Homeಅಂಕಣಗಳುಕುಮಾರಣ್ಣ ಮಾಡಿದ್ದು ಅವುನಿಗೇ ಅಟಗಾಯಿಸಿಗತ್ತು?

ಕುಮಾರಣ್ಣ ಮಾಡಿದ್ದು ಅವುನಿಗೇ ಅಟಗಾಯಿಸಿಗತ್ತು?

- Advertisement -
- Advertisement -

ಕರ್ನಾಟಕದಲ್ಲಿ ಈಗ ಆಗಿಹೋದ ಮತದಾನದ ವೈಖರಿ ಗಮನಿಸಿದರೆ, ಮೈತ್ರಿಗಳ ಮುಸುಡಿಗೆ ಸರಿಯಾದ ಹೊಡೆತ ಬೀಳುವಂತೆ ಕಾಣುತ್ತಿದೆಯಲ್ಲಾ. ಯಾಕೆಂದರೆ, ಈ ಮೈತ್ರಿ ಸರಕಾರದ ಮುಖ್ಯಮಂತ್ರಿ ನಾನು ಪರಿಸ್ಥಿತಿಯ ಕೂಸು ಎಂದಿತು. ಆದರೆ ಆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ಸೋತು ಹೋಗಿದೆ. ಬಿಜೆಪಿಯನ್ನು ಟೀಕಿಸುವುದರ ಜೊತೆಗೆ ಅವಕಾಶ ಸಿಕ್ಕಾಗಲೆಲ್ಲಾ ಕಾಂಗ್ರೆಸ್ಸನ್ನೂ ಟೀಕಿಸಿದೆ. ಇದರಿಂದ ಸಿಟ್ಟಾದ ಕಾಂಗೈಗಳು, ಕೂಸಿನ ಎಳಸು ಮಾತನ್ನು ಗಂಭೀರವಾಗಿಯೇ ಪರಿಗಣಿಸಿ, ಇಂತಹ ಎಳಸಿನ ಮುಖಂಡತ್ವದಲ್ಲಿ ನಾವು ರಾಜಕಾರಣ ಮಾಡಲು ಸಾಧ್ಯವೇ ಇಲ್ಲ ಎಂದು ಒಂದು ರಾಜಕೀಯ ಕ್ಷೋಭೆಯನ್ನು ಉಂಟುಮಾಡಿದರಲ್ಲಾ. ಈ ಕ್ಷೋಭೆ ಸತತವಾಗಿ ಒಂದು ವರ್ಷ ನಡೆದುದರ ಫಲವಾಗಿ ಸರಕಾರ ದಿಕ್ಕು ದೆಸೆಯಿಲ್ಲದೆ ನಡೆಯುತ್ತಿರುವಾಗಲೇ, ಅತ್ತ ದೇವೇಗೌಡರ ಕುಟುಂಬದ ಅಧಿಕಾರ ದಾಹದ ಫಲವಾಗಿ ಒಕ್ಕಲಿಗರಲ್ಲೇ ಅಸಮಾಧಾನ ಭುಗಿಲೆದ್ದು, ಅದು ಇಡೀ ಕರ್ನಾಟಕಕ್ಕೇ ಹಬ್ಬಿದಾಗ, ಚುನಾವಣೆ ಎದುರಾಗಿ, ಜನಸಮೂಹ “ಬನ್ನಿ ನಿಮ್ಮ ಬುರುಡೆಗೆ ಬಿಸಿನೀರು ಕಾಯಿಸಲು ಇದು ಸರಿಯಾದ ಸಮಯ” ಎಂದು ಕಾಯುತ್ತಿರುವಾಗ, ಮೈತ್ರಿಗಳು ಅದ್ಯಾವ ಬಾಯಿಂದ ನಾವು ಇಪ್ಪತ್ತೆರಡು ಬಾರಿಸುತ್ತೇವೆ ಎಂದು ಹೇಳುತ್ತಿರುವುದೇ ಹಾಸ್ಯಾಸ್ಪದವಾಗಿದೆಯಲ್ಲಾ, ಥೂತ್ತೇರಿ.

