Homeಅಂತರಾಷ್ಟ್ರೀಯಮರುಪಾವತಿಯಾಗದ ಸಾಲ: ಚೌಕಿದಾರನ ಅವಧಿಯಲ್ಲಿ 5,53,606 ಕೋಟಿ ಮನ್ನಾ!

ಮರುಪಾವತಿಯಾಗದ ಸಾಲ: ಚೌಕಿದಾರನ ಅವಧಿಯಲ್ಲಿ 5,53,606 ಕೋಟಿ ಮನ್ನಾ!

- Advertisement -
- Advertisement -

ವಸೂಲಿ ಮಾಡಲಾಗದ ಅಂದರೆ ಕಳ್ಳ ಉದ್ಯಮಿಗಳು ಸಾಲ ಪಡೆದು, ಮರುಪಾವತಿ ಮಾಡದೇ ಹೋದಾಗ ಅದನ್ನು ಮರುಪಾವತಿಯಾಗದ ಸಾಲ ((NPA-Non performing loans) ಎಂದು ಬ್ಯಾಂಕಿಂಗ್ ಭಾಷೆಯಲ್ಲಿ ಕರೆಯುತ್ತಾರೆ. ಸಾಲ ಪಡೆದ ‘ದೊಡ್ಡವರು’ ಆಡಳಿತ ಪಕ್ಷದ ನಂಟು ಹೊಂದಿದ್ದರೆ, ಅವರ ಸಾಲ ವಸೂಲಾತಿ ಬ್ಯಾಂಕುಗಳಿಗೆ ಕಷ್ಟ. ಇಂತಹ ‘bad loans’ ಪ್ರಮಾಣವನ್ನು ಕಡಿಮೆ ತೋರಿಸಲು ಬ್ಯಾಂಕುಗಳು ‘write-off’ ಮಾಡಿ ಜನದ್ರೋಹಿ ಕೆಲಸ ಮಾಡುತ್ತವೆ. ‘write-off’ ಅಂದರೆ ಸಾಲಮನ್ನಾ ಅಷ್ಟೇ! ಕಳೆದ ಐದು ವರ್ಷಗಳಲ್ಲಿ ಚೌಕಿದಾರನ ಆಡಳಿತದಲ್ಲಿ ಇಂತಹ ಐದೂವರೆ ಲಕ್ಷ ಕೋಟಿ ರೂಪಾಯಿ ಸಾಲಮನ್ನಾ ಮಾಡಲಾಗಿದೆ….

ಇವತ್ತು ಸಾರ್ವಜನಿಕ ಬ್ಯಾಂಕುಗಳು ಸಂಕಷ್ಟ ಎದುರಿಸುತ್ತಿರುವುದಕ್ಕೆ ಮೂಲ ಕಾರಣ ಮೋದಿ-ಮಲ್ಯಗಳು ಸಾವಿರಾರು ಕೋಟಿ ಎತ್ತಿಕೊಂಡು ಓಡಿ ಹೋಗಿರುವುದು. ಹಾಗೆಯೇ ದೇಶದೊಳಗೇ ಇರುವ ನೂರಾರು ವಂಚಕ ಉದ್ಯಮಿಗಳ ಸಾಲಗಳನ್ನು ಬ್ಯಾಂಕುಗಳು ಮನ್ನಾ ಮಾಡಿರುವುದು. ಆಡಳಿತ ಪಕ್ಷ ಬಂಡವಾಳಶಾಹಿ ವ್ಯವಸ್ಥೆ ಪರ ನಿಂತಾಗ ಇದೆಲ್ಲ ಸಂಭವಿಸುತ್ತದೆ. ಬ್ಯಾಂಕುಗಳ ಈ ದುಸ್ಥಿತಿಯನ್ನು ಸರಿಪಡಿಸಲು ಮೋದಿ ಸರ್ಕಾರ ಪಿಎಫ್ ದುಡ್ಡನ್ನು ಎತ್ತಲು ಹೊಂಚು ಹಾಕಿತ್ತು, ಆರ್‍ಬಿಐನ ಮೀಸಲು ನಿಧಿಯ ಮೇಲೂ ಕಣ್ಣು ಹಾಕಿತ್ತು! ‘ಮುದ್ರಾ’ ಹೆಸರಲ್ಲಿ ನೀಡಲ್ಪಟ್ಟ ಸಾಲಗಳು ವಾಪಸ್ಸಾಗುವ ಲಕ್ಷಣಗಳೂ ಇಲ್ಲ. ಏಕೆಂದರೆ ಇದರ ಫಲಾನುಭವಿಗಳಲ್ಲಿ ಬಹತೇಕರು ಬಿಜೆಪಿ ನಾಯಕರ ಸಂಬಂಧಿಗಳು, ಕಾರ್ಯಕರ್ತರು…

