Homeಅಂಕಣಗಳುಪುಟಕ್ಕಿಟ್ಟ ಪುಟಗಳುಬೆಂಗಳೂರಿನ ಹುಟ್ಟು, ಒಬ್ಬರಿಂದ ಮತ್ತೊಬ್ಬರ ಕೈಬದಲಾದುದರ ರೋಚಕ ಇತಿಹಾಸ ತಿಳಿಯಲು ಈ ಪುಸ್ತಕ ಓದಿ

ಬೆಂಗಳೂರಿನ ಹುಟ್ಟು, ಒಬ್ಬರಿಂದ ಮತ್ತೊಬ್ಬರ ಕೈಬದಲಾದುದರ ರೋಚಕ ಇತಿಹಾಸ ತಿಳಿಯಲು ಈ ಪುಸ್ತಕ ಓದಿ

ಹೈದರ್ ಅಲಿ ಮರಾಠರ ದಾಳಿಗಳನ್ನು ಎದುರಿಸಲು ಕೆಂಪೇಗೌಡರು ಮಣ್ಣಿಂದ ಕಟ್ಟಿದ್ದ ಕೋಟೆಯನ್ನು ಕಲ್ಲಿನಿಂದ ಮರು ನಿರ್ಮಾಣ ಮಾಡಿದ ಮೇಲೆ ಇದು ಸೇನೆಯ ಕೇಂದ್ರವಾಯಿತು.

- Advertisement -
- Advertisement -

(ಇದು ಬೆಂಗಳೂರು ಮಿರರ್ ಪತ್ರಿಕೆಗಾಗಿ ಗೌರಿಲಂಕೇಶ್ 25, ಜುಲೈ 2016ರಲ್ಲಿ ಮಾಡಿದ ಪುಸ್ತಕ ವಿಮರ್ಶೆಯ ಭಾವಾನುವಾದ)

“ಭಾರತದ ಅರಸೊತ್ತಿಗೆಗಳ ರಾಜಕಾರಣದಲ್ಲಿ ಬೆಂಗಳೂರೊಂದು ಚದುರಂಗದಾಟದ ಕಾಯಿಯಂತಾಗಿದ್ದೇ ಒಂದು ಕುತೂಹಲಕರ ವಿಷಯ. ಕೆಂಪೇಗೌಡರು ನಿರ್ಮಿಸಿದರು. ಬಿಜಾಪುರದ ಸುಲ್ತಾನರಿದನ್ನು ಗೆದ್ದರು. ಮೊಘಲರು ಮಾರಿದರು. ಚಿಕ್ಕದೇವರಾಜ ಒಡೆಯರ್ ಕೊಂಡರು. ಇತಿಹಾಸದ ಭಿನ್ನ ಕಾಲಘಟ್ಟಗಳಲ್ಲಿ ಇದು ಶಹಾಜಿ ಭೋಸ್ಲೇ ಮತ್ತು ಹೈದರ್ ಅಲಿಯವರಿಗೆ ವ್ಯಕ್ತಿಗತವಾಗಿ ಗಳಿಸಿದ ಜಹಗೀರ್ ಆಗಿತ್ತು. ಬ್ರಿಟಿಷ್ ರಾಜ್ ಕಾಲದಲ್ಲಿ ಇಂಗ್ಲೆಂಡಿನ ಗಮನವಾಗಿತ್ತು,” ಇವು ಮೈಸೂರಿನ ರಾಜ್ಯಪಾಲರಾದ ಧರ್ಮವೀರರವರು ಎಂ ಫಜ್ಲುಲ್ ಬರೆದಿರುವ ‘ದ ಸೆಂಚುರೀಸ್’ ಪುಸ್ತಕದ ಮುನ್ನುಡಿಯಲ್ಲಿ ಹೇಳಿರುವ ಮಾತುಗಳು. ಫಜ್ಲುಲ್ ಅವರ ಬಗ್ಗೆ ಹೆಚ್ಚು ತಿಳಿದಿಲ್ಲದಿದ್ದರೂ, 1970ರಲ್ಲಿ ಪ್ರಕಟವಾದ (ಈಗ ಪ್ರತಿಗಳು ದೊರಕುತ್ತಿಲ್ಲ) ಈ ಪುಸ್ತಕ, ಬೃಹತ್ತಾಗಿ ಬೆಳೆಯುತ್ತಿರುವ, ಆಕರ್ಷಕವಾದ ಮತ್ತು ಬಹುಭಾಷಿಕ ನಗರವಾದ ಬೆಂಗಳೂರನ್ನು ತಿಳಿಯಲು ಓದಲೇಬೇಕಾದ ಪುಸ್ತಕ.

