Homeಅಂತರಾಷ್ಟ್ರೀಯಮರುಪಾವತಿಯಾಗದ ಸಾಲ: ಚೌಕಿದಾರನ ಅವಧಿಯಲ್ಲಿ 5,53,606 ಕೋಟಿ ಮನ್ನಾ!

ಮರುಪಾವತಿಯಾಗದ ಸಾಲ: ಚೌಕಿದಾರನ ಅವಧಿಯಲ್ಲಿ 5,53,606 ಕೋಟಿ ಮನ್ನಾ!

- Advertisement -
- Advertisement -

ವಸೂಲಿ ಮಾಡಲಾಗದ ಅಂದರೆ ಕಳ್ಳ ಉದ್ಯಮಿಗಳು ಸಾಲ ಪಡೆದು, ಮರುಪಾವತಿ ಮಾಡದೇ ಹೋದಾಗ ಅದನ್ನು ಮರುಪಾವತಿಯಾಗದ ಸಾಲ ((NPA-Non performing loans) ಎಂದು ಬ್ಯಾಂಕಿಂಗ್ ಭಾಷೆಯಲ್ಲಿ ಕರೆಯುತ್ತಾರೆ. ಸಾಲ ಪಡೆದ ‘ದೊಡ್ಡವರು’ ಆಡಳಿತ ಪಕ್ಷದ ನಂಟು ಹೊಂದಿದ್ದರೆ, ಅವರ ಸಾಲ ವಸೂಲಾತಿ ಬ್ಯಾಂಕುಗಳಿಗೆ ಕಷ್ಟ. ಇಂತಹ ‘bad loans’ ಪ್ರಮಾಣವನ್ನು ಕಡಿಮೆ ತೋರಿಸಲು ಬ್ಯಾಂಕುಗಳು ‘write-off’ ಮಾಡಿ ಜನದ್ರೋಹಿ ಕೆಲಸ ಮಾಡುತ್ತವೆ. ‘write-off’ ಅಂದರೆ ಸಾಲಮನ್ನಾ ಅಷ್ಟೇ! ಕಳೆದ ಐದು ವರ್ಷಗಳಲ್ಲಿ ಚೌಕಿದಾರನ ಆಡಳಿತದಲ್ಲಿ ಇಂತಹ ಐದೂವರೆ ಲಕ್ಷ ಕೋಟಿ ರೂಪಾಯಿ ಸಾಲಮನ್ನಾ ಮಾಡಲಾಗಿದೆ….

ಇವತ್ತು ಸಾರ್ವಜನಿಕ ಬ್ಯಾಂಕುಗಳು ಸಂಕಷ್ಟ ಎದುರಿಸುತ್ತಿರುವುದಕ್ಕೆ ಮೂಲ ಕಾರಣ ಮೋದಿ-ಮಲ್ಯಗಳು ಸಾವಿರಾರು ಕೋಟಿ ಎತ್ತಿಕೊಂಡು ಓಡಿ ಹೋಗಿರುವುದು. ಹಾಗೆಯೇ ದೇಶದೊಳಗೇ ಇರುವ ನೂರಾರು ವಂಚಕ ಉದ್ಯಮಿಗಳ ಸಾಲಗಳನ್ನು ಬ್ಯಾಂಕುಗಳು ಮನ್ನಾ ಮಾಡಿರುವುದು. ಆಡಳಿತ ಪಕ್ಷ ಬಂಡವಾಳಶಾಹಿ ವ್ಯವಸ್ಥೆ ಪರ ನಿಂತಾಗ ಇದೆಲ್ಲ ಸಂಭವಿಸುತ್ತದೆ. ಬ್ಯಾಂಕುಗಳ ಈ ದುಸ್ಥಿತಿಯನ್ನು ಸರಿಪಡಿಸಲು ಮೋದಿ ಸರ್ಕಾರ ಪಿಎಫ್ ದುಡ್ಡನ್ನು ಎತ್ತಲು ಹೊಂಚು ಹಾಕಿತ್ತು, ಆರ್‍ಬಿಐನ ಮೀಸಲು ನಿಧಿಯ ಮೇಲೂ ಕಣ್ಣು ಹಾಕಿತ್ತು! ‘ಮುದ್ರಾ’ ಹೆಸರಲ್ಲಿ ನೀಡಲ್ಪಟ್ಟ ಸಾಲಗಳು ವಾಪಸ್ಸಾಗುವ ಲಕ್ಷಣಗಳೂ ಇಲ್ಲ. ಏಕೆಂದರೆ ಇದರ ಫಲಾನುಭವಿಗಳಲ್ಲಿ ಬಹತೇಕರು ಬಿಜೆಪಿ ನಾಯಕರ ಸಂಬಂಧಿಗಳು, ಕಾರ್ಯಕರ್ತರು…

