Homeಅಂಕಣಗಳುಸರ್ಕಾರಿ ನೌಕರರ ರಾಜಕೀಯ ಒಲವಿನ ಬಗ್ಗೆ ಸರ್ಕಾರದ ನಿರ್ಬಂಧ ತಪ್ಪು: ಎಚ್.ಎಸ್ ದೊರೆಸ್ವಾಮಿ

ಸರ್ಕಾರಿ ನೌಕರರ ರಾಜಕೀಯ ಒಲವಿನ ಬಗ್ಗೆ ಸರ್ಕಾರದ ನಿರ್ಬಂಧ ತಪ್ಪು: ಎಚ್.ಎಸ್ ದೊರೆಸ್ವಾಮಿ

ಯಾವ ಪಕ್ಷಕ್ಕೂ ಅವರು ಸದಸ್ಯರಾಗಕೂಡದು ಎಂಬುದು ಸರಿ. ಆದರೆ ಅವರ ಮನೆಯವರ ಮೇಲೆಲ್ಲ ರಾಜ್ಯಾಂಗವಿರೋಧಿ ಕಾನೂನನ್ನು ಹೇರಲು ಮೋದಿ, ಯಡಿಯೂರಪ್ಪನವರ ಸರ್ಕಾರಕ್ಕೆ ಯಾವ ಹಕ್ಕಿದೆ?

- Advertisement -
- Advertisement -

ಹಿಂದೆ ಎಂದೂ ಇಲ್ಲದಷ್ಟು ಅಶಾಂತಿ ಈಗ ರಾಷ್ಟ್ರವನ್ನು ಆವರಿಸಿದೆ. ಇತ್ತೀಚಿನ ಘಟನೆಗಳು ಹಾಗೂ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ದಿನಕ್ಕೊಂದು ರಾಜಕೀಯ ತಿಕ್ಕಾಟಗಳು ಹುಟ್ಟಿಕೊಳ್ಳುತ್ತಲೇ ಇವೆ. ಕಾರ್ಯಾಂಗ ಈಗ ಬಹುಮಟ್ಟಿಗೆ ಆಡಳಿತಾಂಗದ ಗುಲಾಮನಾಗುತ್ತಿದೆ. Enforcement Directorateನ್ನು ಮೋದಿ ಸರ್ಕಾರ ಕಬ್ಜಾ ಮಾಡಿಬಿಟ್ಟಿದೆ. ಮೋದಿ ಆಣತಿಯಂತೆ ಅದು ಕೆಲಸ ಮಾಡುತ್ತಿದೆ. ಸಿಬಿಐನ್ನು ಸರ್ವೋಚ್ಚ ನ್ಯಾಯಾಲಯವೇ ಒಮ್ಮೆ ‘ಪಂಜರದಗಿಣಿ’ ಎಂದು ಬಣ್ಣಿಸಿದೆ.

ಈಚೆಗೆ ಎಲ್ಲ ಸರ್ಕಾರಿ ನೌಕರರನ್ನೂ ಅವರ ಮನೆಯೊಳಗಿರುವ ಎಲ್ಲ ಪರಿವಾರದವರೂ ಯಡಿಯೂರಪ್ಪ ಸರ್ಕಾರಕ್ಕೆ ಅಧೀನರಾಗಿರಬೇಕೆಂದು ಒಂದು ಸರ್ಕ್ಯುಲರ್ ಹೊರಡಿಸಲಾಗಿದೆ. ರಾಜಕೀಯ ಸಭೆಗಳಿಗೆ ಹೋಗಕೂಡದು. ಯಾವ ರಾಜಕೀಯ ಪಕ್ಷಕ್ಕೂ ಒಲವು ತೋರಬಾರದು ಎಂದು ಈ ಫರ್ಮಾನು ಎಚ್ಚರಿಸುತ್ತದೆ. ಅಷ್ಟೇ ಅಲ್ಲ, ಅವರ ಮನೆಯವರು ರಾಜಕೀಯ ಕುರಿತು ಮಾತನಾಡಬಾರದು. ರಾಜಕೀಯ ಪಕ್ಷಗಳ ಸದಸ್ಯರಾಗಕೂಡದು, ಪ್ರಚಾರಕ್ಕೂ ಹೋಗಬಾರದು ಎಂದು ಎಚ್ಚರಿಕೆ ನೀಡಿ ಅವರ ಸ್ವಾತಂತ್ರ್ಯಹರಣ ಮಾಡುವ ರಾಜ್ಯಾಂಗವಿರೋಧಿ ನಿಲುವು ತಳೆದಿದೆ. ಸರ್ಕಾರಿ ನೌಕರರು ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸಕೂಡದು,

