Homeಕರ್ನಾಟಕಈ ದೇಶದ ನಾಯಕರಿಗಿಂತ ಜನ ಹೆಚ್ಚು ಬುದ್ಧಿವಂತರು ಅನ್ನೋ ಮಾತಿನಾಗ ನನಗ ನಂಬಿಕೆ ಅದ.. -...

ಈ ದೇಶದ ನಾಯಕರಿಗಿಂತ ಜನ ಹೆಚ್ಚು ಬುದ್ಧಿವಂತರು ಅನ್ನೋ ಮಾತಿನಾಗ ನನಗ ನಂಬಿಕೆ ಅದ.. – ಡಿ.ಆರ್.ಪಾಟೀಲ

- Advertisement -
- Advertisement -

ಸಂದರ್ಶನ:| ಪಿ.ಕೆ ಮಲ್ಲನಗೌಡರ್ |

ಧಗಧಗ ಝಳದ ನಡುವೆ ಒಂದು ‘ತಣ್ಣನೆ’ ಸಂದರ್ಶನ
ಈ ಸಲ ಹಾವೇರಿ-ಗದಗು ಸೇರಿದಂತೆ ಈ ಕಡೆಯಲ್ಲಿ ಎಂದಿಗಿಂತ ಜಾಸ್ತಿ ಬಿಸಿಲು. ಚುನಾವಣೆಯ ಕಾಳಗದಲ್ಲೂ ಉರಿ ಉರಿ. ರಾತ್ರಿ ಹತ್ತೂವರೆ ಹೊತ್ತಿಗೆ ಬಯಲಿನಲ್ಲಿ ಈ ಸಂದರ್ಶನ ನಡೆದಾಗ ಝಳ ಝಳ. ಪತ್ರಿಕೆಯ ಪ್ರಶ್ನೆಗಳಿಗೆ ಅಭ್ಯರ್ಥಿ ಕೊಡುತ್ತಿದ್ದ ತಣ್ಣನೆಯ ಉತ್ತರಗಳಲ್ಲಿ ವ್ಯವಸ್ಥೆಯ ವಿರುದ್ಧದ ‘ಕಾವು’ ಕಾಣತೊಡಗಿತ್ತು… ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲರೊಂದಿಗಿನ ಸಂದರ್ಶನ ಇಲ್ಲಿದೆ…

ಪತ್ರಿಕೆ: ಈ ಚುನಾವಣೆ ಮಹತ್ತದ್ದು, ಭಿನ್ನವಾದುದು ಎಂದು ವಿವಿಧ ಪಾರ್ಟಿಗಳು ತಮ್ಮ ಧಾಟಿಯಲ್ಲಿ ಹೇಳ್ತಾ ಇವೆ. ವೈಯಕ್ತಿಕವಾಗಿ ಈ ಚುನಾವಣೆ ಬಗ್ಗೆ ನಿಮ್ಮ ಅಭಿಪ್ರಾಯ?
ಡಿ.ಆರ್.ಪಾಟೀಲ್: ಇಲ್ಲಿ ವೈಯಕ್ತಿಕ ಅಭಿಪ್ರಾಯವು ಸಾರ್ವಜನಿಕ ಅಭಿಪ್ರಾಯವೂ ಅಗಬಹುದಲ್ಲ? ನಮ್ಮ ಪಕ್ಷದ ಮಟ್ಟಿಗೆ ಇದು ಚಾಲೆಂಜಿಂಗ್ ಚುನಾವಣೆ. ನನಗಂತೂ ಈ ಚುನಾವಣೆ ಪ್ರಜಾಪ್ರಭುತ್ವದ ಮೌಲ್ಯಗಳ ಜೀವನ್ಮರಣದ ಪ್ರಶ್ನೆ ಅನಿಸ್ತಾ ಇದೆ. ಇನ್ನೊಮ್ಮೆ ಅಧಿಕಾರ ಸಿಕ್ಕರೆ ಅವರೆಲ್ಲ (ಬಿಜೆಪಿ) ಸಂವಿಧಾನವನ್ನೇ ಬದಲಿಸಬಹುದು. ಇದು ಆತಂಕದ ವಿಷಯ. ಆ ಕಾರಣಕ್ಕಾಗಿ ಬಿಜೆಪಿಗೆ ಅಧಿಕಾರ ಸಿಗಲೇಬಾರದು.