ಒತ್ತೊತ್ತಾಗಿ ಬೆಳೆದಿರುವ ಕಾಡುಗಳಿಂದ ಮತ್ತು ಕುರುಚಲು ಕಳೆಗಳಿಂದ ತುಂಬಿದ್ದ ಈ ಪ್ರದೇಶವನ್ನು ಕೆಂಪೇಗೌಡರು ತಮ್ಮ ಕನಸಿನ ನಗರವನ್ನಾಗಿ ರೂಪಿಸಿದರು ಎಂಬುದೇನೋ ಎಲ್ಲರಿಗೂ ಗೊತ್ತು. ಆದರೆ, ಎತ್ತುಗಳು ನಮ್ಮ ಈ ನಗರದ ಮೊದಲ ದಾರಿಯನ್ನು ರೂಪಿಸಿದ್ದು ಎಂದು ಯಾರಿಗೆ ಊಹಿಸಲು ಸಾಧ್ಯ. ತಮ್ಮ ಜ್ಯೋತಿಷಿಗಳು ಗೊತ್ತುಪಡಿಸಿದ 1537ರ ಒಂದು ಶುಭ ಮುಂಜಾನೆಯಲ್ಲಿ ಗೌಡರು ಸಾಂಪ್ರದಾಯಿಕವಾಗಿ ನಿರ್ಮಾಣದ ಕೆಲಸವನ್ನು ಆರಂಭಿಸಿದ್ದರು. ನಗರದ ಹೃದಯಭಾಗವಾಗಿರುವ, ಈಗ ಯಾವುದನ್ನು ದೊಡ್ಡಪೇಟೆ ಚೌಕವೆನ್ನುತ್ತೇವೆಯೋ, ಅಲ್ಲಿ ಹಾಲು ಬಿಳುಪಿನ ನಾಲ್ಕು ಜೊತೆ ಎತ್ತುಗಳು, ಸಿಂಗರಿಸಿದ ನೇಗಿಲುಗಳಿಂದ ನಾಲ್ಕೂ ದಿಕ್ಕುಗಳಿಗೆ ಮುಖ ಮಾಡಿ ಚಲಿಸುತ್ತಾ ಉತ್ತಿದವು. ಹಾಗೆ ನಾಲ್ಕು ದಿಕ್ಕುಗಳಿಗೆ ಮುಖ ಮಾಡಿ ಉತ್ತಲ್ಪಟ್ಟ ಕೇಂದ್ರಭಾಗದಿಂದಲೇ ನಾಲ್ಕು ಮುಖ್ಯ ನಗರಗಳು ತಲೆಯೆತ್ತಿದವು. ಬೆಂಗಳೂರಿನ ಹಳೆಯ ರಸ್ತೆಗಳನ್ನು ಗಮನಿಸಿ. ಚಿಕ್ಕಪೇಟೆ ಮತ್ತು ದೊಡ್ಡಪೇಟೆಯ ರಸ್ತೆಗಳು ಪೂರ್ವದಿಂದ ಪಶ್ಚಿಮಕ್ಕೆ, ಹಲಸೂರು ಗೇಟಿಂದ ಸೊಂಡೇಕೊಪ್ಪ ಗೇಟಿಗಾದರೆ, ಉತ್ತರದಿಂದ ದಕ್ಷಿಣಕ್ಕೆ ಯಲಹಂಕ ಗೇಟಿನಿಂದ ಆನೇಕಲ್ ಗೇಟಿಗೆ ರಸ್ತೆಗಳಾದವು. ಈಗ ಇಕ್ಕಟ್ಟೆನಿಸುವ ದಾರಿಗಳು ಈಗಲೂ ಬೆಂಗಳೂರಿನ ಸದಾ ಚಟುವಟಿಕೆಯಿಂದ ಕೂಡಿರುವ ವಾಣಿಜ್ಯದ ಕೇಂದ್ರವಾಗಿವೆ.

ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಕೆಂಪೇಗೌಡರು ಯಲಹಂಕದಲ್ಲಿದ್ದ ತಮ್ಮ ರಾಜಧಾನಿಯನ್ನು ಬೆಂಗಳೂರಿಗೆ ಬದಲಿಸಿ ಮಣ್ಣಿನ ಕೋಟೆಯನ್ನೂ ಕೂಡ ಕಟ್ಟಿಸಿದರು. ಆಗಲೇ ಇದು ಯಶಸ್ವೀ ವಾಣಿಜ್ಯ ನಗರಿಯಾಗಿ ಇವರ ಕೀರ್ತಿ ಹಬ್ಬಿತು. ಇದರಿಂದ ಪ್ರಭುಗಳು ತಾವು ಸಾಮಂತರೆಂಬುವ ಚೌಕಟ್ಟಿನಿಂದಾಚೆಗೂ ಒಂದು ಹೆಜ್ಜೆ ಇಟ್ಟರು. ಟಂಕಸಾಲೆಯನ್ನು ಸ್ಥಾಪಿಸಿ ತಾವೇ ವೀರಭದ್ರ ವರಹವೆಂದು ನಾಣ್ಯವನ್ನು ಚಲಾವಣೆಗೆ ತಂದರು. ಇದು ವಿಜಯನಗರದ ಆಗಿನ ಅರಸು ಸದಾಶಿವ ರಾಯನನ್ನು ಕೆರಳಿಸಿತು. ಇದು ಕೆಂಪೇಗೌಡರ ಬಂಧನಕ್ಕೆ ಕಾರಣವಾಗಿ ಐದು ವರ್ಷಗಳ ಕಾಲ ಕಾರಾಗೃಹದಲ್ಲಿರಬೇಕಾಯಿತು. ಸದಾಶಿವರಾಯನ ನಂತರ ಪಟ್ಟಕ್ಕೆ ಬಂದ ರಾಮರಾಯ. ಆಗ ಅಹಮದ್ ನಗರ, ಬಿಜಾಪುರ ಮತು ಗೋಲ್ಕಂಡದ ಅರಸರು ಒಟ್ಟಾಗಿ ವಿಜಯನಗರದ ಮೇಲೆ ದಾಳಿ ಮಾಡುವ ಭೀತಿಯಿಂದ ತಮ್ಮ ಅವರು ಖಜಾನೆಯನ್ನು ಹಿಗ್ಗಿಸಿಕೊಳ್ಳಬೇಕಾಗಿತ್ತು. ಹಾಗಾಗಿ ಭಾರೀ ಮೊತ್ತದ ಹಣವನ್ನು ಸಂದಾಯ ಮಾಡುವ ಷರತ್ತಿನ ಮೇಲೆ ಕೆಂಪೇಗೌಡರನ್ನು ಬಿಡುಗಡೆ ಮಾಡಿದರು.

