Homeಚಳವಳಿಕುದುರೆ ವ್ಯಾಪಾರಕ್ಕೆ ಬಹಿರಂಗ ಎಂಟ್ರಿ ಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ

ಕುದುರೆ ವ್ಯಾಪಾರಕ್ಕೆ ಬಹಿರಂಗ ಎಂಟ್ರಿ ಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ

- Advertisement -
- Advertisement -

| ಜಿ.ಆರ್.ವಿದ್ಯಾರಣ್ಯ, ಮೈಸೂರು |

ಅರಬ್ಬೀಯರ ಕುದುರೆ ವ್ಯಾಪಾರಕ್ಕಿಂತಲೂ ಹೆಚ್ಚು ಲಾಭದಾಯಕವಾಗಿರುವುದು ಭಾರತದ ರಾಜಕೀಯ ಕುದುರೆ ವ್ಯಾಪಾರ. ಇದರಲ್ಲಿ ಕೊಂಡುಕೊಳ್ಳುವವರಿಗೆ ಮತ್ತು ಮಾರುವವರಿಗಷ್ಟೇ ಅಲ್ಲ, ಕುದುರೆಗೂ ಸಹ ಹೆಚ್ಚಿನ ಲಾಭವಿದೆ. ಕುದುರೆ ವ್ಯಾಪಾರಕ್ಕೆ 1969ರಲ್ಲಿ ಬುನಾದಿ ಹಾಕಿದವರು ಹರಿಯಾಣಾದ ಗಯಾರಾಮ್. ಅವರು ಹದಿನೈದು ದಿನದಲ್ಲಿ ಮೂರು ಬಾರಿ ಪಕ್ಷ ಬದಲಾಯಿಸಿ, ಕೊನೆಗೆ ಕಾಂಗ್ರೆಸ್ಸಿಗೆ ಮರಳಿ ಬಂದು ಗಯಾರಾಮ್ ನಿಂದ ಆಯಾರಾಮ್ ಆದರು. ಅಂದಿನಿಂದಲೂ ಇಂತಹ ಕುದುರೆಗಳಿಗೆ “ಆಯಾರಾಮ್-ಗಯಾರಾಂ” ಎಂಬ ಹಣೆಪಟ್ಟಿಯೂ ಸಿಕ್ಕಿದೆ. ಇದೆಲ್ಲಾ ವೈಯುಕ್ತಿಕ ಮಟ್ಟದಲ್ಲಿ ಪ್ರಾರಂಭವಾಗಿ, ನಂತರ ಪಕ್ಷಗಳಿಗೆ ಹರಡಿ, ಒಂದು ಪಕ್ಷದ ಸರಕಾರವನ್ನು ಕೆಡಹುವ ಅಥವಾ ಇನ್ನೊಂದು ಗುಂಪಿನ ಸರಕಾರವನ್ನು ರಚಿಸುವ ಕುತಂತ್ರವಾಗಿ ರೂಪುಗೊಂಡಿತು. ಸಮ್ಮಿಶ್ರ ಸರಕಾರದ ಇಂದಿನ ಕಾಲದಲ್ಲಿ ಸರಕಾರಗಳು ಬಹಳ ಅಸ್ಥಿರವಾಗಿರುತವೆ. ಅಷ್ಟೇ ಅಲ್ಲ, ಬಹುಮತ ಇರುವ ಸರಕಾರಗಳಿಗೂ ಸಹ ಈ ಆತಂಕ ತಪ್ಪಿದ್ದಲ್ಲ. ಸರಕಾರದಲ್ಲಿ 15% ಶಾಸಕರಿಗೆ ಮಾತ್ರ ಸಚಿವ ಸ್ಥಾನ ಸಿಗುವ ಅವಕಾಶವಿರುವುದರಿಂದ ಮಿಕ್ಕವರು ಅತೃಪ್ತರಾಗಿರುವುದು ಸಹಜ. ಇದನ್ನು ದುರ್ಬಳಕೆ ಮಾಡಿಕೊಂಡು ಅವರಿಗೆ ಗಾಳ ಹಾಕುವುದು ಸರ್ವೇ ಸಾಮಾನ್ಯ. ಬಹುಮತದ ಸರಕಾರಗಳು ಕಡಿಮೆಯಾದಾಗನಿಂದಲೂ ಈ ವ್ಯಾಪಾರ ವೇಗ ಹಿಡಿದು, ಅದನ್ನು ನಿಯಂತ್ರಿಸಲು ಏನೇ ಸಂವಿಧಾನ ತಿದ್ದುಪಡಿ/ಕಾಯಿದೆಗಳು ಜಾರಿಗೆ ಬಂದರೂ ಇದರ ಹಾವಳಿ ಮಾತ್ರ ತಪ್ಪಿಲ್ಲ.

