Homeಸಿನಿಮಾಸಿನಿ ಸುದ್ದಿಗೇಮ್ ಆಫ್ ಥ್ರೋನ್ಸ್ ಮತ್ತು ಪೀಟರ್ ಡಿಂಕ್ಲೇಜ್

ಗೇಮ್ ಆಫ್ ಥ್ರೋನ್ಸ್ ಮತ್ತು ಪೀಟರ್ ಡಿಂಕ್ಲೇಜ್

- Advertisement -
- Advertisement -

ರಾಜಶೇಖರ್ ಅಕ್ಕಿ |

ಈ ವಾರದ ಸಿನಿಯಾನದಲ್ಲಿ ಯಾವುದೇ ನಿರ್ದೇಶಕರ ಅಥವಾ ಸಿನೆಮಾದ ಬಗ್ಗೆ ಇರದೇ ಒಂದು ಟಿವಿ ಸಿರೀಸ್ ಬಗ್ಗೆ ಬರೆಯುತ್ತಿದ್ದೇನೆ. ಇದು ಗೇಮ್ ಆಫ್ ಥ್ರೋನ್ಸ್ ಎನ್ನುವ ಧಾರಾವಾಹಿ.
ಬೆಂಕಿಯನ್ನು ಉಗುಳುವ ದೈತ್ಯ ಡ್ರಾಗನ್‍ಗಳು, ದಶಕಗಳ ಕಾಲ ಮುಂದುವರೆಯುವ ಬೇಸಿಗೆ, ಒಂದು ಜೀವಮಾನದಷ್ಟು ಸಮಯ ಮುಂದುವರೆಯಬಲ್ಲ ಚಳಿಗಾಲ, ಸತ್ತ ಮೇಲೆ ಜೀವ ಪಡೆದುಕೊಂಡು ಮನುಷ್ಯರನ್ನು ಕೊಲ್ಲುವ ನೈಟ್‍ವಾಕರ್‍ಗಳು, ಈ ವೈಟ್‍ವಾಕರ್‍ಗಳನ್ನು ಮತ್ತು ಇತರೆ ಪ್ರದೇಶಗಳನ್ನು ಬೇರ್ಪಡಿಸಲು ನಿರ್ಮಿಸುವ ಒಂದು ಮಹಾನ್ ಗೋಡೆ, ಏಳು ಕಿಂಗ್‍ಡಮ್‍ಗಳು, ಅನೇಕ ರಾಜರು, ರಾಜಕುಮಾರರು, ರಾಜಕುಮಾರಿಯರು ಮತ್ತು ಅವೆಲ್ಲವುಗಳನ್ನು ಆಳುವ ಒಂದು ಐರನ್ ಥ್ರೋನ್ (ಕಬ್ಬಿಣದ ಸಿಂಹಾಸನ) ಮತ್ತು ಅದಕ್ಕಾಗಿ ನಡೆಯುವ ಸಮರಗಳು.
