Homeಮುಖಪುಟಕೇರಳದಲ್ಲಿ ರಾಜಕೀಯ ಹಿಂದುತ್ವದ ಬೆಳವಣಿಗೆಯನ್ನು ಅರ್ಥೈಸಿಕೊಳ್ಳುವುದು ಹೇಗೆ?

ಕೇರಳದಲ್ಲಿ ರಾಜಕೀಯ ಹಿಂದುತ್ವದ ಬೆಳವಣಿಗೆಯನ್ನು ಅರ್ಥೈಸಿಕೊಳ್ಳುವುದು ಹೇಗೆ?

2020ರ ಲೆಕ್ಕದ ಪ್ರಕಾರ ಕೇರಳದಲ್ಲಿರುವ ಆರ್‌ಎಸ್‌ಎಸ್ ಶಾಖೆಗಳು ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿರುವ ಒಟ್ಟು ಶಾಖೆಗಳಿಗಿಂತ ಹೆಚ್ಚು!

- Advertisement -
- Advertisement -

ಪರಿಚಯವಿಲ್ಲದವರಿಗೆ ಕೇರಳದಲ್ಲಿನ ರಾಜಕೀಯ ಹಿಂದುತ್ವದ ಬೆಳವಣಿಗೆ ಹಾಗೂ ಅದರ ಭಾಗವೇ ಆದ ಬಿಜೆಪಿಯ ಮುನ್ನಡೆ ಕಾಲದ ಪ್ರವಾಹದಲ್ಲಿ ನುಚ್ಚುನೂರಾಗುವ ಪ್ರಕ್ರಿಯೆಯಂತೆ ಕಾಣಬಹುದು. ಕೇರಳದ ಒಳಗೆ ಮತ್ತು ಹೊರಗಿರುವ ಅನೇಕ ಪ್ರಗತಿಪರರಿಗೆ ಕೇರಳ ರಾಜ್ಯದೊಳಗಿನ ಹಿಂದುತ್ವದ ಶಕ್ತಿಗಳು ದುರ್ಬಲವಾಗಿವೆ, ಕೊನೇ ಪಕ್ಷ ಚುನಾವಣಾ ರಾಜಕೀಯದಲ್ಲಿ ಅವುಗಳ ಪ್ರಭಾವ ಕಡಿಮೆ ಎನ್ನಿಸಿ, ಅಲ್ಲಿನ ಎಡಪಕ್ಷಗಳು ಅದನ್ನು ತಡೆಯುತ್ತವೆ ಎಂದೆನಿಸಬಹುದು. ಈ ಅಭಿಪ್ರಾಯಗಳಿಗೆ ವಾಸ್ತವಾಂಶಕ್ಕಿಂತ ಹೆಚ್ಚಾಗಿ ಅತಿಯಾದ ಆತ್ಮವಿಶ್ವಾಸ ಕಾರಣವಾಗಿರುತ್ತವೆ. ಬಲಪಂಥೀಯ ಹಿಂದುತ್ವ ಶಕ್ತಿಗಳ ದೀರ್ಘಕಾಲೀನ ರಾಜಕೀಯ ಯೋಜನೆಗಳನ್ನು ಅಂದಾಜು ಮಾಡುವುದಕ್ಕೆ ಎಡವುದರಿಂದ ಈ ಅಭಿಪ್ರಾಯಗಳು ಮೂಡುತ್ತವೆ.

ಸ್ಥಾಪನೆಯ ದಿನದಿಂದಲೂ ಕೇರಳದ ಸಾಮಾಜಿಕ ಸಂರಚನೆಯಲ್ಲಿ ಸಂಘ ಪರಿವಾರ ಅಸ್ತಿತ್ವದಲ್ಲಿದೆ. ಸಂಘ ಪರಿವಾರದ ರಾಜಕೀಯ ಬಣ ಬಿಜೆಪಿಯು ರಾಜ್ಯದಲ್ಲಿ ಪಡೆಯುವ ಮತಗಳ ಸಂಖ್ಯೆ ತುಂಬಾ ಕಡಿಮೆ ಇರುವುದು ಹೌದಾದರೂ 2020ರ ಲೆಕ್ಕದ ಪ್ರಕಾರ ಕೇರಳದಲ್ಲಿರುವ ಆರ್‌ಎಸ್‌ಎಸ್ ಶಾಖೆಗಳು ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿರುವ ಒಟ್ಟು ಶಾಖೆಗಳಿಗಿಂತ ಹೆಚ್ಚು. 1940ರ ಇಸವಿಯಲ್ಲಿಯೇ ಆರ್‌ಎಸ್‌ಎಸ್ ಕೇರಳದಲ್ಲಿ ತನ್ನ ಬೇರು ಬಿಡಲು ಪ್ರಾರಂಭಿಸಿತು ಮತ್ತು ಕೇರಳದ ಮೇಲ್ಜಾತಿಗಳ ಹಿಂದೂಗಳ ನಡುವೆ ಮುಖ್ಯವಾಹಿನಿ ಶಕ್ತಿಯಾಗಿ ರೂಪುಗೊಂಡಿತು. 1948ರಲ್ಲಿ ಗಾಂಧೀಜಿಯವರ ಹತ್ಯೆಯಾದಾಗ ಆರ್‌ಎಸ್‌ಎಸ್‌ನ ಸದಸ್ಯರು ಬಹಿರಂಗವಾಗಿಯೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದನ್ನು ಕಂಡು ಉಂಟಾದ ಹತಾಶೆಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಮತ್ತು ಯುವ ಕಮ್ಯುನಿಸ್ಟ್ ಒ.ಎನ್.ವಿ ಕುರುಪ್ ತಮ್ಮ ನೆನಪಿನ ಪುಟಗಳಲ್ಲಿ ದಾಖಲಿಸಿದ್ದಾರೆ.

