Homeಕರ್ನಾಟಕ’ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಉಪಯೋಜನೆ’ಯಲ್ಲಿನ ವಂಚನೆಗಳು!

’ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಉಪಯೋಜನೆ’ಯಲ್ಲಿನ ವಂಚನೆಗಳು!

ಶತಮಾನಗಳಿಂದ ಶೋಷಣೆ/ದಮನಕ್ಕೆ ಒಳಗಾದ ತಳ ಸಮುದಾಯಗಳಿಗೆ ಸಮಾಜೋ-ಆರ್ಥಿಕ ನ್ಯಾಯ ಒದಗಿಸಲು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಸಮಾಜೋ-ಆರ್ಥಿಕ ನ್ಯಾಯ ಒದಗಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗಿತ್ತು

- Advertisement -
- Advertisement -

ಶತಮಾನಗಳಿಂದ ಶೋಷಣೆ/ದಮನಕ್ಕೆ ಒಳಗಾದ ತಳ ಸಮುದಾಯಗಳಿಗೆ ಸಮಾಜೋ-ಆರ್ಥಿಕ ನ್ಯಾಯ ಒದಗಿಸಲು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ “ಎಸ್‌ಸಿಎಸ್‌ಪಿ/ಟಿಎಸ್‌ಪಿ” (ಪರಿಶಿಷ್ಟ ಜಾತಿ ಉಪಯೋಜನೆ/ ಪರಿಶಿಷ್ಟ ಪಂಗಡ ಉಪಯೋಜನೆ) ಯೋಜನೆಯನ್ನು ಜಾರಿಗೊಳಿಸಲಾಯಿತು. ಕರ‍್ನಾಟಕದಲ್ಲಿ ಅದನ್ನು ಪರಿಶ್ಕರಿಸಿ 2013ರಲ್ಲಿ “ಎಸ್‌ಸಿಎಸ್‌ಪಿ/ಟಿಎಸ್‌ಪಿ (ಯೋಜನೆ, ಹಂಚಿಕೆ, ಹಣಕಾಸು ಸಂಪನ್ಮೂಲದ ಬಳಕೆ) ಕಾಯಿದೆ” ಜಾರಿಗೊಳಿಸಲಾಯಿತು.

2011ರ ಜನಗಣತಿಯ ಆದಾರದಲ್ಲಿ “ಎಸ್‌ಸಿಎಸ್‌ಪಿ/ಟಿಎಸ್‌ಪಿ” ಯೋಜನೆಗೆ ಪ್ರತಿ ಇಲಾಖೆಯು ಶೇ.24.1 ಪ್ರಮಾಣದ ಆರ್ಥಿಕ ಅನುದಾನವನ್ನು ಮೀಸಲಿಡಬೇಕು. ಇದರ ಅನುಸಾರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವ್ಯಕ್ತಿಗೆ/ಕುಟುಂಬಕ್ಕೆ ಈ ಯೋಜನೆಯ ಅನುದಾನವು ನೇರವಾಗಿ ತಲುಪಬೇಕು. ಯೋಜನೆಗಳನ್ನು ರೂಪಿಸುವುದಕ್ಕೂ ಮೊದಲು ರಾಜ್ಯ ಮಟ್ಟದ ನೋಡಲ್ ಏಜೆನ್ಸಿ ಸಂಬಂದಪಟ್ಟ ಸಮುದಾಯಗಳೊಂದಿಗೆ ಸಮಾಲೋಚಿಸಬೇಕು. ಖರ್ಚಿನ ವಿವರಗಳು ಪಾರದರ್ಶಕವಾಗಿರಬೇಕು, ಇದರ ಸಮರ್ಪಕ ಜಾರಿಯ ಕುರಿತು ನಿಗಾ ವಹಿಸಲು ಒಂದು ಅಂತರ್ಜಾಲ ತಾಣವನ್ನು ಆರಂಬಿಸಬೇಕು, ಈ ಯೋಜನೆಯ ಜಾರಿಯಾಗಿರುವುದರ ವಿವರಗಳನ್ನು ಕಾಲಕಾಲಕ್ಕೆ ಪ್ರಕಟಿಸಬೇಕು. ಮತ್ತು ಮುಖ್ಯವಾಗಿ ಈ ಯೋಜನೆಗೆ ಮೀಸಲಿಟ್ಟ ಹಣವನ್ನು ಸಾಮಾನ್ಯ ಯೋಜನೆಗಳಿಗೆ ಬಳಸಿಕೊಳ್ಳಬಾರದು.