ಹಿರಿಯ ಕೆಂಪೇಗೌಡರ ಮಗ ಇಮ್ಮಡಿ ಕೆಂಪೇಗೌಡರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದ್ದೇ ಅಲ್ಲದೇ ಪ್ರಖ್ಯಾತವಾದ ನಾಲ್ಕು ಗೋಪುರಗಳನ್ನು ಕಟ್ಟಿಸಿದರು. ಅವರು ಮಹಾನ್ ಯೋಧರಾಗಿದ್ದರೂ ಬಿಜಾಪುರ ಸುಲ್ತಾನರ ವಿರುದ್ಧವಾಗಿ ಹೋರಾಡಲಾಗಲಿಲ್ಲ. ಬಿಜಾಪುರದ ಸುಸಜ್ಜಿತ ಸೇನೆಯಿಂದ ಕೋಟೆಯ ದ್ವಾರಗಳನ್ನು ತೆರೆಯಲು ಒತ್ತಡ ತಂದಾಗ ವಿಧಿಯಿಲ್ಲದೇ ವಿಜಯಿಗಳಿಗೆ ಬೆಂಗಳೂರನ್ನು ಒಪ್ಪಿಸಿ ಮಾಗಡಿಗೆ ಸರಿಯಬೇಕಾಯಿತು.

ಕುತೂಹಲಕರವಾದ ಸಂಗತಿಯೆಂದರೆ, ಛತ್ರಪತಿ ಶಿವಾಜಿಯ ತಂದೆ ಶಹಜಿ ಭೋನ್‍ಸ್ಲೇ ಬಿಜಾಪುರ ಸೇನೆಯ ಮುಂದಾಳಾಗಿದ್ದವರು. ಶಹಜಿಯ ಶೌರ್ಯದಿಂದ ಸಂಪ್ರೀತನಾದ ಎರಡನೆಯ ಅಲಿ ಆದಿಲ್ ಷಾ ಬೆಂಗಳೂರನ್ನು ಜಹಗೀರಾಗಿ ಶಹಜಿಗೇ ಕೊಟ್ಟರು. ಇದರಿಂದಾಗಿ ಶಹಜಿಯ ಇಬ್ಬರು ಮಕ್ಕಳು ಶಿವಾಜಿ ಮತ್ತು ವೆಂಕೋಜಿ ಇಬ್ಬರೂ ಬೆಂಗಳೂರಲ್ಲಿ ಬೆಳೆದರು. ಶಹಜಿಯ ಮರಣಾನಂತರ ಶಿವಾಜಿಗೆ ಪುಣೆಯ ಭಾಗವೂ, ವೆಂಕೋಜಿಗೆ ಬೆಂಗಳೂರಿನ ಭಾಗವೂ ಲಭಿಸಿತು. ಸ್ವಯಂ ಸೇನಾನಿಯಾಗಿದ್ದ ವೆಂಕೋಜಿಯು ತಂಜಾವೂರನ್ನು ವಶಪಡಿಸಿಕೊಂಡು ತನ್ನ ಕೇಂದ್ರವನ್ನು ಅಲ್ಲಿಗೆ ವರ್ಗಾಯಿಸಲು ಆಲೋಚಿಸಿದರು. ತನ್ನ ತುಂಬಿದ ಕೈಗಳಿಂದಾಗಿ ಬೆಂಗಳೂರಿನ ಬಿರುಸಿನ ಚಟುವಟಿಕೆಗಳನ್ನು ನಿರ್ವಹಿಸುವ ಒತ್ತಡವನ್ನು ತಾಳದೇ ಇದನ್ನು ಚಿಕ್ಕದೇವರಾಜ ಒಡೆಯರಿಗೆ ಮೂರು ಲಕ್ಷ ರೂಪಾಯಿಗಳ ರಾಯಧನಕ್ಕೆ ಮಾರುವ ನಿರ್ಧಾರ ಮಾಡಿದರು.

