಹಾಡಿದೆ ಮತ್ತೊಮ್ಮೆ ನಮಗಾಗಿ ಹಾಡು ಎನ್ನುತ್ತಾಳೆ. ಅವನು ಹಾಡು ಶುರು ಮಾಡಿದ ಸ್ವಲ್ಪ ಹೊತ್ತಿಗೆ ಹನುಮಂತನ ತಾಯಿ ವೇದಿಕೆ ಮೇಲೆ ಬರುತ್ತಾರೆ. ಆತನಿಗೆ ಆಶ್ಚರ್ಯವಾಗಿ ಹಾಡು ನಿಲ್ಲಿಸುತ್ತಾನೆ. ಈಗ ನಿರೂಪಕಿ ತಾಯಿಗೆ ಸಂಬಂಧಿಸಿದ ಹಾಡು ಹಾಡುತ್ತಿದ್ದೀಯ ಅದನ್ನು ನಿನ್ನ ತಾಯಿಯ ಮುಖವನ್ನು ನೋಡುತ್ತಾ ಹಾಡು ಎನ್ನುತ್ತಾಳೆ. ಹನುಮಂತು ತಾಯಿಯ ಮುಖ ನೋಡುತ್ತಾ ಹಾಡಲು ಶುರು ಮಾಡಿದಾಗ, ಪಾಪ ಆ ತಾಯಿಗೆ ಏನು ನಡೀತಿದೆ ಎನ್ನುವುದು ತಿಳಿಯದೆ ಮಗನ ಕಡೆ ನೋಡದೆ ಪ್ರೇಕ್ಷಕರ ಕಡೆ ನೋಡುತ್ತಾ ನಿಲ್ಲುತ್ತಾಳೆ. ಕ್ಯಾಮೆರಾ ತಾಯಿಯ ಕಣ್ಣಿಗೆ ಫೋಕಸ್ ಆಗುತ್ತದೆ. ಆಕೆ ಅಷ್ಟೇನು ಭಾವುಕಳಾಗದಂತೆ ಇದ್ದದ್ದು ಗಮನಿಸಿದಳೇನೋ ನಿರೂಪಕಿ, ತಾಯಿಗೆ ಮತ್ತೆ ಪ್ರಶ್ನೆ ಮಾಡುತ್ತಾಳೆ, ಮಗನ ನೆನಪು ಆಗುತ್ತಿತ್ತಾ? ನೆನಪಾದಾಗ ಏನು ಮಾಡುತ್ತಿದ್ರಿ? ಎಂದು.

ತಾಯಿ ಭಾವುಕರಾಗದೆ ಉತ್ತರ ನೀಡಿದ್ದು ನಿರೂಪಕಿಗೆ ಸಮಾಧಾನವಾಗಲಿಲ್ಲ ಅನಿಸುತ್ತೆ. ಆ ಹೊತ್ತಿಗೆ ವೇದಿಕೆಗೆ ಬಂದಿದ್ದ ಹನುಮಂತನ ತಂದೆಗೂ ಇದೇ ರೀತಿಯ ಬಗೆಬಗೆಯ ಪ್ರಶ್ನೆ. ಮತ್ತು ಎಲ್ಲರಿಗೂ ಹನುಮಂತನ ತಂದೆಗಾಗಿ ’ಅಪ್ಪ ಐ ಲವ್ಯೂ ಅಪ್ಪ ಹಾಡು ಹೇಳುವಂತೆ ಕೇಳುತ್ತಾಳೆ. ಒಟ್ಟಾರೆಯಲ್ಲಿ ಏನೆಲ್ಲಾ ಮಾಡಿ ಅಲ್ಲಿ ಭಾವನಾತ್ಮಕ ವಾತಾವರಣ ಸೃಷ್ಟಿ ಮಾಡಬಹುದೋ ಅದನ್ನು ಮಾಡುವ ಪ್ರಯತ್ನ ಮಾಡುತ್ತಿದ್ದಳು. ಹಾಡು ಮುಗಿಯುವ ಹೊತ್ತಿಗೆ ತನ್ನ ತಂದೆಯನ್ನು ನೆನೆದು ತೀರ್ಪುಗಾರ ರಾಜೇಶ್ ಕೃಷ್ಣನ್ ಅವರನ್ನು ಒಳಗೊಂಡಂತೆ ಒಂದಷ್ಟು ಜನ ಅಳುವವರನ್ನು ಕ್ಯಾಮರಾ ಕಣ್ಣಿಗೆ ಕಾಣಿಸುವುದರಲ್ಲಿ ಸಫಲರಾಗುತ್ತಾರೆ. ಈ ಹೊತ್ತಿಗೆ ಅಲ್ಲೇನು ನಡೆಯುತ್ತಿದೆ ಎನ್ನುವ ಅರಿವು ಇಲ್ಲದ ರೀತಿಯಲ್ಲಿ ಹನುಮಂತನ ಕುಟುಂಬ ವೇದಿಕೆ ಮೇಲೆ ಸುಮ್ಮನೆ ನಿಂತಿದ್ದರು.