PC: Mahima A Jain

ಇದನ್ನೂ ಓದಿ: ‘ಮಹಾಡ್ – ಮೊದಲ ದಲಿತ ಬಂಡಾಯ’ ಪುಸ್ತಕದ ಆಯ್ದ ಭಾಗಗಳು

ಆದರೆ ಈ ಎಲ್ಲಾ ನಿಯಾಮವಳಿಗಳು ಕೇವಲ ಕಾಗದದ ಮೇಲೆ ಮಾತ್ರ ಉಳಿದುಕೊಂಡಿವೆ. ಮೊದಲಿಗೆ ಜಿಲ್ಲಾ ಮಟ್ಟದ ಪರಿಶೀಲನ ಸಮಿತಿಗಳನ್ನು ಸೂಕ್ತವಾಗಿ ರಚಿಸಲ್ಪಟ್ಟಿರುವುದಿಲ್ಲ, ಮತ್ತು ರಚಿತಗೊಂಡ ಸಮಿತಿಗಳು ಕಾಲ ಕಾಲಕ್ಕೆ ಸಬೆಗಳನ್ನು ನಡೆಸುವುದಿಲ್ಲ. ಇನ್ನು ಇಲ್ಲಿನ ಬಹುತೇಕ ಅದಿಕಾರಿಗಳಿಗೆ ಈ ಯೋಜನೆ ಕುರಿತು ಯಾವುದೇ ತಿಳುವಳಿಕೆಯಿರುವುದಿಲ್ಲ ಮತ್ತು ಅವರಿಗೆ ತರಬೇತಿಯನ್ನು ಸಹ ಕೊಟ್ಟಿರುವುದಿಲ್ಲ.

ದಲಿತ ಸಂಘಟನೆಗಳು “ಎಸ್‌ಸಿಎಸ್‌ಪಿ/ಟಿಎಸ್‌ಪಿ ಹೆಸರಿನಲ್ಲಿ ಪ್ರತ್ಯೇಕವಾಗಿ ಎರಡು ಬ್ಯಾಂಕ್ ಖಾತೆ ತೆರೆಯಬೇಕು ಮತ್ತು ಈ ಖಾತೆಯನ್ನು ನೋಡಲ್ ಇಲಾಖೆಗಳು ನಿರ್ವಹಿಸಬೇಕು. ಈ ಯೋಜನೆಯ ನಿಗಾ ವಹಿಸಲು ಲೋಕಪಾಲರನ್ನು ನೇಮಿಸಬೇಕು” ಎಂದು ಆಗ್ರಹಪಡಿಸಿದ್ದರು. ಈ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯನ್ನು ವಿಶ್ಲೇಷಿಸಿದಾಗ ಮೇಲಿನ ಎಲ್ಲಾ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಮತ್ತು ತಮಾಶೆಯೆಂದರೆ ಸಬಂದಪಟ್ಟ ಅದಿಕಾರಿಗಳಿಗೆ ಯಾವುದೇ ವಿಚಾರಣೆ ನಡಸಿಲ್ಲ

2020-21ರ ಹಣಕಾಸು ವರ್ಶವನ್ನು ಪರಿಶೀಲನೆ ಮಾಡೋಣ. ಈ ವರ್ಶಕ್ಕೆ ಎಸ್‌ಸಿಎಸ್‌ಪಿ/ಟಿಎಸ್‌ಪಿಗೆ 27,699.52 ಕೋಟಿ ಮೊತ್ತವನ್ನು ಹಂಚಿಕೆ ಮಾಡಲಾಯಿತು. ಆದರೆ ನಂತರ 1,084 ಕೋಟಿಯನ್ನು ಕಡಿತಗೊಳಿಸಲಾಯಿತು. ನಂತರ ಉಳಿದ ಅನುದಾನ 26,614.69 ಕೋಟಿ. ಇದಕ್ಕೆ ಯಾವುದೇ ಕಾರಣವನ್ನು ಕೊಟ್ಟಲ್ಲ.

