Homeಸಾಹಿತ್ಯ-ಸಂಸ್ಕೃತಿಕಥೆಪುರಾಣ ಮತ್ತು ವರ್ತಮಾನದ ಭೀಷ್ಮಂದಿರ ಹೋಲಿಕೆಗಳು !!!

ಪುರಾಣ ಮತ್ತು ವರ್ತಮಾನದ ಭೀಷ್ಮಂದಿರ ಹೋಲಿಕೆಗಳು !!!

- Advertisement -
- Advertisement -

| ಇಸ್ಮತ್ ಪಜೀರ್ |

ಭೀಷ್ಮ ಒಮ್ಮೆ ನಡೆದುಕೊಂಡು ಹೋಗುತ್ತಿರುವಾಗ ಆತನ ಊರುಗೋಲಿನಡಿಗೆ ಸಿಲುಕಿದ ಓತಿಕ್ಯಾತವೊಂದು ಅಪ್ಪಚ್ಚಿಯಾಗುತ್ತದೆ. ಹಾಗೆ ವಿಲವಿಲನೆ ಒದ್ದಾಡುತ್ತಿರುವ ಓತಿಕ್ಯಾತನ ಮೇಲೆ ಕಿಂಚಿತ್ತೂ ಕರುಣೆ ತೋರದೇ ಭೀಷ್ಮ ಅದನ್ನು ತನ್ನ ಊರಿಗೋಲಿನ ತುದಿಯಲ್ಲೇ ಎತ್ತಿ ಮುಳ್ಳಿನ ಗಿಡವೊಂದರ ಮೇಲೆ ಎಸೆಯುತ್ತಾನೆ. ಅಸಹಾಯಕ ಓತಿಕ್ಯಾತ ಭೀಷ್ಮ ನಿಗೆ ನೀನು ಶರಶಯ್ಯೆಯಲ್ಲೇ ಒದ್ದಾಡಿ ಪ್ರಾಣ ಬಿಡುವಂತಾಗಲಿ ಎಂದು ಶಾಪ ಹಾಕುತ್ತದೆ. ಓತಿಕ್ಯಾತನ ಶಾಪವೇ ಭೀಷ್ಮನಿಗೆ ಶರಶಯ್ಯೆಯ ಮರಣ ತಂದಿದೆ ಎಂಬುವುದೂ ಕನ್ನಡದ ಜನಪದರ ನಂಬುಗೆ.

ಮಹಾಭಾರತದ ಭೀಷ್ಮ ತನ್ನ ಶಿಷ್ಯಂದಿರ ಪಟ್ಟವನ್ನು ಖಾಯಂಗೊಳಿಸುವ ಕನಸ ಹೊತ್ತವನಾಗಿದ್ದರೆ…
ಬಿಜೆಪಿಯ ಭೀಷ್ಮ ಸ್ವತಃ ತಾನೇ ರಾಜನಾಗುವ ಕನಸು ಹೊತ್ತಿದ್ದವರು. ಮಹಾಭಾರತದ ಭೀಷ್ಮ ಹೇಗೆ ಕೊನೆಗೂ ತನ್ನ ಶಿಷ್ಯಂದಿರ ಪಟ್ಟ ಉಳಿಸಲು ಸಾಧ್ಯವಾಗಲಿಲ್ಲವೋ… ಹಾಗೆಯೇ ಬಿಜೆಪಿಯ ಭೀಷ್ಮನೂ ತನ್ನ ಕನಸನ್ನು ಸಾಕಾರಗೊಳಿಸಿ ಪಟ್ಟವೇರಲು ಸಾಧ್ಯವಾಗದಿದ್ದುದು ಪುರಾಣ ಮತ್ತು ವರ್ತಮಾನದ ಕ್ರೂರ ವ್ಯಂಗ್ಯವೇ ಸರಿ.

ಇದೀಗ‌ ಬಿಜೆಪಿಯ ಭೀಷ್ಮ ‌ಅಡ್ವಾಣಿಯದ್ದೂ‌ ಮಹಾಭಾರತದ ಭೀಷ್ಮನದ್ದೇ ಸ್ಥಿತಿ. ಇಂದು ಅಡ್ವಾಣಿ ಎಷ್ಟೇ‌‌ ಸುಭಗನಂತೆ ನಟಿಸಲಿ. ಅಡ್ವಾಣಿಗೆ ಅವರ ಪಾಪದ ಫಲ ದೊರೆಯುತ್ತಿದೆ ಎಂದಷ್ಟೇ ಇಂದಿನ‌ ಅವರ ದಯನೀಯ ಸ್ಥಿತಿಯನ್ನು ವಿಶ್ಲೇಷಿಸುವುದು ಹೆಚ್ಚು ಸೂಕ್ತ.

