Homeಅಂಕಣಗಳುರಾಜಕೀಯಾರ್ಥಿಕ ವಿಶ್ಲೇಷಕ ಧೃವ್ ರಾಠೀ ಬಗ್ಗೆ ನಿಮಗೆಷ್ಟು ಗೊತ್ತು?

ರಾಜಕೀಯಾರ್ಥಿಕ ವಿಶ್ಲೇಷಕ ಧೃವ್ ರಾಠೀ ಬಗ್ಗೆ ನಿಮಗೆಷ್ಟು ಗೊತ್ತು?

- Advertisement -
- Advertisement -

ಮುತ್ತುರಾಜ್ |

ಪುಲ್ವಾಮ ದಿ ಹಾರ್ಸ್ ರಿಯಾಲಿಟಿ! ಎಂಬ ಟೈಟಲ್‍ನಲ್ಲಿ ಪುಲ್ವಾಮ ಘಟನೆಯ ಸತ್ಯಾಸತ್ಯತೆಗಳ ಬಗ್ಗೆ ಅದರ ಸುತ್ತಾ ಎದ್ದಿರುವ ಪ್ರಶ್ನೆಗಳ ಕುರಿತು ಮಾತನಾಡಿದ ಯುವಕನೊಬ್ಬ ವಿಡಿಯೋವೊಂದನ್ನು ಮಾಡಿ, 15 ದಿನಗಳ ಹಿಂದೆ ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡುತ್ತಾನೆ. ಅದನ್ನು ಎಷ್ಟು ಜನ ವೀಕ್ಷಣೆ ಮಾಡಿದ್ದಾರೆ ಗೊತ್ತಾ? ಬರೋಬ್ಬರಿ 41 ಲಕ್ಷ ಆ ವಿಡಿಯೋ ವೀಕ್ಷಿಸುವುದಲ್ಲದೇ ಅದು ಭಾರತದಲ್ಲೇ #3 ಆಗಿ ಟ್ರೆಂಡಿಂಗ್ ಆಗುತ್ತದೆ. ಈ ರೀತಿಯ 144 ವಿಡಿಯೋಗಳನ್ನು ಇದುವರೆಗೂ ತನ್ನ ಯೂ ಟೂಬ್ ಚಾನಲ್‍ನಲ್ಲಿ ಪೋಸ್ಟ್ ಮಾಡಿರುವ ಕೇವಲ 24 ವರ್ಷದ ಈ ಯುವಕನ ಯೂ ಟ್ಯೂಬ್ ಚಾನಲ್ ಅನ್ನು ಜಗತ್ತಿನಾದ್ಯಂತ ಹದಿನಾರು ಲಕ್ಷಕ್ಕೂ ಹೆಚ್ಚು ಜನ ಫಾಲೋ ಮಾಡುತ್ತಿದ್ದಾರೆ ಅಂದರೆ ನೀವು ನಂಬಲೇಬೇಕು.
ಆತನ ಹೆಸರು ಧೃವ್ ರಾಠೀ. ಹರಿಯಾಣದಲ್ಲಿ ಹುಟ್ಟಿ ಪ್ಲಸ್ ಟು ವರೆಗಿನ ಶಿಕ್ಷಣವನ್ನು ಪಡೆದ ನಂತರ, ಜರ್ಮನಿಯಲ್ಲಿ ಬಿ.ಇ ಮೆಕಾನಿಕಲ್ ಇಂಜಿನಿಯರ್ ಮುಗಿಸಿ ಸದ್ಯ ಮಾಸ್ಟರ್ಸ್ ಇನ್ ರಿನ್ಯುಬಲ್ ಎನರ್ಜಿ ಇಂಜಿನಿಯರಿಂಗ್ ಓದುತ್ತಿದ್ದಾನೆ. ಓದಿನ ನಡುವೆಯೇ ಸುಳ್ಳು ಸುದ್ದಿಗಳನ್ನು ಬಯಲು ಮಾಡುವುದು, ಪರಿಸರದ ಜಾಗೃತಿ ಮೂಡಿಸುವುದು, ಸಾಮಾಜಿಕ, ರಾಜಕೀಯ, ಆರ್ಥಿಕ ವಿಶ್ಲೇಷಣೆಗಳ ಕುರಿತು ಮುಖ್ಯವಾಗಿ ಮುಖ್ಯವಾಹಿನಿ ಮಾಧ್ಯಮ ಮಾತನಾಡದ ವಿಚಾರಗಳ ಕುರಿತು ವಿಡಿಯೋ ಮಾಡುವುದು ಇವನ ಕಾಯಕ. ಈತನ ವಿಡಿಯೋಗಳು ಲಕ್ಷಾಂತರ ಸಂಖ್ಯೆಯಲ್ಲಿ ವೀಕ್ಷಿಸಲ್ಪಟ್ಟು, ಸಾಮಾಜಿಕ ಜಾಲತಾಣಗಳಲ್ಲಿ ಈತನ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿಯುತ್ತಿದೆ.
