Homeಅಂಕಣಗಳುಐ ಯಾಮ್ ಬಾಯ್ ಕಟಿಂಗ್ ಯು

ಐ ಯಾಮ್ ಬಾಯ್ ಕಟಿಂಗ್ ಯು

- Advertisement -
- Advertisement -

ಯಾಹೂ|

ಗತಿಸಿಹೋದ ಗುಂಡುರಾಯರಂತೆ ಕುಮಾರಣ್ಣನವರು ಕೂಡ ಕರ್ನಾಟಕದ ಜನಾಭಿಪ್ರಾಯವಿಲ್ಲದ ಮುಖ್ಯಮಂತ್ರಿ! ಅಂದರೆ ಸ್ಪರ್ಧಿಸಿದ್ದ ಮೂರು ಪಾರ್ಟಿಗಳ ಪೈಕಿ. ಕೇವಲ ಮುವ್ವತ್ತೇಳು ಕ್ಷೇತ್ರ ಕುಮಾರಣ್ಣನನ್ನ ಒಪ್ಪಿವೆ. ಆದರೇನು ಅವರೇ ಮುಖ್ಯಮಂತ್ರಿಯಾಗಿ ಮೆರೆಯುತ್ತಿದ್ದಾರೆ. ಲೋಕಸಭಾ ಚುನಾವಣೆ ಮುಗಿದಿದೆ. ದುಸ್ವಪ್ನವೊಂದು ಕಾಡಿದಂತೆ, ಅದರ ಫಲಿತಾಂಶ ಮುಂದಿನ ತಿಂಗಳು 23ರವರೆಗೆ ತನ್ನ ಅವಧಿ ವಿಸ್ತರಿಸಿಕೊಂಡಿದೆಯಲ್ಲಾ. ಈ ಸಮಯದಲ್ಲಿ ಅಪಾಯಕಾರಿ ದೇಹವೊಂದಿರುವ ಅವರಿಗೆ ಸಾಂತ್ವನ ಹೇಳಿ, ಐದು ವರ್ಷ ಪೂರ್ತಿಯ ಆಯಸ್ಸು ಕೋರುವುದು ನಮ್ಮ ಕರ್ತವ್ಯವೆಂದು ಫೋನ್ ಮಾಡಲಾಗಿ ರಿಂಗಾಯ್ತು….
ರಿಂಗ್ ಠೋನ್: `ರಾಧಿಕೆ ನಿನ್ನ ಸರಸವಿದೇನೇ ರಾಧಿಕೆ ನಿನ್ನ ನಿನ್ನ ಸರಸವಿದೇನೆ……..’ “ಹಲೋ ಯಾರು”
“ನಾನು ಸಾರ್ ಯಾಹೂ.”
“ಐ ಯಾಮ್ ಬಾಯ್ ಕಾಟಿಂಗ್ ಯು.”
“ವೈ ಸಾರ್.”
“ಯು ಆಲ್‍ಸೊ ಪ್ರೆಸ್‍ಮ್ಯಾನ್.”
“ನೋ, ನೊ ಅಯಾಮ್ ನಾಟ್ ದಟ್ ಟೈಪ್ ಆಫ್ ಪ್ರೆಸ್ ಮ್ಯಾನ್.”
“ನೀವ್ಯಲ್ಲ ಒಂದೇ ಕಂಡ್ರೀ.”
“ಸಾರಿ ಸಾರ್, ನಾನು ರಂಗನಾಥ ಭಾರದ್ವಾಜ, ಮಾದೇವ ಪ್ರಸಾದ್ ತರ ಅಲ್ಲ. ಮೊದಲಿಂದ ನಿಮ್ಮ ಹಿತೈಶಿ.”
“ಏನು ಹಿತೈಸಿನೊ ಏನೊ, ಅದೇನು ಬರಕತ್ತಿರೊ ಬರಕಳಿ ನನಿಗೆ ಟೈಮಿಲ್ಲ ಈಗ.”
“ಸಾರ್ ಆ ಮೋದಿನೂ ಪತ್ರಕರ್ತರ ಜೊತೆ ಟೈಂ ವೇಸ್ಟ್ ಮಾಡಲಿಲ್ಲ, ನೀವೂ ಅಂಗೇ ಅಂತೀರಲ್ಲ ಸಾರ್.”