PC : Mumbai Mirror

ಯಾವ ಪಕ್ಷಕ್ಕೂ ಅವರು ಸದಸ್ಯರಾಗಕೂಡದು ಎಂಬುದು ಸರಿ. ಆದರೆ ಅವರ ಮನೆಯವರ ಮೇಲೆಲ್ಲ ರಾಜ್ಯಾಂಗವಿರೋಧಿ ಕಾನೂನನ್ನು ಹೇರಲು ಮೋದಿ ಸರ್ಕಾರಕ್ಕೆ, ಯಡಿಯೂರಪ್ಪನವರ ಸರ್ಕಾರಕ್ಕೆ ಯಾವ ಹಕ್ಕಿದೆ? ಸರ್ಕಾರಿ ನೌಕರನ ಮನೆಯ ಜನರೆಲ್ಲ ಸರ್ಕಾರಿ ಅಧಿಕಾರಿಗಳಲ್ಲ, ಅವರಿಗೆ ಕೆಲವು ಹಕ್ಕುಗಳಿವೆ. ತಮಗೆ ಸರಿತೋರಿದ ಪಕ್ಷವನ್ನು ಬೆಂಬಲಿಸುವ ಅವರು ನಡೆಸುವ ಸಭೆಸಮ್ಮೇಳನಗಳಿಗೆ ಹೋಗುವ ಅಧಿಕಾರವಿದೆ. ವಾಕ್ ಸ್ವಾತಂತ್ರ್ಯವಿದೆ, ವ್ಯಕ್ತಿ ಸ್ವಾತಂತ್ರ್ಯವಿದೆ. ಈ ಎಲ್ಲ ಹಕ್ಕುಗಳನ್ನು ಮೊಟಕುಗೊಳಿಸುವ ಹಕ್ಕನ್ನು ಮೋದಿಗೆ, ಯಡಿಯೂರಪ್ಪನವರಿಗೆ ಕೊಟ್ಟವರು ಯಾರು?