ಇದನ್ನೂ ಓದಿ: ದೇಶದಲ್ಲಿ ಹಚ್ಚಿರುವ ಕಿಚ್ಚು ಮುಸಲ್ಮಾನರನ್ನು ಮುಕ್ಕತೊಡಗಿದೆ. ಮುಂದಿನ ಸರದಿ ದಲಿತರದು, ಕ್ರೈಸ್ತರದು ಇದ್ದೀತು

ಎಸ್‌ಸಿಎಸ್‌ಪಿ ಯೋಜನೆ:

ಹಂಚಿಕೆ : 19,432.22 ಕೋಟಿ.
ಕಡಿತಗೊಳಿಸಿದ ನಂತರದ ಮೊತ್ತ : 18,659.65 ಕೋಟಿ.
ವೆಚ್ಚ : 5,856.84 ಕೋಟಿ (ಶೇಕಡ. 31%)
ಬಳಕೆಯಾಗದೆ ಉಳಿದ ಮೊತ್ತ : 12,802.81 ಕೋಟಿ.

ಟಿಎಸ್‌ಪಿ ಯೋಜನೆ:

ಹಂಚಿಕೆ : 8,267.30 ಕೋಟಿ.
ಕಡಿತಗೊಳಿಸಿದ ನಂತರದ ಮೊತ್ತ : 7,955.69 ಕೋಟಿ.
ವೆಚ್ಚ : 2307.25 ಕೋಟಿ (ಶೇಕಡ. 32%)
ಬಳಕೆಯಾಗದೆ ಉಳಿದ ಮೊತ್ತ : 5648.44 ಕೋಟಿ.

ಒಟ್ಟಾಗಿ 2020-21ರ ಎಸ್‌ಸಿಎಸ್‌ಪಿ/ಟಿಎಸ್‌ಪಿ ಗೆ ಕೇವಲ 8164 ಕೋಟಿ ವೆಚ್ಚವಾಗಿದ್ದರೆ, 18,451.25 ಕೋಟಿ ಬಳಕೆಯಾಗದೆ ಉಳಿದುಕೊಂಡಿದೆ

  • ಮೊದಲಿಗೆ ಅಗತ್ಯವಾದ ಹಣಕಾಸು ಮೊತ್ತವನ್ನು ಹಂಚಿಕೆ ಮಾಡಿಲ್ಲ.
  • ಎರಡನೆಯದಾಗಿ ಹಂಚಿಕೆಯಾದ ಮೊತ್ತವನ್ನು ಕಡಿತಗೊಳಿಸಲಾಗಿದೆ.
  • ಮೂರನೆಯದಾಗಿ ಕಡಿತಗೊಳಿಸದ ಮೊತ್ತದಲ್ಲಿ ಶೇಕಡಾ 31ರಶ್ಟನ್ನು ಮಾತ್ರ ವೆಚ್ಚ ಮಾಡಲಾಗಿದೆ ಮತ್ತು ಶೇಕಡಾ 69ರಶ್ಟನ್ನು ಬಳಸಿಕೊಂಡಿಲ್ಲ.
  • ನಾಲ್ಕನೆಯದಾಗಿ ವೆಚ್ಚ ಮಾಡಿದ ಮೊತ್ತವನ್ನು ಈ ಯೋಜನೆಗೆ ಬಳಸಿಕೊಂಡಿಲ್ಲ, ಇತರೆ ಸಾಮಾನ್ಯ ಕೆಲಸಗಳಿಗೆ ವೆಚ್ಚ ಮಾಡಿದ್ದಾರೆ.