ಮೂರು ದಶಕದ ಹಿಂದೆ ಇದೇ ಕಾಂಗೈಗಳು ತಮ್ಮ ಹೆಸರಿಗೆ ಬದಲಾಗಿ, ಇಂದಿರಾಗಾಂಧಿಗೆ ಓಟು ಕೇಳುತ್ತಿದ್ದವು. ದೇವಸ್ಥಾನಕ್ಕೆ ನಿಧಿ ಎತ್ತುವವರು ತಮ್ಮ ಹೆಸರೇಳದೆ ದೇವಿ ಹೆಸರು ಹೇಳಿ ವಂತಿಕೆ ವಸೂಲು ಮಾಡುತ್ತವಲ್ಲ. ಹಾಗೆ ಅಂತದೇ ಒಂದು ಸ್ಥಿತಿಗೆ ಈ ಬಿಜೆಪಿಗಳು ಬಂದು ಕೂತಿವೆಯಲ್ಲಾ. ಇಂದಿರಾಗಾಂಧಿ ಹೆಸರೇ ಬಡಬಗ್ಗರು, ದುರ್ಬಲರು, ಅಲ್ಪಸಂಖ್ಯಾತರಿಗೆ ರೋಮಾಂಚನವುಂಟು ಮಾಡುತ್ತಿತ್ತು. ಆದರೆ ಈ ಮೋದಿ ಹೆಸರು ಚೆಡ್ಡಿಗಳಿಗೆ ಮತ್ತವರ ಮನೆಹಾಳ ಪರಿವಾರಕ್ಕೆ ಮಾತ್ರ ಕೋಸಂಬರಿ ತಿಂದು ಪಾನಕ ಕುಡಿದಷ್ಟು ಆಪ್ಯಾಯಮಾನವಾಗಿದೆಯಲ್ಲಾ. ಮೋದಿ ಮಹಾತ್ಮ ಕಡಿದು ಕಟ್ಟೆಹಾಕಿದ ಯಾವ ಕೆಲಸವೂ ಇಲ್ಲದ ಕಾರಣ ಬಾಯಿಗೆ ಬಂದ ಸುಳ್ಳನ್ನೇ ಒದರುತ್ತಿದ್ದಾನೆ. ಸುಳ್ಳಿಗಿರುವ ಶಕ್ತಿಯನ್ನು ಸರಿಯಾಗಿಯೇ ಗುರುತಿಸಿರುವ ಬಿಜೆಪಿಗಳು ಅದನ್ನೇ ಬೊಗಳುತ್ತಿರುವಾಗ ಅವುಗಳ ಸುಳ್ಳಿಗೆ ಬದಲು ಸತ್ಯ ಸಂಗತಿಯನ್ನು ಸಾರಲು ಈ ಕಾಂಗೈಗಳಿಗೆ ಏನಾಗಿದೆ ಎಂದು ಜನರು ಕೇಳುತ್ತಿರುವಾಗಲೆ, ಸಿದ್ದರಾಮಯ್ಯ ತನ್ನ ಐದು ವರ್ಷದ ಸಾಧನೆಯನ್ನ ಹೇಳುತ್ತಾ ಇಂತಹ ಸಾಧನೆ ಮೋದಿಯಿಂದ ಆಗಿದೆಯೇ ನೀವೇ ಹೇಳಿ ಎಂದಾಗ, ಸಿದ್ದರಾಮಯ್ಯ ಕೊಟ್ಟ ಅಕ್ಕಿ ತಿಂದ ಜನ ಅದನ್ನ ಮರೆತು ಏನೂ ಮಾಡದ ಮೋದಿ ಪರವಾಗಿಲ್ಲ ಎನ್ನುತ್ತಿವೆಯಲ್ಲಾ, ಥೂತ್ತೇರಿ.

ಮಂಡ್ಯ ಚುನಾವಣೆ ಇನ್ನೊಂದು ಚಾಮುಂಡೇಶ್ವರಿ ಚುನಾವಣೆಯಂತಾಗಿ ಅಂತ್ಯಗೊಂಡಿರುವಾಗ, ಆ ಬಗ್ಗೆ ವಾಟಿಸ್ಸೆ ಕೇಳಬೇಕೆನಿಸಿತಲ್ಲಾ. ಕೂಡಲೇ ಫೋನ್ ಮಾಡಲಾಗಿ ರಿಂಗಾಯ್ತು, ರಿಂಗ್ ಠೋನ್ `ಟರ್ರ್ ಟರ್ರ್’ “ಹಲೋ ಹೇಳಿ ಸಾ”.