ಪತ್ರಿಕೆ: ಈಗ ಮೋದಿ ಮತ್ತೊಮ್ಮೆ ಎನ್ನುವ ಸದ್ದು ಜೋರಾಗಿದೆಯಲ್ಲ?
ಡಿ.ಆರ್.ಪಾಟೀಲ್: ಜೋರಾಗಿ ಇರುವುದು ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಅಷ್ಟೇ. ಕಾಂಗ್ರೆಸ್ ತಪ್ಪು ಮಾಡಿದಾಗೆಲ್ಲ ಜನ ಶಿಕ್ಷೆ ಕೊಟ್ಟಿದ್ದಾರೆ. ಆದರೆ ಆ ಕಾರಣಕ್ಕೆ ಬಂದ ಇತರ ಸರ್ಕಾರಗಳನ್ನು ಎಂದೂ ಮರು ಆಯ್ಕೆ ಮಾಡಿಯೇ ಇಲ್ಲ. ವಾಜಪೇಯಿ 13 ತಿಂಗಳ ನಂತರ ಮತ್ತೆ ಸರ್ಕಾರ ಮಾಡಿದ್ದನ್ನು ಬಿಟ್ಟರೆ, ಇಲ್ಲಿ ಯಾವ ಕಾಂಗ್ರೆಸ್ಸೇತರ ಸರ್ಕಾರ ಮರು ಆಯ್ಕೆ ಆಗಿಲ್ಲ. ಈ ಸಲವೂ ಅದೇ ಘಟಿಸಲಿದೆ.


ಪತ್ರಿಕೆ: ಸದ್ಯದ ಸರ್ಕಾರದ ಕುರಿತು ಹೇಳಿ.
ಡಿ.ಆರ್. ಪಾಟೀಲ್: ಮೋದಿ ಒಬ್ಬ ಜನದ್ರೋಹಿ ನಾಯಕ. ಇಂತಹ ಮನುಷ್ಯನಿಂದ ಒಳ್ಳೆ ಕೆಲಸ ಅಪೇಕ್ಷಿಸುವುದೇ ಮೂರ್ಖತನ. 2014ರಲ್ಲಿ ಈ ಮನುಷ್ಯ ಸಿಕ್ಕಾಪಟ್ಟೆ ಭರವಸೆ ಕೊಟ್ರು. ಒಂದಾದರೂ ಈಡೇರಿತಾ? ಕಪ್ಪುಹಣ ತರ್ತೀನಿ ಅಂದವ್ರು ಕಪ್ಪುಹಣ ಹೊಂದಿದವರ ಪೋಷಣೆ ಮಾಡಿದರು. 15 ಲಕ್ಷದ ಬಗ್ಗೆ ಮಾತಾಡೊಕ್ಕೆ ಅಸಹ್ಯ ಆಗುತ್ತೆ. ಮೋದಿ ಗೆಲುವಿಗೆ ಕಾರಣವಾಗಿದ್ದು ದೊಡ್ಡ ಯುವ ಸಮೂಹ. ಅವರಿಗೆ ಉದ್ಯೋಗ ಕೊಡುವುದಿರಲಿ, ನೋಟು ರದ್ಧತಿಯಂತಹ ಮೂರ್ಖ ಯೋಜನೆಯಿಂದ ಇದ್ದ ಉದ್ಯೋಗಗಳನ್ನು ನಾಶ ಮಾಡಿಬಿಟ್ಟರು. ನಮ್ಮ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ಮೂರಾಬಟ್ಟೆ ಮಾಡಿದ್ದಾರೆ. ದೇಶದ ಗ್ರಾಮೀಣ ಭಾಗ ಅದರಲ್ಲೂ ಕೃಷಿ ಆಧಾರಿತ ವ್ಯವಸ್ಥೆ ಇವತ್ತು ತೀವ್ರ ಸಂಕಷ್ಟದಲ್ಲಿದೆ. ಅಂಬಾನಿ, ಅದಾನಿಗಳನ್ನು ಪಕ್ಕಕ್ಕೆ ಇಟ್ಟುಕೊಂಡು ಜಗತ್ತು ಸುತ್ತಿದರೆ ಇನ್ನೇನಾಗುತ್ತೇ?

