Homeಅಂಕಣಗಳುಮಹಾಮೃತ್ಯುಂಜಯ ಮಂತ್ರದ ತಾತ್ವಿಕತೆಯೆಂದರೆ ಲೌಕಿಕದಿಂದ ಅಲೌಕಿಕದೆಡೆಗೆ

ಮಹಾಮೃತ್ಯುಂಜಯ ಮಂತ್ರದ ತಾತ್ವಿಕತೆಯೆಂದರೆ ಲೌಕಿಕದಿಂದ ಅಲೌಕಿಕದೆಡೆಗೆ

ಹುಟ್ಟಿದ ಮೇಲೆ ನೈಸರ್ಗಿಕ ನಿಯಮವಾದ ಸಾವನ್ನು ಗೆಲ್ಲಲೆಂದಲ್ಲ, ಆದರೆ ಸಾವಿನ ಭಯವನ್ನು ಗೆಲ್ಲಲು’ ಎನ್ನುತ್ತದೆ ಈ ಮಂತ್ರ. ಸಾವಿಗೆ ಹೆದರುವುದು ಲೌಕಿಕ. ಸಾವಿನ ಭಯವಿಲ್ಲದಿರುವುದು ಅಲೌಕಿಕ ಮತ್ತು ತಾತ್ವಿಕ. ಮಂತ್ರವು ಮ್ಯಾಜಿಕಲ್ ಅಲ್ಲ, ಫಿಲಾಸಫಿಕಲ್

- Advertisement -
- Advertisement -

ಕೊರೊನಾದಿಂದ ಪಾರಾಗಲು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬೇಕೆಂದು ವಾಟ್ಸಪ್ಪು ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ನನ್ನ ಕಸಿನ್ ಒಬ್ಬಳೂ ಕೂಡಾ ನನಗೆ ಇದನ್ನು ಕಳುಹಿಸಿದ್ದಳು. ಅವಳಿಗೂ ಮತ್ತು ಇನ್ನಿತರರಿಗೂ ನಾನು ಕಂಡುಕೊಂಡಿರುವ ಈ ಮಹಾಮೃತ್ಯುಂಜಯ ಮಂತ್ರದ ಒಳನೋಟವನ್ನು ಹಂಚಿಕೊಳ್ಳಲು ಇದನ್ನು ಬರೆಯಬೇಕಾಯ್ತು.

“ಓಂ ತ್ಯಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ, ಊರ್ವಾರುಕಮಿವ ಬಂಧನಾತ್
ಮೃತ್ಯೋರ್ಮುಕ್ಷೀಯಮಾಮೃತಾತ್”

ಮಂತ್ರವು ಸುಂದರವೂ ತಾತ್ವಿಕವೂ ಆಗಿದೆ. ‘ಹುಟ್ಟಿದ ಮೇಲೆ ನೈಸರ್ಗಿಕ ನಿಯಮವಾದ ಸಾವನ್ನು ಗೆಲ್ಲಲೆಂದಲ್ಲ, ಆದರೆ ಸಾವಿನ ಭಯವನ್ನು ಗೆಲ್ಲಲು’ ಎನ್ನುತ್ತದೆ ಈ ಮಂತ್ರ. ಸಾವಿಗೆ ಹೆದರುವುದು ಲೌಕಿಕ. ಸಾವಿನ ಭಯವಿಲ್ಲದಿರುವುದು ಅಲೌಕಿಕ ಮತ್ತು ತಾತ್ವಿಕ. ಮಂತ್ರವು ಮ್ಯಾಜಿಕಲ್ ಅಲ್ಲ. ಫಿಲಾಸಫಿಕಲ್. ಸಾಲುಗಳ ನಡುವೆ ಮತ್ತು ಪ್ರತಿಮೆಗಳ ಮೀರಿ ಅರ್ಥವನ್ನು ಗ್ರಹಿಸುವ ಅಗತ್ಯವಿರುತ್ತದೆ. ಏಕೆಂದರೆ ಮಂತ್ರಗಳೆಂದರೆ ಒಗಟುಗಳೂ ಕೂಡಾ. ಪ್ರತಿಯೊಂದು ಮಂತ್ರಕ್ಕೂ ಹಿನ್ನೆಲೆಯಿರುತ್ತದೆ. ತಾತ್ವಿಕತೆ ಇರುತ್ತದೆ. ತಾತ್ವಿಕತೆಯೇ ಆಸೆ ಮತ್ತು ಭಯಗಳಿಂದ ಲೌಕಿಕದಲ್ಲಿ ನರಳುವವರಿಗೆ ಶಕ್ತಿಯನ್ನು ಕೊಡುವುದು. ಮಹಾಮೃತ್ಯುಂಜಯ ಮಂತ್ರವೂ ಅದೇ ರೀತಿ.

