Homeನ್ಯಾಯ ಪಥಊರಿಗೆಲ್ಲ ಬುದ್ಧಿ ಹೇಳೋರು ಕೋವಿಡ್ ನಿಯಮ ಕಡೆಗಣಿಸಿದ ಕತೆ!

ಊರಿಗೆಲ್ಲ ಬುದ್ಧಿ ಹೇಳೋರು ಕೋವಿಡ್ ನಿಯಮ ಕಡೆಗಣಿಸಿದ ಕತೆ!

- Advertisement -
- Advertisement -

(ಇದು ಕಳೆದ ವಾರದ ನ್ಯಾಯಪಥದಲ್ಲಿ ಪ್ರಕಟವಾದ ಲೇಖನ)

ಕೊರೊನಾ ವೈರಾಣು ವೇಷಾಂತರಿಸುತ್ತ ಮಾರಣ ಹೋಮ ಮಾಡುತ್ತ ಜನರನ್ನು ಕಂಗಾಲಾಗಿಸುತ್ತಿದೆ; ಮತ್ತೊಂದೆಡೆ ಈ ರೋಗವನ್ನು ನಿಯಂತ್ರಿಸುವ ಸರ್ಕಾರಿ ನಿಯಮಗಳ ಹೆಸರಲ್ಲಿ ಅಧಿಕಾರಿಗಳು ಅಮಾಯಕರ ಗೋಳು ಹುಯ್ದುಕೊಳ್ಳುತ್ತಿದ್ದಾರೆ. ಮಾಸ್ಕ್ ಧಾರಣೆ, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಜನಸಂದಣಿ ಸೇರದಿರುವುದು, ಸಭೆ-ಸಮಾರಂಭ, ಮದುವೆ-ಮೆಹಂದಿ ಬೇಕಾಬಿಟ್ಟಿಯಾಗಿ ನಡೆಸದಂತ ನಿಯಮಾವಳಿಗಳನ್ನೇನೋ ಆಡಳಿತಗಾರರು ಘೋಷಿಸಿದ್ದಾರೆ. ಆದರೆ ಈ ನಿಯಮಗಳನ್ನು ಪ್ರಾಮಾಣಿಕವಾಗಿ ಪಾಲಿಸಲು ಪ್ರಯತ್ನಿಸುವ ಜನಸಾಮಾನ್ಯರಿಗೆ ತಿಳಿಹೇಳಿ, ತಾವೂ ನಿಯಮಗಳನ್ನು ಪಾಲಿಸಿ ಮಾದರಿಯಾಗಬೇಕಾದ ಆಯಕಟ್ಟಿನ ಅಧಿಕಾರಸ್ಥರೇ ಬುದ್ಧಿಪೂರ್ವಕವಾಗಿ ನಿಯಮ ಧಿಕ್ಕರಿಸುತ್ತ ಜನಜಂಗುಳಿಯಲ್ಲಿ ಮೈಮರೆಯುತ್ತಿರುವುದು ವಿಪರ್ಯಾಸವೇ ಸರಿ.