ಈ ಕಾರ್ಯಕ್ರಮ ನೋಡುತ್ತಿದ್ದ ಸೂಕ್ಷ್ಮ ವೀಕ್ಷಕರಿಗೆ ಇದೆಲ್ಲವೂ ಟಿಆರ್‌ಪಿ ಗೇಮ್ ಎನ್ನುವುದು ಅರ್ಥವಾಗುತ್ತಿತ್ತು. ಸೆಮಿ ಫೈನಲ್ ಪ್ರಸಾರ ಆಗುವ ಮೊದಲೇ ದಿನಪತ್ರಿಕೆಗಳಲ್ಲಿ ಸೆಮಿಫೈನಲ್ ಕಾರ್ಯಕ್ರಮದಲ್ಲಿ ಭಾವನಾತ್ಮಕ ಸನ್ನಿವೇಶಗಳು ಇರಲಿವೆ ಎಂದು ಸುದ್ಧಿ ಮಾಡಿಸಿದ್ದನ್ನು ಗಮನಿಸಿದರೆ ರಿಯಾಲಿಟಿ ಶೋಗಳಲ್ಲಿ ನಡೆಯುವ ಭಾವನಾತ್ಮಕ ಸನ್ನಿವೇಶಗಳು ಟಿಆರ್‌ಪಿಗಾಗಿ ಜನರನ್ನು ಹಿಡಿದಿಡಲು ಮಾಡುವ ಪೂರ್ವನಿಯೋಜಿತ ಪ್ಲಾನ್‌ಗಳು ಎಂಬ ಅನುಮಾನ ಹುಟ್ಟುತ್ತದೆ. ಹಲವು ಬಾರಿ ನೂರಕ್ಕೆ ನೂರು ಅಂಕ ಪಡೆದಿರುವ ಹನುಮಂತನಿಗಿಂತ ಇತರರು ಚೆನ್ನಾಗಿ ಹಾಡುತ್ತಾರೆ ಎಂದು ವಾದಿಸುವವರೂ ಇದ್ದಾರೆ. ಕಾರ್ಯಕ್ರಮದ ಕೊನೆಯವರೆಗೂ ಜನರನ್ನು ಹಿಡಿದಿಡಲು ಮುಗ್ಧತೆಯನ್ನು ಅತಿಯಾಗಿ ವೈಭವೀಕರಿಸುವ ಅಥವಾ ತಮಾಷೆ ಮಾಡುವುದನ್ನು ನಡೆಸಿಕೊಂಡೇ ಅವರನ್ನು ಫೈನಲ್‌ವರೆಗೂ ತರುತ್ತಾರೆ ಎನ್ನುವ ಆಪಾದನೆ ಸಹ ಹೊಸದೇನಲ್ಲ.

