Homeಕರೋನಾ ತಲ್ಲಣಪ್ರಯೋಗ ಪೂರೈಸದ ಲಸಿಕೆಗೆ ತರಾತುರಿಯಲ್ಲಿ ಅನುಮತಿ ನೀಡಲಾಗಿದೆಯೆ?: ಅಘಾತಕಾರಿ ಮಾಹಿತಿ ಬಿಚ್ಚಿಟ್ಟ ಆರ್‌ಟಿಐ ಕಾರ್ಯಕರ್ತ

ಪ್ರಯೋಗ ಪೂರೈಸದ ಲಸಿಕೆಗೆ ತರಾತುರಿಯಲ್ಲಿ ಅನುಮತಿ ನೀಡಲಾಗಿದೆಯೆ?: ಅಘಾತಕಾರಿ ಮಾಹಿತಿ ಬಿಚ್ಚಿಟ್ಟ ಆರ್‌ಟಿಐ ಕಾರ್ಯಕರ್ತ

ಮಾಹಿತಿಗಳನ್ನು ಬಹಿರಂಗಪಡಿಸುವಲ್ಲಿ ತೋರುತ್ತಿರುವ ಹಿಂಜರಿಕೆಯು ಬಹಳ ದೊಡ್ಡ ಅಪಾಯವನ್ನು ಸೂಚಿಸುತ್ತಿದೆ ಎಂದು ಉಲ್ಲೇಖಿಸಿದ್ದಾರೆ

- Advertisement -
- Advertisement -

ಕೊರೊನಾ ಸಾಂಕ್ರಮಿಕ ವಿರುದ್ಧ ತುರ್ತು ಬಳಕೆಗಾಗಿ ಭಾರತೀಯ ಔಷಧೀಯ ನಿಯಂತ್ರಕ ಕೊವಿಶೀಲ್ಡ್‌, ಕೊವ್ಯಾಕ್ಸಿನ್‌ ಲಸಿಕೆಗಳಿಗೆ ಅನುಮತಿ ನೀಡಿದೆ. ಜೊತೆಗೆ ಇನ್ನೂ ಎರಡು ಲಸಿಕೆಗಳು ಅನುಮತಿಗಾಗಿ ಸರತಿಯಲ್ಲಿವೆ. ಆದರೆ ಅನುಮತಿ ಪಡೆದಿರುವ ಭಾರತ್‌ ಬಯೋಟೆಕ್‌ ತಯಾರಿಸುತ್ತಿರುವ ಕೊವ್ಯಾಕ್ಸಿನ್ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಲಸಿಕೆಯ ಮೂರನೇ ಹಂತದ ಪ್ರಯೋಗದ ವರದಿ ಇನ್ನೂ ಬಂದಿಲ್ಲ ಹಾಗಾಗಿ ಅದು ಸುರಕ್ಷಿತವಲ್ಲ ಎಂದು ಅವರ ಅನುಮಾನಕ್ಕೆ ಕಾರಣ. ಇದೀಗ ಆರ್‌ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆ ಕೊವ್ಯಾಕ್ಸಿನ್ ಕುರಿತು ಅಘಾತಕಾರಿ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾರೆ.

ಸಾಕೇತ್‌ ಗೋಖಲೆ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಕೊವ್ಯಾಕ್ಸಿನ್ ಕುರಿತ ಹಲವು ಮಾಹಿತಿಗಳನ್ನು ಸಾಕ್ಷಿ ಸಹಿತ ಬಿಚ್ಚಿಟ್ಟಿದ್ದಾರೆ. ಈ ಮಾಹಿತಿಯು ನಿಮ್ಮ ಜೀವಕ್ಕೆ ಸಂಬಂಧ ಪಟ್ಟಿದ್ದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶ: ‘ಇದು ಪ್ರಯೋಗ’ ಎಂದು ಹೇಳದೆ ಸಾರ್ವಜನಿಕರಿಗೆ ಲಸಿಕೆ ನೀಡಿದ ಖಾಸಗಿ ಆಸ್ಪತ್ರೆ!