ಬೆಂಗಳೂರಿನೊಂದಿಗೆ ಬಹಳ ಭಾವನಾತ್ಮಕ ಸಂಬಂಧವಿದ್ದ ಶಿವಾಜಿಗೆ ವೆಂಕೋಜಿಯ ಆಲೋಚನೆ ತಿಳಿದು ಭಲೇ ಕೋಪ ಬಂತು. ಬೆಂಗಳೂರನ್ನು ಮಾರದಿರಲು ತಮ್ಮ ಸೋದರನನ್ನು ಕೋರಿಕೊಂಡರು. ವೆಂಕೋಜಿ ಮತ್ತು ಒಡೆಯರ್ ನಡುವೆ ಮಾತುಕತೆಗಳು ನಡೆಯುತ್ತಿರುವಾಗಲೇ ಶಿವಾಜಿಯ ದೇಹಾಂತ್ಯವಾಯಿತು. ಮೊಘಲರು ಮತ್ತು ಮರಾಠರಿಬ್ಬರೂ ಬೆಂಗಳೂರನ್ನು ವಶಪಡಿಸಿಕೊಳ್ಳುವ ಇರಾದೆಯಲ್ಲಿದ್ದರು. ಆದರೆ, ಮರಾಠರ ದುರದೃಷ್ಟಕ್ಕೆ ಮೊಘಲರ ಸೇನೆ ಮುಂದಾಗಿ ಬಂತು ಮತ್ತು 1687ರಲ್ಲಿ ವೆಂಕೋಜಿಯನ್ನು ಪರಾಜಯಗೊಳಿಸಿತು.

ಹಸನ್ ಗುರುತಿಸುವಂತೆ ಕಾಸ್ಮಾಪಾಲಿಟನ್ (ಸಮದರ್ಶಿ ಅಥವಾ ವಿಶ್ವಪ್ರಜೆ) ಗುಣ ಈ ನಗರದ ಚರಿತ್ರೆಯಲ್ಲೇ ಬೇರುಬಿಟ್ಟಿದೆ. ಮೊಘಲರ ಅಧಿಕಾರಿಗಳು ಮತ್ತು ಯೋಧರು ಪುಶ್ತು, ಪಂಜಾಬಿ, ಗುಜರಾತಿ, ರಾಜಸ್ತಾನಿ, ಮೊಘಲಾಯಿ ಮತು ಪಾರ್ಸಿ ಭಾಷೆಗಳನ್ನು ಆಡುತ್ತಿದ್ದರು. ಸ್ಥಳೀಯರು ಮತ್ತು ಹೊರಗಿಂದ ಬಂದವರಿಗೆ ಸಂಪರ್ಕ ಭಾಷೆಯಾಗಿದ್ದದ್ದು ದಕ್ಷಿಣದಲ್ಲಿ ದಖನಿ ಎಂದು ಕರೆಯಿಸಿಕೊಳ್ಳಲ್ಪಡುವ ರೆಖ್ತಾ ಮತ್ತು ವಿಂಧ್ಯ ಪ್ರಾಂತ್ಯವನ್ನು ದಾಟಿ ರೂಪುಗೊಂಡಿದ್ದ ಉರ್ದು. ಮೊಘಲರು ಬೆಂಗಳೂರಿನಲ್ಲಿ ತಮ್ಮ ಚಟುವಟಿಕೆಗಳಲ್ಲಿ ನಿರತವಾಗಿರುವಾಗಲೇ ಒಡೆಯರ್ ತಮ್ಮ ಬೆಂಗಳೂರು ಕೊಳ್ಳುವ ಪ್ರಸ್ತಾಪವನ್ನು ಮತ್ತೆ ಮುಂದಿಟ್ಟರು. ಆಗ 1690ರಲ್ಲಿ ಮೊಘಲರು ಒಡೆಯರಿಗೆ, ಮೊದಲು ವೆಂಕೋಜಿಯ ಜೊತೆ ಮಾತಾಡಿದ್ದ ಮೊತ್ತಕ್ಕೇ ಮಾರಿದರು.