ಲಾಕ್‌ಡೌನ್, ಸೆಮಿಲಾಕ್‌ಡೌನ್, ಕರ್ಫ್ಯೂ, ಸೆಕ್ಷನ್-144ನಂಥ ನಿಯಮಗಳನ್ನು ಜಾರಿಗೊಳಿಸುವಾಗ ಅಧಿಕಾರಿಗಳು ಕಿರಾತಕರಂತೆ ಕಾಡುತ್ತಿರುವುದು ಘೋರವಾಗಿದೆ! ನಿಯಮಾವಳಿ ತರುವ ಮೊದಲು ಅಗತ್ಯ ಸಿದ್ಧತೆ-ಬದ್ಧತೆಗಳಿಲ್ಲದೆ ಪಾಪದ ಮಂದಿಗೆ ಚಿತ್ರಹಿಂಸೆ ಕೊಡಲಾಗುತ್ತಿದೆ. ಹಾಲು-ತರಕಾರಿ ದಿನಸಿಯಂಥ ಜೀವನಾವಶ್ಯಕ ವಸ್ತು ತರಲೆಂದು ಹೊರಬರುವವರನ್ನು ಜೀವರಕ್ಷಕ ಔಷಧ ಖರೀದಿಗೆಂದು ಮೆಡಿಕಲ್ ಶಾಪ್‌ಗೆ ಹೋಗುವವರನ್ನು ಬಿಡದೆ ಬೆನ್ನಟ್ಟಿ ಬಡಿಯುವ ಅತಿರೇಕದ ವರ್ತನೆಯನ್ನು ಪೊಲೀಸರು ಮತ್ತು ಜಿಲ್ಲಾಡಳಿತ ನಿರ್ದಯವಾಗಿ ಪ್ರದರ್ಶಿಸುತ್ತಿದ್ದಾರೆ ಎಂಬ ಸಿಟ್ಟು ಜನಸಮೂಹದಲ್ಲಿ ಹೆಪ್ಪುಗಟ್ಟಿದೆ. ಅಧಿಕಾರಸ್ಥರು, ಅವರ ನೆಂಟರು-ಇಷ್ಟರಿಗೆ ಈ ಕೋವಿಡ್ ಕಾನೂನು ಅನ್ವಯವಾಗುತ್ತಿಲ್ಲ ಎಂಬುದು ದಿನಬೆಳಗಾದರೆ ಜರುಗುವ “ವಿವಿಐಪಿ ಪ್ರಹಸನಗಳಿಂದ” ಸಾಬೀತಾಗಿಹೋಗಿದೆ!

ದಿನಕ್ಕೊಂದರಂತೆ ಬದಲಾಗುವ ಕೋವಿಡ್ ಕಾಯ್ದೆಗಳು ಜನಸಾಮಾನ್ಯರ ಹೈರಾಣಾಗಿಸಿ ಬಿಟ್ಟಿದೆ; ಅಪ್ರಜ್ಞಾಪೂರ್ವಕ ಸಣ್ಣ ಪ್ರಮಾದವಾದರೂ ದೊಡ್ಡ “ದಂಡ” ಪ್ರಯೋಗವಾಗುತ್ತಿದೆ. ಹಾಗಂತ ಮಂತ್ರಿ-ಮಾಂಡಲೀಕರು ಮತ್ತವರ ಅಧಿಕಾರಿ ಪಂಡಿತರು ರಾಜಾರೋಷವಾಗಿ ಕಾನೂನು ಮುರಿದು ದಕ್ಕಿಸಿಕೊಳ್ಳುತ್ತಿದ್ದಾರೆ. ಗೊಂದಲದಲ್ಲಿರುವ ಕಾನೂನು ಪಾಲಕರೇ ಎಡಬಿಡಂಗಿಗಳಾಗಿದ್ದಾರೆ. ಕಳೆದ ವಾರ ಕರಾವಳಿಯ ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ನಡೆದ ಎರಡು ಮೆಹಂದಿ-ಮದುವೆ ಸಡಗರದಲ್ಲಿ ವಿಧಾನಸಭೆ ಅಧ್ಯಕ್ಷ ಸಾಹೇಬರು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾವ ಮುಲಾಜು-ಮುಜುಗರವಿಲ್ಲದೆ ಭಾಗವಹಿಸಿರುವುದು ಕೋವಿಡ್ ಕಾನೂನುಗಳನ್ನೆಲ್ಲ ಅಣಕಿಸಿರುವಂತಿದೆ!