ಇದೆಲ್ಲದರ ನಡುವೆಯೂ ಹೆಚ್ಚು ಹೆಗಡೆ, ಹೊಳ್ಳ, ರಾವ್, ಶರ್ಮ, ಭಟ್‌ಗಳೇ ತುಂಬಿರುವ ಇಂತಹ ಸಂಗೀತ ವೇದಿಕೆಗಳ ನಡುವೆ ಯಾವುದೋ ಮೂಲೆಯ ಹಳ್ಳಿಯೊಂದರ ಪ್ರತಿಭೆಗೆ ಅವಕಾಶ ಸಿಗುತ್ತಿದೆ ಅನ್ನುವುದು ನಿಜವೇ ಆದರೂ, ಇದು ಟಿವಿ ಚಾನಲ್ ಅವರ ಆಟ ಮತ್ತು ಅವರದ್ದೇ ಮೈದಾನ ಅನ್ನುವುದು ವಾಸ್ತವ. ಇಂತಹ ಯಾವುದೇ ವೈಭವೀಕರಣ ಮಾಡದೇ ಭಾವಾವೇಶಕ್ಕೆ ಒಳಗಾಗದೇ ವಸ್ತುನಿಷ್ಠವಾಗಿ ನಡೆದುಕೊಳ್ಳುತ್ತಿದ್ದವರು ಹಂಸಲೇಖ ಅವರು. ಆದರೆ ಟೀವಿ ಚಾನೆಲ್‌ಗಳ ಟಿಆರ್‌ಪಿ ದಾಹದಿಂದ ಸೃಷ್ಟಿಗೊಳ್ಳುವ ಅನಿವಾರ್ಯ ಸಂದರ್ಭಗಳ ಮುಂದೆ ಅವರು ಕೂಡಾ ಸೋತು ರಾಜಿಯಾಗುವ ಮರ್ಜಿಗೆ ಸಿಲುಕಿದರಾ ಎನ್ನುವ ಪ್ರಶ್ನೆ ನಿಜಕ್ಕೂ ಅವರ ದೇಸಿ ಸಂಗೀತ ಪ್ರೀತಿಯನ್ನು ಅಪಾರವಾಗಿ ಅಭಿಮಾನಿಸುತ್ತಿದ್ದ ಸೂಕ್ಷ್ಮಸಂವೇದನೆಯ ಅಭಿಮಾನಿಗಳನ್ನು ಕಾಡುತ್ತಿದೆ.

ಹಳ್ಳಿಗಾಡಿನ ಯುವತಿ ಯುವಕರು ತಮ್ಮದೇ ಆದ ಜೀವನಶೈಲಿಯಲ್ಲಿ ಬದುಕುತ್ತಿರುತ್ತಾರೆ. ಅವರಿಗೆ ಅವರದ್ದೇ ಸಂಸ್ಕೃತಿ ಇರುತ್ತೆ. ಜೀವಪ್ರೀತಿಯೇ ಆ ಸಂಸ್ಕೃತಿಯ ಜೀವಾಳ. ಮುಗ್ಧತೆ ಅಲ್ಲಿ ಸಲೀಸಾಗಿ ಕಾಣಸಿಗುವ ಗುಣಲಕ್ಷಣ. ‘ಪ್ರತಿಭೆಗೆ ಅವಕಾಶ’ ಎಂಬ ಹೆಸರಲ್ಲಿ ಅವರನ್ನು ಸರಕಾಗಿಸಿಕೊಳ್ಳುವುದು ನಿಜಕ್ಕೂ ಕ್ರೂರ ಜಗತ್ತಿನ ಹೇಯ ಕೃತ್ಯ. ಹನುಮಂತಣ್ಣ ಮೊದಲ ಬಾರಿ ಶರೀಫಜ್ಜನ ಹಾಡು ಹಾಡಿ ಈ ರಿಯಾಲಿಟಿ ಶೋಗೆ ಆಯ್ಕೆಯಾದಾಗಲೇ ನ್ಯಾಯಪಥ ಪತ್ರಿಕೆ ಎಚ್ಚರಿಕೆಯ ಬರಹ ಪ್ರಕಟಿಸಿತ್ತು. ಅವನ ಪ್ರತಿಭೆ ಬೆಳಗಲಿ, ಆದರೆ ಮುಗ್ಧತೆ ಸರಕಾಗದಿರಲಿ ಎಂದು ಆಶಿಸಿತ್ತು. ಇದೀಗ ಹನುಮಂತುಗಿಂತ ಚೆನ್ನಾದ ಹಾಡುಗಾರಿಕೆ ಇದ್ದವರನ್ನೂ ಹಿಮ್ಮೆಟ್ಟಿಸಿ ಆತನಿಗೆ ಫೈನಲ್‌ನಲ್ಲಿ ಜಾಗ ಕೊಟ್ಟಿರೋದನ್ನು ನೋಡಿದರೆ ನಿಜಕ್ಕೂ ಅದು ಅವನ ಪ್ರತಿಭೆಗೆ ಸಂದ ಗೌರವಕ್ಕಿಂತ ಹೆಚ್ಚಾಗಿ ಅವನನ್ನು ಫೈನಲ್‌ಗೆ ಟಿಆರ್‌ಪಿ ಸರಕಾಗಿ ಬಳಸಿಕೊಳ್ಳುವ ಟೀವಿಯವರ ಹುನ್ನಾರವಾಗಿ ಕಾಣಿಸುತ್ತೆ.

ಎಷ್ಟೇ ಆಗಲಿ ಅದು ಸಂಗೀತ ಸ್ಪರ್ಧೆ. ಅಲ್ಲಿ ಸಂಗೀತವೇ ಮುಖ್ಯವಾಗಬೇಕೆ ವಿನಃ ಬೇರೆಯ ಕಾರಣಗಳಲ್ಲ. ಹನುಮಂತನ ಆಯ್ಕೆಯಲ್ಲಿ ಈ ಬೇರೆ ಕಾರಣಗಳೇ ಎದ್ದು ಕಾಣುತ್ತಿರೋದು ವಿಪರ್ಯಾಸ. ಒಂದೊಮ್ಮೆ ಅಂತಹ ಯಾವ ಲೆಕ್ಕಾಚಾರಗಳೂ ಇಲ್ಲದೆ ತನ್ನ ಹಾಡಿನ ಪ್ರತಿಭೆಯಿಂದಲೇ ಹನುಮಂತು ಈ ಸ್ಥಾನಕ್ಕೇರಿದ್ದರೆ ಪತ್ರಿಕೆ ಆತನಿಗೆ ನಿಜವಾಗಲೂ ಶುಭ ಹಾರೈಸುತ್ತದೆ. ಯಾಕೆಂದರೆ, ಕೆಲ ಪ್ರಬಲ ಸಮುದಾಯಗಳಿಗಷ್ಟೇ ಸೀಮಿತವಾಗಿದ್ದ ಇಂಥಾ Sophisticated ಕಲೆಗಳ ಚಾರಿತ್ರಿಕ trait ಅನ್ನು ಮೀರಿ ಆತ ಬೆಳೆದಿರೋದು ನಿಜಕ್ಕೂ ಹೆಮ್ಮೆಯ ವಿಷಯ. ಆದಾಗ್ಯೂ ಈ ಫ್ಯಾಂಟಸಿ ಟೀವಿ ಜಗತ್ತಿನ ವ್ಯಾಮೋಹಗಳ ಒಳಗೆ, ನಿಭಾಯಿಸಲಾಗದ ‘ಯಶಸ್ಸಿನ’ ಉಸುಕುನೆಲದೊಳಗೆ ಇಂಥಾ ಪ್ರತಿಭೆಗಳು ಹೂತು ಹೋಗದಿರಲಿ ಎಂಬುದಷ್ಟೇ ನಮ್ಮ ಕಾಳಜಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...