Homeಕರ್ನಾಟಕದಿಶಾ ಬಂಧನ ಕನ್ನಡಿಗರಿಗೆ ಮಾಡಿರುವ ಅಪಮಾನ! ಜಗತ್ತಿನ ಮಕ್ಕಳೆದುರು ತಲೆತಗ್ಗಿಸಿದ ಭಾರತ!

ದಿಶಾ ಬಂಧನ ಕನ್ನಡಿಗರಿಗೆ ಮಾಡಿರುವ ಅಪಮಾನ! ಜಗತ್ತಿನ ಮಕ್ಕಳೆದುರು ತಲೆತಗ್ಗಿಸಿದ ಭಾರತ!

- Advertisement -
- Advertisement -

ಟೂಲ್ ಕಿಟ್ ಕೇಸ್‌ನಲ್ಲಿ ದಿಶಾ ರವಿ ಎಂಬ 21 ವರ್ಷ ವಯಸ್ಸಿನ ಹೋರಾಟಗಾರ್ತಿಯನ್ನು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿರೋದು ಪ್ರಜಾಪ್ರಭುತ್ವದ ಕಗ್ಗೊಲೆ ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಗೆ ಮಾಡಿರುವ ಅವಮಾನವಾಗಿದೆ.

 

ದೆಹಲಿ ಪೊಲೀಸರು ನೇರವಾಗಿ ಬೆಂಗಳೂರಿಗೆ “ದಾಳಿ” ಮಾಡಿ ಕನ್ನಡಿಗ ಹೋರಾಟಗಾರ್ತಿಯನ್ನು ಬಂಧಿಸಿದ್ದು ಕನ್ನಡಿಗರಿಗೆ ಮಾಡಿದ ಅಪಮಾನ. ಬೆಂಗಳೂರು ನಗರ ಪೊಲೀಸರಿಗೆ ಮಾಹಿತಿಯನ್ನೇ ನೀಡದೆ ದಿಶಾ ಮನೆಗೆ ದಾಳಿ ಮಾಡಿ, ಗಂಟೆಗಟ್ಟಲೆ ವಿಚಾರಣೆ ನಡೆಸಿ ಬಂಧಿಸಿರೋದು ಒಕ್ಕೂಟ ವ್ಯವಸ್ಥೆಗೆ ಅವಮಾನವಲ್ಲದೆ ಮತ್ತೇನು?
ಪ್ರತೀ ರಾಜ್ಯಗಳು ತನ್ನದೇ ಆದ ಸ್ವತಂತ್ರ ಪೊಲೀಸ್ ಬಲವನ್ನು ಹೊಂದಿದೆ. ರಾಜ್ಯದ ಆಗುಹೋಗುಗಳ ಮೇಲೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ. ದೆಹಲಿ ಪೊಲೀಸರು ಮಾತ್ರ ಕೇಂದ್ರ ಗೃಹ ಇಲಾಖೆಯ ಅಧೀನದಲ್ಲಿ ಬರುತ್ತದೆ. ಕೇಂದ್ರ ಗೃಹ ಇಲಾಖೆಯ ಅಧೀನದಲ್ಲಿರುವ ಪೊಲೀಸರು ಎಂಬ ಕಾರಣಕ್ಕೆ ಬೇಕುಬೇಕಾದ ರಾಜ್ಯಗಳಲ್ಲಿ ಅವರು ದಾಳಿ ನಡೆಸುವಂತಿಲ್ಲ. ಇಂತಹ ಉದ್ಧಟತನಗಳು ದಕ್ಷಿಣ ಭಾರತದ ರಾಜ್ಯಗಳ ಮೇಲೆ ಕೇಂದ್ರ ನಡೆಸುವ ದಬ್ಬಾಳಿಕೆಯನ್ನು ಸೂಚಿಸುತ್ತದೆ.