ಪತ್ರಿಕೆ: ‘ನ್ಯಾಯ್’ ಯೋಜನೆ ಲೆಫ್ಟ್‍ನ ಪ್ರಭಾವದಿಂದ ಬಂದಿದ್ದು ಅನಿಸುತ್ತಿದೆ. 90ರ ದಶಕದ ಆರಂಭದಲ್ಲಿ ಜಾಗತೀಕರಣವನ್ನು ಇಂಟ್ರುಡ್ಯೂಸ್ ಮಾಡಿದ ಕಾಂಗ್ರೆಸ್‍ಗೆ ಈಗ ಎಚ್ಚರವಾಯಿತಾ?
ಡಿ.ಆರ್.ಪಾಟೀಲ್: ಒಂದು ಮಾತು ಹೇಳ್ತೇನೆ. ಇದು ಕಾಂಗ್ರೆಸ್‍ನ ನಿಲುವೂ ಹೌದು, ಅದಕ್ಕಿಂತ ಮುಖ್ಯವಾಗಿ ನನ್ನ ನಿಲುವಂತೂ ಹೌದೇ ಹೌದು. ನೀವು ಅದು ಲೆಫ್ಟ್ ಅಂತ ಪ್ರಸ್ತಾಪ ಮಾಡಿದರಲ್ಲ, ಆ ಎಡ ಚಿಂತನೆಗಳಲ್ಲಿ ಸದಾ ಸಮಷ್ಠಿ ಕಲ್ಯಾಣದ ಅಂಶಗಳು ಇವೆ. ಸಮಾಜವಾದಿ ಸಿದ್ದಾಂತಗಳೂ, ಗಾಂಧಿಯ ಸ್ವರಾಜ್ಯ ಕನಸೂ ನಮ್ಮ ಪಕ್ಷದೊಳಗೆ ಅಂತರ್ಗತವಾಗಿದೆ. ನೆಹರೂಗೆ ಸಮಾಜವಾದದ ಒಲವಿತ್ತು. ಇಂದಿರಾ ಗಾಂಧಿಯವರು ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ್ದು, ಉಳುವವನೇ ಒಡೆಯ ಕಾಯ್ದೆ ಜಾರಿಗೆ ತಂದಿದ್ದು-ಇವೆಲ್ಲ ಲೆಫ್ಟ್ ಚಿಂತನೆ ಅನ್ನುವುದಾದರೆ ಅನ್ನಲಿ. ಎಲ್ಲ ಚಿಂತನೆಗಳಲ್ಲಿರುವ ಸಮಾಜಮುಖಿ ಆಶಯಗಳನ್ನು ಕಾಂಗ್ರೆಸ್ ಗೌರವಿಸುತ್ತದೆ.

ಹಾಂ, ನೀವು ಜಾಗತೀಕರಣದ ಬಗ್ಗೆಯೂ ಕೇಳಿದಿರಿ. ಅಲ್ಲಿ ಖಾಸಗೀಕರಣವೂ ಇದೆ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಹೇಳುವೆ. ದೇಶದ ಸಾರ್ವಜನಿಕ ಸ್ವಾಮ್ಯದ ಕಂಪನಿಗಳನ್ನು ಹುಟ್ಟು ಹಾಕಿದ್ದು, ಅವಕ್ಕೆ ಬಲ ತುಂಬಿದ್ದು ನಮ್ಮ ಪಕ್ಷವೇ. 90ರ ಆರಂಭದಲ್ಲಿ ಜಾಗತಿಕ ಅರ್ಥವ್ಯವಸ್ಥೆಯ ಜೊತೆ ಹೆಜ್ಜೆ ಹಾಕುವ ಆಶಯದಲ್ಲಿ ಜಾಗತೀಕರಣವನ್ನು ಬರ ಮಾಡಿಕೊಂಡೆವಷ್ಟೇ. ಅದರೆ ಸಾರ್ವಜನಿಕ ಸ್ವಾಮ್ಯದ ಕಂಪನಿಗಳ ಹಿತಕ್ಕೆ ನಾವೆಂದೂ ಅನ್ಯಾಯ ಮಾಡಿಲ್ಲ. ನಮ್ಮ ಆದ್ಯತೆ ಎಚ್‍ಎಎಲ್, ಬಿಎಸ್‍ಎನ್‍ಎಲ್‍ಗೆ ಹೊರತು ರಿಲಾಯನ್ಸ್ ಡಿಫೆನ್ಸ್, ಜಿಯೋಗಳಿಗೆ ಅಲ್ಲ. ‘ನ್ಯಾಯ್’ ಎಂಬುದು ಇವತ್ತಿನ ತುರ್ತು ಅಗತ್ಯ. ಅದು ಬಡವರ, ಅದರಲ್ಲೂ ಹಳ್ಳಿಗಳ ಬಡವರ ಬದುಕಿಗೆ ಘನತೆ, ಗೌರವ ತರುವ ಕೆಲಸ. ಹಿಂದೆ ನಾವು ನರೇಗಾ ಜಾರಿಗೆ ತಂದಿದ್ದೂ ಇದೇ ಉದ್ದೇಶದಿಂದಲೇ…

