ಪಾಪ್ ಗಾಯಕಿ ರಿಯಾನ್ನ ಭಾರತದ ರೈತ ಹೋರಾಟವನ್ನು ಬೆಂಬಲಿಸಿದ ನಂತರ ಭಾರತದ ಬಾಲಿವುಡ್ ಸಹ ಈ ಕುರಿತು ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದೆ. ಆದರೆ ಮೊದಲಿಂದಲೂ ರೈತ ಹೋರಾಟ ಬೆಂಬಲಿಸುತ್ತಾ ಬಂದಿದ್ದ ಬಾಲಿವುಡ್ನ ಖ್ಯಾತ ನಟಿಯರಾದ ತಾಪ್ಸಿ ಪನ್ನು, ಫರಾಹ್ ಖಾನ್ ಅಲಿ ಮತ್ತು ಸ್ವರ ಭಾಸ್ಕರ್ರವರನ್ನು ನಟ ಅಭಯ್ ಡಿಯೋಲ್ ಶ್ಲಾಘಿಸಿದ್ದಾರೆ.
“ನನ್ನ ಮುಂದಿನ ರಿಹಾನ್ನಾ ಕುರಿತು ಬಾದಗಲ್ರಿರಿ ವಿಡಿಯೋದಲ್ಲಿ ನೀವಿರಲೇಬೇಕು. ಏಕೆಂದರೆ ಅದಕ್ಕೆ ಧೈರ್ಯವಿರಬೇಕು. ಈ ಮೂವರು ಪ್ರಿಯ ಮಹಿಳೆಯರನ್ನು ನೋಡಿ” ಎಂದು ಅಭಯ್ ಡಿಯೋಲ್ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
View this post on Instagram
ಅಭಯ್ ತನ್ನ ಪೋಸ್ಟ್ನಲ್ಲಿ ತಾಪ್ಸಿ ಪನ್ನು ಮಾಡಿದ ಟ್ವೀಟ್ನ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ “ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಅಲ್ಲಾಡಿಸುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಅಲ್ಲಾಡಿಸುವುದಾದರೆ, ಒಂದು ಕಾರ್ಯಕ್ರಮ ನಿಮ್ಮ ಧಾರ್ಮಿಕ ನಂಬಿಕೆಯನ್ನು ಅಲ್ಲಾಡಿಸುವುದಾದರೆ… ಮೊದಲು ನೀವು ನಂಬಿರುವ ಮೌಲ್ಯಗಳನ್ನು ಗಟ್ಟಿಗೊಳಿಸಲು ಕೆಲಸ ಮಾಡಿ. ಬದಲಿಗೆ ಉಳಿದವರಿಗೆ ಪ್ರೊಪಗಂಡಾ ಪಾಠ ಮಾಡಲು ಬರಬೇಡಿ” ಎಂದು ತಾಪ್ಸಿ ಬರೆದಿದ್ದಾರೆ.
ಇನ್ನು ಸ್ವರ ಭಾಸ್ಕರ್ ಈಗಾಗಲೇ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಖುದ್ದು ಹೋಗಿ ಭಾಗವಹಿಸಿ ಬಂದಿದ್ದಾರೆ. ಅಲ್ಲದೆ ಭಾರತದಲ್ಲಿ ನಡೆಯುತ್ತಿರುವ ಟ್ವಿಟರ್ ಆಂದೋಲನದಲ್ಲಿ ರಿಹಾನ್ನ, ಗ್ರೇಟಾ ಥನ್ಬರ್ಗ್ ಮತ್ತು ಮಿಯಾ ಖಲೀಫ್ ಸೇರಿದಂತೆ ಹಲವರ ಪರ ದನಿಯೆತ್ತಿದ್ದಾರೆ.