ಇದನ್ನೂ ಓದಿ: ದಲಿತ ಸಮರ್ಥನೆಯ ಆದ್ಯಪ್ರವರ್ತಕನ ಪಾತ್ರವಹಿಸಿದ್ದ ಮೂಕನಾಯಕ

ಇದು ದ್ರೋಹದ ಕೆಲಸ. ಇದು ಒಂದು ಮಹಾವಂಚನೆ. ಉದಾಹರಣೆಗೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಗೆ ಮೀಸಲಿಟ್ಟ ಹಣವನ್ನು ಮೆಟ್ರೋ ರೈಲು ಕಾಮಗಾರಿಗೆ ಬಳಸಿಕೊಳ್ಳಲಾಗಿದೆ. ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ವೆಚ್ಚ ಮಾಡಲಾಗಿದೆ. ಹೆದ್ದಾರಿಗಳ ಕಾಮಗಾರಿಗೆ ಬಳಸಿಕೊಳ್ಳಲಾಗಿದೆ. ಅಂದರೆ ಬ್ರಶ್ಟಾಚಾರಕ್ಕೆ ಭರಪೂರು ಅವಕಾಶವಿರುವ ‘ಕಾಮಗಾರಿ’ ಯೋಜನೆಗಳಿಗೆ ಈ ಆರ್ಥಿಕ ಅನುದಾನವನ್ನು ಬಳಸಿಕೊಳ್ಳಲಾಗಿದೆ. ಇದು ಶಿಕ್ಷಾರ್ಹ ಅಪರಾದವಾಗಿದೆ. ಆದರೆ ಇಲ್ಲಿ ಪ್ರಬುತ್ವವೇ ಈ ಬ್ರಶ್ಟಾಚಾರದಲ್ಲಿ ತೊಡಗಿಕೊಂಡಿರುವುದರಿಂದ ಇದರ ವಿರುದ್ದದ ಕೂಗು ಅರಣ್ಯರೋದನವಾಗಿದೆ.

ದಲಿತ ಬಹುಜನ ಸಂಘಟನೆಯು (ದಬಸ) ಈ ಹಿಂದೆ ರಾಜ್ಯದ ಅಬಿವೃದ್ದಿಗೂ ಮತ್ತು ಪ.ಜಾತಿ/ಪ.ಪಂಗಡದ ಅಬಿವೃದ್ದಿ ಸೂಚಕಗಳಿಗೂ ನಡುವಿನ ವ್ಯತ್ಯಾಸವನ್ನು ‘ಅಬಿವೃದ್ದಿಗಳ ಅಂತರ’ದ ಮೂಲಕ ವಿಶ್ಲೇಷಣೆ ಮಾಡಿದೆ.

‘ದಬಸ’ ಮುಂದಿಟ್ಟ ಮುಖ್ಯ ಪ್ರಶ್ನೆಗಳು:

  • ಬಡತನ ರೇಖೆಗಿಂತ ಮೇಲಿರುವ ಪ.ಜಾತಿ/ಪ.ಪಂಗಡದ ಜನಸಂಖ್ಯೆಯ ಪ್ರಮಾಣವೇನು?
  • ಆರ್ಥಿಕವಾಗಿ ಸಬಲೀಕರಣಗೊಂಡವರೆಶ್ಟು?
  • ಇದಕ್ಕೂ ಮತ್ತು ಕರ‍್ನಾಟಕದ ಸೂಚ್ಯಕಂಗಳಿಗೂ ದಲಿತ ಸಮುದಾಯದ ಅಬಿವೃದ್ದಿ ಸೂಚ್ಯಂಕಗಳ ನಡುವಿನ ವ್ಯತ್ಯಾಸವೇನು?
  • ಕರ‍್ನಾಟಕ ರಾಜ್ಯದ/ ಜಿಲ್ಲೆಗಳ ಮುನ್ನೋಟ ಮತ್ತು ಅದಕ್ಕೆ ಪ್ರತಿಯಾಗಿ ಪ.ಜಾತಿ/ಪ.ಪಂಗಡದ ಮಾನವ ಅಬಿವೃದ್ದಿ ಸೂಚ್ಯಂಕದ ಕುರಿತು ದತ್ತಾಂಶವಿದೆಯೇ?
  • ಮಾನವ ಅಬಿವೃದ್ದಿ ಆದಾಯದ ಅಂತರದ ಕುರಿತು ದತ್ತಾಂಶ ಸಂಚಯವಿದೆಯೇ?
  • ಉದಾಹರಣೆಗೆ ಇತರ ಜಾತಿಗಳಿಗೆ ಹೋಲಿಸಿದರೆ ಪ.ಜಾತಿ/ಪ.ಪಂಗಡದ 100 ಮಕ್ಕಳ ಪೈಕೆ ಎಶ್ಟು ಮಕ್ಕಳು ಒಂದನೆ ತರಗತಿಗೆ ದಾಖಲಾಗಿದ್ದಾರೆ?