“ಆ ಮೋದಿ ಅನತಕ್ಕಂತ ವ್ಯಕ್ತಿ ಬೇರೆ, ನಾನು ಬೇರೆ ಕಂಡ್ರಿ, ಆತ ಪತ್ರಕರ್ತರನ್ನ ಬೇಟಿಮಾಡದೇ ಇದ್ರು, ಅವರೆಲ್ಲಾ ಅವರ ಪರವಾಗೇ ಬರದ್ರು. ಈಗ್ಲು ಬರಿತಾ ಅವುರೆ, ಅಂದ್ರೆ ನೀವೆ ತಿಳಕಳಿ!”
“ಸಾರ್ ಇಪ್ಪತ್ತೈದು ವರ್ಷದ ಹಿಂದೆ ಲಂಕೇಶ್ ಇದನ್ನೇ ಹೇಳಿದ್ರು ಸಾರ್.”
“ಏನೇಳಿದ್ರು.”
“ಬ್ರಾಹ್ಮಣ ಪತ್ರಕರ್ತರ ಅನಾಹುತ ಮುಂದೆ ಜರುಗ್ತವೆ ಎಚ್ಚರ ಅಂದಿದ್ರು.’’
“ಬ್ರಾಂಬ್ರು ಅಂತ ಅಲ್ಲ, ಹೊಟ್ಟೆಪಾಡಿನ ಪತ್ರಕರ್ತರಿಗೆ ಜಾತಿ ಇಲ್ಲ. ಮಂಡ್ಯದಲ್ಲಿ ನಮ್ಮ ಜಾತಿಯೋರೆ ಬರದ್ರು.”
“ಮೂರ್ಖರು ಸಾರ್ ಅವರು, ನೀವು ಅನಾರೋಗ್ಯದಲ್ಲಿದೀರಿ, ಯಾವ ಸಮಯದಲ್ಲಿ ಏನೋ ಅಂತೇಳಿ ನನ್ನ ಆಸರೆಗೆ ನನ್ನ ಮಗ ಬಂದವುನೆ ಅಂದ್ರೂ, ಮನಸಿಗೆ ಬಂದಿದ್ನೆ ಬರದ್ರು.”
“ಮಾನವೀಯತೆ ಇಲ್ದೆ ಇರತಕ್ಕಂತವರು ಪತ್ರಕರ್ತರಾದರೆ, ಈ ತರ ಬರೀತಾರೆ ಅನ್ನೊ ಅಭಿಪ್ರಾಯ ನನಿಗೆ ಮನದಟ್ಟಾಗದಕ್ಕೆ ಬಹಳ ಸಮಯ ಹಿಡೀತು.”
“ಎಲೆಕ್ಷನ್ನಿಗೆ ನಿಲ್ಲೋಕೆ ಮಂಡ್ಯದಲ್ಲೇ ಯಾರೂ ಇರಲಿಲ್ಲವೇ ಅಂತ ಬರದ್ರು ಸಾರ್.”
“ನೀವೆ ಹೇಳಿ ಯಾಹು, ಮಂಡ್ಯದಲ್ಲಿ ನಿಖಿಲ್ ತರ ಅಭ್ಯರ್ಥಿ ಇದ್ನಾ!”
“ದೇವರಾಣೆ ಇಲ್ಲ ಸಾರ್, ಜಾಗ್ವಾರಲ್ಲಿ ಪೈಟ್ ಎಷ್ಟು ಚೆನ್ನಾಗಿ ಮಾಡ್ಯವುನೆ, ಅವುನ ತರ ಪಂಚೆ ಉಡಕ್ಕೆ ಬತ್ತದ ಸಾ, ಆ ಮಂಡೆದವುಕೆ.”