1970ರ ಹೊತ್ತಿಗೆ ಆರ್‌ಎಸ್‌ಎಸ್ ಸಂಘಟಿತ ಕೋಮು ಹಿಂಸಾಚಾರವನ್ನು ನಡೆಸುವಷ್ಟರ ಮಟ್ಟಿಗೆ ರಾಜ್ಯದಲ್ಲಿ ಬೇರುಬಿಟ್ಟಿತ್ತು. ಕಣ್ಣೂರಿನಲ್ಲಿ ಆರ್‌ಎಸ್‌ಎಸ್ ಪ್ರೇರಿತ ಕೋಮು ದ್ವೇಷದ ವದಂತಿಗಳು 1972ರ ತಲಚೇರಿ ಗಲಭೆಗೆ ಕಾರಣವಾಗಿತ್ತು. ಈ ಗಲಭೆಯ ಸಮಯದಲ್ಲಿ ಈಗ ಮುಖ್ಯ ಮಂತ್ರಿಯಾಗಿರುವ ಪಿಣರಾಯಿ ವಿಜಯನ್‌ರವರು ಸಿಪಿಐಎಂಅನ್ನು ಆರ್‌ಎಸ್‌ಎಸ್‌ನ ದಾಳಿಗೆದುರಾಗಿ ಮುನ್ನಡೆಸಿದರು. ಈ ಪ್ರದೇಶದಲ್ಲಿದ್ದ ಮಸೀದಿಗಳ ಮೇಲೆ ಆರ್‌ಎಸ್‌ಎಸ್ ನಡೆಸುತ್ತಿದ್ದ ದಾಳಿಗಳನ್ನು ತಡೆದರು. ಈ ಗಲಭೆಯ ಸಮಯದಲ್ಲೇ ಮೆರುವಂಬಾಯಿ ಮಸೀದಿಯನ್ನು ಕಾಯುತ್ತಿದ್ದ ಸಿಪಿಐಎಂನ ಯು.ಕೆ. ಕುಂಯಿರಾಮನ್‌ರವರನ್ನು ಆರ್‌ಎಸ್‌ಎಸ್‌ನವರು ಹತ್ಯೆ ಮಾಡಿದರು. ಆರ್‌ಎಸ್‌ಎಸ್‌ನಿಂದ ಹತ್ಯೆಗೊಳಗಾದ ಮೊದಲ ಸಿಪಿಐಎಂ ಹುತಾತ್ಮ ಯು.ಕೆ. ಕುಂಯಿರಾಮನ್. ಕೇರಳದಲ್ಲಿ ಎಡಪಕ್ಷಗಳ ಮೇಲೆ ಆರ್‌ಎಸ್‌ಎಸ್ ನಡೆಸುವ ದಾಳಿಯು ಪ್ರಾರಂಭವಾಗಿದ್ದೇ ಈ ಗಲಭೆಯಿಂದ. ಆರ್‌ಎಸ್‌ಎಸ್‌ನ ಈ ನಿರಂತರ ಸರಣಿ ದಾಳಿಗಳು ಇವತ್ತಿಗೂ ಮುಂದುವರೆದಿದೆ, ಹಲವು ಜೀವಗಳನ್ನು ಬಲಿ ಪಡೆದಿದೆ.