ಪತ್ರಿಕೆ: ಎರಡು ಸಲ ಗದಗಿನಿಂದ ಶಾಸಕರಾಗಿ, ನಿಮ್ಮ ಸಹೋದರನಿಗೆ ಸೀಟು ಬಿಟ್ಟುಕೊಟ್ಟ ನೀವು ಈಗ ಮೊದಲ ಸಲ ಲೋಕಸಭೆ ಚುನಾವಣೆಗೆ ನಿಲ್ತಾ ಇದ್ದೀರಿ. ಹೇಗಿದೆ ಜನರ ಪ್ರತಿಕ್ರಿಯೆ?
ಡಿ.ಆರ್.ಪಾಟೀಲ್: ಇಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಗೆಲ್ತಾವು ಅಂತ ಜನರು ಹೇಳ್ತಾ ಇದ್ದಾರ.., ಹಾಲಿ ಸಂಸದರ ಕೆಲಸ ಅಷ್ಟಕ್ಕಷ್ಟೇ. ಆದರೆ ನಮ್ಮ ಹೋರಾಟ ಎದುರಿನ ಅಭ್ಯರ್ಥಿ ವಿರುದ್ಧ ಮಾತ್ರವಲ್ಲ. ಈ ದೇಶದ ಸಂವಿಧಾನ, ಸೌಹಾರ್ದತೆ ಕಾಪಾಡುವುದರ ಪರ ಇದೆ.

ಪತ್ರಿಕೆ: ಪಂಚಾಯತ್‍ರಾಜ್ ವ್ಯವಸ್ಥೆಯಲ್ಲಿ ಹಲವು ಕ್ರಾಂತಿಕಾರಿ ಬದಲಾವಣೆಗೆ, ಗ್ರಾಮೀಣ ಅಭಿವೃದ್ಧಿಗೆ ತಾವು ತೆರೆಮರೆಯಲ್ಲಿ ಸಾಕಷ್ಟು ಕೆಲಸ ಮಾಡಿದವರು. ಗದಗ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಿಮಗಿರುವ ಸಪೋರ್ಟು ಹಾವೇರಿ ಭಾಗದಲ್ಲಿ ಸಿಗ್ತಾ ಇದೆಯಾ?
ಡಿ.ಆರ್.ಪಾಟೀಲ್: ಆರಂಭದಲ್ಲಿ ನನಗೂ ಡೌಟೇ ಇತ್ತರಿ. ಬಟ್, ಹಾವೇರಿ ಭಾಗದಲ್ಲೂ ಜನ ಬೆಂಬಲ ಸಿಗ್ತಾ ಇದೆ. ಈ ದೇಶದ ನಾಯಕರಿಗಿಂತ ಜನ ಹೆಚ್ಚು ಬುದ್ಧಿವಂತರು ಅನ್ನೋ ಮಾತಿನಾಗ ನನಗ ನಂಬಿಕೆ ಅದ..

ಪತ್ರಿಕೆ: ನೀವು 101 ಕಿ.ಮೀ. ‘ಗಾಂಧಿಯಾನ’ ಮಾಡಿದಿರಿ. ಆದರೆ ಈ ವಿಷಯ ತುಂಗಭದ್ರಾ ತಟ ದಾಟಿ ಆಚೆ ಮುಟ್ಟಲೇ ಇಲ್ಲವಲ್ಲ?
ಡಿ.ಆರ್.ಪಾಟೀಲ್: ನಮ್ಮ ಕೆಲಸ ನಾವು ಮಾಡಿದ್ದೇವೆ. ನಿಮ್ಮ ಈ ಪ್ರಶ್ನೆಯನ್ನೇ ನೆಪ ಮಾಡಿಕೊಂಡು ಒಂದು ವಿಷಯ ಹೇಳ್ತೇನೆ ಕೇಳಿ: ಮೋದಿ ಪೌರ ಕಾರ್ಮಿಕರ ಕಾಲು ತೊಳೆದ ನಾಟಕೀಯ ಪ್ರಸಂಗ ಈ ದೇಶದಲ್ಲಿ ಇವತ್ತು ಟಿಆರ್‍ಪಿ ಸರಕು ಎಂಬುದೇ ಅಸಹ್ಯದ ವಿಷಯ. ಬಹುಪಾಲು ಮಾಧ್ಯಮಗಳನ್ನು ಮೋದಿ-ಶಾ ಖರೀದಿಸಿದ್ದಾರೆ ಎಂಬ ಮಾತು ನಿಜ ಅನಿಸುತ್ತ ಅಲ್ರಿ? ನಂಗಿಂತಲೂ ನಿಮ್ಗ ಆ ವಿಷಯ ಜಾಸ್ತಿ ಗೊತ್ತಿರತೈತಿ ಅಲ್ಲೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...