ಅಷ್ಟೇ ಅಲ್ಲ, ಸರ್ಕಾರಿ ನೌಕರನೂ ಮೊದಲು ಭಾರತದ ಪ್ರಜೆ. ಅವನು ಸರ್ಕಾರಿ ಅಧಿಕಾರಿಯಾದೊಡನೆ ಅವನು ಎಲ್ಲ ಪ್ರಜಾ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. ಇಂದಿರಾಗಾಂಧಿ ತುರ್ತುಪರಿಸ್ಥಿತಿ ಘೋಷಿಸಿದಾಗ ಇಂತಹದ್ದೇ ಒಂದು ಪ್ರಸಂಗ ನಡೆಯಿತು. ಎಂ.ಸಿ ಚಾಗ್ಲಾರವರು ಆಗ ಮಹಾರಾಷ್ಟ್ರ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದರು. ಅವರು ಜೆಪಿಯವರ ಒಂದು ಸಾರ್ವಜನಿಕ ಸಭೆಗೆ ಹೋಗಿದ್ದರು ಎಂದು ಇಂದಿರಾಗಾಂಧಿ ಸರ್ಕಾರ ಚಾಗ್ಲಾರವರ ಮೇಲೆ ಒಂದು ಕೇಸು ಹಾಕಿತು. ಚಾಗ್ಲಾರವರು ಕಾನೂನನ್ನು ಧಿಕ್ಕರಿಸಿ ನಡೆದುಕೊಂಡಿದ್ದಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಕೋರಿ ಅರ್ಜಿ ಸಲ್ಲಿಸಲಾಯಿತು. ಚಾಗ್ಲಾರವರ ವಕೀಲರು ಅವರ ನಡಾವಳಿಯನ್ನೂ ಸಮರ್ಥಿಸುತ್ತಾ ಹೀಗೆ ವಾದ ಮಾಡಿದರು: ಚಾಗ್ಲಾರವರು ಜೆಪಿ ಅವರ ಬಹಿರಂಗ ಸಭೆಗೆ ಹೋಗಿದ್ದು ನಿಜ. ಜೆಪಿಯವರ ಭಾಷಣವನ್ನು ಚಾಗ್ಲಾರವರು ಕೇಳಿದ್ದು ಅಪರಾಧವಲ್ಲ. ಒಬ್ಬ ರಾಷ್ಟ್ರನಾಯಕ ಮಾತನಾಡಿದರೆ, ಅವರೇನು ಮಾತಾಡಿದರು ಎಂದು ತಿಳಿಯಲು ಅವರು ನಡೆಸಿಕೊಡುವ ಸಾರ್ವಜನಿಕ ಸಭೆಗೆ ಹೋಗಿ ಅದನ್ನು ಆಲಿಸುವುದು ಒಂದು ಕ್ರಮ. ಅದೇ ಭಾಷಣದ ಮುಖ್ಯ ವಿಚಾರಗಳನ್ನು ಪತ್ರಿಕೆಗಳು ಅಚ್ಚು ಮಾಡುತ್ತವೆ. ಅದನ್ನು ಓದಿ ತಿಳಿದುಕೊಳ್ಳುವುದು ಎರಡನೆಯ ಮಾರ್ಗ. ಮೂರನೆಯದೆಂದರೆ ದೃಶ್ಯಮಾಧ್ಯಮಗಳಲ್ಲಿ ಮಾಡಲಾಗುವ ಜೆಪಿ ಭಾಷಣವನ್ನು ಆಲಿಸುವುದು. ಈ ಮೂರು ರೀತಿಯಲ್ಲಿ ಭಾಷಣದ ಸಾರಾಂಶವನ್ನು ತಿಳಿಯಲು ಅವಕಾಶವಿದೆ. ಜೆಪಿ ಭಾಷಣ ಕೇಳಲು ಹೋಗದೆಯೂ ಜೆಪಿ ಏನು ಭಾಷಣ ಮಾಡಿದರು ಎಂದು ತಿಳಿಯಲು ಈ ಎರಡು ಮಾಧ್ಯಮಗಳಿವೆ. ಸರ್ಕಾರದ ನಿಲುವು ಜೆಪಿ ಭಾಷಣದ ಕೇಳಬಾರದು ಎಂಬುದಾದರೆ ಸರ್ಕಾರಿ ನೌಕರರು ಭಾಷಣ ಕೇಳಲೂ ಹೋಗಬಾರದು, ಪತ್ರಿಕೆ ಓದಲೂಬಾರದು, ದೃಶ್ಯಮಾಧ್ಯಮ ವೀಕ್ಷಿಸಲುಬಾರದು ಎಂದು ಆಜ್ಞೆಮಾಡಿ ಎಂದು ಚಾಗ್ಲಾರವರ ವಕೀಲರು ವಾದ ಮಂಡಿಸಿದರು. ಚಾಗ್ಲಾರವರ ಮೇಲೆ ಹಾಕಿದ್ದ ಕೇಸು ವಜಾ ಆಯಿತು. ಮೋದಿ ಸರ್ಕಾರ ಮತ್ತು ಯಡಿಯೂರಪ್ಪನವರ ಸರ್ಕಾರ ಸರ್ಕಾರಿ ನೌಕರರ ಮೇಲೆ ಹೇರಲು ರಚಿಸಿರುವ ಕಾನೂನನ್ನು ರದ್ದುಮಾಡಿ ಎಂದು ಆಗ್ರಹಪೂರ್ವಕವಾಗಿ ಒತ್ತಾಯ ಮಾಡುತ್ತೇನೆ.

ಮೋದಿ ಸರ್ಕಾರ ನೈತಿಕತೆಗೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬಿಡಿಕಾಸಿನ ಕಿಮ್ಮತ್ತನ್ನೂ ಕೊಡುತ್ತಿಲ್ಲ. ಕಾಶ್ಮೀರಕ್ಕೆ ಇದ್ದ 370ನೇ ವಿಧಿಯ ವಿಶೇಷ ಅಧಿಕಾರವನ್ನು ಅನೀತಿಯಿಂದ ಕಾಶ್ಮೀರ ಪ್ರಜೆಗಳ ಅಭಿಪ್ರಾಯವನ್ನೂ ಪಡೆಯದೆ ಪಾರ್ಲಿಮೆಂಟಿನಲ್ಲಿ ಚರ್ಚೆಗೂ ಅವಕಾಶ ನೀಡದೆ ಕಿತ್ತುಹಾಕಿರುವುದು ಇದಕ್ಕೆ ಒಂದು ಜ್ವಲಂತ ಉದಾಹರಣೆ.