ಚಿಕ್ಕದೇವರಾಜ ಒಡೆಯರ್ ಕೂಡಾ ಕೆಂಪೇಗೌಡರಂತೆ ಬೆಂಗಳೂರಿನ ಅಭಿವೃದ್ಧಿಗೆ ಹಾತೊರೆದರು. ಆದರೆ ಅವರ ಮರಣಾನಂತರ ತಮ್ಮ ನೆರೆಹೊರೆಯ ಪ್ರಾಂತ್ಯಗಳ ನಿರಂತರ ದಾಳಿ ಮತ್ತು ಕಿರುಕುಳಗಳಿಂದ ಮೈಸೂರು ಸೊರಗಿತು. ಆಗ ಮೈಸೂರು ಅರ್ಕಾಟಿನ ನವಾಬನಿಗೆ ನಾಲ್ಕು ಕೋಟಿಗಳ ಬಾಕಿಯನ್ನು ಸಲ್ಲಿಸಬೇಕಿತ್ತು, ಸಲಾಬತ್ ಜಂಗ್ 56 ಲಕ್ಷ ರೂಪಾಯಿಗಳನ್ನು ಕಸಿದುಕೊಂಡ. ಪೇಶ್ವೆ ಬಾಲಾಜಿ ರಾವ್ ಒತ್ತಾಯಪೂರ್ವಕವಾಗಿ 32 ಲಕ್ಷ ರೂಪಾಯಿಗಳನ್ನು ಪಡೆದರು. ಒಡೆಯರ್ ಅರಸೊತ್ತಿಗೆಯು ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವಾಗ ನೆರವಿಗೆ ಬಂದಿದ್ದು ಪರಾಕ್ರಮಿ ಯೋಧ ಹೈದರ್ ಅಲಿ. ಮತ್ತೊಮ್ಮೆ ಮರಾಠ ಸೈನ್ಯ ಮೈಸೂರಿನ ಮೇಲೆ ದಾಳಿ ಮಾಡಿದಾಗ ಎದುರಿಸಿದ್ದು ಇದೇ ಹೈದರ್ ಅಲಿ. ತಮ್ಮ ಅರಸೊತ್ತಿಗೆಯನ್ನು ಕಾಪಾಡಿದ್ದಕ್ಕೆ ಸಂತುಷ್ಟಗೊಂಡ ಮೈಸೂರಿನ ಅರಸರು ಫತೇ ಹೈದರ್ ಬಹಾದ್ದೂರ್ ಎಂದು ಬಿರುದು ನೀಡಿ ಗೌರವಿಸಿ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳನ್ನು ಜಹಗೀರಾಗಿ ನೀಡಿದರು. ಹೈದರ್ ಅಲಿ ಮರಾಠರ ದಾಳಿಗಳನ್ನು ಎದುರಿಸಲು ಕೆಂಪೇಗೌಡರು ಮಣ್ಣಿಂದ ಕಟ್ಟಿದ್ದ ಕೋಟೆಯನ್ನು ಕಲ್ಲಿನಿಂದ ಮರು ನಿರ್ಮಾಣ ಮಾಡಿದ ಮೇಲೆ ಇದು ಸೇನೆಯ ಕೇಂದ್ರವಾಯಿತು. ಶಸ್ತ್ರಾಸ್ತ್ರಗಳು ಮತ್ತು ಯುದ್ಧೋಪಕರಣಗಳ ತಯಾರಿಕೆಗಳಾಗತೊಡಗಿದವು.