“ಭಾರತ್ ಬಯೋಟೆಕ್‌ನ ಹಂತ 1 ಮತ್ತು 2 ಕೊರೊನಾ ಲಸಿಕೆ ಪ್ರಯೋಗಗಳ ರಹಸ್ಯ” ಎಂದು ಅವರು ತಮ್ಮ ಬರಹವನ್ನು ಪ್ರಾರಂಭಿಸಿದ್ದಾರೆ. “ಭಾರತ್‌ ಬಯೋಟೆಕ್‌ನ ಪಾಲುದಾರನೂ ಆಗಿರುವ ಭಾರತದ ಕ್ಲಿನಿಕಲ್‌ ಟ್ರಯಲ್ಸ್‌ ರಿಜಿಸ್ಟರ್(CTR)ನ ಐಸಿಎಂಆರ್‌‌ನ ಒಂದು ಘಟಕದಲ್ಲಿ ಕೊವ್ಯಾಕ್ಸಿನ್‌ ಲಸಿಕೆಯ 1 ನೇ ಮತ್ತು 2 ನೇ ಹಂತದ ಪ್ರಯೋಗಗಳಿಗಾಗಿ ಭಾರತ್‌ ಬಯೋಟೆಕ್ ನೋಂದಣಿ ಮಾಡಿತ್ತು‌.

ಜುಲೈ 1, 2020 ಕ್ಕೆ 1 ನೇ ಹಂತದ ಪ್ರಯೋಗಗಳ ಮಾಹಿತಿಗಳನ್ನು ಭಾರತ್ ಬಯೋಟೆಕ್ ರಿಜಿಸ್ಟರ್‌ ಮಾಡಿತ್ತು. ಅದಕ್ಕಾಗಿ ಲಸಿಕೆಗಳ ಮಾದರಿ‌‌‌ಗಳನ್ನು ಪಡೆದುಕೊಳ್ಳಲು ಒಟ್ಟು 1125 ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದಿರುವ ಅವರು, “ನೆನಪಿಡಿ, ಇದೇ ಸಮಯದಲ್ಲಿ ನರೇಂದ್ರ ಮೋದಿಯ ವರ್ಚಸ್ಸು ಹೆಚ್ಚಾಗಲೆಂದು ’ಲಸಿಕೆಯು ಸ್ವಾತಂತ್ರ್ಯ ದಿನದೊಳಗೆ ತಯಾರಾಗಬೇಕು’ ಎಂದು ಎಂಸಿಆರ್‌ ಆಘಾತಕಾರಿ ಪತ್ರ ರವಾನಿತ್ತು” ಎಂದು ಅವರು ನೆನಪಿಸಿದ್ದಾರೆ.

ಇದನ್ನೂ ಓದಿ: ‘ಲಸಿಕೆಯಲ್ಲಿ ಹಂದಿ ಮಾಂಸವಿಲ್ಲ’ – ಆಧಾರರಹಿತ ಸುದ್ದಿ ಕಡೆಗಣಿಸಲು ಮುಸ್ಲಿಂ ವಿದ್ವಾಂಸರ ಕರೆ

“ಲಸಿಕೆಯ 2 ನೇ ಹಂತದ ಮಾಹಿತಿಗಳನ್ನು ಸೆಪ್ಟೆಂಬರ್ 8, 2020 ರಲ್ಲಿ ರಿಜಿಸ್ಟರ್‌ ಮಾಡಲಾಗಿತ್ತು. ಇದು 1 ನೇ ಹಂತದ ಪ್ರಯೋಗ ರಿಜಿಸ್ಟರ್ ಮಾಡಿದ ಕೇವಲ 2 ತಿಂಗಳೊಳಗೆ ನಡೆದಿತ್ತು. ಅಂದರೆ, 1 ನೇ ಪ್ರಯೋಗ ಪೂರ್ಣಗೊಳ್ಳುವ ಮುನ್ನವೇ 2 ನೇ ಪ್ರಯೋಗವನ್ನು ಅನ್ನು ರಿಜಿಸ್ಟರ್ ಮಾಡಲಾಗಿತ್ತು. ಅದಲ್ಲದೆ 2 ನೇ ಪ್ರಯೋಗದಲ್ಲಿ ಕೇವಲ 124 ಸ್ವಯಂಸೇವಕರು ಮಾತ್ರ ಭಾಗವಹಿಸಿದ್ದರು” ಎಂದು ಸಾಕೇತ್‌ ಹೇಳಿದ್ದಾರೆ.