ಜಾರ್ಜ್ ಆರ್ ಆರ್ ಮಾರ್ಟಿನ್ ಎನ್ನುವ ಲೇಖಕರು ಬರೆದ ‘ದಿ ಸಾಂಗ್ ಆಫ್ ಐಸ್ ಅಂಡ್ ಫೈರ್’ ಎನ್ನುವ ಕಾದಂಬರಿಗಳ ಸರಣಿಯ ಕಿರುಪರೆದಯ ಅಳವಣಿಕೆ. ಜಾರ್ಜ್ ಮಾರ್ಟಿನ್ ಅವರ ಮುಂದೆ ತಮ್ಮ ಕಾದಂಬರಿಗಳನ್ನು ಒಂದು ಸಿನೆಮಾ ಮಾಡಬೇಕೆಂದು ಅನೇಕ ಪ್ರಸ್ತಾಪಗಳಿದ್ದವು. ಆದರೆ ಒಂದು ಸಿನೆಮಾದ ಅವಧಿ 2 ಗಂಟೆ. ಎರಡು ಗಂಟೆಯೊಳಗೆ ಇಂತಹ ಬೃಹತ್ ಗಾತ್ರದ ಕೃತಿಯನ್ನು ಅಳವಡಿಸಿಕೊಳ್ಳಲಾಗದು ಎಂದು ಅವರಿಗೆ ಗೊತ್ತಿತ್ತು. ಹಾಗಾಗಿ ಡೇವಿಡ್ ಬೆನಿಆಫ್ ಮತ್ತು ಡಿ.ಬಿ. ವೈಸ್ ಎನ್ನುವ ನಿರ್ಮಾಪಕ/ಲೇಖಕರು ಒಂದು ಧಾರವಾಹಿಯನ್ನಾಗಿ ನಿರ್ಮಿಸುವ ಪ್ರಸ್ತಾಪ ಇಟ್ಟಾಗ ಮಾರ್ಟಿನ್ ಸಂತೋಷದಿಂದಲೇ ಒಪ್ಪಿಕೊಂಡರು. ಅದರರ್ಥ ನೂರಾರು ಗಂಟೆಗಳ ಅವಧಿಯ ಬೃಹತ್ ಸಿನೆಮಾ ಟಿವಿ ಪರದೆಯ ಮೇಲೆ! (ಹೆಚ್ಚಿನ ಜನರು ತಮ್ಮ ಕಂಪೂಟರ್ ಪರದೆಯ ಮೇಲೆಯೇ ನೋಡಿದ್ದು ಬೇರೆ ಮಾತು).
ಗೇಮ್ ಆಫ್ ಥ್ರೋನ್ಸ್ ನೋಡುತ್ತಿದ್ದರೆ ಇದನ್ನು ನೋಡಲು ಚಿಕ್ಕ ಪರದೆಯಲ್ಲ, ಬೆಳ್ಳಿ ಪರದೆಯೂ ಸಾಲದು ಎಂದು ಅನಿಸಿದರೆ ಆಶ್ಚರ್ಯವಲ್ಲ.
ಗೇಮ್ ಆಫ್ ಥ್ರೋನ್ಸ್ ಎಂದರೆ ಮೊದಲು ಕಣ್ಸೆಳೆಯುವುದು ಅದರ ಗಾತ್ರ, ಬೃಹತ್ ಪ್ರಮಾಣ. ಕೆಲವು ಅಂಕಿ ಅಂಶಗಳನ್ನು ಗಮನಿಸೋಣ.
ಬಜೆಟ್ – ಒಂದು ಎಪಿಸೋಡಿನ ಖರ್ಚು 10 ಮಿಲಿಯನ್ ಡಾಲರ್‍ಗಳು ಅಂದರೆ ಸರಿಸುಮಾರು 70 ಕೋಟಿ ರೂಪಾಯಿಗಳು. ಇಂತಹ 73 ಎಪಿಸೋಡುಗಳು. ಒಟ್ಟಾರೆ ಬಜೆಟ್ಟಿನ ಲೆಕ್ಕ ನೀವೇ ಹಾಕಿ. (ಎಹ್‍ಬಿಓ ಬಜೆಟ್ಟಿನ ಅಧೀಕೃತ ಅಂಕಿಅಂಶಗಳನ್ನು ಬಿಡುಗಡೆ ಪಡಿಸಿಲ್ಲ)
ವೀಕ್ಷಕರು – ಬರೀ ಅಮೇರಿಕದಲ್ಲಿ, ಮೊದಲ ಸರಣಿಯ ಮೊದಲ ಎಪಿಸೋಡ್ ನೋಡಿದ್ದು 22 ಲಕ್ಷ ಜನರಾದರೆ 7ನೇ ಸರಣಿಯ ಕೊನೆಯ ಎಪಿಸೋಡ್ ನೋಡಿದ್ದು 1 ಕೋಟಿ 20 ಲಕ್ಷ ಜನರು. 8 ನೇ ಸರಣಿ ಬಿಡುಗಡೆಯಾದ ಒಂದೇ ದಿನದಲ್ಲಿ ಮೊದಲ ಎಪಿಸೋಡನ್ನು 1 ಕೋಟಿ 74 ಲಕ್ಷ ಜನರು ನೋಡಿದ್ದಾರೆಂದು ಎಹ್‍ಬಿಓ ಹೇಳಿಕೊಂಡಿದೆ. 7ನೇ ಸರಣಿಯ ಕೊನೆಯ ಎಪಿಸೋಡನ್ನು 14 ಕೋಟಿ 33 ಲಕ್ಷ ಸಲ ಡೌನಲೋಡ್ ಮಾಡಲಾಗಿದೆ!