ಈತನ ವಿಶೇಷತೆಯೇನು?
ಧೃವ್ ರಾಠೀ ವಿಡಿಯೋಗಳ ಬಗ್ಗೆ ಇಷ್ಟು ಮೆಚ್ಚುಗೆ ಬರಲು ಹಲವು ಕಾರಣಗಳಿವೆ. ಇಂದು ಮುಖ್ಯವಾಹಿನಿ ಮಾಧ್ಯಮಗಳೇ ಕೆಲವು ಪಕ್ಷಗಳ ವಕ್ತಾರರಂತೆ ವರ್ತಿಸಿ ನಾಚಿಕೆ ಮಾನಮರ್ಯಾದೆ ಇಲ್ಲದೇ ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿರುವುದರಿಂದ ಬಹಳಷ್ಟು ಪ್ರಜ್ಞಾವಂತರಿಗೆ ಪರ್ಯಾಯ ನಂಬಿಕಾರ್ಹ ಮೂಲಗಳ ಅಗತ್ಯ ಬಿದ್ದಿದೆ. ಅಂತಹ ನಂಬಿಕಾರ್ಹ ಮೂಲಗಳಾಗಿ ಈಗಾಗಲೇ ಪ್ರತೀಕ್ ಸಿನ್ಹಾ ನಡೆಸುವ ಆಲ್ಟ್ ನ್ಯೂಸ್, ಸಿದ್ದಾರ್ಥ್ ವರದರಾಜನ್‍ರವರ ವೈರ್.ಇನ್, ನ್ಯೂಸ್ ಲ್ಯಾಂಡ್ರಿ ಮುಂತಾದ ಜಾಲತಾಣಗಳು ಕೆಲಸ ಮಾಡುತ್ತಿವೆ. ಇವುಗಳ ಜೊತೆಗೆ ಯಾವುದೇ ವಿಷಯದ ಬಗ್ಗೆ ಎಲ್ಲಾ ಕೋನಗಳಿಂದ ಸಾಕಷ್ಟು ಅಧ್ಯಯನ ನಡೆಸಿ, ಅತ್ಯಂತ ಕಡಿಮೆ ಪದಗಳಲ್ಲಿ ಸುಲಲಿತವಾಗಿ ಮತ್ತು ಸರಳವಾಗಿ ಅಷ್ಟೇ ಪರಿಣಾಮಕಾರಿಯಾಗಿ ಹಿಂದಿ ಭಾಷೆಯಲ್ಲಿ ಬಹಳ ಆತ್ಮವಿಶ್ವಾಸದಿಂದ ಮಾತನಾಡಿ ವಿಡಿಯೋ ಎಡಿಟ್ ಮಾಡುವುದು ಧೃವ್ ರಾಠೀಯ ಅಗ್ಗಳಿಕೆ.