ಶೇ. 80 ಸಾಲ ಮನ್ನಾ!
‘ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್’ ಪತ್ರಿಕೆಯು ಆರ್‍ಟಿಐನಲ್ಲಿ ಪಡೆದುಕೊಂಡ ಮಾಹಿತಿಯಲ್ಲಿ ಈ ಎನ್‍ಪಿಎ ವಿವರಗಳು ಲಭ್ಯವಾಗಿವೆ. 2008-18 ರ ಹತ್ತು ವರ್ಷಗಳ ಅವಧಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು 7 ಲಕ್ಷ ಕೋಟಿ ಎನ್‍ಪಿಎ ಸಾಲಗಳನ್ನು ಮನ್ನಾ ಮಾಡಿದ್ದು, ಅದರಲ್ಲಿ ಶೇ.80ರಷ್ಟು ( ಐದೂವರೆ ಲಕ್ಷ ಕೋಟಿ) ಸಾಲ ಚೌಕಿದಾರನ ಮೂಗಿನಡಿಯೇ ಮನ್ನಾ ಆಗಿದೆ. ಈ ರೀತಿ ಮನ್ನಾ ಆದ ಮೇಲೂ, ಬ್ಯಾಂಕುಗಳು ಕಾಟಾಚಾರಕ್ಕೆ ವಸೂಲಿಗೆ ಪ್ರಯತ್ನಿಸುವ ನಾಟಕ ಆಡುತ್ತವೆ. ಅದರಲ್ಲಿ ಶೇ. 20 ಕೂಡ ವಾಪಸ್ಸು ಬಂದಿಲ್ಲ.

2016ರಿಂದ 2019: ಮನ್ನಾ ಸೀಸನ್!

ಚುನಾವಣೆ ಸಮೀಪಿಸುತ್ತಿದ್ದಂತೆ ಈ ಮನ್ನಾ ಆಟ ಚುರುಕುಗೊಂಡಿದೆ. ಇಲ್ಲಿ ಮನ್ನಾ ಭಾಗ್ಯ ಪಡೆದ ಸಾಲಗಾರರ ಹೆಸರುಗಳನ್ನು ಗೌಪ್ಯವಾಗಿಡುವ ದುಷ್ಟ ಪದ್ಧತಿಯೂ ಜಾರಿಯಲ್ಲಿದೆ. ಆರ್‍ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅಧಿಕಾರ ಬಿಡುವಾಗ ಇಂತಹ ಸಾಲಗಾರರ ದೊಡ್ಡ ಪಟ್ಟಿಯನ್ನೇ ಸರ್ಕಾರಕ್ಕೆ ನೀಡಿದ್ದರೂ, ಇವತ್ತಿಗೂ ಸರ್ಕಾರ ಅದನ್ನು ಬಹಿರಂಗ ಮಾಡಿಲ್ಲ!