ಇದನ್ನೂ ಓದಿ: ಲಸಿಕೆ ಸಂಭ್ರಮದ ಮಧ್ಯೆ ಕುಸಿಯುತ್ತಿರುವ ಆರ್ಥಿಕತೆ ಬಗ್ಗೆ ಮರೆಯದಿರಿ: ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ

“ಜುಲೈ 2020 ರಲ್ಲಿ ರಿಜಿಸ್ಟರ್ ಮಾಡಲಾಗಿದ್ದ 1ನೇ ಹಂತದ ಪ್ರಯೋಗವು ಮಾರ್ಚ್‌ 2021 ರೊಳಗೆ ಪೂರ್ತಿಗೊಳ್ಳಬೇಕಿತ್ತು. 2 ನೇ ಹಂತದ ಪ್ರಯೋಗ ಸೆಪ್ಟೆಂಬರ್‌ 8, 2020 ರಲ್ಲಿ ರಿಜಿಸ್ಟರ್ ಮಾಡಿದ್ದು, ಇದರ ಪ್ರಯೋಗವು ಒಂದು ವರ್ಷ ಹಾಗೂ 3 ತಿಂಗಳು ಅಂದರೆ 2021 ರ ಡಿಸೆಂಬರ್‌‌ವರೆಗೆ ನಡೆಯಬೇಕಿತ್ತು. 3 ನೇ ಹಂತದ ಪ್ರಯೋಗ‌ ನವೆಂಬರ್‌ 9 2020 ರಂದು ರಿಜಿಸ್ಟರ್ ಮಾಡಲಾಗಿದ್ದು, ಇದರ ಪ್ರಯೋಗವನ್ನು 25,800 ಮಂದಿಯನ್ನು ಬಳಸಿ ನಡೆಸಲಾಗುವುದು ಎಂದು ಇದರಲ್ಲಿ ಉಲ್ಲೇಖಿಸಲಾಗಿತ್ತು” ಎಂದು ಅವರು ಹೇಳಿದ್ದಾರೆ.

ಮೂರನೇ ಹಂತದ ಪ್ರಯೋಗಕ್ಕೆ ಒಂದು ವರ್ಷವನ್ನು ನಿಗದಿಪಡಿಸಲಾಗಿತ್ತು. ಆದರೆ, ಮೊದಲ ಹಂತದ ಪ್ರಯೋಗಗಳು ಮುಗಿಯುವ ಮೊದಲೇ 2 ಮತ್ತು 3 ನೇ ಹಂತದ ಪ್ರಯೋಗಗಳನ್ನು ರಿಜಿಸ್ಟರ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

“ಒಟ್ಟಾರೆಯಾಗಿ 1 ನೇ ಹಂತ ಮಾರ್ಚ್ 2021 ರೊಳಗೆ ಪೂರ್ಣಗೊಳ್ಳಬೇಕಿತ್ತು. 2 ನೇ ಹಂತವು ಡಿಸೆಂಬರ್ 2021 ರೊಳಗೆ ಪೂರ್ಣಗೊಳ್ಳಬೇಕಿತ್ತು. 3 ನೇ ಹಂತವು ನವೆಂಬರ್ 2021 ರೊಳಗೆ ಪೂರ್ಣಗೊಳ್ಳಬೇಕಿತ್ತು” ಎಂದು ಅವರು ಸೂಚಿಸಿದ್ದಾರೆ. ಆದರೆ ಭಾರತ್ ಬಯೋಟೆಕ್‍ನ ಕೊವ್ಯಾಕ್ಸಿನ್ ಲಸಿಕೆಗೆ ಭಾರತ ಸರಕಾರವು ಜನವರಿ 2021 ರಲ್ಲೇ ಅನುಮತಿ ನೀಡಿದೆ.

ಇದನ್ನೂ ಓದಿ: ಕೋವಿಡ್ ಲಸಿಕೆ ಮೂರನೇ ಹಂತದ ಪರಿಣಾಮಕಾರಿತ್ವದ ಡೇಟಾ ಮಿಸ್ಸಿಂಗ್!: ವಿಜ್ಞಾನಿಗಳ ಕಳವಳ

ತಮ್ಮ ಮಾಹಿತಿಯಲ್ಲಿ ಸಾಕೇತ್ ಗೋಖಲೆ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

