Homeಮುಖಪುಟ‘ಹಸ್ತಕ್ಷೇಪ ಮಾಡುವ ಹಕ್ಕು ಯಾರಿಗೂ ಇಲ್ಲ’: ಅಂತರ್‌ಧರ್ಮೀಯ ಮದುವೆ ಎತ್ತಿ ಹಿಡಿದ ಅಲಹಾಬಾದ್ ಹೈಕೋರ್ಟ್

‘ಹಸ್ತಕ್ಷೇಪ ಮಾಡುವ ಹಕ್ಕು ಯಾರಿಗೂ ಇಲ್ಲ’: ಅಂತರ್‌ಧರ್ಮೀಯ ಮದುವೆ ಎತ್ತಿ ಹಿಡಿದ ಅಲಹಾಬಾದ್ ಹೈಕೋರ್ಟ್

ಹಿಂದೆಯೂ ಉತ್ತರಪ್ರದೇಶದಲ್ಲಿ ಬಲವಂತದ ಮತಾಂತರ ಕಾನೂನಿನಿಂದ ಕಿರುಕುಳಕ್ಕೆ ಒಳಗಾದ ಅಂತರ್‌ಧರ್ಮೀಯ ದಂಪತಿಗಳ ನೆರವಿಗೆ ಈ ಕೋರ್ಟ್ ಮುಂದಾಗಿತ್ತು

- Advertisement -
- Advertisement -

ಹಲವಾರು ಸಂದರ್ಭಗಳಲ್ಲಿ ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್ ಅಂತರ್‌ಜಾತಿ ಮತ್ತು ಅಂತರ್ ಧರ್ಮೀಯ ಮದುವೆಗಳನ್ನು ಎತ್ತಿ ಹಿಡಿದು ದಂಪತಿಗಳಿಗೆ ರಕ್ಷಣೆ ನೀಡಿದೆ. ಮತಾಂತರ ವಿರೋಧಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಜನೆವರಿ 15ರಂದು ಕೈಗೆತ್ತಿಕೊಳ್ಳಲಿದೆ.

ಇದೇನೂ ಮೊದಲ ಸಲವಲ್ಲ, ಹಲವಾರು ಸಲ ಅಂತರ್‌ಧರ್ಮೀಯ ದಂಪತಿಗಳ ಪರ ಅಲಹಾಬಾದ್ ಹೈಕೋರ್ಟ್ ನಿಂತಿದೆ. ಮತಾಂತರ ವಿರೋಧಿ ಕಾನೂನು ಸೃಷ್ಟಿಸುತ್ತಿರುವ ಗೊಂದಲ-ಕಿರಿಕಿರಿಯ ಪ್ರಕರಣಗಳಲ್ಲಿ ಈ ಕೋರ್ಟ್ ಅಂತರ್‌ಧರ್ಮೀಯ ಮದುವೆಗಳ ಪರ ನಿಂತಿದೆ.

ಬುಧವಾರ ಕೂಡ, ಹೊಸ ಕಾನೂನಿನಿಂದ ಅನಗತ್ಯ ಕಿರುಕುಳಕ್ಕೆ ಒಳಗಾದ ಅಂತರ್‌ಧರ್ಮೀಯ ದಂಪತಿಗಳ ಪರ ನಿಂತ ಹೈಕೋರ್ಟ್, ‘ಇವರ ಶಾಂತಿಯುತ ಬದುಕಿನಲ್ಲಿ ಹಸ್ತಕ್ಷೇಪ ಮಾಡುವ ಅರ್ಹತೆ, ಅಧಿಕಾರ ಯಾರಿಗೂ ಇಲ್ಲ’ ಎಂದು ಸ್ಪಷ್ಟವಾಗಿ ಹೇಳಿದೆ ಎಂದು ಲೈವ್‌ಲಾ ವರದಿ ಮಾಡಿದೆ.