“ನನ್ನ ಮಗ ಅನ್ನತಕ್ಕಂತ ಅಭಿಪ್ರಾಯವನ್ನ ಬದಿಗಿಟ್ಟು ನೋಡದಾದ್ರೆ, ಈ ವಯಸಿಗೆ ಅವುನು ಮಂಡ್ಯವನ್ನ ನಿಭಾಯಿಸೊ ಶಕ್ತಿಯನ್ನ ಪಡಕಂಡಿರತಕ್ಕಂತದನ್ನ ನೋಡಿ, ನಾವು ಅಭ್ಯರ್ಥಿ ಮಾಡದಕ್ಕೆ ಏನು ತೀರ್ಮಾನ ತಗಂಡೋ, ಅದಕ್ಕೆ ಮಂಡ್ಯದ ಜನಗಳೇ ಒಪ್ಪಿಗಂಡ್ರು.”
“ನಿಜ ಸಾರ್, ಎಷ್ಟು ಮುಗ್ದರು ಅಂದ್ರೆ, ನಿಮಗೆಲ್ಲಾ ಸೇಬಿನ ಹಾರ ಹಾಕಿದಾಗ, ಆ ಸೇಬಣ್ಣನ್ನ ಜನ ನೋಡ್ತಾಯಿದ್ದದ್ದು, ಆನಂತ್ರ ಹಾರನ ಚಿಂದಿ ಉಡಾಯಿಸಿ ತಿಂದಿದ್ದು, ಇನ್ನೂ ನನ್ನ ಕಣ್ಣೊಳಗದೆ ಸಾ. ಅಂಥವರ ಮನಸನ್ನ ಈ ಪತ್ರಕರ್ತರು ಅರ್ಥಮಾಡಿಕೊಬೇಕಾಗಿತ್ತು.”
“ಅದಿರ್ಲಿ ಕಂಡ್ರೀ, ಜಾಗ್ವಾರ್ ಸಿನಿಮಾ ಸಿಡಿ ಬಿಡುಗಡೆ ಮಾಡ್ತಕಂತ ವಿಷಯದಲ್ಲಿ ಏನು ಸ್ಟೇಡಿಯಂ ತುಂಬ ಜನ ಸೇರಿಕಂಡಿದ್ರು, ಆ ಸಂದರ್ಭದಲ್ಲಿ ನನಿಗೆ ನಮ್ಮ ನಿಖಿಲ್ ಕಾಣಿಸಲಿಲ್ಲ. ಆಗ ಎಲ್ಲಿದ್ದೀಯಪ್ಪಾ? ಅಂದೆ. ಅದು ತಪ್ಪೇನ್ರಿ, ಅದನ್ನ ಸಾಮಾಜಿಕ ಜಾಲತಾಣಗಳಲ್ಲಿ ಇನ್ನು ತೋರುಸ್ತಾ ಅವುರೆ.”
“ಅದಕ್ಕೆ ನೀವು ಸರಿಯಾದುತ್ರ ಕೊಟ್ರಿ ಸಾರ್.”
“ಇನ್ನೇನು ಮತ್ತೆ, ನಿಖಿಲ್ ಎಲ್ಲಿದ್ದೀಯಪ್ಪಾ ಅಂದೋರಿಗೆ ನಿಮ್ಮ ಹೃದಯದಲ್ಲವುನೆ ಅಂದ್ರಾಯ್ತು.”
“ನಿಜ ಸಾರ್, ಸಗಣೀಲಿ ಹೊಡದೋರಿಗೆ ನೀವು ಬೆಲ್ಲದಲ್ಲಿ ಹೊಡುದ್ರಿ. ರಿಯಲಿ ಗ್ರೇಟ್ ಸಾರ್.”
“ಇನ್ನೊಂದೆರಡು ಕಳ್ಳೆತ್ತುಗಳಿಗೂ ಸರಿಯಾದ ಉತ್ರ ಕೊಟ್ಟಿದ್ದಿನಿ, ನಾನು ಸಿನುಮ ತಗದ್ರಲವೇನ್ರಿ ಇವುರು ಹೀರೋಗಳಾಗಿ ಮರೆಯೋದು.”
“ಯಾವ ಯಾವ ಸಿನುಮ ತಗದ್ರಿ.”
“ಮರತೋಗ್ಯವೆ ಕಂಡ್ರಿ, ಜಾಗ್ವಾರ್, ಸೀತೆರಾಮನ್ ಕಲ್ಯಾಣ ಮಾತ್ರ ನೆನಪಲ್ಲವೆ.”