ಕಳೆದ ಶನಿವಾರ ಉತ್ತರಕನ್ನಡದ ಸಿದ್ಧಾಪುರ ತಾಲ್ಲೂಕಿನ ಮನಮನೆ ಎಂಬಲ್ಲಿ ಮಾಜಿ ಜಿಪಂ ಸದಸ್ಯರೊಬ್ಬರ ಮಗಳ ಮದುವೆ ನಡೆದಿತ್ತು. ಮಾಜಿ ತಾಪಂ ಅಧ್ಯಕ್ಷೆಯ ಮಗ ವರ. ಇದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವಕ್ಷೇತ್ರ ಶಿರಸಿಯ ಹಳ್ಳಿ. ಕಾಗೇರಿ ಅವರು ಹೇಳಿಕೇಳಿ ಸಂಘಪರಿವಾರದ ಕುಂಕುಮಧಾರಿ ದೇಶಭಕ್ತರು. ದೇಶದ ನೀತಿ ನಿಯಮ ಕಾನೂನುಗಳನ್ನು ಗುತ್ತಿಗೆ ಹಿಡಿದಂತೆ ವ್ಯಾಖ್ಯಾನಿಸಬಲ್ಲವರು. ಇಂಥ ಕಾಗೇರಿಯವರು ಸದರಿ ವಿವಾಹ ಸಮಾರಂಭದಲ್ಲಿ ಕೋವಿಡ್ ಕಾನೂನು ಕಡೆಗಣಿಸಿ ಕಾಣಿಸಿಕೊಂಡಿದ್ದರು! ಅದಕ್ಕಾಗಿ ಬೆಂಗಳೂರಿಂದಲೇ ಬಂದಿದ್ದರೆಂಬುದು ಸುದ್ದಿ.

ಕಾಗೇರಿ ಮಾಸ್ಕ್ ಹಾಕಿಕೊಳ್ಳದೆ ಜನರ ಮಧ್ಯೆ ಬೆರೆತಿದ್ದು ಆಕ್ಷೇಪಕ್ಕೆ ಕಾರಣವಾಗಿದೆ. ಕೊರೊನಾ ವೈರಾಣು ಹಾವಳಿ ಹೆಚ್ಚಾಗಿರುವ ಬೆಂಗಳೂರಿನಿಂದ ಬಂದಿದ್ದ ಕಾಗೇರಿಯವರು ಕನಿಷ್ಠ ಅಂತರವೂ ಕಾಯ್ದುಕೊಳ್ಳದೆ ಮದುಮಕ್ಕಳಿಗೆ ಅಂಟಿಕೊಂಡೇ ಹರಸಿದ್ದು, ಫೋಟೊ ಶೂಟ್‌ಗೆ ಫೋಸ್ ಕೊಟ್ಟಿದ್ದು ಜನಸಾಮಾನ್ಯರಲ್ಲಿ ಬೇಸರ ಮತ್ತು ಆತಂಕ ಮೂಡಿಸಿಬಿಟ್ಟಿದೆ. ಕೋವಿಡ್ ಕಾನೂನು ಅನುಷ್ಠಾನಗೊಳಿಸುವ ರಾಜಕಾರಣಿ-ಅಧಿಕಾರಿಗಳ ಢೋಂಗಿತನ ಮನದಟ್ಟು ಮಾಡಿದೆ. ತಾನು ಫೋಟೊಗಷ್ಟೇ ಮಾಸ್ಕ್ ತೆಗೆದಿದ್ದೆನೆಂದು ಕಾಗೇರಿ ಸಮಜಾಯಿಷಿ ಕೊಡುತ್ತಿದ್ದಾರೆ. ಹಾಗೆ ಮಾಸ್ಕ್ ತೆಗೆಯುವುದೇ ಅಪರಾಧವಲ್ಲವಾ ಎಂಬುದು ಜನರ ಪ್ರಶ್ನೆ. ನೀರು ಕುಡಿಯಲೆಂದೋ, ಅಥವಾ ಇನ್ಯಾವುದೋ ಕಾರಣಕ್ಕೆ ಒಂದು ಕ್ಷಣ ಮಾಸ್ಕ್ ಸರಿಸಿದ್ದಕ್ಕೆ ಎಷ್ಟು ಜನ ದಂಡ ಹಾಕಿಸಿಕೊಂಡಿಲ್ಲ?