ಪೂರ್ವಗ್ರಹಪೀಡಿತರಾಗದೇ ಎಲ್ಲಾ ಸಿದ್ಧಾಂತಗಳನ್ನು ನೋಡುವುದು, ಯಾವುದೇ ಒಂದು ಪಕ್ಷಕ್ಕೆ ಅಂಟಿಕೊಳ್ಳದೇ ಎಲ್ಲಾ ಪಕ್ಷಗಳನ್ನು ಸಮಾನವಾಗಿ ವಿಮರ್ಶೆ ಮಾಡುವುದು, ಆ ಪಕ್ಷಗಳ ಮಾಡುವ ಒಳ್ಳೇಯ ಕೆಲಸಗಳನ್ನು ಮುಕ್ತಕಂಠದಿಂದ ಶ್ಲಾಘಿಸುವುದು ಧೃವ್ ರಾಠೀಯ ವಿಶೇಷತೆ. ಒಂದು ವಿಡಿಯೋ ಮಾಡಲು ಹೆಚ್ಚು ಕಮ್ಮಿ ಒಂದು ವಾರದಷ್ಟು ಸಮಯ ತೆಗೆದುಕೊಳ್ಳುವ ಈತ ಅರ್ಧಕ್ಕಿಂತ ಹೆಚ್ಚಿನ ಸಮಯವನ್ನು ಆ ವಿಷಯದ ಅಧ್ಯಯನಕ್ಕೆ ಮೀಸಲಿಡುತ್ತಾನೆ. ತನ್ನ ಐ ಫೋನ್ 8 ರಲ್ಲಿ ಸ್ವತಃ ರೆಕಾರ್ಡ್ ಮಾಡಿ ತಾನೇ ಎಡಿಟ್ ಮಾಡಿ ವಿಡಿಯೋ ತಯಾರಿಸುವುದು ಈತನ ಕುಶಲತೆಗೆ ಮತ್ತೊಂದು ಗರಿ. ವಿಡಿಯೋದ ಕ್ವಾಲಿಟಿ, ತನ್ನ ಸಮಚಿತ್ತದ ಮಾತಿಗೆ ಪೂರಕ ದಾಖಲೆಗಳ ಸ್ಲೈಡ್‍ಗಳು, ಸರಾಸರಿ 10 ನಿಮಿಷ ವಿಡಿಯೋ ಮಾಡುವುದು ಈ ಲಕ್ಷಣಗಳು ನೋಡುಗರಿಗೆ ಹೆಚ್ಚು ಇಷ್ಟವಾಗುತ್ತವೆ ಎನ್ನುವ ಸತ್ಯ ಧೃವ್‍ಗೆ ತಿಳಿದಿದೆ.
ಸಾರ್ವತ್ರಿಕ ಶಿಕ್ಷಣ, ಉತ್ತಮ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಕಾಳಜಿ ಈ ಮೂರು ಮುಖ್ಯ ವಿಷಯಗಳಿಗೆ ಒತ್ತುಕೊಡಬೇಕು ಎಂಬುದು ಈತನ ಆಶಯ. ಸಾಮಾಜಿಕ ಆರ್ಥಿಕ ಸರ್ವೇಗಳ ಆಧಾರದಲ್ಲಿ ಭಾರತದಲ್ಲಿ ಉತ್ತಮ ರಾಜ್ಯ ಯಾವುದು? ಪ್ರಪಂಚದಲ್ಲಿ ಉತ್ತಮ ರಾಷ್ಟ್ರ ಯಾವುದು ಎಂಬುದರ ಕುರಿತು ಉತ್ತಮ ವಿಶ್ಲೇಷಣೆಯ ವಿಡಿಯೋಗಳು ಈತನ ಬುಟ್ಟಿಯಲ್ಲಿವೆ.
ಬಹಳಷ್ಟು ಜನ ಇಂದು ಯಾವುದೇ ವಿಷಯದ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಬೇಕಾದರೆ ಸಾಕಷ್ಟು ಅಧ್ಯಯನ ನಡೆಸಬೇಕಾಗುತ್ತದೆ. ಅಷ್ಟು ಕಷ್ಟ ತೆಗೆದುಕೊಳ್ಳುವ ಬದಲು ಈತನ ವಿಡಿಯೋ ನೋಡಿದರೆ ಸಾಕು ಎನ್ನುವವರಿದ್ದಾರೆ. 2013ರಿಂದ ಈ ಯೂಟ್ಯೂಬ್ ಚಾನಲ್ ನಡೆಸುತ್ತಿರುವ ಧೃವ್ ರಾಠೀ ಪ್ರಚಲಿತ ವಿಷಯಗಳ ಬಗ್ಗೆಯೇ ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಿದ್ದಾರೆ. ಅಂದರೆ ಸಹಜವಾಗಿ ಪ್ರಸ್ತುತ ಮೋದಿ ಸರ್ಕಾರದ ಸುಳ್ಳುಗಳನ್ನು ಆಧಾರ ಸಮೇತ ಬಯಲು ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಭಕ್ತರು ಮಾಡುವ ಟ್ರೋಲ್‍ಗಳಿಗೆ ತಲೆಕೆಡಿಸಿಕೊಳ್ಳದ ಧೃವ್ ನಾನು ಬಾಬರ್ ಏನು ಮಾಡಿದ, ನೆಹರು ಏನು ಮಾಡಿದರು ಎಂಬುದರ ಮೇಲೆ ಸಮಯ ವ್ಯರ್ಥ ಮಾಡುವುದಿಲ್ಲ. ಮುಂದೆ ಯಾವುದೇ ಸರ್ಕಾರ ಬಂದರೂ ಅವರ ಮಾಡುವ ಕೆಲಸಗಳ ಆಧಾರದ ಮೇಲೆ ಒಬ್ಬ ಪ್ರಜೆಯಾಗಿ ಸರಿ ತಪ್ಪುಗಳನ್ನು ವಿಶ್ಲೇಷಿಸುತ್ತೇನೆ ಅನ್ನುತ್ತಾರೆ.