ಆಡಳಿತ ಕುಸಿದು ಬಿದ್ದಿರುವುದಕ್ಕೆ ಹತ್ತಾರು ಉದಾಹರಣೆಗಳನ್ನ ಕೊಡಬಹುದು. ಹೆಣ್ಣುಮಕ್ಕಳು, ಸಣ್ಣಮಕ್ಕಳು, ದಲಿತರು, ಮುಸ್ಲಿಮರು ಇವರ ಮೇಲೆ ನೂರಾರು ದೌರ್ಜನ್ಯ ಪ್ರಕರಣಗಳು ದೇಶದಾದ್ಯಂತ ಅದರಲ್ಲೂ ಮುಖ್ಯವಾಗಿ ಉತ್ತರಪ್ರದೇಶ ಮತ್ತು ಮಂಗಳೂರಿನಲ್ಲಿ ದಿನನಿತ್ಯ ನಡೆಯುತ್ತಿವೆ. ಅಪೌಷ್ಠಿಕತೆಯಿಂದ, ಹಸಿವಿನಿಂದ ಸಾಯುವ ಗರ್ಭಿಣಿಯರು, ಸಣ್ಣಮಕ್ಕಳು ಲೆಕ್ಕವಿಲ್ಲದಷ್ಟು. ಮೋದಿಯವರು ಕೋಟ್ಯಂತರ ರೂಪಾಯಿಗಳ ಸಾರ್ವಜನಿಕ ಹಣವನ್ನು ವಿದೇಶ ಪ್ರವಾಸಗಳಿಗೆ ಬಳಸಿಕೊಂಡಿದ್ದಾರೆ. ಪತ್ರಿಕೆಗಳಿಗೆ ಮೋದಿಯವರ ಸರ್ಕಾರ ಕೋಟಿ ಕೋಟಿ ರೂ ಪಾಯಿಗಳನ್ನು ತಮ್ಮ ಪ್ರಜಾರಕ್ಕೋಸ್ಕರ ಸುರಿದಿದೆ. ದೃಶ್ಯಮಾಧ್ಯಮಗಳು ತಮ್ಮ ಪ್ರಜಾಪ್ರಭುತ್ವದ ಕಾವಲುಗಾರನಂತೆ ವರ್ತಿಸುವುದು ಬಿಟ್ಟು ಸಾಕುನಾಯಿಗಳಾಗಿ ಪರಿವರ್ತನೆಗೊಂಡಿವೆ. ಮಾಧ್ಯಮಗಳು ರಾಜಕೀಯದಲ್ಲಿ ತೊಡಗಿಕೊಂಡು ಮೋದಿಯವರ ಹಿಂಬಾಲಕರಂತೆ ವರ್ತಿಸುತ್ತಿವೆ.

PC : The Asian Age

ಭ್ರಷ್ಟ ಅಧಿಕಾರಿಗಳು ಲಂಚದ ರೂಪದಲ್ಲಿ ಲಕ್ಷಾಂತರ ಪಡೆದು ಐಷಾರಾಮಿ ಜೀವನ ನಡೆಸುತ್ತಿದ್ದರೆ, ಅವರನ್ನು ಹೊರಗೆಡಹಲಾದರೂ, ಅಂತಹ ಅಧಿಕಾರಿಗಳಿಗೆ ಸರ್ಕಾರ ಕೊಡುವ ಶಿಕ್ಷೆ, ವರ್ಗಾವಣೆ, ಸಸ್ಪೆನ್‍ಷನ್ ಮಾತ್ರ. ಆಡಳಿತ ಕುಸಿದು ಬಿದ್ದರೂ ಅದನ್ನು ಸದೃಢಗೊಳಿಸಲು ಯಾವ ಕಠಿಣ ಕ್ರಮಕೈಗೊಳ್ಳದೆ, ನೆಪಮಾತ್ರಕ್ಕೆ ಒಂದು ವಿಚಾರಣಾ ಸಮಿತಿ ರಚಿಸಿ ಸುಮ್ಮನಾಗುವುದು ಇಂದಿನ ಸರ್ಕಾರದ ನೀತಿಯಾಗಿದೆ. ಹಿಂಸಾಚಾರ, ಅನ್ಯಾಯ ಮತ್ತು ಆಡಳಿತ ವೈಫಲ್ಯಗಳು ಒಂದಾದಮೇಲೆ ಒಂದು ನಡೆಯುತ್ತಿದ್ದರೂ ವೈಫಲ್ಯಕ್ಕೆ ಮೂಲಕಾರಣ ಏನು ಎಂದು ಆತ್ಮವಿಮರ್ಶೆ ಮಾಡಿಕೊಳ್ಳಲು ಸರ್ಕಾರ ತಯಾರಿಲ್ಲ. ಐದು ವರ್ಷಕ್ಕೊಮ್ಮೆ ಬದಲಾಗುವ ಸರ್ಕಾರಕ್ಕೆ ಕಾಯಂ ಆಗಿ ಇರುವ ಅಧಿಕಾರಿಗಳು ಹೆದರಿ, ಕಾನೂನು ರೀತ್ಯಾ ಕೆಲಸ ಮಾಡುವುದನ್ನು ಕೈಬಿಟ್ಟು, ಆಳುವ ಜನರ ಆಜ್ಞಾಧಾರಕರಂತೆ ವರ್ತಿಸುವ ಅಧಿಕಾರಿಗಳಿಂದ ನ್ಯಾಯ ದೊರಕುವುದಾದರೂ ಸಂಭವನೀಯವೇ?