ಇದಕ್ಕೂ ಒಂದು ದಿನ ಮೊದಲು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೆಚ್ಚುವರಿ ಎಸ್‌ಪಿ ಕುಮಾರಚಂದ್ರರ ಮಗಳ ಮೆಹಂದಿ ಕಾರ್ಯಕ್ರಮದಲ್ಲಿ ಕೋವಿಡ್-19ರ ಅಷ್ಟೂ ನಿಯಮ ಧಿಕ್ಕರಿಸಿ ಪಾಲ್ಗೊಂಡಿದ್ದು ನೆಟ್ಟಿಗರು ಮತ್ತು ಸಾಮಾನ್ಯ ಜನರಲ್ಲಿ ಆಕ್ರೋಶ, ಸಿಟ್ಟು ಮೂಡಿಸಿದೆ! ಸಾಮಾಜಿಕ ಜಾಲತಾಣದಲ್ಲಿ “#ಶೇಮ್‌ಆನ್‌ಸಿಸ್ಟಮ್ #ಡಿಸಿಉಡುಪಿ” ಎಂಬ ಹ್ಯಾಶ್ ಟ್ಯಾಗ್ ಅಭಿಯಾನದಲ್ಲಿ ಡಿಸಿ ಸಾಹೇಬರು ಒಂದೇಸಮನೆ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.

ಅಸಹಾಯಕ ಜನಸಾಮಾನ್ಯರ ಮೇಲೆ ದಾಳಿ ಮಾಡಿ ಕೋವಿಡ್ “ದಂಡ” ಕಠೋರವಾಗಿ ಚಲಾಯಿಸಿ, ಕಾನೂನು ನಿಷ್ಠ ಅಧಿಕಾರಿ ಗೆಟಪ್‌ನಲ್ಲಿ ಓಡಾಡುವ ಡಿಸಿ ಜಗದೀಶ್ ತಾವೆ ಆ ನಿಯಮಗಳನ್ನು ಮನಸೋ ಇಚ್ಛೆ ಮುರಿದು ಸಂಭ್ರಮಿಸಿದ್ದು ಕರಾವಳಿಯಲ್ಲಿ ಭರ್ಜರಿ “ವೈರಲ್ ಸುದ್ದಿಯಾಗಿದೆ.

ಉಡುಪಿ ಹೆಚ್ಚುವರಿ ಎಸ್‌ಪಿ ಕುಮಾರಚಂದ್ರರ ಮಗಳ ಮದುವೆಯ ಮುಂಚಿನ ಮೆಹಂದಿ ಕಾರ್ಯಕ್ರಮ 23-4-2021 ರ ರಾತ್ರಿ ಅವರ ಅಧಿಕೃತ ನಿವಾಸದಲ್ಲಿ ಆಯೋಜಿಸಲಾಗಿತ್ತು. ಆ ಅದ್ಧೂರಿ ಸಮಾರಂಭಕ್ಕೆ ನೂರಾರು ಮಂದಿ ಬಂದಿದ್ದರು. ಮದುಮಗಳನ್ನು ನೃತ್ಯ ತಂಡ ಮೆರವಣಿಗೆಯಲ್ಲಿ ಕರೆತಂದಿತ್ತು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಥ ಜನದಟ್ಟಣೆ ಸಮಾರಂಭಕ್ಕೆ ಜಿಲ್ಲಾಧಿಕಾರಿ ಜಗದೀಶ್ ಮಡದಿಯೊಂದಿಗೆ ಬಂದಿದ್ದರು! ಡಿಸಿ, ಎಸ್‌ಪಿ ಅವರ ಧರ್ಮ ಪತ್ನಿಯರು ಮತ್ತು ಮದುಮಗಳು ಹೀಗೆ ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ ಮತ್ತು ಸಾಮಾಜಿಕ ಅಂತರವೂ ಇರಲಿಲ್ಲ. ಮದುಮಗಳನ್ನು ನಿಕಟವಾಗಿ ನಿಂತು ಹಾರೈಸಿದ್ದಾರೆ. ಫೋಟೊ ಶೂಟ್‌ಗೆ ನಗುನಗುತ್ತಲೇ ಡಿಸಿ ಪರಿವಾರ ಪೋಸು ನೀಡಿದೆ!