ಈ ಹೇಯ ವ್ಯವಹಾರದ ಇಂದಿನ ಮೇಲ್ಮಟ್ಟದ ವ್ಯಾಪಾರಿ ಭಾರತೀಯ ಜನತಾ ಪಕ್ಷ ಎಂದರೆ ತಪ್ಪಾಗಲಾರದು. ಈ ವ್ಯಾಪಾರ ಬಹಳ ಹಿಂದಿನಿಂದ ಉತ್ತರ ಭಾರತದ ರಾಜಕೀಯದಲ್ಲಿ ಪ್ರಚಲಿತವಿದ್ದರೂ ಸಹ ಇದನ್ನು ಕರ್ನಾಟಕದಲ್ಲಿ ಒಂದು ವ್ಯವಸ್ಥಿತ ಉದ್ದಿಮೆಯನ್ನಾಗಿ ಮಾಡಿದ ಶ್ರೇಯವೂ ಸಹ ಭಾಜಪಕ್ಕೆ ಸೇರುತ್ತದೆ. ಆಪರೇಷನ್ ಕಮಲ ಎಂಬ ಹೆಸರಿನಲ್ಲಿ ಪ್ರಾರಂಭವಾಗಿ, ರಾಜಕೀಯ ಭ್ರಷ್ಚಾಚಾರವನ್ನು ಉನ್ನತ ಮಟ್ಟಕ್ಕೆ ಏರಿಸಿದ ಶ್ರೇಯ ಕರ್ನಾಟಕದ ಅಂದಿನ ಮುಖ್ಯಮಂತ್ರಿಗಳಿಗೆ ಸಲ್ಲುತ್ತದೆ. ಚುನಾವಣೆಯಲ್ಲಿ ಎಷ್ಟೇ ಸ್ಥಾನ ಬರಲಿ ಹಣದ ಬಲದ ಮೇಲೆ ತಮ್ಮ ಸರಕಾರ ರಚಿಸಲು ಅಥವಾ ಬೇರೆ ಪಕ್ಷದ ಸರಕಾರ ಬೀಳಿಸಲು ಸಾಧ್ಯ ಎಂದು ಬಲವಾಗಿ ನಂಬಿ ಕಾರ್ಯಗತವಾಗಿರುವ ಪಕ್ಷ ಬಿಜೆಪಿ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಸರಕಾರದ ಕೈಗೊಂಬೆಗಳಾಗಿ ಆಡುತ್ತಿರುವ ದೆಹಲಿ ಪೋಲೀಸ್, ಐಬಿ, ಲೋಕಾಯುಕ್ತ, ಆಯಕರ ವಿಭಾಗ, ಜಾರಿ ನಿರ್ದೇಶನಾಲಯ, ಕೇಂದ್ರ ಗುಪ್ತಚರ ಇಲಾಖೆ, ರಾಷ್ಟ್ರೀಯ ಅನ್ವೇಷಣ ಅಭಿಕರಣ ಮುಂತಾದ ಸ್ವಾಯುತ್ತ ರಾಜಕೀಯೇತರ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಬಳಸಿಕೊಂಡು, ಕುದುರೆ ವ್ಯಾಪಾರಕ್ಕಿಳಿದಿರುವ ಹೆಗ್ಗಳಿಕೆಯೂ ಸಹ ಬಿಜೆಪಿಯದ್ದಾಗಿರುತ್ತದೆ. ಇಲ್ಲಿ ಖರೀದಿಸಲ್ಪಟ್ಟ ಕುದುರೆಗಳು ಎಷ್ಟೇ ಹೀನಾಯ ಮಟ್ಟದ್ದಾಗಿದ್ದರೂ ಸಹ ಅವುಗಳು ಬಿಜೆಪಿ ಸೇರಿದ ಕೂಡಲೇ ಅವುಗಳ ಎಲ್ಲಾ ಪಾಪವೂ ಪರಿಹಾರವಾಗಿ, ಎಲ್ಲಾ ಆರೋಪಗಳೂ ಮಾಯವಾಗುತ್ತವೆ. ಭಾಜಪದ ನಾಯಕರನ್ನು ಈ ಹಿಂದೆ ಬಾಯಿಗೆ ಬಂದಂತೆ ಬೈದು, ಹೀಯಾಳಿಸಿದ್ದ ಕುದುರೆಗಳು ತಮ್ಮ ಹೊಸ ನಾಯಕರ ಪಾದವನ್ನು ನೆಕ್ಕುತ್ತಾ ಅವರ ಗುಣಗಾನ ಮಾಡಲು ಪ್ರಾರಂಭಿಸುತ್ತವೆ.

ರಾಜಕೀಯ ಕುದುರೆಗಳು ಬಹುತೇಕ ಕಪ್ಪು ಬಣ್ಣದ್ದೇ ಆಗಿರುವುದರಿಂದ ಅವುಗಳನ್ನು ಖರೀದಿಸಲು ಪೆಟ್ಟಿಗೆ ತುಂಬ ಹಣವೇ ಬೇಕು ಎಂದೇನಿಲ್ಲ, ಕೆಲವೊಮ್ಮೆ ಹೆಸರಿಗೆ ತಕ್ಕಂತೆ ಬ್ಲ್ಯಾಕ್ ಮೇಲ್ ಮಾಡಲು ಅವರ ಹಿಂದಿನ ಅಪರಾಧಿಕ ಜೀವನದ ಜಾತಕ ಅಥವಾ ಆರ್ಥಿಕ ವ್ಯವಾಹರದ ದಾಖಲೆಗಳೂ ಸಹ ಉಪಯೋಗಕ್ಕೆ ಬರುತ್ತವೆ. ಕುದುರೆಗಳನ್ನು ಖೆಡ್ಡಾಗೆ ಕೆಡವಲು ಕೆಲವೊಮ್ಮೆ ಹನಿ ಟ್ರಾಪ್ ವಿಧಾನವನ್ನೂ ಬಳಸಲಾಗುತ್ತದೆ. ಕುದುರೆ ವ್ಯಾಪಾರ ಈಗ ಎಲ್ಲಾ ಪಕ್ಷಗಳಿಗೆ ತಲೆ ನೋವಾಗಿರುವ ತೂಗುಕತ್ತಿಯಾಗಿದೆ. ಪಕ್ಷದ ಕುದುರೆಗಳಿಗೆ ಒಂದು ತಂತ್ರವಾದರೆ ನಿರ್ದಲೀಯ ಕುದುರೆಗಳಿಗೆ ಬೇರೊಂದು ತಂತ್ರ, ಮುಖ್ಯವಾಗಿ ಹಣ ಮತ್ತು ಅಧಿಕಾರದ ಲಾಲಸೆ ಒಡ್ಡಬಹುದು. ಆದರೂ ಯಾವಾಗ, ಯಾವ ಕುದುರೆ ಯಾವ ಕಡೆಗೆ ಹಾರಬಹುದು ಎಂಬುದು ಊಹಿಸಲೂ ಅಸಾಧ್ಯ.