ಋಗ್ವೇದದಲ್ಲಿಯೇ (7.59.12) ಈ ಮಂತ್ರ ಇರುವುದೆಂದಾದರೂ ನಮಗೆ ಈ ಮಂತ್ರದ ಸಂಬಂಧ ಸಿಗುವುದು ಮಾರ್ಕಂಡೇಯ ಋಷಿಯಿಂದ. ಮೃಕಂಡು ಮುನಿದಂಪತಿಯರಿಗೆ ಮಕ್ಕಳಿಲ್ಲದೇ ತಪಸ್ಸನ್ನಾಚರಿಸಿ ಶಿವನಿಂದ 12 ವರ್ಷಗಳ ಅಲ್ಪಾಯುಷಿ ಮಗ ಮಾರ್ಕಂಡೇಯನನ್ನು ಪಡೆದರು. ಆಯಸ್ಸು ತೀರುವ ಸಮಯಕ್ಕೆ ಮಾರ್ಕಂಡೇಯನಿಗೆ ವಿಷಯ ತಿಳಿದು ಮಹಾಮೃತ್ಯುಂಜಯ ಮಂತ್ರೋಪದೇಶ ಪಡೆದು ತನ್ನನ್ನು ಮರಣದಿಂದ ಕಾಪಾಡು ಎಂದು ಶಿವನಿಗೆ ತಪಸ್ಸನ್ನು ಮಾಡುವನು. ಕಾಲದ ನಿಯಮಾನುಸಾರ ಆಯಸ್ಸು ಮುಗಿದಾಗ ಯಮನು ಬಾಲಕನನ್ನು ಕರೆದೊಯ್ಯಲು ಬರುವನು. ಆದರೆ ಶಿವನು ಬಾಲಕನನ್ನು ರಕ್ಷಿಸುವನು. ಇದು ಸಾಯಲಿದ್ದ ಹುಡುಗ ತನ್ನ ಶಿವಭಕ್ತಿಯಿಂದ ಸಾವನ್ನು ಗೆದ್ದ ಒಂದೆಳೆ ಕತೆ.

ಈ ಕತೆಯಿಂದಲೇ ಮಹಾಮೃತ್ಯುಂಜಯ ಮಂತ್ರದ ಒಗಟನ್ನು ಬಿಡಿಸಬಹುದಾದರೂ ಮೊದಲು ಮಂತ್ರದ ಅರ್ಥ ತಿಳಿದುಕೊಳ್ಳೋಣ.

ಮಧುರವಾದ ಸುವಾಸನೆಯುಳ್ಳ ಮತ್ತು ಶಕ್ತಿಯನ್ನು ವೃದ್ಧಿಸುವಂತಹ ಮುಕ್ಕಣ್ಣನಿಗೆ ಶರಣಾಗುತ್ತೇನೆ. ಸೌತೇಕಾಯಿಯು ಸಹಜವಾಗಿ ತನ್ನ ಬಳ್ಳಿಯಿಂದ ಕಳಚಿಕೊಳ್ಳುವಂತೆ ಮೃತ್ಯುವಿನ ಬಂಧನದಿಂದ ಕಳಚಿಕೊಳ್ಳಬೇಕೇ ಹೊರತು ಅಮೃತತ್ವದಿಂದಲ್ಲ.