ಇದನ್ನೂ ಓದಿ: ಮೊದಲ ದಲಿತ ರಾಷ್ಟ್ರಪತಿ ಕೆ.ಆರ್ ನಾರಾಯಣನ್ ಸ್ಮರಣೆ: ಡಾ.ಬಿ.ಪಿ.ಮಹೇಶ ಚಂದ್ರ ಗುರು

ಆದರೆ ‘ದಬಸ’ ಪ್ರಕಾರ ‘ಅಬಿವೃದ್ದಿಯಲ್ಲಿನ ಅಂತರ’ದ ಕುರಿತು ಯಾವುದೇ ದಾಖಲೆಗಳಿಲ್ಲ, ದತ್ತಾಂಶ ಸಂಚಯಗಳಿಲ್ಲ. ಅಂದರೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಗೆ ಹಣಕಾಸು ಹಂಚಿಕೆ ಮಾಡುವಾಗ ಆ ಸಮುದಾಯಗಳ ಜನಸಂಖ್ಯೆಯ ಪ್ರಮಾಣವೆಶ್ಟು? ಅದರಲ್ಲಿ ಅಗತ್ಯವಿರುವ ಪ್ರಮಾಣವೆಶ್ಟು? ಮುಂತಾದ ಸಂಗತಿಗಳ ಕುರಿತು ಸರಕಾರಕ್ಕೆ ಯಾವುದೇ ಮಾಹಿತಿಯಿಲ್ಲ. ಸಂಶೋದನೆ ನೆರವು, ಪ.ಜಾತಿ/ಪ.ಪಂಗಡಗಳಿಗೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ಪ.ಜಾತಿ/ಪ.ಪಂಗಡ ಪಂಚಾಯತ್‌ಗೆ ಅನುದಾನ, ಪುಸ್ತಕ ಅನುದಾನ, ಕೌಶಲ್ಯ ಅಬಿವೃದ್ದಿ ಮುಂತಾದ ಹೊಸ ಬಗೆಯ ಕಾರ್ಯಯೋಜನೆಗಳಿಗೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಆದ್ಯತೆಯ ಮೇರೆಗೆ ಕೆಲಸ ಮಾಡಬೇಕಿತ್ತು. ಆದರೆ ಪ್ರಬುತ್ವಕ್ಕೆ ಇದರ ಖಬರೂ ಸಹ ಇಲ್ಲ.

ಮುಂದೇನು?

ದಲಿತ ಸಂಘಟನೆಗಳು, ಎಡ ಸಂಘಟನೆಗಳು, ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳು ಒಗ್ಗಟ್ಟಾಗಿ ಈ ಕುರಿತು ತುರ್ತಾಗಿ ಸಮಾಲೋಚನೆ ಸಬೆ ನಡೆಸಬೇಕು ಮತ್ತು ಪ್ರಬುತ್ವದ ಈ ತಾರತಮ್ಯ ಮತ್ತು ವಂಚನೆಯ ವಿರುದ್ದ ಜನಾಂದೋಲನ ರೂಪಿಸಬೇಕು, ಇದನ್ನು ಹೊರತುಪಡಿಸಿ ಮತ್ಯಾವುದೇ ಮಾರ್ಗಗಳಿಲ್ಲ.

ಇದನ್ನೂ ಓದಿ: ಕೇರಳ: ದಲಿತ ವ್ಯಕ್ತಿಯನ್ನು ಅರ್ಚಕರಾಗಿ ನೇಮಿಸುತ್ತಿರುವ ದೇವಸ್ವಂ ಬೋರ್ಡ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...