ಇನ್ನೂ ಕೆಲವು ಅಂಕಿಅಂಶಗಳು – ಗೇಮ್ ಆಫ್ ಥ್ರೋನ್ಸ್‍ನಲ್ಲಿ ಬಳಸಾದ ಕಿರಿಯ ಕಲಾವಿದರು (ಎಕ್ಸ್ಟ್ರಾಸ್) 1 ಒಂದು ಲಕ್ಷ 5 ಸಾವಿರ. ಈ ಧಾರವಾಹಿ ಪ್ರಸಾರವಾಗುತ್ತಿರುವುದು 170 ದೇಶಗಳಲ್ಲಿ.
ಗೇಮ್ ಆಫ್ ಥ್ರೋನ್ಸ್ ಹಿಂಸೆಯ, ಯುದ್ಧಗಳ ಧಾರವಾಹಿ. ಈ ಕಥೆಯಲ್ಲಿ ಬರುವ ಮುಖ್ಯಪಾತ್ರಗಳ ಸಾವುಗಳು ದಂಗುಪಡಿಸುತ್ತವೆ. ಮೊದಲನೇ ಸರಣಿಯಲ್ಲಿ 59 ಸಾವುಗಳನ್ನು ಕಂಡಿದ್ದರೆ, 7ನೇ ಸರಣಿಯಲ್ಲಿ ಕಂಡುಬಂದ ಸಾವುಗಳು 549!
ಯಾವುದೋ ಒಂದು ಭವ್ಯವಾದ ಪ್ರಾಚೀನ ಕಾಲಕ್ಕೆ ಕರೆದುಕೊಂಡುಹೋಗುವ ಗೇಮ್ ಆಫ್ ಥ್ರೋನ್ಸ್‍ನಲ್ಲಿ ನಗ್ನತೆ, ಹಿಂಸೆ ಅದರಲ್ಲೂ ಮಹಿಳೆಯರ ಮೇಲಾಗುವ ಹಿಂಸೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪ್ರಮುಖ ಪಾತ್ರವೆಂದು ಪರಿಗಣಿಸಿ ನಾವು ಯಾರನ್ನು ತೀವ್ರವಾದ ಆಸಕ್ತಿಯಿಂದ ನೋಡುತ್ತಿರತ್ತೇವೆ ಆ ಪಾತ್ರಗಳು ಸಾವು ವೀಕ್ಷಕರನ್ನು ದಂಗುಬಡಿಸುತ್ತವೆ. ಪ್ರಮುಖ ಪಾತ್ರಗಳೆಲ್ಲರೂ ಸೇರಿ ಒಂದು ಮದುವೆಯ ಸಮಾರಂಭಕ್ಕೆ ಹೋದಾಗ ಅಲ್ಲಿ ಆಗುವ ಹತ್ಯಾಕಾಂಡ, ಇವರೇ ಪ್ರಮುಖ ಪಾತ್ರಗಳು ಅಂದುಕೊಂಡವರೆಲ್ಲರ ಕೊಲೆಗಳು, ಯಾವುದೇ ದಾರವಾಹಿ ಅಥವಾ ಸಿನೆಮಾದ ಇತಿಹಾಸದಲ್ಲೇ ನೋಡಿರಲಿಕ್ಕಿಲ್ಲ. ಇದರಲ್ಲಿ ಬರುವ ಆಳುವ ಕುಟುಂಬಗಳು ಎಷ್ಟು ಪ್ರಸಿದ್ಧವಾಗಿವೆಯೆಂದರೆ, ಕಾಲೇಜುಗಳಲ್ಲಿಯ ಅನೇಕ ವಿದ್ಯಾರ್ಥಿಗಳ ಗುಂಪುಗಳು ತಮ್ಮನ್ನು ತಾವು ಒಂದೊಂದು ರಾಜಕುಟುಂಬಗಳೊಂದಿಗೆ ಗುರುತಿಸಿಕೊಳ್ಳುತ್ತಾರೆ.