ವಿಶ್ವದ ಮತ್ತು ಅಸ್ತಿತ್ವದಲ್ಲಿರುವ ಪ್ರತಿಯೊಂದರ ಲಯದ ಪ್ರತಿಮಾ ರೂಪ ಮುಕ್ಕಣ್ಣನಾದ ಶಿವ. ಲಯವೆಂದರೆ ಅದು ನಾಶವೆಂದರ್ಥವಲ್ಲ. ಲಯದಲ್ಲಿಯೇ ಸ್ಥಿತಿಯಿದೆ ಮತ್ತು ಮರುಹುಟ್ಟಿದೆ. ಅಸ್ತಿತ್ವದಲ್ಲಿ ಯಾವುದೂ ಹುಟ್ಟುವುದಿಲ್ಲ ಮತ್ತು ನಾಶಗೊಳ್ಳುವುದೂ ಇಲ್ಲ, ಬರಿದೇ ರೂಪಾಂತರಗೊಳ್ಳುತ್ತಿರುತ್ತದೆ ಎಂಬ ವೈಜ್ಞಾನಿಕ ಮತ್ತು ತಾತ್ವಿಕ ಗ್ರಹಿಕೆಯಂತೆ ನಾಶವೆಂಬುದು ಇಲ್ಲ. ಅಲ್ಲಿರುವುದು ಬರಿದೇ ರೂಪಾಂತರಗೊಳ್ಳುತ್ತಿರುವ ಪ್ರಕ್ರಿಯೆ. ಸೃಷ್ಟಿ ಸ್ಥಿತಿ ಮತ್ತು ಲಯಗಳೆಂಬ ಮೂರೂ ಈ ರೂಪಾಂತರದ ಪ್ರಕ್ರಿಯೆಯ ಆಯಾಮಗಳು. ಸಾವಿಗೂ ಈ ಮೂರೂ ಆಯಾಮವಿದೆ. ಹಾಗಾಗಿಯೇ ಲಯದ ಪ್ರತಿಮಾರೂಪವಾದ ಶಿವನಿಗೆ ಮೂರು ಕಣ್ಣುಗಳು. ಈ ಸಾವಿನ ಯಮಕ್ಕೆ (ನಿಯಮ) ಅದರದೇ ನೈಸರ್ಗಿಕ ಸೌಂದರ್ಯವಿದೆ. ಹುಟ್ಟು ಬದುಕು ಮತ್ತು ಸಾವು ಈ ಮೂರೂ ಪ್ರಕೃತಿಯಲ್ಲಿ ಸತ್ಯವೂ ಶಿವವೂ (ಮಂಗಳಮಯವೂ) ಮತ್ತು ಸುಂದರವೂ ಆಗಿದೆ. ಹಾಗಾಗಿ ಸಾವು ಎಂದಕೂಡಲೇ ಭಯದಿಂದ ಅದಕ್ಕೆ ಪ್ರತಿರೋಧ ಒಡ್ಡುವ ಹೋರಾಟದ ಬದಲಿಗೆ ಸೌತೇಕಾಯಿಯ ಬಳ್ಳಿಯಲ್ಲಿ ಕಾಯಿಯು ಮಾಗಿದಾಗ ತಂತಾನೇ ತೊಟ್ಟು ಕಳಚಿಕೊಳ್ಳುವಂತೆ ಮಾನಸಿಕವಾಗಿ ಪ್ರಶಾಂತರಾದಾಗ ಭಯವು ಇಲ್ಲವಾಗುತ್ತದೆ. ಮೃತ್ಯುವಿನ ಭಯವಿಲ್ಲದವನಿಗೆ ಅಮೃತತ್ವದ ದರ್ಶನವಾಗುತ್ತದೆ. ಅವನು ಹುಟ್ಟುವುದು, ಇರುವುದು ಮತ್ತು ಇಲ್ಲವಾಗುವುದು ಈ ಮೂರನ್ನು ಮೀರಿದ ಅಸ್ತಿತ್ವದಲ್ಲಿ ಎರಡಿಲ್ಲದಂತೆ ಒಂದಾಗಿರುತ್ತಾನೆ. ಅದೇ ಅಮೃತತ್ವ.

