Homeಅಂತರಾಷ್ಟ್ರೀಯಮರುಪಾವತಿಯಾಗದ ಸಾಲ: ಚೌಕಿದಾರನ ಅವಧಿಯಲ್ಲಿ 5,53,606 ಕೋಟಿ ಮನ್ನಾ!

ಮರುಪಾವತಿಯಾಗದ ಸಾಲ: ಚೌಕಿದಾರನ ಅವಧಿಯಲ್ಲಿ 5,53,606 ಕೋಟಿ ಮನ್ನಾ!

- Advertisement -
- Advertisement -

ವಸೂಲಿ ಮಾಡಲಾಗದ ಅಂದರೆ ಕಳ್ಳ ಉದ್ಯಮಿಗಳು ಸಾಲ ಪಡೆದು, ಮರುಪಾವತಿ ಮಾಡದೇ ಹೋದಾಗ ಅದನ್ನು ಮರುಪಾವತಿಯಾಗದ ಸಾಲ ((NPA-Non performing loans) ಎಂದು ಬ್ಯಾಂಕಿಂಗ್ ಭಾಷೆಯಲ್ಲಿ ಕರೆಯುತ್ತಾರೆ. ಸಾಲ ಪಡೆದ ‘ದೊಡ್ಡವರು’ ಆಡಳಿತ ಪಕ್ಷದ ನಂಟು ಹೊಂದಿದ್ದರೆ, ಅವರ ಸಾಲ ವಸೂಲಾತಿ ಬ್ಯಾಂಕುಗಳಿಗೆ ಕಷ್ಟ. ಇಂತಹ ‘bad loans’ ಪ್ರಮಾಣವನ್ನು ಕಡಿಮೆ ತೋರಿಸಲು ಬ್ಯಾಂಕುಗಳು ‘write-off’ ಮಾಡಿ ಜನದ್ರೋಹಿ ಕೆಲಸ ಮಾಡುತ್ತವೆ. ‘write-off’ ಅಂದರೆ ಸಾಲಮನ್ನಾ ಅಷ್ಟೇ! ಕಳೆದ ಐದು ವರ್ಷಗಳಲ್ಲಿ ಚೌಕಿದಾರನ ಆಡಳಿತದಲ್ಲಿ ಇಂತಹ ಐದೂವರೆ ಲಕ್ಷ ಕೋಟಿ ರೂಪಾಯಿ ಸಾಲಮನ್ನಾ ಮಾಡಲಾಗಿದೆ….

ಇವತ್ತು ಸಾರ್ವಜನಿಕ ಬ್ಯಾಂಕುಗಳು ಸಂಕಷ್ಟ ಎದುರಿಸುತ್ತಿರುವುದಕ್ಕೆ ಮೂಲ ಕಾರಣ ಮೋದಿ-ಮಲ್ಯಗಳು ಸಾವಿರಾರು ಕೋಟಿ ಎತ್ತಿಕೊಂಡು ಓಡಿ ಹೋಗಿರುವುದು. ಹಾಗೆಯೇ ದೇಶದೊಳಗೇ ಇರುವ ನೂರಾರು ವಂಚಕ ಉದ್ಯಮಿಗಳ ಸಾಲಗಳನ್ನು ಬ್ಯಾಂಕುಗಳು ಮನ್ನಾ ಮಾಡಿರುವುದು. ಆಡಳಿತ ಪಕ್ಷ ಬಂಡವಾಳಶಾಹಿ ವ್ಯವಸ್ಥೆ ಪರ ನಿಂತಾಗ ಇದೆಲ್ಲ ಸಂಭವಿಸುತ್ತದೆ. ಬ್ಯಾಂಕುಗಳ ಈ ದುಸ್ಥಿತಿಯನ್ನು ಸರಿಪಡಿಸಲು ಮೋದಿ ಸರ್ಕಾರ ಪಿಎಫ್ ದುಡ್ಡನ್ನು ಎತ್ತಲು ಹೊಂಚು ಹಾಕಿತ್ತು, ಆರ್‍ಬಿಐನ ಮೀಸಲು ನಿಧಿಯ ಮೇಲೂ ಕಣ್ಣು ಹಾಕಿತ್ತು! ‘ಮುದ್ರಾ’ ಹೆಸರಲ್ಲಿ ನೀಡಲ್ಪಟ್ಟ ಸಾಲಗಳು ವಾಪಸ್ಸಾಗುವ ಲಕ್ಷಣಗಳೂ ಇಲ್ಲ. ಏಕೆಂದರೆ ಇದರ ಫಲಾನುಭವಿಗಳಲ್ಲಿ ಬಹತೇಕರು ಬಿಜೆಪಿ ನಾಯಕರ ಸಂಬಂಧಿಗಳು, ಕಾರ್ಯಕರ್ತರು…