ಕೋವಿಡ್-19 ಮಾರ್ಗಸೂಚಿ ಪ್ರಕಾರ ಮದುವೆಗಳಲ್ಲಿ 50 ಮಂದಿಗಿಂತ ಹೆಚ್ಚಿನವರಿಗೆ ಅವಕಾಶವಿಲ್ಲ. ಇಂಥ ಮದುವೆಗೂ ಮೊದಲು ತಾಲ್ಲೂಕು ಕಚೇರಿಯಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಹಾಗಂತ ಮಾರ್ಗಸೂಚಿ ಪಟ್ಟಿಯಲ್ಲಿ ಮೆಹಂದಿ ಫಂಕ್ಷನ್ ಉಲ್ಲೇಖವಿಲ್ಲ. ಅಂದರೆ ಅನುಮತಿಯಿಲ್ಲದ ಮೆಹಂದಿ ಕಾರ್ಯಕ್ರಮ ತಡೆಯಬೇಕಿದ್ದ, ಕಾನೂನು ಕ್ರಮ ಕೈಗೊಳ್ಳಬೇಕಿದ್ದ ಜಿಲ್ಲಾಧಿಕಾರಿ ತಾವೇ ಸಮಾರಂಭದಲ್ಲಿ ಭಾಗಿಯಾಗಿದ್ದು ಅಕ್ಷಮ್ಯ ಅಪರಾಧವೆಂದು ಜನ ಆಡಿಕೊಳ್ಳುತ್ತಿದ್ದಾರೆ.

“ಪೊಲೀಸ್ ಅಧಿಕಾರಿಯೊಬ್ಬರ ಮಗಳ ಮೆಹಂದಿ ಕಾರ್ಯಕ್ರಮದಲ್ಲಿ ಸುರಕ್ಷಿತ ಅಂತರವೂ ಇಲ್ಲದೆ, ಮಾಸ್ಕ್ ಹಾಕದೆ ನಗುತ್ತ ನಿಂತಿರುವ ಪರಿ ನೋಡಿ ಕಾನೂನು, ಶಿಕ್ಷೆ, ಬೈಗುಳ, ಒದೆ ಎಲ್ಲ ಸಾಮಾನ್ಯ ಜನರಿಗೆ ಮಾತ್ರ ಅಲ್ಲವೆ, ಜಿಲ್ಲಾಧಿಕಾರಿಯೇ? ಉಡುಪಿ ಡಿಸಿ ಜಗದೀಶ್, ಶೇಮ್ ಆನ್ ಯು. ಅಂದಹಾಗೆ ಈ ಮದುವೆಗೆ ಹೋಗುವ ಅತಿಥಿಗಳು, ಆಧಾರ್ ಕಾರ್ಡ್ ಪರೀಕ್ಷಿಸಿ ಪಡಕೊಂಡ ಪಾಸ್ ಪಟ್ಟಿಯಲ್ಲಿ ಜಿಲ್ಲಾಧಿಕಾರಿ ಹೆಸರಿತ್ತೇ ಉತ್ತರಿಸಲೇಬೇಕು ಡಿಸಿ ಸಾಹೇಬರು” ಎಂಬ ಚರ್ಚೆ ಫೇಸ್‌ಬುಕ್‌ನಲ್ಲಿ ನಡೆಯುತ್ತಿದೆ.

“ಅದೆಷ್ಟೋ ಬಡ ಕುಟುಂಬಗಳ ಮನೇಲಿ ಇಂದು ನಡೆಯಬೇಕಿದ್ದ ಮೆಹಂದಿ-ಮದುವೆಗಳು ನಿಂತಿವೆ. ಕೇವಲ ಬಡವರ ಮೇಲೆ ಅಪ್ಲೈ ಆಗುವ ಕಾನೂನಿಗೆ ಹೆದರಿ ಅವು ನಿಂತಿರಬಹುದು. ಆದರೆ ಉಡುಪಿ ಡಿಸಿ ಮಾತ್ರ ಮೆಹಂದಿಗೆ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಪಾಡದೆ ಭಾಗವಹಿಸಿದ್ದು ಹೀಗೆ. ಇದು ನಮ್ಮ ವ್ಯವಸ್ಥೆ” ಎಂಬ ಟೀಕೆಗಳು ಫೇಸ್‌ಬುಕ್ ಅಭಿಯಾನದಲ್ಲಿ ವ್ಯಕ್ತವಾಗುತ್ತಿವೆ. ಸ್ವತಃ ತಾವೇ ವಿಧಿಸಿದ ನಿಯಮಗಳನ್ನು ಡಿಸಿ ಜಗದೀಶ್ ಉಲ್ಲಂಘಿಸಿದ್ದಾರೆ. ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಮಾತ್ರ ತಪ್ಪಿತಸ್ಥ ಡಿಸಿ ಜಗದೀಶ್ ಪರ ವಕಾಲತ್ತು ಮಾಡುತ್ತಿರುವುದು ಜನರ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದೆ.