2018ರ ಏಪ್ರಿಲ್-ಡಿಸೆಂಬರ್- ಈ 9 ತಿಂಗಳ ಅವಧಿಯಲ್ಲಿ ಮನ್ನಾ ಆದ ಎನ್‍ಪಿಎ ಸಾಲ: 1,56,702 ಕೋಟಿ ರೂಪಾಯಿ. ಇದರಲ್ಲಿ ಮೊದಲ ಆರು ತಿಂಗಳಲ್ಲಿ 82,799 ಕೋಟಿ ರೂ ಮನ್ನಾ ಆಗಿದ್ದರೆ, ಕೊನೆ 3 ತಿಂಗಳಲ್ಲಿ 64 ಸಾವಿರ ಕೋಟಿ ರೂ ಮನ್ನಾ ಆಗಿದೆ.
2016-17ರಲ್ಲಿ 1,08,374 ಕೋಟಿ ರೂ, 2017-18ರಲ್ಲಿ 1,61,138 ಕೋಟಿ ರೂ ಮನ್ನಾ ಆಗಿದೆ.

ಇಲ್ಲಿ ಒಂದು ವಿಷಯ ನೆನಪಿಡಿ: ಎನ್‍ಪಿಎ ಮನ್ನಾ ಆದವರ ಹೆಸರೂ ಗೌಪ್ಯ, ಚುನಾವಣಾ ಬಾಂಡ್‍ಗಳಲ್ಲಿ ಪಾರ್ಟಿ ಫಂಡ್ ಕೊಟ್ಟವರ ಹೆಸರೂ ಗೌಪ್ಯ. ಈ 5 ವರ್ಷಗಳಲ್ಲಿ ಅದರಲ್ಲೂ ಕಳೆದ 3 ವರ್ಷಗಳಲ್ಲಿ ಮನ್ನಾ ಭಾಗ್ಯ ಪಡೆದವರು ಅದರಲ್ಲಿ ಒಂದು ದೊಡ್ಡ ಪ್ರಮಾಣವನ್ನು ಬಿಜೆಪಿಗೆ ಚುನಾವಣಾ ಬಾಂಡ್‍ಗಳ ಮೂಲಕ ಸಲ್ಲಿಸಿರುವ ಸಾಧ್ಯತೆಗಳು ದಟ್ಟವಾಗಿವೆ ಎಂಬುದು ನಮ್ಮ ಅನುಮಾನ.
(ಅಂಕಿ-ಸಂಖ್ಯೆ: ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...

‘ರಾಮನಿಗೆ ಅವಮಾನಿಸಿದ್ದಕ್ಕೆ ಶಾಯಿ ಎರಚಿದೆ’: ಜಂತರ್ ಮಂತರ್‌ನಲ್ಲಿ ಅಭಿಜೀತ್ ದೀಪ್ಕೆ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡ ಬರ್ಖಾ ಟ್ರೆಹಾನ್

ನವದೆಹಲಿ: ದೇಶದ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಜುಲೈ 18 ರ ಶನಿವಾರದಂದು ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ‘ಜಿರಳೆ ಜನತಾ ಪಕ್ಷ’ದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಶಾಯಿ ಎರಚಿದ...

ಸರ್ವಪಕ್ಷ ಸಭೆ: TMC ಬಂಡಾಯ ಸಂಸದರಿಗೆ ಸ್ಪೆಷಲ್ ಸೀಟು, INDIA ಮೈತ್ರಿಕೂಟದ ಸಂಸದರು ವಾಕೌಟ್

ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ರವಿವಾರ ನಡೆದ ಸರ್ವಪಕ್ಷಗಳ ಸಭೆಯು ತೀವ್ರ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದಿಂದ ಬಂಡಾಯವೆದ್ದ ಸಂಸದರಿಗೆ ಕೇಂದ್ರ ಸರ್ಕಾರವು...

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಹಾದಿ ತಪ್ಪಿಸಲು BJP ಪಿತೂರಿ: ಸಿಜೆಪಿ ಗಂಭೀರ ಆರೋಪ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ (NEET) ಪರೀಕ್ಷಾ ಹಗರಣದ ವಿರುದ್ಧ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್ಚುಕ್ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP) ಯುವಜನರು ನಡೆಸುತ್ತಿರುವ ಹೋರಾಟದ ಮೈದಾನದಿಂದ ಆತಂಕಕಾರಿ ವರದಿಗಳು...