ಅಧಿಕಾರಿ ಕಾನೂನುರೀತ್ಯಾ ಕೆಲಸ ಮಾಡಬೇಕು. ಪ್ರಧಾನಿ ಅಥವ ಮಂತ್ರಿ ಒಂದು ಕಾನೂನುಬಾಹಿರ ಬೇಡಿಕೆಯ ಅರ್ಜಿಗೆ ನಿಮ್ಮ ಸಮ್ಮತಿ ಸೂಚಿಸಿ ಅರ್ಜಿದಾರನ ಕೆಲಸ ಮಾಡಿಕೊಡಿ ಎಂದರೆ ಇಂತಹ ಅನ್ಯಾಯದ ಕೆಲಸ ನಾನು ಮಾಡುವುದಿಲ್ಲ ಎಂದು ಹೇಳುವ ಎದೆಗಾರಿಕೆ ಸರ್ಕಾರಿ ಅಧಿಕಾರಿಗೆ ಇರಬೇಕು. ಆದರೆ ಇಂದಿನ ಆಡಳಿತ ಹೀಗೆ ನಡೆಯುತ್ತಿಲ್ಲ. ಸರ್ಕಾರ ನಡೆಸುವವರ ರಾಜಕೀಯ ಜಗ್ಗಾಟದ ವೈಪರೀತ್ಯ ಅವ್ಯಾಹತವಾಗಿ ನಡೆಯುತ್ತಿರುವಾಗ ಸರ್ಕಾರಿ ಅಧಿಕಾರಿಗಳು ರಾಜ್ಯಾಂಗಕ್ಕೆ ಅಂಟಿಕೊಳ್ಳುವ ತೀರ್ಮಾನ ಕೈಗೊಳ್ಳಬೇಕು. ಇದನ್ನು ಉಪೇಕ್ಷ ಮಾಡಿದರೆ ಅವರು ಚುನಾಯಿತ ಸರ್ವಾಧಿಕಾರದ ಭಾಗವಾಗಿಬಿಡುವ ಸಾಧ್ಯತೆಗಳಿವೆ. ಆದ್ದರಿಂದ ಅವರು ಅಲಿಪ್ತರಾಗಿದ್ದುಕೊಂಡು ತಮ್ಮ ಅಂತರಾತ್ಮ ಒಪ್ಪುವ ರೀತಿ ಕಾರ್ಯಪ್ರವರ್ತಕರಾಗಬೇಕು. ಉನ್ನತಮಟ್ಟದ ಅಧಿಕಾರದಲ್ಲಿರುವ ಸರ್ಕಾರಿ ಅಧಿಕಾರಿಗಳು ಮುಖ್ಯವಾಗಿ ಸರ್ಕಾರ ನಡೆಸುವವರ ಎಳೆದಾಟ, ಸೆಣಸಾಟಗಳಿಗೆ ಜಗ್ಗದೆ ಅವರಿಗಿರುವ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು, ರಾಜ್ಯಾಂಗದ ಆಶಯಗಳನ್ನು ಕಾರ್ಯಗತಗೊಳಿಸುವ ಪವಿತ್ರ ಕೆಲಸದಲ್ಲಿ ತೊಡಗಿರೆಂದು ವಿನಂತಿ ಮಾಡಿಕೊಳ್ಳುತ್ತೇನೆ.


ಇದನ್ನೂ ಓದಿ: ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಅಮಿತ್ ಶಾ ಪಣ: ಹಗಲುಗನಸು ಎಂದ ಟಿಎಂಸಿ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...