ಬದುಕಿಗೆ ಆಸೆ ಪಡುವುದು ಮತ್ತು ಸಾವಿಗೆ ಹೆದರುವುದು ಲೌಕಿಕವೆಂದು ಗ್ರಹಿಸಿದ ಮಂತ್ರದೃಷ್ಟಾರರು ನೀಡಿದ ಮಾರ್ಗೋಪಾಯ ಈ ಮಂತ್ರ. ಸಾವಿನ ಭಯವನ್ನು ಮೀರಿ, ಆಸೆ ಮತ್ತು ಭಯಗಳಿಂದ ಆವರಿಸಿ ಲೌಕಿಕದಲ್ಲಿರುವವರಿಗೆ ಅಲೌಕಿಕವಾದ ತಾತ್ವಿಕತೆಯನ್ನು ಪರಿಚಯಿಸಿ, ರೂಪಾಂತರದ ಪ್ರಕ್ರಿಯೆಯಲ್ಲಿರುವ ಆ ಹಂತವನ್ನೂ ಪ್ರಶಾಂತವಾಗಿ ಒಪ್ಪುವುದನ್ನು ತಿಳಿಹೇಳುವ ಮಂತ್ರವಿದು.

ಈ ಮಂತ್ರವು ತನ್ನ ಅರಿವನ್ನು ಬಸವಣ್ಣನವರ ವಚನಗಳಲ್ಲಿ ಹರಳಿನಂತೆ ಮತ್ತಷ್ಟು ಅರಳುತ್ತದೆ.

“ಅಮೃತವ ಕಡೆವಲ್ಲಿ, ವಿಷವಟ್ಟಿ ಸುಡುವಲ್ಲಿ ದೇವರೆಂಬವರೆತ್ತ ಹೋದರೆನಿಂ ಭೋ” ಎಂದು ಪ್ರಶ್ನಿಸುವ ಬಸವಣ್ಣ, ತಾತ್ವಿಕವಾಗಿ ಹಾಗೂ ಭಾವನಾತ್ಮಕವಾಗಿ ಬಲಗೊಳ್ಳದ ಹೊರತು ದೇವರ ಭಜನೆ ಕೀರ್ತನೆಗಳಿಂದ ಏನೂ ಪ್ರಯೋಜನವಿಲ್ಲ ಎಂದು ಹೇಳುತ್ತಾ, “ನಾದಪ್ರಿಯ ಶಿವನೆಂಬರು” ವಚನದಲ್ಲಿ ನಾದವ ನುಡಿಸಿದ ರಾವಣನಿಗೆ ಅರೆ ಆಯುಷ್ಯವಾಯ್ತು, ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು ಎನ್ನುತ್ತಾ ಭಕ್ತಿಪ್ರಿಯ ನಮ್ಮ ಕೂಡಲ ಸಂಗಮದೇವ ಎಂದು ಅನಂತ ಅಸ್ತಿತ್ವವನ್ನು ತಮ್ಮ ಕೂಡಲ ಸಂಗಮದೇವನೆಂದು ಸಂಕೇತಿಸುತ್ತಾರೆ. ಹಾಗೆಯೇ, “ಭಕ್ತಿಯೆಂಬ ಪೃಥ್ವಿಯ ಮೇಲೆ” ವಚನದಲ್ಲಿ ಒಬ್ಬ ವ್ಯಕ್ತಿಯು ತನ್ನ ಭಕ್ತಿ ಮತ್ತು ವಿರಕ್ತಿಯ ಸಂಸ್ಕಾರದಿಂದ ಪಕ್ವವಾಗಿ ಬಾಳುತ್ತಾ ಕೊನೆಗೆ “ನಿಷ್ಫತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ” ಎಂಬ ರೂಪಕದಲ್ಲಿ ಸಾವನ್ನು ಪ್ರಸ್ತುತಪಡಿಸುತ್ತಾರೆ. ಬಳ್ಳಿಯಿಂದ ಸೌತೇಕಾಯಿ ಕಳಚಿಕೊಂಡು ಬೀಳುವುದು ಅಣ್ಣನ ವಚನದಲ್ಲಿ ಹಣ್ಣು ತೊಟ್ಟು ಕಳಚಿ ಬೀಳುವುದರಲ್ಲಿ ನನಗೆ ಸಾಮ್ಯತೆ ಕಾಣುತ್ತದೆ. ಎರಡರ ತಾತ್ವಿಕ ಭಾವ ಒಂದೇ ಆಗಿದೆ.