“ಇರಲೇಬೇಕಲ್ಲ ಸಾ, ನಿಮ್ಮ ಮಗನ ಸಿನುಮಗಳು ಅಲುವೆ! ನಾನೊಂದು ಸಿನುಮ ನೋಡಿದ್ದೆ ಸಾ ನಿಮ್ದು.”
“ಯಾವುದ್ರಿ.”
“ಜಿತೇಂದ್ರ ಅಂತ ಉಪೇಂದ್ರನ್ನಾಡಿಕಂಡು ತಗದಿದ್ರಲ್ಲ, ಆ ಕೋತಿ ಮುಂಡೇದು ಜಗ್ಗೇಶ್ ಚೆನ್ನಾಗಿ ಮಾಡಿತ್ತು ಸಾರ್”
“ಅವನು ವಳ್ಳೆ ಆಕ್ಟರು ಕಂಡ್ರೀ.”
“ಮತ್ತೆ ಜೆಡಿಎಸ್ಸೆಲ್ಯಾಕೆ ಸಾರ್ ಮಡಿಕಳ್ಳಿಲ್ಲ ಅವುನ್ನ.”
“ಅವು ಯಾವಾಗ್ಲು ಕೈ ಬಾಯಿ ನೋಡ್ತವೆ ಕಂಡ್ರಿ. ಅಂಥವು ಕಂಡ್ರೆ ನಮ್ಮ ತಂದೆಗಾಗಲ್ಲ. ಅದ್ಕೆ ಹೋಗಿ ಬಿ.ಜೆ.ಪಿ ಸೇರಿಕಂಡ.”
“ಹೋಗ್ಲಿ ಬುಡಿ ಸಾ, ಅಂಥವಲ್ಲಿಗೆ ಸರಿ. ಈ ಯಶ್ ಮತ್ತೆ ದರ್ಶನ್, ಸುಮಲತ ಗಾಡಿ ಯಳಿಯಕ್ಕೆ ಸರಿ.”
“ಅದಕ್ಕೂ ಲಾಯಕ್ಕಲ್ಲ ಕಂಡ್ರಿ ಅವು. ಅವುರಾಡತಕ್ಕಂತ ಮಾತಿಗೆ ನನ್ನ ಅಭಿಮಾನಿಗಳು ಸಿಟ್ಟಾಗಿ ಸರಿಯಾಗಿ ಬುದ್ದಿ ಕಲುಸಕ್ಕೆ ಮಾಡಿದ್ರು. ನಾನೇ ಅವಾಯ್ಡು ಮಾಡಿದೆ.”
“ನಿಜ ಸಾರ್, ಆಗ ನೀವೊಂದು ಸೂಚನೆ ಕೊಟ್ಟ ಕೂಡ್ಳೆ, ಆ ಸಿದ್ದರಾಮಯ್ಯನ ಅಹಿಂದ ಸಭೆ ಏರ್ಪಡಿಸುತ್ತಿದ್ದೋರ ಕಾರನ್ನೇ ಸುಟ್ಟಾಕಿದ್ರು ನಿಂ ಅಭಿಮಾನಿಗಳು, ನಾನೆ ನೋಡಿದ್ದೆ.”
“ಈಗ್ಲು ನಾನು ಮುಖ್ಯಮಂತ್ರಿಯಾಗಿರದ್ರಿಂದ, ನನಿಗೆ ಕೆಟ್ಟ ಹೆಸರು ಬರತ್ತೆ ಅಂತ ಸೂಚನೆ ಕೊಡ್ಳಿಲ್ಲ.”
“ನಿಮ್ಮ ಸರಕಾರ ಕೆಡುವಕ್ಕೆ ಸಂಚು ಮಾಡ್ತಾಯಿರೊ ಎಮ್ಮೆಲ್ಲೆಗಳಿಗೆ ವಸಿ ವಿಚಾರಿಸಿಗಳಿ ಸಾ.”
“ಅದಕ್ಕೆಲ್ಲಾ ಟೈಂ ಬರತ್ತೆ ಇರಿ, ಈಗ ಬೇಡ.”