“ವಾಟಿಸ್ಸೆ ಚುನಾವಣೆ ಯಂಗಾಯ್ತು.”

“ಡಲ್ಲಾಗಿತ್ತು ಸಾ.”

“ಯಾಕೆ?”

“ಯಾಕಂದ್ರೆ ನನ್ನ ಕಣ್ಣೆದುರಿಗೆ ಡ್ರಿಂಕ್ ಅಂಗಡಿಗೆ ಬಾಗಲಾಕಿಸಿಬುಟ್ರು ಸಾ. ಮೊದ್ಲೆ ಗೊತ್ತಿದ್ರೆ ಯಲಕ್ಷನ್ ಮುಗಿಯುವರಿಗೂ ಮೇಂಟೇನಾಗೋವಷ್ಟು ಡ್ರಿಂಕ್ಸ್ ತಗಂಡು ಸ್ಟಾಕ್ ಮಡಿಕಬವುದಿತ್ತು.”

“ಅಂಗಡಿ ಬಾಗಲಾಕಿ ಸೀಲಾಕಿದ್ರು. ಹಿಂದಲ ಬಾಗಲಲ್ಲಿ ಸಿಗತದೆ.”

“ಈ ಸತಿ ಬಾಳ ಸ್ಟಿಕ್ಟು ಸಾರ್, ಆದ್ರು ಓಟು ಮಾಡೋ ಹಿಂದಿನ ದಿನ ನಿಖಿಲ್ ಕಡೆಯೋರಿಂದ ಒಂದೇ ಒಂದು ರಾಜಾ ವಿಸ್ಕಿ ಪ್ಯಾಕೆಟ್ ಸಿಕ್ತು ಸಾ.”

“ಅವುರತ್ರಲೂ ಈಸಗಂಡ್ಯಾ.”

“ಒಂದು ಷರತ್ತ ಮ್ಯಾಲೆ ಕೊಟ್ರು ಸಾರ್.”

“ಏನು ಷರತ್ತು.”

“ನಿಖಿಲ್ ಕುಮಾರ್‌ಸ್ವಾಮಿಗೇ ಓಟಾಕ್ತಿನಿ ಅಂತ ಹೇಳಿದ ಮ್ಯಾಲೆ ಕೊಟ್ರು ಸಾ.”

“ಅಂಗರೆ ನಿನ್ನೋಟು ನಿಖಿಲ್‌ಗೋಯ್ತು.”

“ಏಲ್ಯಾರವುಂಟೆ ಸಾರ್, ಐನೂರ‍್ರುಪಾಯಿ ಈಸಿಗಂಡೋರೆ ಕೈ ಕೊಟ್ರು, ಇನ್ನ ನನ್ನಂಥೋರು ಹಾಕಕ್ಕಾದತೆ.”

“ಐನೂರು ಕೊಟ್ಟೋರು ಧರ್ಮಸ್ಥಳದ ಆಣೆ ಮಾಡಿಸಿದರಂತೆ.”

“ಅದೂ ನ್ಯಡಿತು, ಕ್ಯಾರ್‌ಪೇಟೆ ಪಾಂಡುಪುರ ಇಲ್ಯಲ್ಲ ನ್ಯಡೀತು. ಅದ್ಕೆ ಅಲ್ಲಿ ಸಲುಪ ಸುಮಲತನಿಗೆ ಹಿನ್ನೆಡೆ.”

“ಮದ್ದೂರು ಮಳವಳ್ಳಿ ಯಂಗೆ.”

“ಅಲ್ಲಿ ತಮ್ಮಣ್ಣ ಭಾರಿ ದುಡ್ಡು ಬಡದ ಸಾ. ಆ ನನಮಗನಿಗೆ ಎಲ್ಲಿ ಕುಮಾರಣ್ಣ ಎಗರೋಗಿ ಮಂತ್ರಿಗಿರಿ ಹೋಯ್ತದೋ ಅಂತ ಹೆದ್ರಿಕಂಡು ದುಡ್ಡ ಸುರುದುಬುಟ್ಟ.”

“ಪ್ರಾಪರ್ ಮಂಡ್ಯ ಯಂಗೆ.”