ಜಾಗತಿಕ ತಾಪಮಾನದ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ನಡೆಸುತ್ತಿರುವ ದಿಶಾ ರವಿ ಕನ್ನಡಿಗರ ಹೆಮ್ಮೆ. ಸ್ವೀಡನ್‌ನ ಗ್ರೆಟಾ ಥನ್‌ಬರ್ಗ್ ಮತ್ತು ಬೆಂಗಳೂರಿನ ದಿಶಾ ರವಿ ಹೋರಾಟದ ಸಹಪಯಣಿಗರು. ಆದರೆ ಗ್ರೆಟಾ ಥನ್‌ಬರ್ಗ್ ಅವರನ್ನು ಅಲ್ಲಿನ ಸರ್ಕಾರ ನಡೆಸಿಕೊಂಡ ರೀತಿಗೂ, ದಿಶಾ ರವಿಯವರನ್ನು ಇಲ್ಲಿನ ನಮ್ಮ ಸರ್ಕಾರ ನಡೆಸಿಕೊಂಡ ರೀತಿಯನ್ನೂ ನಾವು ಆತ್ಮವಿಮಶೆ ಮಾಡಿಕೊಳ್ಳಬೇಕಿದೆ. ದಿಶಾ ಮತ್ತು ಗ್ರೆಟಾ ಹೆಚ್ಚು ಕಡಿಮೆ ಒಂದೇ ವಯಸ್ಸಿನವರು. ಒಂದೇ ಗುರಿ, ಉದ್ದೇಶ ಹೊಂದಿರುವವರು. ಗ್ರೆಟಾ ಅಲ್ಲಿನ ಸರ್ಕಾರದ ಆತಿಥ್ಯದಲ್ಲಿದ್ದರೆ, ನಮ್ಮ ದಿಶಾ ಪೊಲೀಸ್ ಆತಿಥ್ಯದಲ್ಲಿದ್ದಾರೆ.

ಗ್ರೆಟಾ ಥನ್‌ಬರ್ಗ್ ತನ್ನ ನೇರ ಮಾತಿನ ವಿಧಾನಕ್ಕೆ ಹೆಸರುವಾಸಿಯಾಗಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ, ಸಾರ್ವಜನಿಕವಾಗಿ ಸಭೆಗಳಲ್ಲಿ ಹವಾಮಾನ ಬಿಕ್ಕಟ್ಟು ಕುರಿತು ಅವಳು ವಿವರಿಸಿ, ಪರಿಹಾರ ಕ್ರಮಗಳನ್ನು ಸರ್ಕಾರದ ಮುಂದಿಟ್ಟು ಒತ್ತಾಯಿಸುತ್ತಾಳೆ. ಸರ್ಕಾರ ಕ್ರಮ ಕೈಗೊಳ್ಳದೇ ಹೋದಾಗ ಪ್ರತಿಭಟಿಸಿದ್ದಾಳೆ. ಶಾಲೆಯಲ್ಲೆ ಗ್ರೆಟಾ ಮುಷ್ಕರ ಹೂಡಿದ್ದೂ ಇದೆ, ಸಂಸತ್ತಿಗೆ ಮುತ್ತಿಗೆ ಹಾಕಿದ್ದೂ ಇದೆ. ನಮ್ಮ ದಿಶಾ ಕೂಡ ತಮ್ಮ ಚೌಕಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಆದರೆ ಗ್ರೆಟಾ ಥನ್‌ಬರ್ಗ್‌ಗೆ ಸ್ವೀಡನ್‌ನಲ್ಲಿ ಗೋಲ್ಡೆನ್ ಕಮೆರಾ ಪ್ರಶಸ್ತಿ (2019); ಫ್ರಿಟ್ ಆರ್ಡ್ ಪ್ರಶಸ್ತಿ (2019); ರಾಚೆಲ್ ಕಾರ್ಸನ್ ಪ್ರಶಸ್ತಿ (2019); ಆತ್ಮಸಾಕ್ಷಿಯ ರಾಯಭಾರಿ ಪ್ರಶಸ್ತಿ (2019); ರಾಯಲ್ ಸ್ಕಾಟಿಷ್ ಜಿಯಾಗ್ರಫಿಕಲ್ ಸೊಸೈಟಿಯ ಫೆಲೋ (FRSGS -Fellow of the Royal Scottish Geographical Society); ಗೆಡ್ಡೆಸ್ ಎನ್ವಿರಾನ್ಮೆಂಟ್ ಮೆಡಲ್ (2019); ಜೀವನೋಪಾಯ ಹಕ್ಕು ಪ್ರಶಸ್ತಿ (2019); ಅಂತರರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿ (2019); ವರ್ಷದ ವ್ಯಕ್ತಿ (2019) ಹೀಗೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಆದರೆ ನಾವು ಅದೇ ಆಂದೋಲನದ ಕನ್ನಡಿಗ ಹೋರಾಟಗಾರ್ತಿಯನ್ನು ನಡೆಸಿಕೊಂಡ ರೀತಿ ಯಾವ ಬಗೆಯದು? ಇಡೀ ವಿಶ್ವ ನಮ್ಮತ್ತ ನೋಡುತ್ತಿದೆ.