ಈತನಿಗೆ ಯಾರು ಫಂಡ್ ಮಾಡುತ್ತಾರೆ?
ಧೃವ್‍ನ ಎಲ್ಲಾ ವಿಡಿಯೋಗಳ ಕಮೆಂಟ್‍ಗಳಲ್ಲಿ ಒಂದು ಸಾಮಾನ್ಯವಾದುದಿರುತ್ತದೆ. ಅದು ಈತನಿಗೆ ಯಾರು ಫಂಡ್ ಮಾಡುತ್ತಾರೆ ಎಂಬುದಾಗಿರುತ್ತದೆ. ಈತನ ಮಾತುಗಳನ್ನು ಸಹಿಸದ ಕೆಲವರು ಇವನಿಗೆ ಕಾಂಗ್ರೆಸ್ ಫಂಡ್ ಮಾಡುತ್ತದೆ, ಆಮ್ ಆದ್ಮಿ ಪಾರ್ಟಿ ಫಂಡ್ ಮಾಡುತ್ತದೆ ಎಂದು ಆರೋಪ ಮಾಡುತ್ತಾರೆ. ಬಿಬಿಸಿ ಸೇರಿದಂತೆ ಹಲವು ವಾಹಿನಿಗಳಿಗೆ ನೀಡಿರುವ ಸಂದರ್ಶನದಲ್ಲಿ ಇದಕ್ಕೆ ಧೃವ್ ಸ್ಪಷ್ಟನೆ ನೀಡಿದ್ದಾರೆ. ಮೊದಲನೆಯದಾಗಿ ತನ್ನ ಓದಿಗಂತ ಆತನ ಕುಟುಂಬ ಹಣ ನೀಡಿದರೆ, ಆತನ ವಿಡಿಯೋಗಳಲ್ಲಿ ಬರುವ ಜಾಹೀರಾತು ವೀಕ್ಷಣೆಯ ಆಧಾರದಲ್ಲಿ ಯೂಟ್ಯೂಬ್ ಹಣ ನೀಡುತ್ತದೆ. (ಸರಾಸರಿ ಒಂದು ಲಕ್ಷ ಜಾಹೀರಾತು ವಿಡಿಯೋ ಮೇಲೆ ಕ್ಲಿಕ್ ಮಾಡಿದರೆ 100 ಡಾಲರ್) ಜೊತೆಗೆ ತನ್ನ ಕೆಲಸ ಇಷ್ಟವಾದಲ್ಲಿ ಪೇಟ್ರಿಯನ್.ಕಾಮ್ ಮೂಲಕ ಹಣ ನೀಡಿ ಬೆಂಬಲಿಸಿ ಎಂದು ಧೃವ್ ಮನವಿ ಕೂಡ ಮಾಡುತ್ತಾನೆ. ಯಾವ ಪಕ್ಷಗಳಿಂದಲೂ ಹಣ ಪಡೆಯಬಾರದು ಮತ್ತು ಜನರ ಹಣದಲ್ಲಿ ತನ್ನ ಕೆಲಸ ನಡೆಯಬೇಕು ಎಂಬುದು ಆತನ ಇಂಗಿತ.