  • ಭಾರತ್ ಬಯೋಟೆಕ್‍ನ ಸ್ವತಃ ರಿಜಿಸ್ಟ್ರೇಶನ್ ದಾಖಲೆಗಳಲ್ಲಿರುವಂತಹ 1 ನೇ ಪ್ರಯೋಗ ಪೂರ್ಣಗೊಳ್ಳುವಿಕೆಗೆ ಇನ್ನೂ 3 ತಿಂಗಳುಗಳಿರುವಾಗ ಯಾವ ಆಧಾರದಲ್ಲಿ ಲಸಿಕೆ ಅನುಮತಿ ನೀಡಲಾಗಿದೆ?
  • ಈ ಕಾರಣಕ್ಕಾಗಿಯೇ ಭಾರತ್ ಬಯೋಟೆಕ್‍ನ 1 ನೇ ಹಂತ ಮತ್ತು 2 ನೇ ಹಂತದ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಲು ಮೋದಿ ಸರರ್ಕಾರ ಹಿಂಜರಿಯುತ್ತಿದೆಯೆ?
  • ಲಸಿಕೆಯ 1 ನೇ ಮತ್ತು 2 ನೇ ಹಂತದ ಸ್ವಯಂ ಸೇವಕರ ಸಂಖ್ಯೆ ಕೇವಲ 1249. 130 ಕೋಟಿಯಷ್ಟು ಜನಸಂಖ್ಯೆಯಿರುವ ಭಾರತದಲ್ಲಿ ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?
  • ಪರಿಸ್ಥಿತಿ ಹೀಗಿರುವಾಗ ಈ ಲಸಿಕೆಯು 110% ಸುರಕ್ಷಿತ ಎಂದು ಹೇಗೆ ಹೇಳುತ್ತೀರಿ?
  • ಅಲ್ಲದೆ ರೂಪಾಂತರಿ ಕೊರೊನಾ ವೈರಸ್‌ ವಿರುದ್ಧ ಇದು ಕೆಲಸ ನಿರ್ವಹಿಸುತ್ತದೆ ಎಂದು ಯಾವ ಆಧಾರದಲ್ಲಿ ಹೇಳುತ್ತೀರಿ?
  • ಇದನ್ನೆಲ್ಲಾ ಸಾಬೀತುಪಡಿಸಲು 1 ನೇ ಹಾಗೂ 2 ನೇ ಹಂತದ ಅಂಕಿ ಅಂಶಗಳು ಎಲ್ಲಿವೆ? ಎಂದು ಪ್ರಶ್ನಿಸಿದ್ದಾರೆ.

“ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌ ಪ್ರಯೋಗಗಳ 1ನೇ ಹಾಗೂ 2 ನೇ ಹಂತದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಬೇಕು. ಒಂದೂವರೆ ವರ್ಷದಲ್ಲಿ ಮಗಿಯಬೇಕಿದ್ದ ಪ್ರಯೋಗಗಳು ಕೇವಲ 5 ತಿಂಗಳಿನಲ್ಲಿ ಹೇಗೆ ಮುಗಿಯಿತು ಅನ್ನುವುದನ್ನು ವಿವರಿಸಬೇಕು. ಮಾಹಿತಿಗಳನ್ನು ಬಹಿರಂಗಪಡಿಸುವಲ್ಲಿ ತೋರುತ್ತಿರುವ ಹಿಂಜರಿಕೆಯು ಬಹಳ ದೊಡ್ಡ ಅಪಾಯವನ್ನು ಸೂಚಿಸುತ್ತಿದೆ” ಎಂದು ಅವರು ಮಾಹಿತಿ ಬಿಡುಗಡೆಗೆ ಮೋದಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇಷ್ಟೇ ಅಲ್ಲದೆ ಸಾಖೇತ್‌ ಗೋಖಲೆ ತಾವು ಬರೆದ ಎಲ್ಲಾ ವಿಚಾರಗಳಿಗೂ ದಾಖಲೆಗಳನ್ನೂ ನೀಡಿದ್ದಾರೆ.

ಇದನ್ನೂ ಓದಿ: ಲಸಿಕೆಯ ಲಗುಬಗೆಯ ಲೋ ಪಾಲಿಟಿಕ್ಸ್? – ಏಕೈಕ ’ದೇಸಿ’ ಲಸಿಕೆ ಕೊವಾಕ್ಸಿನ್ ಎಷ್ಟು ಸುರಕ್ಷಿತ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...