ಅಡ್ವಾಣಿ ತನ್ನ ರಾಜಕೀಯ ಏಳಿಗೆಗಾಗಿ ಮಾಡಿದ ಕೃತ್ಯಗಳು ಕಡಿಮೆ ಕ್ರೌರ್ಯಯದ್ದೇನಲ್ಲ. ಸ್ವತಃ ತಾನು ಕ್ರೌರ್ಯ ಮಾಡಿಸಿದ್ದಲ್ಲದೇ, ತನ್ನ ಶಿಷ್ಯಂದಿರಾದ ಕೌರವರು ಮಾಡಿದ ಕ್ರೌರ್ಯಕ್ಕೆ ಬೀಷ್ಮ ಮೌನಸಮ್ಮತಿ ನೀಡಿ ಒಳಗೊಳಗೇ ನಕ್ಕಂತೆ… ತನ್ನ ಶಿಷ್ಯಂದಿರಾದ ಮೋದಿ- ಶಾ ಜೋಡಿ ಗುಜರಾತಿನಲ್ಲಿ ಮಾಡಿದ ಅಮಾನವೀಯ ಬರ್ಬರ ಕೃತ್ಯಕ್ಕೆ ಇಂದು ತನ್ನ ರಾಜಕೀಯ ಬದುಕಿನ ಶರಶಯ್ಯೆಯಲ್ಲಿ ಮಲಗಿರುವ ಬಿಜೆಪಿಯ ಬೀಷ್ಮ ಪಿತಾಮಹ ಅಡ್ವಾಣಿ ಒಳಗೊಳಗೇ ನಗುತ್ತಾ ಮೌನ ಸಮ್ಮತಿ ನೀಡಿದ್ದು ಇತಿಹಾಸದ ಪುಟ ಸೇರುವಷ್ಟು ಹಳತಾಗಿಲ್ಲ.

ಮಹಾಭಾರತದ ಬೀಷ್ಮನಿಗೆ ಓತಿಕ್ಯಾತನ ಶಾಪವೆಂದು ಜನಪದರು ನಂಬಿದರೆ, ನಮ್ಮ ಕಾಲದ ರಾಜಕೀಯ ಬೀಷ್ಮನಿಗೆ ಎರಡೆರಡು ಶಾಪವಿದೆ. ಒಂದನೆಯದಾಗಿ ರಾಮ ಜನ್ಮ ಭೂಮಿಯ ಹೆಸರಲ್ಲಿ ದೇಶದ ಉದ್ದಗಲದ ಚರಂಡಿಗಳಲ್ಲಿ ಮಾನವ ರಕ್ತದ ಕೋಡಿ ಹರಿಸಿದ್ದರ ಶಾಪ. ಎರಡನೆಯದಾಗಿ ತನ್ನ ಶಿಷ್ಯಂದಿರ ಬರ್ಬರತೆಗೆ ಮೌನ ಸಮ್ಮತಿ ಸೂಚಿಸುತ್ತಾ, ಮಹಾಭಾರತದ ಭೀಷ್ಮ ಓತಿಕ್ಯಾತನ ಸಾವನ್ನು ಆನಂದಿಸಿದಂತೆ ಗುಜರಾತಿನ ಅಮಾಯಕ ಮುಸ್ಲಿಮರ ಸಾವನ್ನು ಆನಂದಿಸಿದುದರ ಶಾಪ.

ಮೊದಲನೆಯದಾಗಿ ನಮ್ಮ ತುಳನಾಡಿನ ಜನಪದರ ನಂಬಿಕೆಯಂತೆ ತಲೆಗೆ ಹಾಕಿದ ನೀರು ಕಾಲಿಗೆ ಬರಲೇಬೇಕು…
ಎರಡನೆಯದಾಗಿ ನಮ್ಮ ಕನ್ನಡದ ಗಾದೆಯಂತೆ ಮಾಡಿದ್ದುಣ್ಣೋ ಮಹರಾಯ.

ಬಿಜೆಪಿಯ ಭೀಷ್ಮನ ಈ ಸ್ಥಿತಿಗೆ ಇದಕ್ಕಿಂತ ಬೇರೆ ಕಾರಣ ಬೇಕೇ….?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...