ಬೆಂಬಲದ ಮಹಾಪೂರ
ಅತ್ಯಂತ ಕಡಿಮೆ ವಯಸ್ಸಿನಲ್ಲಿ ದೇಶಕ್ಕೆ ತುರ್ತಾಗಿರುವ ಅತಿ ಮಹತ್ವದ ಕೆಲಸ ಮಾಡುತ್ತಿರುವುದಕ್ಕಾಗಿ ಧೃವ್‍ರಾಠೀಗೆ ಬೆಂಬಲದ ಮಹಾಪೂರವೇ ಹರಿದುಬರುತ್ತಿದೆ. ಎನ್‍ಡಿಟಿವಿಯ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ತನ್ನ ಪ್ರೈಮ್‍ಟೈಮ್‍ನಲ್ಲಿ ಈತನ ಸಂದರ್ಶನ ಮಾಡಿದ್ದಾರೆ. ಉಳಿದಂತೆ ಖ್ಯಾತ ಪತ್ರಕರ್ತೆ ಮತ್ತು ಸಂಪಾದಕಿ ಫಯಾ ಡಿಸೋಜ, ಬಿಬಿಸಿ, ನ್ಯೂಸ್‍ಲಾಂಡ್ರಿ ಮುಂತಾದವರು ಈತನ ಸಂದರ್ಶನಗಳನ್ನು ಪ್ರಕಟಿಸಿದ್ದಾರೆ. ತನ್ನ ವಿಡಿಯೋಗಳಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಖ್ಯಾತಿಯಾಗಿರುವ ಬ್ರುಟ್ ಇಂಡಿಯಾ ಹಲವು ಜಾಗೃತಿ ವಿಡಿಯೋಗಳನ್ನು ಧೃವ್ ಸಹಯೋಗದಲ್ಲಿ ತಯಾರಿಸುತ್ತಿದೆ.
ಧೃವ್ ರಾಠೀ ಮಾತ್ರವಲ್ಲ
ಈ ರೀತಿ ಯೂಟ್ಯೂಬ್ ಚಾನಲ್ ವಿಡಿಯೋಗಳ ಮೂಲಕ ಜಾಗೃತಿ ಮೂಡಿಸುತ್ತಿರುವುದು ಧೃವ್ ಮಾತ್ರವಲ್ಲ. ನೂರಾರು ಜನ ಈ ರೀತಿಯ ಕೆಲಸದಲ್ಲಿ ತೊಡಗಿದ್ದಾರೆ. ಜೆಎನ್‍ಯು ಪ್ರಕರಣ ಮೂಲಕ ಬೆಳಕಿಗೆ ಬಂದು ತನ್ನ ಪ್ರಖರ ಭಾಷಣಗಳ ಮೂಲಕ ಪ್ರಸಿದ್ದರಾಗಿರುವ ಕನ್ನಯ್ಯ ಕುಮಾರ್ ಸಹ ತನ್ನೆಲ್ಲಾ ಭಾಷಣಗಳನ್ನು ಯೂಟ್ಯೂಬ್‍ಗೆ ಅಪ್‍ಲೋಡ್ ಮಾಡುತ್ತಾರೆ. ಸದ್ಯಕ್ಕೆ 10 ಲಕ್ಷ ಜನ ಇವರನ್ನು ಫಾಲೋ ಮಾಡುತ್ತಿದ್ದು ಲಕ್ಷಾಂತರ ಸಂಖ್ಯೆಯಲ್ಲಿ ಈತನ ಭಾಷಣಗಳನ್ನು ವೀಕ್ಷಿಸಿದ್ದಾರೆ. ಆಕಾಶ್ ಬ್ಯಾನರ್ಜಿ ಎಂಬುವವರು ಸಹ ತಮ್ಮ ವಿಶಿಷ್ಟ ಮ್ಯಾನರಿಸಂನ ಮೂಲಕ ಟ್ರೋಲ್ ಮಾಡುತ್ತಾರೆ. ಟಿಆರ್‍ಪಿ ಹಿಂದೆ ಬಿದ್ದು ಬರೀ ಸುಳ್ಳು ಹೇಳುವ ಟಿವಿ ಚಾನಲ್‍ಗಳ ನಡುವೆ ಇಂತಹವರ ಪ್ರಯತ್ನಗಳು ಖಂಡಿತ ಮೆಚ್ಚತಕ್ಕದ್ದು. ಈಗಲೇ ಯೂಟ್ಯೂಬ್ ಒಪನ್ ಮಾಡಿ ವಿಡಿಯೋ ನೋಡಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...