‘ನಿಮ್ಮ ಮೌನ ಸ್ವೀಕಾರಾರ್ಹವಲ್ಲ’: ರಾಮ ಮಂದಿರ ದೇಣಿಗೆ ‘ಕಳ್ಳತನ’ದ ತನಿಖೆಗೆ ಮೋದಿಗೆ ಖರ್ಗೆ-ರಾಹುಲ್ ಗಾಂಧಿ ಪತ್ರ

ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಅಯೋಧ್ಯೆ ರಾಮ ಮಂದಿರ ನಿರ್ಮಾಣದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಆರ್ಥಿಕ ಅಕ್ರಮ ಹಾಗೂ ‘ಕಳ್ಳತನ’ದ ವಿಷಯ ರಾಷ್ಟ್ರ ರಾಜಕಾರಣದಲ್ಲಿ...

ಶಾಂತಿಯುತ ಪ್ರತಿಭಟನೆಗಳನ್ನು ಮೋದಿ ಸರ್ಕಾರ ಹತ್ತಿಕ್ಕುತ್ತಿದೆ: ರಾಹುಲ್ ಗಾಂಧಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಿದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಮೌನ ಮುರಿದಿದ್ದಾರೆ. "ಶಾಂತಿಯುತ ಪ್ರತಿಭಟನೆಗಳನ್ನು...

ಸೋನಮ್ ವಾಂಗ್‌ಚುಕ್ ಬಲವಂತದ ಬಂಧನ; ಕಣ್ಣೀರಿಟ್ಟು ಉಪವಾಸ ಸತ್ಯಾಗ್ರಹ ಆರಂಭಿಸಿದ ಅಭಿಜೀತ್ ದಿಪ್ಕೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸ್ ಸಿಬ್ಬಂದಿ ಬಲವಂತವಾಗಿ, ಬಲಪ್ರಯೋಗದ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳದಲ್ಲಿ ಗದ್ದಲ ಉಂಟಾಯಿತು....

ಜಮ್ಮು-ಕಾಶ್ಮೀರ| ಭದ್ರತಾ ಸಿಬ್ಬಂದಿ ಗುಂಡಿಗೆ ವ್ಯಕ್ತಿ ಸಾವು; ಭುಗಿಲೆದ್ದ ಪ್ರತಿಭಟನೆ

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಭದೇರ್ವಾದ ಜೈ ಕಣಿವೆ ಪ್ರದೇಶದಲ್ಲಿ ಗುರುವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ 30 ವರ್ಷದ ನಾಗರಿಕನೊಬ್ಬ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ. ಮೃತರನ್ನು...

ಸಿಜೆಪಿ ಪ್ರತಿಭಟನೆ ಮೇಲೆ ಕೇಂದ್ರದ ಬಲಪ್ರಯೋಗ: ಸೋನಮ್ ವಾಂಗ್‌ಚುಕ್ ಅವರನ್ನು ಬಂಧಿಸಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ದೆಹಲಿಯ ಜಂತರ್ ಮಂತರ್‌ನಲ್ಲಿ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶನಿವಾರ ಬೆಳಿಗ್ಗೆ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ...

ಪ್ರಶ್ನೆಪತ್ರಿಕೆ ಸೋರಿಕೆಗೆ ಇಡೀ ವ್ಯವಸ್ಥೆಯನ್ನೇ ದೂಷಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ

ರಾಜಕೀಯ ಪಕ್ಷ ಅಥವಾ ಸಂಘಟನೆಯು ಯಾವುದೇ ಶಿಕ್ಷಣ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಜು.17) ರಂದು ಹೇಳಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯ ವಿಷಯದ ಬಗ್ಗೆ ರಾಜಕೀಯ ಒಮ್ಮತಕ್ಕೆ ಕರೆ...