ಗೇಮ್ ಆಫ್ ಥ್ರೋನ್ಸ್ ಈ ಸರಣಿಯಲ್ಲಿ ಅಭಿನಯಿಸಿದ ನಟರಿಂದಲೂ ಪ್ರಸಿದ್ಧಿ ಗಳಿಸಿದೆ. ಮೂಲ ಪುಸ್ತಕದಲ್ಲಿ 2103 ಪಾತ್ರಗಳಿದ್ದರೆ, ಅವತರಣಿಕೆಯಲ್ಲಿ ಕಿರಿಯ ಕಲಾವಿದರನ್ನು ಬಿಟ್ಟು 553 (ಹೆಸರಿರುವ) ಪಾತ್ರಗಳು ಬರುತ್ತವೆ ಎಂದು ಒಬ್ಬ ನೋಡುಗ ಲೆಕ್ಕ ಹಾಕಿದ್ದಾರೆ. ಅದರಲ್ಲಿ ನೂರಾರು ನಟರು ಗಮನ ಸೆಳೆದರೂ, ಒಬ್ಬ ನಟ ಮಾತ್ರ ಎದ್ದು ಕಾಣುತ್ತಾನೆ. ಪೀಟರ್ ಡಿಂಕ್ಲಿಜ್, ಲ್ಯಾನಿಸ್ಟರ್ ರಾಜಕುಟುಂಬದ ಸದಸ್ಯನಾಗಿರುವ ಕುಬ್ಜನ ಪಾತ್ರವನ್ನು ಇವರು ನಿರ್ವಹಿಸಿದ್ದಾರೆ ನಾಲ್ಕೂಕಾಲು ಅಡಿ ಎತ್ತರವಿರುವ ಈ ನಟ ಈಗ ವಿಶ್ವವಿಖ್ಯಾತಿ ಪಡೆದ ನಟರಾಗಿದ್ದಾರೆ. ತನ್ನ ಕುಬ್ಜತೆಯಿಂದ ಕೀಳರಿಮೆ ಅನುಭವಿಸಿಯೇ ಬೆಳೆದ ಪೀಟರ್, ತಾನು ನಟನಾಗಬೇಕೆನ್ನುವ ಕನಸನ್ನು ಸಾಕಾರಗೊಳಿಸಲು ಹರಸಾಹಸ ಪಟ್ಟವರು. ಚಿಕ್ಕಂದಿನಿಂದಲೇ ನಾಟಕದಲ್ಲಿ ಭಾಗವಹಿಸುತ್ತಿದ್ದ ಪೀಟರ್, ಕುಬ್ಜರನ್ನು ಹಾಸ್ಯಕ್ಕಾಗಿ ಬಳಸುವ ಪಾತ್ರಗಳನ್ನು ಮಾಡಲು ನಿರಾಕರಿಸಿದರು. 2003 ರಲ್ಲಿ ‘ದಿ ಸ್ಟೇಷನ್ ಏಜೆಂಟ್’ ಎನ್ನುವ ಚಿತ್ರದಲ್ಲಿ ಇವರಿಗೆ ದೊಡ್ಡ ಬ್ರೇಕ್ ಸಿಕ್ಕಿತು. ಕುಬ್ಜರ ಪಾತ್ರಗಳೆಂದರೆ, ಹಾಸ್ಯಕ್ಕಾಗಿ ಅಥವಾ ತುಂಬಾ ವಿವೇಕದ ಮನುಷ್ಯನಾಗಿಯೋ ಮತ್ತು ಲೈಂಗಿಕತೆ ಇಲ್ಲದ, ರೋಮಾಂಟಿಕ್ ಆಗದ, ತನ್ನ ಕುಬ್ಜತೆಯನ್ನು ಹೊರತುಪಡಿಸಿ ಯಾವುದೇ ದೋಷಗಳಿಲ್ಲದ ಪಾತ್ರಗಳು. ಅಂತಹದ್ದರಲ್ಲಿ ಸ್ಟೇಷನ್ ಏಜೆಂಟ್ ಎನ್ನುವ ಚಿತ್ರ ಅವರನ್ನು ಒಬ್ಬ ಸಾಮಾನ್ಯ ಮನುಷ್ಯನಾಗಿ ತೋರಿಸಿತು. 2006ರಲ್ಲಿ ಸಿಡ್ನಿ ಲುಮೆಟ್(ಸಿನಿಯಾನ 2 ನೋಡಿ) ಅವರ ‘ಫೈಂಡ್ ಮಿ ಗಿಲ್ಟಿ’ ಚಿತ್ರದಲ್ಲಿ ಮತ್ತೊಮ್ಮೆ ಗಮನಸೆಳೆದ ಪೀಟರ್ ಡಿಂಕ್ಲಿಜ್, ಡೆತ್ ಎಟ್ ಎ ಫೂನರಲ್, ಅಂಡರ್‍ಡಾಗ್, ಪೆನೆಲೊಪ್, ನಾರ್ಣಿಯಾ ಮುಂತಾದ ಚಿತ್ರಗಳಲ್ಲಿ ಅಭಿನಿಯಿಸಿದರು. ಆದರೆ ಗೇಮ್ ಆಫ್ ಥ್ರೋನ್‍ನ ಟಿರಿಯನ್ ಲ್ಯಾನಿಸ್ಟರ್‍ನ ಪಾತ್ರವು ಇವರ ಅಭಿನಯ ಸಾಮಥ್ರ್ಯವನ್ನೆಲ್ಲೆ ಒರಗೆ ಹಚ್ಚಿದೆ.
ಎಪ್ರಿಲ್ 14 ರಂದು ಗೇಮ್ ಆಫ್ ಥ್ರೋನ್‍ನ ಕೊನೆಯ ಸರಣಿಯ ಮೊದಲ ಎಪಿಸೋಡ್ ವೀಕ್ಷಕರಿಗೆ ಲಭ್ಯವಾಯಿತು. ಈ ಸರಣಿಯಲ್ಲಿ 6 ಎಪಿಸೋಡ್‍ಗಳಿವೆ. ಮೇ 19ರಂದು ಪ್ರಸಾರವಾಗಲಿರುವ ಕೊನೆಯ ಎಪಿಸೋಡಿನಿಂದ ಗೇಮ್ ಆಫ್ ಥ್ರೋನ್ ಮುಕ್ತಾಯವಾಗಲಿದೆ. ಕೋಟ್ಯಾಂತರ ನೋಡುಗರನ್ನು ಒಂದು ಫ್ಯಾಂಟಸಿ ಲೋಕಕ್ಕೆ ಕೊಂಡೊಯ್ಯುವ ಗೇಮ್ ಆಫ್ ಥ್ರೋನ್ ಬಗ್ಗೆಯೇ ಎಲ್ಲೆಡೆ ಚರ್ಚೆಯಾಗಲಿದ್ದು, ವಿಶ್ವದ ನೋಡುಗರು ಕಂಡ ಅತಿ ದೊಡ್ಡ ಶೋ ಎನ್ನುವುದನ್ನು ಯಾರೂ ಅಲ್ಲಗೆಳೆಯಲಾರರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...