ಇನ್ನು ಫರಾಹ್ ಖಾನ್ ಅಲಿ ಟ್ವೀಟ್ ಮಾಡಿ “ರೀಲ್ ಲೈಫ್ ಹೀರೋಗಳು ಮತ್ತು ರಿಯಲ್ ಲೈಫ್ ಹೀರೋಗಳು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಎಗೆನೆಸ್ಟ್ ಪ್ರೊಪಗಾಂಡ ಎಂಬ ಹ್ಯಾಷ್ಟ್ಯಾಗ್ ಬಳಸಿ ಒಂದೇ ರೀತಿಯ ಟ್ವೀಟ್ಗಳನ್ನು ಮಾಡಿರುವುದು ಮಾರ್ಕೆಟ್ ಗಿಮ್ಮಿಕ್ಕ್ ನಂತೆ ತೋರುತ್ತದೆ. ಏನೇ ಕಾರಣಗಳಿರಲಿ ಮತ್ತು ನಾನು ಅದನ್ನು ನಿರ್ಣಯಿಸಲು ಯಾರು ಅಲ್ಲ, ಆದರೆ ನೀವು ಅದನ್ನು ಒರಿಜಿನಲ್ ನಂತೆ ತೋರಿಸಲು ಪ್ರಯತ್ನಿಸಬಹುದಿತ್ತು. ಈಗ ನೀವು ಅದರಿಂದ ದೂರ ಸರಿದಿದ್ದೀರಿ. ರೀಲ್ ಲೈಫ್ ಹೀರೋಗಳ ವಿರುದ್ಧ ರಿಯಲ್ ಲೈಫ್ ಹೀರೋಗಳು ಎಂದು ಅವರು ಬರೆದಿದ್ದಾರೆ.
“ನಮ್ಮ ದೇಶದ ಕಾರ್ಯಚಟುವಟಿಕೆಗಳನ್ನು ಹೊರಗಿನ ಶಕ್ತಿಗಳು ನಿಯಂತ್ರಿಸಲು ಪ್ರಯತ್ನಿಸುತ್ತಿವೆ ಎಂದು ನಿಮ್ಮನ್ನು ನಂಬಿಸಲು ಸುದ್ದಿ ಮಾಧ್ಯಮಗಳು ಪ್ರಯತ್ನಿಸುತ್ತಿವೆ. ಆದರೆ ನೀವು ನೆನಪಿಡಿ ಟೀಕಿಸಿದವರ್ಯಾರೂ ಅನ್ಯಗ್ರಹ ಜೀವಿಗಳಲ್ಲ. ಮತ್ತೊಬ್ಬರ ಹಕ್ಕುಗಳಿಗಾಗಿ ಧ್ವನಿ ಎತ್ತಿರುವ ಸಹಜೀವಿ ಮನುಷ್ಯರು ಅವರು. ಇವೆರಡು ಭಿನ್ನ ಚರ್ಚೆಗಳು. ನೀತಿ, ಕಾಯ್ದೆ, ಕಾನೂನು ಮತ್ತು ಅವುಗಳ ಪರಿಣಾಮದ ಮೇಲೆ ನಿಮಗೆ ಭಿನ್ನ ಅಭಿಪ್ರಾಯಗಳು ಇರಬಹುದು. ಆದರೆ ಆ ಭಿನ್ನಾಭಿಪ್ರಾಯವನ್ನು “ಅನ್ಯ” ವಾದಕ್ಕೆ ಬಳಸಿಕೊಳ್ಳಲು ಅವಕಾಶ ಕೊಡಬೇಡಿ. ಟೀಕೆ ಇರುವುದು ಮಾನವ ಹಕ್ಕುಗಳ ಮತ್ತು ಸ್ವಾತಂತ್ರ್ಯದ ಹರಣದ ಬಗ್ಗೆ..” ಎಂದು ಸೋನಾಕ್ಷಿ ಸಿನ್ಹಾ ಟ್ವೀಟ್ ಮಾಡಿದ್ದಾರೆ.
ಒಟ್ಟಾರೆಯಾಗಿ ಅಕ್ಷಯ್ ಕುಮರ್, ಅಜಯ್ ದೇವಗನ್, ಕರಣ್ ಜೋಹಾರ್, ಏಕ್ತ ಕಪೂರ್, ಸುನೀಲ್ ಶೆಟ್ಟಿ ಸರ್ಕಾರದ ಪರವಾಗಿ ಟ್ವೀಟ್ ಮಾಡಿದರೆ ಕೆಲವರು ರೈತರ ಪರ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ರಿಹಾನ್ನಾಳ ಕೃಪೆ: ಮೋದಿ ಸರ್ಕಾರದ ಅಹಂ, ಭ್ರಮೆ, ಭಯ ಬಯಲಿಗೆ! -ರಾಮಚಂದ್ರ ಗುಹಾ