ಕೇರಳದಲ್ಲಿ ಈಗ ಹೆಚ್ಚುಕಡಿಮೆ ಏಳು ಸಾವಿರ ಶಾಖೆಗಳನ್ನು ಹೊಂದಿರುವ ಆರ್‌ಎಸ್‌ಎಸ್ ಅಪಾಯಕಾರಿ ರೀತಿಯಲ್ಲಿ ಬೆಳೆಯುತ್ತಿದೆ. 2014ರಿಂದ ಸಂಘ ಪರಿವಾರ ಕೇರಳದೆಡೆಗೆ ತನ್ನ ರಾಜಕೀಯ ಗುರಿಯನ್ನು ವರ್ಗಾಯಿಸಿದ್ದು, ಬಿಜೆಪಿಯ ಮತಗಳಿಕೆ ಪ್ರಮಾಣವು ಗಣನೀಯವಾಗಿ ಏರಿಕೆ ಕಂಡಿದೆ. ಈ ಮುಂಚೆ ಕಾಂಗ್ರೆಸ್ಸಿಗೆ ಮತ ಚಲಾಯಿಸುತ್ತಿದ್ದ ಆರ್‌ಎಸ್‌ಎಸ್ ಕಾರ್ಯಕರ್ತರು ಮತ್ತು ಆರ್‌ಎಸ್‌ಎಸ್ ಜೊತೆ ಸಂಬಂಧ ಹೊಂದಿದವರು ಈಗ ಬಿಜೆಪಿಗೆ ಮತ ಚಲಾಯಿಸುತ್ತಿದ್ದಾರೆ. 2016ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ನೆಮೋಮ್‌ನಿಂದ ಬಿಜೆಪಿಯ ಮುಖಂಡರಾದ ಓ ರಾಜಗೋಪಾಲ್ ಜಯಗಳಿಸಿದ್ದು ಬಿಜೆಪಿಯ ಮತಗಳಿಕೆಯ ಪ್ರಮಾಣದ ಹೆಚ್ಚುವಿಕೆಗೊಂದು ಉದಾಹರಣೆ. ನೆಮೋಮ್‌ನಲ್ಲಿ ನಡೆದ ಕಳೆದ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಸಿಪಿಐಎಂ ಪಡೆದ ಮತಗಳನ್ನು ಪರಿಗಣಿಸಿದಾಗ ಕಾಂಗ್ರೆಸ್ಸಿಗೆ ಬೀಳುತ್ತಿದ್ದ ಮತಗಳೆಲ್ಲ ಹೇಗೆ ಬಿಜೆಪಿಗೆ ವರ್ಗವಾಗಿವೆ ಎನ್ನುವುದನ್ನು ಗುರುತಿಸಬಹುದಾಗಿದೆ.

ಈ ಬದಲಾವಣೆಗೆ ಹಲವು ಕಾರಣಗಳಿವೆ. ಇದರಲ್ಲಿ ಪ್ರಮುಖ ಕಾರಣವೆಂದರೆ ಬಿಜೆಪಿಗೆ ತನ್ನ ನೆಲೆಗಳನ್ನು ಬಿಟ್ಟುಕೊಡಬಾರದೆಂಬ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಅನುಸರಿಸುತ್ತಿರುವ ಮೃದು ಹಿಂದುತ್ವ ಧೋರಣೆ. 2018ರಲ್ಲಿ ಸುಪ್ರೀಂಕೋರ್ಟ್ ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತು ನೀಡಿದ ಆದೇಶದ ಕುರಿತು ಕಾಂಗ್ರೆಸ್ ತೆಗೆದುಕೊಂಡ ಧೋರಣೆಗಳು ಬಿಜೆಪಿಯ ಧೋರಣೆಗಿಂತ ಯಾವ ರೀತಿಯಲ್ಲೂ ಭಿನ್ನವಾಗಿರಲಿಲ್ಲ. ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕಿದ್ದ ಅಡೆತಡೆಯ ಹಿಂದಿನ ಪುರುಷ ಪ್ರಧಾನ ಮನಸ್ಥಿತಿಯನ್ನು ಗಮನಕ್ಕೇ ತೆಗೆದುಕೊಳ್ಳದೇ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ’ಸಂಪ್ರದಾಯವನ್ನು ರಕ್ಷಿಸಬೇಕು’, ’ಕಮ್ಯುನಿಸ್ಟರು ಹಿಂದೂ ಮೌಲ್ಯಗಳ ಮೇಲೆ ದಾಳಿ ನಡೆಸುತ್ತಿದ್ದಾರೆ’ ಎಂದು ಬೊಬ್ಬಿರಿದರು.