ಸದರಿ ಮೆಹಂದಿ ಕಾರ್ಯಕ್ರಮಕ್ಕೂ ಮೂರ್ನಾಲ್ಕು ದಿನ ಮೊದಲು ಇದೇ ಡಿಸಿಯವರು, ಕೋವಿಡ್ ನಿಯಮ ಉಲ್ಲಂಘಿಸಿ ಜನ ತುಂಬಿದ್ದಾರೆಂದು ಆರೋಪಿಸಿ, ನಡುರಸ್ತೆಯಲ್ಲೇ ಬಸ್ ಒಂದರ ಮೇಲೆ ರೇಡು ಮಾಡಿದ ಘಟನೆ ನಡೆದಿತ್ತು. ಉಡುಪಿ ಹತ್ತಿರದ ಸಂತೆಕಟ್ಟೆ ಎಂಬಲ್ಲಿ ಬಸ್ ಅಡ್ಡಹಾಕಿದ್ದ ಡಿಸಿ ಜಗದೀಶ್ ಅದರಲ್ಲಿ ನಿಂತು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯರನ್ನು ಕೆಳಗಿಳಿಸಿದ್ದರು. ಈ ವಿದಾರ್ಥಿನಿಯರು ತಾವು ಪರೀಕ್ಷೆಗೆ ಹೋಗುತ್ತಿದ್ದೇವೆ ನಮಗೆ ಬೇರೆ ಖಾಲಿ ಬಸ್‌ಗಳು ಸಿಗುವುದಿಲ್ಲ, ನಾವೀಗ ನಡುಬೀದಿಯಲ್ಲಿ ಹೀಗೆ ನಿಂತರೆ ಪರೀಕ್ಷೆ ಸಮಯ ಮೀರುತ್ತದೆಂದು ಪರಿಪರಿಯಾಗಿ ಬೇಡಿಕೊಂಡರೂ ಡಿಸಿ ಜಗದೀಶ್ ಅವರ ಕಲ್ಲು ಹೃದಯ ಕರಗಿರಲಿಲ್ಲ!

ತಾವು ಕಷ್ಟಪಟ್ಟು ಓದಿದ್ದು ವ್ಯರ್ಥವಾಗುತ್ತದೆಂದು ವಿದ್ಯಾರ್ಥಿನಿಯರು ಪರಿಪರಿಯಾಗಿ ತಿಳಿಸಿಹೇಳಿದರೂ, ಇದ್ಯಾವುದೂ ಅರ್ಥವಾಗದಂತೆ ವರ್ತಿಸಿದ ಡಿಸಿ “ನೀವು ಎಜ್ಯುಕೇಟೆಡ್‌ಗಳಾ? ಶಾಲೆ-ಕಾಲೇಜಿಗೆ ಹೋಗೋರು… ನಿಮಗೆ ಪ್ರಜ್ಞೆ ಬೇಡವಾ” ಎಂದು ನಿಯಮಾವಳಿಗಳನ್ನು ದರ್ಪದಿಂದ ಬೋಧಿಸಿದ್ದರು. ಮೆಹಂದಿ ಕಾರ್ಯಕ್ರಮದಲ್ಲಿ ಈ ನಿಯಮಾವಳಿಗಳನ್ನೆಲ್ಲಾ ಗಾಳಿಗೆ ತೂರಲಾಗಿತ್ತು.
ಕೋವಿಡ್ ನಿಯಮಾವಳಿಗಳನ್ನು ಹೇರುವ ಆದರೆ ತಾವೇ ಪಾಲಿಸದ ಹುಚ್ಚಾಟಕ್ಕೆ ಕೊನೆಯೇ ಇಲ್ಲವೇ?

ಶುದ್ಧೋದನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...