ಶೇ. 80 ಸಾಲ ಮನ್ನಾ!
‘ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್’ ಪತ್ರಿಕೆಯು ಆರ್‍ಟಿಐನಲ್ಲಿ ಪಡೆದುಕೊಂಡ ಮಾಹಿತಿಯಲ್ಲಿ ಈ ಎನ್‍ಪಿಎ ವಿವರಗಳು ಲಭ್ಯವಾಗಿವೆ. 2008-18 ರ ಹತ್ತು ವರ್ಷಗಳ ಅವಧಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು 7 ಲಕ್ಷ ಕೋಟಿ ಎನ್‍ಪಿಎ ಸಾಲಗಳನ್ನು ಮನ್ನಾ ಮಾಡಿದ್ದು, ಅದರಲ್ಲಿ ಶೇ.80ರಷ್ಟು ( ಐದೂವರೆ ಲಕ್ಷ ಕೋಟಿ) ಸಾಲ ಚೌಕಿದಾರನ ಮೂಗಿನಡಿಯೇ ಮನ್ನಾ ಆಗಿದೆ. ಈ ರೀತಿ ಮನ್ನಾ ಆದ ಮೇಲೂ, ಬ್ಯಾಂಕುಗಳು ಕಾಟಾಚಾರಕ್ಕೆ ವಸೂಲಿಗೆ ಪ್ರಯತ್ನಿಸುವ ನಾಟಕ ಆಡುತ್ತವೆ. ಅದರಲ್ಲಿ ಶೇ. 20 ಕೂಡ ವಾಪಸ್ಸು ಬಂದಿಲ್ಲ.

2016ರಿಂದ 2019: ಮನ್ನಾ ಸೀಸನ್!

ಚುನಾವಣೆ ಸಮೀಪಿಸುತ್ತಿದ್ದಂತೆ ಈ ಮನ್ನಾ ಆಟ ಚುರುಕುಗೊಂಡಿದೆ. ಇಲ್ಲಿ ಮನ್ನಾ ಭಾಗ್ಯ ಪಡೆದ ಸಾಲಗಾರರ ಹೆಸರುಗಳನ್ನು ಗೌಪ್ಯವಾಗಿಡುವ ದುಷ್ಟ ಪದ್ಧತಿಯೂ ಜಾರಿಯಲ್ಲಿದೆ. ಆರ್‍ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅಧಿಕಾರ ಬಿಡುವಾಗ ಇಂತಹ ಸಾಲಗಾರರ ದೊಡ್ಡ ಪಟ್ಟಿಯನ್ನೇ ಸರ್ಕಾರಕ್ಕೆ ನೀಡಿದ್ದರೂ, ಇವತ್ತಿಗೂ ಸರ್ಕಾರ ಅದನ್ನು ಬಹಿರಂಗ ಮಾಡಿಲ್ಲ!

2018ರ ಏಪ್ರಿಲ್-ಡಿಸೆಂಬರ್- ಈ 9 ತಿಂಗಳ ಅವಧಿಯಲ್ಲಿ ಮನ್ನಾ ಆದ ಎನ್‍ಪಿಎ ಸಾಲ: 1,56,702 ಕೋಟಿ ರೂಪಾಯಿ. ಇದರಲ್ಲಿ ಮೊದಲ ಆರು ತಿಂಗಳಲ್ಲಿ 82,799 ಕೋಟಿ ರೂ ಮನ್ನಾ ಆಗಿದ್ದರೆ, ಕೊನೆ 3 ತಿಂಗಳಲ್ಲಿ 64 ಸಾವಿರ ಕೋಟಿ ರೂ ಮನ್ನಾ ಆಗಿದೆ.
2016-17ರಲ್ಲಿ 1,08,374 ಕೋಟಿ ರೂ, 2017-18ರಲ್ಲಿ 1,61,138 ಕೋಟಿ ರೂ ಮನ್ನಾ ಆಗಿದೆ.

ಇಲ್ಲಿ ಒಂದು ವಿಷಯ ನೆನಪಿಡಿ: ಎನ್‍ಪಿಎ ಮನ್ನಾ ಆದವರ ಹೆಸರೂ ಗೌಪ್ಯ, ಚುನಾವಣಾ ಬಾಂಡ್‍ಗಳಲ್ಲಿ ಪಾರ್ಟಿ ಫಂಡ್ ಕೊಟ್ಟವರ ಹೆಸರೂ ಗೌಪ್ಯ. ಈ 5 ವರ್ಷಗಳಲ್ಲಿ ಅದರಲ್ಲೂ ಕಳೆದ 3 ವರ್ಷಗಳಲ್ಲಿ ಮನ್ನಾ ಭಾಗ್ಯ ಪಡೆದವರು ಅದರಲ್ಲಿ ಒಂದು ದೊಡ್ಡ ಪ್ರಮಾಣವನ್ನು ಬಿಜೆಪಿಗೆ ಚುನಾವಣಾ ಬಾಂಡ್‍ಗಳ ಮೂಲಕ ಸಲ್ಲಿಸಿರುವ ಸಾಧ್ಯತೆಗಳು ದಟ್ಟವಾಗಿವೆ ಎಂಬುದು ನಮ್ಮ ಅನುಮಾನ.
(ಅಂಕಿ-ಸಂಖ್ಯೆ: ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...