ಬಸವಣ್ಣನವರು ತಾತ್ವಿಕವಾಗಿ ಅದೆಷ್ಟೇ ಗಟ್ಟಿಯಾಗಿದ್ದರೂ ತಮ್ಮ ಪ್ರಸ್ತುತಿಯಲ್ಲಿ ಸಾತ್ವಿಕತನವನ್ನು ಸಾಮಾನ್ಯವಾಗಿ ಬಿಟ್ಟುಕೊಡುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಕಟು ಮತ್ತು ಬಿರುಸಿನ ಧ್ವನಿಗಳು ಅಲ್ಲಲ್ಲಿ ಕಂಡರೂ ಅವರದು ಸಾತ್ವಿಕ ಮಂಡನೆಯೇ. ಆದರೆ ಲದ್ದೆಯ ಸೋಮಣ್ಣ ಎಂಬ ಶರಣರು ಇದೇ ತಾತ್ವಿಕತೆಯನ್ನು ಹೊಂದಿದ್ದರೂ ಲೌಕಿಕ ಭಾಷೆಯಲ್ಲಿಯೇ ವಿಷಯವನ್ನು ಮಂಡಿಸುತ್ತಾರೆ.

“ಆವ ಕಾಯಕವಾದಡೂ ಸ್ವಕಾಯಕವ ಮಾಡಿ” ಎನ್ನುವ ತಮ್ಮ ವಚನದಲ್ಲಿ “ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ” ಎನ್ನುವ ಗಟ್ಟಿ ಮತ್ತು ನೇರ ಧ್ವನಿ. ಇದನ್ನೇ ತಮ್ಮ ದನಿಯಲ್ಲಿ ಡಿವಿಜಿಯವರೂ ಕೂಡಾ ಧ್ವನಿಸುವರು.

ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು
ದೊರೆತುದ ಹಸಾದವೆಂದುಣ್ಣು ಗೊಣಗಿಡದೆ
ಧರಿಸು ಲೋಕದ ಭಾರವ ಪರಮಾರ್ಥವನು ಬಿಡದೆ
ಹೊರಡು ಕರೆ ಬರಲ್ ಅಳದೆ ಮಂಕುತಿಮ್ಮ.

ದೊಡ್ಡದು ಚಿಕ್ಕದು ಅನ್ನದೇ ಕಾಯಕವನ್ನು ಮಾಡು. ಪಡೆದುದ್ದನ್ನು ಗೌರವದಿಂದ ಪ್ರಸಾದ ಎಂದು ಸ್ವೀಕರಿಸು. ಹೊಣೆಗಾರಿಕೆ ಹೊರಬೇಕಾದುದನ್ನೆಲ್ಲಾ ಹೊತ್ತು ಬಾಳು, ಬದುಕು. ಸಾವು ಬಂದಾಗ ಹೋಗಲೇಬೇಕೆನ್ನುವ ತಾತ್ವಿಕತೆಯನ್ನು ಅರಿತುಕೊಂಡು ನೆಮ್ಮದಿಯಿಂದ ಸಾಯಿ. ಅಷ್ಟೇ!


ಇದನ್ನೂ ಓದಿ: ಪುಟಕಿಟ್ಟ ಪುಟಗಳು: ದಿವ್ಯ ಜೀವನಕೆ ಪ್ರವೇಶಿಕೆ ಎಂಬ ಆಪ್ತ ಸಮಾಲೋಚನೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...