ಒಂದು ಮಟ್ಟಕ್ಕೆ ತಲುಪಿದ ನಂತರ ಮತ್ತು ಸಕ್ರಿಯ ರಾಜಕಾರಣದಲ್ಲಿ ಆಸಕ್ತಿ ಇಲ್ಲದ ಹಿರಿಯ ರಾಜಕಾರಣಿಗಳು ತಮ್ಮ ಅನೈತಿಕ ಸಾಮ್ರಾಜ್ಯವನ್ನು ಉಳಿಸಿಕೊಳ್ಳುವ ಸಲುವಾಗಿ, ಅಥವಾ ತಮ್ಮ ಮಕ್ಕಳ ಮುಂದಿನ ಭವಿಷ್ಯ ರೂಪಿಸುವ ಸಲುವಾಗಿ, ಕುದುರೆ ವ್ಯಾಪಾರದಲ್ಲಿ ಭಾಗಿಯಾಗುತ್ತಾರೆ.ಒಂದು ರಾಜ್ಯದ ಅತ್ಯಂತ ಹಿರಿಯ ರಾಜಕಾರಣಿ, ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ಸಚಿವರಾಗಿ ಒಳ್ಳೆಯ ಹೆಸರು ಮಾಡಿದಂತಹ ವ್ಯಕ್ತಿ, ಎಲ್ಲಾ ಹಂತದಲ್ಲಿಯೂ ಪಕ್ಷದಿಂದ ಎಲ್ಲಾ ಸವಲತ್ತುಗಳನ್ನು ಭೋಗಿಸಿದ್ದ “ಕುದುರೆ” ಇನ್ನೊಂದು ಪಕ್ಷಕ್ಕೆ ಹಾರಿರುವುದು ವಿರಳವಾದರೂ ಸಹ ಇದು ನಮ್ಮ ಇಂದಿನ ರಾಜಕೀಯ ವ್ಯವಸ್ಥೆಯ ಅಧೋಗತಿಯನ್ನು ದರ್ಶಿಸುತ್ತದೆ. ಈ ತಂತ್ರಗಾರಿಕೆಯಿಂದ ಬಿಜೆಪಿ ಈಗಾಗಲೇ ಬಹುಮತ ಇಲ್ಲದಿದ್ದರೂ ಸಹ ಜಮ್ಮು-ಕಾಶ್ಮೀರ, ಬಿಹಾರ, ಮೇಘಾಲಯ, ಮಿಝೊರಾಮ್, ನಾಗಾಲ್ಯಾಂಡ್, ಗೋವಾ ರಾಜ್ಯದಲ್ಲಿ ಸರಕಾರ ರಚಿಸಲು ಸಾಧ್ಯವಾಯಿತು. ಕರ್ನಾಟಕದಲ್ಲೂ ಸಮಯಪ್ರಜ್ಞೆ ತೋರಿಸಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಮತ್ತು ಕುಮಾರಸ್ವಾಮಿಯವರು ತ್ವರಿತವಾಗಿ “ದೋಸ್ತಿ” ಮಾಡಿಕೊಳ್ಳದಿದ್ದರೆ ಕರ್ನಾಟಕದಲ್ಲೂ ಇದೇ ಪರಿಸ್ಥಿತಿ ಉಂಟಾಗುತ್ತಿತ್ತು. ದೋಸ್ತಿ ಒಳ್ಳೆಯದೋ ಕೆಟ್ಟದ್ದೋ ಬೇರೆ ವಿಷಯ.

ಕುದುರೆಗಳು ಒಂದು ರೀತಿಯ ಶೇರು ಮಾರುಕಟ್ಟೆಯ ಶೇರುಗಳಂತೆ. ಅವನ್ನು ಕೊಂಡುಕೊಳ್ಳಲೇ ಬೇಕೆಂದೇನಿಲ್ಲ, “ಧನವಂತರು” ಅದರಲ್ಲಿ ಆಸಕ್ತಿ ತೋರಿದರೂ ಸಾಕು, ಅವುಗಳ ಬೆಲೆ ಮೇಲೇರಲು ಪ್ರಾರಂಭವಾಗುತ್ತದೆ. ಕೂಡಲೇ ಪಕ್ಷದ ಚಾವಟಿಗಾರ (ವ್ಹಿಪ್ ಮಾಸ್ಟರ್) ಕುದುರೆಗಳನ್ನು ಲಾಯದಲ್ಲಿ ಕೂಡಿಹಾಕಲು