2019 ರ ’ಟೈಮ್ ನಿಯತಕಾಲಿಕೆ’ಯು ಗ್ರೆಟಾ ಥನ್‌ಬರ್ಗ್‌ಅನ್ನು 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು ಎಂದು ಹೆಸರಿಸಿದೆ. ಆದರೆ ಗ್ರೆಟಾ ಥನ್‌ಬರ್ಗ್‌ಗೆ ಯಾವ ರೀತಿಯಲ್ಲೂ ಕಮ್ಮಿ ಇಲ್ಲದ ಜಾಗತಿಕ ತಾಪಮಾನ ವಿಚಾರದ ಹೋರಾಟಗಾರ್ತಿ ದಿಶಾಳನ್ನು ಇಲ್ಲಿನ ಮಾಧ್ಯಮಗಳು ಭಯೋತ್ಪಾದಕಿಯೆಂದೂ, ದೇಶದ್ರೋಹಿಯೆಂದೂ ಚಿತ್ರಿಸುತ್ತಿದೆ. ರಾಷ್ಟ್ರೀಯ ಮಾಧ್ಯಮಗಳು ಮಣ್ಣು ತಿನ್ನಲಿ. ಕನಿಷ್ಟ ಕನ್ನಡ ಮಾಧ್ಯಮಗಳಾದರೂ ದಿಶಾ ನಮ್ಮ ಸಾಕ್ಷಿ ಪ್ರಜ್ಞೆ ಎಂಬುದನ್ನು ಮನಗಾಣಬೇಕಿತ್ತು. ಪ್ರಶಸ್ತಿ ಘೋಷಣೆ ಬಿಡಿ, ಕನಿಷ್ಟ ಮೌನವಾಗಿದ್ದರೂ ಸಾಕಿತ್ತು. ದಿಶಾಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರ ಧ್ವನಿ ಎಂದು ಹೆಮ್ಮೆಪಟ್ಟುಕೊಳ್ಳುವ ಕನ್ನಡ ಮಾಧ್ಯಮವನ್ನು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ.
ದಿಶಾಳ ಸಹವರ್ತಿ ಗ್ರೆಟಾ ಥನ್‌ಬರ್ಗ್ ಅವರನ್ನು 2019ರ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಯಿತು. ನಾವು ದಿಶಾಳಿಗೆ ದೇಶದ್ರೋಹಿ ಪಟ್ಟ ಕಟ್ಟಿ ದೇಶದಲ್ಲಿ ಅಶಾಂತಿ ಸೃಷ್ಟಿಸುವ ಪಿತೂರಿ ಎಂದು ಸೆಕ್ಷನ್ ಜಡಿದು ಜೈಲಿಗಟ್ಟಿದ್ದೇವೆ.