“ಕಿಡಿಗೇಡಿ ಪತ್ರಕರ್ತರಿಗೆ, ಏನಾರ ಮಾಡಬೇಕಲ್ಲ ಸಾ.”
“ನಮ್ಮ ತಂದೆ ಹೇಳಿದಾರೆ ನೆಗ್ಲೆಟ್ ಮಾಡು ಅಂತ, ಅಂಗೆ ಮಾಡ್ತಿನಿ.”
“ಒಳ್ಳೆ ಐಡಿಯಾ ಸಾರ್, ದೇವೇಗೌಡ್ರದು ಅನುಭವದ ಮಾತು.”
“ನಮ್ಮ ತಂದೆಯವರು ರಾಷ್ಟ್ರಮಟ್ಟದ ನಾಯಕರಾದ್ರೂ ಅವರ ಬಗ್ಗೆ ಒಳ್ಳೆದು ಬರೀಲಿಲ್ಲ ಇವುರು.”
“ನಾವು ಬರದಿದ್ದಿವಿ ಸಾರ್, ಅವುರೇನು ಅನ್ನದ ಇವತ್ತಿಗೂ ಜನಕ್ಕೆ ಹೇಳಿಕೊಂಡು ಬಂದಿದ್ದೀವಿ.”
“ಥ್ಯಾಂಕ್ಸ್ ಯಾಹೂ ಅವುರೆ, ಈ ಕಡೆ ಬನ್ನಿ ಈಗ ಟೈಮಿಲ್ಲ.”
“ಯಾಕ್ ಸಾರ್.”
“ಕುಕ್ಕೆ ಸುಬ್ರಮಣ್ಯಕ್ಕೆ ಚಿನ್ನದ ರಥ ಮಾಡಸೊ ಚರ್ಚೆಗೆ ಆ ದೇವಸ್ತಾನದೋರು ಬಂದವುರೆ”
“ಆಯ್ತು ಮಾಡಿಸಿ ಸಾರ್; ಕುಕ್ಕೆಗೆ ಚಿನ್ನದ ರಥ ಮಾಡಿಸೊ ತೀರ್ಮಾನದಿಂದ ನಿಖಿಲ್ ಎರಡೂವರೆ ಲಕ್ಷ ಲೀಡಲ್ಲಿ ಬರ್ತಾನೆ. ಗೌಡ್ರು ಪ್ರಜ್ವಲ್ ವಿಷಯ ಅಂಗಿರ್ಲಿ, ಅಮ್ಯಾಲೆ ಕರ್ನಾಟಕದ ಎಲ್ಲ ಹಳ್ಳಿಗಳಿಗೂ ಟ್ಯಾಂಕರಲ್ಲಿ ನೀರು ಹೊಡಿತಾ ಅವುರೆ. ಈ ಪೈಕಿ ಕಾಂಗ್ರೆಸ್ಸಿನವುರು ದಳದÀ ಕಡಿಯವರಿಗೆ ನೀರು ಕೊಡಲ್ಲ. ದಳದವುರು ಕಾಂಗ್ರೆಸ್ಸಿಗೆ ಓಟಾಕಿದೋರಿಗೆ ನೀರು ಕೊಡ್ತಾಯಿಲ್ಲ. ಇನ್ನ ಬಿಜೆಪಿಗಳು ಯಾರಿಗೂ ನೀರು ಕೊಡ್ತಾಯಿಲ್ಲ. ಇಂಥ ಧಾರುಣವಾದ ಜಲಕ್ಷಾಮ, ಸುಬ್ರಮಣ್ಯ ದೇವರಿಗೆ ಚಿನ್ನದ ರಥ ಮಾಡಿಸೋದ್ರಿಂದ ಪರಿಹಾರ ಕಾಣೋದಾದ್ರೆ, ಮಾಡಿಸಿ ಸಾ. ಇನ್ನೊಂದು ವಿಷಯ, ಆ ದೇವರಿಗೆ ಒಡವೆ ಕೊಟ್ಟ ಮಲ್ಯ ಕೂಡ್ಳೆ ಹಾಳಾದ ಗೊತ್ತ ಸಾ, ಹಲೋ…. ಹಲೋ…….. ಹಲೋ……..”
“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...