ಶೇ. 80 ಸಾಲ ಮನ್ನಾ!
‘ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್’ ಪತ್ರಿಕೆಯು ಆರ್‍ಟಿಐನಲ್ಲಿ ಪಡೆದುಕೊಂಡ ಮಾಹಿತಿಯಲ್ಲಿ ಈ ಎನ್‍ಪಿಎ ವಿವರಗಳು ಲಭ್ಯವಾಗಿವೆ. 2008-18 ರ ಹತ್ತು ವರ್ಷಗಳ ಅವಧಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು 7 ಲಕ್ಷ ಕೋಟಿ ಎನ್‍ಪಿಎ ಸಾಲಗಳನ್ನು ಮನ್ನಾ ಮಾಡಿದ್ದು, ಅದರಲ್ಲಿ ಶೇ.80ರಷ್ಟು ( ಐದೂವರೆ ಲಕ್ಷ ಕೋಟಿ) ಸಾಲ ಚೌಕಿದಾರನ ಮೂಗಿನಡಿಯೇ ಮನ್ನಾ ಆಗಿದೆ. ಈ ರೀತಿ ಮನ್ನಾ ಆದ ಮೇಲೂ, ಬ್ಯಾಂಕುಗಳು ಕಾಟಾಚಾರಕ್ಕೆ ವಸೂಲಿಗೆ ಪ್ರಯತ್ನಿಸುವ ನಾಟಕ ಆಡುತ್ತವೆ. ಅದರಲ್ಲಿ ಶೇ. 20 ಕೂಡ ವಾಪಸ್ಸು ಬಂದಿಲ್ಲ.

2016ರಿಂದ 2019: ಮನ್ನಾ ಸೀಸನ್!

ಚುನಾವಣೆ ಸಮೀಪಿಸುತ್ತಿದ್ದಂತೆ ಈ ಮನ್ನಾ ಆಟ ಚುರುಕುಗೊಂಡಿದೆ. ಇಲ್ಲಿ ಮನ್ನಾ ಭಾಗ್ಯ ಪಡೆದ ಸಾಲಗಾರರ ಹೆಸರುಗಳನ್ನು ಗೌಪ್ಯವಾಗಿಡುವ ದುಷ್ಟ ಪದ್ಧತಿಯೂ ಜಾರಿಯಲ್ಲಿದೆ. ಆರ್‍ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅಧಿಕಾರ ಬಿಡುವಾಗ ಇಂತಹ ಸಾಲಗಾರರ ದೊಡ್ಡ ಪಟ್ಟಿಯನ್ನೇ ಸರ್ಕಾರಕ್ಕೆ ನೀಡಿದ್ದರೂ, ಇವತ್ತಿಗೂ ಸರ್ಕಾರ ಅದನ್ನು ಬಹಿರಂಗ ಮಾಡಿಲ್ಲ!

2018ರ ಏಪ್ರಿಲ್-ಡಿಸೆಂಬರ್- ಈ 9 ತಿಂಗಳ ಅವಧಿಯಲ್ಲಿ ಮನ್ನಾ ಆದ ಎನ್‍ಪಿಎ ಸಾಲ: 1,56,702 ಕೋಟಿ ರೂಪಾಯಿ. ಇದರಲ್ಲಿ ಮೊದಲ ಆರು ತಿಂಗಳಲ್ಲಿ 82,799 ಕೋಟಿ ರೂ ಮನ್ನಾ ಆಗಿದ್ದರೆ, ಕೊನೆ 3 ತಿಂಗಳಲ್ಲಿ 64 ಸಾವಿರ ಕೋಟಿ ರೂ ಮನ್ನಾ ಆಗಿದೆ.
2016-17ರಲ್ಲಿ 1,08,374 ಕೋಟಿ ರೂ, 2017-18ರಲ್ಲಿ 1,61,138 ಕೋಟಿ ರೂ ಮನ್ನಾ ಆಗಿದೆ.

ಇಲ್ಲಿ ಒಂದು ವಿಷಯ ನೆನಪಿಡಿ: ಎನ್‍ಪಿಎ ಮನ್ನಾ ಆದವರ ಹೆಸರೂ ಗೌಪ್ಯ, ಚುನಾವಣಾ ಬಾಂಡ್‍ಗಳಲ್ಲಿ ಪಾರ್ಟಿ ಫಂಡ್ ಕೊಟ್ಟವರ ಹೆಸರೂ ಗೌಪ್ಯ. ಈ 5 ವರ್ಷಗಳಲ್ಲಿ ಅದರಲ್ಲೂ ಕಳೆದ 3 ವರ್ಷಗಳಲ್ಲಿ ಮನ್ನಾ ಭಾಗ್ಯ ಪಡೆದವರು ಅದರಲ್ಲಿ ಒಂದು ದೊಡ್ಡ ಪ್ರಮಾಣವನ್ನು ಬಿಜೆಪಿಗೆ ಚುನಾವಣಾ ಬಾಂಡ್‍ಗಳ ಮೂಲಕ ಸಲ್ಲಿಸಿರುವ ಸಾಧ್ಯತೆಗಳು ದಟ್ಟವಾಗಿವೆ ಎಂಬುದು ನಮ್ಮ ಅನುಮಾನ.
(ಅಂಕಿ-ಸಂಖ್ಯೆ: ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...