ನಂತರ ಬಂದ ಬ್ರಿಟಿಷರು ಬೆಂಗಳೂರಿನ ಮಹತ್ವವನ್ನು ಅರಿತು ಅದನ್ನು ವಶಪಡಿಸಿಕೊಳ್ಳಲು ಯತ್ನಿಸಿದರು. ಮೊದಲಿನ ಪ್ರಯತ್ನಗಳು ವಿಫಲವಾದರೂ 1791ರಲ್ಲಿ ಮಾಡಿದ ಮಹಾಯುದ್ಧದಲ್ಲಿ ಬೆಂಗಳೂರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ಸು ಸಾಧಿಸಿದರು. ಹಸನ್ ದಾಖಲಿಸುವಂತೆ ಈ ಯುದ್ಧ ಅದೆಷ್ಟು ಭೀಕರವಾಗಿತ್ತೆಂದರೆ ಕೋಟೆಯ ವಿಸ್ತಾರದ ಪ್ರದೇಶಗಳು ಮತ್ತು ಹಳೆಯ ಪಟ್ಟಣ ಜರ್ಜರಿತವಾಗಿ ಅಕ್ಷರಶಃ ಸ್ಮಶಾನವಾಗಿತ್ತು. ಆದರೆ ಒಂದು ವರ್ಷ ತಮ್ಮ ಅಧೀನದಲ್ಲಿಟ್ಟುಕೊಂಡಿದ್ದವರು ನಂತರ ಶ್ರೀರಂಗಪಟ್ಟಣದ ಸಂಧಾನದಂತೆ ಟಿಪ್ಪುವಿಗೆ ಮರಳಿ ನೀಡಬೇಕಾಯಿತು.

1799ನಲ್ಲಿ ಟಿಪ್ಪುವಿನ ಮರಣಾನಂತರ ಬೆಂಗಳೂರನ್ನು ಒಡೆಯರವರ ಅಧೀನಕ್ಕೆ ನೀಡಲಾಯಿತು. 1809ರಲ್ಲಿ ಬ್ರಿಟಿಷರು ಬೆಂಗಳೂರು ನಗರದಲ್ಲಿ ಸೇನೆಯ ದಂಡುಪ್ರದೇಶವನ್ನು (ಕಂಟೋನ್ಮೆಂಟ್) ನಿರ್ಮಿಸಿದರು. ಈ ದಂಡು ಪ್ರದೇಶ ವಿಸ್ತಾರವಾದಂತೆ ನಗರದ ಭಾಗವಾಗಿಬಿಟ್ಟಿತು. ಇಲ್ಲೊಂದು ವಿಲಕ್ಷಣ ಸನ್ನಿವೇಶವಿತ್ತು. ಅದೇನೆಂದರೆ, ಮೈಸೂರು ಮಹಾರಾಜರು ನಗರ ಭಾಗದ ಮುಖ್ಯಸ್ಥರಾದರೆ, ದಂಡುಪ್ರದೇಶದ ಯಜಮಾನಿಕೆ ಬ್ರಿಟಿಷರಲ್ಲಿಯೇ ಇತ್ತು. ಸ್ವಾತಂತ್ರ್ಯ ಹೋರಾಟವು ತೀವ್ರತೆಯನ್ನು ಪಡೆದುಕೊಳ್ಳುತ್ತಿದ್ದ ಸಮಯವದು. ಮಹಾರಾಜರು ದಂಡುಪ್ರದೇಶವೂ ತಮ್ಮ ಅಧಿಪತ್ಯಕ್ಕೇ ಒಳಪಡಬೇಕೆಂದು ಒತ್ತಾಯಿಸತೊಡಗಿದರು. ಭಾರತವು ಸ್ವಾತಂತ್ರ್ಯದ ಹೊಸ್ತಿಲಿನಲ್ಲಿರುವಾಗಲೇ 1947ನೇ ವರ್ಷದಲ್ಲೇ ಜುಲೈ 26ರಂದು ಬ್ರಿಟಿಷರು ದಂಡುಪ್ರದೇಶವನ್ನು ಮಹಾರಾಜರಿಗೆ ನೀಡಿದರು. ಎರಡು ವರ್ಷಗಳ ತರುವಾಯ, 1948ರಲ್ಲಿ ಕಂಟೋನ್ಮೆಂಟ್ ಪ್ರದೇಶವು ಬೆಂಗಳೂರು ನಗರದೊಳಗೇ ಸೇರಲ್ಪಟ್ಟು ಬೆಂಗಳೂರು ಮುನ್ಸಿಪಲ್ ಕಾರ್ಪೋರೇಶನ್ ರಚನೆಯಾಯಿತು.