ಮುಸ್ಲಿಂ ಪುರುಷ ಮತ್ತು ಅವರ ಹಿಂದೂ ಪತ್ನಿ (ನಂತರದಲ್ಲಿ ಇವರು ಸ್ವ ಇಚ್ಛೆಯಿಂದ ಇಸ್ಲಾಂಗೆ ಮತಾಂತರಗೊಂಡಿದ್ದಾರೆ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸರಳ್ ಶ್ರೀವಾಸ್ತವ ನೇತೃತ್ವದ ಹೈಕೋರ್ಟ್ ಪೀಠ ಈ ಕೆಳಗಿನಂತೆ ಅಭಿಪ್ರಾಯಪಟ್ಟಿದೆ.

‘ಮೆಜಾರಿಟಿ ವಯಸ್ಸು ತಲುಪಿದ ಇಬ್ಬರು ವ್ಯಕ್ತಿಗಳು ಜೊತೆಯಾಗಿ ಬದುಕುತ್ತಿದ್ದರೆ, ಅವರ ಶಾಂತಿಯುತ ಬದುಕಿನಲ್ಲಿ ಹಸ್ತಕ್ಷೇಪ ಮಾಡುವ ಅರ್ಹತೆ/ಅಧಿಕಾರ ಯಾರಿಗೂ ಇಲ್ಲ ಎಂದು ಈ ಕೋರ್ಟ್ ಮತ್ತೆ ಮತ್ತೆ ಸ್ಪಷ್ಟಪಡಿಸಿದೆ…’

ತಾವು ವಯಸ್ಕರಾಗಿದ್ದೇವೆ (ಮೆಜಾರಿಟಿ ವಯಸ್ಸಿನವರು) ಎಂದು ಹೇಳಿದ್ದ ದಂಪತಿ ತಾವು, 1997 ಮತ್ತು 1998ರಲ್ಲಿ ಜನಿಸಿರುವ ದಾಖಲೆಗಳನ್ನು ಕೋರ್ಟ್‌ಗೆ ಒದಗಿಸಿದ್ದರು.

‘ಅಗತ್ಯ ಬಿದ್ದರೆ ಈ ದಂಪತಿಗೆ ಸೂಕ್ತ ರಕ್ಷಣೆ ನೀಡಿ’ ಎಂದು ಬಿಜ್ನೋರ್ ಎಸ್‌ಪಿಗೆ ಸೂಚಿಸಿದ ನ್ಯಾ. ಶ್ರೀವಾಸ್ತವ್, ಫೆಬ್ರುವರಿ 8ಕ್ಕೆ ವಿಚಾರಣೆ ಮುಂದೂಡಿದರು ಎಂದು ಲೈವ್ ಲಾ ವರದಿ ಮಾಡಿದೆ. ‘ಪತ್ನಿ ಹೆಸರಲ್ಲಿ 3 ಲಕ್ಷ ರೂ. ಡಿಪಾಸಿಟ್ ಮಾಡಲು ಕೋರ್ಟ್ ಪತಿಗೆ ಸೂಚಿಸಿದ್ದು, ಇದು ಯಾವ ಕಾರಣಕ್ಕೆ ಎಂಬುದು ಸ್ಪಷ್ಟವಾಗಿಲ್ಲ.

ಈ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ಸುಪ್ರಿಂಕೋರ್ಟ್‌ನ ಎರಡು ತೀರ್ಪುಗಳನ್ನು ಉಲ್ಲೇಖಿಸಿದೆ. ಅಂತರ್‌ಧರ್ಮೀಯ ಮದುವೆ ವಿರೋಧಿಸಿ ಮಹಿಳೆಯ ಪಾಲಕರು ಸಲ್ಲಿಸಿದ ಅರ್ಜಿ ಪ್ರಕರಣದ ತೀರ್ಪು(2006) ಮತ್ತು ಸಂಬಂಧವೊಂದಕ್ಕಾಗಿ ಮಹಿಳೆಯನ್ನು ಆ ಕುಟುಂಬದವರೇ ಕೊಂದ ಪ್ರಕರಣದ ತೀರ್ಪು (2008)ಗಳನ್ನು ಕೋರ್ಟ್ ಉಲ್ಲೇಖಿಸಿದೆ.

2006ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ನ್ಯಾ. ಮಾರ್ಖಂಡೇಯ ಖಟ್ಜು ತೀರ್ಪಿನಲ್ಲಿ ಉಲ್ಲೇಖಿಸಿದ ಸಾಲುಗಳನ್ನು ಅಲಹಾಬಾದ್ ಹೈಕೋರ್ಟ್ ಉಲ್ಲೇಖಿಸಿದೆ: ‘ಇದು ಮುಕ್ತ ಮತ್ತು ಪ್ರಜಾಪ್ರಭುತ್ವ ದೇಶವಾಗಿದ್ದು, ಮೇಜರ್ ವಯಸ್ಸು ತಲುಪಿದ ಯಾರೇ ಆಗಲಿ ತಮಗೆ ಇಷ್ಟವಾದವರನ್ನು ಮದುವೆ ಆಗಬಹುದು. ಹುಡುಗ ಅಥವಾ ಹುಡುಗಿಯ ಪೋಷಕರಿಗೆ ಇಂತಹ ಅಂತರ್‌ಜಾತಿ ಅಥವಾ ಅಂತರ್‌ಧರ್ಮೀಯ ಮದುವೆ ಇಷ್ಟವಾಗದಿದ್ದಲ್ಲಿ, ಅವರು ಹೆಚ್ಚೆಂದರೆ ಆ ದಂಪತಿಯ ಜೊತೆ ಸಾಮಾಜಿಕ ಸಂಪರ್ಕ ಕಡಿದುಕೊಳ್ಳಬಹುದು, ಆದರೆ ಆ ದಂಪತಿಗೆ ಬೆದರಿಕೆ ಹಾಕುವುದನ್ನಾಗಲಿ, ಅವರಿಗೆ ಹಿಂಸಿಸುವುದನ್ನಾಗಲಿ, ಹಿಂಸೆಗೆ ಪ್ರಚೋದನೆ ಮಾಡುವುದನ್ನಾಗಲಿ ಮಾಡುವಂತಿಲ್ಲ….’

ಒತ್ತಾಯದ ಮತಾಂತರ ತಡೆಗೆ ಇತ್ತೀಚೆಗೆ ಉತ್ತರಪ್ರದೇಶ ಸರ್ಕಾರ ಜಾರಿಗೆ ತಂದ ಕಾಯ್ದೆಯ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟಿನ ಈ ಅಭಿಪ್ರಾಯ ಮಹತ್ವದ್ದಾಗಿದೆ. ವಾಸ್ತವದಲ್ಲಿ ಈ ಕಾಯ್ದೆ ಸಂಘ ಪರಿವಾರದ ‘ಲವ್ ಜಿಹಾದ್’ ಕತೆಗೆ ಕಾನೂನಾತ್ಮಕ ಬೆಂಬಲ ಕೊಡಲು ಜಾರಿಗೆ ಬಂದಿದೆ. ‘ಮದುವೆ ಮೂಲಕ ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಬಲವಂತದ ಮತಾಂತರ ಮಾಡುತ್ತಾರೆ’ ಎಂಬ ಕಪೋಕಲ್ಪಿತ ಸಂಚನ್ನು ಲವ್ ಜಿಹಾದ್ ಸೂಚಿಸುತ್ತದೆ.