ಪ್ರಾರಂಭಿಸುತ್ತಾನೆ. ಕೆಲವೊಮ್ಮೆ ಕುದುರೆಗಳು ತಾವಾಗಿಯೇ ಕೆನೆಯಲು ಪ್ರಾರಂಭಿಸುತ್ತವೆ, ಆಗ ಅವಕ್ಕೆ ಸರಿಯಾಗಿ ಹುಲ್ಲು, ಮೇವು ಹಾಕಬೇಕಾಗುತ್ತದೆ; ಇಲ್ಲದಿದ್ದಲ್ಲಿ ಸರಕಾರವನ್ನು ಕೆಡವಲು ಸದಾ ಸಿದ್ಧವಾಗಿರುವ ಇನ್ನೊಂದು ಪಕ್ಷ ತನ್ನ ಕೆಲಸ ಚುರುಕುಗೊಳಿಸಲು ಪ್ರಾರಂಭಿಸುತ್ತದೆ. ಈ ವ್ಯಾಪಾರಕ್ಕೆ ಇಷ್ಟೊಂದು ಭವಿಷ್ಯವಿರುವುದನ್ನು ಬಹಳ ಹಿಂದೆಯೇ ಗಮನಿಸಿದ ಹಲವು ಸಂಪನ್ಮೂಲ ರಾಜಕೀಯ ಮುಖಂಡರು ಇಂತಹ ಕುದುರೆಗಳನ್ನು ಕೂಡಿಹಾಕಲು ತಮ್ಮದೇ ಆದ ಪಂಚತಾರಾ ರಿಸಾರ್ಟ್ ಲಾಯಗಳನ್ನು ಪ್ರಾರಂಭಿಸಿದ್ದಾರೆ.

ಇಂತಹ ಕುದುರೆ ವ್ಯಾಪಾರದಲ್ಲಿ ಹೊಸದೊಂದು ಅಧ್ಯಾಯವನ್ನು ಇದೀಗ ದೇಶದ ಪ್ರಧಾನಿಯವರು ಸೇರಿಸಿದ್ದಾರೆ. ಒಂದು ಚುನಾಯಿತ ಸರಕಾರವನ್ನು, ಅದರ ಮುಖ್ಯಸ್ಥೆಯಾದ ಮಹಿಳಾ ಮುಖ್ಯಮಂತ್ರಿಯನ್ನು ಹೆದರಿಸಲು ಆ ಪಕ್ಷದ ಎಷ್ಟೋ ಕುದುರೆಗಳು ತಮ್ಮ ಸಂಪರ್ಕದಲ್ಲಿರುವುದಾಗಿಯೂ, ಲೋಕಸಭೆಯ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಅಲ್ಲಿನ ರಾಜ್ಯ ಸರಕಾರ ಬೀಳುವುದಾಗಿಯೂ ಭವಿಷ್ಯ ನುಡಿದಿದ್ದಾರೆ. ಇದು ಕೇವಲ ಚುನಾವಣೆಯ ಪ್ರಚಾರದ ಭರದಲ್ಲಿ ಹೇಳಿದ “ಜುಮ್ಲಾ”ವೋ, ಬೆದರಿಕೆ ಸಂದೇಶವೋ, ಪ್ರಧಾನ ಮಂತ್ರಿಗಳ ಸೋಲಿನ ಭೀತಿಯೋ, ಚುನಾವಣೆ ಸಮಯದಲ್ಲಿ ಒಂದು ರಾಜ್ಯದ ರಾಜಕೀಯ ಪಕ್ಷದಲ್ಲಿ ಸಂದೇಹ ಮೂಡಿಸಿ ಒಳ ಜಗಳ ಪ್ರಾರಂಭಿಸುವ ಹುನ್ನಾರವೋ ಅಥವಾ ಬೇಹುಗಾರಿಕೆ ಸಂಸ್ಥೆಯನ್ನು ಬಳಸಿಕೊಂಡು, ಮಾಹಿತಿ ಸಂಗ್ರಹಿಸಿ, ಮಾಡಿರುವ ಭವಿಷ್ಯವಾಣಿಯೋ ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಪ್ರಜಾಪ್ರಭುತ್ವ ಮತ್ತು ಭಾರತದ ರಾಜ್ಯ ಒಕ್ಕೂಟ ವ್ಯವಸ್ಥೆಗೆ ಅತ್ಯಂತ ಮಾರಕ ಎಂಬುದನ್ನು ಮಾತ್ರ ಖಚಿತವಾಗಿ ಹೇಳಬಹುದು.