ಇಲ್ಲಿಗೆ ಗೌರಿ ಲಂಕೇಶ್ ಪುಸ್ತಕದ ಬಗ್ಗೆ ಬರೆಯುವಲ್ಲಿ ಲೇಖನಿಗೆ ವಿರಾಮ ನೀಡುತ್ತಾರೆ.

175 ಪುಟಗಳ ಈ ಪುಸ್ತಕದಲ್ಲಿ ಎಂ ಫಜ್ಲುಲ್ ಹಸನ್ ಹಲವಾರು ಹಳೆಯ ಚಿತ್ರಗಳ ದಾಖಲೆಗಳನ್ನು ನೀಡುತ್ತಾರೆ. ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಂತಹ ಐತಿಹಾಸಿಕ ಮಹತ್ವದ ಅನೇಕ ದೇವಾಲಯಗಳ ಚರಿತ್ರೆಯನ್ನೂ, ಬೆಂಗಳೂರಿನ ಪ್ರಖ್ಯಾತ ಕರಗವು ಮೈದಳೆದಿರುವುದನ್ನೂ ವಿವರಿಸುತ್ತಾರೆ. ಬೆಂಗಳೂರಿನ ಮುಖ್ಯ ಆಯುಕ್ತರ ಕಚೇರಿಗಳು ಮತ್ತು ಇತರ ಸಾರ್ವಜನಿಕ ಕಚೇರಿಗಳು ಸ್ಥಾಪಿತವಾಗಿ ಬೆಳೆದುಬಂದ ರೀತಿಯನ್ನು ವಿವರಿಸುತ್ತಾರೆ. ಬೆಂಗಳೂರು ಉದ್ಯಾನ ನಗರವಾಗಿರುವುದರ ಐತಿಹಾಸಿಕ ವಿವರಗಳೊಂದಿಗೆ ಪುಸ್ತಕವನ್ನು ಮುಗಿಸುತ್ತಾರೆ. ಒಟ್ಟಾರೆ ನಾವಿರುವ ನೆಲದ ಕತೆ ಅದೆಷ್ಟು ಥ್ರಿಲ್ ಆಗಿದೆ ಎಂದು ಪುಳಕಗೊಳ್ಳಲು ಪುಸ್ತಕ ಪ್ರೇರೇಪಿಸುತ್ತದೆ. ಜಯನಗರದ ಹಿಸ್ಟಾರಿಕಲ್ ಪಬ್ಲಿಕೇಶನ್ಸ್ 1970ರಲ್ಲಿ ಇದನ್ನು ಪ್ರಕಟಿಸಿದ್ದು ಸದ್ಯಕ್ಕೆ ಪ್ರತಿಗಳು ಸಿಗುವ ಅವಕಾಶದ ಬಗ್ಗೆ ತಿಳಿಯದು. ಆದರೆ Digital Rare Book ನ ರೇರ್ ಬುಕ್ ಸೊಸೈಟಿ ಆಫ್ ಇಂಡಿಯಾದ ಅಂತರ್ಜಾಲದಲ್ಲಿ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ಇಡೀ ಪುಸ್ತಕ ಓದಬಹುದು.


ಇದನ್ನೂ ಓದಿ: ಪುಟಕಿಟ್ಟ ಪುಟಗಳು: ದಿವ್ಯ ಜೀವನಕೆ ಪ್ರವೇಶಿಕೆ ಎಂಬ ಆಪ್ತ ಸಮಾಲೋಚನೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...