ಭಾರತ ವಿಶ್ವಗುರು ಆಗುತ್ತದೆ ಎಂದು ಬಲಪಂಥೀಯರು ಭಾಷಣ ಮಾಡಿದ್ದನ್ನು ಕೇಳಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಭಾರತವೇ ವಿಶ್ವಗುರುವಾಗಿತ್ತು. ಹಲವು ಭಾಷೆ, ಹಲವು ಚಿಂತನೆ, ಹಲವು ಬಣ್ಣಗಳಿಗೆ ಈ ಹಿಂದೆ ಭಾರತದಲ್ಲಿ ಮುಕ್ತ ಸ್ವಾತಂತ್ರ್ಯ ಇತ್ತು. ಹಾಗಾಗಿಯೇ ವಿಶ್ವದ ಅತ್ಯುನ್ನತ ಪ್ರಜಾಸತ್ತಾತ್ಮಕ ದೇಶಗಳ ಸಾಲಿನಲ್ಲಿ ನಾವೂ ನಿಲ್ಲುತ್ತಿದ್ದೆವು. ಈಗ ಇಡೀ ವಿಶ್ವದಲ್ಲಿ ದಿಶಾಳ ವಿಚಾರ ಚರ್ಚೆಯಾಗುತ್ತಿದೆ. ಸರ್ಕಾರದ ವಿರುದ್ಧದ ಸಾಮಾಜಿಕ ಜಾಲತಾಣದ ಹೋರಾಟವನ್ನು ರೂಪಿಸಿದಳು ಎಂಬ ಆರೋಪ ಹೊರಿಸಿ ಯುವ ಹೋರಾಟಗಾರ್ತಿಯೊಬ್ಬಳನ್ನು ಬಂಧಿಸಿ ವಿಶ್ವದ ಮುಂದೆ ನಮ್ಮ ಸಣ್ಣತನವನ್ನು ತೋರಿಸಿದ್ದೇವೆ.

ದಿಶಾ ಮತ್ತು ಗ್ರೆಟಾ ಒಟ್ಟಾಗಿ “ಭವಿಷ್ಯಕ್ಕಾಗಿ ಶುಕ್ರವಾರ” ಎಂಬ ಹೆಸರಿನಲ್ಲಿ “ಶಾಲಾ ಹವಾಮಾನ ಮುಷ್ಕರ ಆಂದೋಲನವನ್ನು” ಸಂಘಟಿಸುತ್ತಿದ್ದರು. 2019ರಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡ ಹಲವು ಪ್ರತಿಭಟನೆಗಳು ವಿಶ್ವದೆಲ್ಲೆಡೆ ನಡೆದವು. ಜಗತ್ತಿನಾದ್ಯಂತ ವಿದ್ಯಾರ್ಥಿಗಳನ್ನು ಸಂಘಟಿಸಿದ್ದ ಯುವ ಹೋರಾಟಗಾರ್ತಿ ದಿಶಾ ನಮ್ಮವಳು, ನಮ್ಮ ಕನ್ನಡಿಗಳು ಎಂಬುದು ನಮ್ಮ ಹೆಮ್ಮೆ. ಈಗ ನಾವು ದಿಶಾ ಬಿಡುಗಡೆಗೆ ಕನ್ನಡಿಗರಾಗಿ ಹೋರಾಟ ನಡೆಸಬೇಕಿದೆ. ಇಲ್ಲದೇ ಇದ್ದಲ್ಲಿ ಕನ್ನಡಿಗರು ವಿಶ್ವದ ಮಕ್ಕಳ ಎದುರು ತಲೆತಗ್ಗಿಸಿ ನಿಲ್ಲಬೇಕಾಗುತ್ತದೆ.

ಹರೀಶ್ ಕುಮಾರ್ ಬಿ
(ಹೋರಾಟಗಾರರು ಮತ್ತು ಕರ್ನಾಟಕ ರಣಧೀರ ಪಡೆ ಸಂಘಟನೆಯ ಮುಖಂಡರು. ನೆಲ, ಭಾಷೆ ಮತ್ತು ಒಕ್ಕೂಟ ವ್ಯವಸ್ಥೆಯ ಉಳಿವಿಗಾಗಿ ಹಲವು ಹೋರಾಟಗಳನ್ನು ರೂಪಿಸಿ ಮುನ್ನಡೆಸುತ್ತಿದ್ದಾರೆ)


ಇದನ್ನೂ ಓದಿ: ದಿಶಾ ಅವರಂತೆ ಎಲ್ಲರೂ ಸುಳಿಯಲ್ಲಿದ್ದಾರೆ! – ಲಿಯೋ ಸಾಲ್ಡಾನಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...