“ನಿಮ್ಮ ಶಾಸಕರು ನಮ್ಮ ಹಿಡಿತದಲ್ಲಿದ್ದಾರೆ” ಎಂಬ ಹೇಳಿಕೆ ಓರ್ವ ದೇಶದ ಪ್ರಧಾನಿಯ ಬಾಯಿಯಿಂದ ಬರುವ ಮಾತಲ್ಲ; ಇದು ಅತ್ಯಂತ ಬೇಜವಾಬ್ದಾರಿಯುತ ಹೇಳಿಕೆ. ಈ ಹಿಂದೆಯೂ ನಮ್ಮ ಪ್ರಧಾನಿ ದೇಶದ ಪರಮಾಣು ಅಸ್ತ್ರದ ಬಗ್ಗೆ ಇದೇ ರೀತಿಯ ಹೇಳಿಕೆ ನೀಡಿದ್ದರು. ಪ್ರಧಾನ ಮಂತ್ರಿಗಳು ದೇಶದ ಸಂವಿಧಾನದ ನಿಜವಾದ ಚೌಕೀದಾರ್ ಆಗಿದ್ದಲ್ಲಿ ಅವರು ಈ ಕುತಂತ್ರದಲ್ಲಿ ಭಾಗಿಯಾಗದೇ, ಬಹಿರಂಗವಾಗಿ ಶಾಸಕರ ಹೆಸರನ್ನು ಹೇಳಬೇಕಿತ್ತು. ಇತ್ತೀಚೆಗೆ ಭಾಜಪದ ಹಿರಿಯ ನಾಯಕ ಆಡ್ವಾಣಿಯವರ ಮಾತಿನಂತೆ “ದೇಶ ಮೊದಲು, ಪಕ್ಷ ನಂತರ, ವೈಯುಕ್ತಿಕ ಸ್ವಾರ್ಥ ಕೊನೆಗೆ” ಎಂಬುದು ಏನಾದರೂ ಭಾರತೀಯ ಜನತಾ ಪಕ್ಷದ ವೇದವಾಕ್ಯವಾಗಿದ್ದಲ್ಲಿ ಪ್ರಧಾನಿಗಳು ದೇಶದ ಹಿತವನ್ನು ಎತ್ತಿ ಹಿಡಿದು,ಈ ಕುದುರೆಗಳ ವ್ಯಾಪಾರದ ಆಟವನ್ನು ನಿಲ್ಲಿಸಬೇಕಿತ್ತು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ಎಲಾ ಪಕ್ಷಗಳೂ ಸಹ ಪ್ರಧಾನಿಗಳ ಈ ಬೇಜವಾಬ್ದಾರಿಯುತ ಹೇಳಿಕೆಯನ್ನು ತೀವ್ರವಾಗಿ ಖಂಡಿಸಬೇಕು. ರಾಜ್ಯ ಸರಕಾರಗಳು ಅಸ್ಥಿರವಾದಷ್ಟೂ ಆಡಳಿತ ವ್ಯವಸ್ಥೆ ಕುಸಿಯುತ್ತದೆ. ಸರಕಾರಿ ಅಧಿಕಾರಿಗಳು ಅಂಕುಶವಿಲ್ಲದವರಂತೆ ವರ್ತಿಸುತ್ತಾ, ಜನ ಸಾಮಾನ್ಯರ ಕೆಲಸ ಬಿಟ್ಟು ತಮ್ಮ ಸ್ವಂತ ಗೂಡನ್ನು ಬೆಚ್ಚಗೆ ಮಾಡಿಕೊಳ್ಳುವ ಕೆಲಸದಲ್ಲಿ ಮಗ್ನರಾಗುತ್ತಾರೆ. ಭ್ರಷ್ಟಾಚಾರ ತಾಂಡವವಾಡುತ್ತದೆ. ಜನರ ಹಾಹಾಕಾರ ಮುಗಿಲಿಗೇರುತ್ತದೆ. ಹಾಗಾಗದಿರಲಿ ಎಂದು ಆಶಿಸುತ್ತಾ ಈ ಕುದುರೆ ವ್ಯಾಪಾರಕ್ಕೆ ಕಡಿವಾಣ ಹಾಕುವ ವ್ಯವಸ್ಥೆ ಜನರೇ ಕಂಡುಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...