ಕಾಯ್ದೆ ಅಂಗೀಕಾರದ ನಂತರ ಹಲವಾರು ಎಫ್‌ಐಆರ್ ದಾಖಲಾಗಿವೆ ಮತ್ತು ಹಲವಾರು ಸಂಶಯಾಸ್ಪದ ಬಂಧನಗಳು ನಡೆದಿವೆ. 2020ರ ನವೆಂಬರ್ ಒಂದರಲ್ಲೇ ಅಲಹಾಬಾದ್ ಹೈಕೋರ್ಟ್, 125 ಅಂತರ್‌ಧರ್ಮಿಯ ದಂಪತಿಗಳಿಗೆ ರಕ್ಷಣೆ ನೀಡಲು ಆದೇಶಿಸಿದೆ. ಆ ತಿಂಗಳಲ್ಲೇ ಏಕ ನ್ಯಾಯಾಧೀಶರ ಪೀಠವೊಂದು, ‘ಅಂತರ್‌ಧರ್ಮೀಯ ಮದುವೆಗಳು ಮತಾಂತರದ ಉದ್ದೇಶಕ್ಕೇ ನಡೆಯುತ್ತವೆ’ ಎಂದು ಪ್ರಕಟಿಸಿದ ನಿರ್ಧಾರವನ್ನು ಖಂಡಿಸಿದ್ದ ಹೈಕೋರ್ಟ್, ಇದು ಅಸಮ್ಮತ ನಿರ್ಧಾರವಾಗಿದ್ದು, ಈ ನಿರ್ಧಾರ ‘bad in law’ ಎಂದು ಟೀಕಿಸಿತ್ತು.

ಡಿಸೆಂಬರ್‌ನಲ್ಲಿ ಇದೇ ಅಲಹಾಬಾದ್ ಹೈಕೋರ್ಟ್, 21 ವರ್ಷದ ಹಿಂದೂ ಯುವತಿ ಶಿಖಾ ತನ್ನ ಮುಸ್ಲಿಂ ಪತಿಯೊಂದಿಗೆ ಮತ್ತೆ ಒಂದಾಗಲು ನೆರವು ನೀಡಿತ್ತು. ‘ಒಬ್ಬ ವಯಸ್ಕ ಮಹಿಳೆ ತನ್ನಿಷ್ಟದಂತೆ ಬದುಕುವ ಆಯ್ಕೆ ಹೊಂದಿದ್ದಾಳೆ. ಆಕೆ ಮೂರನೇ ವ್ಯಕ್ತಿಯ ಅಡೆತಡೆಗಳನ್ನು ಧಿಕ್ಕರಿಸಿ, ತನ್ನ ಆಯ್ಕೆಯಂತೆ ಮುಕ್ತವಾಗಿ ಮುನ್ನಡೆಯುವ ಸ್ವಾತಂತ್ರ್ಯ ಹೊಂದಿದ್ದಾಳೆ’ ಎಂದು ಪೀಠ ಅಭಿಪ್ರಾಯ ಪಟ್ಟಿತ್ತು.

ಡಿಸೆಂಬರ್ 7ರಂದು ಚೀಫ್ ಮ್ಯಾಜಿಸ್ಟ್ರೇಟ್ ಪೀಠವು ಶಿಖಾ ಅವರನ್ನು ಮಕ್ಕಳ ಕಲ್ಯಾಣ ಸಮಿತಿಯ ಆಶ್ರಯದಲ್ಲಿಟ್ಟು, ಆಕೆ ತನ್ನ ಪೋಷಕರ ಮನೆಯಲ್ಲಿ ವಾಸಿಸಲು ವ್ಯವಸ್ಥೆ ಮಾಡಲು ಸೂಚಿಸಿತ್ತು. ಆದರೆ ಅಲಹಾಬಾದ್ ಹೈಕೋರ್ಟ್ ಶಿಖಾ ತನ್ನ ಮುಸ್ಲಿಂ ಪತಿಯೊಂದಿಗೆ ಮತ್ತೆ ಒಂದಾಗುವಂತೆ ಮಾಡಿತ್ತು.

ಮತಾಂತರ ವಿರೋಧಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಜನೆವರಿ 15ರಂದು ಕೈಗೆತ್ತಿಕೊಳ್ಳಲಿದೆ.


ಇದನ್ನೂ ಓದಿ: ಲವ್ ಜಿಹಾದ್ ಎಂಬ ಕಪೋಲಕಲ್ಪಿತ: ಮತಾಂತರ ವಿರೋಧ ಕಾಯ್ದೆಯ ಅವಾಂತರ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...