ಇವೆಲ್ಲವುಗಳ ಜೊತೆಗೆ ಕೇರಳದ ಬಹುಜನರನ್ನು ಕಳೆದ ಕೆಲವು ದಶಕಗಳಿಂದ ’ಸಂಸ್ಕೃತೀಕರಣ’ಕ್ಕೊಳಪಡಿಸಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಮುಂದೆ ನಿಂತು ನಡೆಸುತ್ತಿರುವುದು ಸಂಘ ಪರಿವಾರ. ಪಾರಂಪರಿಕ ಪೂಜ್ಯ ಜಾಗಗಳನ್ನೆಲ್ಲ ದೇವಸ್ಥಾನಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಬಹುಜನರು ವೈದಿಕ ಆಚರಣೆಗಳ ಜೊತೆ ಹೆಚ್ಚೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ಬಿಜೆಪಿಯು ರಾಜಕೀಯವಾಗಿಯೂ ಗೆಲ್ಲುತ್ತಿರುವುದು, ರಾಜ್ಯದಲ್ಲಿ 1957ರಿಂದ ಕಂಡುಬರುವ ಜಾತಿ ಆಧಾರಿತ ಐತಿಹಾಸಿಕ ಮತ ಚಲಾವಣೆಯು ಮುರಿದು ಬೀಳುತ್ತಿರುವ ಸೂಚನೆ. ಅರವತ್ತು ವರುಷಗಳ ಹಿಂದೆ ಕೇರಳದಲ್ಲಿದ್ದ ಕಮ್ಯುನಿಸ್ಟರ ಸರಕಾರವನ್ನು ಸವರ್ಣ ಭೂಮಾಲೀಕರ ಮೈತ್ರಿ ಮೋಸದಿಂದ ಕೆಡವಿದ ಮೇಲೆ ಕೇರಳದಲ್ಲಿ ಮತ ಚಲಾವಣೆಯು ಜಾತಿಯಾಧಾರಿತವಾಗಿದೆ. ರಾಜ್ಯದಲ್ಲಿನ ದಲಿತರು – ಹಿಂದುಳಿದ ವರ್ಗಗಳ ಮತಗಳನ್ನು ಕಮ್ಯುನಿಸ್ಟರೇ ನಿರಂತರವಾಗಿ ಪಡೆಯುತ್ತಾ ಬಂದಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಜೊತೆಗೆ ಹಿಂದುತ್ವದ ಶಕ್ತಿಗಳು ವಾಟ್ಸ್‌ಆಪ್ ಮೆಸೇಜುಗಳ ಮೂಲಕ ಸಂಘಟಿತವಾಗಿ ಸುಳ್ಳು ಸುದ್ದಿಗಳನ್ನು ಹಂಚುತ್ತಿರುವುದು ಕೂಡ ಹಿಂದುತ್ವವು ರಾಜಕೀಯ ಶಕ್ತಿಯಾಗಿ ಬೆಳೆಯಲು ಕಾರಣವಾಗಿದೆ. ರಾಜಕಾರಣದ ಕುರಿತು ಕಾಂಗ್ರೆಸ್ಸಿನ ದೃಷ್ಟಿಕೋನ ಆಮೂಲಾಗ್ರವಾಗಿ ಬದಲಾಗದೇ ಹೋದಲ್ಲಿ ಕೇರಳ ರಾಜ್ಯದಲ್ಲಿ ಬಹುದೊಡ್ಡ ಪಕ್ಷಪಾತಿ ರಾಜಕೀಯ ಬದಲಾವಣೆ ಕಾಣಿಸಿಕೊಳ್ಳಲಿದೆ. ಕಾಂಗ್ರೆಸ್ಸಿನ ಜಾಗದಲ್ಲಿ ಬಿಜೆಪಿ ಬೆಳೆದು ಎಡ ಪಕ್ಷಗಳಿಗೆ ಪ್ರಮುಖ ವಿರೋಧ ಪಕ್ಷವಾಗಿ ಬೆಳೆಯುತ್ತದೆ. ಇದರಿಂದ ಉಂಟಾಗುವ ರಾಜಕೀಯ ಧ್ರುವೀಕರಣದ ಪ್ರಭಾವಗಳು ಸುದೀರ್ಘ ಕಾಲದವರೆಗೆ ಪರಿಣಾಮ ಬೀರುತ್ತವೆ.

  • ವಾರ್ಕಿ ಪಾರಕ್ಕಲ್

ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಸಮಾಜಶಾಸ್ತ್ರ ವಿದ್ಯಾರ್ಥಿಯಾಗಿರುವ ವಾರ್ಕಿ ಸಾಮಾಜಿಕ ಕಾರ್ಯಕರ್ತರು ಕೂಡ. ದೆಹಲಿ ಎಸ್‌ಎಫ್‌ಐ ಸಂಘಟನೆಯ ರಾಜ್ಯ ಸಮಿತಿ ಸದಸ್ಯ.

ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್.


ಇದನ್ನೂ ಓದಿ: ಮೋದಿಯವರ ಅಹಂ ದೊಡ್ಡದೋ, ರೈತಶಕ್ತಿ ದೊಡ್ಡದೋ ತೀರ್ಮಾನವಾಗಲಿದೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...