“ಅದ್ಯಂಗೊ ಗೊತ್ತಿಲ್ಲ. ನಮ್ಮ ನಾಗಮಂಗಲದ ಬಗ್ಗೆ ಯಲ್ಲ ಡವುಟು ಮಾಡತಿದ್ರು. ಆದ್ರು ನಾವು ನಂಬಿಕಸ್ಥರು ಅಂತ ತೋರಿದೊ ಸಾ.”

“ಇದು ನಿನ್ನಭಿಪ್ರಾಯನ.”

“ನಾನು, ಜನಗಳ ಜೊತೆ ಇದ್ದಿನಿ ಸಾ.”

“ಕುಡುಕರ ಜೊತೇಲೆ?”

“ನನ್ನಂಥ ಕುಡುಕ್ರು ಕುಡುಕರ ಕೂಡೆ ಇರದಿಲ್ಲ ಸಾರ್, ಅವುರಿಗೆ ಮಾತ ಕೇಳೋ ಜನಗಳು ಬೇಕು, ಅದ್ಕೆ ನಾನು ಜನಗಳ ಜೊತೆ ಇರತಿನಿ, ಈ ಕುಮಾರಸ್ವಾಮಿ ಮಾಡಿದ ಕ್ಯಲಸ ಅವುನಿಗೇ ಅಟಗಾಯಿಸಿಗತ್ತಾ ಅದೆ ಸಾ.”

“ಯಂಗೇ?”

“ಅವುನು ಅವುಳ್ಯಾರೊ ಡಿ.ಸಿ ಹಿಡಕಂಡು ತನ್ನ ಮಗನೆಸರು ಮದಲೇಟಿಗೆ ಪಸ್ಟ್ಬರಂಗೆ ಮಾಡಿದ, ಇದರಿಂದ ಸುಮಲತ 20ನೇ ಕ್ಯಾಂಡೇಟಾದ್ರು. ಜೊತೆಗೆ ಮೇಲೆ ಕ್ಯೆಳಗೆ ಯರಡು ಮೂರು ಸುಮಲತ ಬಿದ್ರು.”

“ನಾನು ನೋಡಿದೆ ಅದ.”

“ಇಪ್ಪತ್ಯೆರುಡು ಜನ ಕ್ಯಾಂಡೇಟಾದ್ರಿಂದ ಯರಡು ಲೈನಾಯ್ತು ಸಾ. ಸುಮಲತ ಲೈನಲ್ಲಿ ಮೊದಲಿದ್ದೋನಿಗೆ ಅದ್ಯಂತದೋ ಸಿತಾರ್ ವಾದ್ಯ ಕೊಟ್ಟಿದ್ರು. ಅದು ಒಂಥರ ಜ್ವಾಳದ ಕಡ್ಡಿವರೆ ಮಡಗಿದಂಗಿತ್ತು. ಅಷ್ಟೇ ಸಾಕು ಈ ಯಬ್ಬೆಟ್ಟಿನವ್ಯಲ್ಲ ಆ ಸಿತಾರ್‌ನ ಹುಲ್ಲೊರೆ ಅಂತ ತಿಳಕಂಡು ಒತ್ತಿ ಮಡಿಗ್ಯವೆ.”

“ಅರರೆ, ಅದ್ಯಂಗೆ.”

“ಸುಮಲತನ ಲೈನಲ್ಲಿ ಮೊದಲನೆಯವನು ಅವುನೆ ಅಲ್ಲವ ಸಾ. ಅದು ಯಬ್ಬೆಟ್ಟಿಗಳಿಗ್ಯಂಗೆ ಗೊತ್ತಾಗಬೇಕು. ಅಂತೂ ನಿಖಿಲ್‌ನ ಕಡೆ ಐವತ್ತೋಟು ದಿಕ್ಕು ತಪ್ಯವೆ, ನಮ್ಮದೊಂದು ಬೂತಲ್ಲೇ ಅಂಗಾದ್ರೆ ಉಳಿದ ಕಡೆ.”

“ಅಂಗರೆ ಸಿತಾರಿನೋನು ತಗದ ಅನ್ನು.”

“ಕುಮಾರಣ್ಣ ಮಾಡಿದ್ದು ಅವನೇ ಅನುಭವುಸಂಗಾಯ್ತು ಸಾ.”

“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...